ಬೆಂಬಲಿಗರು

ಶುಕ್ರವಾರ, ಜುಲೈ 30, 2021

ವೆಂಕಟಪ್ಪ ಡೋಗ್ರ

                                                                      ವೆಂಕಟಪ್ಪ ಡೋಗ್ರ

 

                      

                                                                 Saxophone Chakravarthy Puttur Venkatappa Dogra Fans - Home | Facebook                                                                                                                                                                                                                                                            ಕರ್ನಾಟಕ ಸಂಗೀತದಲ್ಲಿ ವಿದೇಶಿ ವಾದ್ಯಗಳ ಅಳವಡಿಸುವಿಕೆ ಹಿಂದಿನಿಂದಲೂ ನಡೆದು ಬಂದಿದೆ .ವಡಿವೇಲು ಪಿಳ್ಳೈ ಮತ್ತು ಬಾಲು ಸ್ವಾಮಿ ದೀಕ್ಷಿತರು ವಯಲಿನ್ ನನ್ನ ಕರ್ನಾಟಕ ಸಂಗೀತಕ್ಕೆ ಅಳವಡಿಸಿದರು ಮತ್ತು ಸ್ವಾತಿ ತಿರುನಾಳ್ ಮಹಾರಾಜರು ಇದಕ್ಕೆ ಪ್ರೋತ್ಸಾಹ ಕೊಟ್ಟವರು ಎಂದು ಚರಿತ್ರಕಾರರು ಹೇಳುತ್ತಾರೆ .ಇಂದು ಪಿಟೀಲು ಪಕ್ಕ ವಾದ್ಯ ಮತ್ತು ಸೋಲೋ ಆಗಿ  ಕಚೇರಿಗಳಿಗೆ ಅನಿವಾರ್ಯ ಅಂಗವಾಗಿದೆ .. 

ಹಿಂದೆ ನಮ್ಮಲ್ಲಿ  ಮಂಗಳ ವಾದ್ಯವಾಗಿ ನಾದಸ್ವರ ಬಳಕೆಯಲ್ಲಿ ಇತ್ತು .ಆಮೇಲೆ ಕ್ಲಾರಿಯೋನೆಟ್ ಬಂತು . ಈಗ ಜನಪ್ರಿಯ ವಾಗಿರುವ  ಸ್ಯಾಕ್ಸೋಫೋನನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿದ ಕೀರ್ತಿ ನಮ್ಮ ಊರಿನವರೇ ಆದ ದಿ .ವೆಂಕಟಪ್ಪ ಡೋಗ್ರ ಅವರಿಗೆ ಸಲ್ಲ ಬೇಕು . ಇವರ ಜನ್ಮ ನಾಮ  ವೆಂಕಟಪ್ಪ ದೇವಾಡಿಗ ;ಆದರೆ ಬಳಕೆಯ ಹೆಸರು ಡೋಗ್ರ ಎಂದೇ ಪ್ರಸಿದ್ದರು.ಶ್ರೀ ಅಣ್ಣಿ  ಶೇರಿಗಾರ್ ಅವರಿಂದ ನಾಗಸ್ವರ ಮತ್ತು ಮಂಜುನಾಥ್ ಶೇರಿಗಾರ್ ಅವರಿಂದ ಕ್ಲಾರಿಯೋನೆಟ್ ವಾದನಕಲೆ ಅಧ್ಯಯನ ಮಾಡಿದರು .ತಮಿಳು ಚಿತ್ರವೊಂದರಲ್ಲಿ ಸ್ಯಾಕ್ಸೋಫೋನ್ ವಾದನ ಕಂಡು ಕೇಳಿದ ಇವರು ಕಲಾ ಪೋಷಕ ಶ್ರೀ ನೇಮಿರಾಜ್ ಅವರ ಸಹಾಯದೊಡನೆ  ಇಂಗ್ಲೆಂಡ್ ದೇಶದಿಂದ ಇದನ್ನು ತರಿಸಿ  ದಕ್ಷಿಣಾದಿ ಸಂಗೀತಕ್ಕೆ ಅಳವಡಿಸಿ ಕೊಂಡರು . ಮುಂದೆ ಕದ್ರಿ ಗೋಪಾಲನಾಥ ಅವರು ಇದನ್ನು ಜಗತ್ತಿನಾದ್ಯಂತ ಪ್ರಚುರ ಪಡಿಸಿದರು . 

ಡೋಗ್ರ ಅವರು ನಮ್ಮ ಊರಿನಲ್ಲಿ ಬಹಳ ಪ್ರಸಿದ್ದಿ ಪಡೆದಿದ್ದರು . ಅವರ ವಾದನ ಇದ್ದರೆ ಕಾರ್ಯಕ್ರಮ ವಿಜೃಂಭಣೆ ಎಂದು ಅರ್ಥ . ತಾವು ಸ್ವಯಂ ಕಲಿತ ವಿದ್ಯೆಯನ್ನು ಹಲವು ತರುಣರಿಗೆ ಹಂಚಿದರು .ಅವರ ಮಗ ಹರಿದಾಸ್ ಡೋಗ್ರ ,ಉಪ್ಪಿನಂಗಡಿ ನಾಗೇಶ್ ಹೀಗೆ ದೊಡ್ಡ ಪಟ್ಟಿಯೇ ಇದೆ .ಇಂದು ಸಮಾರಂಭಗಳಲ್ಲಿ ಸ್ಯಾಕ್ಸೋಫೋನ್ ವಾದನ ಆಲಿಸುವಾಗ ಡೋಗ್ರ ಅವರ ನೆನಪಾಗುವುದು . ಮಹಿಳಾ ವಾದಕಿಯರೂ ಬಹಳ ಮಂದಿ ರೂಪು ಗೊಂಡಿದ್ದಾರೆ .. 

