ಬೆಂಬಲಿಗರು

ಶನಿವಾರ, ಏಪ್ರಿಲ್ 25, 2015

ನ್ಯಾಯಾಂಗಕ್ಕೆ ಭೂಷಣ ಶಾಂತಿ ಭೂಷಣ


shanthibhushan

ನನಗೆ  ದೇಶದ ಎಲ್ಲಾ ನಾಗರಿಕರಂತೆ  ನ್ಯಾಯಾಂಗದ ಮೇಲೆ  ಬಹಳ

ವಿಶ್ವಾಸ .ಅದರಲ್ಲೂ ಎಚ್ ,ಅರ್.ಖನ್ನಾ ಮತ್ತು  ಜಗ ಮೋಹನ್ ಲಾಲ್

ಸಿನ್ಹಾ ಅವರಂತಹ ನ್ಯಾಯಾಧೀಶರು ನಮ್ಮ ಈ ನಂಬಿಕೆ ಅಲುಗಾಡದಂತೆ

ನಡೆದುಕೊಂಡು ಇತಿಹಾಸ ಸೃಷ್ಟಿಸಿದ್ದಾರೆ .

ಶಾಂತಿ ಭೂಷಣ್ ಪ್ರಸಿದ್ಧ ಅಗ್ರವಾಲ ಕುಟುಂಬದಲ್ಲಿ ಜನಿಸಿದವರು .ವಕೀಲ

ವೃತ್ತಿ ಆರಿಸಿ ಕೊಂಡು ಸೈ ಎನಿಸಿದವರು .  ಪ್ರಸಿದ್ದಇಂದಿರಾ ಗಾಂಧಿಯವರ

ಚುನಾವಣಾ  ಕೇಸ್ ನಲ್ಲಿ  ವಾದಿಸಿ ಗೆದ್ದು ಇತಿಹಾಸ ಸೃಷ್ಟಿಸಿದ ಇವರಿಗೆ  ಉಚ್ಚ

ನ್ಯಾಯಾಲಯದ ನ್ಯಾಯಾಧೀಶ ಹುದ್ದೆ ಅರಸಿ ಬಂದರೂ  ಬಿಟ್ಟವರು .

ಜನತಾ ಪಾರ್ಟಿ ಸರಕಾರದಲ್ಲಿ ಕಾನೂನು ಸಚಿವರಾಗಿದ್ದವರು

ತನ್ನ ಮಗ ಖ್ಯಾತ ವಕೀಲ ಪ್ರಶಾಂತ್ ಭೂಷಣ್  ಜತೆ ಸಾರ್ವಜನಿಕ ಹಿತಾಸಕ್ತಿ

ಯ ಮೊಕದ್ದಮೆಗಳಿಗೆ  ಬಹುತೇಕ ಉಚಿತವಾಗಿ ವಾದಿಸಿ ದನಿ ಇಲ್ಲದವರಿಗೆ

ಮತ್ತು ಜನ ಸಾಮಾನ್ಯನಿಗೆ ದನಿ ಕೊಡುತ್ತಿರುವವರು . ನ್ಯಾಯಾಂಗದಲ್ಲಿ

ಇರುವ ಬ್ರಷ್ಟಾಚಾರದ ಬಗ್ಗೆ ತಂದೆ ಮಗ ಹೋರಾಡುತ್ತಿರುವುದು ಎಲ್ಲರಿಗೂ

ತಿಳಿದ ವಿಷಯ.

ಇವರ  ಆತ್ಮ ಚರಿತ್ರೆ  ಕೋರ್ಟಿ೦ಗ್ ದಿ ಡೆಸ್ಟಿನಿ  ಪುಸ್ತಕ ಓದಿ ಮುಗಿಸಿದ್ದೇನೆ .

ಅದರಿಂದ ಆಯ್ದ ಕೆಲ  ನುಡಿ ಮುತ್ತುಗಳು .

‘ನನ್ನ ದೃಡ ಅಭಿಪ್ರಾಯ ,ಉದ್ಯೋಗವೆಂಬುದು ಮನುಷ್ಯನಿಗೆ ಆತ್ಮ ತೃಪ್ತಿ   

ತಂದು ಕೊಡುವಂತಿರ ಬೇಕು .ಲೌಕಿಕ ಅಭಿವೃದ್ದಿಗೆ  (ಸಂಪಾದನೆ ) ನಂತರದ

ಸ್ಥಾನ.”

 ಒಬ್ಬ ವಕೀಲನಿಗೆ  ಅರ್ಹ  ಕಕ್ಷಿಗಾರನ ಪರವಾಗಿ  ಕಷ್ಟದ ವ್ಯಾಜ್ಯವನ್ನು

ಅದೂ ಉಚಿತವಾಗಿ  ವಾದಿಸಿ ನ್ಯಾಯ ಒದಗಿಸಿ ಕೊಡುವುದು ,ಕೈ ತುಂಬಾ

ಫೀಸ್ ತಂದು ಕೊಡುವ ದೊಡ್ಡ ಕಕ್ಷಿದಾರ ನಿಗಾಗಿ  ವಾದಿಸುವುದರಿಂದ

ಹೆಚ್ಚು  ಸಂತೃಪ್ತಿ ಕೊಡುವುದು.

ಇವರ ಪತ್ನಿ ಕುಮುದ್ ಅವರು ಕ್ಯಾನ್ಸರ್  ಕಾಯಿಲೆಯಿಂದ  ನಿಧನ ರಾದಾಗ

ಬಂಧುವೊರ್ವರು   ಕಳುಹಿಸಿದ  ಸಂದೇಶ  .

“ಆರಿ ಹೋದ  ಬೆಳಕಿನ ಜ್ವಾಲೆಗಾಗಿ  ಮರುಗದಿರೋಣ

ಅದು  ಇಷ್ಟು ಕಾಲ ಪ್ರಜ್ವಲತೆ ಯಿಂದ ಬೆಳಗಿದ್ದನ್ನು  ಆಚರಿಸೋಣ “

                IMG_20150421_135834


ಇವರ  ಪುತ್ರಿ  ಷೆಫಾಲಿ  ಚಲನಚಿತ್ರ ನಿರ್ಮಾಪಕಿ .ಮತ್ತು   www.beatofindia.com  ಸಂಗೀತದ ಜಾಲ ತಾಣ

 ನಡೆಸುತ್ತಿದ್ದಾರೆ
ಒಂದು ತಮಾಷೆ ;    ಶಾಂತಿಭೂಷಣ್  ಲಾ ಮತ್ತು ಕಂಪನಿ ಅಫೇರ್ ಮಂತ್ರಿ

ಆಗಿದ್ದಾಗ  ಒಂಟಿ ವೃದ್ದ ರೋರ್ವರು  ಇವರಿನ್ನು  ಅಫೇರ್ ಗಾಗಿ ಕಂಪನಿ

ಕೊಡಿಸಲು ಗೋಳು ಹೊಯ್ದಿದಿದ್ದರಂತೆ !

ಮಂಗಳವಾರ, ಏಪ್ರಿಲ್ 21, 2015

ರೋಗದ ಚರಿತ್ರೆ

ರೋಗಿಯ ತಪಾಸಣೆಯಲ್ಲಿ ಮೊದಲ ಮತ್ತು ಪ್ರಾಮುಖ್ಯ ಅಂಗ  ರೋಗ ಚರಿತ್ರೆ.

ಇತರಲ್ಲಿ ಪ್ರಸ್ತುತ ರೋಗದ ವಿವರ ,ಹಳೇ ಕಾಯಿಲೆಗಳು ,ಕುಟುಂಬ ದ ಸದಸ್ಯರ 

ಅನಾರೋಗ್ಯ ಮತ್ತು  ಔಷಧಿ ಸೇವನೆ ವಿವರ ಕೇಳಿ ತಿಳಿಯಬೇಕು .ಇದರಿಂದ 

ರೋಗ ಪತ್ತೆ ಹಚ್ಚುವುದು ಸುಲಭವಾಗುವುದು .ಉದಾಹರಣೆಗೆ ತಂದೆ ತಾಯಿಗೆ 

 ಅಸ್ಥಮಾ ಇದ್ದರೆ ಮಕ್ಕಳಲ್ಲೂ ದಮ್ಮಿಗೆ  ಅದುವೇ ಕಾರಣ ಇರ ಬಹುದು .ಅದೇ 

ರೀತಿ ನೋವಿನ ಔಷಧಿ ತಿನ್ನುವವರಿಗೆ ಹೊಟ್ಟೆ ನೋವು ಬಂದರೆ ಅದು  ಗ್ಯಾಸ್ಟ್ರಿಕ್ 

ಇರ ಬಹುದು .

  ಕೆಲವು  ವಿವಾಹಿತ ಮಹಿಳೆಯರು  ತಲೆ ನೋವು ಎಂದು ಬರುತ್ತಾರೆ .ಅವರಿಗೆ 

ನಾವು ನಿಮ್ಮ ಗಂಡ ಎಲ್ಲಿ ಇರುವುದು ಎಂದು ಕೇಳುತ್ತೇವೆ .ತಲೆ ನೋವಿಗೂ 

ಗಂಡನಿಗೂ ಎಲ್ಲಿಯ ಸಂಭಂದ ಎಂದು ನೀವು ಕೇಳ ಬಹುದು .ಉಂಡಾಡಿ 

ತಲೆಹರಟೆ ಗಂಡ ತಲೆ ಶೂಲೆಗೆ ಕಾರಣ ಇರ ಬಹುದಾದರೂ  ಗಂಡ ದೂರದ 

ಊರಿನಲ್ಲಿ ಇರುವುದು (ಇದನ್ನು ನೀವು ಬೇಕಾದರೆ ಗಂಡಾಂತರ ಎಂದು ಕರೆಯಿರಿ 

ಗಂಡ  ಹೆಂಡತಿ ನಡುವೆ ದೂರದ ಅಂತರ )ಬಹಳ ಮಂದಿ  ಹೆಂಗಳೆಯರ ತಲೆ 

ನೋವಿಗೆ  ನಿಜಕ್ಕೂ ಕಾರಣ .ಗಲ್ಫ್ ನಾಡಿನಲ್ಲಿ ಏಕಾಂಗಿಯಾಗಿ ನೆಲೆಸಿರುವ 

ಪತಿಯಂದಿರ ಕುಟುಂಬದಲ್ಲಿ  ಕಂಡು ಬರುವ ಕಾಯಿಲೆ .ವೈದ್ಯ ಶಾಸ್ತ್ರದಲ್ಲಿ 

ಇದನ್ನು ಉದ್ವೇಗದ ತಲೆನೋವಿನ  ಗುಂಪಿಗೆ ಸೇರಿಸಿದ್ದಾರೆ .

  ಈ ಪರಿಯಲ್ಲಿ ಚರಿತ್ರೆ ಕೇಳುವಾಗ ನಮ್ಮ ಗಮನ ಮುಖ್ಯ ಕತೆಯಿಂದ ದೂರ 

ಹೋಗುವುದೂ ಇದೆ.ಉದಾಹರಣೆಗೆ ಒಬ್ಬರು ಕಾಲು ನೋವಿಗೆ ಔಷಧಿಗೆಂದು 

ಬಂದ ಅಜ್ಜಿ .ತಾನು ಉಪ್ಪಿನಕಾಯಿಯನ್ನು ತೆಗಯಲು ಸ್ಟೂಲ್ ಇಟ್ಟು ಭರಣಿಗೆ

ಕೈ ಹಾಕುವಷ್ಟರಲ್ಲ್ಲಿ ಜಾರಿ ಬಿದ್ದೆ ಎಂದು ಹೇಳಿದಾಗ ನನಗೆ ಅವರ ಕಾಲು ನೋವು 

ಮರೆತು ಉಪ್ಪಿನ ಕಾಯಿ ಭರಣಿಗೆ ಏನಾಯಿತು ,ಕಡೆಗೆ ಊಟಕ್ಕೆ ಉಪ್ಪಿನ ಕಾಯಿ 

ಸಿಕ್ಕಿತೋ ಎಂಬೆಲ್ಲಾ ಪ್ರಶ್ನೆಗಳು ಉದ್ಭವಿಸುತ್ತವೆ .ಇದೇ ರೀತಿ ಹಾಲು ಕರೆಯಲು 

ಕರುವನ್ನು ಹಸುವಿನ ಬಳಿ ಕೊಂಡು ಹೋಗುವಾಗ  ಹಗ್ಗ ಕಾಲಿಗೆ ಸಿಕ್ಕಿ ಬಿದ್ದೆ  

ಎಂದಾಗ ಕರುವಿಗೆ ಏನಾಯಿತು ? ಹಾಲು ಕರೆದರೇ ಬಿಟ್ಟರೇ ಎಂಬ ಕುತೂಹಲ .


      ನಾಯಿ ಕಚ್ಚಿ  ರಕ್ತ ಸ್ರಾವ ಮತ್ತು ನೋವಿನಿಂದ  ರೋಗಿ ಬಂದಾಗ ನಾಯಿಯ 

ಅರೋಗ್ಯ ಹೇಗಿದೇ? ಎಂದು ಕೇಳಿದರೆ  ರೋಗಿಯು ನಾನು ಇಲ್ಲಿ ನೋವಿಂದ 

 ಸಾಯ ಬಿದ್ದಿರುವಾಗ ಇವರಿಗೆ ನಾಯಿಯ ಆರೋಗ್ಯದ ಚಿಂತೆ .ಅಲ್ಲದೆ ಚುಚ್ಚಿಸಿ  

ಕೊಂಡು ಹೋಗುವಾಗ ನಾಯಿಯನ್ನು ಚೆನ್ನಾಗಿ ಗಮನಿಸಿ ಅದಕ್ಕೆ ಏನಾದರೂ 

ಆದರೆ ಕೂಡಲೇ ಬರುವುದು ಎಂದಾಗ ಅವರ ಸಿಟ್ಟು ಇನ್ನೂ ಏರದಿರುತ್ತದೆಯೇ ?

                       ವೈದ್ಯ ವಿದ್ಯಾರ್ಥಿಗಳು ರೋಗ ಚರಿತ್ರೆ ತೆಗೆದು ಕೊಳ್ಳುವಾಗ 

ಹೀಗೆ ಆಗುವುದುಂಟು ,ಉದಾಹರಣೆಗೆ ಮರದಿಂದ ಬಿದ್ದು ಗಾಯವಾಗಿ ಬಂದವನ 

ಬಳಿ ನಿಮ್ಮ ಮನೆಯಲ್ಲಿ ಯಾರಾದರೂ ಮರದಿಂದ ಬಿದ್ದಿದ್ದಾರೆಯೇ .ಅಥವಾ 

ಹಾವು ಕಡಿದು ಬಂದವರ ಬಳಿ ನಿಮ್ಮ ಮನೆಯಲ್ಲಿ ಹಾವು ಕಚ್ಚಿದ ಇತಿಹಾಸ 

ಇದೆಯೇ  ಇತ್ಯಾದಿ ಕೇಳಿದರೆ ತಪ್ಪಿಲ್ಲದಿದ್ದರೂ  ಅಭಾಸ ವಾಗುವುದು 

ಬಾಲಂಗೋಚಿ : ಮೊನ್ನೆ  ಬಸ್ಸಿನಲ್ಲಿ   ಪುತ್ತೂರಿನಿಂದ ಮಂಗಳೂರಿಗೆ 

 ಪ್ರಯಾಣಿಸುತ್ತಿದ್ದೆ .ನನ್ನ ಮುಂದಿನ ಸೀಟಿನಲ್ಲಿ ಕುಳಿತವರ ಸಂಭಾಷಣೆ .

