ಬೆಂಬಲಿಗರು

ಭಾನುವಾರ, ಸೆಪ್ಟೆಂಬರ್ 29, 2019

ಮಾತು ಕತೆ

Image result for brain speech area
ಮಾತು ಎರಡು ಅಂಶ ಗಳನ್ನು ಹೊಂದಿರುತ್ತದೆ .ಒಂದು ಶ್ರವಣ  ಮತ್ತು  ವಾಚ್ಯ .ಎಡ  ಮೆದುಳಿನ ಶ್ರವಣ ವಿಭಾಗ ಮಾತು ಗ್ರಹಿಸುತ್ತದೆ .ಮತ್ತು ಅಲ್ಲಿಂದ  ವಾಚ್ಯ (ಮೋಟಾರ್ ) ವಿಭಾಗಕ್ಕೆ ಸಂದೇಶ ರವಾನೆಯಾಗುವುದು . ವಾಚ್ಯ ಮಾತು ವಿಭಾಗದಿಂದ  ಧ್ವನಿಪೆಟ್ಟಿಗೆ ಗೆ  ಸಂದೇಶ

ರವಾನೆ ಯಾಗುವುದು . ಅಲ್ಲಿ ಧ್ವನಿಪೆಟ್ಟಿಗೆಯ ಮಾಂಸ ಖಂಡ ಗಳು  ಅವಶ್ಯಕ್ಕೆ ಅನುಗುಣವಾಗಿ  ಸಂಕುಚಸಿ ವಿಕಸಿಸಿ  ಉದ್ದೇಶಿಸಿದ ಸ್ವರ ಹೊರಡುವುದು . ಮಾತು 

ಉತ್ಪಾದನೆಯಲ್ಲಿ ನಾಲಿಗೆಯ ಪಾತ್ರ ಕಿರಿದು .ಆದುದರಿಂದ ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ ಎನ್ನುವುದು ಪೂರ್ಣ ಸರಿಯಲ್ಲ .ಆಚಾರವಿಲ್ಲದ  ಮನವೇ

ನಿನ್ನ ನೀಚ ಬುದ್ದಿಯ ಬಿಡು ಎಂದೋ ,ಆಚಾರವಿಲ್ಲದ ಧ್ವನಿಪೆಟ್ಟಿಗೆ ಎನ್ನಿವುದೋ ಸಮಂಜಸ .

ಮೆದುಳಿನ ರಕ್ತ ಸಂಚಾರ  ಧಿಡೀರನೆ ನಿಂತು  ಆಘಾತ ಅಥವಾ ಸ್ಟ್ರೋಕ್ ಸಂಭವಿಸುವುದು .ಇದರಲ್ಲಿ  ಮಾತಿನ  ಶ್ರವಣ ಮತ್ತು  ವಾಚ್ಯ ಎರಡೂ  ಕೇಂದ್ರಗಳ ಮೇಲೆ ಪರಿಣಾಮ

ಉಂಟಾದರೆ ಒಟ್ಟು ಮಾತು ಬಿದ್ದು ಹೋಗುವುದು . ಬರಿಯ ಶ್ರವಣ ಕೇಂದ್ರ ಕಾರ್ಯಹೀನ ವಾದರೆ ಅರ್ಥವಿಲ್ಲದ ಶಬ್ದಗಳು  ಹೊರಡುವವು . ವಾಚ್ಯ ಶಕ್ತಿ ಹೋದರೆ ಕೇಳಿದ್ದು ಅರ್ಥ

ವಾದರೂ ಮಾತು ಹೊರಡದು . ಮಾತಿನ ವಾಚ್ಯ ಕೇಂದ್ರದ  ಸಮೀಪ ಬಲಬದಿಯ  ಕೈ ಕಾಲು ಚಲನೆಯನ್ನು ನಿಯಂತ್ರಿಸುವ ಭಾಗ ಮೆದುಳಿನಲ್ಲಿ ಇದೆ. ಆದುದರಿಂದ

