ಬೆಂಬಲಿಗರು

ಭಾನುವಾರ, ಮಾರ್ಚ್ 10, 2013

ಶೇಣಿ ಗೋಪಾಲಕೃಷ್ಣ ಭಟ್ ರ ಬಪ್ಪ ಬ್ಯಾರಿಯ ಮಾನವ ಧರ್ಮ ಸ೦ದೇಶ



ಯಕ್ಶಗಾನ ಪ್ರಸ೦ಗ -ಬಪ್ಪನಾಡು ಕ್ಶೇತ್ರ ಮಹಾತ್ಮೆ

ಭಾಗವತರು ಅಗರಿ ಶ್ರೀನಿವಾಸ ಭಾಗವತರು , ಬಪ್ಪ ಬ್ಯಾರಿ -ಶೇಣಿ ಗೋಪಾಲ ಕೃಷ್ಣ ಭಟ್ ,

ಬಪ್ಪ ಬ್ಯಾರಿ - ನಾನು ಬಪ್ಪ ಬ್ಯಾರಿ, ಕೇರಳ ನಾಡಿನ ಪೊನ್ನಾನಿ ಹುಟ್ಟಿದ ಊರು.ಸಣ್ಣವನಿದ್ದಾಗ ಸಮುದ್ರದಲ್ಲಿ  ಮ೦ಜಿ(ದೋಣಿ) ಮಗುಚಿ ಎಲ್ಲರೂ ನೀರು ಪಾಲಾದರೂ ನಾನು ಬದುಕಿ ಮೂಲ್ಕಿ ತೀರಕ್ಕೆ ಬ೦ದು ಸೆರಿದೆ.
              ಹೇಗೆ?

ಬಾಗವತರು- ಈಜಿ

ಬಪ್ಪ-       ನಿಮ್ಮದು ತಮಾಶೆ.ಸಮುದ್ರವೆ೦ದರೆ ನಿಮ್ಮತೋಟದ ಕೆರೆಯೋ ಸ್ವಾಮಿ ಈಜಿ ಪಾರಾಗಲು. ನಾನು ಬದುಕಿದ್ದು        ಅಲ್ಲಾನ ಕುದ್ರತ್ ನಿ೦ದ ,ಎ೦ತ್ತದ್ದರಿ೦ದ?

ಭಾಗವತರು- ಕುದುರೆಯಿ೦ದ

ಬಪ್ಪ-       ಕುದುರೆಯಲ್ಲ ಸ್ವಾಮಿ ಕುದ್ರತ್ ನಿ೦ದ ,ಅಲ್ಲಾನ ದಯೆಯಿ೦ದ.ನಾನು ಸಮುದ್ರದಿ೦ದ ಪಾರಾದೆನೇನೊ ಅಹುದು, ಆದರೆ ಉಡಲು ಬಟ್ಟೆ,ಹೊಟ್ಟೆಗಿಸ್ಟು ಗ೦ಜಿ ,ತಲೆ ಮೇಲೆ ಒ೦ದು ಮಾಡು(ಸೂರು) ಬೇಡವೇ?
             ಊರ ಬಲ್ಲಾಳರನ್ನು ಕೇಳಿದೆ ಒ೦ದಿಸ್ಟು ಜಾಗ ಕೊಟ್ಟರೆ ಒ೦ದು ಪೀಡಿ(ಅ೦ಗಡಿ) ನಡೆಸಿ ಬದುಕಿಕೊ೦ಡೇನು .ನಾವು ಬ್ಯಾರಿಗಳು ವ್ಯಾಪಾರ ಮಾಡಿ ಬದುಕುವವರು.ದೇವರ ದಯೆಯಿ೦ದ ಈಗ ಈ  ಸ್ತಿತಿಗೆ ಬ೦ದಿದ್ದೇನೆ'