ನಿಮ್ಮ  ಅತ್ತೆ ಹೇಗಿದ್ದಾರೆ ? 

'ಅವರೋ ಅವರ ಕತೆ ಏನು ಹೇಳುವುದು ,ಯಾವ ಡಾಕ್ಟರಿಗೆ ತೋರಿಸಿದರೂ 

ರೋಗದ  ಮೂಲ ತಿಳಿಯಲಿಲ್ಲ .ಕೊನೆಗೆ ಪುತ್ತೂರಿನಲ್ಲಿ  ಎ ಪಿ ಭಟ್ ಎಂಬವರಿಗೆ 

ತೋರಿಸಿದೆ .ಐದೇ ದಿನದ ಚಿಕಿತ್ಸೆ .

ಏನು ಗುಣವಾಯಿತೋ?

ಇಲ್ಲ ದೇವರ ಪಾದ ಸೇರಿದರು .

ಹೌದಾ ಮಾರಾಯರೇ ನನಗೂ ಅವರ ಅಡ್ರೆಸ್ ಕೊಡಿ ,ನನ್ನ ಅತ್ತೆಯನ್ನು ತೋರಿಸ 

ಬೇಕು .ಅಂದ ಹಾಗೆ ರಶ್ ಇರುತ್ತದೋ .

:ಇಲ್ಲಪ್ಪ ,ಸುಮ್ಮನೆ ಕಂಪ್ಯೂಟರ್ ನಲ್ಲಿ ಕುಟ್ಟುತ್ತಾ ಇರುತ್ತಾರೆ .ಟೋಕನ್ ಏನೂ 

ಬೇಡ .

ಶುಕ್ರವಾರ, ಏಪ್ರಿಲ್ 17, 2015

ಧಾರವಾಡದ ಕೆಲವು ನೆನಪುಗಳು

ಕೊನೆಯ ಮೂರೂ ತಿಂಗಳು ಹೌಸ್ ಸರ್ಜನ್ಸಿ  ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ .

ಅಲ್ಲಿ ಪಿ ಜಿ ಗಳು ಇಲ್ಲ .ಅಸಿಸ್ಟೆಂಟ್ ಸರ್ಜನ್ ಗಳ ನಂತರ ನಾವೇ ಎಲ್ಲ .

ನಮಗೆ ಕೆಲಸ ಕಲಿಯಲು ಅನುಕೂಲ  ಇದರಿಂದ ಅನುಕೂಲ ಆಯಿತು .ನಾನು 

ಆಸ್ಪತ್ರೆಯ ಒಂದು ಖಾಲಿ ಬಾತ್ ರೂಂ ನಲ್ಲಿ ವಾಸ ಮಾಡುತ್ತಿದ್ದೆ .ಇ ಸಿ ಜಿ ಯಂತ್ರ 

ನನ್ನ ಸುಪರ್ದಿಯಲ್ಲಿ .ಆದುದರಿಂದ ನನಗೆ ಇ ಸಿ ಜಿ ಮಾಡಿ ಓದಲು ಅಭ್ಯಾಸ 

ಆಯಿತು .ದಿನ ರಾತ್ರಿ ಆಸ್ಪತ್ರೆಯಲ್ಲಿ ನೆಲೆಸಿ ಕಾಲ್ ತೆಗೆದು ಕೊಳ್ಳುತ್ತಿದ್ದೆ .ಆಗ 

ಕಲಿಯುವ ಉತ್ಸಾಹ ,ಬಡ ರೋಗಿಗಳಿಗೆ ಸಾಂತ್ವನ  ನೀಡುವ ಆದರ್ಶ .ಆಯಾಸ 

ಸುಳಿಯದು .ಮಕ್ಕಳ ವಾರ್ಡಿನಲ್ಲಿ  ಇಂಜೆಕ್ಷನ್ ಕೊಡಲು ರಕ್ತ ನಾಳ ಸಿಗದೇ ಇದ್ದಲ್ಲಿ 

ಕಟ್ ಡೌನ್ ಎಂಬ ಸಣ್ಣ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದೆವು .ಸಣ್ಣ ಸಣ್ಣ  ಎಲುಬು ಮುರಿತ .

ಕೀಲು ತಪ್ಪುವಿಕೆ ನಾವೇ ಸರಿ ಪಡಿಸುವ ಅವಕಾಶ .

  ಹೆರಿಗೆ ಮಾಡಿಸುವುದು ನಾವೇ ,ಏನಾದರೂ ಸಮಸ್ಯೆ ಇದ್ದರೆ ಹಿರಿಯ ವೈದ್ಯರನ್ನು 

ಕರೆಯುತ್ತಿದ್ದೆವು .ಆಗ ಸ್ಕ್ಯಾನ್ ಇರಲಿಲ್ಲ . ಒಮ್ಮೆ ಡೆಲಿವರಿ ಮಾಡಿಸುವಾಗ ಒಂದು 

ಮಗು ಜನನವಾಗಿ ಮಾಸ ಬೀಳಲು ಎದುರು ನೋಡುವಾಗ ಇನ್ನೊಂದು ಮಗುವಿನ

ಆಗಮನ ಆಯಿತು .ತಂದೆ ತಾಯಿಗಳಿಗೆ ಭಾರೀ ಸಂತೋಷ ,ನನಗೆ ಒಂದು ಮೂಟೆ

ಧಾನ್ಯ ತಂದು ಕೊಟ್ಟರು .ಅವರಿಗೆ ರಾಮ ಲಕ್ಷ್ಮಣ ಎಂದು ನನ್ನ ಸಲಹೆ  ಮೇರೆಗೆ 

ಹೆಸರು ಇಟ್ಟರು.ಇನ್ನೊಮ್ಮೆ ಜನಿಸಿದ ಮಗು ಹಾಲು ಕುಡಿದ ಕೂಡಲೇ ಹೊರ 

ಬರುತಿದ್ದು ಕೆಮ್ಮು ಬರುತ್ತಿತ್ತು .ನಾವೇ ಡಾ ಪಾಟೀಲ ಎಂಬ   ರೇಡಿಯಾಲಜಿಸ್ಟ್

ಅವರ ಸಾರಥ್ಯದಲ್ಲಿ  dye ಹಾಕಿ  ಎಕ್ಷರೇ ಮಾಡಿದಾಗ  ಅನ್ನ ನಾಳ ವು  ಅಪೂರ್ಣ 

ವಾಗಿರುವ ಅಂಶ ತಿಳಿದು ಬಂತು .ಮಗುವನ್ನು ಹುಬ್ಬಳ್ಳಿ ಕೆ ಎಂ ಸಿ ಗೆ  ಕಳುಹಿಸಿದೆವು .

ಸಿವಿಲ್ ಆಸ್ಪತ್ರೆಯಲ್ಲಿ  ದಾದಿಯರ  ಟ್ರೇನಿಂಗ ಸ್ಕೂಲ್ ಇದ್ದು ನಾನು  ಅವರಿಗೆ 

ಗೌರವ  ಅಧ್ಯಾಪಕ ಆದೆ .ಇದರಿಂದ ನನಗೆ ಪಾಠ ಮಾಡುವ ಅಭ್ಯಾಸ ಆಯಿತು .

ಅಲ್ಲದೆ  ನರ್ಸ್ ಗಳಿಗೆ  ಆಗಿ ಬರೆದ ಶ್ರೇಷ್ಠ  ಗ್ರಂಥ  ಮಾರ್ಗರೆಟ್  ಮೈಲ್ಸ್ ಅವರ 

ಮಿಡ್ ವೈಫರಿ ಯ ಅಧ್ಯಯನ ಮಾಡುವ ಅವಕಾಶ ಆಯಿತು .ನಾನು ಧಾರವಾಡ 

ಬಿಡುವಾಗ  ನರ್ಸಿಂಗ್ ವಿದ್ಯಾರ್ಥಿನಿಯರು  ನನಗೆ ಭಾವ ಪೂರ್ಣ ವಿಧಾಯ 

ಕೋರಿದರು .

ಸಿವಿಲ್ ಆಸ್ಪತ್ರೆಯಲ್ಲಿ ಡಾ ,ಗಜಾನನ ಗುಡಿಗಾರ್ ಎಂಬ  ಪಿಸಿಶಿಯನ್ ಇದ್ದರು .

ನಾನು ಕಂಡ ಅತಿ ಶ್ರೇಷ್ಠ ವೈದ್ಯರಲ್ಲಿ ಒಬ್ಬರು ,ಕ್ರಮ ಪ್ರಕಾರ ಪರೀಕ್ಷೆ ,ಅಗಾಧ 

ಜ್ಞಾನ. ಮುತ್ತಿನಂತಹ ಕೈಬರಹ ,ನಾನು ಅವರ  ಶಿಷ್ಯ ವೃತ್ತಿ ಸ್ವೀಕರಿಸಿ 

ಬಹಳ ಕಲಿತೆ ಮಾತ್ರವಲ್ಲ  ಮೂರು ತಿಂಗಳು ಅವರ ಮನೆಯಲ್ಲಿ ಊಟ ಉಪಚಾರ 

ಸ್ವೀಕರಿಸಿದೆ .ಅವರ ಪತ್ನಿ ಅಸ್ಪತ್ರೆಯ ಸ್ತ್ರೀ ರೋಗ ತಜ್ಞೆ .ನನ್ನನ್ನು ಸ್ವಂತ 

ತಮ್ಮನಂತೆ ನೋಡಿ ಕೊಂಡರು. ಗುಡಿಗಾರ್ ಅವರು ಕಾರವಾರ ದವರು .ಮೀನು 

ಎಂದರೆ ಪ್ರಾಣ .ನಾನು ಹುಬ್ಬಳ್ಳಿಗೆ ಹೋದಾಗ  ಫಿಷರೀಸ್ ಡಿಪಾರ್ಟ್ಮೆಂಟ್ ನ 

ಅಂಗಡಿಯಿಂದ  ಅವರಿಗೆ ಮೀನು ಖರೀದಿಸಿ ತಂದು ಕೊಡುತ್ತಿದ್ದೆ .ನೋಡಿ ನಾನು 

ಹೇಳಿ ಕೇಳಿ ಬ್ರಾಹ್ಮಣ .ನಾನು ಮಾಡುತ್ತಿದ್ದುದು ಗುರು ಸೇವೆ ಮಾತ್ರ .

     ಸಿವಿಲ್ ಆಸ್ಪತ್ರೆ ಊರಿನ ಹೊರ ಭಾಗದಲ್ಲಿ ಇತ್ತು .ಅಲ್ಲ್ಲಿಗೆ ರಸ್ತೆ ಇದ್ದರೂ 

ಬಸ್ ಸೌಕರ್ಯ ಇರಲಿಲ್ಲ .ಅದಕ್ಕೆ ಒಂದು ಅರ್ಜಿ ಬರೆದು ಹಲವು ರೋಗಿಗಳ 

ಸಹಿ ಹಾಕಿಸಿ ಹುಬ್ಬಳ್ಳಿ ವಿಭಾಗ ಅಧಿಕಾರಿಗಳಿಗೆ ಸಲ್ಲಿಸಿದೆವು .ಈಗ ಅಲ್ಲಿ  ಸಿಟಿ 

ಬಸ್ ಆರಂಭವಾಗಿರಬೇಕು .ಧಾರವಾಡ ದಲ್ಲಿ ಇದ್ದಾಗ ಲೇಖಕ ಶ್ರೀ ಬಸವರಾಜ 

ಕಟ್ಟಿಮನಿ ಆಸ್ಪತ್ರೆಯಲ್ಲಿ ಒಳ ರೋಗಿ ಆಗಿ ಚಿಕಿತ್ಸೆ ಪಡೆಯುತ್ತಿದ್ದರು . ಅವರ 

ಭೇಟಿ ಭಾಗ್ಯ ಸಿಕ್ಕಿತು .ಆಗ ತಾನೇ  ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ಉಪ 

ಕುಲ ಪತಿ ಗಳಾಗಿ ಬಂದಿದ್ದ ಡಾ ನಂಜುಂಡಪ್ಪನವರನ್ನು ಹೊರ ರೋಗಿಯಾಗಿ 

ನೋಡಿದ ನೆನಪು .ಎಂತಹ ಶೇಷ್ಟ ವ್ಯಕ್ತಿಗಳು

ಧಾರವಾಡದಲ್ಲಿ   ವಿದ್ಯಾವರ್ಧಕ ಸಂಘದ  ಕಾರ್ಯಕ್ರಮಗಳಿಗೆ ವಿದ್ಯಾರ್ಥಿಯಾಗಿ

ದ್ದಾಗಲೇ  ಹಾಜರಾಗುತ್ತಿದ್ದ ನಾನು ಅದನ್ನು ಸಾಧ್ಯವಾದಷ್ಟು ಮುಂದು ವರಿಸಿದೆ .

ಅಲ್ಲಿ  ಶೇಷ್ಟ ಬರಹಗಾರರಾದ  ಯು ಅರ್ ಅನಂತ ಮೂರ್ತಿ ,ಲಂಕೇಶ್ ,ಅಡಿಗ 

ಇವರನ್ನು ಕಂಡು ಕೇಳುವ ಅವಕಾಶ .ಆಗ ಚಂಪಾ ಕಾರ್ಯದರ್ಶಿ ,ಅವರ 

ಮೊನಚಾದ ಟ್ರೇಡ್ ಮಾರ್ಕ್ ಪ್ರಶ್ನೆಗಳು .ಬಹಳ ಚೇತೋಹಾರಿ .ಅನಂತ 

ಮೂರ್ತಿ ಯವರನ್ನು  ತುರ್ತುಪರಿಸ್ಥಿತಿಯ ಸಮಯದಲ್ಲಿ ನೀವು ಏಕೆ ಪ್ರತಿಭಟನೆ 

ಮಾಡಲಿಲ್ಲ ಎಂದು ಕೇಳಿದ್ದಕ್ಕೆ ಅವರು ತಾನು ಸಿಗರೆಟ್ ಸೇದಿ ಅದರ ತುಂಡುಗಳನ್ನು  

ಟಪಾಲ್ ಪೆಟ್ಟಿಗೆ ಒಳಗೆ ಹಾಕುತ್ತಿದ್ದ್ದೆಎಂದರು!ಎಂತಹ ಪ್ರತಿಭಟನೆ .ದೊಡ್ಡವರ 



ರೀತಿ .

ಆಸ್ಪತ್ರೆಯ  ನವಜಾತ ಶಿಶು ವಿಭಾಗ ಇನ್ನೂ ಶೈಶವ ಅವಸ್ಥೆಯಲ್ಲಿ  ಇತ್ತು . ಅಲ್ಲಿಗೆ 

ನನ್ನ ಷ್ಟಯಿಪೆಂಡ್ ಹಣದಲ್ಲಿ  ಒಂದು ಹೀಟರ್  ತಂದು ಕೊಟ್ಟು ನನ್ನ ಅಳಿಲ 

ಸೇವೆ  ಮಾಡಿದೆ .