ಬಲ ಬದಿ ಪಾರ್ಶ್ವವಾಯು ಆದಾಗ ಕೆಲವೊಮ್ಮೆ ಮಾತೂ ಬೀಳುವುದು 

 ಶ್ರವಣ  ಕೇಂದ್ರಕ್ಕೆ  ವರ್ನಿಕೆ ಏರಿಯಾ  ಎಂದೂ  ವಾಚ್ಯ ಕೇಂದ್ರಕ್ಕೆ  ಬ್ರೋಕಾ ಏರಿಯಾ ಎಂದೂ ಹೆಸರಿದೆ .ಮೇಲಿನ ಚಿತ್ರದಲ್ಲಿ  ಎದ ಮೆದುಳಿನ ಈ ಭಾಗಗಳನ್ನು ಕಾಣಬಹುದು

ಶುಕ್ರವಾರ, ಸೆಪ್ಟೆಂಬರ್ 27, 2019

ಮಂಜು ಮತ್ತು ಟೊಪ್ಪಿ

ಚಳಿಗಾಲ ಆರಂಭವಾಗಿದೆ . ಮುಂಜಾನೆ ಮಂಜು ದಟ್ಟೈಸಿ  ಇರುತ್ತದೆ . ಹವೆಯ

ಉಷ್ಣತೆ  ಕಡಿಮೆಯಾದಾಗ  ವಾತಾವರಣದ ನೀರಾವಿ  ಸಾಂದ್ರಿಕೃತ ಗೊಂಡು ಉಂಟಾಗುವುದೇ

ಮಂಜು .ಮೇಲಿನಿಂದ ಭಾರಗೊಂಡು ಕೆಳಗೆ ಬರುವ ಮಂಜು ಹನಿಗಳು ತಮ್ಮೊಡನೆ  ವಾತಾವರಣದ

ಧೂಳು ಮತ್ತು ಇತರ ತೇಲಾಡುವಕಲ್ಮಶ ಗಳನ್ನೂ  ಸೇರಿಸಿ ಕೊಂಡಿರುತ್ತವೆ .ಜನಮೇಜಯನ

ಸರ್ಪಯಜ್ಞ ದಲ್ಲಿ  ತಕ್ಷಕನೊಡನೆ ಇಂದ್ರ ಕೆಳಗೆ ಬಂದಂತೆ .

   ಈ ಮಂಜಿನ ಹನಿಗಳಲ್ಲಿ  ಇರುವ ಕಲ್ಮಶಗಳು  ಕೆಮ್ಮು ದಮ್ಮು ಉಂಟು ಮಾಡಬಹುದು .ಇದರಿಂದ

ಪಾರಾಗಲು ಜನರು ತಲೆಗೆ ಹ್ಯಾಟ್ ಅಥವಾ ಟೊಪ್ಪಿಗೆ  ಧರಿಸಿ ನಡೆಯುವರು .ಆದರೆ ಉಸಿರಿನ

ಮೂಲಕ  ಒಳ ಸೇರುವ  ರೋಗ ಕಾರಕ ಗಳನ್ನ  ಇದರಿಂದ ತಡೆಗಟ್ಟಲು ಆಗದು . ಮುಖಕ್ಕೆ  ಮಾಸ್ಕ

ಧರಿಸಿ  ಹೊರ ಹೋಗುವುದು  ಉತ್ತಮ .