ವರ್ಷಗಳ ಹಿಂದೆ ಸುಬ್ರಹ್ಮಣ್ಯ ದಲ್ಲಿ ಮಿತ್ರರ ಮಗನ ಮದುವೆಯಲ್ಲಿ ಒಂದು ಸ್ಯಾಕ್ಸೋಫೋನ್ ಕಚೇರಿ ಇತ್ತು .ನಾನು ಮುಂದಿನ ಸಾಲಿನಲ್ಲಿ ಕುಳಿತವನು ಮಂಗಳ ನುಡಿಸುವಲ್ಲಿಯ ವರೆಗೆ ಕುಳಿತವನು ಏಳಲಿಲ್ಲ .ಬಹಳ ಚೆನ್ನಾಗಿ ಬಂತು . ವಿವಾಹ ಇತ್ಯಾದಿ ಸಮಾರಂಭಗಳಲ್ಲಿ ಒಳ್ಳೆಯ ಸಂಗೀತ ಅರಣ್ಯ ರೋದನ ಆಗುವುದು ;ಮತ್ತು ಕಲಾವಿದರು ಏಕಾಗ್ರತೆಯಿಂದ ಗಾನ ಪರವಶರಾಗಿ ನುಡಿಸುವ ವೇಳೆ ಹಠಾತ್ ವಾಲಗ ನಿಲ್ಲಿಸಿ ಎಂದು ಹೇಳುವಾಗ  ಯಾರೋ ಬಂದರೆಂದು ತಾಯಿಯ ಮೊಲೆ ಹಾಲು ತಪ್ಪಿಸಿದ ಶಿಶುವಿನಂತೆ ಸಂಗೀತಾಸಕ್ತ ಕೇಳುಗನ ಸ್ಥಿತಿ ಆಗುವುದು. ಆದರೆ ವಾದ್ಯ ಸಂಗೀತ ಗಾರರಿಗೆ  ಮಂಗಳ ಕಾರ್ಯಗಳು ,ದೇವಾಲಯಗಳು ಸಾಂಪತ್ತಿಕವಾಗಿ  ಪೋಷಕರು ಎಂಬುದೂ ನಿಜ . 

 https://youtu.be/qc8HRcEa99w

 https://youtu.be/2f8sr7OMYSM

 

ಶಂಕರ ವಿಠಲ್ ಬಸ್

                                     

                        

ಶಂಕರ ವಿಠ್ಠಲ ಬಸ್  

 Mangalore City on Twitter: "Once upon on a time in Puttur... 🚌… "

 

                                   

                  

                    ನಮ್ಮ ಊರಿನಲ್ಲಿ  ಸಂಚಾರಕ್ಕೆ ಹಿಂದೆ ಇದ್ದ ಬಸ್ ಗಳಲ್ಲಿ  ಶಂಕರ ವಿಠಲ್ ಕಂಪನಿಯ ದ್ದೇ  ಅಧಿಕ .ಕನ್ಯಾನ ಉಪ್ಪಳ ಮಾರ್ಗದಲ್ಲಿ ಅವು ಮಾತ್ರ ಇದ್ದು ಆನೆಕಲ್ಲು ಕಡೆಗೆ ಕೆ ಬಿ ಟಿ (ಕುಮಾರನ ಬಸ್ ) ಮತ್ತು ಸಿ ಪಿ ಸಿ ಬಸ್ (ರಾಂಪಣ್ಣನ ಬಸ್ )ಗಳು ಇದ್ದವು . ಸಿಲ್ವರ್ ಕಲರ್ ಅನಾಕರ್ಷಕ ,ಉದ್ದ ಕಡಿಮೆ (ತಿರುಗಾಸುಗಳು ಇದ್ದ ಕಾರಣ ಇರಬೇಕು ). 

ಮುಂಜಾನೆ ನಾಲ್ಕು ಗಂಟೆಗೆ ಮೊದಲ ಬಸ್ ಕನ್ಯಾನದಿಂದ ಹೊರಟು ಬಾಯಾರು ಪೈವಳಿಕೆ ಮಾರ್ಗದಿಂದ ಉಪ್ಪಳ ರೈಲು ನಿಲ್ದಾಣಕ್ಕೆ ಹೋಗಿ ,ಅಲ್ಲಿಂದ ಬಂದ್ಯೋಡು ಮಾರ್ಗವಾಗಿ ಪೆರ್ಮುದೆ ಗೆ ಹೋಗುವುದು . ಬೇಸಗೆಯಲ್ಲಿ ಧರ್ಮತಡ್ಕ ವರೆಗೆ ಮುಂದುವರಿಯುವುದು . ನಮ್ಮ ತಂದೆಯ ಅಜ್ಜನ ಮನೆ ಚೆಕ್ಕೆಮನೆ . ಅಲ್ಲಿಯ  ಕಾರ್ಯಕ್ರಮಗಳಿಗೆ ನಾವು ಎರಡೂವರೆ ಗಂಟೆಗೆಲ್ಲಾ ಎದ್ದು ಕನ್ಯಾನಕ್ಕೆ ನಡೆದು ಬಸ್ ಹಿಡಿಯುತ್ತಿದ್ದೆವು .ಅದು ತಪ್ಪಿದರೆ ಮುಂದಿನ ಬಸ್ಸಿನಲ್ಲಿ ಬಾಯಾರು ಪದವಿನಲ್ಲಿ ಇಳಿದು ಗುಂಪೆ ಗುಡ್ಡೆ ಮೂಲಕ ನಾಲ್ಕೈದು ಮೈಲು ನಡೆಯ ಬೇಕು .ಹಾಗೆ ಮಾಡಿದ್ದೂ ಇದೆ . ಈ ಬಸ್ಸಿನ ಡ್ರೈವರ್ ಗೋಪಾಲ ಣ್ಣ .ಆದುದರಿಂದ ಗೋಪಾಲನ ಬಸ್ .ಅವರ ಮನೆ ಕನ್ಯಾನ ದಲ್ಲಿ ಇದ್ದು ಮಕ್ಕಳು  ಶಾಲೆಗೆ  ಬರುತ್ತಿದ್ದರು . ಈ ಬಸ್ ಮರಳಿ ಕನ್ಯಾನ ಮೂಲಕ ವಿಟ್ಲಕ್ಕೆ ಹೋಗಿ ಹಿಂತಿರುಗಿ ಉಪ್ಪಳಕ್ಕೆ ಹೋಗಿ ಕನ್ಯಾನಕ್ಕೆ ಮರಳುವುದು .. 

