ಬೆಂಬಲಿಗರು

ಶನಿವಾರ, ಮಾರ್ಚ್ 30, 2013

ನನಗೇಕೆ ಬ್ಲಾಗ್?

ನಾನು ಸಣ್ಣ ವನಿದ್ದಾಗ ಅಜ್ಜ ಅಜ್ಜಿಯ ಹಿಂದೆ ಹೋಗಿ ಅವರು ಹೇಳುತ್ತಿದ್ದ ಜೀವನಾನುಭವಗಳನ್ನು ಕೇಳುತ್ತಿದ್ದೆ.ಅದರಲ್ಲಿ ಒಂದು

ಸಂತೋಷವಿತ್ತು.ಮಕ್ಕಳಿಗೆ ನೆನಪುಗಳ ಚಿತ್ರಣ ನೀಡುವಾಗ ಅವರಿಗೂ ಅವು ಸ್ಪಸ್ಟ ವಾಗುತ್ತಾ ತಮ್ಮ ಬಾಲ್ಯ ಯೌವನ ಕ್ಕೆ

ಜಾರುವ ಅವಕಾಶ.ಅಧ್ಯಾಪಕರು ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ವಿಷಯಗಳ ಬೇರೆ ಬೇರೆ ಮಜಲುಗಳು ಗೋಚರವಾಗುವಂತೆ.

ನನ್ನ ಯೌವನ ಕಾಲದಲ್ಲಿ ಪಕ್ಕದ ಮನೆಯ ಮಕ್ಕಳು .ಅಣ್ಣನ ಮಕ್ಕಳು ನನ್ನ ಪುರಾಣ ಕೇಳಲು ಸಿಗುತಿದ್ದರು.ನನಗೆ ಹೇಳುವ ಕಾತರ

ಅವರಿಗೆ ಕೇಳುವ ಆಸಕ್ತಿ.ಆದರೆ ಇಂದು ಕೇಳುವ ಕಿವಿಗಳೆಲ್ಲಿ?

ಮಕ್ಕಳೋ ಹೋಂ ವರ್ಕ್ ,ಟ್ಯುಶನ್.ಎಂಟ್ರನ್ಸ್,ಟಿ.ವಿ.,ಕಂಪ್ಯೂಟರ್ ಗಳಲ್ಲಿ  ಬ್ಯುಸಿ. ಗಂಡ ಹೆಂಡಿರು ಕೆಲಸಕ್ಕೆ ಹೋಗುವ  ಯುವಕ

ಯುವತಿಯರಿಗೆ ಹೋಟೆಲ್ ಸಿನೆಮ ಶಾಪಿಂಗ್ ಸಾಕು.ಕೆಲವರು ದಯಾ ತೋರಿ ಸ್ವಲ್ಪ ಸಮಯ ನಮಗೆ ಕೊಟ್ಟರೂ ಅವರ  ಅಭಿರುಚಿ

ಬೇರೆ,ನಮ್ಮ ರುಚಿ ಬೇರೆ. ಇದಕ್ಕೆ ಭಾಗಶ ಉತ್ತರ ಬ್ಲಾಗ್ಗ್ಗಿಂಗ್ .ನನಗೆ ತೋಚಿದ್ದನ್ನು ಸಮಯ ಸಿಕ್ಕಾಗ ಬರೆಯುವುದು.ಇಷ್ಟ ಇರುವವರು

ಅವರರವ  ಭಾವಕ್ಕೆ  ಅವರವರ ಭಕುತಿಗೆ ಅನುಗುಣವಾಗಿ ಹೆಕ್ಕಿ ಓದಬಹುದು .

ನನ್ನ ಈ ಬ್ಲಾಗ್ ಶಿಶು ವಿಗೆ ಒಂದು ತಿಂಗಳು ತುಂಬುತ್ತಿದೆ.ಸಾವಿರ ಮಂದಿ ಭೇಟಿಕೊತ್ತಿದ್ದಾರೆ.ಸಂತೋಷ.ಅರಣ್ಯಿಕರಣಕ್ಕೆ ಅಳಿಲ ಸೇವೆ ಗೆ

ಅತ್ಯಧಿಕ ಸಂದರ್ಶಕರು, ಪರಿಸರ ಕಾಳಜಿ ಇದೆ.
ಸಂದರ್ಶಿಸುತ್ತಿರಿ. ಧನ್ಯವಾದ,

ಗ್ಯಾಸ್ಟ್ರಿಕ್ ಟ್ರಬಲ್

 

ವೈದ್ಯ ಪ್ರಪಂಚದಲ್ಲಿ  ಈ ಶಬ್ದ ಅತಿಯಾಗಿ ಬಳಕೆಯಲ್ಲಿದೆ.ಅದರ ಅರ್ಥ ಬಹು ವಿಶಾಲ ವಾಗಿದೆ.ನಿಜವಾದ ಅರ್ಥದಲ್ಲಿ ನೋಡಿದರೆ 

ಗ್ಯಾಸ್ಟ್ರಿಕ್ ಎ೦ದರೆ ಜಠರ ಸಂಬಂದಿ ಎಂದು ಅರ್ಥ.ವಾಡಿಕೆಯಲ್ಲಿ ಅತಿ ಆಮ್ಲ ದಿಂದ ಹಿಡಿದು ಮೂತ್ರ ತೊಂದರೆ ವರೆಗೆ ಇದನ್ನು 

ಉಪಯೋಗಿಸುತ್ತಾರೆ.ಕೆಲವೊಮ್ಮೆ ಮೈಕೈ ನೋವು ತಲೆನೋವಿಗು ಇದನ್ನು ಎಳೆ ತರುವುದು ಉಂಟು.

 

ರೋಗಿಯು ಗ್ಯಾಸ್ಟ್ರಿಕ್ ಎಂದೊಡನೆ ಆಸಿಡ್ ಹಾರೀ ಮಾತ್ರೆ ಗಳನ್ನು ಬರೆಯುದು ಸಾಮಾನ್ಯವಾಗಿದೆ,ಇದು ಅನಾವಶ್ಯಕ ಮತ್ತು ಕರ್ಚು

ಹೆಚ್ಚಿಸುವ ದಾರಿ.

ಉದ್ವೇಗ ಟೆನ್ಸನ್ ಇರುವವರು ತಮಗರಿವಿಲ್ಲದಂತೆ ಗಾಳಿ ನುಂಗುತ್ತಾರೆ.ಅದೇ ಹೊಟ್ಟೆಯಲ್ಲಿ ವಾಯು ಉಪದ್ರ ಕೊಡುವುದು.ಅದಕ್ಕೂ

 

ಹೊಟ್ಟೆಯಲ್ಲಿರುವ ಆಮ್ಲದ ಅಂಶಕ್ಕೂ ಸಂಭಂದ ವಿಲ್ಲಾ.ಆದ್ದರಿಂದ ಇವರಿಗೆ ರಾಣಿಟಿದೀನ್ ,ಒಮೆಪ್ರಜೊಲ್ ನಂತಹ ಔಷಧಿ ಯಾಕೆ?

 

ಇನ್ನು ಉಬ್ಬಸ ರೋಗಿಗಳು ಕಷ್ಟ ಪಟ್ಟು ಉಸಿರಾಡುವಾಗ ಶ್ವಾಸ ಕೋಶಕ್ಕೆ ಹೋಗಬೇಕಾದ ಉಸಿರು ಗಾಳಿ ಹೊಟ್ಟೆಗೆ ಹೋಗಿ ಉಬ್ಬರ

 

ಉಂಟು ಮಾಡುವುದು ಸಾಮಾನ್ಯ ,ಇವರಿಗೆ ಅಸಿಡಿಟಿ ಗಿರುವ ಮದ್ದು ಯಾಕೆ?

 

ನಮ್ಮ ಹೊಟ್ಟೆಯಲ್ಲಿ ಯಾವಾಗಲೂ ಆಸಿಡ್ ಇರುತ್ತದೆ ,ಮತ್ತು ಜೀರ್ಣ ಕ್ರಿಯೆಗೆ ಅದು ಆವಷ್ಯವೂ ಹೌದು .ದೇಹದಲ್ಲಿ ರಕ್ತ ವುಂಟು

 

ಮಾಡಲು ಬೇಕಾದ ಕಬ್ಬಿಣವು ಹೊಟ್ಟೆಯಲ್ಲಿ ಆಮ್ಲವಿದ್ದರೆನೆ ಜೀರ್ಣ ವಾಗುವುದು.ಹೊಟ್ಟೆಯ ಕಿಚ್ಚನ್ನು ಸಂಪೂರ್ಣ ಹೋಗಲಾಡಿಸಿದರೆ

 

ಸೋಂಕು ರೋಗಗಳು (ಮುಖ್ಯವಾಗಿ ಹಿರಿಯ ನಾಗರಿಕರಲ್ಲಿ)ಬರಲು ಆಹ್ವಾನವಿತ್ತಂತೆ.

 

ಆದುದರಿ೦ದ ರೋಗಿಗಳು ತಮ್ಮ ತೊಂದರೆಯನ್ನು ನಿಖರ ವಾಗಿ ಹೇಳಬೇಕಲ್ಲದೆ ಗ್ಯಾಸ್ಟ್ರಿಕ್ ನಂತಹ  ಅಸ್ಪಸ್ಟ ಶಬ್ದಗಳನ್ನು ಬಿಡಬೇಕು .

ವೈದ್ಯರೂ  ಎಲ್ಲ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೂ ಆಮ್ಲ ಹರ ಔಷಧಿ ಬರೆಯುವುದು ಸಲ್ಲ.

ಬ್ಲಡ್ ಪ್ರೆಶರ್ ಬಗ್ಗೆ

ಬಿ ಪಿ ಬಗ್ಗೆ ಹಲವು ಕಲ್ಪನೆಗಳಿವೆ .ಕೆಲವು ಸರಿಯೂ ಇನ್ನುಕೆಲವು ಅಧಾರ ರಹಿತವೂ ಆಗಿವೆ.

 

ನಾರ್ಮಲ್ ಆಗಿ ಬಿ.ಪಿ. ಯು ೧೪೦/೯೦ ರ ಒಳಗೆ ಇರಬೇಕು.ಇದು ಯಾವುದು ಮಿತಿಗಿಂತ ಹಚ್ಚಿದ್ದರೂ  ಹೈ ಬಿ.ಪಿ. ಅಥವಾ ಹೈಪರ್

 

ಟೆನ್ಸನ್ ಎಂದು ಕರೆಯಲ್ಪದುತ್ತದೆ. ಆಸ್ಪತ್ರೆಯಲ್ಲಿ ಬಿ.ಪಿ.ನೋಡುವುದಕ್ಕೆ ಮೊದಲು ಅರ್ಧ ಗಂಟೆ ಆರಾಮವಾಗಿ ಕುಳಿತಿರ ಬೇಕು.ಈ

ಅವಧಿಯಲ್ಲಿ ಸ್ಮೋಕ್ ಮಾಡಿರಬಾರದು. ಕೆಲವೊಮ್ಮೆ ಮೊದಲನೇ ಸಲ ನೋಡುವಾಗ ಬಿ.ಪಿ. ಸ್ವಲ್ಪ ಹೆಚ್ಚಿದ್ದರೂ ಪುನಃ ನೋಡುವುದು

 

ವಾಡಿಕೆ.ಆಸ್ಪತ್ರೆಯಲ್ಲಿ  ಮೊದಲ ಬಾರಿ ನೋಡುವಾಗ ಬಿ.ಪಿ.ಜಾಸ್ತಿ ಇರುವುದನ್ನು ವೈಟ್ ಕೋಟ್ ಹೈಪರ್ ಟೆನ್ಶನ್ ಎನ್ನುತ್ತಾರೆ.

 

ಇವರ ಬಿ ಪಿ ಯನ್ನು ಮನೆಯಲ್ಲಿ ನೋಡಿದರೆ ನಾರ್ಮಲ್ ಇರ ಬಹುದು.ಇವರಿಗೆ ಚಿಕಿತ್ಸೆ ಅನಾವಶ್ಯಕ.

 

ಎರಡು ಅಥವಾ ಹೆಚ್ಚು ಬಾರಿ ಒತ್ತಡ ಜಾಸ್ತಿ ಇದ್ದಾರೆ ರೋಗ ಲಕ್ಷಣ ಇಲ್ಲದಿದ್ದರೂ ಚಿಕಿತ್ಸೆ ಅನಿವಾರ್ಯ.ಇಲ್ಲದಿದ್ದರೆ ಅತಿಯಾದ ರಕ್ತದೊತ್ತಡ

 

ಹೃದಯ ಮೆದುಳು ಮತ್ತು ಮೂತ್ರ ಪಿಂಡ ಗಳ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ.ಉದಾಹರಣೆಗೆ

ಹೃದಯಾಘಾತ,ಪ್ಯಾರಾಲಿಸಿಸ್,,ಕಿಡ್ನಿ ಫೈಲೂರ್ ಇತ್ಯಾದಿ.ಬಹುತೇಕ ಅತಿ ರಕ್ತದೊತ್ತಡ ಯಾವುದೇ ರೋಗ ಲಕ್ಷಣ ಉಂಟು

ಮಾಡುವುದಿಲ್ಲ .ಸಾಮಾನ್ಯ ತಿಳುವಳಿಕೆಯಂತೆ ತಲೆ ನೋವು ತಿರುವುಕಿಕೆ ಬಿ ಪಿ ಯಿಂದ ಬರುವುದು ಅಪರೂಪ.ತಲೆನೋವಿನಿಂದಾಗಿ ಬಿ

ಪಿ ಜಾಸ್ತಿಯಾಗುವುದು ಸಾಮಾನ್ಯ.ನಿಮಗೆ ತಿಳಿದಿರಲಿ ತಲೆ ನೋವಿನ ಬಹುತೇಕ ಕಾರಣ ಟೆನ್ಸ್ಸನ್.

 

ಅದರಂತೆ ಮೂತ್ರದ ಕಲ್ಲಿನ ನೋವಿನಿಂದ ಬಳಳುವಾಗ ,ತೀವ್ರೆ ಉಬ್ಬಸ ಇದ್ದಾಗ ಬಿ.ಪಿ.ಸ್ವಲ್ಪ ಜಾಸ್ತಿ ಇರುತ್ತದೆ.ಅಂತಹ ಸಂದರ್ಭಗಳಲ್ಲಿ

ಮೂಲ ಕಾಯಿಲೆಗೆ ಚಿಕಿತ್ಸೆಯಾಗ ಬೇಕೇ ಹೊರತು ಬಿ.ಪಿ.ಗೆ ಅಲ್ಲ.

ಶುಕ್ರವಾರ, ಮಾರ್ಚ್ 29, 2013

ಪಂಜೆಯವರ ಅಧ್ಯಾಪಕ ಪ್ರೇಮ

                     

ಪಂಜೆ ಮಂಗೇಶ ರಾಯರು.