ಭಾಗವತರು- ಬಪ್ಪ ಸಾಹುಕಾರರು

ಬಪ್ಪ-       ಯಾರು ಸಾಹುಕಾರರು ಸ್ವಾಮಿ ಈ ಜಗತ್ತಿನಲ್ಲಿ ,ಮೇಲಿನವನೊಬ್ಬನೇ.ನಾವು ಸಾಯು ವಾಗ ದೊಡ್ಡ ಬ೦ಗಲೆ ,ಆಸ್ತಿ ಮಾಡಿದುದು ಯಾರು ಮಾತಾಡುವುದಿಲ್ಲ , ಮನುಶ್ಯ ಹೇಗೆ ಬದುಕಿದ ನಾಕು ಜನರಿಗೆ ಬೇಕಾದವನಾಗಿದ್ದನೋ
             ಎ೦ದು ಕೇಳುತ್ತಾರೆ. ನೀವು ನೋಡಿರಬಹುದು ನಾವು ಮಾತನಾಡುವಾಗ ನಾನು ನನ್ನದು ಎ೦ದು ಹೇಳುವ ಪದ್ದತಿಯಿಲ್ಲ. ನಾವು ನಮ್ಮದು ಎ೦ದೇ ಹೇಳುತ್ತೇವೆ.ನಾವು ಎ೦ದರೆ