             ಇನ್ನೊಂದು ಮಹಾಬಲ ಶೆಟ್ಟಿ ಬಸ್ .ಬೆಳಿಗ್ಗೆ ಉಪ್ಪಳದಿಂದ ಕನ್ಯಾನ ವಿಟ್ಲ ಮೂಲಕ ಪುತ್ತೂರಿಗೆ ಬಂದು ಅಲ್ಲಿಂದ ಮಂಗಳೂರಿಗೆ ಹೋಗವುದು . ಅಲ್ಲಿಂದ ರಿಟರ್ನ್ ಟ್ರಿಪ್ ಅದೇ ಮಾರ್ಗದಲ್ಲಿ . ಅದರಲ್ಲಿ ಹೊಳ್ಳರೆಂಬ ಕಂಡಕ್ಟರ್ ಇದ್ದರು .ಕಾಕಿ ಅಂಗಿ ಚಡ್ಡಿ ಹಾಕುವರು .ಅವರ ಭಾವ ರಾಮ ರಾವ್  ಪ್ರಾಥಮಿಕ ಶಾಲೆಯ ಅಧ್ಯಾಪಕರು . 

ಮುಂಜಾನೆ ಪುತ್ತೂರಿನಿಂದ ಆರು ಗಂಟಿಗೆ ಹೊರಟು ಉಪ್ಪಳಕ್ಕೆ ಹೋಗಿ ಮಧ್ಯಾಹ್ನ ಪುತ್ತೂರಿಗೆ ಮರಳುವ ಬಸ್ ಪೀರ್ ಸಾಹೇಬರದ್ದು . ಇದರಲ್ಲಿ ಪುತ್ತೂರು ಪೇಟೆಗೆ ಬೇಕಾದ ಮೀನು ಕೂಡಾ ಸರಬರಾಜು ಆಗುತ್ತಿತ್ತು .ಕೆದ್ಲಾಯ ಎಂಬ ಕಂಡಕ್ಟರ್ ಇದ್ದರು . ಪೀರ್ ಸಾಹೇಬರು ನಮಗೆ ಹೆಚ್ಚು ಪರಿಚಿತರು ..ಪುತ್ತೂರು ನಗರ ಸಮೀಪ ಅವರ ಮನೆ ಇತ್ತು . ಮಧ್ಯಾಹ್ನ ಅವರ ಬುತ್ತಿ ಅಲ್ಲಿಂದ ತಂದು ಕೊಡುವರು . ನಮ್ಮ ಅಣ್ಣ ಪುತ್ತೂರು ಪಾಪ್ಯುಲರ್ ನ್ಯೂಸ್ ಏಜೆನ್ಸಿ ಯಿಂದ ಟೈಮ್ಸ್ ಒಫ್ ಇಂಡಿಯಾ ಪೇಪರ್ ಇವರ ಮೂಲಕ ತರಿಸುತ್ತಿದ್ದು ನಾವು ಬಸ್ಸಿಗೆ ಕಾದು ತೆಗೆದು ಕೊಳ್ಳುವೆವು .ಇದೇ ರೀತಿ ಹಳ್ಳಿ ಯಲ್ಲಿ ಹಲವರು  ಔಷಧಿ ಇತ್ಯಾದಿ ತರಿಸಿಕೊಳ್ಳುವರು . ನಮ್ಮ ಮನೆಗೆ ಉಪ್ಪಳದಿಂದ ಎರಡು ಒಳ್ಳೆಯ ನಾಯಿ ಮರಿಗಳನ್ನು ಕೂಡಾ ತಂದು ಕೊಟ್ಟಿದ್ದರು . ನಾವು ಪುತ್ತೂರು ,ವಿಟ್ಲ  ಜಾತ್ರಗೆ ಬಂದರೆ ಇದೇ  ಬಸ್ ನಲ್ಲಿ ಮರಳುವುದು . 

  ಈ ಬಸ್ ಗಳ  ಟಿಕೆಟ್ ಚೆಕಿಂಗ್ ಇನ್ಸ್ಪೆಕ್ಟರ್ ವಾಸುದೇವ ಕಿಣಿಯವರ ಬಗ್ಗೆ ಹಿಂದೆ ಬರೆದಿದ್ದೆನು .. ಬಸ್ ಗಳು ಯಾವಾಗಲೂ ತುಂಬಿ ತುಳುಕುತ್ತಿದ್ದವು . ಹೇಗಾದರೂ ಹತ್ತಿ ಬಿಟ್ಟರೂ ದಾರಿ ಮಧ್ಯೆ ಇಳಿಯುವುದು ತುಂಬಾ ತ್ರಾಸದಾಯಕ ಆಗಿರುತ್ತಿತ್ತು . 

 ಪುತ್ತೂರಿನಿಂದ ಪಾಣಾಜೆಗೂ ಇದೇ ಕಂಪನಿಯ ಬಸ್ ಗಳು ಇದ್ದುವು .ಶಂಕರ ಭಟ್ ಮತ್ತು ವಿಠಲ್ ಭಟ್ ಎಂಬವರು ೧೯೨೯ ರಲ್ಲಿ ಆರಂಭಿಸಿದ ಈ  ಕಂಪನಿಯನ್ನು ಮೂರು ವರ್ಷಗಳ ನಂತರ ಆರೂರು ಕುಟುಂಬದವರು ಖರೀದಿಸಿ ನಡೆಸಿದರು . ಒಂದು ಕಾಲಕ್ಕೆ ಎಂಟು ನೂರಕ್ಕಿಂತಲೂ ಅಧಿಕ ಬಸ್ ಗಳನ್ನು ಕಂಪನಿ ಹೊಂದಿತ್ತು ಎಂದು ಅವರ ಬ್ಲಾಗ್ ಹೇಳುತ್ತದೆ .

ಪುತ್ತೂರಿನಿಂದ ಬೆಂಗಳೂರಿಗೆ ರಾತ್ರಿ  ಮೊದಲ ಸುಖಾಸೀನ ಬಸ್ ಕೂಡಾ ಇವರೇ ಆರಂಬಿಸಿದವರು . ಆಮೇಲೆ ಯಾಕೋ ಅದು ನಿಂತು ಹೋಯಿತು . ಮೊಳಹಳ್ಳಿ ಶಿವ ರಾವ್ ವೃತ್ತದ ಬಳಿ ಶಂಕರ ವಿಠಲ್ ಬಸ್ಸಿನ ಗ್ಯಾರೆಜ್ ಇತ್ತು .

     ನಮ್ಮೂರಿನ ಜೀವ ನಾಡಿಗಳಾಗಿದ್ದ ಬಿಳಿ ಬಸ್ ಗಳು ಇಲ್ಲಿ ಇಲ್ಲ.(ನಮ್ಮ ನೆನಪಿನಲ್ಲಿ ಹಸಿರಾಗಿವೆ ) .ಬದಲಿಗೆ ವರ್ಣ ರಂಜಿತ ಗಾಡಿಗಳು ಚಲಿಸುತ್ತಿವೆ .