    ಉಸಿರ ಮೂಲಕ   ಶರೀರದ ಒಳ ಹೋಗು ವುದ  ತಲೆಯ ಮೇಲಿನ ಟೊಪ್ಪಿಗೆ ತಡೆಯದು

ಅಕ್ಕಿ ಪುರಾಣ

ನಮ್ಮ ಭಾಗದಲ್ಲಿ ಊಟಕ್ಕೆ ಕುಚ್ಚಲು ಅಕ್ಕಿ ಬಳಸುವರು .ಮದುವೆ ಸಮಾರಂಭಗಳಲ್ಲಿ  ಬಿಳಿ ಅಕ್ಕಿ

ಅಥವಾ ಬೆಳ್ತಿಗೆ ಅಕ್ಕಿ ಉಪಯೋಗಿಸುವ ವಾಡಿಕೆ .ಆರೋಗ್ಯಕ್ಕೆ ಕುಚ್ಚಲು ಅಥವಾ ಕುಸುಬುಲು ಅಕ್ಕಿ

ಉತ್ತಮ .ಇದು ಬೇಯಲು ಹೆಚ್ಚು ಸಮಯ ತೆಗೆದು ಕೊಳ್ಳುವುದು .ಇದು ವರ್ಣ ಭೇದ ನೀತಿಯೋ ಶಾಸ್ತ್ರ ಬದ್ದವೋ ಅಲ್ಲ ,ಅನುಕೂಲ ಶಾಸ್ತ್ರ
                        ಬಹಳ ಮಂದಿ ಸಮಾರಂಭಗಳಲ್ಲಿ ಅಥವ  ದೇವಸ್ಥಾನದಲ್ಲಿ  ಊಟ ಮಾಡಿದ ಮೇಲೆ

ನೀರಡಿಕೆ ಜಾಸ್ತಿ ,ಹೊಟ್ಟೆ ಉರಿ ಆರಂಭವಾಗಿದೆ .ಇದಕ್ಕೆ ಬೆಳ್ತಿಗೆ ಅಕ್ಕಿ ಊಟ ಕಾರಣ ಎಂದು

ಆರೋಪಿಸುವರು .ಇದು ಸರಿ ಎಂದು ಕಾಣುವುದಿಲ್ಲ .ಮದುವೆ ಮುಂಜಿ ಔತಣ ಊಟದಲ್ಲಿ ಹೆಚ್ಚು

ವ್ಯಂಜನ ಗಳು ಇರುತ್ತವೆ .ದಿನ ನಿತ್ಯ ಮನೆ ಊಟಕ್ಕೆ ಒಂದು ಪಲ್ಯ ,ಒಂದು ಸಾಂಭಾರ್ ಇದ್ದರೆ

ಔತಣ ಊಟಕ್ಕೆಹಲವು ಪಲ್ಯ ,ಸಾರು ,ಸಾಂಭಾರ್ ಇತ್ಯಾದಿ ಇರುತ್ತವೆ .ಸಹಜವಾಗಿ ಹೆಚ್ಚುಉಪ್ಪು

ಮತ್ತು  ಖಾರ ಹೊಟ್ಟೆ ಸೇರುತ್ತದೆ .ಇದರಿಂದ  ಹೊಟ್ಟೆ ಉರಿ ಮತ್ತು  ನೀರಡಿಕೆ ಉಂಟಾಗುವುದು .

ಜತೆಗೆ ಪಾಯಸ ಸಿಹಿ ತಿಂಡಿ ಗಳ ಸಕ್ಕರೆ ಯೂ ರಕ್ತಸೇರುತ್ತದೆ .ಉಪ್ಪು ಮತ್ತು  ಸಕ್ಕರೆ  ರಕ್ತದ

ಸಾಂದ್ರತೆ ಹೆಚ್ಚಿಸುವವು .ಹೆಚ್ಚಿದ  ಸಾಂದ್ರತೆಯ ರಕ್ತ ಮೆದುಳಿನಲ್ಲಿ  ಬಾಯಾ ರಿಕೆ ಉಂಟುಮಾಡುವ

ಕೇಂದ್ರವನ್ನುಪ್ರಚೋದಿಸಿ ನೀರು ಕುಡಿಯುವಂತೆ ಮಾಡುವುದು .ನೀರಡಿಕೆ ನಿವಾರಣೆಗೆ ನೀರೇ

ಉತ್ತಮ .ಕಬ್ಬಿಣ ಹಾಲು ,ಹಣ್ಣಿನ ರಸ  ರಕ್ತದ ಸಾಂದ್ರತೆ  ಹೆಚ್ಚಿಸುವವು . ಅವುಗಳ ಸೇವನೆ

ಬಾಯಾರಿಕೆ ನೀಗುವುದಕ್ಕೆ ಉತ್ತಮ  ಮಾರ್ಗ ಅಲ್ಲ .