ಎಂ ಆರ್ ಶ್ರೀನಿವಾಸ ಮೂರ್ತಿಯವರ ರಂಗಣ್ಣನ ಕನಸಿನ ದಿನಗಳು ನೀವೆಲ್ಲ ಓದಿರಬಹುದು..ಅದನ್ನು ಹಾಸ್ಯ ಬರಹಗಳ ಸಂಕಲನ ಎಂದು  ಪ್ರಕಟಿಸಿದ್ದಾರೆ.ಕುವೆಂಪು ಅವರು ಇದನ್ನು ಚಿತ್ರ ಕಾದಂಬರಿ ಎಂದು ಕರೆದಿದ್ದರು.ಬಿ ಜಿ ಎಲ್ ಸ್ವಾಮಿಯವರ  ಕಾಲೇಜು ರಂಗ ಕಾಲೇಜ್ ತರಂಗ ,ಪ್ರಾಧ್ಯಾಪಕನ ಪೀಠದಲ್ಲಿ  ಕೃತಿಗಳೂ ಹಾಗೆಯೇ.ಮೇಲ್ನೋಟಕ್ಕೆ ಕಾಣುವ ಹಾಸ್ಯದ ಹಿಂದೆ ಶಿಕ್ಷಣ ವ್ಯವಸ್ಥೆ

ಯ ಬಗೆಗಿನ ನೋವಿದೆ. ರಂಗಣ್ಣನ ಕನಸಿನ ದಿನಗಳಲ್ಲಿ ಬೋರ್ಡು ಒರಸುವ ಬಟ್ಟೆ ಎಂಬ ಅಧ್ಯಾಯವಿದೆ.ಬಡ ಅಧ್ಯಾಪಕನೋರ್ವಇನ್ಸ್ಪೆಕ್ಸನ್ ದಿನ ಬೋರ್ಡು ಒರಸಲು ತಮ್ಮ ಮುಂಡಾಸು ಬಟ್ಟೆಯನ್ನೇ ಕೊಡುತ್ತಾರೆ.ಕೇಳಿದಾಗ ಸಾದಿಲ್ವಾರ್ ಲೆಕ್ಕದಲ್ಲೇ

ಕೊಂಡುದಾಗಿಯೂ ,ತಲೆಗೆ ರುಮಾಲು ಇಲ್ಲದೆ ಬರಬಾರದೆಂಬ ಸರ್ಕ್ಯುಲರ್ ಇದ್ದುದರಿ೦ದ ಬಡವನಾದ ತಾನು ಅದನ್ನೇ ರುಮಾಲು ಆಗಿಯೂ ಬಳಸುತ್ತೀನೆ೦ದು ಹೇಳುತ್ತಾರೆ.ಈ ಅಧ್ಯಾಪಕರು ಪಾಠ ಪ್ರವಚನದಲ್ಲಿ ಸಮರ್ಥರು ಹಾಗು ಪ್ರಾಮಾಣಿಕರು.

ಪಂಜೆ ಮಂಗೇಶ ರಾಯರ ಹಳೆಯ ಸಬ್ ಅಸಿಸ್ಟೆ೦ಟನ ಸುಳ್ಳು ಡೈರಿಯಿಂದ ಎಂಬ ಲೇಖನವೂ ಮೇಲ್ನೋಟಕ್ಕೆ ಲಲಿತ ಪ್ರಬಂಧದಂತೆ ಕಂಡು ಬಂದರೂ ಅದರಲ್ಲಿ ಸಹೃದಯಿ ಇನ್ಸ್ಪೆಕ್ಟರ್ ನ ನೋವು ಇದೆ. ಅಧ್ಯಾಪಕರ ಸ್ತಿತಿ ಗತಿಗಳ ಬಗ್ಗೆ ಅನುಕಂಪ

ಇದೆ.

      ಮಂಗಳೂರು ಸರಕಾರೀ ಕಾಲೇಜಿನಲ್ಲಿ ಮತ್ತು  ಸರ್ವಿಸಿನ ಕೊನೆಯ ಅಧ್ಯಾಪನ ದಿನಗಳ ಮಧ್ಯೆ ಕಡುಬಿನೊಳಗಿನ ಹೂರಣದಂತೆ ಹದಿನಾಲ್ಕು ವರುಷ ವಿದ್ಯಾ ಇಲಾಖೆಯಲ್ಲಿ ಸಬ್ ಅಸಿಸ್ಟೆಂಟ್( ಎಂದರೆ ಮೊದಲಿನ ಡೆಪ್ಯುಟಿ ಇನ್ಸ್ಪೆಕ್ಟರ್ ನ ರೂಪಾಂತರ ) ಆಗಿ ಕಾರ್ಯ ನಿರ್ವಹಿಸುವಾಗ ಕಂಡ ಕೆಲವು ಚಿತ್ರಣ ಗಳು ಇಲ್ಲಿವೆ.

ಒಮ್ಮೆ ಇವರು ಇನ್ಸ್ಪೆಕ್ಷನ್ ಕಾರ್ಯಾರ್ಥ ಮಧ್ಯಾಹ್ನ ಗುಡ್ಡದ ಪದವಿನಿಂದ ಬಯಲಿಗೆ ಇಳಿಯುತ್ತಿದ್ದಾಗ ದೊಡ್ಡ ಮನುಷ್ಯರೊಬ್ಬರು ಕೈಯ್ಯಲ್ಲಿದ್ದ  ಕೊಡೆಯನ್ನು ಮಡಿಸಿ ಕೆರ ಕಳಚಿ ಕೈಮುಗಿದು ತಾವಾಗಿ ಹಿಂದೆ ಬರುವಂತಾವರದರು .ಪೋಲಿಸ್ ಇನ್ಸ್ಪೆಕ್ಟರ್ ಗೆ

ಕಾಯುತ್ತಲಿದ್ದವರು .ಇವರ ನಿಜವರಿತೊಡನೆ ಉಂಟೆ ಇದು? ನಾನು ಪೋಲಿಸ್ ಎಂದು ಗ್ರಹಿಸಿ ಸುಮ್ಮನೆ ಬ೦ದದ್ದಾಯಿತು. ಪೋಲಿ ಮಕ್ಕಳನ್ನು ನೋಡ ಬ೦ದ ಇದಕ್ಕೆ ನಾನು ಕೈಯೇತ್ತುವುವುದು ಉಂಟೆ ಎಂದು ಪ್ರಲಾಪಿಸುತ್ತಾರೆ.

ನಮಸ್ಕಾರ ಅಂದರೆ ಅಧಿಕಾರಕ್ಕೆ ಸಲ್ಲತಕ್ಕ ಪುರಸ್ಕಾರ ಎಂಬತಿಳುವಳಿಕೆ.ಹುದ್ದೆದಾರಣ ಮೈಬಣ್ಣ,ಉಡುಪಿನ ತಳಕು,ಸಂಬಳದ

ಮಹತ್ವ,ಇಲಾಖೆಯ ಹಿರಿಮೆ,ಜಾತಿಯ ಅಂತಸ್ತು, ಮುಖ್ಯವಾಗಿ ಅಧಿಕಾರಿಯ ಉಪದ್ರ ಕಾರಕ ಶಕ್ತಿಯನ್ನ ಹೊಂದಿಕೊಂಡು ನಮಸ್ಕಾರ ವಿಧಿಯು ಮಾರ್ಪಡುತ್ತದೆ.ಹಳ್ಳಿಯವರಿಗೆ ಸರಕಾರಿ ಉದ್ಯೋಗಸ್ತರ ಮೇಲೆ ಅಳುಕು,ಅಂಜಿಕೆ ,ಅಪಾಯ ಭೀತಿ ಇದೆ, ಅಕ್ಕರೆ ಕಡಿಮೆ.ಅಕ್ಕರೆ ಇದ್ದಲ್ಲಿ ಅಭಿಮಾನವಿದೆ.ಅದು ಇಲ್ಲದಿದ್ದಲ್ಲಿ ಅವರ ಮನಸಿನೊಳಗಣ ನಂಬಿಕೆ ಹೀಗಿದೆ.’ಮುಕ್ಕಾಲು ಮೂರು

ವೀಸಾ ಅಧಿಕಾರಿಗಳು ಸರೀಸೃಪಗಳಂತೆ,ಉದರ ಗಾಮಿಗಳು. ‘ಸರಕಾರದವರಲ್ಲಿ ಸಿವಿಲಿನವರು ಹೆಬ್ಬಾವುಗಳು,ಪೋಲಿಸಿನವರು ನಾಗರ ಹಾವುಗಳು ಅಬಕಾರಿ ಅರಣ್ಯ ಇಲಾಖೆಯವರು ಮಂಡಲಿಗಳು.ತಪ್ಪಾಲಿನವರೋ?ಹಸಿರು ಹಾವು ಸರ್.ರೆವೆನ್ಯೂ ಇನ್ಸ್ಪೆಕ್ಟರ್ ಕೇರೆ ಹಾವು ಸರ್.

ಶಾಲಾ ಇನ್ಸ್ಪೆಕ್ಟರ್ ಯಾವ ವರ್ಗ? ಎಂದುದಕ್ಕೆ ಮಾಸ್ತರರೆಂದರಂತೆ  ನಿಮ್ಮ ವರ್ಗ ವೊಳ್ಳೆಯದು!(ಒಳ್ಳೆ ಹಾವು )

ಆಗಿ ಹೋದ ಇನ್ಸ್ಪೆಕ್ಟರ್ ಗಳನ್ನು ಉಪಾಧ್ಯಾಯರು ನೆನೆಸಿ ಕೊಳ್ಳುತ್ತಿದ್ದುದು ಹೀಗೆ.’ಆ ರಾಯರು ನಮ್ಮನ್ನು ಕಾಯಿದೆ ಬಿಡದೆ ಕಾಯುತ್ತಿದ್ದರು.ಕಾಯಿಸುತ್ತಿರಲಿಲ್ಲ' ‘ಈ ರಾಯರು ಬೆನ್ನಿಗೆ ಬಡಿಯುತ್ತಿದ್ದರು.ಆದರೆ ಹೊಟ್ಟೆಗೆ ಹೊಡೆಯುತ್ತಿರಲಿಲ್ಲ..’ಅವರು ಇದ್ದ ಕಾಲಕ್ಕೆಬೆಲ್ಲ ಕೊಟ್ಟರು,ಇಲ್ಲದ ಕಾಲಕ್ಕೆ ಬೆಲ್ಲದಂತಹ ಮಾತು ಕೊಟ್ಟರು,’ಅವರು ಉಪಾಧ್ಯಾಯ ಕುಟುಂಬಿ ಸರ್ !ಅವರಿಗೆ ಹೆಂಡತಿ ಮಕ್ಕಳಚಿಂತೆಗಿಂತ ಶಾಲೆ ಮಾಸ್ತರರ ಚಿಂತೆ ಹೆಚ್ಚು ‘

 

ಹೊಸಂಗಡಿ ಶಾಲೆಯ ಮಾಸ್ತರು ಇನ್ಸ್ಪೆಕ್ಷನ್ ಮುಗಿದ ರಾತ್ರಿಯೇ  ಸ್ತಳ ಖಾಲಿ ಮಾಡಿ ಪರವೂರಿಗೆ ತೆರಳುವುದು ಸಾಲತೀರಿಸಲಾಗದೆ.ಏಕೆಂದರೆ ಸರಕಾರದವರು ಪಕ್ಕದ ಊರಿನಲ್ಲಿ ಬೋರ್ಡ್ ಶಾಲೆ  ಹಾಕಿ ಇವರ ಗ್ರಾಂಟ್ ಕಡಿತಗೊಳಿಸಿದರು.

ಕಳೆದ ವರುಷ ಮಗನಿಗೆ ಒಂದು ಅಂಗಡಿ ಹಾಕಲು ಜೈನ ಪೇಟೆಯಿಂದ ಸಾಲ ತಂದು ಮಂದಿ ಮೇಲೆ ಕುಳ್ಳಿರಿಸಿದರೆ ಎರಡು ದಿವಸದಜ್ವರದಲ್ಲಿ ದೇವರಿಗೆ ಸಂದ.ಅವನ ಹನ್ನೆರಡು ದಿನ ಕಳೆಯಲಿಲ್ಲ ಅವನ ತಾಯಿ ನೀರಿಗೆಂದು ಹೋದವಳು ಕಾಲು ಜಾರಿ ಗಂಗಮ್ಮನ ಪಾದ ಸೇರಿದಳು.ಇನ್ನು ಏಳು ವರ್ಷದ ಕೂಸು ಒಂದಿದೆ ,ಅದನ್ನು ಕಟ್ಟಿಕೊಂಡು ಈಹಳ್ಳಿಯಲ್ಲಿ ನಾನೇನು ಮಾಡಲಿ?

ಇದು ಸಂಸಾರ ಕಷ್ಟದಿಂದ ಬೆಂದ ಉಪಾಧ್ಯಾಯನ ಮೊರೆ.ಈ ಮೊ ರೆಯಲ್ಲಿ ಮಾತಿನ ಮೆರಗು ಇಲ್ಲ,ಸಲುಗೆಯ ಭರವಸೆಯಿಂದ ಹೇಳಿದ ಮಾತಿನಲಿ ಸುಳ್ಳಿನ ಸುಳಿವು ಇಲ್ಲ.ನಾವು ಸುಳ್ಳು ಎಂದು ಸಂದೇಹ ಪಟ್ಟು ಹಳ್ಳಿಯ ಮಾಸ್ತರನ ಶಾಲೆಯ ಹಣೆಬರಹದ ಮೇಲೆ ಕೆಂಪು ಗೀಟು ಎಳೆಯುವ ಮುನ್ನ ಆತನ ಬಡತನದ ಬಾಳಿನ ಸಾಲಸೋಲಗಳನ್ನು ವಿಚಾರಿಸಿಕೊಲ್ಲತಕ್ಕದ್ದೆಂಬ ಮೂಲ ಪಾಟವನ್ನು ನಾನು

ಹೊಸಂಗಡಿಯ ಉಪಾಧ್ಯಾಯ ರಿಂದ ಕಲಿತೆ ಎನ್ನುತ್ತಾರೆ ಪಂಜೆಯವರು.ಬಡತನದಿಂದ ಸಾಲ ಹುಟ್ಟಿತೋ ಇಲ್ಲಾ ಸಾಲದಿದ ಆತನ

ಬಡತನ ಹುಟ್ಟಿತೋ   ನಾನು ಹೇಳಲಾರೆ,ಆದರೆ ಬಡತನದಿಂದ ಹಳ್ಳಿಯ ಮಾಸ್ತರನು  ನನಗೆ ಬಸವಳಿದುದು ಗೊತ್ತು ಎನ್ನುತ್ತಾರೆ.

"ಈ ಅಧ್ಯಾಪಕರು ವಾಸವಾಗಿದ್ದ ಹುಲ್ಲು ಗುಡಿಸಲುಗಳು ಈಗ ಪಾಳು ಬಿದ್ದಿರಬಹುದು.ಮೇಸ್ಟರ ಹೆಸರು ಹಳ್ಳಿಯವರು ಮರೆತಿರಬಹುದು.ಇದರಿಂದ ಅವರು ಮಾಡಿದ ಸತ್ಕಾರ್ಯಗಳೆಲ್ಲ ಅವರ ಹಿಂದೆಯೇ ನಶಿಸಿ ಹೋದವೆಂದು ಭಾವಿಸಲಾಗದು.