ಜಿ ಟಿ ನಾರಾಯಣ ರಾವ್

                      ಜಿ ಟಿ ನಾರಾಯಣ  ರಾವ್ 

 

                    





ನನ್ನ ಬಳಿ ನೀನೂ ಯಾಕೆ ಬರೆಯಬಾರದು ಎಂದು ಕೇಳಿದ ಒಬ್ಬರೇ ಒಬ್ಬ  ಸಹೃದಯಿ ಹಿರಿಯರಾದ ಶ್ರೀ ಜಿ ಟಿ ನಾರಾಯಣ ರಾಯರು .ಅತ್ರಿ ಪುಸ್ತಕ ಮನೆಗೆ ಹೋಗಿದ್ದಾಗ ಮಗ ಅಶೋಕ ವರ್ಧನ  ಚಾರಣಕ್ಕೆ ಹೋಗಿದ್ದ ಸಮಯ .ನನ್ನ ಪುಸ್ತಕಗಳ ಆಯ್ಕೆ ಅವರಿಗೆ ಸೋಜಿಗ ಉಂಟು ಮಾಡಿರ ಬೇಕು  . "ನೀವು ಯಾರು ?ಏನು ಮಾಡುತ್ತಿದ್ದೀರಿ ?ದಯವಿಟ್ಟು ಬರೆಯಿರಿ ,ನಾವೇ ಪ್ರಕಟಿಸುವಾ ."  ನನ್ನ ಕೈಬರಹ ಚೆನ್ನಾಗಿ ಇಲ್ಲದ ಕೀಳರಿಮೆಯಿಂದ  ನಾನು ಆ ಸಾಹಸಕ್ಕೆ ಹೋಗಿರಲಿಲ್ಲ .ಈಗ ಕಂಪ್ಯೂಟರ್  ಬರೆಯುವ ಕಾರಣ ಧೈರ್ಯ ಬಂದಿದೆ . 

  ಹಿಂದೊಮ್ಮೆ ಪುತ್ತೂರು ಕನ್ನಡ ಸಂಘದವರು ದಸರಾ ಸಂದರ್ಭದಲ್ಲಿ ಅವರ ಭಾಷಣ  ಏರ್ಪಡಿಸಿದ್ದರು . ವಿಷಯ  ಸಂಗೀತಾಸ್ವಾದನೆ ಇರ ಬೇಕು . ತಮ್ಮ ಮದುವೆಯ ದಿನ ವೆಂಕಟಪ್ಪ ಡೋಗ್ರ  ಅವರ ಸ್ಯಾಕ್ಸೋಫೋನ್ ವಾದನ ಆಲಿಸಿದ ತಾವು ಇತರ  ಎಲ್ಲಾ ನಡವಳಿಕೆ ಬದಿಗೊತ್ತ್ತಿ ತವಿಲ್ ಬಾರಿಸಿದೆ ಎಂದು ಹೇಳಿದ ನೆನಪು . ವಿಜ್ಞಾನ  ಮತ್ತು ಸಂಗೀತ ಅವರಿಗೆ ಹತ್ತಿರವಾದ ವಿಷಯಗಳು . ಅಧ್ಯಾಪನ ,ಸಾಹಿತ್ಯ ,ಸಹಕಾರಿ ಸಂಘ ,ಏನ್ ಸಿ ಸಿ ,ವಿಶ್ವ ಕೋಶ ಸಂಪಾದನೆ  ಎಲ್ಲಾ ರಂಗಗಳಲ್ಲಿ ಪ್ರಾಮಾಣಿಕವಾಗಿ ತೊಡಗಿಸಿ ಕೊಂಡವರು . 

ಎಲ್ಲಂಕಿಂತಲೂ ಮಿಗಿಲಾಗಿ ನಾನು ಬಹಳ ಮೆಚ್ಚಿದ ಲೇಖಕ ಮಾಸ್ತಿ  ವೆಂಕಟೇಶ ಐಯ್ಯಂಗಾರ್ ಅವರ ಆತ್ಮ ಚರಿತ್ರೆ "ಭಾವ "ದ  ಸುಮಾರು ಆರುನೂರು ಪುಟಗಳನ್ನು ಇವರಿಂದ ಬರೆಸಿದರು . ಮಾಸ್ತಿ ವೀರ ನಾರಾಯಣ  ತಾನು ಕುಮಾರ ವ್ಯಾಸ ಅಲ್ಲ ಎಂದು ವಿನೀತರಾಗಿ ಜಿ ಟಿ ನಾ ತಮ್ಮ ಆತ್ಮ ಕತೆಯಲ್ಲಿ ಹೇಳಿಕೊಂಡಿದ್ದಾರೆ . 

ಅವರ  ಕೃತಿ ' ಮುಗಿಯದ ಪಯಣ ' ಕನ್ನಡದ ಉತ್ತಮ ಆತ್ಮಕತೆಗಳಲ್ಲಿ ಒಂದು. 2.12 .2006 ರಂದು ನಡೆದ ಅದರ ಬಿಡುಗಡೆ  ಸಮಾರಂಭದಲ್ಲಿ ನಾನೂ ಪಾಲು ಗೊಂಡಿದ್ದೆ .

 

ಬುಧವಾರ, ಜುಲೈ 28, 2021

ಅಂಗ್ರಿ ಗಣಪತಿ ಭಟ್ 3

 

                      



 

 ಗಣಪ್ಪಜ್ಜನ ನೀಳ ಕವನದ ಕೆಲವು ಸಾಲುಗಳು

 

ಆಜ್ನಾನಾನ್ವಯಾ ಶೌಚ ಸೂತಕ ನಿವೃತ್ತಿಗೆ ಸುಜ್ನಾನೇಶ್ವರಾಮೃತ                                 ಗ್ರಂಥ ಬರೆದವರು      ಅಂಗ್ರಿ ಗಣಪತಿ ಭಟ್ಚ ,(ಸೂತಕ ನಿವೃತ್ತಿಗೆ ಒಟ್ಟು6 4ಪದ್ಯಗಳು)

(ಆಯ್ದ ಸಾಲುಗಳು ಅನುಕ್ರಮ ವಾಗಿಲ್ಲ  )

 

  ಚರಾಚರ ಜನನ ಮರಣ ಶೌಚ ಭೇದಾ ಭೇದ ವಿವರವ                                   ನಾ ಚತುರ್ಮುಖ ನೊರೆದನಾ ಕಾಶ್ಯಪ ಮುನೀಂದ್ರಗೆ