ಹೌಸ್ ಸರ್ಜೆನ್ಸಿ ನೆನಪುಗಳು ೨

ಹೌಸ್ ಸರ್ಜೆನ್ಸಿ ಆರಂಭವಾದ  ದಿನಗಳು.ಗೊತ್ತಿದ್ದುದು ಪರೀಕ್ಷೆ ಪಾಸಾಗಲು  ಬೇಕಾದ  ಕೆಲವು  ವಿಚಾರಗಳು.ಮೆಡಿಸಿನ್ ಪೋಸ್ಟಿಂಗ್ .ಒಂದು ದಿನ ಮಧ್ಯಾಹ್ನ ನಮ್ಮ ಯೂನಿಟ್ ನ ಓ ಪಿ ಮುಗಿಸಿ ಸುಸ್ತಾಗಿ ವಾರ್ಡಿಗೆ ಬಂದು ಕೇಸ್ ಶೀಟ್ ಬರೆಯುತ್ತಿದ್ದೆ . ಆಯಾ ಒಬ್ಬಳು ಕಾಲ್ ಬುಕ್ ಹಿಡಿದು ಕೊಂದು ಓಡಿ ಬಂದಳು.ನಾಲ್ಕನೇ ಯೂನಿಟ್ ನ  ಒಬ್ಬ ರೋಗಿ ಸೀರಿಯಸ್ ಕೂಡಲೇ ಬರುವುದು .ಎಂಬ ವಾರೆಂಟ್ .ಹತ್ತಿರ ಪಿ ಜಿ ಗಳಾಗಲೀ ಅಧ್ಯಾ  ಪಕ ರಾಗಲಿ  ಯಾರೂ ಇರಲಿಲ್ಲ .ಏನೂ ಮಾಡುವಂತಿಲ್ಲ ,ಯುದ್ಧಕ್ಕೆ ಹೋರಟ ಉತ್ತರ ಕುಮಾರನಂತೆ ಸ್ತೆತೋಸ್ಕಾಪ್ ತೆಗೆದು ಕೊಂಡು ಓಡಿದೆ .ರೋಗಿ ಉಸಿರಾಡಲು ಆಗದೆ ಚಡಪಡಿಸುತ್ತಿದ್ದ  . ಬೇರೆ ಯೂನಿಟ್ ನ ಕೇಸ್ ನನಗೆ ಹೊಸತು .ಕೇಸ್ ಶೀಟ್ ನೋಡಿದೆ .ಅರ್ಥ ಆಗಲಿಲ್ಲ .ಪರೀಕ್ಷೆಗೆ ಓದಿದ ಸಾವಿರಾರು ರೋಗಗಳು ಕಣ್ಮುಂದೆ 
ಬಂದವು .ರೋಗಿಯ ಪರೀಕ್ಷೆ ಹೇಗೆ ಅರ೦ಬಿಸುದು ?ಕ್ರಮ ಪ್ರಕಾರ  ನೋಡು ,ಮುಟ್ಟು .ತಟ್ಟು,ಮತ್ತು ಕೇಳು (inspection,palpation ,percussion.ascultation) ಕ್ರಮ ವೋ ,ಹಾಗಾದರೆ ಯಾವ ಅಂಗ ದಿಂದ ಆರಂಭಿಸುವುದು ಇತ್ಯಾದಿ ಎಲ್ಲಾ ತಲೆಯಲ್ಲಿ  ಓಡುತ್ತಿದ್ದಂತೆ ರೋಗಿ  ಸ್ಥಿತಿ ನಿಮಿಷ 
ನಿಮಿಷಕ್ಕೆ  ಗ೦ಭೀರವಾಗುತ್ತಿತ್ತು . ರೋಗಿಗಳ ಬಂಧುಗಳು ,ಸ್ಟಾಫ್ ನರ್ಸ್ ನನ್ನನ್ನೇ  ನೋಡುತ್ತಿದ್ದರು .ಆಗ ಈಗಿನಂತೆ ಮೊಬೈಲ್ ಫೋನ್ ಇರಲಿಲ್ಲ .ಇದ್ದರೆ ಪಿ ಜಿ ಗಾದರೂ ಕೇಳ ಬಹುದಿತ್ತು .ನಾನು ಏನು ಮಾಡಿದೆನೋ ಏನು ಕೊಟ್ಟೆನೋ ನನ್ನ 
ಕಣ್ಣೆದುರೇ ಆತ ಕೊನೆಯುಸಿರು ಎಳೆದ .ಎಂ ಬಿ ಬಿ ಎಸ ಪಾಸಾಗಿ ಬೀಗುತ್ತಿದ್ದ 
ನನಗೆ  ನನ್ನ ಭಂಡವಾಳದ ಅರಿವಾಯಿತು .ಆ ಯೂನಿಟ್ ನ  ಪ್ರೊಫೆಸರ್ ನನ್ನನ್ನು 
ಕರೆದು ಸಹಸ್ರನಾಮ ಮಾಡುವರು ಎಂದು ಕೊಂಡು ಡೆತ್ certify ಮಾಡಿ ಹೋದೆ .
ಆಮೇಲೆ ಯಾರೂ ಈ  ವಿಷಯ ನನ್ನಲ್ಲಿ ಕೇಳಲಿಲ್ಲ .ಕ್ರಮೇಣ ಇಂತಹ ತುರ್ತುಪರಿಸ್ಥಿತಿಯನ್ನು ನಿಭಾಯಿಸುವ ಅನುಭವ ಆಯಿತೆನ್ನಿ .
  ಡಾ. ಎಸ ಏನ್ ಕೌಲ್ ಗುಡ್ ಬಗ್ಗೆ ನನ್ನ ಬ್ಲಾಗ್ ನಲ್ಲಿ ಮೊದಲೇ ಬರೆದಿರುವೆನು .ನನ್ನ ಪೋಸ್ಟಿಂಗ್ ಅವರ ಯೂನಿಟ್ ನಲ್ಲಿ .ಅವರು ಭಾವಜೀವಿ .ಬೇಗ ಕೋಪ ,ಅಷ್ಟೇ ಬೇಗ ಶಾಂತ .ರೋಗಿಯ ಗಂಡಂದಿರು ಪತ್ನಿಯ ಬಗ್ಗೆ ಅನಾಸ್ತೆ ತೋರಿದರೆ ಎರಡು ಬಿಗಿದದ್ದೂ ,ತಾವೇ ರೋಗಿಗಳಿಗೆ ರಕ್ತ ಕೊಟ್ಟದ್ದೂ ಇದೆ. ಪಿ ಜಿ ಗಳ ಸಣ್ಣ ಸಣ್ಣ ತಪ್ಪುಗಳಿಗೆ  ದೊಡ್ಡ ದನಿಯಲ್ಲಿ ಬಯ್ಯುವರು .ಒಂದು ದಿನ ಪಿ ಜಿ ಒಬ್ಬಾಕೆ ಡಿ ಅಂಡ್ ಸಿ ಮಾಡುವಾಗ ಗರ್ಭಕೋಶ ತೂತು ಆಯಿತು .ಹೆದರಿ ಪ್ರೊಫೆಸರ್ ಗೆ ಹೇಳಿದಾಗ 
ಕೂಲಾಗಿ ಬಂದು ಧೈರ್ಯ ಹೇಳಿ ಅದನ್ನು ಸರಿ ಪಡಿಸಿ ಕೊಟ್ಟರು .ಎಂತಹ ಸರ್ಜನ್! 
 ಓ ಟಿ ಯಲ್ಲಿ ಅವರಿಗೆ ಸಹಾಯಕನಾಗಿ ಕೆಲಸ ಮಾಡುವಾಗ ಎಂತಹ ಕ್ಲಿಷ್ಟ ಶಸ್ತ್ರಕ್ರಿಯೆಗಲೂ ಮಕ್ಕಳ ಆಟದಂತೆ ತೋರುತ್ತಿದ್ದವು .
 ಹೆರಿಗೆ ವಾರ್ಡ್ ನಲ್ಲಿ ಕೆಲವು ಅನಾಥ ಮಕ್ಕಳು ಇದ್ದುವು .ಅವರನ್ನು ವಾರ್ಡಿನ ಸ್ಟಾಫ್  ತಮ್ಮ ಮಕ್ಕಳಂತೆ ಮುದ್ದಾಗಿ ಸಾಕುತ್ತಿದ್ದರು .ಅವರ ಹುಟ್ಟಿದ ಹಬ್ಬಕ್ಕ್ಕೆ ಸ್ವಂತ ಹಣ ಹಾಕಿ ಡ್ರೆಸ್ ಸಿಹಿ ತಿಂಡಿ ತರುತ್ತಿದ್ದರು.ಮಕ್ಕಳಿಲ್ಲದವರು ದತ್ತು ತೆಗೆದು ಕೊಂದು ಹೋದ  ಮಕ್ಕಳು ಅನೇಕರು ಇಂದು ದೇಶ ವಿದೆಶಗಳಲ್ಲಿ ಸುಖ ವಾಗಿ ಜೀವಿಸುತ್ತಿರ ಬಹುದು .ಅವರಿಗೆ ಈ ಅಮ್ಮಂದಿರ ತ್ಯಾಗ ಸೇವೆ ಯ ಅರಿವು ಇರದು .


    ಮಕ್ಕಳ ವಾರ್ಡಿನಲ್ಲಿಯೂ ಕೆಲವು ಮಕ್ಕಳು ಗುಣಮುಖವಾಗದ ಧೀರ್ಘಕಾಲದ 
ಕಾಯಿಲೆ (ಉದಾ ಮಕ್ಕಳ ಸಕ್ಕರೆ ಕಾಯಿಲೆ .ಇದಕ್ಕೆ ಇನ್ಸುಲಿನ್ ದಿನಾಲೂ ಚುಚ್ಚಬೇಕು .ಹಳ್ಳಿಯಲ್ಲಿ ದಿನಾಲೂ ಇಂಜೆಕ್ಷನ್ ತೆಗೆದು ಕೊಳ್ಳುವುದು ಕಷ್ಟ .ಅಲ್ಲದೆ ಹಣ ದ ಸಮಸ್ಯೆ ) ಯಿಂದ ಬಳಲುವ  ಮಕ್ಕಳು ಇದ್ದರು .ಆಗ ಡಾ ಮಾಲತಿ ಯಶವಂತ್ ಎಂಬವರು ಮಕ್ಕಳ ವಿಭಾಗದ ಮುಖ್ಯಸ್ಥರು .ಅವರ ಅನುಮತಿ ಪಡೆದು 
ಅಂತಹ ಮಕ್ಕಳಿಗೆ ಬಿಡುವಿನ ವೇಳೆಯಲ್ಲಿ ಅಕ್ಷರಾಭ್ಯಾಸ  ಮಾಡ ತೊಡಗಿದೆವು .
ನನ್ನ ಜೊತೆ ಡಾ ಸಂಜೀವ ಕುಲಕರ್ಣಿ (ಈಗ ಧಾರವಾಡದ ಪ್ರಸಿದ್ಧ ಸ್ತ್ರೀ ರೋಗ ತಜ್ಞರು ),ಡಾ ಇಕ್ಬಾಲ್ ಮನಿಯಾರ್ ,ಮತ್ತು ಕೆಲವು ಸ್ನೇಹಿತರು ಇದ್ದ ನೆನಪು .ಕಾರ್ಯಕ್ರಮ ಚೆನ್ನಾಗಿ ನಡೆಯಿತು .ಆಗ ವಿಭಾಗದಲ್ಲಿ ಇದ್ದ  ಇನ್ನೊಬ್ಬ ಪ್ರಾಧ್ಯಾಪಕರು ನಮ್ಮನ್ನು ಅಪಹಾಸ್ಯ ಮಾಡುತ್ತಿದರು ,ಅವರು ಈ ಮಕ್ಕಳನ್ನು ತಮ್ಮ ಮನೆಕೆಲಸಕ್ಕೆ  ಉಪಯೋಗಿಸುತ್ತಿದ್ದರಲ್ಲದೆ  ಹಾಗೆ ಮಾಡದಿದ್ದರೆ  ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವುದಾಗಿ  ಧಮಕಿ ಹಾಕುತ್ತಿದ್ದರು .ನಮ್ಮ  ಕ್ಲಾಸ್ ಗಳಿಂದ ಅವರ ಮನೆ ಕೆಲಸಕ್ಕೆ ಸ್ವಲ್ಪ ತೊಂದರೆ ಆಯಿತು ಎಂದು ಕಾಣುತ್ತದೆ ,ಇದೇ ವ್ಯಕ್ತಿ ರೇಡಿಯೋ ,ಪತ್ರಿಕೆಯವರನ್ನು ನಾವು ಈ ಮಕ್ಕಳಿಂದ ಏರ್ಪಡಿಸಿದ್ದ ಮಕ್ಕಳ ದನ  ಕಾರ್ಯಕ್ರಮಕ್ಕೆ ಕರೆಸಿ ತಮ್ಮದೇ ಕಾರ್ಯಕ್ರಮ ವೆಂದು ಬಿಂಬಿಸಿದರು .ಈ ವ್ಯಕ್ತಿಯ ಪತ್ನಿ ಕೂಡ ನಮ್ಮ ಪ್ರಾಧ್ಯಾಪಕರಾಗಿದ್ದು ತುಂಬಾ ಒಳ್ಳೆಯವರು.

                    
                                                                    
 ಇದು ಡಾ ಮಾಲತಿ ಯಶವಂತ್ ಅವರು ನನಗೆ ಕೊಡಮಾಡಿದ  ಸರ್ಟಿಫಿಕೇಟ್ .


ಸರ್ಜರಿ ವಾರ್ಡ್ ನಲ್ಲಿ  ಬೆಳಿಗ್ಗೆ ಸಾಲಾಗಿ ಡ್ರೆಸ್ಸಿಂಗ್ ಕೆಲಸ .   ದ್ರೆಸ್ಸ್ಸಿಂಗ್ ಟ್ರೇ ಹಿಡಿದು ಒಬ್ಬ ಸಹಾಯಕ .ಅದರಲ್ಲಿ dettol  ದ್ರಾವಣ ದ  ಒಂದು ಪಾತ್ರೆ . ಗಾಯ ತೊಳೆದು ಡ್ರೆಸ್ಸಿಂಗ್ ಬದಲಿಸಿ   ಕೈ ದೆತ್ತೊಲ್ ದ್ರಾವಣದಲ್ಲಿ  ಅದ್ದಿ ಶುಚಿ ಮಾಡುವುದು .ಆಮೇಲೆ ಇಂಜೆಕ್ಷನ್ ,ನಂತರ  ರೌಂಡ್ಸ್ ,ಇದರಲ್ಲಿ ಒಂದು  ಹಯರಾರ್ಕಿ ಇದೆ .ಪ್ರೊಫೆಸರ್  ನಂತರ ಅಸಿಸ್ಟೆಂಟ್ ಸ್,ಮತ್ತೆ ಪಿ ಜಿ ,ಲಾಸ್ಟ್ ಇಂಟರ್ನ್ .ಕೆಲಸ ಮಾಡಲು ಇಂಟರ್ನ್  ಬೈಗಳು ತಿನ್ನಲು ಇಂಟರ್ನ್ ಶ್ರೇಯಸ್ ಮಾತ್ರ ಹಿರಿಯರಿಗೆ .
ನಮ್ಮ ಸರ್ಜರಿ ಹೆಡ್ ಡಾ ಎಸ ಅರ್ ಕೌಲ್ ಗುಡ್ .ಮಿತ ಭಾಷಿ .ಮತ್ತು ಸಜ್ಜನ .ಒಳ್ಳೆಯ ಪ್ರಾಧ್ಯಾಪಕ ಮತ್ತು ಸರ್ಜನ್ .