ಹಸಿರಿಂದ ಕಂಗೊಳಿಸುತ್ತಿರುವ ಹೊಲವನ್ನು ಕಂಡಾಗ ಅದರ ರೂವಾರಿಗಳಾದ ಬಡ ಕೂಲಿ ಯವರ  ಕಾಯ ಕಷ್ಟ ನೆನಪಾಗುವುದಿಲ್ಲ.ಮಂಗಳೂರು ಸೇತುವೆಯ ಮೇಲೆ ನೇತ್ರಾವತಿಯ ಸೊಬಗು ಆನಂದಿಸುವಾಗ ಇದರ ವಿಸ್ತಾರ ಸೌಂದರ್ಯಕ್ಕೆ

ಕಾರಣವಾದ ಹಳ್ಳಿ ಹಳ್ಳಿಯಿಂದ ಬಂದ ಹಳ್ಳಗಳ ನೆನಪಾಗುವುದಿಲ್ಲ.ನಮ್ಮ ಜಿಲ್ಲೆಯಿಂದ ವಿವಿಧ ರಂಗಗಳಲ್ಲಿ ಉತ್ತುಂಗ ಸ್ಥಾನಕ್ಕೆ ಏರಿದವರನ್ನು ಕಂಡಾಗ ;ಇದೆಲ್ಲ ಬಹು ಮಟ್ಟಿಗೆ ಅರೆಯುಣ್ಣುವ ಮಕ್ಕಳೊ೦ದಿಗನಾದ ಹಳ್ಳಿಯ ಮಾಸ್ತರನು ಹರಡಿದ ಬೀಜದ

ಫಲ ;ಎಂಬೊಂದು ಸೊಲ್ಲು ನನ್ನ ಅಂತರಂಗದಲ್ಲಿ  ಜಿನುಗುತ್ತಿದೆ." ಇವು  ಇನ್ಸ್ಪೆಕ್ಟರ್ ಪಂಜೆಯವರ ಮಾತುಗಳು.


 

ಬುಧವಾರ, ಮಾರ್ಚ್ 27, 2013

ಆಮರಣ ಉಪವಾಸ ಸತ್ಯಾಗ್ರಹ

                      ಆಮರಣ   ಉಪವಾಸ   ಸತ್ಯಾಗ್ರಹ
 
ಉಪವಾಸ ಸತ್ಯಾಗ್ರಹ ಗಾಂಧಿಜಿಯವರು ಪ್ರಚುರ ಪಡಿಸಿದ ಅಹಿಂಸಾ ಹೋರಾಟ ಮಾರ್ಗ.ಸ್ವತಂತ್ರ ಭಾರತದಲ್ಲಿ

ಬಹಳ ಮಂದಿ ಇದನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ. ಹಲವು ಮಂದಿ ಬಹಳ ಪ್ರಚಾರದೊಡನೆ ಆಮರಣ ಸತ್ಯಾಗ್ರಹ

ಆರಂಬಿಸಿ ಕೊನೆಗೆ ಯಾರ್ಯಾರ ಕಾಲು ಹಿಡಿದು ಉಪವಾಸ ಕೊನೆಗೊಳಿಸುವ ವಿನಂತಿ ಮಾಡಿಸಿಕೊಳ್ಳುತ್ತಾರೆ.

 ಮೂರು ಅಪವಾದಗಳಿವೆ

ಒಬ್ಬರು ಪೊಟ್ಟಿ ಶ್ರೀರಾಮುಲು ಅವರು .ಸ್ವಾತಂತ್ರ್ಯ ಹೋರಾಟಗಾರ.ಮದ್ರಾಸ್ ಪ್ರಾಂತ್ಯದಿಂದ ತೆಲುಗು ಭಾಷಿಕ

ಪ್ರದೇಶಗಳನ್ನು ಬೇರ್ಪಡಿಸಿ ಆಂಧ್ರ  ರಾಜ್ಯ ಸ್ಥಾಪನೆಗಾಗಿ ಅವರು ಮದ್ರಾಸ್ ನಗರದಲ್ಲಿ ಉಪವಾಸ ಆರಂಬಿಸಿ

೧೬.೧೨.೧೯೫೨ ರಂದು ಹುತಾತ್ಮರಾದರು .ಅದರಿಂದ ಉದ್ಹ್ಭವಿಸಿದ ಜನಾಕ್ರೋಶಕ್ಕೆ ಮಣಿದು ನೆಹರು

೧.೧೦.೧೯೫೩ ರಂದು ಕರ್ನೂಲು ಕೇಂದ್ರವಾಗಿ ಆಂಧ್ರ ಪ್ರದೇಶವನ್ನು ಘೋಷಿಸಿದರು.ಮುಂದೆ ಹೈದರಾಬಾದ್

ನ ಭಾಗವಾಗಿದ್ದ ತೆಲಂಗಾಣ ಸೇರಿ ಈಗಿನ ಆಂಧ್ರ ಪ್ರದೇಶ ೧.೧೧.೧೯೫೬ ಕ್ಕೆ ಉದಯವಾಯಿತು.


                                                          

ಇನ್ನೊಬ್ಬರು ದರ್ಶನ್ ಸಿಂಗ್ ಪೆರುಮಾನ್.ಇವರೂ ಅಪ್ರತಿಮ ದೇಶ ಭಕ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರ.

ಸ್ವಾತಂತ್ರ್ಯ ಸಮರದ ವೇಳೆ ಮಲೇಷ್ಯಾದಲ್ಲಿ ಬ್ರಿಟಿಷರು ಅವರನ್ನು ಬಂದಿಸಿ ಜೈಲಿನಲ್ಲಿ ಇಟ್ಟಿದ್ದ ವೇಳೆ ನಿಯಮ

ಪ್ರಕಾರ ಒಳ ಉಡುಪು ಧರಿಸಲು  ಬಿಟ್ಟಿಲ್ಲ ಎಂದು ಉಪವಾಸ ಆರಂಭಿಸಿ ಅಧಿಕಾರಿಗಳು ಬೇಡಿಕೆಗೊಲಿದ ಮೇಲೆ

ಅನ್ನಾಹಾರ ಸೇವಿಸಿದ್ದರು.ಚಂದಿಘಡ ವನ್ನು ಪಂಜಾಬ್ ರಾಜ್ಯಕ್ಕೆ ಸೇರಿಸಬೇಕು ಎಂಬ ಅಕಾಲಿ ಬೇಡಿಕೆಗೆ

ಗಮನ ಸೆಳೆಯಲು ೧೫.೮.೧೯೬೯ ರಂದು ಉಪವಾಸ ಆರಂಬಿಸಿ ೭೪ ದಿನಗಳ ನಂತರ ೨೭.೧೦ ೬೯ ರಂದು

ನಿಧನ ರಾದರು.ಆ ಕಾಲಕ್ಕೆ ಕನ್ನಡಿಗ  ಡಿ ಸಿ ಪಾವಟೆ ಪಂಜಾಬಿನ   ರಾಜ್ಯಪಾಲ ರಾಗಿದ್ದರು.ಅವರ ಪುಸ್ತಕದಲ್ಲಿ

ಪೆರುಮಾನ ರ ಬಗ್ಗೆ ಬಹಳ ಗೌರವ ದಿಂದ ಬರೆದಿದ್ದಾರೆ.ಉಪವಾಸ ನಿಲ್ಲಿಸಲು ವಿನಂತಿಸಿದ ಪ್ರಧಾನಿ  ಇಂದಿರಾ

ಗಾಂಧಿಯವರಿಗೆ ಅವರು ಬರೆದ ಉತ್ತರ ಅವರು ಎಂತಹ ಸಂತ ರಾಗಿದ್ದರೆಂದು ತಿಳಿಸುತ್ತದೆ. ಆ ಪತ್ರದುದ್ದಕ್ಕು

ಇಂದಿರಾ ಅವರನ್ನು ಮಗಳೇ ಎಂದು ಸಂಬೋದಿಸಿದ್ದಲ್ಲದೆ ,ಅವರಿಗೂ ದೇಶಕ್ಕೂ ಒಳ್ಳೆಯದನ್ನು ಹಾರೈಸುತ್ತಾರೆ.

ಸಿಕ್ಖನಾಗಿ ಪ್ರತಿಜ್ಞೆ ಮಾಡಿದ ಮೇಲೆ ಕಾರ್ಯ ಸಾಧನೆ ಯಾಗದೆ ಹಿಂದೆ ಸರಿಯುವಂತಿಲ್ಲ ಎಂದು ಉಪವಾಸ

ನಿಲ್ಲಿಸಲು ನಿರಾಕರಿಸಿ ಪ್ರಧಾನಿ ಗೆ ತಮ್ಮ ಅಂತಿಮ ನಮಸ್ಕಾರ ಹೇಳುತ್ತಾರೆ .ಅವರ ತ್ಯಾಗ ವನ್ನು  ಅವಕಾಶ

ವಾದಿ ರಾಜಕಾರಣಿಗಳು ಬಳಸಿಕೊಂಡದ್ದನ್ನು ಪಾವಟೆಯವರು  ವಿವರಿಸಿದ್ದಾರೆ.
 
ಇತ್ತೀಚೆಗೆ ಪರಿಸರವಾದಿ  ಶ್ರೀ ಗುರು ದಾಸ್ ಅಗ್ರವಾಲ್ (ಸಂತ ಸ್ವಾಮಿ ಸಾನಂದ ) ಗಂಗಾ ನದಿಯ ನೈರ್ಮಲ್ಯ ಕಾಪಾಡುವತ್ತ  ಗಮನ ಸೆಳೆಯಲು 111 ದಿನಗಳ ಉಪವಾಸಾನಂತರ  2018 ನೇ ಇಸವಿ ಅಕ್ಟೋಬರ್ 11 ರಂದು  ದೇಹ ತ್ಯಾಗ ಮಾಡಿದರು .ಸ್ವಯಂ  ಇಂಜಿನೀಯರ ,ಪ್ರಾಧ್ಯಾಪಕ ,ಸರಕಾರಿ ಅಧಿಕಾರಿ , ಸನ್ಯಾಸಿ ಮತ್ತು ಪರಿಸರ ವಾದಿ ಆಗಿದ್ದ ಅವರ ತ್ಯಾಗ ಬಹಳ ಮಂದಿ  ಮತ್ತು  ಸರಕಾರಗಳು ಗುರುತಿಸದಿರುವುದು ಖೇದಕರ
                                             



The one and only Sukumari is no more

                                    


Malayalam actress Padmashree Sukumari is no more.Timeless roles and priceless acting writes The
Hindu.Those who are familiar with Malayalam cinema know what an talent she was,Just see
Poochakkoru Mukuti, Panchavati Palam,Vandanam ,Boeing Boeing.She is the aunt of actress
Shobhana.

Came as close to the heels of demise of veteran actor Thilakan her death is really a great loss to
Indian cinema.Watch her acting by clicking the links given below.



https://www.youtube.com/watch?v=Njmv96J5G7U

Thanks to the up loaders

ಮಕ್ಕಳ ಪರೀಕ್ಷೆಗಳು ಮತ್ತು ಔಷಧಿಗಳು

 

ಈಗ ಪರೀಕ್ಷೆಗಳ ಸೀಸನ್. ಶೀತ ಜ್ವರಗಳದ್ದೂ.

ಬಹಳಷ್ಟು  ಕಫ್ ಸಿರಪ್ ಮತ್ತು ಶೀತದ ಮಾತ್ರೆಗಳಲ್ಲಿ   ಆ೦ಟಿ ಹಿಸ್ತಮಿನೆಗಲೆಂಬ ವಸ್ತು ಇರುತ್ತದೆ .ಇದರಿಂದ ಸ್ವಲ್ಪ ಮಂಪರು

ಉಂಟಾಗಬಹುದು.ಓದಿದ್ದು ತಲೆಯಿಂದ ಕೈಗೆ ಬರದಂತೆ ಆಗಬಹುದು. ಆದ್ದರಿ೦ದ ಪರೀಕ್ಷಾ ದಿನಗಳಲ್ಲಿ  ಇವನ್ನು

ತೆಗೆದುಕೊಳ್ಳದೆ ಇರುವುದು ಲೇಸು. ವೈದ್ಯರಲ್ಲಿ ಪರೀಕ್ಷೆ ಇರುವ ವಿಚಾರ ತಿಳಿಸುವುದೂ ಉತ್ತಮ.

ಸೋಮವಾರ, ಮಾರ್ಚ್ 25, 2013

Dr D C Pavate

      Mathematician,educationist ,administrator Prof  D C Pavate is a great son of India.Born in

village Mamdapur near Gokak ,had his early education there.He is a Cambridge Mathematical Tripos

Wrangler.After working as professor at Banares Hindu University for two years he joined educational

service of then Bombay state.He rose to the post of Director Of Public Instructions.

He was elected as Vice Chancellor of Karanataka University to the record of five times .He made

this as one of the top universities in India.While serving his fifth term he was asked by then Prime Minister

Smt.Indira Gandhi to become Governor of Punjab .He did a superb job of it and during the President's rule

made many improvements in the educational sector there.

He has written several textbooks on Mathematics .His autobiographical works Memories of an educational

Administrator and My Days as Governor are must read for book lovers.

Here is a paragraph from is book

'If teachers are selfless, patriotic and devoted their duties.so should students be.Nobody exercises

greater influence on young minds than the teacher.Mere advice is no good.If words could change

the pattern of our society ,we should have accomplished wonders by now.and yet we are far,far away

from our objectives.The reason is that we do not practice what we preach.An ounce of practice has

a more salutary effect on the rising generation-our future leaders-than a ton of preaching.'

"If the performance of a student is to be judged by a single examination,whole purpose of the educative

process will be narrowed down by this end.It is therefore ,necessary to evaluate in some the advance

made by the student periodically"

Dr Pavate was awarded Padmabhusan by Govt,of India .A township in Dharwad is named after him.




ಉತ್ತಮ ರಾಷ್ಟ್ರಪತಿ

ಇತ್ತೀಚಿಗೆ ಬಿಡುಗಡೆಯಾದ ಕುಶವಂತ್ ಸಿಂಘರ ಪುಸ್ತಕ ಕುಶವಂತ್ ನಾಮಾ ತಮ್ಮ ೯೮ ನೆ ವಯಸ್ಸಿನಲ್ಲಿ ಬರೆದ ಸಣ್ಣ

ಹೊತ್ತಿಗೆ.ತಮ್ಮ ಕೊನೆಯ ಕೃತಿಯಿರಬಹುದೆಂದು ಬರೆದಿದ್ದಾರೆ.ಎಲ್. ಕೆ.ಅದ್ವಾನಿ ತಮ್ಮ ಬ್ಲಾಗಿನಲ್ಲಿ ಈ ಪುಸ್ತಕ ವನ್ನು

ಒಂದೇ ಉಸಿರಿಗೆ ಓದಿ ಮುಗಿಸಿದೆನೆಂದು ಬರೆದಿದಿದ್ದಾರೆ.ಅದ್ವಾನಿಯವರು ಒಳ್ಳೆಯ ಓದುಗರು. ತಮ್ಮ ಜೀಎವನ ಚರಿತ್ರೆಯಲ್ಲಿ

ತಮ್ಮ ಈ ಹವ್ಯಾಸದ ಬಗ್ಗೆ ಬರೆದಿದ್ದ್ದಾರೆ.

ಮೇಲಿನ ಪುಸ್ತಕದಲ್ಲಿ ಭಾರತದ ಅತ್ಯುತ್ತಮ ರಾಷ್ಟ್ರಪತಿ ಅಬ್ದುಲ್ ಕಲಾಮ್ ಎಂದು ಸಿಂಗ್ ಬರೆದಿದ್ದಾರೆ.ದಿ.ರಾಧಾಕೃಷ್ಣನರು

ವಿದ್ವಾನ್ಸರಾಗಿದ್ದರೂ ನಡೆ ನುಡಿ ಬೇರೆಯಾಗಿತ್ತು .ಜಕಿರ್ ಹುಸ್ಸೇನ್ ತಿಳಿದವರಾಗಿದ್ದರೂ ತಮ್ಮ ಸೀಮಿತ ಕರ್ತವ್ಯದ ಹೊರಗೆ

ಏನನ್ನೂ ಮಾಡಲಿಲ್ಲ ಎಂದಿದ್ದಾರೆ.

ಕುಶ್ವಂತರ ಪ್ರಕಾರ ಒಳ್ಳೆಯ ರಾಷ್ಟ್ರಪತಿಗೆ ಇರಬೇಕಾದ ಗುಣಗಳು.