ಒಂದು ದಿನ ಕೈ ಮುಗಿದು ಕಾಶ್ಯಪ ನೆಂದನಾ ಬ್ರಹ್ಮ0ಗೆ ಜನಿಸಿದ

ರಿಂದ ನಾಶನದಿಂದ ವಂಶಾ ಶೌಚವದು ತನಗೆ

 

ಒಂದು ದಿನ ಬಿಡಲರಿದು ಸಂಧ್ಯಾ ವಂದನೆಯ ನಿಯಮಕ್ಕೆ ಸೂತಕ

ದ0ಧಕಾರವ  ತೆಗೆಯ ಬೇಕೆನೆ ದ್ರುಹಿಣ ನಿಂತೆದಾ

 

ಏಳು ಮಗ ನೀನೇಳು ಸಂಶಯ ತಾಳದಿರು  ತಾಳದಿರು ಶುದ್ದದ

ಕಾಳಗತ್ತಲೆಗೆ ಸಿಲುಕಿದೆಯೋ ಮಹಾದೇವ

ಕೇಳುನೀ ಮನವೊಲಿದು ಮತ್ತೀ ಕೇಳು ಲೋಕಕೆ ಹಿತವೆನುತ ನಾ

ಪೇಳುವೆನು ಗ್ರಹಿಸುತ್ತ  ಹುಸಿ ಸೂತಕದ ನಿರ್ಣಯವ .

 

ಬಂದುದಕೆ ಕುರುಹೇನು ಸೂತಕ ಬಂದುದಕೆ ನಿಜವೇನು ತನು ಹ

ನ್ನೊಂದು ದಿನದಲಿ ,ಶುದ್ಧ ಮೊದಲಿನ ಶುದ್ಧ ಭೇದಗಳ

ಬಂದಿಪರು ಪ್ರಾಣಾಕ್ಷಿ ದೇಹವ ನೊಂದೆರಡು ವರುಷದೆಳೆ ಹಸುಳೆಯ

ಮುಂದೆ ಪಿತ ಗುಮ್ಮೆಂದು ಪೇಳಿದ ತೆರದಿ ಸೂತಕವು .

 

ರೂಪು ಶಬ್ದ ಸ್ಪರ್ಶ ರಸ ಗಂಧಾ ಪರೀಕ್ಷೆಗಳೆಲ್ಲಾ ಬರಿದೇ

ಪಾಪ ಸೂತಕವೆಂದು ಪೇಳ್ವರು ಮೂಢ ಜನ ಜಗದಿ

ಪಾಪವೆಂದೇ ಗ್ರಹಿಸಿ ಕರ್ಮದ ಲೋಪವನು ಮಾಡುತ್ತಾ ಬರಿದೇ

ಪಾಪಕಿಂಕರರಾಗಿ ನವವರಂ ನರಕದೊಳಗೆಂದ.

 

ನಿತ್ಯ ವಿಧಿಯನು ಬಿಟ್ಟು ಬಲು ಸಾಹಿತ್ಯವನು ಮಾಡಿದರೆ ಬಹಲನು

ಪಥ್ಯವನು ಕೆಡಿಸುವರು ಹುಸಿ ಸೂತಕವ ನೆರೆ ನಂಬಿ

ಸತ್ಯ ಹೀನರು ಜೀವರನು ಸಹ ಹತ್ಯವನು ಮಾಡಿದರೆ ಪ್ರಾಯ

ಶ್ಚಿತ್ತ ಸಂತಾನಕೆ  ಬಾರದು ಗೈದವಗೆ ಹೊರತು

 

ತಂದೆ ಋಣ ಪಾತಕವ ಗೈದೊಡೆ ನಂದನಂಗಾಸ್ತಿಲ್ಲ ದಿದ್ದರೆ

ಹೊಂದಲರಿಯದು ನಿನಗೆ ಲೇಶ ನಾತ್ರ ಶಾಸ್ತ್ರದಲಿ

ಹಿಂದೆ ಕೂಡಿದರಿಂದ ಶಿಶುವಿನ ತಂದೆ ತಾಯಿಗಳಿಂಗೆ ಮಾತ್ರವು

ಬಂದಪುದು ಸೂತಕವು ಮತ್ತುಳಿದವರಿಂಗಿಲ್ಲೆಂದ .

 ___-_      __________   _____

 

ಅನ್ನ ಮಡಕೆಯೊಳಿಹುದು ಎಂದರೆ ನಿನ್ನಯ ಹೊಟ್ಟೆಯು ತುಂಬಲರಿವುದೆ

ಕನ್ನಡಿಯ ವಾರ್ತೆಯನು ಪೇಳ್ದರೆ ಮುಖವು ತೋರುವುದೆ

ಕಣ್ಣು ಕಾಣದ ಕತ್ತಲೆಗೆ ಪ್ರಭೆಯನ್ನು ಪೇಳಿದರಾಯ್ತು ಸೂತಕ

ವನ್ಯರೆಂದರೆ ನಿನಗೆ ಬಪ್ಪುದೆ ಮೂಢ ಹೇಳೆಂದ.

 

ಧನ ಕುಭೇರನೊಳಿಹುದು ಎಂದರೆ ನಿನಗೆ ಲೆಕ್ಕಕೆ ಸಿಕ್ಕಲರಿವುದೆ

ಜನನ ಮರಣದ ವಾರ್ತೆ ಕೇಳ್ದರ ಶುದ್ಧವಾಗುವುದೆ

ಕನಸಿನಲಿ ತೋರಿದರೆ ದ್ರವ್ಯವು ನೆನಸಿನಲಿ ಸಿಕ್ಕುವುದೆ ಬರಿದೇ

ಮನಸಿನ ಭ್ರಮೆ ಹೊರತು ಸೂತಕವೆಲ್ಲಿ ಹೇಳೆಂದ 

-----     ----------- ------

ಹಸ್ತ ಮುಟ್ಟೈಜಮಾನ ಹೋಮವ ಮತ್ತೆ ಪೌರೋಹಿತ್ಯ ಗೈದರು 

ಕರ್ತೃವಿಗೆ ತತ್ಫಲವು ಬರುವುದು ಗ್ರಹಿಸಿ ನೋಡಿದರೆ 

ಮತ್ತು ಅಕ್ಷರ ಶೂನ್ಯವಾದರು ಹಸ್ತ ಮುಟ್ಟಿ ಗೆರೆಯನೆಳೆದರು 

ಸುಸ್ತಿರವು ಆಗುವುದು ಕ್ರಯ ಚೀಟಾದಿ ಪತ್ರಗಳು 

 

ಮತ್ತೆ ದಿನ ಗರ್ಭಕೆ ತಾನಲುವತ್ತು ಕಳೆದರೂ ಕಡೆಗೆ ಗಂಡನು 

ಸತ್ತು ಹೋದರೆ ಬಾರಪವಾದಗಳು ಹೆತ್ತರೆಯು

ಉತ್ತರೆಯ ಗರ್ಭಕೆ ತಿಂಗಳು ಹತ್ತು ಸಲುವುದ ಮೊದಲೇ ಗಂಡನು 

ಸತ್ತು ಹೋದನು ಅದರೊಳಗೆ ಜನಿಸಿದ ಪರೀಕ್ಷಿತನು .