ಗುರುವಾರ, ಏಪ್ರಿಲ್ 16, 2015

ಕೆ ಎಂ ಸಿ ಹೌಸ್ ಸರ್ಜನ್ ಸಿ ನೆನಪುಗಳು

ಕೆ ಎಂ ಸಿ ಹುಬ್ಬಳ್ಳಿ ಯ ಇಂಟರ್ನ್ ಶಿಪ್ ದಿನಗಳು .ಮೆಡಿಕಲ್ ಓ ಪಿ ಡಿ ಯಾವತ್ತೂ 

ಭಾರೀ ರಶ್ .ಕೊನೆ ಕೊನೆಗೆ ಬಂದವರನ್ನು ಸರಿಯಾಗಿ ಪರೀಕ್ಷಿಸಲೂ ಸುಸ್ತು .

ಅದ್ದರಿಂದ ಸ್ತೆತೋಸ್ಕಾಪ್  ಎದೆಗೆ ಮುಟ್ಟಿಸಿ  ಬಿ ಕಾಂಪ್ಲೆಕ್ಸ್ ಇಂಜೆಕ್ಷನ್ ಬರೆದು 

ಸಾಗ ಹಾಕುವುದು . ಕೆಲವರು ಗಂಟು ನೋವು ಎಂದು ಬರುವರು .ಕೂಡಲೇ 

ಓ ಪಿ ಹಾಳೆಯಲ್ಲಿ ? ರುಮಾಟಿಕ್ ಫೀವರ್? ಬರೆದು ರಕ್ತ  ಪರೀಕ್ಷೆ  ಮಾಡಿ ಬರ್ರೀ 

ಎಂದು ಕಳುಹಿಸುತ್ತಿದ್ದೆವು. ಮರು ದಿನ  ಅದೇ ವ್ಯಕ್ತಿ  ಪೇಟೆ ಕೆಲಸ ಎಲ್ಲಾ ಮುಗಿಸಿ 

ಮಧ್ಯಾಹ್ನ  ಬಂದಾಗ ಬೇರೆ ಯೂನಿಟ್ ನ ಡಾಕ್ಟರ್ಸ್ .ಅವನ ಓ ಪಿ ಹಾಳೆ ನೋಡಿ 

ಏನೂ ಪರೀಕ್ಷೆ ಮಾಡದೆಯೇ  ನೋನ್ ಕೇಸ್ ಆಫ್ ರುಮಾಟಿಕ್  ಫಿವರ್  ಎಂದು 

ಬರೆದು  ಪೆನಿಸಿಲಿನ್ ಇಂಜೆಕ್ಷನ್ ತೆಗೆದು ಕೊಳ್ಳಲು ಇಂಜೆಕ್ಷನ್ ರೂಂ ಗೆ  ಸಾಗ 

ಹಾಕುತ್ತಿದ್ದರು .ಮುಂದೊಮ್ಮೆ ಆತ ಬಂದಾಗ  ಅವನ ಓ ಪಿ ಹಾಳೆಯಲ್ಲಿ  

ಓಲ್ಡ್ ಕೇಸ್ ಆಫ್ ರುಮಾಟಿಕ್ ಫೀವರ್ ಎಂದು ಬರೆಯುವರು .ಸುಮ್ಮನೆ ಮೈ ಕೈ 

ನೋವು ಇದ್ದವರು  ರುಮ್ಮಾಟಿಕ್ ಜ್ವರ ರೋಗಿಗಳಾಗುವರು .

   ಸರ್ಜರಿ  ಓ ಪಿ ಡಿ ಯಲ್ಲಿ  ಗಾಯಗಳಿಗೆ  ಡ್ರೆಸ್ಸಿಂಗ್ ಮಾಡಿಸಲು ಬಹಳ ಮಂದಿ 

ಬರುತ್ತಾರೆ ,ಅದರಲ್ಲಿ    ಅಲ್ಸರ್ - ಕ್ಲೀನ್ ಅಂಡ್ ಡ್ರೆಸ್ ಎಂದು ಗೀಚಿ  ಡ್ರೆಸ್ಸಿಂಗ್ 

ರೂಮಿಗೆ ಕಳು ಹಿಸುವುದು . ಒಮ್ಮೆ  ಪೆಪ್ತಿಕ್ ಅಲ್ಸರ್ (ಹೊಟ್ಟೆ ಹುಣ್ಣು ) ರೋಗಿಯ 


ಹಾಳೆಯಲ್ಲಿ  ಪೆಪ್ತಿಕ್  ಶಬ್ದ ಬಿಟ್ಟು ಹೋಗಿ  ವೈದ್ಯರೊಬ್ಬರು   ಅಲ್ಸರ್ - ಕ್ಲೀನ್ ಅಂಡ್ 

ಡ್ರೆಸ್ ಎಂದು  ಕಳುಸಿದ್ದೂ ಇದೆ .


ವಾರ್ಡ್ ನಲ್ಲಿ   ಓ ಡಿ ಎಂದರೆ  ದಿನಕ್ಕೆ ಒಂದು ಭಾರಿ   ಕೊಡುವ ಚುಚ್ಚು ಮದ್ದು 

ನಾವು ಹೌಸ್ ಸರ್ಜನ್ ಗಳು ಮತ್ತು  ಉಳಿದ ಇಂಜೆಕ್ಷನ್  ವಾರ್ಡ್ ಸಿಸ್ಟರ್ಸ್ 

ಕೊಡಬೇಕಿತ್ತು .ಅದಕ್ಕೆ  ಕೆಲವರು ಮರಿ ವೈದ್ಯರು ಅಡ್ಮಿಟ್ ಮಾಡುವಾಗ  

ಎಲ್ಲಾ ಇಂಜೆಕ್ಷನ್ ಗಳನ್ನೂ  ಬಿ ಡಿ(ದಿನಕ್ಕೆ ಎರಡು ಬಾರಿ) ಅಥವಾ ಟಿ ಐಡಿ ಎಂದು 

ಬರೆಯುತ್ತಿದ್ದರು.

 ಐಸೊಲೆಶನ್  ವಾರ್ಡ್ ಎಂಬುದು ಗಾಳಿ ಬೆಳಕು ಇಲ್ಲದ   ನೆಲ ಮಾಳಿಗೆಯಲ್ಲಿ 

ಇತ್ತು .ಇಲ್ಲಿ ಹಲವು ಸಾರಿ ರೋಗಿ ಮೃತ ಪಟ್ಟು  ಬಹಳ ಸಮಯದ ನಂತರ 

ರೋಗಿ  ಸೀರಿಯಸ್  ಮೇಲುಸಿರು ಬಿಡುತ್ತಿದ್ದಾರೆ ಎಂದು ನಮಗೆ ಕಾಲ್ ಬರುತ್ತಿತ್ತು 

ನಾವು ಹೋಗಿ ನೋಡಿದರೆ ರೋಗಿಗೆ ರೈಗರ್ ಮಾರ್ಟಿಸ್ ಎಂದರೆ  ಸತ್ತು  ಹಲವು 

ಗಂಟೆಗಳ ತರುವಾಯ ಆಗುವ ಮಾಂಸ ಖಂಡ ಗಳ  ಸೆಟೆತ ಆಗಿರುವುದು .ಇಲ್ಲಿ 

ಕೆಲವೊಮ್ಮೆ  ದೊಡ್ಡ ಸಿರಿಂಜ್ ನಲ್ಲಿ ಇಂಜೆಕ್ಷನ್  ಲೋಡ್ ಮಾಡಿ  ಒಬ್ಬೊಬ್ಬರಿಗೆ 

ಒಂದೊಂದು ಸಿ ಸಿ ಕೊಡುತ್ತಿದ್ದವರೂ ಇಲ್ಲದಿಲ್ಲ .ಆದರೂ ರೋಗಿಗಳು ಬದುಕಿ 

ಗುಣಮುಖರಾದರು .

ಹೌಸ್ ಸರ್ಜನ್ ಗಳ ಕೆಲಸ  ತುಂಬಿದ ಮನೆಯ ಗೃಹಿಣಿಯ  ಕೆಲಸಂತೆ 

ಮುಗಿಯುವುದು ಎಂದು ಇರಲಿಲ್ಲ .ರೋಗಿಯ  ರಕ್ತ ಲ್ಯಾಬ್ ಗೆ ಒಯ್ಯುವುದು 

ಬ್ಲಡ್ ಬ್ಯಾಂಕ್ ನಲ್ಲಿ  ರಕ್ತ ಬೇಡುವುದು ,ಕ್ರಾಸ್ ಮ್ಯಾಚಿಂಗ್ ಮಾಡುವುದು 

ಕ್ಷ ರೇ ರೂಂ ನಲ್ಲಿ  ಸ್ಕ್ರೀನಿಂಗ್ (ಲೈವ್ ಎಕ್ಷ ರೇ ) ಏನು ಉಂಟು ಏನು ಇಲ್ಲಾ .

ಆಸ್ಪತ್ರೆಯ ತಳ ಮಹಡಿಯಲ್ಲಿ ಒಂದು  ಸಾರ್ವಜನಿಕ ಲೈಬ್ರರಿ  ಇತ್ತು .ಬಾತ್ 

ರೂಮನ್ನ್ನು  ವಾಚನಾಲಯ  ಆಗಿ  ಪರಿವರ್ತಿಸಿದ್ದರು ,.ನನಗೆ ಅದು ಬಹಳ 

ಅನುಕೂಲ ಆಯಿತು .

ನಾವು ಇಂಟರ್ನ್ ಆಗಿದ್ದಾಗ ನರ ಗುಂದ ರೈತ ಬಂಡಾಯ ಆಯಿತು .ಉದ್ರಿಕ್ತ 

ರೈತರು ಸಿಕ್ಕಿದ ಪೋಲಿಸ್ ,ರೆವೆನ್ಯೂ ಅಧಿಕಾರಿಗಳನ್ನೆಲ್ಲ  ತದುಕಿ ಬಾವಿ ಕೆರೆಗಳಿಗೆ 

ಎಸೆದರು .ಆಸ್ಪತ್ರೆಯಲ್ಲಿ ಪೋಲಿಸಿನವರ  ತಲೆ ಬುರುಡೆ  ಓಪನ್ ಮಾಡಿದ್ದೇ

ಮಾಡಿದ್ದು .ಆಗ  ಸಿ ಟಿ ಸ್ಕ್ಯಾನ್ ಇರಲಿಲ್ಲ .ತಲೆ ಬುರುಡೆ ಓಪನ್ ಮಾಡುವ 

ಯಂತ್ರ ಗಳೂ ಇಲ್ಲ್ಲ ,ಉಳಿ ,ಮತ್ತು ಗರಗಸದಂತ  ಉಪಕರಣ ಬಳಸಿ ದಿನ ರಾತ್ರಿ 

ದುಡಿದೆವು . ಮೂಳೆ ತಜ್ಞರಿಗೂ ಬಿಡುವಿಲ್ಲ .

ಮಕ್ಕಳ ಸರ್ಜರಿ ಎಂಬ ವಿಭಾಗ ,ಇಲ್ಲಿ ಸಂಕೀರ್ಣ ಶಸ್ತ್ರ ಚಿಕಿತ್ಸೆಗಳು .ಆಪರೇಷನ್ 

ಆದ ಬಳಿಕ ನಾವು ಮಗುವಿನ  ಮೂತ್ರವನ್ನು ಅಳೆಯುವುದು ,ಆಗಾಗ ರಕ್ತ ದ 

ಲವಣಗಳ ಪರೀಕ್ಷೆಗಾಗಿ  ಲಾಬ್ ಗೆ ಓಡುವುದು .ಇಸ್ಟೆಲ್ಲಾ ಆದರೂ  ಬಹಳಷ್ಟು 

ಮಕ್ಕಳು ಸಾವನ್ನು ಆಪ್ಪುತ್ತಿದ್ದವು .ಆಗ ಆಪರೇಷನ್ ಮಾಡಿದ ಸರ್ಜನ್ ನಮ್ಮನ್ನು

ಬೈಯ್ಯುತ್ತಿದ್ದರು ,

ಇದನ್ನೆಲ್ಲಾ ಓದಿ ಮೆಡಿಕಲ್ ಕಾಲೇಜ್ ಆಸ್ಪತ್ರೆ ಚಿಕಿತ್ಸೆ ಅಪಾಯಕಾರಿ ಎಂದು 

ತಿಳಿಯಬೇಡಿ.ಆಗಿನ್ನೂ ಕೆ ಎಂ ಸಿ ಗೆ ಒಳ್ಳೆಯ ಹೆಸರು ಮತ್ತು  ಸೇವಾ ಮನೋಭಾವ 

ದ  ಅಧ್ಯಾಪಕ ವೃಂದ ಇತ್ತು .ಒಳ್ಳೆಯ ನರ್ಸಿಂಗ್ ಸ್ಟಾಫ್ ಇದ್ದರು .ಖ್ಯಾತ 

 ವೈದ್ಯ ಲೇಖಕ ಅತುಲ್ ಘವಂಡೆ ಅವರ ಪ್ರಸಿದ್ದ ಕೃತಿ  ಕಾಮ್ಪ್ಲಿಕೆಶನ್  ನಲ್ಲಿ 

ಕಲಿಯುವ ವೈದ್ಯರು ಇರುವ ಅಸ್ಪತ್ರೆಯ ಮರಣ ಪ್ರಮಾಣ  ಕೇವಲ ನುರಿತ 

ವೈದ್ಯರು ಸೇವೆ ಯಲ್ಲಿರುವ ಅಸ್ಪತ್ರೆಗಿಂತ ಕಮ್ಮಿ ಎಂದು ಕಂಡು ಹಿಡಿದಿರುವ 

ಅಧ್ಯಯನ  ವನ್ನು ಉಲ್ಲೇಖಿಸಿದ್ದಾರೆ .