ಕೈ ಬಾಯಿ ಶುದ್ಧವಿರುವವರು,ಸ್ವಜನ ಪಕ್ಷಪಾತದಿಂದ ದೂರವಿರುವವರು,ನೀತಿ ನಿಯಮವಿದ್ದು,ಹೊಸ ವಿಚಾರಗಳಿಗೆ ತೆರೆದವರು,

ಧೈರ್ಯಶಾಲಿ.


ಈ ಪುಸ್ತಕದಲ್ಲಿ ಚೋ ರಾಮಸ್ವಾಮಿಯವರ ತುಗ್ಲಕ್ ಪತ್ರಿಕೆ ಯಲ್ಲಿ ಬಂದ ರಾಷ್ಟ್ರಪತಿ ಹುದ್ದೆಗಾಗಿ ಬಂದ ಅಣುಕು ಜಾಹೀರಾತು

ಒಂದನ್ನು ಉಲ್ಲೇಖಿಸಿದ್ದಾರೆ.

ಹುದ್ದೆ.- ಭಾರತದ ರಾಷ್ಟ್ರಪತಿ

ವೃದ್ಧರಿಗೂ ಅನಾರೋಗ್ಯ ಪೀಡಿತ ರಿಗೂ ಒಳ್ಳೆಯ ಉದ್ಯೋಗ.

ವಯಸ್ಸು. ೩೫ರ ಮೇಲೆ. ೮೦ ದಾಟಿದವರಿಗೆ ಪ್ರಾಶಸ್ತ್ಯ

ಜವಾಬ್ದಾರಿ

೧.ಗಣ ರಾಜ್ಯೋಸ್ತ್ಸವ ದಿನ ಧ್ವಜಾರೋಹಣ ಮಾಡಿ ಜನತೆಗೆ ಸಾಂತ್ವನ ಹೇಳುವುದು.

೨.ದಯಾ ಅರ್ಜಿಗಳ ಪರಿಶೀಲನೆ ಮತ್ತು ಯಾವುದೇ ನಿರ್ಧಾರ ತೆಗೆದು ಕೊಳ್ಳದೇ ಇರುವುದು.

೩.ಕುಟುಂಬ ಸಮೇತ ವಿದೇಶ ಯಾತ್ರೆ ಕೈಗೊಳ್ಳುವುದು.

ಸಂಬಳ- ರೂ೧೫೦೦೦೦ ಮಾಸಿಕ

ಸವಲತ್ತುಗಳು. ಇಲ್ಲಿ ಬರೆಯಲು ಸ್ಥಲಾವಕಾಶವಿಲ್ಲದಿರುವುದರಿಂದ ರೂ ೧೦ ರ ಕ್ರೋಸ್ದ್ ಪೋಸ್ಟಲ್ ಆರ್ಡರ್

ಕಳಿಸಿದವರಿಗೆ ವಿವರಗಳುಳ್ಳ ಹೊತ್ತಿಗೆ ಕಳುಹಿಸಿ ಕೊಡಲಾಗುವುದು.

ನನ್ನ ಕಿಂಚಿತ್ ಅನುಭವ ಪ್ರಕಾರ ಕೆ ಆರ್ ನಾರಾಯಣ ಅವರೂ ಈ ಹುದ್ದ್ದೆಯ ಘನತೆ ಹೆಚ್ಚಿಸಿದವರು.ಉತ್ತರ ಪ್ರದೇಶದಲ್ಲಿ

ಬಹುಮತ ವಿದ್ದ ಕಲ್ಯಾಣ್ ಸಿಂಗ್ ಸರಕಾರವನ್ನು ವಜಾ ಗೊಳಿಸಲು ರಾಜ್ಯಪಾಲ ರೋಮೇಶ್ ಭಂಡಾರಿ ಶಿಫಾರಸು ಮಾಡಿದಾಗ

ಮತ್ತು ಇನ್ನೊಮ್ಮೆ ಬಿಹಾರದಲ್ಲಿ ರಾಬ್ರಿ ದೇವಿಯವರನ್ನು ವಜಾ ಮಾಡಲು ನಿರಾಕರಿಸಿ ಕೇಂದ್ರ ಸಂಪುಟಕ್ಕೆ ಹಿಂತಿರುಗಿಸಿದ

ವರು. ದುರದೃಷ್ಟವಶಾತ್ ಅಂತಹ ಧೀಮಂತ ರಾಷ್ಟ್ರಪತಿಗಳು ಯಾವ ಪಕ್ಷಕ್ಕೂ ಬೇಡ.

ಬಿಹಾರದಲ್ಲಿ ನಿತೀಶ್ ಕುಮಾರ್ ಸರಕಾರವನ್ನು ವಜಾ ಗೊಳಿಸುವ ಯು ಪಿ ಎ ಶಿಫಾರಸ್ಸಿಗೆ ಕಲಾಮ್ ಸಹಿ ಹಾಕಿ ದ  ಕ್ರಮ

ಟೀಕೆಗೆ ಒಳಗಾಗಿತ್ತು.





ಶನಿವಾರ, ಮಾರ್ಚ್ 23, 2013

ಎಚ್ ನರಸಿಂಹಯ್ಯನವರ ಹಾಸ್ಯ ಪ್ರಜ್ಞೆ

ನರಸಿಂಹಯ್ಯನವರು ನ್ಯಾಷನಲ್ ಕಾಲೇಜ್ ಹಾಸ್ಟೆಲ್ ನಲ್ಲಿ  ಬೆಳಗಿನ ಪ್ರಾರ್ಥನೆಗೆ ಐದು ಗಂಟೆಯ ಪ್ರಾರ್ಥನೆಗೆ

ವಿದ್ಯಾರ್ಥಿಗಳು ಗೈರು ಹಾಜರಾಗುವುದನು ತಪ್ಪಿಸಲು ದಂಡ ಪದ್ಧತಿ ಜಾರಿಗೆ ತ೦ದರು.ಅದರಂತೆ ಬಾರದವರಿಗೆ

ಎಂಟಾಣೆ ದಂಡ ವೆಂದು ಎಚ್ಚರಿಸಿದರು.ಒಬ್ಬ ವಿದ್ಯಾರ್ಥಿ ಐದು ರೂಪಾಯಿ ತಂದಿತ್ತು ಸಾರ್ ನನ್ನ ಹತ್ತು ದಿನದ

ಫೈನ್ ಮುಂಗಡವಾಗಿ ತೆಗೆದುಕೊಳ್ಳಿ ಎಂದನಂತೆ.

ಅವರು ಬೆಳಗ್ಗೆ ಲಾಲ್ ಭಾಗ್ ನಲ್ಲಿ ವಾಕಿಂಗ್ ಹೋಗುತ್ತಿದ್ದರು.ಅಲ್ಲಿಗೆ ಬರ್ತ್ತಿದವ್ರು ಬಹಳ ಮಂದಿ ತಮ್ಮ ನಾಯಿಯನ್ನು

ಕರೆದುಕೊಂಡು ಬರುತ್ತಿದ್ದರು.ಎಲ್ಲವೂ ಕಂ ಗೋ ಎನ್ನುವ ಇಂಗ್ಲಿಷ್ ಮೀಡಿಯಂ ನಾಯಿಗಳು. ಕನ್ನಡ ಮೀಡಿಯಂ ನಾಯಿ

ಒಂದೂ ಸಿಗಲಿಲ್ಲವಂತೆ.ತೆಲುಗು ಮೀಡಿಯಂ ನಾಯಿ ಮಾತ್ರ ಒಂದಿತ್ತಂತೆ. ಅಯ್ಯೋ ಕನ್ನಡವೇ ಎಂದು ಎಚ್ ಏನ್

ಹಲುಬುತ್ತಾರೆ.

ಅಮೆರಿಕಾದಲ್ಲಿ  ಇದ್ದಾಗ  ಕನ್ನಡಿಗರ ಮನೆಗೆ ಪೂಜೆಗೆ ಹೋದವರು ಅಲ್ಲಿ ಅಪ್ರದಕ್ಷಿಣ ವಾಗಿ  ಆರತಿ ಎತ್ತುವುದು ಕಂಡು

ಅಲ್ಲಿ ಲೆಫ್ಟ್ ಹ್ಯಾಂಡ್  ಡ್ರೈವ್ ಅಲ್ಲವೇ ಎಂದು ಸಮಾಧಾನ ಪಟ್ಟು ಕೊಳ್ಳುತ್ತಾರೆ.

ಒಮ್ಮೆ ವಿಧಾನ ಸೌಧದ ಬಳಿ ರಿಕ್ಷಕ್ಕೆ ಕಾಯುತ್ತಿದ್ದಾಗ ಅವರ  ವಿದ್ಯಾರ್ಥಿ ಕಾರಿನಲ್ಲಿ ಡ್ರಾಪ್ ಕೊಡುತ್ತೇನೆಂದು

ಕರೆದೊಯ್ಯುತ್ತಿರುವಾಗ  "ಸರ್,ನಾನೀಗ  ಕಾರ್ಪೊರೇಟರ್ ಆಗಿದ್ದೀನಿ ನಿಮಗೇನಾದರೂ ಆಗ ಬೇಕಿದ್ದರೆ  ಹೇಳಿ 'ಎಂದಾಗ

ನೋಡಪ್ಪ ನಾನು ಯಾವಾಗಲು ರಿಕ್ಷಾದಲ್ಲಿ ಹೋಗುವವನು. ಈ ರೋಡ್ ಹೊಂಡಗಳಿಂದ ನನ್ನ ಬೆನ್ನು ನೋವು

ಬರುತ್ತದೆ.ಅವನ್ನು ಮುಚ್ಚಿದರೆ ಉಪಕಾರ.ಇನ್ನೊಂದು ದುಸ್ತಿಥಿಯಲ್ಲಿರುವ ಕಾರ್ಪೋರೇಶನ್ ಶವ ವಾಹನ .

ಅದನ್ನು ಕಂಡರೆ ಸಾಯುವಾ ಎಂದು ತೋರುವುದೇ ಇಲ್ಲ .ಎಂದರಂತೆ ಎಚ್ ಏನ್.

ಎಂದೂ ಕಾಯಿಲೆ ಬೀಳದಿದ್ದ  ನರಸಿಂಹಯ್ಯನವರಿಗೆ  ಪಿತ್ತ  ಕೋಶದ ಸೋಂಕು ಆಗಿ ಶಸ್ತ್ರ ಚಿಕಿತ್ಸೆ ಗೆ ಒಳ ಪಟ್ಟರು. ಈ ಕಾಯಿಲೆ

ಫೀಮೇಲ್ ,ಫಾರ್ಟಿ,ಫ್ಯಾಟಿ  ಮತ್ತ್ತು ಫೇರ್ ಇದ್ದವರಿಗೆ ಬರುವುದು ,ಮೊದಲ ಮೂರೂ ನಾನಲ್ಲ ಆದದ್ದರಿಂದ

ನಾನು ಫೇರ್ ಇರಬೇಕು ಎನುತ್ತಾರೆ .

ಇನ್ನೊಮ್ಮೆ ಕಾಲೇಜ್ ಅಡ್ಮಿಶನ್ ಸಮಯದಲ್ಲಿ ತಮ್ಮ ವಶೀಲಿ ನಡೆಯದ್ದಾಗ  ಸೀಟ್ ಆಕಾಂಕ್ಷಿ  ಮಹಾನುಭಾವರೊಬ್ಬರು

ನಾನು ಯಾರು ಗೊತ್ತೇನ್ರಿ ,ಹಸಿದ ಹೆಬ್ಬುಲಿ ವಾರ ಪತ್ರಿಕೆಯ ಸಂಪಾದಕ.ಎಂದಾಗ ಹೆದರದ  ಎಚ್ ಏನ್ ನೀವು

ಹುಲಿಯಾದರೆ ನಾನು ನರಸಿಂಹ ಎಂದಾಗ ಆ ವ್ಯಕ್ತಿಗೂ ನಗು ತಡೆಯಲಾಗಲಿಲ್ಲ .

ಅವರು ಬ್ರಹ್ಮಚಾರಿ .ಆದ್ದರಿಂದ ತಾವು ಸಾಯುದಕ್ಕೆ ಮೊದಲೇ  ತಮ್ಮ ಶವ ಸಂಸ್ಕಾರ  ನೋಡಿ ಕೊಳ್ಳಲು ಒಂದು

ಸಮಿತಿ ರಚಿಸಿದ್ದರು. ದುರಾದ್ರುಷ್ಟವಶಾತ್  ಆ ಸದಸ್ಯರಿಬ್ಬರು  ಇವರಿಗಿಂತಲೂ ಮೊದಲೇ ದೈವಾಧೀನರಾದರು.

ಎಚ್.ನರಸಿಂಹಯ್ಯನವರು.


ಅಪ್ಪಟ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ,ಅಧ್ಯಾಪಕ ,ವಿಜ್ಞಾನಿ, ಆಢಳಿತ ಗಾರ,ಶಾಸಕ,ಬರಹಗಾರ ,ನುಡಿದಂತೆ

ನಡೆದ ವ್ಯಕ್ತಿ  ,ನಿಜಾರ್ಥದಲ್ಲಿ  ಸಂತನ ಬದುಕು ನಡೆಸಿದ ವ್ಯಕ್ತಿ  ಎಚ್.ನಹಸಿ೦ಹಯ್ಯ.ಬೆಂಗಳೂರು ನ್ಯಾಷನಲ್ ಕಾಲೇಜನ

ವಿದ್ಯಾರ್ಥಿ,ಅಧ್ಯಾಪಕ ,ಪ್ರಿನ್ಸಿಪಾಲ್ ಮತ್ತು ಅಧ್ಯಕ್ಷ ರಾಗಿ ಇದ್ದವರು. ಬೆಂಗಳೂರು ವಿಶ್ವವಿದ್ಯಾಲಯ ದ ಉಪಕುಲಪತಿಯಾಗಿ

ಜ್ನಾನಭಾರತಿಯನ್ನು ಅಭಿವೃದ್ದಿ ಪಡಿಸಿದವರು.ಅಮೆರಿಕಾದ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದೆದದ್ದಲ್ಲದೆ ಅಲ್ಲಿಯ

ಕಾಲೇಜುಗಳಲ್ಲಿ ಸಂದರ್ಶಕ ಪ್ರಾದ್ಯಾಪಕರಾಗಿಯೂ ಸೇವೆ ಸಲ್ಲಿಸಿದವರು.ಇವರಿಗೆ ಪದ್ಮಶ್ರೀ ಕೊಡುವಂತೆ ರಾಜ್ಯ ಸರಕಾರ

ಕೇಂದ್ರಕ್ಕೆ ಶಿಫಾರಸು ಮಾದಿತ್ತಂತೆ. ಆಗಿನ ಪ್ರಧಾನಿ ಇಂದಿರಾ ಗಾಂಧೀ ಇವರ ಬಯೋ ಡಾಟಾ ಓದಿ ಅದನ್ನು  ಪದ್ಮವಿಭೂಷಣ

ವಾಗಿ ಬದಲಾಯಿಸಿ ಕೊಟ್ಟರಂತೆ.ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಜೈಲು ವಾಸಿಯಾಗಿದ್ದ ಇವರಿಗೆ ಸರಕಾರ ಕೊಟ್ಟ

ಪೆನ್ಶನ್ ನಯವಾಗಿ ತಿರಸ್ಕಿದ್ದ ಮಹಾತ್ಮ.ಮಂತ್ರಿಯ ಸ್ಥಾನ ಮಾನವಿದ್ದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗಲೂ

ರೈಲಿನಲ್ಲಿ ದ್ವಿತೀಯ ದರ್ಜೆಯಲ್ಲೇ  ಪಯಾಣಿಸುತ್ತಿದ್ದುದಲ್ಲದೆ ಅದರ  ಭತ್ತೆ ಮಾತ್ರ ತೆಗೆದುಕೊಳ್ಳುತ್ತ್ತಿದ್ದರು. ಕಚೇರಿಗೆ ಬರುತ್ತಿದ್ದ

ವೃತ್ತ ಪತ್ರಿಕೆಗಳನ್ನು ರದ್ದಿಗೆ ಮಾರಿ ಟ್ರೆಷರಿಗೆ  ಹಣ ಕಟ್ಟು ತ್ತಿದ್ದ  ಮಹಾನುಭಾವ.ಎಂ ಎಲ್ ಸಿ ಯಾಗಿದ್ದಗಲೂ ಸರಳ ಬದುಕನ್ನು

ಬದಲಾಯಿಸದವರು. ಇವರ ಆತ್ಮ ಚರಿತ್ರೆ ಹೋರಾಟದ ಹಾದಿ ಮತ್ತು ಲಲಿತ ಪ್ರಬಂಧ ಗಳ ಸಂಕಲನ ತೆರೆದ ಮನ  ಎಲ್ಲರು

ಓದಬೇಕಾದ  ಜನಪ್ರಿಯ ಕೃತಿಗಳು.