 

ದಾಯವಾದಿಗಳೊಂಡೆನುವರಾ ದಾಯ ತಪ್ಪಿಸುವದಕೆ ದಾರಿ 

ದ್ರಾಯಸದಿ ಕಂಗೆಡಲು ಕೇಳಿದವರಶನ ಕೊಡರು 

ಕಾಯ ಕಷ್ಟವ ಬಡಿಸಿದರು ಕೌಂತೇಯರನು ಕೌರವರು ದ್ವಾಪ 

ರಾಯುಗ ದಿ ಮುಂದಿನ್ನು ಹೆಚ್ಚೆನೇನುವದೇನಂದ .

 

ಮಂಗಳವಾರ, ಜುಲೈ 27, 2021

ಅಂಗ್ರಿ ಅಜ್ಜ ತುಳು 2 ಪರಡೆ

 ಪರಡೇ ಪರಡೇ ಕಳಿ ಪರಡೇ

ಪರಡೇ ಪಣುಪ್ಪುನಕ್ಲೆನು ನೆರಡೇ

ಕಾಸುನು ಕೊರ್ತೂ ಕಳಿ ಸಮ ಪರ್ತ್

ದೊಸೋ ಪಾತೆರ್ತು ನೋತೊನ್ತ್

ಬೀಸತಿ ಪಾದೂಡ್ ಬಿರಿನಗ ಜೈಲುಡ್ 

ಮೋಸೋನು ಲೆಗಿಪ್ಪಾಡ್ ಬುಲ್ತೋನ್ ತೂ

ಪರಿಯರ ಜತ್ತುಂಡ ತರೆ ಹಾಳಾಪುಂಡು

ಮರ್ಲೇ ಮಂಗೇ ಪನ್ಪಾವುಂಡು

ಕರಿನವು ಕರಿಂಡು ದುಡ್ಡೇತು ಒರಿಂಡ್

ಕರಕರೆ ಮಾಳ್ಪಡೆ ಸುಖವುಂಡು 

ಕಳಿ ಗಂಗಸರ  ಕನಟ್ಟುಳ ಲೆಗಿಪ್ಪುಡೆ

ಕಳಿ ಪಂಟ ಕಲಿ ಸೂಲೆ ಅಣ್ಣನಾಕ್ಲೇ

ಕಳೆಯಡೇ ಪ್ರಾಣೋನು ಮಾನೋನು ಪೈಸೆನು 

ಸುಳಿಟ್ಟೆರ್ಲಾ ಬೂರಡೆ ಅಕ್ಕನಾಕ್ಲೆ 

ನಮ್ಮವು ನಂಕೇ ನಮ್ಮಾ ತಿನ್ಪನ

ನಮೋ ಒಂಜಾಯರ  ತುವೋಡು.

ನಮೋ ಒಂಜಾಯರ ನಮೋ ಮಾತೆರ್ಲಾ 

ಅಮಲುನು ಬುಡ್ತೋ ಲೆಗಿತ್ತೋನ್ಲೆ

ಕಸ್ಟೋತ ಕಾಲಾಡು ಪಟ್ಟುತು ಉಂಡುತು 

ಗುಟ್ಟುತ ಕೆಲಸೋನು ಮರಪ್ಪೋಡು

ಭಾನುವಾರ, ಜುಲೈ 25, 2021

ಆಶು ಕವಿ ಅಂಗ್ರಿ ಗಣಪತಿ ಭಟ್

                   ಆಶು ಕವಿ ಅಂಗ್ರಿ ಗಣಪತಿ ಭಟ್ 

ಓದುಗರಲ್ಲಿ ಸ್ವಲ್ಪ ಗಲಿಬಿಲಿ ಉಂಟಾಗಿದೆ . ಕವಿ ಗಣಪತಿ ಭಟ್ ಯಾರು ?ಸಿನೆಮಾ ನಟ ಗಣಪತಿ ಭಟ್ ಬೇರೆಯವರೇ ,ಅದರ ನಡುವೆ ಸಿದ್ದಿ ಗಣಪತಿ ಭಟ್ ಬೇರೆ ಬಂದಿದ್ದಾರೆ .ಭುವನೇಶ್ವರಿ ಹೆಗ್ಡೆ ಆಗಾಗ ಹೇಳುತ್ತಿರುತ್ತಾರೆ 'ಉತ್ತರಕನ್ನಡ ಹವ್ಯಕರಲ್ಲಿ ಮಹಾಬಲೇಶ್ವರ ,ಗಣಪತಿ ತಲೆಮಾರುಗಳಲ್ಲಿ ಆವರ್ತ ವಾಗುತ್ತ ಇರುತ್ತದೆ 'ಎಂದು . ಇಲ್ಲಿಯೂ ಅದೇ . 

 

                                        



                    



ನನ್ನ ಅಜ್ಜನ ತಂದೆ ಕವಿ ಗಣಪತಿ ಭಟ್ (ಕವಿ ಗಣಪ್ಪಜ್ಜ ). ಅವರು ಅಶು ಕವಿಗಳು ಎಂದು ಪ್ರಸಿದ್ದರಾಗಿದ್ದರು .ತುಳು ಮತ್ತು ಕನ್ನಡ ಎರಡು ಭಾಷೆಯಲ್ಲಿಯೂ ಕವನ ರಚಿಸಿರುವರು .ನನ್ನ ಅಜ್ಜ ಕೆಲವು ಕವಿತೆಗಳನ್ನು ಹೇಳುತ್ತಿದ್ದರು .ನಾವು ಅವುಗಳನ್ನು ಬರೆದು ಇಟ್ಟು ಕೊಳ್ಳದೆ ತಪ್ಪು ಮಾಡಿದೆವು .ಕೆಲವನ್ನು ಸಿದ್ದಿ ಗಣಪತಿ ಚಿಕ್ಕಪ್ಪ ಬರೆದು ಇಟ್ಟುಕೊಂಡಿದ್ದು ಸಹೋದರ ಲೈನ್ಕಜೆ ರಾಮಚಂದ್ರ ಸಂಪಾದಿಸಿ ಕೊಟ್ಟಿರುವರು . 