                 ನಾವು  ಔತಣ ಕೂಟಗಳಲ್ಲಿ  ನಿತ್ಯ ದ ಆಹಾರಕ್ಕಿಂತ ಹೆಚ್ಚಿನpಪ್ರಮಾಣದಲ್ಲಿ ತಿನ್ನುವೆವು .

ಇದೇ ಕಾರಣಕ್ಕೆ  ಸಕ್ಕರೆ ಕಾಯಿಲೆ ಇರುವವರಿಗೆ ನಿಯಂತ್ರಣ ತಪ್ಪುವುದು ,ಅವರು ಸಿಹಿ ತಿಂಡಿ

ಪಾಯಸ  ಸೇವಿಸದಿದ್ದರೂ .

ಗುರುವಾರ, ಸೆಪ್ಟೆಂಬರ್ 19, 2019

ಆಹಾರ ಬಗ್ಗೆ ಕೆಲವು ನಂಬಿಕೆಗಳು ಸತ್ಯಾಸತ್ಯತೆ

ಮೊನ್ನೆ ಓರ್ವ ತಾಯಿ ಬಂದಿದ್ದರು .ತನಗೆ ಸಣ್ಣ ಮಗು ಇದೆ ,ಮೊಲೆ ಹಾಲು  ಸಾಕಾಗುವುದಿಲ್ಲ ,

ಅದಕ್ಕೆ ಹೆಚ್ಚು ಹಾಲು ಸೇವಿಸಿ  ಕಫ  ಆಗಿದೆ , ಔಷದಿ ಕೊಡಿ ಎಂದರು.

ನಾನೆಂದೆ " ನೋಡಿ ಅಮ್ಮ ಹಾಲು ಆಗಲು ಹೆಚ್ಚು ಸಸಾರಜನಕ (ಪ್ರೋಟೀನ್) ಇರುವ ದ್ವಿದಳ ಧಾನ್ಯ

ಸೇವಿಸಿ .ರಾಸುಗಳಿಗೆ ನಾವು ಪ್ರೋಟೀನ್ ಯುಕ್ತ ಹಿಂಡಿ ಹಾಕುವೆವು .ಮತ್ತೆ ಹಾಲು ಕುಡಿದು ಕಫ

ಆದದ್ದೂ ಇರಲಿಕ್ಕಿಲ್ಲ .ಗಾಳಿಯಲ್ಲಿ ಬಂದ ಸೋಂಕಿನಿಂದ ಕಫ ಆಗಿರ ಬೇಕು ."

ಬಹಳ ಮಂದಿ ಕಫ ಬಿಳಿ ಇದೆ .ಅದ್ದರಿಂದ  ಹಾಲು ಕುಡಿದರೆ ಜಾಸ್ತಿ ಆಗುವುದು ಎಂದು ಭಾವಿಸುತ್ತಾರೆ .
           
           ಹಲವರು  ಡಾಕ್ಟರ್ ನಿನ್ನೆ  ಮದುವೆಯಲ್ಲಿ  ಕೋಲ್ಡ್ ಕುಡಿದು ಶೀತ ಆಗಿದೆ ,ಕೆಮ್ಮು ಆಗಿದೆ

ಎನ್ನುವರು .ಸಮಾರಂಭಕ್ಕೆ ಬಂದ ವರಲ್ಲಿ  ಶೀತ ಆದವರು ಇರುವರು .ಅವರ ಉಸಿರಲ್ಲಿ  ವೈರಸ್

ಇರಬಹುದು ,ಅದರಿಂದ  ನಮಗೆ ಹರಡುವ ಸಾಧ್ಯತೆ ಜಾಸ್ತಿ. ತಿನ್ನುವ ಅಥವಾ ಕುಡಿಯುವ 

ಆಹಾರದಿಂದ  ಹೊಟ್ಟೆ ನೋವು ಭೇದಿ ಬರಬಹುದು .ಅಮೇರಿಕಾ ದ  ಸೋಂಕು ನಿವಾರಕ ಕೇಂದ್ರ

(CDC) ಸಲಹೆ ಪ್ರಕಾರ  ಗಂಟಲು ನೋವು ಕಿರಿ ಕಿರಿ ಗೆ  ಐಸ್ ತುಂಡು ಚೀಪ ಬಹುದು .