  ಇವರನ್ನು  ಕಾಲೆಜ್ ಹಾಸ್ಟಲ್ ನ  ಇವರ  ಕೊಟಡಿ ಯಲ್ಲಿ ಕಾಣುವ ಭಾಗ್ಯ ನನಗೆ ಬಂದಿತ್ತು.ಮಲಗಲು ಚಾಪೆ.ಬರೆಯಲು

ಒಂದು ಸಣ್ಣ ಮೇಜು .

ಕರ್ನಾಟಕ ದಲ್ಲಿ ವಿಜ್ಞಾನದ ಪ್ರಸರಣಕ್ಕೆ ದುಡಿದವರು.ಯಾವುದನ್ನೂ ಪ್ರಶ್ನಿಸದೆ ಒಪ್ಪಬಾರದು ಎನ್ನುತ್ತಿದ್ದರು.ತಮ್ಮ

 ಸರ್ವಸ್ವವನ್ನು ನ್ಯಾಷನಲ್ ವಿದ್ಯಾ ಸಂಸ್ಥೆಗಳಿಗಾಗಿ ಧಾರೆಯೆರೆದರು.

ಅವರ ಕೊಠಡಿಯ ಚಿತ್ರಣ ನೋಡಲು ಕ್ಲಿಕ್ಕಿಸಿ (ಅಪ್ಲೋಡರಿಗೆ ವಂದಿಸುತ)

www.youtube.com/watch?v=DT1HlffzYn8





ಮಂಗಳವಾರ, ಮಾರ್ಚ್ 19, 2013

ನಿಧಿ ಜಾಲ ಸುಖಮಾ

ಇದು ತ್ಯಾಗರಾಜ ಜನಪ್ರಿಯ ರಚನೆ.ತ್ಯಾಗರಾಜರ ಸಂಗೀತಕ್ಕೆ ಮನಸೋತ ರಾಜನು ಅವರನ್ನು

ತಮ್ಮ ಆಸ್ಥಾನ ಗಾಯಕರಾಗಿ ಬರಲು ಬೇಡಿಕೊಳ್ಳುವುದಲ್ಲದೆ ಎಷ್ಟು ಬೇಕಾದರೂ ವರಹಗಳನ್ನು

ಕೊಡುತ್ತೇನೆಂದು ಹೇಳಿದಾಗ ಹಾಡಿದ ರಚನೆಯೆಂದು ಪ್ರತೀತಿ.

ಇದನ್ನು ಕಲ್ಯಾಣಿ ರಾಗದಲ್ಲಿ ಹಾಡುತ್ತಾರೆ.

ಭಾವಾರ್ಥ ಹೀಗಿದೆ,

ನಿಧಿ ಬಲು ಸುಖವೋ ರಾಮನ ಸ

ನ್ನಿಧಿ  ಬಲು ಸುಖವೋ

ನಿಜ ಹೇಳೇ ಮನವೇ .

ಮೊಸರು  ನವನೀತ ಹಾಲು ರುಚಿಯೋ

ರಾಮನ ಭಜನ ಸುಧಾರಸ ರುಚಿಯೋ

ಸಂಮನಸ್ಸು ಶಾಂತತೆಯ ಗಂಗಾ ಸ್ನಾನ ಸುಖವೋ

ದುರ್ವಿಚಾರಗಳ ಬಾವಿ ಸ್ನಾನ ಸುಖವೋ

ಸಾರ್ಥದಲಿ ತುಂಬಿರುವ ಮನುಜ ಪೊಗಳುವಿಕೆ ಸುಖವೋ

ನಿರ್ಮಲ ಮನದ ದೇವನ ಸ್ತುತಿಪ ತ್ಯಾಗರಾಜ ಕೀರ್ತನ  ಸುಖವೋ

ಗಾನ ಕೋಗಿಲೆ  ಎಂ ಎಸ. ಸುಬ್ಬುಲಕ್ಷ್ಮಿ ಹಾಡಿದ ಈ ಕೀರ್ತನೆ ಕೇಳಲು ಕ್ಲಿಕ್ಕಿಸಿ

http://www.youtube.com/watch?v=28TFewwamK8


ಕೊಂಕಣ ರೈಲ್ವೆ ಕಾಮಗಾರಿ ಉಧ್ಘಾಟನೆ ನೆನಪುಗಳು

೧೯೯೦ ಸೆಪ್ಟಂಬರ್ ೧೫ ಎಂದು ನೆನಪು. ಭಾರತದ  ಪಶ್ಚಿಮ ಕರಾವಳಿಯ  ಬಹು ದಿನಗಳ ಕನಸು                               

ನೆನಸಗುವ        ಸುವರ್ಣ ಘಳಿಗೆ.ಕೊಂಕಣ ರೈಲ್ವೆ ಕಾಮಗಾರಿ ಆರಂಬಿಸುವ ಸಮಾರಂಭ ಉಡುಪಿಯಿಂದ.

ನಾನು ಆಗ ಮಂಗಳೂರು ರೈಲ್ವೆ ವೈದ್ಯಾದಿಕಾರಿ.ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಭಾಗವಹಿಸುವ

ಯೋಗ.ರೈಲ್ವೆಯಲ್ಲಿ  ಕನ್ನಡೆತರರೆ ಹೆಚ್ಚು.ಅದರಿಂದ ಆಹ್ವಾನಿತ  ಅತಿಥಿಗಳ ಪರಿಚಯ ಅವರಿಗಿರಲಿಲ್ಲ

ಡಾ ವಿ ಎಸ ಆಚಾರ್ಯ ,ಶ್ರೀ ಬಿ ಎಂ ಇದಿನಬ್ಬ (ಆಗ M L A ಆಗಿದ್ದರು.),ಇತರರನ್ನು ಗುರುತಿಸಿ ಕುಳ್ಳಿರಿಸುವ

ಕೆಲಸ ನನಗಾಯಿತು.ಉಡುಪಿ ಇಂದ್ರಾಳಿ ಯಲ್ಲಿ ಕಾರ್ಯಕ್ರಮ.


ಕರಾವಳಿಯ ಹೆಮ್ಮೆಯ ಪುತ್ರ ಜೋರ್ಜ್ ಫೆರ್ನಾಂಡಿಸ್ ಉದ್ಘಾಟಕರು. ಆಗ ಅರ್ಥ ಮಂತ್ರಿಯಾಗಿದ್ದ

ಮಧು ದಂಡಾವತೆ ಯವರದ್ದು ಪೂರ್ಣ ಬೆಂಬಲ. ನನ್ನ ಪಕ್ಕ ಇದಿನಬ್ಬ ಇದ್ದರು. ಕಾರ್ಯಕ್ರಮ ಪಲಕಗಳು

ಇಂಗ್ಲಿಶ್ ನಲ್ಲಿ ಇದ್ದುದು ಕಟ್ಟಾ ಕನ್ನಡ ಪ್ರೇಮಿಯಾದ ಅವರಿಗೆ ಅಸಾಮದಾನ .ಅದನ್ನು ನನ್ನಲ್ಲಿ ಹೇಳಿದರು.

ಫೆರ್ನಾಂಡಿಸ್ ಅಚ್ಚ ಕನ್ನಡದಲ್ಲಿ ಮಾತನಾಡಿದರು.ಅವರು ಹೇಳಿದ ಒಂದು ವಾಕ್ಯ ನನಗೆ ನೆನಪಿದೆ.

'ಈ ಮಹಾತ್ವಾಕಾಂಕ್ಷೆಯ ಕೆಲಸ ನಾನು ಇರಲಿ ಇಲ್ಲದಿರಲಿ ವೇಳಾಪಟ್ಟಿಯಂತೆ ನಡೆಯುತ್ತದೆ. ದೇಶಪ್ರೇಮಿಯು

ಸಮರ್ಥರು ಆದ ಈ ಶ್ರೀಧರನ್ ಅವರು ಇದರ ನೇತೃತ್ವ ವಹಿಸುತ್ತಾರೆ.ಆದುದರಿಂದ  ಯಾವ ಸಂದೇಹವು
ಬೇಡ.'
ಜಾರ್ಜ್ ಫೆರ್ನಾಂಡಿಸ್
 
 
ಕೇಂದ್ರದ ಮಂತ್ರಿಯೋರ್ವರು ಅಧಿಕಾರಿಯನ್ನು  ಹೀಗೆ  ಬಹಿರಂಗವಾಗಿ  ಹೊಗಳುವುದು ಕಡಿಮೆ.
 
ನಮ್ಮ ರಾಜ್ಯದ  ಅತ್ಯುತ್ತಮ ಸಮರ್ಥ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಕಾರ್ಯಕ್ರಮ ದ
 
ಅಧ್ಯಕ್ಷತೆ ವಹಿಸಿದ್ದರು.ಅವರ ಟಿಪಿಕಲ್ ಗುಲ್ಬರ್ಗ ಕನ್ನಡದಲ್ಲಿ  ಮಾತು. ತಮ್ಮ ಪಕ್ಷ  ಬೇರೆ
 
ಯಾದರು  ರಾಜ್ಯದ ಅಭಿವೃದ್ದಿ ಕಾರ್ಯದಲ್ಲಿ ಸಂಪೂರ್ಣ ಸಹಕಾರ ಇದೆ .ಸ್ತಳೀಯ ಮಂತ್ರಿ
 
ಮನೋರಮಾ ಮಧ್ವರಾಜ್  ರೈಲ್ವೆ ಯೋಜನೆಗೆ  ಜಮೀನು  ಕಳೆದು ಕೊಳ್ಳುವವರನ್ನು
 
ಯಾರು ಕೇಳುವುದಿಲ್ಲ ಎಂದದ್ದ್ದಕ್ಕೆ ಅವರನ್ನೇ ಅದರ ಉಸ್ತುವಾರಿಗೆ  ನೇಮಿಸುತ್ತೇನೆ ಎಂದರು ಪಾಟೀಲ್.
 
ವೀರೇಂದ್ರ ಪಾಟೀಲ್



 
ಕಾರ್ಯಕ್ರಮದಲ್ಲಿ ಎಲ್ಲರ ಕಣ್ಮಣಿ ಈ ಶ್ರೀಧರನ್  ಉಪಸ್ತಿತರಿದ್ದರು.ಅವರು
 
ನಮ್ಮ ದೇಶದ ಹೆಮ್ಮೆಯ ಆಸ್ತಿ. ತಾಂತ್ರಿಕ ಕೌತುಕ  ಪಾ೦ಬನ್ ಸೇತುವೆ,
 
ಹಾಸನ ಮಂಗಳೂರು ರೈಲ್ವೆ ಗಳ ರೂವಾರಿ.ಯಶಸ್ವಿಯಾಗಿ ಕೊಂಕಣ ರೈಲ್ವೆ ಕೆಲಸ
 
ಮುಗಿಸಿದ ಅವರನ್ನು ದೆಹಲಿ ಮೆಟ್ರೋ ಕರೆಯಿತು.
 
 
 
ಈ. ಶ್ರೀಧರನ್
 
ಮುಂದೆ ಕೊಂಕಣ್ ರೈಲ್ವೆಗೆ ಆಫೀಸ್ ಸ್ತಳ ಹುಡುಕುವುದಕ್ಕೆ ನಾನೂ ಹೋಗಿದ್ದೆ.
 
ಈ ಕಾರ್ಯದಲ್ಲಿ ಸಿಂಡಿಕೇಟ್ ಬ್ಯಾಂಕಿನ ಶ್ರೀ ಆನಂದ ಗಾಣಿಗರು , ಪ್ರಚಾರಧಿಕಾರಿಯಾಗಿದ್ದ
 
ಮ್ಯಾಜಿಕ್ ಶಂಕರ್ ಸಹಾಯ ಮಾಡಿದರು.
ಮಧು ದಂಡಾವತೆ.
 
ಲಾರಿಗಳ ರೋ ರೋ ಸೇವೆ 
 
ಕೊಂಕಣ ರೈಲ್ವೆ ವಿಹಂಗಮ ನೋಟ 

 
 
 
 
ಮೇಲಿನ ಚಿತ್ರಗಳ ಮೂಲ ಗಳಿಗೆ ಅಭಾರಿ.

Cholesterol Mania


                                                                                         
Do not treat report treat the patient, is the dictum in medical science. But what is happening today?

Patients come with blood ,scan reports which they get on their own and demand treatment for the 

perceived ailments they diagnose by their interpretation.Doctors and druggists oblige.

Lipid profile report (Cholesterol report as popularly known) is the one people are concerned a lot these

days ,a milligram above normal in lab. report people lose sleep and consider it as their death warrant.

ATP 3 guidelines  accepted worldwide  on Lipid management:s recommendations.





As per the above LDL cholesterol;(bad cholesterol) above 190 mg in otherwise healthy individual  

needs drug treatment.Anything less than that not. Even in the treatment options life style change comes

first.What does life style change mean? Cutting down oils,fat, high calorie diet ,above all avoiding

 sedentary life and increasing physical activity.Here comes the problem .Everybody is ready to change their 

style but not lifestyle. Eating fatty food ,avoiding physical activity has become status symbol. If you are a

professional with decent income  you are not supposed to walk to your office even if it is half a km from your 

home.It is below dignity. Children are not allowed to do any manual work including pulling up socks. If your

daddy is a doctor or businessman you are not be found walking to the school. Beware ! Atherosclerosis 

process starts during the childhood itself.We have change the mindset.

But it is easy to take few pills and pharma companies are happy in propagating this cholesterol mania ,oil 

companies not lagging .Everybody wants shortcut except for death.