ಆಗಿನ ಕಾಲದಲ್ಲಿಯೇ ಕಂದಾಚಾರಗಳ ವಿರುದ್ಧ ಧ್ವನಿ ಎತ್ತುತ್ತಿದ್ದರು ಎನ್ನುವುದು ಮೇಲ್ನೋಟಕ್ಕೆ ತಿಳಿದು ಬರುವದು . 

ಒಂದು ಬಾರಿ ಸ್ವಾಮೀಜಿಯವರ ಮೊಕ್ಕಾಂ ನಲ್ಲಿ  ನಮಸ್ಕರಿಸಿದ ಭಕ್ತರಲ್ಲಿ ಉಳ್ಳವರಿಗೆ ಮಾತ್ರ ಫಲ ಶಾಲು ಮಂತ್ರಾಕ್ಷತೆ ,ಇತರರಿಗೆ ಬರೀ ಅಕ್ಕಿಕಾಳು ಕೊಡುತ್ತಿದ್ದಾಗ ,ತಮ್ಮ ಸರದಿ ಬಂದಾಗ ಇದರಲ್ಲಿ ಫಲವಿಲ್ಲ ಎಂದರಂತೆ . 

ಗಣಪ್ಪಜ್ಜ ಕವಿ ,ಅವರ ಒಬ್ಬ ಮಗ ಯಕ್ಷಗಾನ ಭಾಗವತರು .ನಮಗೆ ಕಲೆ ಸಾಹಿತ್ಯದ ಅಭಿರುಚಿ ಬಳು ವಳಿಯಾಗಿ ಬಂದಿದೆ ಎಂದು ತಿಳಿದುಕೊಂಡಿದ್ದೇನೆ .ನನ್ನ ಅಜ್ಜ ಮಹಾಬಲ ಭಟ್ ಅವರೂ ಪುರಾಣ ವಾಚನ ಮಾಡಿ ರಸವತ್ತಾಗಿ ಅರ್ಥ ಹೇಳುವರು . 

ಗಣಪ್ಪಜ್ಜನ ಒಂದು ತುಳು ಕವಿತೆ ಒಕ್ಕಲಿಗನ ದುಃಖ ನಿಮಗಾಗಿ .(ಕೃಪೆ ಸಿದ್ಧಿ ಗಮಪತಿ ಭಟ್ ,ಲೈನ್ ಕಜೆ ಸಹೋದರರು )

                      
           ಒಕ್ಕಲಿಗನ ದುಃಖ 

ಕಾಲೇಸೋ  ಮಾಲ್ಪುನೆ ಕಾಲೋಟು  ಯಾನೆಂಚ 

ಸಾಲೋಟು ಮುರ್ಕ್ಕ್ಯೆ ಅತ್ತೋ ?

ಬಾಲೆಲು ದಾನೊಂಜಿ ಬೇಲೆನು ಮಾಳ್ಪ೦ತೆ 

ಸೊಲ್ಪಾತು     ಪಾಡ್ಯೇ ರತ್ತೋ 

ತಿರ್ಗುಪೆ ಎಂಕ್ಲೆನ ಕೊರಗುನ ಜಂಬಾರೋ 

ನರ್ಗುಪೆ ದೂಮೆ ಓರಿ 

ಒರ್ಗುಜ್ಜಿ  ಕಜ್ಜಿ ಒಂಜಿ ಗರ್ಗಾಯಿ ರಾಮಾಗು 

ಮಾರ್ಗಾಯಿ ಮಾಲ್ಪುನೆ ಸರಿ . 

ಬೊಲ್ಪುಗು ಬೂರುನ ಕೊಲ್ಪುಡು ಈ ತನೆಟ  

ಬಲ್ಪುವಲಾಳು ಪಾಪೋ 

ಆಳ್ವೊರ್ತಿಎರುಲೆನ್ ತಳಿಪ್ಪುಲೆ ಪ೦ಡುಂಟ

ಮಾಲ್ಪುವೆರೆನಡ ಕೋಪೋ . 

ಮರ್ಮಾಲ್ ಇತ್ನಾಳ್ ಎರ್ಮೆತ ಲೆಕ್ಕಾಲ್ 

ಧರ್ಮದ ಉನ್ಪು ತಿನುಪ್ಪುನೆ .. 

ನಿರ್ಮಲ ದಾಲ ಇದ್ದಿ ಒರ್ಮೆಲ  ಕುರ್ತೇಲ್ 

ಕರ್ಮೋನು ದಾನೆ ಪನ್ಪುನೇ . 

ಇರ್ಲಾನಿ ಬತ್ತುನ ಮರ್ಲುದ ಬೊಳ್ಳ ಗು 

ಪೊರ್ಲುತ ಏಣಿಲ್ಡ ಕೆಯ್ಯಿ 

ಕುರಳಿದ್ದಿ  ಪೊಂಡೈನ ಪೊರ್ಲುನು ಲೆಜಿಪ್ನಗ 

ಕರ್ಲ್  ತುಂಡಾಪುನ್ನೇ ಸೈ . 

ಪುಂಡಿ ಬಿತ್  ಪಾಡ್ ನೇ ದಂಡಾನ್ದು  ಸುಗ್ಗಿಡು 

ಕಂಡೆ ಕಟ್ಟುದು ಪರ್ದಿ 

ಕೊಂಡೊತ್ತಿ  ಸಾಲೋನು ಕೊರಿಯಾರ  ಸಾದಿಜ್ಜಿ 

ಉಂಡುತು ಬದುಕಿಯರಿಜ್ಜಿ . 