                       ಇನ್ನು ಕೆಲವರು  ಕಾಯಿಲೆ ಬಂದಾಗ  ಎಳನೀರು ಬಿಸಿ ಮಾಡಿ ಕುಡಿಯುವರು .ಇದು

ಅನವಶ್ಯಕ .ಅಲ್ಲದೆ ಅದರಲ್ಲ್ಲಿ ಏನಾದರೂ ಪೌಷ್ಟಿಕ ಅಂಶ ಇದ್ದರೆ ನಾಶವಾಗುವುದು . ಏಳ

ನೀರಿನಲ್ಲಿ  ನಾವು ತಿಳಿದು ಕೊಂಡಂತೆ ಭಾರೀ ಪೌಷ್ಟಿಕ ದಾಯಕ ಅಂಶಗಳು ಇಲ್ಲ .ಅದು ಶುದ್ಧ

ದ್ರವಾಹಾರ .ಅದೇ ರೀತಿ ಶೀತ ಆಗಿದೆ ಎಂದು ಮಜ್ಜಿಗೆ ಬಿಸಿ ಮಾಡಿ ಉಪಯೋಗಿಸುವರು  ಇದ್ದಾರೆ

.ಇದೂ ಸರಿಯಲ್ಲ .

                       ಬಹಳ ಮಂದಿ  ನಾನು  ಅನ್ನಾನೆ ಊಟ ಮಾಡುವುದು , ರಾಗಿ ಮುದ್ದೇನೆ ತಿನ್ನುವುದು

ಅದರಿಂದ ಆರೋಗ್ಯವಾಗಿದ್ದೇನೆ ಎನ್ನುವರು .ಆಹಾರ ಯಾವಾಗಲು ಸಮ ತೂಕ ಆಗಿರಬೇಕು .

ಅದರಲ್ಲಿ ಏಕದಳ ,ಮತ್ತು ದ್ವಿದಳ ಧಾನ್ಯಗಳು , ಹಣ್ಣು ,ತರಕಾರಿ ಅವಶ್ಯ .ಬರೀ ಅಕ್ಕಿ ಅಥವಾ ರಾಗಿ ,

ಗೋಧಿ  ತಿನ್ದಿಗಳಿ೦ತ  ಇಡ್ಲಿ ಉದ್ದಿನ ದೋಸೆ ಹೆಚ್ಚು ಪೌಷ್ಟಿಕ . ಕಷ್ಟ ಪಟ್ಟು ಬ್ರೆಡ್ ತಿನ್ನುವುದಕ್ಕಿಂತ

ರೋಗಿಗಳು ಮತ್ತು ಇತರರು ಇಡ್ಲಿ ತಿನ್ನುವುದು ಉತ್ತಮ .

                                     ಇನ್ನು  ಬಾಣಂತಿ ಯರು ಸಮತೂಕದ ಆಹಾರ ತಿನ್ನುವುದು ಹೆಚ್ಚು ಅವಶ್ಯಕ

ಅವರಿಗೆ ಕೇವಲ ಹಾಲು ತುಪ್ಪ ತಿನಿಸುವರು .ಇದರಿಂದ ತೂಕ ಹೆಚ್ಚುವುದು .ದ್ವಿದಳ ಧಾನ್ಯ

ಮೀನು ,ಮಾಂಸ ಹಣ್ಣುತರಕಾರಿ ಉತ್ತಮ .

                      ಹಣ್ಣು ತಿಂದರೆ ಕಫ ಆಗದು .ಕಫ ಇದ್ದದ್ದು ಹೆಚ್ಚು ಆಗುವುದಿಲ್ಲ .


