ಬೆಂಬಲಿಗರು

ಸೋಮವಾರ, ಮಾರ್ಚ್ 11, 2013

ಪಥ್ಯ ಪುರಾಣವು

                       ಪಥ್ಯ ಪುರಾಣವು
 
ಬಹಳಷ್ಟು ಕಾಯಿಲೆಗಳಿಗೆ  ಪಥ್ಯದ ಅವಶ್ಯಕತೆ ಇಲ್ಲ.ರೋಗಿಗಳಿಗೆ ಏನಾದರೂ ಪಥ್ಯ ಹೆಳದಿದ್ದರೆ ಅಸಾಮಧಾನ. ನಮ್ಮ

ಗುರುಗಳು ಎಲ್ಲಾ ರೋಗಿಗಳಿಗೂ ಡಿಸ್ಚಾರ್ಜ್ ಆಗುವಾಗ ಬದನೆ ಕಾಯಿ ಮತ್ತು ಕೋಸು ಬಿಟ್ಟು
 
ಎಲ್ಲಾ ತಿನ್ನಿರಿ ಎನ್ನುತ್ತಿದ್ದರು.ಕುತೂಹಲದಿ೦ದ ನಾವು ಕೇಳಿದರೆ ಏನೂ ಪಥ್ಯ ಹೇಳದಿದ್ದರೆ ರೋಗಿಗಳಿಗೆ

ಸಮಾಧಾನವಿಲ್ಲ ,ಅದಕ್ಕೆ ಈ ಎರಡು ತರಕಾರಿಗಳನ್ನು ಬಲಿಪಶು ಮಾಡುವುದು ಎ೦ದರು.
 
  ಜನರು ಕೆಲವನ್ನು ನ೦ಜು ಎನ್ನುವರು.ಉದಾ; ಬದನೆಕಾಯಿ .ಎಲ್ಲಾ ವಿಟಮಿನ್ ಗಳಿ೦ದ ಸಮ್ರುದ್ಧ ವಾದ ತರಕಾರಿ. ವೃಥಾ

ದೋಶಾರೋಪಣೆಗೆ ಒಳಗಾದ ವಸ್ತು. ಅದಕ್ಕೇನಾದರು ಅವಕಾಶವಿದ್ದರೆ
 
ಮಾನ ನಷ್ಟ ಮೊಕದ್ದಮೆಯೊ,ದೇವಸ್ತಾನ ದಲ್ಲಿ ಆಣೆ ಯೋ ಹೂಡುತಿತ್ತು.ಇದರ೦ತೆ ಅನೇಕ ದಲಿತ  ತರಕಾರಿಗಳಿವೆ.
 
       ಪಥ್ಯ ಪಕ್ಷದವರು ಕೆಲವು ವಸ್ತುಗಳನ್ನು ಉಷ್ಣವೆನ್ನುವರು,ಇನ್ನು ಕೆಲವನ್ನು ಶೀತವೆನ್ನುವರು.ಇದನ್ನು ವೈಜ್ನಾನಿಕವಾಗಿ

ವಿಶ್ಲೇಶಿಸಲು ಹೋದರೆ ತಲೆ ಬಿಸಿಯಾಗುವುದು.ಸೌತೆಕಾಯಿ, ಬಸಳೆ ಶೀತಕಾರಕವಾದರೆ
 
ಐಸ್ ಕ್ರೀಮ್ ಉಶ್ಣ .ಈ ವರ್ಗೀಕರಣಕ್ಕೆ ಅಳತೆ ಗೋಲು ಇದ್ದ೦ತಿಲ್ಲ.
 
       ಸಕ್ಕರೆ ಕಾಯಿಲೆಯವರುಸಿಹಿ ತಿನ್ನಬಾರದಷ್ಟೆ.ವೈದ್ಯರ ಬಳಿ ಅದು ತಿನ್ನ ಬಹುದೊ ಇದು ಹೇಗೆ ಎ೦ದೆಲ್ಲ ತಲೆ

ತಿನ್ನುವರು.ಮನೆಯಲ್ಲ್ಲಿಇಷ್ಟಟದ ಸಿಹಿ ತಿ೦ಡಿ ಅಥವ ಹಣ್ಣು ಕ೦ಡಾಗ ಮನಸು ಚ೦ಚಲವಾಗುವುದು.
 