ಹುಬ್ಬಳ್ಳಿ ನೆನಪುಗಳು 9

                  ಹುಬ್ಬಳ್ಳಿ ನೆನಪುಗಳು 9
 
ಅಜ್ಞಾನ ತಿಮಿರಾಂಧಸ್ಯ  ಜ್ನಾನಾಂಜನ ಶಲಾಕಾಯ

ಚಾಕ್ಷುರುನ್ಮಿಲೀತಮ್  ಯೇನ ತಸ್ಮೈ ಶ್ರೀ ಗುರುವೇ ನಮಃ
 ನಮಗೆ  ಸರ್ಜರಿ ವಿಭಾಗದಲ್ಲಿ ಕೆ ಜಿ ನಾಯಕ್ ಎಂಬ ಪ್ರಾಧ್ಯಾಪಕರು ಇದ್ದರು.ಅವರ ಪತ್ನಿ ಶೀಲಾ ನಾಯಕ್ ಅನಾಟಮಿ ಪ್ರೊಫೆಸರ್ .ಇಬ್ಬರೂ ನಿವೃತ್ತಿ ನಂತರ ಸುಳ್ಯ ದ ಕೆ ವಿ ಜಿ‌ ಮೆಡಿಕಲ್ ಕಾಲೇಜ್ ನಲ್ಲಿ  ಕೆಲಸ ಮಾಡುತ್ತಿದ್ದರು.ಕೆ  ಜಿ‌ ನಾಯಕ್ ಅವರ ಒಂದು ಪಾದ ಸ್ವಲ್ಪ ಊನ ಆಗಿದ್ದರೂ ಬಹಳ ಕ್ರಿಯಾಶೀಲ .ಟೆನ್ನಿಸ್ ಕೂಡಾ ಆಡುತ್ತಿದ್ದರು . ನಾನು ವಿದ್ಯಾರ್ಥಿಯಾಗಿ ಮತ್ತು ಇಂಟರ್ನ್ ಆಗಿ ಅವರ (ಪ್ರೊ ಕೌಲ್ಗುಡ್ ಯೂನಿಟ್ )ಯೂನಿಟ್ ನಲ್ಲಿಯೇ ಇದ್ದೆ.ಅವರಿಗೆ ಕಲಿಸುವುದು ಅಚ್ಚು ಮೆಚ್ಚು .ಮಂಗಳೂರು ಕನ್ನಡದಲ್ಲಿ ಬೈಯ್ಯುವರು (ಪ್ರೀತಿಯಿಂದ ).ನನ್ನ ಉತ್ತರ ಅವರಿಗೆ ಸಮಾಧಾನ ಆಗದಿದ್ದರೆ 'ಏನಾ ಭಟ್ ಬಾಯಿಗೆ ಬಂದ ಹಾಗೆ ಏನಾದರೂ ಹೇಳುತ್ತಿ ,ಸರಿಯಾಗಿ ಓದುವುದಿಲ್ಲ," ನಮ್ಮ ಬ್ಯಾಚ್ ನಲ್ಲಿ ಇದ್ದ ಭಗವಾನ್ ಸಿಂಗ್ ಎಂಬ ಸರ್ದಾರ್ ನನ್ನು ಅವರು ಸಿಂಗು ಎಂದು ಕರೆಯುವರು .ವಾಟ್ ಸಿಂಗು ವಾಟ್ ಈಸ್ ಯುವರ್ ಫೈಂಡಿಂಗ್ ?ಇತ್ಯಾದಿ .ಪರೀಕ್ಷೆ ಗೆ ಮೊದಲು ಒಂದು ಸ್ಪೆಷಲ್ ಕ್ಲಾಸ್ ಸರಣಿ ತೆಗೆದು ಕೊಳ್ಳುವರು .ಅವರ ಹಿಂದಿನ ಶಿಷ್ಯ ಮತ್ತು ಈಗಿನ ಸಹೋದ್ಯೋಗಿ ಡಾ ಗಿರಿ ಗೌಡ ಕೂಡಾ ತೆಗೆದುಕೊಳ್ಳುವರು .ಹಾಗೆ ಶಸ್ತ್ರ ಚಿಕಿತ್ಸಾ ವಿಷಯ ನಮಗೆ ಕಳೆದ ಬಾಳೆಯ ಹಣ್ಣಿನಂದದಿ ,ಸುಲಿದ ಚಿಗುರಿನ ಕಬ್ಬಿನಂದದಿ ಆಗಿ ಹೋಯಿತು .




. ಗಿರಿ ಗೌಡರು ಅತೀ ಸರಳ ಆದರೆ ಜನಪ್ರಿಯ ಮತ್ತು ಅಧ್ಯಯನ ಶೀಲ ಗುರುಗಳು
ಅವರು ತರಗತಿ ಆರಂಭಿಸುವ ಮೊದಲು ಕಣ್ಣು ಮುಚ್ಚಿ  ತಮ್ಮ ಗುರುಗಳಾದ
ಡಾ ಅರ್ ಎಚ್ ಏನ್ ಶೆಣಯ್ ಮತ್ತು ,ಡಾ ಕೆ ಜಿ ನಾಯಕ್  ರವನ್ನು  ವಂದಿಸಿ 
ತರಗತಿ ಆರಂಭಿಸುತ್ತಿದ್ದರು .

ಗಿರಿ ಗೌಡರು ಉತ್ತಮ ಅಧ್ಯಾಪಕ ರಾದರೂ  ಒಳ್ಳೆಯ ಶಸ್ತ್ರ ಚಿಕಿತ್ಸಾ 
ನಿಪುಣರಾಗಿರಲಿಲ್ಲ ,ಅವರಿಗೆ ಅನಾರೋಗ್ಯದಿಂದ ಸ್ವಲ್ಪ ಕೈ ನಡುಕ ಇತ್ತು .
ಸ್ತನದ ಗಡ್ಡೆಗಳ ಬಗ್ಗೆ  ಪಾಠ ಆರಂಭಿಸುವಾಗ ಅವರು  'ಈ ಅಂಗವು ಶಿಶು , ಕವಿ 
ಪ್ರೇಮಿಗಳಿಗೆ ಅಪ್ಯಾಯಮಾನವಾಗಿ ಇರುವಂತೆ ಕ್ಯಾನ್ಸರ್ ರೋಗಕ್ಕೂ '
ಎನ್ನುತ್ತಿದ್ದರು . ಪರೀಕ್ಷೆಯಲ್ಲಿ ಯಾವುದೊ  ಒಂದು  ವಿಷಯ ರೋಗಿಯನ್ನು 
ಪರೀಕ್ಷಿಸುವಾಗ ಮರೆತು ಹೋದರೆ ಏನಾಗುವುದು ? ಎಂದು ಕೇಳುವರು ,ನಾವು 
ಹೆದರಿ ಉತ್ತರ ನಿರೀಕ್ಷಿಸುತ್ತಿರುವಾಗ  ನಿರುಮ್ಮಳವಾಗಿ   ಏನೂ ಸಂಭವಿಸದು  
ಎನ್ನುವರು .ಅದು ಅವರು ವಿಶ್ವಾಸ ಹುಟ್ಟಿಸುತ್ತಿದ್ದ ರೀತಿ .

   ಅಲ್ಪಾಯುವಿನಲ್ಲಿ  ತೀರಿ ಕೊಂಡರೂ  ವಿದ್ಯಾರ್ಥಿಗಳ ಹೃದಯ ದಲ್ಲಿ  ಜ್ಞಾನ 
ರೂಪಿಯಾಗಿ ನೆಲೆಸಿದ್ದಾರೆ .ನಮ್ಮ ಶರೀರದಲ್ಲಿ ತಂದೆ ತಾಯಿಯರ ರಕ್ತ , ಇಂತಹ ಗುರು ವರೇಣ್ಯರ ಜ್ಞಾನ ವಾಹಿನಿ  ಹರಿದಾಡುತ್ತಿದೆ.ನಮ್ಮನ್ನು ಕಾಲ ಕಾಲಕ್ಕೆ  ದಾರಿ ತೋರಿ ಕಾಪಾಡುತ್ತಿದೆ .

ಎಂದರೋ ಮಹಾನು ಭಾವುಲು ಅಂದರಿಕಿ ವಂದನಮುಲು --ತ್ಯಾಗರಾಜ 



ಸೋಮವಾರ, ಏಪ್ರಿಲ್ 13, 2015

ಇಂಜೆಕ್ಷನ್ ಪುರಾಣವು

                     

ಬಾಲ್ಯದಲ್ಲಿ ವೈದ್ಯರು ಚುಚ್ಚುಮದ್ದು ಕೊಡುವುದನ್ನು  ಭಯಮಿಶ್ರಿತ  ಕುತೂಹಲ 

ದಿಂದ ನೋಡುತ್ತಿದ್ದೆವು .ಬಿಸಿನೀರ ಪಾತ್ರೆಯಿಂದ  ಇಕ್ಕುಳದ ಸಹಾಯದಿಂದ 

ಗಾಜಿನ  ಸಿರಿಂಜ್ ತೆಗೆದು ಪಿಸ್ಟನ್ ಸಿಕ್ಕಿಸಿ ಸೂಜಿ ಮೂಲಕ ಔಷಧಿ ಲೋಡ್ 

ಮಾಡಿ ಕೊಡುವುದು  ದೊಡ್ಡ ಅದ್ಭುತ ಕೆಲಸ  ಎನಿಸುತ್ತಿತ್ತು .

ಮುಂದೆ  ವೈದ್ಯಕೀಯ ವ್ಯಾಸಂಗ ಕಾಲದಲ್ಲಿ  ಇಂಜೆಕ್ಷನ್ ರೂಂ  ಪೋಸ್ಟಿಂಗ್ ನಲ್ಲಿ 

ನುರಿತ  ಸಿಸ್ಟರ್ ಗಳ  ಸುಪರ್ದಿಯಲ್ಲಿ  ಮೊದಲ  ಚುಚ್ಚುಮದ್ದು ಅಮಾಯಕ  

ರೋಗಿಗೆ ಚುಚ್ಚಿದಾಗ  ಜಗತ್ತನ್ನೇ  ಜಯಿಸಿದ ಅನುಭವ .  ಮಾಂಸ ಖಂಡ ಗಳಿಗೆ 

ಕೊಡುವ ಇಂಜೆಕ್ಷನ್ ಅಷ್ಟು ಕಷ್ಟ ಎನಿಸಲಿಲ್ಲ .ಆದರೆ  ರಕ್ತನಾಳ ಗಳಿಗೆ 

ಚುಚ್ಹುವುದು  ಆರಂಭದಲ್ಲಿ ಸ್ವಲ್ಪ  ತ್ರಾಸ ದಾಯಕ .ಹಲವು ಭಾರಿ  ಎರಡು ಮೂರು 

ಕಡೆ ಚುಚ್ಚ ಬೇಕಾಗುತ್ತಿತ್ತು .ರೋಗಿಗಳು  ನಮಗೆ  ಸಿಸ್ಟರೆ  ಚುಚ್ಚಲಿ 

ನೀವು ಬೇಡ ಎಂದು  ಮುಲಾಜಿಲ್ಲದೆ ಹೇಳುತ್ತಿದ್ದರು .

ಸರಕಾರೀ  ವೈದ್ಯಕೀಯ ಕಾಲೇಜ ಅಸ್ಪತ್ರೆಯ  ಇಂಜೆಕ್ಷನ್  ರೂಮನ್ನು  

ಊಹಿಸಿಕೊಳ್ಳಿ.ನೂರಾರು ರೋಗಿಗಳ  ಕ್ಯೂ.ಹೆಚ್ಚಿನವರು  ಪೆನ್ಸಿಲ್ಲಿನ್  ಇಂಜೆಕ್ಷನ್ 

ಗಾಗಿ.ದಿನಕ್ಕೆ ಇಷ್ಟೆಂದು  ಸ್ಟೋರ್ ನಿಂದ  ಔಷದಿ  ಕೊಡುತ್ತಿದ್ದರು .ಅದು ರಾವಣನ

ಹೊಟ್ಟೆಗೆ ಕಾಸಿನ ಮಜ್ಜಿಗೆ . ಅನಿರೀಕ್ಷಿತವಾಗಿ  ಹೆಚ್ಚು ಅತಿಥಿಗಳು ಬಂದರೆ 

ಸಾರು  ಸಾಂಬಾರು ನೀರು ಸೇರಿಸಿ ಸುಧಾರಿಸುವಂತೆ  ಇಂಜೆಕ್ಷನ್  ವಯಲ್ ಗಳಿಗೆ 

ನೀರು ಜಾಸ್ತಿ ಸೇರಿಸಿ  ಮ್ಯಾನೇಜ್ ಮಾಡುತ್ತಿದ್ದೆವು .ಒಂದು ಎಲೆಕ್ಟ್ರಿಕ್  ಸ್ಟೆರಿಲೈಸರ್

ಕರೆಂಟ್  ಇದ್ದರೆ ಕಾಯಿಲ್ ಸರಿ ಇಲ್ಲ ,ಕಾಯಿಲ್ ಇದ್ದಾಗ  ಕರೆಂಟ್ ಇಲ್ಲ .

ದೇವರನ್ನು ಪ್ರಾರ್ಥಿಸಿ  ಸ್ಟೆರಿಲೈಸರ್ ನಲ್ಲಿ ಇದ್ದ  ನೀರಿನಲ್ಲಿ ಪುಸ್ ಪುಸ್ ಎಂದು 

ಸಿರಿಂಜ್ ಮತ್ತು ಸೂಜಿ ಶುಧ್ಧ ಮಾಡುವುದು .ಸ್ತೆರಿಲೈಸರ್   ನೀರು ಹಲವು 

ಆಂಟಿಬಯೋಟಿಕ್ ಗಳ ಮಿಶ್ರಣ ವಾಗಿರುತ್ತಿತ್ತು .ಅದರಿಂದ  ಇಂಜೆಕ್ಷನ್ 

ಕೀವು ಉಂಟಾಗುತ್ತಿರಲಿಲ್ಲ .ಇನ್ನು ಸೂಜಿ ಗಳು  ಮೊಂಡು.ಮಾಂಸ ಖಂಡಗಳಿಗೆ 

ಚುಚ್ಚುವಾಗ  ಕರ ಕರ ಶಬ್ದ ವಾಗುತ್ತಿತ್ತು .ಅದಕ್ಕೇ  ಒಮ್ಮೆ ಚುಚ್ಚಿಸಿಕೊಂಡ 


ಮಗು  ಇನ್ನೊಮ್ಮೆ  ವೈದ್ಯರನ್ನು ಕಂಡರೆ ದೆವ್ವ ಕಂಡ ರೀತಿ ಕಿರುಚುತಿತ್ತು.

ಈಗ  ಉಪಯೋಗಿಸಿ ಎಸೆಯುವ  ಸಿರಿಂಜ್ ಗಳ ಕಾಲ ,ಬಿಸಿನೀರು ಬೇಡ 

ಇಕ್ಕುಳ ಬೇಡ .ಸುಜಿಯೂ  ಹರಿತ .ಮಕ್ಕಳು ನಮಗೆ ಹೆದರುವುದಿಲ್ಲ ,ಏಕೆಂದರೆ 

ನೋವೇ ಇಲ್ಲ.ಇಲ್ಲದಿದ್ದರೆ ಈಗಿನ  ಅಗಣಿತ  ರೋಗ ಪ್ರತಿಭಂಧಕ  ಚುಚ್ಚುಮದ್ದು

ಗಳನ್ನು  ಮಕ್ಕಳು ಹೇಗೆ ಸಹಿಸುತ್ತಿದ್ದರು .ಖ್ಯಾತ ವೈದ್ಯರೊಬ್ಬರ  ಪ್ರಕಾರ 

ಮಕ್ಕಳ ಸೊಂಟ ಈಗ ಒಂದು ಪಿನ್ ಕುಶನ್ ಆಗಿದೆ .

ಬಾಯಿಯ ಮೂಲಕ ಔಷಧಿ  ಸೇವನೆ ಕಷ್ಟ ವಾದಾಗ ,ಔಷಧಿ  ಹೊಟ್ಟೆಗೆ ಹೋದಾಗ 

ರಾಸಯನಿಕ ಕ್ರಿಯೆಯಿಂದ ನಿಷ್ಕ್ರಿಯ ವಾಗುವುದಿದ್ದರೆ ,ಮತ್ತು ಕೆಲವೊಮ್ಮೆ 

ವೇಗವಾಗಿ  ರೋಗ ಸ್ಥಾನ ವನ್ನು  ಸೇರಬೇಕಾದಲ್ಲಿ  ಇಂಜೆಕ್ಷನ್ ಮುಖಾಂತ ರ 

ಕೊಡುತ್ತಾರೆ .ಇಂಜೆಕ್ಷನ್ ಗೆ ಜಾಸ್ತಿ  ಪವರ್ ಇಲ್ಲ.ಸ್ವಲ್ಪ ಮಟ್ಟಿಗೆ 

ಇಂಜೆಕ್ಷನ್  ಮೇನಿಯ  ವೈದ್ಯರಿಂದ  ಉಂಟಾದುದು.ಇತ್ತೀಚಿಗೆ  ಏಡ್ಸ್ 

ಹೆಪಟೈಟಿಸ್ ಜಾಗೃತಿ ಬಂದ ಮೇಲೆ ಇಂಜೆಕ್ಷನ್  ರೋಗ ಕಮ್ಮಿ ಯಾಗಿದೆ .