ಡೆಂಗ್ಯು ಜ್ವರ ಬಗ್ಗೆ ಇನ್ನಷ್ಟು

ಈ ಕಾಯಿಲೆ ಬಗ್ಗೆ ನನ್ನ ಹಿಂದಿನ ಪೋಸ್ಟ್ ಗಳಲ್ಲಿಬರೆದಿದ್ದೆ . ಈಗ ಡೆಂಗ್ಯು ಸೀಸನ್ ನಮ್ಮ ಊರಲ್ಲಿ

(ದಕ್ಷಿಣ ಕನ್ನಡ )ದಲ್ಲಿ  ಕಡಿಮೆ ಆಗುತ್ತಾ ಬಂದಿದೆ .ಈ ವರುಷ  ಮಂಗಳೂರು ನಗರ ಪ್ರವೇಶಿಸಿ

ತುಂಬಾ ಆತಂಕ  ಉಂಟು ಮಾಡಿದೆ .ಇದು ವರೆಗೆ  ಅಲ್ಲಿ ಮಲೇರಿಯ ಜ್ವರದ ಕಾಟ ಮಾತ್ರ

ಇತ್ತು.ಬೆಂಗಳೂರು ಮಂಗಳೂರು ನಂತಹ ನಗರಗಳಿಗೆ ಇಂತಹ ಕಾಯಿಲೆಗಳು ಬಂದರೆ  endemic

ಎಂದರೆ  ಸರ್ವ ಋತು ವಿನಲ್ಲಿಯೂ ಕಾಡುವ  ಸಾಧ್ಯತೆ ಇದೆ .ಹಳ್ಳಿ ಗಳಲ್ಲಿ ಕೆಲವು  ತಿಂಗಳು ಮಾತ್ರ

ಇದರ ಹಾವಳಿ  ಇರುತ್ತದೆ .

                ವರುಷ ವರುಷ ಕಾಯಿಲೆ ಸೀಸನ್ ನಲ್ಲಿ ದೊಡ್ಡ ಸುದ್ದಿಆಗುತ್ತದೆ .ಎಲ್ಲರೂ ಸೊಳ್ಳೆ ಮತ್ತು

 ಅರೋಗ್ಯ ಇಲಾಖೆಯನ್ನುಬೈಯುತ್ತಾರೆ .ಆ ಮೇಲೆ ಮರೆಯುತ್ತ್ತಾರೆ . ಪುನರಪಿ ಸ್ಮರಣಂ  ಪುನರಪಿ

ಶಪನಂ . ನಮ್ಮ  ಹಳ್ಳಿಗಳಲ್ಲಿ  ಸೊಳ್ಳೆ ನಿಯಂತ್ರಣ ಕಷ್ಟ .ಮನೆಗಳು ದೂರ ದೂರ ಇರುತ್ತವೆ

.ಮನೆಯ ಎದುರು ತೋಟ ಗದ್ದೆ.ಅಲ್ಲಿ ಮಳೆಗಾಲದಲ್ಲಿ ನೀರು ನಿಲ್ಲದಂತೆ ಮಾಡುವುದು ಅಸಾಧ್ಯ .

ಅರೋಗ್ಯ ಇಲಾಖೆ ಯವರು ಏನು ಮಾಡಿಯಾರು ?ಜನ ಬೈಯುತ್ತಾರೆ ಎಂದು ಫಾಗ್ಗಿಂಗ್ ಮಾಡಿದರೆ

ಅದರ ಪರಿಣಾಮ ಒಂದೆರಡು ದಿನ ಇದ್ದೀತು.ಆದರೆ ನಗರ ಗಳಲ್ಲಿ ನೀರು ನಿಲ್ಲದಂತೆ ಮಾಡುವುದು

ಅಸಾಧ್ಯ ಅಲ್ಲ .ಆದರೆ ಎಲ್ಲರೂ ತಮ್ಮ ಮನೆಗೆ ರೋಗbಬಂದಾಗ ಮಾತ್ರ ಎಚ್ಚೆತ್ತು ಕೊಳ್ಳುತ್ತಾರೆ .