ಶನಿವಾರ, ಮಾರ್ಚ್ 16, 2013

ನಾಡಿಗೇರ ಕೃಷ್ಣ ರಾಯರು


ನಾಡಿಗೇರ  ಕೃಷ್ಣ ರಾಯರು  ಕನ್ನಡದ ಹೆಸರಾಂತ ಹಾಸ್ಯ ಲೇಖಕರು. ನಾನು ಹುಬ್ಬಳ್ಳಿ ಯಲ್ಲಿ ಮೆಡಿಕಲ್
ಓದುತ್ತಿದ್ದ ಸಮಯ ೧೯೭೭ ರ ರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು.ಪಾಟೀಲ್
ಪುಟ್ಟಪ್ಪ ನವರೂ ಬಂದಿದ್ದರು.ಅವರ ವಾಸ್ತವ್ಯ ಊಟ ಉಪಚಾರ ನೋಡಿಕೊಳ್ಳುವ ಹೊಣೆ ನನಗೆ ಇತ್ತು.
ನಾಡಿಗೆರರು ಕೃಶಕಾಯರು. ಎಲ್ಲರು ನನ್ನನ್ನು ಕೃಷಣ ರಾಯ ಎಂದು ಕರೆಯುತ್ತಾರೆ .ಇನ್ನು ಕೆಲವರು ಸಾಹಿತಿ
ಎನ್ನುವುದಕ್ಕೆ ಬದಲಾಗಿ ಸಾಯ್ತಿ ಸಾಯ್ತಿ ಎನ್ನುತ್ತಾರೆ ಎಂದು ಚಟಾಕಿ ಹಾರಿಸುತ್ತಿದ್ದರು
ಒಮ್ಮೆ  ಅವರ ಹೆಂಡತಿ ಅಡುಗೆ ಮನೆಯಲ್ಲಿ ಇದ್ದಾಗ ಚಾವಡಿಯಲ್ಲಿ  ಡಬ್ ಎಂಬ ಸದ್ದು ಕೇಳಿ ಏನ್ರಿ ಅದು ಸದ್ದು
ಎಂದು ಕೇಳಿದರು. ಎನಿಲ್ವೆ ಅದು ನನ್ನ ಶಾಲು ಬಿದ್ದ ಶಬ್ದ ಎಂದರು ನಾಡಿಗೆರರು. ಶಾಲು ಬಿದ್ದರೆ ಅಷ್ಟು ಶಬ್ದ ಹೇಗ್ರಿ
ಎಂದದ್ದಕ್ಕೆ ಶಾಲಿನ ಒಳಗೆ ನಾನೂ ಇದ್ದೆ ಕಣೆ ಎಂದರಂತೆ.
ಇನ್ನೊಮ್ಮೆ ಆಕೆ ಅಡುಗೆ ಮನೆ ಯಲ್ಲಿ ನಾಡಿಗೆರರೊಡನೆ ಹರಟುತ್ತ ಅಡಿಗೆ ಮಾಡುತ್ತಿದ್ದಾಗ ಪಕ್ಕದ ಮನೆ  ಸಾವಿತ್ರಮ್ಮ
ಧಿಡೀರ್ ಅಡಿಗೆ ಮನೆಗೆ ನುಗ್ಗಿದವರು ಇವರನ್ನು ಕಂಡು ಗಂಡಸರಿದ್ದಾರೆನ್ರಿ ಗೊತ್ತಿಲ್ಲದೇ ಬಂದೆ  ಆ ಮೇಲೆ  ಬರ್ತೀನಿ
ಎಂದು ಹೊರಡಲು ಅನುವಾದಾಗ ರೀ ನಿಲ್ರಿ ಅದು ಗಂಡಸರಲ್ರಿ ನಮ್ಮ ಯಜಮಾನ್ರು ಎಂದರಂತೆ ಆ ತಾಯಿ.
ಮನೆಯಲ್ಲಿ ಬಡ ತನ ದಿಂದಾಗಿ ಹೆಂಡತಿಗೆ ಚಿನ್ನ ಮಾಡಿಸದ ಕೊರತೆ ನೀಗಲು ಅವರು ಆಕೆಯನ್ನೇ  ಚಿನ್ನಾ ಎಂದು
ಕೂಗುತ್ತಿದ್ದ್ರನ್ತೆ.
ಅ ನ ಕೃಷ್ಣ ರಾಯರೂ ನಾಡಿಗೆರರೂ ಆತ್ಮ್ಮೀಯರು .ಕನ್ನಡ ಚಳುವಳಿಯಲ್ಲಿ ಜತೆಯಾಗಿ ಮುನ್ಚೂನಿಯಲ್ಲಿಯಲ್ಲಿದ್ದರು.
ಅ.ನ .ಕೃ  ತೀರಿ  ಹೋದ ಕೆಲವು ದಿನಗಳ ನಂತರ ಒಂದು  ಊರಿಗೆ ಭಾಷಣ ಕ್ಕೆ ಹೋಗಿದ್ದಾಗ ಒಬ್ಬರು
ಮಹಾಶಯರು ಮೊನ್ನೆ ತೀರಿ ಹೋದ ಕೃಷ್ಣ ರಾಯರು ನೀವೋ ಇನ್ನೊಬ್ಬರೋ ಎಂದು ಕೇಳಿದರಂತೆ,
ಇನ್ನೊಮ್ಮೆ  ಅವರು ಕೆಲಸ ಮಾಡುತ್ತಿದ್ದ ಪತ್ರಿಕೆ ಯಲ್ಲಿ ವಾರದ ಅಡಿಗೆ ಬರೆಯುತ್ತಿದ್ದ ಅಮ್ಮ  ರಜೆ ಹಾಕಿದ್ದರಿಂದ
ಸಂಪಾದಕರು ಆ ಕೆಲಸವನ್ನು ಇವರಿಗೆ ಒಪ್ಪಿಸಿದರು.ಇವರ ಸ್ಪೆಷಲ್ ನೆಲ್ಲಿಕಾಯಿ ಹಲುವ. ತಯಾರಿಸುವ
ವಿಧಾನ..ಗುಂಡನೆಯ ಬಲಿತ ಇಪ್ಪತ್ತು ನೆಲ್ಲಿಕಾಯಿಗಳನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ .ಆ ಮೇಲೆ ಸಕ್ಕರೆ
ಪಾಕ ಮಾಡಿ ಗೋದಿ ರುಬ್ಬಿದ ಹಿಟ್ಟಿಗೆ ೧ ಲೀಟರ್ ನೀರು ಹಾಕಿ ಕದಡಿ ಸಕ್ಕರೆ ಪಾಕಕ್ಕೆ ಹಾಕಿ ಮಗುಚುತ್ತಾ ಇರಬೇಕು.
ಗಟ್ಟಿಯಾಗಿ ಕಣ್ಣು ಆಗುವಾಗ ತಳ ಬಿಟ್ಟು ತುಪ್ಪ ಬಿಡುತ್ತದೆ.ಗೋಡಂಬಿ ಏಲಕ್ಕಿ ಪುಡಿ ಹಾಕಿ  ನಾರು ಆದ ಮೇಲೆ
ತುಂಡು ಮಾಡಿರಿ .ನೆಲ್ಲಿಕಾಯಿ ತುಂಡುಗಳನ್ನು  ಕಿಟಿಕಿಯಿಂದ  ಹೊರಗೆಸೆಯ ಬೇಕು. ಹೇಗಿದೆ  ನಾಡಿಗೆರರ
ನೆಲ್ಲ್ಲಿಕಾಯಿ  ಹಲುವಾ?

ಶುಕ್ರವಾರ, ಮಾರ್ಚ್ 15, 2013

Prof.K V Thiruvengadam



Prof.Dr K V Thiruvengadam is living legend.He was teaching at Madras Medical college  till his

retirement.He was a popular teacher.His stress was more on clinical methods of which he is a master
.
Students used to throng to his classes.He is very soft spoken and humility is his forte.He is the

recepient of Padmashree,B C Roy Award, to name a few.He was honorary physician to

     President of India

 After retirement  he used to teach at places like Railway hospital Perambur for the joy of teaching .

.Ever studious he is highly respected in medical circles .In fact most of professors of

medicine in Chennai and south India are his students.

He is a strong advocate of medical ethics
Prof.Dr.Abraham Verghese well known writer physician was his student

I was fortunate to be his student at Railway Hospital Perambur.

Pl.listen to his words of wisdom
https://www.youtube.com/watch?v=JhcRy-DImvM


ಬುಧವಾರ, ಮಾರ್ಚ್ 13, 2013

ಸರ್ಪ ಸುತ್ತಿನ ಸುತ್ತ ಮೂಡ ನ೦ಬಿಕೆ


ಸರ್ಪ ಸುತ್ತು ವೈರಸ್ ನಿ೦ದ ಉ೦ಟಾಗುವ ರೋಗ. ಚಿಕನ್ ಪೊಕ್ಸ್ (ಕೋಟ್ಲೆ)ಉ೦ಟು ಮಾಡುವ ರೋಗಾಣು ಇದಕ್ಕೂ ಕಾರಣ.ಈ ರೋಗದಲ್ಲಿ ನರಗಳ ಸೋ೦ಕು ಆಗುವುದು.ಇದರಿ೦ದ ಎದೆ ,ಮುಖ  ಅವಯವಗಳ ನರಗಳ
ಉದ್ದಕ್ಕು ಗುಳ್ಳೆಗಳು ಏಳುತ್ತವೆ. ನರಗಳುದ್ದಕ್ಕೂ ನೋವು ಇದ್ದು ಗುಳ್ಳೆ ಒಣಗಿದ ನ೦ತರವೂ ಇರ ಬಹುದು .ಕಾಯವಳಿದರೂ ಕೀರ್ತಿಯುಳಿಯುವ೦ತೆ . .ಕಣ್ಣಿನ ನರಗಳಿಗೆ ಬ೦ದರೆ  ದೃಷ್ಟಿ ದೋಷವೂ ಬರಬಹುದು.ಮುಖದ ಕೈಗಳ    ಪಾರಾಲಿಸಿಸ್ ಆಗುವುದೂ ಉ೦ಟು. ಈಗ ಇಗಕ್ಕೆ ಉತ್ತಮ ವೈರಸ್ ನಿವಾರಕ ಔಷಧಿ ಲಭ್ಯವಿದ್ದು ರೋಗ ಲಕ್ಷಣ ಕ೦ಡ ಕೂಡಲೇ ತೆಗೆದು ಕೊ೦ಡರೆ ಒಳ್ಳೆಯ ಪರಿಣಾಮ.
 
ನಮ್ಮ ದೇಹದಾದ್ಯಂತ ಟೆಲಿಫೋನ್ ಕೇಬಲ್ ಗಳಂತೆ  ಸ್ಪರ್ಶ ಮತ್ತು ವೇದನಾ ವಾಹಕ ನರಗಳ ಜಾಲ ಇದೆ .ಇವು ಎಲ್ಲಿ ಪೆಟ್ಟು ,ಎಲ್ಲಿ ಗಾಯ ,ಆಯಿತು ಎಂದು ಹೆಡ್ ಆಫೀಸು ಮೆದುಳಿಗೆ ಸೂಚನೆ ಕೊಡುವವು. ವೈರಸ್ ಈ ಕಾಯಿಲೆಯಲ್ಲಿ ಈ ನರಗಳನ್ನೇ  ಬಾಧಿಸುವುದು .ಇಲ್ಲಿ ನರದುದ್ದಕ್ಕೂ ಆಗುವ ಹುಣ್ಣು ತನ್ನಿಂದ ತಾನೇ ಒಣಗುವುದು. ಆ ಸಮಯ ನೀವು ಏನು ಹಚ್ಚಿದರೂ ಅದಕ್ಕೆ ಕ್ರೆಡಿಟ್ ಸಿಗುವುದು .ಆದರೆ  ನಂತರ ಬರುವ ವೇದನೆ ಅತೀವ ವಾಗಿ ಹಲವರಲ್ಲಿ ಉಳಿಯುವುದು
.
ಈ ಕಾಯಿಲೆಗೂ ಸರ್ಪಕ್ಕೂ ಯಾವುದೆ ಸ೦ಬ೦ಧ ಇಲ್ಲ. ಆದ್ದರಿ೦ದ ಇದಕ್ಕಾಗಿ ಸರ್ಪ ಸ೦ಸ್ಕಾರ ಸೇವೆ ಮಾಡಿಸುವ ಆವಶ್ಯವಿಲ್ಲ.ಅವೈಜ್ನಾನಿಕವಾದ ಲೇಪ ಹಾಕಿಸಿದರೆ ಲೋಪವಾದೀತು.
ರೋಗ ತಡೆಗಟ್ಟುವ ಲಸಿಕೆಯೂ ಲಭ್ಯ.50 ವರ್ಷದ ಮೇಲಿನವರಿಗೆ ಇದನ್ನು ಶಿಫಾರಸು ಮಾಡುತ್ತಾರೆ .
ಈ ರೋಗಕ್ಕೆ ಯಾವುದೇ ಪಥ್ಯದ ಅವಶ್ಯವಿಲ್ಲ. ಅಹಾರ ನಿರ್ಭ೦ದದಿ೦ದಾಗಿ ಕಾಯಿಲೆಯಿ೦ದ ಬಳಲದವರೂ ಪಥ್ಯದಿ೦ದ ಬಳಲುವರು.
ಈಗ ರೋಗದ ಕಾರಣ ತಿಳಿದು ಬ೦ದಿರುವುದರಿ೦ದ ಇದರ ಹೆಸರನ್ನು ನರ ಕೋಟಲೆಯೆ೦ದು ಬದಲಾಯಿಸುವುದು ಉತ್ತಮ.ಸರ್ಪವೆ೦ಬ ಶಬ್ದ ಜನರಲ್ಲಿ ಅನಾವಶಕ್ಯ ಭಯವು೦ಟು ಮಾಡುವುದನ್ನು ಇದರಿ೦ದ ತಪ್ಪಿಸ ಬಹುದು.


 

ಮಂಗಳವಾರ, ಮಾರ್ಚ್ 12, 2013

Two songs that touched my heart

Two  film  songs  on music that touched my heart and am never tired of listening are one Malayali number and another from kannada.
First song is Sangeethame amara sallapame from movie Sargam  in Malayalam. Lyrics written by Sri Yusuf Ali Kechery ,music by Bombay Ravi. The singer K J Yesudas.What a beautiful composition! The line vedaneyam polu vedaantamakunna naadanusandaana kaivalyame thrills me.Music is the instrument which will convert even pain to vedanta exclaims the poet.
Please enjoy the song from the link given below thanking the up loader                                  www.youtube.com/watch?v=wND_eQ17hqo.

The second one is Ellellu sangeethame from Kannada movie Malaya Maaruta .The song written by Chi.udayashankar ,music composer Vijaya Bhaskar and singer one and only K J Yesudas. Keluva kiviyiralu noduva kanniralu ellellu sangeethave. Literally meaning if you have a ear to listen and eye to see there is music everywhere.
www.youtube.com/watch?v=dIRnF0rgaMs

ಸೋಮವಾರ, ಮಾರ್ಚ್ 11, 2013

ಪಥ್ಯ ಪುರಾಣವು

                       ಪಥ್ಯ ಪುರಾಣವು
 
ಬಹಳಷ್ಟು ಕಾಯಿಲೆಗಳಿಗೆ  ಪಥ್ಯದ ಅವಶ್ಯಕತೆ ಇಲ್ಲ.ರೋಗಿಗಳಿಗೆ ಏನಾದರೂ ಪಥ್ಯ ಹೆಳದಿದ್ದರೆ ಅಸಾಮಧಾನ. ನಮ್ಮ

ಗುರುಗಳು ಎಲ್ಲಾ ರೋಗಿಗಳಿಗೂ ಡಿಸ್ಚಾರ್ಜ್ ಆಗುವಾಗ ಬದನೆ ಕಾಯಿ ಮತ್ತು ಕೋಸು ಬಿಟ್ಟು
 
ಎಲ್ಲಾ ತಿನ್ನಿರಿ ಎನ್ನುತ್ತಿದ್ದರು.ಕುತೂಹಲದಿ೦ದ ನಾವು ಕೇಳಿದರೆ ಏನೂ ಪಥ್ಯ ಹೇಳದಿದ್ದರೆ ರೋಗಿಗಳಿಗೆ

ಸಮಾಧಾನವಿಲ್ಲ ,ಅದಕ್ಕೆ ಈ ಎರಡು ತರಕಾರಿಗಳನ್ನು ಬಲಿಪಶು ಮಾಡುವುದು ಎ೦ದರು.
 