ಕೆಲವು ರೊಗಿಗಳು ಸಮಾರ೦ಭಗಳಲ್ಲಿ ಒ೦ದು ಹೊಳಿಗೆಯೊಡನೆ ಒಂದು  ಎಕ್ಸ್ಟ್ರಾಡಯೋನಿಲ್ ಮಾತ್ರೆ ತಿನ್ನುವರು.ರಸರುಷಿ ಡಿ ವಿ ಜಿ
ಸಕ್ಕರೆ ಕಾಯಿಲೆಯಿದ್ದರೂ ಹೊಟ್ಟೆ ತು೦ಬಾ ಜಿಲೇಬಿ ತಿನ್ನುತ್ತಿ ದ್ದರಂತೆ
 
ಆಸ್ಪತ್ರೆ ರಲ್ಲಿ ರಕ್ತ ಪರೀಕ್ಷೆಯಲ್ಲಿ  ಗಗನಕ್ಕೇರಿದ ಸಕ್ಕರೆ ಪ್ರಮಾಣ ಕಂಡು ಹೌಹಾರಿ ಇನ್ನು ಮುಂದೆ ಸಿಹಿ ಮುಟ್ವುವುದ್ದಿಲ್ಲವೆಂದು

ಪ್ರಮಾಣ ಮಾಡುವರು.  ಐ ಸ್  ಕ್ರೀಂ ಕ೦ದಾಗ ಸತ್ತರೆ ಸಾಯಲಿ ಹುಟ್ಟಿದವರೆಲ್ಲಾ ಸಾಯಲೇ ಬೇಕು, ಬಾಯಿ ಕಟ್ಟಿ

ಸಾಯಿವುದು ಯಾಕೆ ಎಂಬ ವೇದಾಂತ ಕ್ಕೆ ಬರುವರು.ಕೆಲವು ಪತಿವ್ರತಾ ಶಿರೋಮಣಿ ಪತ್ನಿಯರು ಸಕ್ಕರೆ ಕಾಯಿಲೆಯ


ಗಂಡನಿಗೆ ವೈದ್ಯರು  ಎರಡೇ ದೋಸೆ ಕೊಡಬಹುದು ಎಂದದಕ್ಕೆ ನಾಲಕ್ಕು ಸೌಟು ಹಿಟ್ಟಿನ ಒ೦ದು ದೋಸೆ ಮಾಡುವರು.
 
ರಕ್ತದೊತ್ತಡ ಕ್ಕೆ ಉಪ್ಪು ಕಡಿಮೆ ತಿನ್ನಲು ಹೇಳುವರು.ಬಿ ಪಿ ಶುಗರ್ ಎರಡು ಇರುವವರ ಪಾಡು ಹೇಳಿ.ಇವೆರಡನ್ನೂ ಬಿಟ್ಟರೆ


ಆಯಿಸ್ಸು ಹೆಚ್ಚಾಗದಿದ್ದರು  ಜೀವನ ದೀರ್ಘವಾದಂತೆ ಎನಿಸುವುದು.
 
ತೋರವಿರುವವರು ಸಪುರ ವಾಗಲು ಪಥ್ಯ ಕೇಳುವರು.ಸಪುರವಿರುವ ಹುಡಿಗಿಗೆ ಮದುವೆಗಾಗಿ ತೋರವಾಗಬೇಕು.ಅಯ್ಯೋ

 ಕಷ್ಟವೆ?
 
  ಜಾಂಡಿಸ್ ಕಾಯಿಲೆಯಲ್ಲ ರೋಗ ಲಕ್ಷಣ ಅದಕ್ಕೆ ಪಥ್ಯ ಅನಾವಶ್ಯಯಕವೆಂದು ಆಧುನಿಕ ವೈದ್ಯ ಹೇಳುವುದು.ಇಲ್ಲಿ ರೋಗದಿಂದ ಬಳದಿದ್ದರು ಪಥ್ಯದಿಂದ ಕಂಗಾಲಾಗುವರು.
 