ತಮಿಳ್ ನಾಡಿನಲ್ಲಿ  ಇಂಜೆಕ್ಷನ್  ಕೊಡದೆ ಇದ್ದರೆ ರೋಗಿಗಳು 

ಎನ್ನಾ ಸಾರ್ ಇವುಳ ನೋಯಿ ಇರುಕ್ಕುದು ಊಸಿಯೇ ಪೋಡ್ಲೆಯೇ ಎಂದು 

ಗಲಾಟೆ ಮಾಡುವರು .

ನಾನು ವಿದ್ಯಾರ್ಥಿಯಾಗಿದ್ದಾಗ  ಕೆಲವು ಅತಿರಥ ರೋಗಿಗಳು " ಸಾರ್ ನಾವು 

ಸಂಜೆ  ಕುಷಿ ಮಾಡಲು (ವೇಶ್ಯಾ ಸಂಗ )ಹೋಗುವೆವು ,ಒಂದು  ಪೆನಿಸಿಲಿನ್ 

ಇಂಜೆಕ್ಷನ್  ತೆಗೆದು ಕೊಂಡೆ  ಹೋಗುವಾ ಎಂದು ಬಂದೆವು' ಎಂದು ಕೇಳುತ್ತಿದ್ದುದೂ 

ಉಂಟು .
(ಮೇಲಿನ ಚಿತ್ರ ಮೂಲಕ್ಕೆ ಆಭಾರಿ )

ಶುಕ್ರವಾರ, ಏಪ್ರಿಲ್ 10, 2015

ಮಾಂತ್ರಿಕ ವಿಡಂಬನೆಯ ವಿಜಾರ್ಡ್ ಆಫ್ ದಿ ಕ್ರೋ

                                 
                                     

ಆಫ್ರಿಕಾ ನನ್ನನ್ನು ಆವರಿಸಿ ಬಿಟ್ಟಿದೆ .ವಸಾಹತುಶಾಹಿಯಿಂದ ಬಿಡುಗಡೆ 

ಪಡೆದು  ಹೊಸ  ಕನಸುಗಳೊಡನೆ ಜನ್ಮ ತಾಳಿದ ಎಲ್ಲಾ ದೇಶಗಳೂ  ರಾಜಕೀಯ 

ನಾಯಕರ  ಭ್ರಷ್ಟಾಚಾರ,ಸ್ವಜನ ಪಕ್ಷಪಾತ ಮತ್ತು ದೂರ ದೃಷ್ಟಿಯ ಕೊರತೆಯಿಂದ 

ಬಳಲುತ್ತಿರುವ ದುರಂತ ಕತೆಯ ಸಾಕ್ಷಿಯಾಗಿ ಮಾರ್ಪಡುತ್ತಿರುವುದು ವಿಪರ್ಯಾಸ .

ಹೆಚ್ಚು ಕಮ್ಮಿ ಭಾರತದ ಕತೆಯ ಹಾಗೆಯೇ .ಇದಕ್ಕೆ ಅಪವಾದ  ದಕ್ಷಿಣ 

ಆಫ್ರಿಕಾ ದ ನೆಲ್ಸನ್ ಮಂಡೇಲಾ ಮತ್ತು ಸೆನೆಗಲ್ ದೇಶದ ಲೆಪೋಲ್ದ್ ಸೆಡಾ 

ಸೇನ್ಗೊರ್  ರವರ ನಾಯಕತ್ವ ಎನ್ನ ಬಹುದು .

ಬಹಳಷ್ಟು ಭಾರತೀಯರು ನೆಲೆಸಿರುವ ಕೆನ್ಯಾದ ಕತೆಯೂ ಹೀಗೆಯೇ ಇದೆ .

ಭಾರತೀಯ  ಮೂಲದ ಎಂ ಜಿ ವಾಸನ್ಜಿ ರಚಿತ ಇನ್ ಬಿಟ್ವೀನ್ ದಿ ವರ್ಲ್ಡ್ ಆಫ್ 

ವಿಕ್ರಂ ಲಾಲ್ ಸ್ವಾತಂತ್ರೋತ್ತರ ಕೆನ್ಯಾದ ಕತೆಯನ್ನು ಒಂದು ಕೋನದಲ್ಲಿ 

ಚಿತ್ರಿಸಿದ್ದರೆ  ಕೆನ್ಯಾದ ಹೆಸರಾಂತ ಲೇಖಕ  ನುಗಿ ವಾ ತಿಯನ್ಗೋ  ಅವರ 

ಕಾದಂಬರಿ ದಿ ವಿಜ್ಯರ್ದ್ ಆಫ್ ದಿ  ಕ್ರೌ  ಎಂಬ  ವಿಡಂಬನಾತ್ಮಕ  ಕಾದಂಬರಿ 

ದೇಶದ ಚಿತ್ರಣವನ್ನು  ಹೊಸ ಮಾಧ್ಯಮದಲ್ಲಿ ತೆರೆದಿಡುತ್ತದೆ . ಜನತೆಯ 

ಹೋರಾಟದಿಂದ ಅಧಿಕಾರಕ್ಕೆ ಬಂದ ನಾಯಕ ತಾನೇ  ದೇಶ ,ತನಗಾಗಿ ನಾಡು 

 ಎಂಬ ಭ್ರಮೆ ಗೆ  ಈಡಾಗುವುದು, ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯ ಬಗ್ಗು 

ಬಡಿಯುವುದು ಮತ್ತು  ತನ್ನ ನೆಲೆ ಭದ್ರ ಪಡಿಸುವ ಸಲುವಾಗಿ  ತನ್ನ ಕೆಳಗಿನ 

ಒಬ್ಬ ನಾಯಕನನ್ನು ಇನ್ನೊಬ್ಬನ ಮೇಲೆ ಎತ್ತಿ ಕಟ್ಟುವುದು ಇತ್ಯಾದಿ ಗಳನ್ನು 

ಸೆಟಯಿರ್ (ವಿಡಂಬನೆ ) ರೂಪದಲ್ಲಿ ಚಿತ್ರಿಸಿರುವ ಕಾದಂಬರಿ .ಇದರಲ್ಲಿ 

ಭಾರತ ,ಮಹಾಭಾರತ (ಏಕಲವ್ಯ),ಆಯುರ್ವೇದ , ,ಇಲ್ಲಿಯ ಶಿಕ್ಷಣ ಪದ್ಧತಿ 

ಬಗ್ಗೆಯೂ ಉಲ್ಲೇಖ ಇದೆ.ಮತ್ತೊಂದು ವೈಶಿಷ್ಟ್ಯ ಲೇಖಕ ಉಲ್ಲೇಖಿಸಿರುವ 

ಗಾದೆ ಮತ್ತು ನುಡಿ ಗಟ್ಟುಗಳ ಸರಮಾಲೆ .ಪ್ರತಿಯೊಂದು ಪುಟದಲ್ಲಿಯೂ 

ಸಂಧರ್ಬ್ಹೊಚಿತವಾಗಿ  ಗಾದೆಗಳು ಹರಿದು ಬರುತ್ತವೆ .

ಕಾದಂಬರಿಯ ಕೆಲವು ವಾಕ್ಯಗಳನ್ನು ಇಂಗ್ಲಿಷ್ ನಲ್ಲಿಯೇ ಕೊಡುತ್ತೇನೆ 

ಅಬುರಿರಿಯಾ ಎಂಬ ಕಾಲ್ಪನಿಕ ದೇಶ .ಅದರ ಅಧಿಪ ಇತರ  ದುರ್ಮೊಹ ಗಳೊಡನೆ 

ಸ್ತ್ರೀ ಲೋಲ .ಅವನ ಹೆಂಡತಿ  ರೇಚಲ್ ಅವನಿಗೆ ಪ್ರಶ್ನಿಸುವುದು ಹೀಗೆ .

I know you take the title Father of The Nation seriously, You know


that  i have not complained about all those women who make beds 

for  you ,no matter how many children you sire with them .But 

why school girls ? Are they not as young as the children you have 

fathered ?are they not really your children? You father them today 

and tomorrow turn them into wives?Have you no tears of concern 

for tomorrow ?ಇಷ್ಟು ಕೇಳಿದ್ದಕ್ಕೆ  ತನ್ನ ಹೆಂಡತಿಯನ್ನೇ  ಗೃಹ ಬಂಧನದಲ್ಲಿ  

ಇಡುತ್ತಾನೆ  ನಾಯಕ .ಇಲ್ಲಿಂದಲೇ ಕತೆ ಆರಂಭ .

ನಾಯಕನ ಮಹತ್ವಾಕಾಂಕ್ಷೆಯ ಯೋಜನೆ ಮಾರ್ಚಿಂಗ್ ಟು ಹೆವೆನ್ಸ್ ಎಂಬ 

ಕಟ್ಟಡ .ಇದಕ್ಕೆ  ಗ್ಲೋಬಲ್ (ಓದಿ ವರ್ಲ್ಡ್ ಬ್ಯಾಂಕ್ )ಬ್ಯಾಂಕ್ ನ  ಅರ್ಥಿಕ ನೆರವು 

ಕೋರುತ್ತಾರೆ .ಯೋಜನೆ ಆರಂಭವಾಗುವುದಕ್ಕೆ ಮೊದಲೇ ಅದರ ನಿಯೋಜಿತ 

ಮುಖ್ಯ ಅಧಿಕಾರಿಗೆ  ಲಂಚ ದ ಅರ್ಚನೆ ಆರಂಭವಾಗುತ್ತದೆ .ಗ್ಲೋಬಲ್ ಬ್ಯಾಂಕ್ ನ 

ಪ್ರತಿನಿಧಿಗಳು  ತಂಗಿರುವ ಹೋಟೆಲ್ ಬಳಿ ಭಿಕ್ಷುಕರ ಹಾವಳಿ .ಅದನ್ನು 

ಆಢಳಿತ ಅಧಿಕಾರಿ ತನ್ನ ಕಾರ್ಯದರ್ಶಿಗೆ  ಹೇಳುವ ರೀತಿ 

'These beggars are too much ,I don't know what should be done 

with them.How dare they stretch out their hands at the very same 

place where our own government was  ... He was going to say 

'stretching out their hands".


ಇನ್ನೂ ಕೆಲವು ವಾಕ್ಯಗಳು 

We oppose the right of might with might of right.

What kind of property is so precious that i would be willing

to sacrifice my daughter to save it?

One editor told her that the disappearance of an adult was not news 

he could use.

In any case ,in Alburiria justice ends up in pockets of highest bidder.

Yet the wealthier they became ,the greater dispiritedness as they 

entered into discords that intensified into domestic violence.

ನಾಯಕನ ರಾಜಕೀಯ ಸಿದ್ದಾಂತ .ಹೀಗಿದೆ 

 What was not important in any given country was not the quantity 

of political parties but character of the person who personified

the head ,heart,arms and legs  of the state .There are no moral

limits that a ruler can use ,from lies to lives .bribes to blows

in order to ensure that his state is stable and his power is secure.But

if he could keep the state stable through sacrificing truth rather 

than lives.bending rather than breaking law ,sealing the lips of 

outspoken with endless trickeries  rather than tearing them with 

barbed-wire and hot wax ,if he could buy peace through 

grand deception rather than a vast display of armored vehicles in 

the streets ,which often gave his enemies material for propaganda

,it would be sweetest of victories.











ಸೋಮವಾರ, ಏಪ್ರಿಲ್ 6, 2015

ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು

                 ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು

ಮಳೆಯ ಬೇಸರ ಕಳೆಯಲು  ಕತೆಯೊಂದನ್ನು ಹೇಳುವಂತೆ  ಕೇಳಿದ

 

ಮನೋರಮೆ ಸಂಸ್ಕೃತ ದಲ್ಲಿ  ಕಾವ್ಯ ವಾಚನ ಮಾಡಿದ ಮುದ್ದಣ್ಣನಿಗೆ

 

ಹೇಳಿದ ಮಾತು .ಅಂದರೆ ಸಾಧಾರಣ ಅಕ್ಷರ ಜ್ಞಾನವುಳ್ಳ ತನಗೆ ಸರಳ ಕನ್ನಡ

 

ವೇ ಅರಗಿಸಲು ಕಷ್ಟ ವಿರುವಾಗ  ಸಂಸ್ಕೃತ ಯಾಕೆ ?

 

       ಆದರೆ  ಅಕಲೆಸಿಯ ಕಾರ್ಡಿಯಾ  ಎಂಬ ಅಪರೂಪದ ಕಾಯಿಲೆಯಲ್ಲಿ

 

ಗಂಟಲಲ್ಲಿ ನೀರು ಇಳಿಯದು.ಅದರೆ ಕಡುಬು ಇಳಿಯುವುದು .ಅನ್ನ ನಾಳ

 

ಮತ್ತು ಜಠರದ ನಡುವೆ  ಒಂದು ಕವಾಟ ಇದೆ .ಇದು ಸರಿ ಇಲ್ಲದಿದ್ದರೆ ಈ

 

ಪರಿಸ್ತಿತಿ ಬರುವುದು .

 

  ಅನ್ನನಾಳದಲ್ಲಿ ಗಡ್ಡೆ ಬೆಳೆದರೂ  ನುಂಗಲು ಕಷ್ಟ ,ಆದರೆ ಇಲ್ಲಿ ಘನ

 

ಆಹಾರ ಇಳಿಯದು,ದ್ರವ  ಇಳಿಯ ಬಹುದು .ಕೆಲವು ಭಾರಿ  ಮೆದುಳಿನ

 

ಅಥವಾ   ಅನ್ನನಾಳದ ನರಗಳು ದುರ್ಬಲಗೊಂಡು ನುಂಗುವುದು

 

ಕಷ್ಟ ವಾಗುವುದು .ಇಂತಹ ಸಂದರ್ಭ ರೋಗಿಗೆ ಬಾಯಲ್ಲಿ ತಿನ್ನಲು

 

ಅಥವಾ  ಕುಡಿಯಲು ಕೊಟ್ಟರೆ  ಅದು  ಹೊಟ್ಟೆಗೆ ಹೋಗುವ ಬದಲು

 

ಶ್ವಾಸಕೋಶ ಕ್ಕೆ  ಹೋಗಿ ಕೆಮ್ಮು ಮತ್ತು ದಮ್ಮು ಉಂಟಾಗುವುದು .

 

ಇದಕ್ಕೆ  ಪುನಃ ಬಾಯಲ್ಲಿ ಕೆಮ್ಮಿನ ಔಷಧಿ ಕೊಟ್ಟು ಪ್ರಯೋಜನ ಇಲ್ಲ .