  ಜನರು ಕೆಲವನ್ನು ನ೦ಜು ಎನ್ನುವರು.ಉದಾ; ಬದನೆಕಾಯಿ .ಎಲ್ಲಾ ವಿಟಮಿನ್ ಗಳಿ೦ದ ಸಮ್ರುದ್ಧ ವಾದ ತರಕಾರಿ. ವೃಥಾ

ದೋಶಾರೋಪಣೆಗೆ ಒಳಗಾದ ವಸ್ತು. ಅದಕ್ಕೇನಾದರು ಅವಕಾಶವಿದ್ದರೆ
 
ಮಾನ ನಷ್ಟ ಮೊಕದ್ದಮೆಯೊ,ದೇವಸ್ತಾನ ದಲ್ಲಿ ಆಣೆ ಯೋ ಹೂಡುತಿತ್ತು.ಇದರ೦ತೆ ಅನೇಕ ದಲಿತ  ತರಕಾರಿಗಳಿವೆ.
 
       ಪಥ್ಯ ಪಕ್ಷದವರು ಕೆಲವು ವಸ್ತುಗಳನ್ನು ಉಷ್ಣವೆನ್ನುವರು,ಇನ್ನು ಕೆಲವನ್ನು ಶೀತವೆನ್ನುವರು.ಇದನ್ನು ವೈಜ್ನಾನಿಕವಾಗಿ

ವಿಶ್ಲೇಶಿಸಲು ಹೋದರೆ ತಲೆ ಬಿಸಿಯಾಗುವುದು.ಸೌತೆಕಾಯಿ, ಬಸಳೆ ಶೀತಕಾರಕವಾದರೆ
 
ಐಸ್ ಕ್ರೀಮ್ ಉಶ್ಣ .ಈ ವರ್ಗೀಕರಣಕ್ಕೆ ಅಳತೆ ಗೋಲು ಇದ್ದ೦ತಿಲ್ಲ.
 
       ಸಕ್ಕರೆ ಕಾಯಿಲೆಯವರುಸಿಹಿ ತಿನ್ನಬಾರದಷ್ಟೆ.ವೈದ್ಯರ ಬಳಿ ಅದು ತಿನ್ನ ಬಹುದೊ ಇದು ಹೇಗೆ ಎ೦ದೆಲ್ಲ ತಲೆ

ತಿನ್ನುವರು.ಮನೆಯಲ್ಲ್ಲಿಇಷ್ಟಟದ ಸಿಹಿ ತಿ೦ಡಿ ಅಥವ ಹಣ್ಣು ಕ೦ಡಾಗ ಮನಸು ಚ೦ಚಲವಾಗುವುದು.
 
ಕೆಲವು ರೊಗಿಗಳು ಸಮಾರ೦ಭಗಳಲ್ಲಿ ಒ೦ದು ಹೊಳಿಗೆಯೊಡನೆ ಒಂದು  ಎಕ್ಸ್ಟ್ರಾಡಯೋನಿಲ್ ಮಾತ್ರೆ ತಿನ್ನುವರು.ರಸರುಷಿ ಡಿ ವಿ ಜಿ
ಸಕ್ಕರೆ ಕಾಯಿಲೆಯಿದ್ದರೂ ಹೊಟ್ಟೆ ತು೦ಬಾ ಜಿಲೇಬಿ ತಿನ್ನುತ್ತಿ ದ್ದರಂತೆ
 
ಆಸ್ಪತ್ರೆ ರಲ್ಲಿ ರಕ್ತ ಪರೀಕ್ಷೆಯಲ್ಲಿ  ಗಗನಕ್ಕೇರಿದ ಸಕ್ಕರೆ ಪ್ರಮಾಣ ಕಂಡು ಹೌಹಾರಿ ಇನ್ನು ಮುಂದೆ ಸಿಹಿ ಮುಟ್ವುವುದ್ದಿಲ್ಲವೆಂದು

ಪ್ರಮಾಣ ಮಾಡುವರು.  ಐ ಸ್  ಕ್ರೀಂ ಕ೦ದಾಗ ಸತ್ತರೆ ಸಾಯಲಿ ಹುಟ್ಟಿದವರೆಲ್ಲಾ ಸಾಯಲೇ ಬೇಕು, ಬಾಯಿ ಕಟ್ಟಿ

ಸಾಯಿವುದು ಯಾಕೆ ಎಂಬ ವೇದಾಂತ ಕ್ಕೆ ಬರುವರು.ಕೆಲವು ಪತಿವ್ರತಾ ಶಿರೋಮಣಿ ಪತ್ನಿಯರು ಸಕ್ಕರೆ ಕಾಯಿಲೆಯ


ಗಂಡನಿಗೆ ವೈದ್ಯರು  ಎರಡೇ ದೋಸೆ ಕೊಡಬಹುದು ಎಂದದಕ್ಕೆ ನಾಲಕ್ಕು ಸೌಟು ಹಿಟ್ಟಿನ ಒ೦ದು ದೋಸೆ ಮಾಡುವರು.
 
ರಕ್ತದೊತ್ತಡ ಕ್ಕೆ ಉಪ್ಪು ಕಡಿಮೆ ತಿನ್ನಲು ಹೇಳುವರು.ಬಿ ಪಿ ಶುಗರ್ ಎರಡು ಇರುವವರ ಪಾಡು ಹೇಳಿ.ಇವೆರಡನ್ನೂ ಬಿಟ್ಟರೆ


ಆಯಿಸ್ಸು ಹೆಚ್ಚಾಗದಿದ್ದರು  ಜೀವನ ದೀರ್ಘವಾದಂತೆ ಎನಿಸುವುದು.
 
ತೋರವಿರುವವರು ಸಪುರ ವಾಗಲು ಪಥ್ಯ ಕೇಳುವರು.ಸಪುರವಿರುವ ಹುಡಿಗಿಗೆ ಮದುವೆಗಾಗಿ ತೋರವಾಗಬೇಕು.ಅಯ್ಯೋ

 ಕಷ್ಟವೆ?
 
  ಜಾಂಡಿಸ್ ಕಾಯಿಲೆಯಲ್ಲ ರೋಗ ಲಕ್ಷಣ ಅದಕ್ಕೆ ಪಥ್ಯ ಅನಾವಶ್ಯಯಕವೆಂದು ಆಧುನಿಕ ವೈದ್ಯ ಹೇಳುವುದು.ಇಲ್ಲಿ ರೋಗದಿಂದ ಬಳದಿದ್ದರು ಪಥ್ಯದಿಂದ ಕಂಗಾಲಾಗುವರು.
 
ಅಜ್ಜಿ ಪಥ್ಯದ ಭಯೋತ್ಪಾದನೆ ಒಳಗಾಗುವವರು ಬಾಣಂತಿ ಯರು ಅವಶ್ಯವಾದ ಸಸಾರ ಜನಕ ,ಕ್ಯಾಲ್ಸಿಯಂ ಯಿಕ್ತ

ಆಹಾರ   ನಂಜು ಎಂದು ಕೊಡರು. ಹಾಲು ಮತ್ತು ತುಪ್ಪ ತಿನಿಸಿ ಮಲಗಿಸುವರು.ಬಹುತೇಕ ಹೆಂಗಸರು ಮೊದಲನೇ ಹೆರಿಗೆಗೆ
 
ಡಬಲ್ ಡೆಕ್ಕರ್ ಗಳಾಗುವರು. ಬೊಜ್ಜು ಜನ್ಯ ರೋಗಗಳಿಗೆ ತುತ್ತಾಗುವುದಲ್ಲದೆ ತಮ್ಮ ಅಂದ ನಷ್ಟವಾಯಿತೆಂದು ಅಳುವರು.
 
ಇದನ್ನು  ಅಜ್ಜಿಯ೦ದಿರಿಗೆ ಹೇಳಿದರೆ   ತ ಮ್ಮ ಹೆರಿಗೆಯ ದಾಖಲೆ ತೋರಿಸಿ ಈ ಇಂಗ್ಲಿಶ್ ಮದ್ದಿನ ಡಾಕ್ಟರು ಹೇಳಿದ್ದನ್ನೆಲ್ಲಾ

ಕೇಳಿದರೆ ಆಗದು ಮುಂದೆ ಸಹಿಸುವುದು ನೀನೋ ಅವರೋ ಎಂದು ಪಾಟೀಸವಾಲು ಹಾಕುವರು.


 
ಪಥ್ಯ ಬೋಧನೆಯೆಲ್ಲಾ ಕೇಳಿ ತಮಗೆ ಬೇಕಾದದ್ದೆಲ್ಲ ತಿನುವ ಕ್ರಿಯೆಗೆ ಪಥ್ಯೇಥರ ಚಟುವಟಿಕೆ ಎನ್ನ ಬಹುದೇನೋ?
 
ಹೇಳಲು ಬಹಳ ಸಂಕೊಚವಾಗುವ ಆದರೆ ಹೇಳದಿರಲಾಗದ ಪಥ್ಯವೊಂದಿದೆ.ಅದೇ ಹಾಸಿಗೆ ಪಥ್ಯ. ಗುರುತರ ಶಸ್ತ್ರ 


ಚಿಕಿತ್ಸೆಗೊಳಗಾದವರು,ಹೃದ್ರೋಗಿಗಳು  ಇ೦ತವು ಈ ಪಥ್ಯ ಮಾಡಬೇಕು ಎನ್ನುತ್ತಾರೆ.             ಪುರಾಣದಲ್ಲಿ ಪಾಂಡು ರಾಜನಿಗೆ

 ತೀವ್ರ್ರರಕ್ತ್ತ  ಹೀನತೆಯಿದ್ದುದರಿಂದ ವೈದ್ಯರು ಈ ಪಥ್ಯ ಹೇಳಿದ್ದರೂ ಅದನ್ನು ಲಂಘಿಸಿ ಜೀವ ಕಳೆದುಕೊಳ್ಳಬೇಕಾಯಿತು. (Cause of death : Heart failure due to severe heriditory  anemia -died against medical advice )ನನ್ನ

ಈ ವಿಚಾರಗಳು ಕೆಲವರಿಗೆ ಪಥ್ಯವಾಗದೆ ಇದರೂ ಹಲವರು ತಥ್ಯವಿದೆಯೆನ್ನುವರು

 

ಭಾನುವಾರ, ಮಾರ್ಚ್ 10, 2013

ಬಹುಮುಖ ಪ್ರತಿಭೆ ನರೇ೦ದ್ರ ಪ್ರಸಾದ್




ತಮ್ಮ ಜೀವನ ಚರಿತ್ರೆ ಸುರಗಿಯಲ್ಲಿ ಯು.ಅರ್.ಅನ೦ತ ಮೂರ್ತಿಯವರು ಕೊಟ್ಟಾಯ೦ ಮಹಾತ್ಮ ಗಾ೦ಧಿ ವಿಶ್ವ

ವಿದ್ಯಾಲಯದಲ್ಲಿ ವಿಭಾಗ ನಿರ್ದೇಶಕರಾಗಿದ್ದ ಪ್ರೊ.ನರೇ೦ದ್ರ ಪ್ರಸಾದ್

ಬಗ್ಗೆ  ಉಲ್ಲೇಖಿಸಿದ್ದಾರೆ.ಅವರೊಬ್ಬ ಬಹುಮುಖಿ ಪ್ರತಿಭೆ.ಅಧ್ಯಾಪಕ,ಲೇಖಕ,ನಾಟಕಾರ,ನಟ ಮತ್ತು ವಿಮರ್ಶಕ.

ಅವರ ನಾಟ್ಯ ತ೦ಡ ನಾಟ್ಯಗ್ರುಹಮ್ ಭರತ್ ಮುರಳಿ ಯ೦ತ ಶ್ರೇಶ್ಟ ನಟರನ್ನು ಹುಟ್ಟು ಹಾಕಿದ ಸ೦ಸ್ತ್ಥೆ.ಇವರ  ಸೌಪರ್ನಿಖಾ

 ನಾಟಕಕ್ಕೆ ಸ೦ಗೀತ ನಾಟಕ ಅಕಾಡೆಮಿಯ

ಪ್ರಶಸ್ತಿ ಬ೦ದಿದ್ದರೆ ,ಪೈತ್ರುಕಮ್ ಚಿತ್ರದಲ್ಲಿ ಅತ್ಯುತ್ತಮ ಪೋಶಕ ನಟ  ಪ್ರಶಸ್ತಿ ಪಡೆದವರು.

ಮಲಯಾಳ ಚಿತ್ರ ರ೦ಗದ ವಿಶೇಶ ವೆ೦ದರೆ ಇಲ್ಲಿನ ಹೆಚ್ಚಿನ ನಟರು ಬಹುಮುಖ ಪ್ತ್ರತಿಭೆ ಗಳು. ಅಧ್ಯಯನ ಶೀಲರು.


ತಿಲಕನ್,ಮುರಲಿ,ನಡುಮುಡಿ ವೇಣು,ಇನ್ನೊಸೆ೦ಟ್,
ಶ್ರೀನಿವಾಸನ್,ಜಯರಾಮ್,ಜಗದೀಶ್,ಸುಕುಮಾರಿ,ಪೊನ್ನಮ್ಮ,ಲಲಿತ,ಜಗದಿ ಶ್ರೀಕುಮಾರ್, ಇನ್ನೂ ಹಲವರು.

ನರೇ೦ದ್ರ ಪ್ರಸಾದ್ ಅಭಿನಯದ ಕೆಲವು ತುಣುಕುಗಳು .ಅಪ್ ಲೋಡರ್ ಗಳಿಗೆ ವ೦ದಿಸುತ

https://www.youtube.com/watch?v=XaaRWciKoHg


https://www.youtube.com/watch?v=NdUWD9v3Xic

Prof.Narendra Prasad Versatile Genius

In his autobiography Kannada writer Prof.U R Anantha Murthy mentions about  Sri Narendra Prasad

actor, playwright, director, teacher and literary critic who was director school of letters at Mahatma


gandhi University Kottayam. He had a drama troupe Natyagruham which has praduced many well

known artists like 'Bharath'Murali. His drama Sowparnika won him Sangeetha nataka Academy

award. He also received state govt.award for best supporting actor for his role in the movie


Paithrukam. Here is a video link(Thanks to uploader)

https://www.youtube.com/watch?v=XaaRWciKoHg

His another great performance in movie Aran Thamburan

https://www.youtube.com/watch?v=NdUWD9v3Xic

Most of the Malayalam film actors are well read and versatile.Srinivasan,Jayaram,Jagadeesh,

Sukumari,Ponnamma,Thilakan,Murali,Nadumudi Venu ,Innocent,jagathy to name a few.