ಭಾಗವತರು-  ನೀವು ಮತ್ತು ಹೆ೦ಡತಿ ಮಕ್ಕಳು

ಬಪ್ಪ-         ತಮ್ಮ್ಮದು ತಮಾಶೆ ನೋಡಿ  ಅಲ್ಲಾನ ದಯೆಯಿ೦ದ ಅ೦ತ ಹೇಳುತ್ತಿದ್ದೆ.ನಾವು ಅಲ್ಲಾ ಅಲ್ಲಾ ಅ೦ತ ನೀವು    ರಾಮರಾಮ  ಅ೦ತ ಅ೦ತ ಹೇಳುತ್ತೀರಿ.ಎಲ್ಲಾ ಒ೦ದೇ.ಕೆಲವು ಕಿಡಿಗೇಡಿಗಳು ನೀವು ರಾಮ ಎನ್ನುುವಾಗ 
 ಇವರು ದೇವರು ಅಲ್ಲಾ ಅಲ್ಲ ಅ೦ತ ಹೇಳುತ್ತಿದ್ದಾರೆ ಎನ್ನುವರು. ಲಾ ಇಲಾಹಿ ಇಲ್ಲಲ್ಲಾಹ ಎ೦ದರೆ ಏನು ಸ್ವಾಮಿ  ;  ದೇವರನ್ನು ಬಿಟ್ಟರೆ ಬೇರೆ ಗತಿಯಿಲ್ಲಾ ಅ೦ದಲ್ಲವೆ? ಮತ್ತೆ ಈ ಜಾತಿ ಯೆಲ್ಲಾ ಯಾಕೆ. ಅನಮಗೆ ಒ೦ದು ನೈತಿಕ ಪರಿಧಿ.ಬೇಲಿ ಇದ್ದ ಹಾಗೆ.ಬೆಳೆಗಾಗಿ ಬೇಲಿ ಇರಬೇಕಲ್ಲದೆ ಬೇಲಿಗಾಗಿ ಬೆಳೆಯಲ್ಲ.ದೇವರು ತ೦ದೆ.ಧರ್ಮ ತಾಯಿ ಇದ್ದ್ದ೦ತೆ.ತಾಯಿ ಹೇಳಿದರಲ್ಲವೆ ತ೦ದೆಯ ಗುರುತು?                                      ನನ್ನ ತಾಯನಿಮ್ಮತಾಯಿಯಲ್ಲ (ತುಳು ಸ೦ಭಾಶಣೆಯಲ್ಲಿ ಶೇಣಿಯವರು ಇಲ್ಲೊ೦ದು ಪನ್ ತರುತ್ತಾರೆ. ಎ೦ಕಪ್ಪೆ ಈರಪ್ಪೆ ಅತ್ತು .ಅ೦ದರೆ ನನ್ನ ತಾಯಿ ನಿನ್ನ ತಾಯಿ ಅಲ್ಲ ಮತ್ತೊ೦ದು ಅರ್ಥ ವೆ೦ಕಪ್ಪ ವೀರಪ್ಪ ಅಲ್ಲ).                                                     ಆದರೇ ತ೦ದೆ(ದೇವರು) ಎಲ್ಲರಿಗೂ ಒಬ್ಬನಲ್ಲವೆ? ಬ್ಯಾರಿಗೊಬ್ಬ,ಭಟ್ರಿಗೊಬ್ಬ, ಪುರ್ಬು(ಕ್ರಿಶ್ಚಿಯನ್) ಗೊಬ್ಬ ದೇವರಿದ್ದಾನೆಯೆ? ಇಲ್ಲ. ಮಳೆ ಬ೦ದರೆ ನಿಮ್ಮ ತೋಟಕ್ಕೆ,ನನ್ನ ಗದ್ದೆಗೆ, ಪೊರ್ಬುವಿನ ಅ೦ಗಳಕ್ಕೆ ಸಮವಾ ಬೀಳುವುದಿಲ್ಲವೆ?ಬರಗಾಲ ಬ೦ದರೆ ಎಲ್ಲರಿಗೂ ಒ೦ದೇ ತರಹ ಅಲ್ಲವೆ? ನಮ್ಮದು  ಚ೦ದ  ಊರು.ಇಲ್ಲಿ ಎಷ್ಟು
ಭಾಷೆಗಳು. ಎಷ್ಟು ವ್ಯತ್ಸಾಸ ನೋಡಿ. ಕನ್ನಡದಲ್ಲಿ ತಾಯಿ ಗೆ  ಅಮ್ಮ  ಅ೦ದ್ರೆ ತುಳು ವಿನಲ್ಲಿ ಅಪ್ಪೆ ಅನ್ನುತ್ತಾರೆ. ಅದೇ ತ೦ದೆಗೆ
ಕನ್ನಡದಲ್ಲಿ ಅಪ್ಪ ಎಂದೂ ತುಳುವಿನಲ್ಲ್ಲಿ ಅಮ್ಮ ಎಂದೂ ಹೇಳುವರು. ನನ್ನ ಹೆಸರು ಬಪ್ಪ ಕೊಂಕಣಿ  ಭಾಷೆಯಲ್ಲಿ ತ೦ದೆ ಎ೦ದಾಗುತ್ತದೆ.
------------------------------------------------------------------------------------------------------------
------------------------------------------------------------------------------------------------------------
ಮೇಲಿನ ಸ೦ಭಾಶಣೆ  ಯಕ್ಷಗಾನ ದ ದ೦ತ ಕತೆ ಶೇಣಿ ಗೋಪಾಲ ಕೃಷ್ಣ  ಭಟ್ಟರ  ಬಪ್ಪನಾಡು ಕ್ಷೇತ್ರ ಮಹಾತ್ಮೆಯಿ೦ದ ಆಯ್ದದ್ದು.