 

ಬದಲಾಗಿ ಕೆಮ್ಮು ಇನ್ನೂ ಹೆಚ್ಚುವುದು . ಇದನ್ನು ಕಫ ಎಂದು ಭಾವಿಸಿ 

 

ಚಿಕಿತ್ಸೆ ಮಾಡಿಸುವರು ,ಅದು ಸರಿಯಲ್ಲ   ಇಂತಹ ಸಂದರ್ಭ ದಲ್ಲಿ ಟ್ಯೂಬಿನ

 

ಮೂಲಕ ಆಹಾರ ಕೊಡಬೇಕು .ಇಲ್ಲವೇ  ಹೊಟ್ಟೆಯ ಮೇಲೆ ಒಂದು

 

ರಂಧ್ರ ಮಾಡಿ ನೇರ  ಜಠರ ಕ್ಕೆ  ಆಹಾರ ಕೊಡಬೇಕಾಗುವುದು ..

 

           ಔಷಧಿ  ಕಂಪೆನಿಗಳ ಪ್ರತಿನಿಧಿಗಳು ತಮ್ಮ ಮಾತ್ರೆಗಳು ಬೇರೆ ಕಂಪೆನಿಗಳಿಗೆ  ಹೊಲಿಸಿದರೆ  ಗಾತ್ರದಲ್ಲಿ ಬಹಳ ಸಣ್ಣದಾಗಿದ್ದು ನುಂಗಲು ಬಲು ಸುಲಭ ಎನ್ನುವರು .ನನ್ನ ಮೇಲೆ ಅದು ಪ್ರಭಾವ ಬೀರುವುದಿಲ್ಲ .ಮಾತ್ರೆ  ತುಂಬಾ ಸಣ್ಣ ಇದ್ದರೆ ನುಂಗಲು ಕಷ್ಟ  ,ಅಲ್ಲದೆ ಅದು  ಗಂಟಲಿನ ಬದಿಯಲ್ಲಿ ಸಿಕ್ಕಿಕೊಂಡಂತೆ  ಆಗುವುದು.ನೀವು  ಒಂದು  ಕಾಳು ಅಕ್ಕಿ ಮತ್ತು ಒಂದು ತುಂಡು ಇಡ್ಲಿ ತಿಂದು ನೋಡಿರಿ .ಯಾವುದು ಸುಲಭವಾಗಿ ಇಳಿಯುವುದು ?ಇದರಲ್ಲಿ ಗುರುತ್ವಾಕರ್ಷಣ ವೂ  ಭಾಗಶಃ ಕೆಲಸ  ಮಾಡುವುದು .

 

     

 

 

 

ಶನಿವಾರ, ಏಪ್ರಿಲ್ 4, 2015

ಬ್ರಾಹ್ಮಣ ನೆಂದರೆ ಯಾರು ?

          ಬ್ರಾಹ್ಮಣ ನೆಂದರೆ ಯಾರು ?
 
ಮಹಾಭಾರತದ ವನ ಪರ್ವದಲ್ಲಿ ಬರುವ ಕತೆ.ಭೀಮನನ್ನು  ಕಾಡಿನಲ್ಲಿ ಶಾಪದಿಂದ 

ಹೆಬ್ಬಾವು  ರೂಪದಲ್ಲಿ ಇರುವ ನಹುಷ ಆಕ್ರಮಿಸಿ ಹಿಡಿದು  ಸುತ್ತಿ ಕೊಳ್ಳುವನು,ಬಲ 

ಭೀಮನಿಗೂ ಅವನಿಂದ ಬಿಡಿಸಿ ಕೊಳ್ಳಲು ಆಗುವುದಿಲ್ಲ .ಆಗ ತಮ್ಮನನ್ನು ಹುಡುಕಿ 

ಕೊಂದು ಬಂದ ಧರ್ಮರಾಯ ನಿಗೆ ತನ್ನ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ 

ಕೊಟ್ಟರೆ ತಮ್ಮನನ್ನು ಬಿಡುವುದಾಗಿ ನಹುಷ ಹೇಳುವನು .

ನಹುಷ : ಯಾರನ್ನು ಬ್ರಾಹ್ಮಣ ಎಂದು ಕರೆಯುತ್ತೇವೆ ?

ಧರ್ಮರಾಯ :ಸತ್ಯವಂತ ,ದಯವಂತ ,ದಾನಶೀಲ ,ಕ್ಷಮೆ  ಮತ್ತು  ಸ್ವಯಂ  ಮನ 

ಹತೋಟಿ ಇರುವವನು ಬ್ರಾಹ್ಮಣ .

ನಹುಷ :ಆದರೆ ಇದು  ಚಾತುರ್ವರ್ಣ ಪದ್ಧತಿ ಗೆ ವಿರುದ್ದವಾಯಿತು .ಈ ಗುಣಗಳು 

 ಶೂದ್ರನಲ್ಲಿಯೂ ಇರ ಬಹುದು ಸದ್ಗುಣಗಳು ಯಾವದೇ  ಜಾತಿಯ ಸೊತ್ತಲ್ಲ .

ಧರ್ಮರಾಯ :ನಿಜ .ಬ್ರಾಹ್ಮಣನಾಗಿ ಹುಟ್ಟಿದರೂ ಸದಾಚಾರ ,ಸದ್ಗುಣ ಇಲ್ಲದಿದ್ದರೆ 

ಅವನು ಶೂದ್ರನೆ .ಅದೇ ಮೇಲೆ ಹೇಳಿದ ಒಳ್ಳೆಯ ಗುಣಗಳನ್ನು ರೂಡಿಸಿ ಕೊಂಡ

ಯಾರೇ ಬ್ರಾಹ್ಮಣ ಎನಿಸಿಕೊಳ್ಳುವನು .




ಭಗವದ್ಗೀತೆ  ಯ ೧೮ ನೆ ಅಧ್ಯಾಯ ದ ೪೨ ನೆ ಶ್ಲೋಕದಲ್ಲಿ   ಇದನ್ನೇ ಹೇಳಲಾಗಿದೆ .
ಶಾಂತ ಪ್ರಕೃತಿ  ಸ್ವಯಂ ಶಾಸನ ,ಸರಳ ಜೀವನ ,ಶುದ್ದಾಂತಃ ಕರಣ .ಕ್ಷಮೆ 
ಪ್ರಾಮಾಣಿಕತೆ ,ಜ್ಞಾನದಾಹ ಮತ್ತು  ಧಾರ್ಮಿಕತೆ ಇದ್ದವನು ಬ್ರಾಹ್ಮಣ .

 

ಹಿರಿಯ ಬಾಳು ಬಾಳಿದ ಸರಳ ಜೀವಿಗಳು

ನಿನ್ನೆಯ ಪ್ರಜಾವಾಣಿ ಪತ್ರಿಕೆಯಲ್ಲಿ ರಾಮಚಂದ್ರ ಗುಹಾ ಇತ್ತೀಚಿಗೆ ನಿಧನರಾದ 

 ನಾರಾಯಣ್ ದೇಸಾಯಿ ಬಗ್ಗೆ ಬರೆದಿದ್ದರು .ಗಾಂಧೀಜಿಯವರ  ಆಪ್ತ ಕಾರ್ಯದರ್ಶಿ 

ಯಾಗಿದ್ದ  ಮಹಾದೇವ ದೇಸಾಯಿ ಅವರ ಪುತ್ರ .ಕೊನೆ ತನಕ ಗಾಂಧಿ ವಾದಿ 

ಯಾಗಿಯೇ ಬದುಕಿದವರು .ಗಾಂಧಿ ಬಗೆಗಿನ ಸೆಮಿನಾರ್ ಒಂದಕ್ಕೆ ದೆಹಲಿಗೆ 

ಬಂದಿದ್ದ ಗಣ್ಯರು ಕೊನೆ ದಿನ ವಿಮಾನ ಪಯಣದ ಟಿ ಎ ತೆಗೆದು ಕೊಳ್ಳುವ 

ಧಾವಂತ ಈ ಮನುಷ್ಯ ತಾನು ರೈಲಿನಲ್ಲಿ ಬಂದುದಾಗಿಯೂ ,ನನ್ನ ಮನೆಗೆ 

ಹೋಗಲು ನನಗೆ ಬೇರೆ ಹಣದ ಅವಶ್ಯ ಇಲ್ಲ ಎಂದು ಹೇಳಿದರು ಎಂದು ಬರೆದಿದ್ದಾರೆ .

ಸರಳ  ಜೀವನವನ್ನು  ತಮ್ಮ ಸಹಜ ಶೈಲಿ ಯಾಗಿ ಮಾಡಿಕೊಂಡ ಮಹನೀಯರು .

                        ಇದನ್ನು ಓದುವಾಗ ನನಗೆ ನಮ್ಮವರೇ ಆದ ಎಚ್ ನರಸಿಂಹಯ್ಯ 

ಅವರ ನೆನಪಾಯಿತು .ಅವರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಗಿದ್ದಾಗ 

ರಾಜ್ಯದಾದ್ಯಂತ  ಸಂಚರಿಸ ಬೇಕಿತ್ತು .ಸರಕಾರದ ಸಚಿವ ಸಮಾನ ಹುದ್ದೆ .ಆದರೂ 

ಅವರು ರೈಲಿನ ಎರಡನೇ ದರ್ಜೆಯಲ್ಲಿ ಸಂಚರಿಸಿ  ಅದೇ ದರ್ಜೆಯ  ಪ್ರಯಾಣ ಭತ್ತೆ 

ಪಡೆದರು .ಅಲ್ಲದೆ ತಮ್ಮ ಕಚೇರಿಗೆ ಬರುತ್ತಿದ್ದ ವೃತ್ತ ಪತ್ರಿಕೆಗಳ ಹಳೆಯ 

ಪ್ರತಿಗಳನ್ನು ಮಾರಿ ಸರಕಾರದ ಖಜಾನೆಗೆ ಪಾವತಿಸುತ್ತಿದ್ದರು .ಈ ವಿಷಯಗಳ 

ಬಗ್ಗ್ಗೆ ಅವರ ಜೀವನ ಚರಿತ್ರೆ ಹೋರಾಟದ ಬದುಕು ವಿನಲ್ಲಿ  ಬರೆದಿರುವರು .


                    ಲಾಲ್ ಬಹಾದುರ್ ಶಾಸ್ತ್ರೀಯವರೂ ಹೀಗೆಯೇ ಬದುಕಿದವರು .

ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ  ಮಂಗಳೂರಿಗೆ ಆಗಮಿಸಿದ್ದರು .ಆ ಸಮಯ 

ಕದ್ರಿ ಯ ಪ್ರವಾಸಿ ಬಂಗಲೆಯ  ಸಾಧಾರಣ  ಕೋಣೆಯಲ್ಲಿ ಉಳಕೊಂಡು  ಅಲ್ಲಿ 

ಇದ್ದ  ವಾತಾನುಕೂಲ  ಕೋಣೆಯನ್ನು ಬಂದಿದ್ದ ರಾಜ್ಯದ ಮುಖ್ಯ ಮಂತ್ರಿ 

ನಿಜಲಿಂಗಪ್ಪನವರಿಗೆ ಬಿಟ್ಟು ಕೊಟ್ಟರು .ಈ ಬಗ್ಗೆ ಆಗ  ಜಿಲ್ಲೆಯ ಜಿಲ್ಲಾಧಿಕಾರಿ 

ಯಾಗಿದ್ದು ಮುಂದೆ ಸರ್ಕಾರದ ಕಾರ್ಯದರ್ಶಿಯಾಗಿ ನಿವೃತ್ತರಾದ  ಶ್ರೀ 

ರಾಮಚಂದ್ರನ್ ಅವರು ತಮ್ಮ  ವೃತ್ತಿ ಜೀವನ ಚಿತ್ರ ತಾಬೇದಾರಿ ಯಲ್ಲಿ  

ಉಲ್ಲೇಖಿಸಿದ್ದಾರೆ .

ಇಂತಹವರು ಈಗ ಬಹಳ ಅಪರೂಪ ಆಗುತ್ತಿದ್ದಾರೆ .ಸರಳತೆಯ ಭೋಧನೆ 

ಮಾಡುವವರು ಸ್ವಯಂ ಐಶಾರಮ ಜೀವನ ನಡೆಸುತ್ತಿದ್ದಾರೆ.ಸರಕಾರಿ ನೌಕರರೂ 

ಸಮಾಜದ ಹಣವನ್ನು ಬೇಕಾಬಿಟ್ಟಿ ಬಳಸುತ್ತಿದ್ದಾರೆ .ಸಮಾಜದ ಕೊನೆಯ ವ್ಯಕ್ತಿ 

ಕೂಡ ಗೌರವಾನ್ವಿತ ವಾಗಿ ಬದುಕುವ ಸನ್ನಿವೇಶ ಬರುವ ವರೆಗೂ ಉಳ್ಳವರು 

ತಮ್ಮ ಐಶ್ವರ್ಯ ಪ್ರದರ್ಶನ ಮಾಡುವುದು ಮಾನವಿಯತೆಗೂ ಸಮಾಜದ 

ಸ್ವಾಸ್ಥ್ಯಕ್ಕೂ ಒಳ್ಳೆಯದಲ್ಲ .


ಗುರುವಾರ, ಏಪ್ರಿಲ್ 2, 2015

ಆಶಿರ್ವಾದವೇ ಉಡುಗೊರೆ

ಇತ್ತೀಚಿಗೆ ಆಮಂತ್ರಣ ಪತ್ರಿಕೆಗಳಲ್ಲಿ   ಆಶಿರ್ವಾದವೇ ಉಡುಗೊರೆ  , ಪ್ರೆಸೆಂಟ್ಸ್ 

ಇನ್  ಬ್ಲೆಸ್ಸಿ೦ ಗ್ಸ್  ಓನ್ಲಿ ಇತ್ಯಾದಿಯಾಗಿ ಎಚ್ಚರಿಸುವುದು  ಸಾಮಾನ್ಯವಾಗಿದೆ. 

ಆಹ್ವಾನಿತರು ಉಡುಗೊರೆ ಕೊಡಬೇಕಲ್ಲಾ ಎಂದು ಚಿಂತಿಸಿ ಮದುವೆಗೆ ಹೋಗದೇ

ಇರುವುದು ಬೇಡ ಎಂಬ ಸದಾಶಯ ಇರ ಬಹುದು .ನಮ್ಮ ಮನೆಯಲ್ಲಿಯೇ ಬೇಡದ 

ಬಟ್ಟೆ ತಟ್ಟೆ ಗಡಿಯಾರಗಳು ತುಂಬಿವೆ ಇನ್ನು ನೀವೂ ಇನ್ನಷ್ಟು ಕೊಟ್ಟರೆ  ಏನು 

ಮಾಡುವುದು ? ಎಂಬ ಚಿಂತೆಯೂ ಇದರ ಹಿಂದೆ ಇರ ಬಹುದು .ಏನೇ ಇರಲಿ .

       ಕೆಲವು ಇಂಗ್ಲಿಷ್ ಆಮಂತ್ರಣ ಪತ್ರಿಕೆಯಲ್ಲಿ  ಅರ್ ಎಸ್ ವಿ ಪಿ .(RSVP) 

ಎಂದು ಬರೆದಿರುತ್ತಾರೆ .ಇದು ಫ್ರೆಂಚ್ ನುಡಿಗಟ್ಟು ಒಂದರ ಅಪಭ್ರ೦ಶ.ಅಂದರೆ 

ಸಾಧ್ಯವಾದರೆ ಈ ಪತ್ರಕ್ಕೆ ಉತ್ತರಿಸಿರಿ .ಎಂದರೆ ನೀವು  ಬರುತ್ತೀರೋ ಇಲ್ಲ್ಲವೋ 

ತಿಳಿಸಿ .ಅದರ ಪ್ರಕಾರ  ಅತಿಥೇಯರು ಔತಣ ಏರ್ಪಡಿಸುವರು .ನಮ್ಮಲ್ಲಿ  ಈ

ಪದ್ಧತಿ ಇದ್ದರೆ ಎಷ್ಟೋ ಆಹಾರ ಪದಾರ್ಥ ನಷ್ಟ ವಾಗುವುದನ್ನು ತಪ್ಪಿಸ ಬಹುದು .