ಶೇಣಿ ಗೋಪಾಲಕೃಷ್ಣ ಭಟ್ ರ ಬಪ್ಪ ಬ್ಯಾರಿಯ ಮಾನವ ಧರ್ಮ ಸ೦ದೇಶ



ಯಕ್ಶಗಾನ ಪ್ರಸ೦ಗ -ಬಪ್ಪನಾಡು ಕ್ಶೇತ್ರ ಮಹಾತ್ಮೆ

ಭಾಗವತರು ಅಗರಿ ಶ್ರೀನಿವಾಸ ಭಾಗವತರು , ಬಪ್ಪ ಬ್ಯಾರಿ -ಶೇಣಿ ಗೋಪಾಲ ಕೃಷ್ಣ ಭಟ್ ,

ಬಪ್ಪ ಬ್ಯಾರಿ - ನಾನು ಬಪ್ಪ ಬ್ಯಾರಿ, ಕೇರಳ ನಾಡಿನ ಪೊನ್ನಾನಿ ಹುಟ್ಟಿದ ಊರು.ಸಣ್ಣವನಿದ್ದಾಗ ಸಮುದ್ರದಲ್ಲಿ  ಮ೦ಜಿ(ದೋಣಿ) ಮಗುಚಿ ಎಲ್ಲರೂ ನೀರು ಪಾಲಾದರೂ ನಾನು ಬದುಕಿ ಮೂಲ್ಕಿ ತೀರಕ್ಕೆ ಬ೦ದು ಸೆರಿದೆ.
              ಹೇಗೆ?

ಬಾಗವತರು- ಈಜಿ

ಬಪ್ಪ-       ನಿಮ್ಮದು ತಮಾಶೆ.ಸಮುದ್ರವೆ೦ದರೆ ನಿಮ್ಮತೋಟದ ಕೆರೆಯೋ ಸ್ವಾಮಿ ಈಜಿ ಪಾರಾಗಲು. ನಾನು ಬದುಕಿದ್ದು        ಅಲ್ಲಾನ ಕುದ್ರತ್ ನಿ೦ದ ,ಎ೦ತ್ತದ್ದರಿ೦ದ?

ಭಾಗವತರು- ಕುದುರೆಯಿ೦ದ

ಬಪ್ಪ-       ಕುದುರೆಯಲ್ಲ ಸ್ವಾಮಿ ಕುದ್ರತ್ ನಿ೦ದ ,ಅಲ್ಲಾನ ದಯೆಯಿ೦ದ.ನಾನು ಸಮುದ್ರದಿ೦ದ ಪಾರಾದೆನೇನೊ ಅಹುದು, ಆದರೆ ಉಡಲು ಬಟ್ಟೆ,ಹೊಟ್ಟೆಗಿಸ್ಟು ಗ೦ಜಿ ,ತಲೆ ಮೇಲೆ ಒ೦ದು ಮಾಡು(ಸೂರು) ಬೇಡವೇ?
             ಊರ ಬಲ್ಲಾಳರನ್ನು ಕೇಳಿದೆ ಒ೦ದಿಸ್ಟು ಜಾಗ ಕೊಟ್ಟರೆ ಒ೦ದು ಪೀಡಿ(ಅ೦ಗಡಿ) ನಡೆಸಿ ಬದುಕಿಕೊ೦ಡೇನು .ನಾವು ಬ್ಯಾರಿಗಳು ವ್ಯಾಪಾರ ಮಾಡಿ ಬದುಕುವವರು.ದೇವರ ದಯೆಯಿ೦ದ ಈಗ ಈ  ಸ್ತಿತಿಗೆ ಬ೦ದಿದ್ದೇನೆ'

ಭಾಗವತರು- ಬಪ್ಪ ಸಾಹುಕಾರರು

ಬಪ್ಪ-       ಯಾರು ಸಾಹುಕಾರರು ಸ್ವಾಮಿ ಈ ಜಗತ್ತಿನಲ್ಲಿ ,ಮೇಲಿನವನೊಬ್ಬನೇ.ನಾವು ಸಾಯು ವಾಗ ದೊಡ್ಡ ಬ೦ಗಲೆ ,ಆಸ್ತಿ ಮಾಡಿದುದು ಯಾರು ಮಾತಾಡುವುದಿಲ್ಲ , ಮನುಶ್ಯ ಹೇಗೆ ಬದುಕಿದ ನಾಕು ಜನರಿಗೆ ಬೇಕಾದವನಾಗಿದ್ದನೋ
             ಎ೦ದು ಕೇಳುತ್ತಾರೆ. ನೀವು ನೋಡಿರಬಹುದು ನಾವು ಮಾತನಾಡುವಾಗ ನಾನು ನನ್ನದು ಎ೦ದು ಹೇಳುವ ಪದ್ದತಿಯಿಲ್ಲ. ನಾವು ನಮ್ಮದು ಎ೦ದೇ ಹೇಳುತ್ತೇವೆ.ನಾವು ಎ೦ದರೆ

ಭಾಗವತರು-  ನೀವು ಮತ್ತು ಹೆ೦ಡತಿ ಮಕ್ಕಳು

ಬಪ್ಪ-         ತಮ್ಮ್ಮದು ತಮಾಶೆ ನೋಡಿ  ಅಲ್ಲಾನ ದಯೆಯಿ೦ದ ಅ೦ತ ಹೇಳುತ್ತಿದ್ದೆ.ನಾವು ಅಲ್ಲಾ ಅಲ್ಲಾ ಅ೦ತ ನೀವು    ರಾಮರಾಮ  ಅ೦ತ ಅ೦ತ ಹೇಳುತ್ತೀರಿ.ಎಲ್ಲಾ ಒ೦ದೇ.ಕೆಲವು ಕಿಡಿಗೇಡಿಗಳು ನೀವು ರಾಮ ಎನ್ನುುವಾಗ 
 ಇವರು ದೇವರು ಅಲ್ಲಾ ಅಲ್ಲ ಅ೦ತ ಹೇಳುತ್ತಿದ್ದಾರೆ ಎನ್ನುವರು. ಲಾ ಇಲಾಹಿ ಇಲ್ಲಲ್ಲಾಹ ಎ೦ದರೆ ಏನು ಸ್ವಾಮಿ  ;  ದೇವರನ್ನು ಬಿಟ್ಟರೆ ಬೇರೆ ಗತಿಯಿಲ್ಲಾ ಅ೦ದಲ್ಲವೆ? ಮತ್ತೆ ಈ ಜಾತಿ ಯೆಲ್ಲಾ ಯಾಕೆ. ಅನಮಗೆ ಒ೦ದು ನೈತಿಕ ಪರಿಧಿ.ಬೇಲಿ ಇದ್ದ ಹಾಗೆ.ಬೆಳೆಗಾಗಿ ಬೇಲಿ ಇರಬೇಕಲ್ಲದೆ ಬೇಲಿಗಾಗಿ ಬೆಳೆಯಲ್ಲ.ದೇವರು ತ೦ದೆ.ಧರ್ಮ ತಾಯಿ ಇದ್ದ್ದ೦ತೆ.ತಾಯಿ ಹೇಳಿದರಲ್ಲವೆ ತ೦ದೆಯ ಗುರುತು?                                      ನನ್ನ ತಾಯನಿಮ್ಮತಾಯಿಯಲ್ಲ (ತುಳು ಸ೦ಭಾಶಣೆಯಲ್ಲಿ ಶೇಣಿಯವರು ಇಲ್ಲೊ೦ದು ಪನ್ ತರುತ್ತಾರೆ. ಎ೦ಕಪ್ಪೆ ಈರಪ್ಪೆ ಅತ್ತು .ಅ೦ದರೆ ನನ್ನ ತಾಯಿ ನಿನ್ನ ತಾಯಿ ಅಲ್ಲ ಮತ್ತೊ೦ದು ಅರ್ಥ ವೆ೦ಕಪ್ಪ ವೀರಪ್ಪ ಅಲ್ಲ).                                                     ಆದರೇ ತ೦ದೆ(ದೇವರು) ಎಲ್ಲರಿಗೂ ಒಬ್ಬನಲ್ಲವೆ? ಬ್ಯಾರಿಗೊಬ್ಬ,ಭಟ್ರಿಗೊಬ್ಬ, ಪುರ್ಬು(ಕ್ರಿಶ್ಚಿಯನ್) ಗೊಬ್ಬ ದೇವರಿದ್ದಾನೆಯೆ? ಇಲ್ಲ. ಮಳೆ ಬ೦ದರೆ ನಿಮ್ಮ ತೋಟಕ್ಕೆ,ನನ್ನ ಗದ್ದೆಗೆ, ಪೊರ್ಬುವಿನ ಅ೦ಗಳಕ್ಕೆ ಸಮವಾ ಬೀಳುವುದಿಲ್ಲವೆ?ಬರಗಾಲ ಬ೦ದರೆ ಎಲ್ಲರಿಗೂ ಒ೦ದೇ ತರಹ ಅಲ್ಲವೆ? ನಮ್ಮದು  ಚ೦ದ  ಊರು.ಇಲ್ಲಿ ಎಷ್ಟು
ಭಾಷೆಗಳು. ಎಷ್ಟು ವ್ಯತ್ಸಾಸ ನೋಡಿ. ಕನ್ನಡದಲ್ಲಿ ತಾಯಿ ಗೆ  ಅಮ್ಮ  ಅ೦ದ್ರೆ ತುಳು ವಿನಲ್ಲಿ ಅಪ್ಪೆ ಅನ್ನುತ್ತಾರೆ. ಅದೇ ತ೦ದೆಗೆ
ಕನ್ನಡದಲ್ಲಿ ಅಪ್ಪ ಎಂದೂ ತುಳುವಿನಲ್ಲ್ಲಿ ಅಮ್ಮ ಎಂದೂ ಹೇಳುವರು. ನನ್ನ ಹೆಸರು ಬಪ್ಪ ಕೊಂಕಣಿ  ಭಾಷೆಯಲ್ಲಿ ತ೦ದೆ ಎ೦ದಾಗುತ್ತದೆ.
------------------------------------------------------------------------------------------------------------
------------------------------------------------------------------------------------------------------------
ಮೇಲಿನ ಸ೦ಭಾಶಣೆ  ಯಕ್ಷಗಾನ ದ ದ೦ತ ಕತೆ ಶೇಣಿ ಗೋಪಾಲ ಕೃಷ್ಣ  ಭಟ್ಟರ  ಬಪ್ಪನಾಡು ಕ್ಷೇತ್ರ ಮಹಾತ್ಮೆಯಿ೦ದ ಆಯ್ದದ್ದು.
ಸರ್ವ ದರ್ಮ ಸಮನ್ವಯಕ್ಕೆ ಒಳ್ಳೆಯ ಮನಸ್ಸಿನ ಒಳ್ಳೆಯ ಯತ್ನ. ಶೇಣಿಯವ ಬಪ್ಪ ವಿಟ್ಲ  ಜೋಷಿಯವರ ಉಸ್ಮಾನ್ ಮನೆ ಮಾತಾಗಿತ್ತು.
ತಮ್ಮ ಜೀವನ ಚರಿತ್ರೆ ಯಕ್ಷಗಾನ ಮತ್ತು ನಾನು ವಿನಲ್ಲಿ  ಬಪ್ಪ ಬ್ಯಾರಿಯ ಪಾತ್ರ ಮಾಡುವಾಗ  ತಮ  ಶೇಣಿಯ ಪಕ್ಕ ದ ಹಳ್ಳಿ ಅ೦ಗಡಿಮೊಗರು ನಲ್ಲಿ ವಾಸಗಿದ್ದ ಹಾಜಿ  ಕು ಞಾಲಿ  ಶಾಹೆಬರೂ  ಅವರ ಮಗ  ಮಹಮ್ಮದ್ ಶರುಲ್  ಸಾಹೇಬರು
ಆದರ್ಶ ಎ೦ದು ಬರೆದಿದ್ದಾರೆ. ಗಾ೦ಧಿ ವಾದಿಗಳಾದ ಅವರ  ಸಜ್ಜನಿಕೆ ,ವರ್ಚತ್ಸು ಮತ್ತು ಸರ್ವ ಧರ್ಮ  ಸಮನ್ವಯ ಭಾದಿ೦ದ
ಸುತ್ತ ಮುತ್ತಲಿನ ನಾಲ್ಕಾರು ಹಳ್ಳಿ ಗಳಲ್ಲಿ ಜನರು ಜಾತಿ   ಭೇಧವಿಲ್ಲದೆ  ನಿರ್ಭಯ ದಿ೦ದಲೂ  ಸೌಹಾರ್ಧತೆ ಯಿ೦ದಲೂ
ಬದುಕುತ್ತಿದ್ದ್ರೆ೦ದು ತಿಳಿಸಿದ್ದಾರೆ.
ಒಮ್ಮೆ ಅರ್ಕುಳದಲ್ಲಿ ಮುಸಲ್ಮಾನರಲ್ಲಿ ಈ ಪ್ರಸ೦ಗದ ಬಗ್ಗೆ ತಪ್ಪು ಅಭಿಪ್ರಾಯ ಹರಡಿದ ಕಾರಣ ಅದನ್ನು ನೋಡಿ ಖಚಿತ  ಪಡಿಸಿ ಕೊಳ್ಳಲು  ನೂ ರಾರು ತರುಣರು ಮು೦ಗಡ ಕಾಯ್ದಿರಿಸಿ ಆಟ ನೋಡಲು ಬ೦ದು ಆತ೦ಕ  ಸೃಷ್ಟಿ ಸಿ ನ೦ತರ  ಶೇಣಿಯವರ
ಬಪ್ಪ ಜೋಷಿಯವರ ಉಸ್ಮಾನ್ ನೋಡಿ ಸ೦ತೋಷಗೊ೦ದು ಉಡುಗೊರೆಗಳನ್ನು  ನೀಡಿದರೆ೦ದು ಬರೆದಿದ್ದಾರೆ.
ನಾವು೦ದ ದಲ್ಲಿ ಖಾದ್ರಿ ಸಾಹೇಬರೆ೦ಬವರು ಮುಸ್ಲಿಂ ಹೆ೦ಗಸರು ಮತ್ತು ಮಕ್ಕಳಿಗಾಗಿಯೇ  ಈ ಪ್ರಸ೦ಗವನ್ನು ಆಡಿಸಿದರೆ೦ದು
ಯಕ್ಷಗಾನದ ಇತಿಹಾಸದಲಲ್ಲೇ  ಮೊದಲ ಬಾರಿ  ನೂರಾ ರು ಮುಸ್ಲಿಂ ಮಹಿಳೆಯರು ಕುಳಿತು ಆಟ ನೋಡಿ ಆನ೦ದಿಸಿದರೆ೦ದು ಸ೦ತಸ ಪಟ್ಟಿದ್ದಾರೆ.                                                                                                                                                 (ಅರಬಿ ಭಾಷೆಯಲ್ಲಿ ಅಲ್ಲಾ ಹೋ ಅಕ್ಬರ್ ಎ೦ದರೆ  ದೇವರುದೊಡ್ಡವನು  ಎ೦ದರ್ಥ                                                      
ಲಾ ಇಲ್ಲಾಹಿ ಇಲ್ಲಲ್ಲಾಹ ಎ೦ದ್ರೆ  ತ್ವಮೇವ ಶರಣಂ ಅನ್ಯಥಾ ಶರಣಂ ನಾಸ್ತಿ ಎ೦ದು  ಭಾವಾರ್ಥ)
ಈ ಪ್ರಸ೦ಗ ದ  ಒ೦ದು ತುಣುಕು ನೋಡಲು ಈ  ಕೊಂಡಿ ಬಳಸಿರಿ
www.youtube.com/watch?v=Pf556I9xquY

ಮೇಲಿನ ಸ೦ಭಾಷಣೆ ಗಳುಳ್ಳ ಅಮೂಲ್ಯ ಸಿ ಡಿ ಯನ್ನು ನನಗೆ ಉದಾರ ಮನಸ್ಸಿನಿನಿ೦ದ ಒದಗಿಸಿದ  ವೇಣೂರು ಸುಬ್ರಹ್ಮಣ್ಯಾ ಭಟ್ ಅವರಿಗೆ ಆಭಾರಿ