                     ಡೆಂಗ್ಯು ಕಾಯಿಲೆ ಗೆ ಔಷಧಿ ಇಲ್ಲ . ತನ್ನಿಂದ ತಾನೇ ಅದು ವಾಸಿಯಾಗ ಬೇಕು .ಜ್ರರ

ನೋವಿಗೆ  ಪ್ಯಾರಸಿಟಮಾಲ್  ಮಾತ್ರೆ  ಅಥವಾ ಇಂಜೆಕ್ಷನ್  ಕೊಡುವರು .

                          ಈ ಕಾಯಿಲೆಯಲ್ಲಿ ಪ್ಲೇಟ್ ಲೆಟ್ ಎಂಬ ರಕ್ತ ಕಣಗಳು ಕಮ್ಮಿ ಯಾಗುತ್ತವೆ .ಆದರೆ

ಇದಕ್ಕೂ ರೋಗದ  ತೀವ್ರತೆಗೂ ನೇರ ಸಂಬಂಧ ಇದ್ದ ಹಾಗೆ ಇಲ್ಲ .ಕಮ್ಮಿಯಾದ  ಸಂಖ್ಯೆ ತಾನೇ

ಸರಿಯಾಗುವುದು .ಇದರ ಸಂಖ್ಯೆ  ೧೦೦೦೦ ಕ್ಕಿಂತ ಕಮ್ಮಿ ಯಾದರೆ ಅಥವಾ ರಕ್ತ ಸ್ರಾವ ಇದ್ದರೆ

ಪ್ಲೇಟ್ ಲೆಟ್  ಕೊಡುವರು .


                    ಹಾಗಾದರೆ ಈ ಕಾಯಿಲೆ  ತೀವ್ರ ತರ ರೂಪ  ಪಡೆಯುವುದು  ಹೇಗೆ ? ಕೆಲವೊಂದು

ರೋಗಿಗಳಲ್ಲಿ ಹಠಾತ್ ರಕ್ತದ ಒತ್ತಡ ಕಮ್ಮಿಆಗುವುದು .ಜ್ವರ ಬಿಟ್ಟ ಮೇಲೆಯೂ ಇದು ಅಗ ಬಹುದು

ಇದನ್ನು  ಡೆಂಗ್ಯು ಶಾಕ್ ಎನ್ನುವರು . ಅಪರೂಪಕ್ಕೆ ಕೆಲವರಲ್ಲಿ  ಕಾಯಿಲೆ ಮೆದುಳಿಗೆ ಬಂದು

ಪ್ರಾಣಾಪಾಯ  ಉಂಟಾಗುವುದು .







ಲೈಬ್ರರಿಯನ್ನೂ ಹೋಟೆಲ್ ಮಾಣಿಯೂ

ಚಿಕ್ಕಂದಿನಲ್ಲಿ  ನನಗೆ ಎರಡು  ಉದ್ಯೋಗಿಗಳ ಬಗ್ಗೆ ಅಸೂಯೆ .ಒಂದು ಹೋಟೆಲ್ ಮಾಣಿ

.ಹೋಟೆಲ್ನಲ್ಲಿ  ಗಮಗಮಿಸುವ ನೀರುಳ್ಳಿ ಬಜೆ ಗೋಳಿಬಜೆ ನಮಗೆ ಗಗನ ಕುಸುಮ .ಏಕೆಂದರೆ

ಕೈಯಲ್ಲಿ ಕಾಸಿಲ್ಲ ,ಇದ್ದರೂ ನಮ್ಮ ಅರ್ಥಿಕ ಸ್ಥಿತಿಗೆ ಒಂದು ಫುಲ್ ಪ್ಲೇಟ್ ಸಿಗಲಾರದು ,ಅರ್ಧ

ಪ್ಲೇಟ್ ಅಂತ  ಕೊಡುವುದಿಲ್ಲ. ಹೋಟೆಲ್ ಮಾಣಿ ಗಾದರೋ  ಉಳಿದ ನೀರುಳ್ಳಿ ಮತ್ತು ಗೋಳಿಬಜೆ

ತಿನ್ನುವ ಭಾಗ್ಯಇದೆಯಲ್ಲ .ದೊಡ್ಡವನಾದಾಗ ಹೋಟೆಲ್ ಕೆಲಸಕ್ಕೆ ಸೇರಬೇಕು .