ಖ್ಯಾತ ಲೇಖಕ ರೊಬ್ಬರು ತನ್ನ ಏಳಮೆಯಲ್ಲಿ  RSVP ಯನ್ನು ರಸಂ ಸಾಂಭಾರ್ 

ವಡೆ ಪೊಂಗಲ್ ಎಂದು ಮೆನು ಇರಬೇಕು ಎಂದು ಭಾವಿಸಿದ್ದಾಗಿ  ತಮ್ಮ  ಆತ್ಮ 

ಚರಿತ್ರೆಯಲ್ಲಿ ಬರೆದಿದ್ದಾರೆ . 

ಇನ್ನು ಕೆಲವು ಆಮಂತ್ರಣ ಪತ್ರಿಕೆಯಲ್ಲಿ  ವಿಷಾದಿಸುವುದಿದ್ದರೆ  ಮಾತ್ರ ಉತ್ತರಿಸಿ 

ಎಂದು ಬರೆದಿರುತ್ತಾರೆ .ರಿಪ್ಲೈ ಇಫ್  ರಿಗ್ರೆಟ್ಸ್.ಎಂದರೆ  ನಿಮಗೆ ಬರಲು 

ಅನಾನುಕೂಲವಿದ್ದಲ್ಲಿ  ಮಾತ್ರ ಉತ್ತರಿಸಿರಿ .ಅಂದರೆ ನಿಮ್ಮಿಂದ ಪ್ರತಿಕ್ರಿಯೆ 

ಬರದಿದ್ದಲ್ಲಿ  ಭೋಜನ  ಲೆಕ್ಕ ಕ್ಕೆ ನಿಮ್ಮನ್ನೂ  ಸೇರಿಸಲಾಗುವುದು ಎಂದರ್ಥ .ಅಲ್ಲ 

ಅವರ ಮಗಳಿಗೋ ಮಗನಿಗೋ ಮದುವೆ ಆದರೆ ನೀವೇಕೆ ವಿಷಾದಿಸ ಬೇಕು 

ಎಂದು ಚಿಂತೆ ಮಾಡ ಬೇಡಿ .

 ಆಯಿತು  ನೀವು ಆಮಂತ್ರಣ ಬಂತು ಎಂದು  ನೀವು  ಮುಹೂ ರ್ಥ ಕ್ಕೆ ಸರಿಯಾಗಿ 

ಹೋದರೆ  ಎಲ್ಲರೂ ಮೇಲೆ ಕೆಳಗೆ ನೋಡುವರು .ನಿಮ್ಮ ಪ್ರತಿಷ್ಠೆ  ಉಳಿಯ 

ಬೇಕಾದರೆ  ಭೋಜನ ವೇಳೆ ತೆರಳಿ ಮದು ಮಕ್ಕಳಿಗೆ  ಶುಭ ಹಾರೈಸುವ  ಶಾಸ್ತ್ರ 

ಮಾಡ ಬೇಕು .ಅಲ್ಲಿಯೂ ನಿಮ್ಮಂತೆ ಬಂದವರ ಉದ್ದ  ಕ್ಯೂ ಇರುವುದು .ಕೆಲವು 

ಬುದ್ದಿವಂತರು ಸಿನೆಮಾ   ಹಾಲ್  ,ರೈಲ್ವೆ ಟಿಕೆಟ್ ಕೌಂಟರ್ ನಲ್ಲಿ ಮಾಡಿದಂತೆ 

 ಇಲ್ಲೂ  ಕ್ಯೂ ಜಂಪ್ ಮಾಡುವರು .ಅಂತೂ ನಿಮ್ಮ ಸರದಿ ಬರುವಾಗ ನಿನಗಿಂತ 

ಮೊದಲು   ಬಂದ  ವಿ ಆಯ ಪಿ ಯವರ ವೀಡಿಯೊ ಆಗುತ್ತಿರುತ್ತದೆ .ನಿಮ್ಮನ್ನು 

ಎಲ್ಲರೂ ಬದಿಗೆ ತಳ್ಳುವರು .ಬೇಸರ ಮಾಡ ಬೇಡಿ .ಒಳ್ಳೆಯ ಊಟ ನಿಮಗಾಗಿ 

ಕಾದಿರುತ್ತದೆ .

ಒಂದು ಪ್ರಸಿದ್ದ ಉದ್ಯಮಿಯ ಮಗನ ಮದುವೆಗೆ ಹೋಗಿದ್ದೆ .ಇದ್ದ ಬದ್ದವರಿಗೆಲ್ಲ್ಲಾ 

ಆಮಂತ್ರಣ ಕೊಟ್ಟಿದ್ದರು .ಮದು ಮಕ್ಕಳಿಗೆ  ಹಾರೈಸಲು  ಹೋದಾಗ  ತಂದೆ 

ತಾಯಿ ಯಥಾ ಪ್ರಕಾರ ಊಟ ಮಾಡಿಯೇ ಹೋಗಿ ಎಂದರು .ಕೆಳಗೆ  ಭೋಜನ 

ಶಾಲೆಗೆ ಹೋದರೆ  ಎಲ್ಲಾ ಖಾಲಿ .ಹಸಿದು ಕೊಂಡೆ ಮನೆಗೆ ಮರಳಿದೆವು .

 ಇದಕ್ಕೆ ಪರಿಹಾರ ಮೊದಲು ಊಟಕ್ಕೆ ಹೋಗುವುದು .ಹೇಗೂ ವೀಡಿಯೊ  ದಲ್ಲಿ 

ನೀವು ಊಟ ಮಾಡುವ ಚಿತ್ರ ನಿಮ್ಮ ಹಾಜರಿಯನ್ನು  ಸಾಕ್ಷಿಕರಿಸುತ್ತ್ತದೆ .

                           ಮೊದಲು ನಮ್ಮ ಕಡೆ ಮದುವೆ ಮನೆಯಲ್ಲಿ  ಅಡಿಕೆ 

ಭತ್ತ ಬೆಳೆಯ ಬಗ್ಗೆ  ,ಕುಟುಂಬ ದವರ ಆರೋಗ್ಯದ ಬಗ್ಗೆ  ಉಭಯಕುಶಲೋಪರಿ

ನಡೆಯುತ್ತಿತ್ತು .ಈಗ   ಸಿ ಇ ಟಿ., ಕ್ಯಾಂಪಸ್ ಅಗಿದೋ ,ಅಮೇರಿಕಾ ಬಾಳಂತನ

ಇತ್ಯಾದಿಗಳು  ಮೇಲಿನ ವಿಷಯಗಳ ಜಾಗ ಆಕ್ರಮಿಸಿವೆ .ಅಜ್ಜ ಅಜ್ಜಿಯವರಿಗೆ 

ಹಿಂದಿನ ಹಾಗೆ ಅಗ್ರ ಮಣೆ   ಕಾಣೆಯಾಗಿದೆ .. 
         

ನಿಮಗೆ ಅನಿಸಿದೆಯೋ ಗೊತ್ತಿಲ್ಲ ,ಹಲವು  ಕಾರ್ಯಕ್ರಮಗಳಿಗೆ  ಹೋಗಿ ಬಂದ 

ಮೇಲೆ  ಅಲ್ಲಿ ಹೋಗದಿದ್ದರೂ  ನಡೆಯುತ್ತಿತ್ತು  ಎಂದು ಅನಿಸುತ್ತದೆ .ಕೆಲವು 

ಕಡೆ ನಮ್ಮ ಅದೃಷ್ಟ ಒಳ್ಳೆಯದಿದ್ದರೆ  ಇಲ್ಲಿಗೆ ಬಾರದಿದ್ದರೆ ಎಷ್ಟು ಕಳೆದು ಕೊಳ್ಳುತ್ತಿದ್ದ್ದೆ 

ಎಂದೂ ತೋರಿದ್ದುಂಟು .





ಬುಧವಾರ, ಏಪ್ರಿಲ್ 1, 2015

ಪುಸ್ತಕ ಪ್ರೇಮಿ ನವಕರ್ನಾಟಕ ದ ವಿಶ್ವನಾಥರು

                                             
                                             

ಒಂದು ಪುಸ್ತಕ ದ ಅಂಗಡಿ .ಶಾಲೆಯ ಅಧ್ಯಾಪಕಿ ಒಬ್ಬರು  ಬಂದು ನಿಮ್ಮಲ್ಲಿ 

ಕುವೆಂಪು ಅವರ ನನ್ನ ಮನೆ ಕವನ ಇರುವ ಪುಸ್ತಕ ಇದೆಯೇನ್ರಿ  ಎಂದು  

ಹುಡುಗನನ್ನು ವಿಚಾರಿಸಿದರು .ಶಾಲೆಯ ಕಾರ್ಯಕ್ರಮಕ್ಕೆ ಆ ಹಾಡು ಅವರಿಗೆ 

ಬೇಕಿತ್ತು .ಅದು ಯಾವ ಸಂಕಲನದಲ್ಲಿದೆ ಎಂಬುದು ಅವರಿಗೆ ಗೊತ್ತಿಲ್ಲ .ಅಂಗಡಿ 

ಹುಡುಗ ಸ್ವಲ್ಪವೂ ಬೇಸರ ತೋರಿಸದೆ ಒಳಗಡೆ ಪುಸ್ತಕ ರಾಶಿಗಳನ್ನು ಹುಡುಕಿ 

ಒಂದು ಕವನ ಸಂಕಲನ ತಂದು ಅವರ ಕೈಯ್ಯಲ್ಲಿ ಇಟ್ಟ.ಟೀಚರ್  ಗೆ 

ಸಂತೋಷ .

ಇನ್ನೊಂದು ಸನ್ನಿವೇಶ .ಮಂಗಳೂರಿನ ಒಂದು ದೊಡ್ಡ ವಾಚನಾಲಯ .ತ್ಯಾಗವೀರ

ಕಾರ್ನಾಡ್ ಸದಾಶಿವ ರಾಯರ ಬಗ್ಗೆ  ಪುಸ್ತಕ ಬೇಕಿತ್ತು . ವಾಚನಾಲಯದ 

ಡೆಸ್ಕ್ ನಲ್ಲಿ  ಕುಳಿತ ವ್ಯಕ್ತಿ ಅವರ ಹೆಸರೇ ಕೇಳಿರಲಿಲ್ಲ .ಆಮೇಲೆ ಅನ್ಯಮನಸ್ಕನಾಗಿ 

ಅಲ್ಲಿ   ರೇಕ್ ನಲ್ಲಿ ನೋಡಿ ಇದ್ದರೂ ಇರಬಹುದು ಎಂದು ಕೈ ತೊಳೆದು 

ಕೊಂಡರು .ಪುಸ್ತಕ ಕಪಾಟು ಗಳು  ಧೂಳು ಮಾಯ ಮತ್ತು  ಯಾವುದೂ 

ಸೂಚಿತ  ಕ್ರಮದಲ್ಲಿ ಇಲ್ಲ . 

ಇನ್ನೊಂದು  ಪ್ರಸಿದ್ದ  ಪುಸ್ತಕ ಅಂಗಡಿ .ನೀವು  ಯಾವುದೋ ಪುಸ್ತಕ  ಕೇಳುತ್ತೀರಿ.

ಅಲ್ಲಿ ಎಲ್ಲಿಯಾದರೂ ಇರ ಬಹುದು ನೋಡಿ ಎನ್ನುತ್ತಾರೆ ಮಾಲಕ .

ಇದು ಮೂರೂ ನಾನು ಸ್ವಯಂ ಅನುಭವಿಸಿದವನು .ಮೇಲಿನ  ಮೊದಲಿನ 

ಅನುಭವದ  ವ್ಯಕ್ತಿ  ಮಂಗಳೂರಿನ  ಕೆ ಎಸ ರಾವ್ ರಸ್ತೆಯ  ನವಕರ್ನಾಟಕ  ಪುಸ್ತಕ 

ಅಂಗಡಿಯ  ಉದ್ಯೋಗಿ  ಶ್ರೀ ವಿಶ್ವನಾಥ ಅವರು .ತನ್ನ ಕೆಲಸವನ್ನು 

ಅತಿಯಾಗಿ ಪ್ರೀತಿಸುವ  ಇವರು ಸ್ವತಃ  ಒಳ್ಳೆ ಓದುಗ .ಪತ್ರಿಕೆಗಳಲ್ಲಿ 

ಬರುವ ಪುಸ್ತಕ ವಿಮರ್ಶೆ ,ಚುಕ್ಕು ಬುಕ್ಕು .ಕಾಂ ನಂತಹ ಬ್ಲಾಗ್ ಗಲ್ಲಿ ಬರುವ 

ಮಾಹಿತಿ  ಇತ್ಯಾದಿಗಳನ್ನು ಓದಿ ,ಪುಸ್ತಕಗಳನ್ನು ಸಾಧ್ಯವಿದ್ದಷ್ಟು ಓದಿ 

ಒಳ್ಳೆಯ ಪುಸ್ತಕ ಯಾವುದು ,ಅಲ್ಲದೆ  ಓದುಗರ ಅಭಿರುಚಿ ಗೆ ಅನುಗುಣ 

ವಾದ  ಕೃತಿ ಯಾವುದು ಎಂದು ಸ್ವಲ್ಪ ಮಟ್ಟಿಗೆ ಅಧಿಕಾರ ಪೂರ್ವಕ ಹೇಳಬಲ್ಲರು .

ಗ್ರಾಹಕ ಎಷ್ಟು ಪುಸ್ತಕ ಮಗುಚಿ ಹಾಕಿದರೂ ಅವರಿಗೆ ಬೇಸರ ಇಲ್ಲ ,ಬದಲಾಗಿ 

ನಿಮ್ಮ ಅಭಿರುಚಿಯ ವಾಸನೆ ಅವರಿಗೆ ಸಿಕ್ಕರೆ  ಅವರೇ ಮೂಲೆ ಮೂಲೆಗಳಿಂದ 

ಐದಾರು ಪುಸ್ತಕ ತಂದು ತೋರಿಸುವರು .ಮಂಗಳೂರು ಪರಿಸರದ 

ಬರಹಗಾರರು  ಇವರಿಗೆ ಪರಿಚಿತ .ಸಂಗೀತ ಪ್ರಿಯರೂ ಆಗಿರುವ ವಿಶ್ವನಾಥರು 

ಅದರ  ಅಧ್ಯಯನ ಮಾಡುತ್ತಿರುತ್ತಾರೆ .

ತಾನು ಮಾಡುವ ಕೆಲಸ ಎಷ್ಟೇ ಸಂಬಳ ತಂದರೂ ಸದಾ ಅಸಂತ್ರುಪ್ತ ರಾಗಿ 

ಗೊಣಗುವವರೇ  ತುಂಬಿರುವ ಈ ಕಾಲದಲ್ಲಿ  ಇಂತಹವ ರ  ಸಂಖ್ಯೆ 

ಹೆಚ್ಚಾಗಲಿ .