ಅಜ್ಜಿ ಪಥ್ಯದ ಭಯೋತ್ಪಾದನೆ ಒಳಗಾಗುವವರು ಬಾಣಂತಿ ಯರು ಅವಶ್ಯವಾದ ಸಸಾರ ಜನಕ ,ಕ್ಯಾಲ್ಸಿಯಂ ಯಿಕ್ತ

ಆಹಾರ   ನಂಜು ಎಂದು ಕೊಡರು. ಹಾಲು ಮತ್ತು ತುಪ್ಪ ತಿನಿಸಿ ಮಲಗಿಸುವರು.ಬಹುತೇಕ ಹೆಂಗಸರು ಮೊದಲನೇ ಹೆರಿಗೆಗೆ
 
ಡಬಲ್ ಡೆಕ್ಕರ್ ಗಳಾಗುವರು. ಬೊಜ್ಜು ಜನ್ಯ ರೋಗಗಳಿಗೆ ತುತ್ತಾಗುವುದಲ್ಲದೆ ತಮ್ಮ ಅಂದ ನಷ್ಟವಾಯಿತೆಂದು ಅಳುವರು.
 
ಇದನ್ನು  ಅಜ್ಜಿಯ೦ದಿರಿಗೆ ಹೇಳಿದರೆ   ತ ಮ್ಮ ಹೆರಿಗೆಯ ದಾಖಲೆ ತೋರಿಸಿ ಈ ಇಂಗ್ಲಿಶ್ ಮದ್ದಿನ ಡಾಕ್ಟರು ಹೇಳಿದ್ದನ್ನೆಲ್ಲಾ

ಕೇಳಿದರೆ ಆಗದು ಮುಂದೆ ಸಹಿಸುವುದು ನೀನೋ ಅವರೋ ಎಂದು ಪಾಟೀಸವಾಲು ಹಾಕುವರು.


 
ಪಥ್ಯ ಬೋಧನೆಯೆಲ್ಲಾ ಕೇಳಿ ತಮಗೆ ಬೇಕಾದದ್ದೆಲ್ಲ ತಿನುವ ಕ್ರಿಯೆಗೆ ಪಥ್ಯೇಥರ ಚಟುವಟಿಕೆ ಎನ್ನ ಬಹುದೇನೋ?
 
ಹೇಳಲು ಬಹಳ ಸಂಕೊಚವಾಗುವ ಆದರೆ ಹೇಳದಿರಲಾಗದ ಪಥ್ಯವೊಂದಿದೆ.ಅದೇ ಹಾಸಿಗೆ ಪಥ್ಯ. ಗುರುತರ ಶಸ್ತ್ರ 


ಚಿಕಿತ್ಸೆಗೊಳಗಾದವರು,ಹೃದ್ರೋಗಿಗಳು  ಇ೦ತವು ಈ ಪಥ್ಯ ಮಾಡಬೇಕು ಎನ್ನುತ್ತಾರೆ.             ಪುರಾಣದಲ್ಲಿ ಪಾಂಡು ರಾಜನಿಗೆ

 ತೀವ್ರ್ರರಕ್ತ್ತ  ಹೀನತೆಯಿದ್ದುದರಿಂದ ವೈದ್ಯರು ಈ ಪಥ್ಯ ಹೇಳಿದ್ದರೂ ಅದನ್ನು ಲಂಘಿಸಿ ಜೀವ ಕಳೆದುಕೊಳ್ಳಬೇಕಾಯಿತು. (Cause of death : Heart failure due to severe heriditory  anemia -died against medical advice )ನನ್ನ

ಈ ವಿಚಾರಗಳು ಕೆಲವರಿಗೆ ಪಥ್ಯವಾಗದೆ ಇದರೂ ಹಲವರು ತಥ್ಯವಿದೆಯೆನ್ನುವರು

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