      ಇನ್ನೊಂದು  ನಮ್ಮ ಪಂಚಾಯತ್ ಲೈಬ್ರರಿ ನೋಡಿಕೊಳ್ಳುತ್ತಿದ್ದ ಸೆಕ್ರೆಟರಿ .ಆಗಿನ್ನೂ

ಲೈಬ್ರರಿಯನ್  ಹುದ್ದೆ ಇರಲಿಲ್ಲ .ವಾಚನಾಲಯದಲ್ಲಿ ಒಳ್ಳೆಯ ಕತೆ ಕಾದಂಬರಿ ಪುಸ್ತಕಗಳು

ಇದ್ದವು .ಕಾರಂತ,ಕುವೆಂಪು ,ರಾವ್ ಬಹಾದ್ದೂರ್ ,ಕಟ್ಟಿಮನಿ  ಅವರ ಕೃತಿಗಳಲ್ಲದೆ  ನರಸಿಂಹಯ್ಯ

ಅವರ  ರೋಚಕ ಪತ್ತೇದಾರಿ ಕಾದಂಬರಿಗಳನ್ನು  ಮೊದಲು ಓದಿದ್ದೇ ಅಲ್ಲಿ .ಆದರೆ ಒಮ್ಮೆಗೆ  ಎರಡೇ

ಪುಸ್ತಕ ಕೊಡುತ್ತಿದ್ದರು .ಅದು ಎರಡು ಮೂರು ದಿನದಲ್ಲಿ ಮುಗಿದು ಮುಂದಿನ ಪುಸ್ತಕಕ್ಕೆ ಒಂದು

ವಾರ  ಕಾಯಬೇಕಿತ್ತು .ಏಕೆಂದರೆ hಹಲವು ಜವಾಬ್ದಾರಿ ಹೊತ್ತ  ಸೆಕ್ರೆಟರಿ ಪುಸ್ತಕ ವಿತರಣೆಗೆ ಒಂದು

ದಿನ ನಿಗದಿ ಮಾಡಿದ್ದರು . ಹಲವು ಬಾರಿ ಆ ದಿನವೂ ಅವರು ರಜೆ ಮೇಲೆ ಇದ್ದರೆ ನಮ್ಮ ನಿರಾಸೆ

ಹೇಳತೀರದು .ಆದುದರಿಂದ  ಇಂತಹ ಲೈಬ್ರರಿ ಯ ಮೇಲ್ವಿಚಾರಕ ಕೆಲಸಕ್ಕೆ ಸೇರಬೇಕು ,ಅಂದರೆ

ಎಷ್ಟು ಪುಸ್ತಕ ಬೇಕಾದರೂ ಆದ ಬಹುದು ಎಂಬ ಯೋಚನೆ ಆಗಾಗ ಬರುತ್ತಿತ್ತು.

                      ಈಗ ನಮ್ಮಅರ್ಥಿಕ  ಸ್ಥಿತಿ ಸುದಾರಿಸಿದೆ. ನೀರುಳ್ಳಿ ಬಜೆ ಗೋಳಿಬಜೆ ಆಸೆ ಕಮ್ಮಿ ಯಾಗಿದೆ .

ಪುಸ್ತಕ ಓದುವ ಅಸೆ ಹಾಗೇ ಇದೆ.  ಬೇಕಾದ ಹೊಸ ಕೃತಿಗಳು ಆನ್ಲೈನ್ನಲ್ಲಿ ಸಿಗುತ್ತವೆ . ಹಳೆಯ ಕೆಲವು

ಹೊತ್ತಿಗೆಗಳು  ಅಂಗಡಿಯಲ್ಲ್ಲಿ ಯಲ್ಲಿ  ಸಿಗುತ್ತಿಲ್ಲ ,ಲೈಬ್ರರಿಗಳಲ್ಲೂ .