ಬುಕ್ಕ  ಆಂಡು ಕೊಳಕ್ಕೇನ  ಕೈದಾಲ 

ಬರ್ಕತ್ ಇದ್ದಿ ಬುಕ್ಕೊ 

ಒಕ್ಕುಂಡ  ನೀರ್ ದಾಲ  ತಿಕ್ಕುಜ್ಜಿ ಗುವೇಲುಡು 

ಒಕ್ಕೆಲು  ಲಕ್ಕಿ ಲೆಕ್ಕೋ 

ಮೆದು ಕ್ಯಾರ  ಸೀರ್ ಜಾಣ್ಡಲ ಕದಿಕ್ಕೆ ತಿಮಾರುಟು 

ಕೊದಿ ಕ್ಕೇನ್  ತೌತ್ತೆ  ಮಾಲ್ತೆ 

ಮದಕ್ಕಾರಿ  ಪತ್ಯಾರ ಕುದುಕ್ಕೇರ್ ದೀಡುಜ್ಯೋ 

ಬದುಕ್ಯಾರ ಬಲ್ಲಿ  ಸೋಲ್ ತೇ 

ಬೋರ್ಲು ರಡ್ದು ಇತ್ ನೆಟ್ ಬೂರುಡ್ದು ಬರೆಡ್ ದು 

ಕಾರೊಂಜಿ  ಪೊಲಿತ್ ಪೋಂಡು 

ಕಾರಿನ್  ತ್ಯಾಂಪ ನ ತಾರಿತ  ಮುದೆಲುಡು 

ಭಾರಿ ಒಂಜಿ ಪಿಲಿ ಪತ್ತುಂಡ್ 

                                             (ಮುಂದುವರಿಯುವುದು )

 

                            

 

               

ಒಕ್ಕಲಿಗನ ದುಖ ಅಂಗ್ರಿ ಗಣಪತಿ ಭಟ್

                                     ಒಕ್ಕಲಿಗನ ದುಃಖ 

ಕಾಲೇಸೋ  ಮಾಲ್ಪುನೆ ಕಾಲೋಟು  ಯಾನೆಂಚ 

ಸಾಲೋಟು ಮುರ್ಕ್ಕ್ಯೆ ಅತ್ತೋ ?

ಬಾಲೆಲು ದಾನೊಂಜಿ ಬೇಲೆನು ಮಾಳ್ಪ೦ತೆ 

ಸೊಲ್ಪಾತು     ಪಾಡ್ಯೇ ರತ್ತೋ 

ತಿರ್ಗುಪೆ ಎಂಕ್ಲೆನ ಕೊರಗುನ ಜಂಬಾರೋ 

ನರ್ಗುಪೆ ದೂಮೆ ಓರಿ 

ಒರ್ಗುಜ್ಜಿ  ಕಜ್ಜಿ ಒಂಜಿ ಗರ್ಗಾಯಿ ರಾಮಾಗು 

ಮಾರ್ಗಾಯಿ ಮಾಲ್ಪುನೆ ಸರಿ . 

ಬೊಲ್ಪುಗು ಬೂರುನ ಕೊಲ್ಪುಡು ಈ ತನೆಟ  

ಬಲ್ಪುವಲಾಳು ಪಾಪೋ 

ಆಳ್ವೊರ್ತಿಎರುಲೆನ್ ತಳಿಪ್ಪುಲೆ ಪ೦ಡುಂಟ

ಮಾಲ್ಪುವೆರೆನಡ ಕೋಪೋ . 

ಮರ್ಮಾಲ್ ಇತ್ನಾಳ್ ಎರ್ಮೆತ ಲೆಕ್ಕಾಲ್ 

ಧರ್ಮದ ಉನ್ಪು ತಿನುಪ್ಪುನೆ .. 

ನಿರ್ಮಲ ದಾಲ ಇದ್ದಿ ಒರ್ಮೆಲ  ಕುರ್ತೇಲ್ 

ಕರ್ಮೋನು ದಾನೆ ಪನ್ಪುನೇ . 

ಇರ್ಲಾನಿ ಬತ್ತುನ ಮರ್ಲುದ ಬೊಳ್ಳ ಗು 

ಪೊರ್ಲುತ ಏಣಿಲ್ಡ ಕೆಯ್ಯಿ 

ಕುರಳಿದ್ದಿ  ಪೊಂಡೈನ ಪೊರ್ಲುನು ಲೆಜಿಪ್ನಗ 

ಕರ್ಲ್  ತುಂಡಾಪುನ್ನೇ ಸೈ . 

ಪುಂಡಿ ಬಿತ್  ಪಾಡ್ ನೇ ದಂಡಾನ್ದು  ಸುಗ್ಗಿಡು 

ಕಂಡೆ ಕಟ್ಟುದು ಪರ್ದಿ 

ಕೊಂಡೊತ್ತಿ  ಸಾಲೋನು ಕೊರಿಯಾರ  ಸಾದಿಜ್ಜಿ 

ಉಂಡುತು ಬದುಕಿಯರಿಜ್ಜಿ . 

ಬುಕ್ಕ  ಆಂಡು ಕೊಳಕ್ಕೇನ  ಕೈದಾಲ 

ಬರ್ಕತ್ ಇದ್ದಿ ಬುಕ್ಕೊ 

ಒಕ್ಕುಂಡ  ನೀರ್ ದಾಲ  ತಿಕ್ಕುಜ್ಜಿ ಗುವೇಲುಡು 

ಒಕ್ಕೆಲು  ಲಕ್ಕಿ ಲೆಕ್ಕೋ 

ಮೆದು ಕ್ಯಾರ  ಸೀರ್ ಜಾಣ್ಡಲ ಕದಿಕ್ಕೆ ತಿಮಾರುಟು 

ಕೊದಿ ಕ್ಕೇನ್  ತೌತ್ತೆ  ಮಾಲ್ತೆ 

ಮದಕ್ಕಾರಿ  ಪತ್ಯಾರ ಕುದುಕ್ಕೇರ್ ದೀಡುಜ್ಯೋ 

ಬದುಕ್ಯಾರ ಬಲ್ಲಿ  ಸೋಲ್ ತೇ 

ಬೋರ್ಲು ರಡ್ದು ಇತ್ ನೆಟ್ ಬೂರುಡ್ದು ಬರೆಡ್ ದು 

ಕಾರೊಂಜಿ  ಪೊಲಿತ್ ಪೋಂಡು 

ಕಾರಿನ್  ತ್ಯಾಂಪ ನ ತಾರಿತ  ಮುದೆಲುಡು 

ಭಾರಿ ಒಂಜಿ ಪಿಲಿ ಪತ್ತುಂಡ್