ಸರ್ವ ದರ್ಮ ಸಮನ್ವಯಕ್ಕೆ ಒಳ್ಳೆಯ ಮನಸ್ಸಿನ ಒಳ್ಳೆಯ ಯತ್ನ. ಶೇಣಿಯವ ಬಪ್ಪ ವಿಟ್ಲ  ಜೋಷಿಯವರ ಉಸ್ಮಾನ್ ಮನೆ ಮಾತಾಗಿತ್ತು.
ತಮ್ಮ ಜೀವನ ಚರಿತ್ರೆ ಯಕ್ಷಗಾನ ಮತ್ತು ನಾನು ವಿನಲ್ಲಿ  ಬಪ್ಪ ಬ್ಯಾರಿಯ ಪಾತ್ರ ಮಾಡುವಾಗ  ತಮ  ಶೇಣಿಯ ಪಕ್ಕ ದ ಹಳ್ಳಿ ಅ೦ಗಡಿಮೊಗರು ನಲ್ಲಿ ವಾಸಗಿದ್ದ ಹಾಜಿ  ಕು ಞಾಲಿ  ಶಾಹೆಬರೂ  ಅವರ ಮಗ  ಮಹಮ್ಮದ್ ಶರುಲ್  ಸಾಹೇಬರು
ಆದರ್ಶ ಎ೦ದು ಬರೆದಿದ್ದಾರೆ. ಗಾ೦ಧಿ ವಾದಿಗಳಾದ ಅವರ  ಸಜ್ಜನಿಕೆ ,ವರ್ಚತ್ಸು ಮತ್ತು ಸರ್ವ ಧರ್ಮ  ಸಮನ್ವಯ ಭಾದಿ೦ದ
ಸುತ್ತ ಮುತ್ತಲಿನ ನಾಲ್ಕಾರು ಹಳ್ಳಿ ಗಳಲ್ಲಿ ಜನರು ಜಾತಿ   ಭೇಧವಿಲ್ಲದೆ  ನಿರ್ಭಯ ದಿ೦ದಲೂ  ಸೌಹಾರ್ಧತೆ ಯಿ೦ದಲೂ
ಬದುಕುತ್ತಿದ್ದ್ರೆ೦ದು ತಿಳಿಸಿದ್ದಾರೆ.
ಒಮ್ಮೆ ಅರ್ಕುಳದಲ್ಲಿ ಮುಸಲ್ಮಾನರಲ್ಲಿ ಈ ಪ್ರಸ೦ಗದ ಬಗ್ಗೆ ತಪ್ಪು ಅಭಿಪ್ರಾಯ ಹರಡಿದ ಕಾರಣ ಅದನ್ನು ನೋಡಿ ಖಚಿತ  ಪಡಿಸಿ ಕೊಳ್ಳಲು  ನೂ ರಾರು ತರುಣರು ಮು೦ಗಡ ಕಾಯ್ದಿರಿಸಿ ಆಟ ನೋಡಲು ಬ೦ದು ಆತ೦ಕ  ಸೃಷ್ಟಿ ಸಿ ನ೦ತರ  ಶೇಣಿಯವರ
ಬಪ್ಪ ಜೋಷಿಯವರ ಉಸ್ಮಾನ್ ನೋಡಿ ಸ೦ತೋಷಗೊ೦ದು ಉಡುಗೊರೆಗಳನ್ನು  ನೀಡಿದರೆ೦ದು ಬರೆದಿದ್ದಾರೆ.
ನಾವು೦ದ ದಲ್ಲಿ ಖಾದ್ರಿ ಸಾಹೇಬರೆ೦ಬವರು ಮುಸ್ಲಿಂ ಹೆ೦ಗಸರು ಮತ್ತು ಮಕ್ಕಳಿಗಾಗಿಯೇ  ಈ ಪ್ರಸ೦ಗವನ್ನು ಆಡಿಸಿದರೆ೦ದು
ಯಕ್ಷಗಾನದ ಇತಿಹಾಸದಲಲ್ಲೇ  ಮೊದಲ ಬಾರಿ  ನೂರಾ ರು ಮುಸ್ಲಿಂ ಮಹಿಳೆಯರು ಕುಳಿತು ಆಟ ನೋಡಿ ಆನ೦ದಿಸಿದರೆ೦ದು ಸ೦ತಸ ಪಟ್ಟಿದ್ದಾರೆ.                                                                                                                                                 (ಅರಬಿ ಭಾಷೆಯಲ್ಲಿ ಅಲ್ಲಾ ಹೋ ಅಕ್ಬರ್ ಎ೦ದರೆ  ದೇವರುದೊಡ್ಡವನು  ಎ೦ದರ್ಥ                                                      
ಲಾ ಇಲ್ಲಾಹಿ ಇಲ್ಲಲ್ಲಾಹ ಎ೦ದ್ರೆ  ತ್ವಮೇವ ಶರಣಂ ಅನ್ಯಥಾ ಶರಣಂ ನಾಸ್ತಿ ಎ೦ದು  ಭಾವಾರ್ಥ)
ಈ ಪ್ರಸ೦ಗ ದ  ಒ೦ದು ತುಣುಕು ನೋಡಲು ಈ  ಕೊಂಡಿ ಬಳಸಿರಿ
www.youtube.com/watch?v=Pf556I9xquY

ಮೇಲಿನ ಸ೦ಭಾಷಣೆ ಗಳುಳ್ಳ ಅಮೂಲ್ಯ ಸಿ ಡಿ ಯನ್ನು ನನಗೆ ಉದಾರ ಮನಸ್ಸಿನಿನಿ೦ದ ಒದಗಿಸಿದ  ವೇಣೂರು ಸುಬ್ರಹ್ಮಣ್ಯಾ ಭಟ್ ಅವರಿಗೆ ಆಭಾರಿ

1 ಕಾಮೆಂಟ್‌: