ಬೆಂಬಲಿಗರು

ಗುರುವಾರ, ಡಿಸೆಂಬರ್ 17, 2015

ಥೈರಾಯಿಡ್ ಕಾಯಿಲೆಗಳು

ನಮ್ಮ ಕುತ್ತಿಗೆ ಎದುರು ಭಾಗದಲ್ಲಿ ಥೈರಾಯಿಡ್ ಎಂಬ ನಿರ್ನಾಳ ಗ್ರಂಥಿ ಇದೆ .ಇದು 

ಥೈರಾಯಿಡ್ ಹಾರ್ಮೋನ್ ಉತ್ಪತ್ತಿ ಮಾಡುವುದು .ಈ ಹಾರ್ಮೋನ್ ಶರೀರದ 

ಎಲ್ಲಾ ಅಂಗಗಳ ಜೀವಕೋಶಗಳು ಕ್ರಿಯಾಶೀಲ ವಾಗಿ ಇರುವಂತೆ ಮಾಡುವುದು .

                     
ತಲೆಯ ಒಳಗೆ ಮೆದುಳಿನ ಕೆಳ ಭಾಗದಲ್ಲಿ ಇರುವ ಪಿಟ್ಯುಟರಿ ಗ್ರಂಥಿಯು ಇದರ 

ಕಾರ್ಯವನ್ನು ಥೈರಾಯಿಡ್ ಚೋದಕ (stimulating hormone TSH) 

ದ  ಮುಖಾಂತರ  ನಿಯಂತ್ರಿಸುವುವುದು .

ಥೈರಾಯಿಡ್ ಹಾರ್ಮೋನ್ ತಯಾರಿಕೆಗೆ ಮೂಲ ವಸ್ತು ತೈರೋಸಿನ್  ಎಂಬ 

ಅಮೈನೊ ಆಮ್ಲ  ಮತ್ತು  ಅಯೋಡೀನ್ .ಹಿಂದೆ ಅಹಾರಲ್ಲಿ  ಅಯೋಡೀನ್ 

ಕೊರತೆಯಿಂದ ಈ ಹಾರ್ಮೋನ್ ಉತ್ಪತ್ತಿ ವ್ಯಯವಾಗಿ  ಜನರು ಬಳಲುತ್ತಿದ್ದರು .

ಈಗ ಕಡ್ಡಾಯವಾಗಿ ಉಪ್ಪಿನಲ್ಲಿ ಅಯೋಡೀನ್ ಸೇರಿಸುವರು .

ಈಗ  ಸ್ವಯಂ ನಿರೋಧಕ (ಆಟೋ ಇಮ್ಯೂನ್) ಕಾರಣ ಹೆಚ್ಚಾಗಿ  ಥೈರಾಯಿಡ್ 

ಕಾಯಿಲೆ ಬರುವುದು .

ಥೈರಾಯಿಡ್  ಹಾರ್ಮೋನ್ ಕಡಿಮೆಯಾದರೆ  ಶರೀರದ ತೂಕ ಹೆಚ್ಚುವುದು ,

ಆಯಾಸ ,ಚಳಿ  ,ಶರೀರದಲ್ಲಿ ನೀರು ನಿಂತಂತೆ ಆಗುವುದು ,ಕೂದಲು 

ಉದುರುವುದು ,ಮುಟ್ಟಿನ ಏರುಪೇರು ,ಚರ್ಮ ಒಣಗುವುದು .

ಹಾರ್ಮೋನ್ ಅಧಿಕ ವಾದರೆ  ಹಸಿವು ಅಧಿಕ ಇದ್ದರೂ ತೂಕ ಇಳಿಯುವುದು 

ಎದೆ ಬಡಿತ ,ಮಾಂಸ ಖಂಡಗಳು ಸೋಲುವವು.ಸೆಖೆ .ಕೈ ನಡುಕ ಕಣ್ಣುಗಳ 

ತೊಂದರೆ ಇತ್ಯಾದಿ ಉಂಟಾಗ ಬಹುದು .

ಬುದ್ದಿ ಮಾಂದ್ಯತೆ ಮತ್ತು ಮಾನಸಿಕ  ರೋಗ ಲಕ್ಷಣಗಳೂ ಥೈರಾಯಿಡ್ 

ಹಾರ್ಮೋನ್ ಏರು ಪೇರಿನಿಂದ  ಬರ ಬಹುದು .

ಥೈರಾಯಿಡ್ ಹಾರ್ಮೋನ್ ಪ್ರಮಾಣವನ್ನು ರಕ್ತ ಪರೀಕ್ಷೆಯ ಮೂಲಕ ತಿಳಿಯುವರು .

ಇದರಲ್ಲಿ  T3 ,T4 ಎರಡು ಥೈರಾಯಿಡ್ ಹಾರ್ಮೋನ್ ಗಳು .ಮತ್ತು  TSH

ಎಂಬುದು ಪಿಟ್ಯುಟರಿ ಗ್ರಂಥಿ ಉತ್ಪಾದಿಸುವ   ಥೈರಾಯಿಡ್ ಪ್ರಚೋದಕ.ಮೂಲತಃ

ಥೈರಾಯಿಡ್ ಗ್ರಂಥಿಯ ಸಮಸ್ಯೆಯಿಂದ ಥೈರಾಯಿಡ್  ಹಾರ್ಮೋನ್  ಉತ್ಪತ್ತಿ 

ಕಮ್ಮಿ ಆದರೆ  T3 T4 ಕಮ್ಮಿಯಾಗಿ  ಪಿಟ್ಯುಟರಿ ಗ್ರಂಥಿಯು ಹೆಚ್ಚು TSH

ಸ್ರವಿಸಿ ಅದನ್ನು ಸರಿದೂಗಿಸಲು ಯತ್ಸಿಸುವುದು .ಅದೇ ರೀತಿ  ಥೈರಾಯಿಡ್ 

ಗ್ರಂಥಿಯ ಕಾಯಿಲೆಯಿಂದ  ಹಾರ್ಮೋನ್ ಅಧಿಕ  ರಕ್ತ ಸೇರಿದೊಡನೆ 

TSH  ಸ್ರಾವ ವಾಡಿಕೆಗಿಂತಲೂ ಕಡಿಮೆ ಆಗುವುದು .

ಥೈರಾಯಿಡ್ ಹೆಚ್ಚು ಅಥವಾ ಕಮ್ಮಿ ಎರಡಕ್ಕೂ ಸೂಕ್ತ ಚಿಕಿತ್ಸೆ ಇದೆ ಮತ್ತು 

ಅವಶ್ಯಕ .

ಭಾನುವಾರ, ಡಿಸೆಂಬರ್ 13, 2015

ಸ್ವಯಂ ನಿರೋಧಕ ಕಾಯಿಲೆಗಳು (ಆಟೋ ಇಮ್ಯೂನ್ ಡಿಸೀಸಸ್)

ನಮ್ಮ ಶರೀರದ  ರೋಗ ರಕ್ಷಣಾ ವ್ಯವಸ್ಥೆಯ ಬಗ್ಗೆ  ಹಿಂದೆ ಇದೇ ಬ್ಲಾಗ್ ನಲ್ಲಿ 

ಬರೆದಿದ್ದೇನೆ. ಯಾವುದೇ ಹೊರಗಿನ ರೋಗಾಣು ಅಥವಾ ವಸ್ತು ಶರೀರ ದ 

ಸಂಪರ್ಕ ಕ್ಕೆ ಬಂದೊಡನೆ  ನಮ್ಮ ಶರೀರದ ರಕ್ಷಕ  ಕಣಗಳು ಅವುಗಳನ್ನು 

ಗುರುತಿಸಿ  ಅವುಗಳ ವಿರುದ್ಧ ಹೊರಾಡಲು ಬಿಳಿ ರಕ್ತ ಕಣಗಳಿಗೆ ಆದೇಶ ನೀಡುತ್ತವೆ .

ಬಿಳಿ ರಕ್ತ ಕಣಗಳು ನೇರವಾಗಿ ಅಥವಾ ತಾವು ಉತ್ಪಾದಿಸುವ  ರೋಗ ನಿರೋಧಕ 

(antibody) ವಸ್ತುಗಳ ಸಹಾಯದಿಂದ ಈ ಕಾರ್ಯವನ್ನು ನೆರವೇರಿಸುತ್ತವೆ .


                    ಕೆಲವೊಮ್ಮೆ ಈ ವ್ಯವಸ್ಥೆ ಹತೋಟಿ ತಪ್ಪಿ ನಮ್ಮ ಶರೀರದ ಸ್ವಂತ 

ಅಂಗಗಳ ಮೇಲೆಯೇ ಈ ರಕ್ಷಕರು ತಪ್ಪ್ಪಿ ಧಾಳಿ ಮಾಡುವುದುಂಟು .ಇದು 

ಭಸ್ಮಾಸುರನ ಕತೆಯಂತೆ .ತನ್ನ ರಕ್ಷಣೆಗೆ ಯಾರ ತಲೆಯ ಮೇಲೆ ಕೈ ಇಟ್ಟರೂ 

ಅವರು ಉರಿದು ಬೂದಿಯಾಗುವಂತೆ ವರ ಪಡೆದ ಬಸ್ಮಾಸುರ ಮಾನಿನಿಯ 

ಪರವಶದಲ್ಲಿ ತನ್ನ ತಲೆ ಮೇಲೆ  ಕೈ ಇಟ್ಟು ಭಸ್ಮ ಆಗುತ್ತಾನೆ .

            ಹಾಗೆಯೇ ಇಲ್ಲಿಯೂ  ದೇಹದ ಅಂಗಗಳ ಮೇಲೆ ಬಿಳಿ ರಕ್ತ ಕಣಗಳು 

ನೇರವಾಗಿ ಅಥವಾ ಪ್ರತಿ ವಸ್ತು (ಆಂಟಿಬಾಡಿ) ಗಳ ಮೂಲಕ ಹಾನಿ ಮಾಡಿ 

ರೋಗ ಉಂಟು ಮಾಡುತ್ತವೆ .ಇದನ್ನು ಆಟೋ ಇಮ್ಯೂನ್ ಕಾಯಿಲೆಗಳು 

ಅಥವಾ ಸ್ವಯಂ ನಿರೋಧಕ ಕಾಯಿಲೆಗಳು ಎನ್ನುವರು .

               ಉದಾಹರಣೆಗೆ  ಥೈರಾಯಿಡ್ ಗ್ರಂಥಿಗಳ ಮೇಲೆ  ಈ ರೀತಿ ಆದರೆ 

ಅದು ರೋಗ ಗ್ರಸ್ಥವಾಗಿ  ಹಾರ್ಮೋನ್ ಸ್ರಾವ ಹೆಚ್ಚು ಅಥವಾ ಕಮ್ಮಿ ಆಗಿ 

ಅನುಗುಣವಾದ ಕಾಯಿಲೆ ಬರ ಬಹುದು .ಮೇದೋಜೀರಕ ಗ್ರಂಥಿಯ ನಿರ್ನಾಳ 

ಕೋಶಗಳು  ಗುರಿಯಾದರೆ ಸಕ್ಕರೆ ಕಾಯಿಲೆ ಬರ ಬಹುದು .ಕರುಳಿನ ಮೇಲೆ 

ಧಾಳಿ ಆದರೆ ಆಗಾಗ್ಗೆ ರಕ್ತ ಭೇದಿ ಯಾಗುವ  ಅಲ್ಸರೆಟಿವ್ ಕೊಲೈಟಿಸ್ ನಂತಹ 

ಕಾಯಿಲೆ ಬರ ಬಹುದು .ಬಹು ಅಂಗಗಳನ್ನು ಕಾಡುವ  ಸಿಸ್ಟಮಿಕ್ ಲ್ಯುಪಸ್

ಏರಿಥಮಟೋಸಿಸ್ ಎಂಬ ಕಾಯಿಲೆ ಬರ ಬಹುದು .ಕೆಂಪು ರಕ್ತ ಕಣಗಳ 

ಮೇಲೆ  ಹಾವಳಿ ನಡೆದರೆ ಅವುಗಳ ಮರಣದಿಂದ ರಕ್ತ ಹೀನತೆ ಉಂಟಾಗ ಬಹುದು .


                 ಈ ಸ್ವಯಂ ನಿರೋಧಕ ಕಾಯಿಲೆಗಳು ಅಭಿವೃದ್ದಿ ಹೊಂದಿದ 

ರಾಷ್ಟಗಳಲ್ಲಿ ಹೆಚ್ಚು ಕಾಣಿಸಿ  ಕೊಳ್ಳುತ್ತಿವೆ.

ಶನಿವಾರ, ಡಿಸೆಂಬರ್ 12, 2015

ಸ್ಟೀರಾಯ್ಡ್ ಎಂಬ ಭೂತ

ಆ ಡಾಕ್ಟರಲ್ಲಿ ಹೋದರೆ ಎಲ್ಲದಕ್ಕೂ ಸ್ಟೀರಾಯ್ಡ್ ಕೊಡುವರು .ಅದನ್ನು ತಿಂದರೆ 

ಮತ್ತೆ ಮುಗಿಯಿತು ಎಂದು ಕೆಲ ಅನುಭವಿ ರೋಗಿಗಳು ಆಡಿ ಕೊಳ್ಳುವುದನ್ನು ನೀವು

ಕೇಳಿರ ಬಹುದು .ಇನ್ನು ಕೆಲವೊಮ್ಮೆ ಮಾಧ್ಯಮಗಳಲ್ಲಿ ಕ್ರೀಡಾ ಪಟು ಸ್ಟೀರಾಯ್ಡ್ 

ಸೇವಿಸಿ  ಪದಕ ಕಳೆದುಕೊಂಡು ಅನರ್ಹ ರಾದ  ವಾರ್ತೆ ಓದಿರ ಬಹುದು .

ಹಾಗಾದರೆ ಏನಿದು  ಸ್ಟೀರಾಯ್ಡ್?ಇದು ನಮಗೆ ವರವೇ ?ಶಾಪವೇ ?

                  ಸ್ಟೀರಾಯ್ಡ್ ಎಂದರೆ ಒಂದು ವಿಶಿಷ್ಟ ಸಾವಯವ ರಾಸಾಯನಿಕ ಘಟಕ 

.ಇದು ನಮ್ಮ ಶರೀರದ ಪ್ರತಿಯೊಂದು ಜೀವ ಕೋಶದಲ್ಲೂ ಅಡಕವಾಗಿರುವುದು ,

ಕೊಲೆಸ್ಟರಾಲ್ ಇದೆ ರಚನೆಯ ರಾಸಾಯನಿಕ .
                          
                         Image result for structure of steroids
                 
ಇದರಿಂದ  ಉತ್ಪತ್ತಿಯಾಗುವ  ರಸ ಧಾತುಗಳು (ಹಾರ್ಮೋನ್)ಗಳಾದ ಲೈಂಗಿಕ 

ಹಾರ್ಮೋನ್ ಗಳು  ಟೆಸ್ಟೋಸ್ಟೆರಾನ್ ಮತ್ತು  ಈಸ್ಟ್ರೋಜನ್ ಗಳು , ಅಡ್ರಿನಲ್ 

ಗ್ರಂಥಿಗಳಿಂದ ಉತ್ಪತ್ತಿಯಾಗುವ  ಲವಣ ನಿಯಂತ್ರಕ ಹಾರ್ಮೋನ್ ಮತ್ತು 

ಅತೀ ಮುಖ್ಯವಾದ ಕಾರ್ಟಿಸೋಲ್ .


ಟೆಸ್ಟೋಸ್ಟೆರಾನ್  ಗಂಡು ಹಾರ್ಮೋನ್ .ಇದರ ಅಥವಾ ಇದರಿಂದ ಜನಿತ 

ವಸ್ತುಗಳ ಸೇವನೆಯಿಂದ ಮಾಂಸ ಖಂಡಗಳು ಬೆಳೆದು ಬಲಶಾಲಿ ಆಗುವುವು .

ಇದೇ ಕಾರಣಕ್ಕೆ ಕ್ರೀಡಾ ಪಟುಗಳು ಇದನ್ನು ಸೇವಿಸಿ ಕೃತಕವಾಗಿ ತಮ್ಮ 

ಶಕ್ತಿ ಹೆಚ್ಚಿಸಿ ಕೊಳ್ಳುವರು .ಆದರೆ ಇದನ್ನು ಅದಿಕೃತವಾಗಿ  ನಿಷೇಧಿಸಲಾಗಿದೆ .

ಇಸ್ಟ್ರೋಜನ್ ಹೆಣ್ಣು ಹಾರ್ಮೋನ್ .ಹೆಂಗಸರಲ್ಲಿ ಹೆಚ್ಚು ಇರುವುದು .ಈ ಎರಡು 

ಲೈಂಗಿಕ ಹಾರ್ಮೋನ್ ಗಳೂ ಗಂಡು ಹೆಣ್ಣು ಇಬ್ಬರಲ್ಲೂ ಇದ್ದು ಅವುಗಳ 

ಪ್ರಮಾಣದಲ್ಲಿ ಮಾತ್ರ ವ್ಯತ್ಯಾಸ .ಆದುದರಿಂದ ಎಲ್ಲರೂ ಅರ್ಧ ನಾರೀಶ್ವರರೆ.
                                          
                                  

                             ಇನ್ನು ವೈದ್ಯ ಶಾಸ್ತ್ರದಲ್ಲಿ ಹೆಚ್ಚು ಬಳಕೆಯಲ್ಲಿ ಇರುವ 

ಸ್ಟೀರಾಯ್ಡ್ ಕಾರ್ಟಿಸೋಲ್ ನಂತಹ ಅಡ್ರಿನಲ್ ಗ್ರಂಥಿ ಹಾರ್ಮೋನ್ ನ  ಮೌಲ್ಯ 

ವರ್ಧಿತ ವಸ್ತುಗಳು .ಪ್ರೆಡ್ನಿಸೋಲೋನ್, ದೆಕ್ಷಮೆಥಸೊನ್, ಬೀಟಾ ಮೆಥಸೋನ್ 

ಮೀಥೈಲ್ ಪ್ರೆದ್ನಿಸೋಲೋನ್  ಇತ್ಯಾದಿ ಬಳಕೆಯಲ್ಲಿ ಇರುವುವು.

                        ಇವುಗಳನ್ನು  ಅಸ್ಥಮಾ ,ಸಂಧಿವಾತ ,ಅಲರ್ಜಿ  ಮತ್ತು ಕ್ಯಾನ್ಸರ್ 

ಇತ್ಯಾದಿ ರೋಗಗಳಲ್ಲಿ ಬಳಸುವರು .ಇದು ಮುಲಾಮು ,ಸೇದುವ ಇನ್ಹೇಲರ್ 

,ಮಾತ್ರೆ ಚುಚ್ಚುಮದ್ದು ರೂಪದಲ್ಲಿಯೂ ಸಿಗುವುದು .

ವೈಜ್ಞಾನಿಕವಾಗಿ ಪರಿಣಿತ ವೈದ್ಯರ ಶಿಫಾರಸು ಮೇಲೆ ಇವನ್ನು ತೆಗೆದು ಕೊಳ್ಳ 

ಬೇಕು .ಯಾಕೆಂದರೆ ಅಡ್ಡ ಪರಿಣಾಮ ಇದೆ ಎಂದು ಔಷಧಿ ತೆಗೆದು  ಸೇವಿಸದೆ 

ಇದ್ದರೆ ಆಗುವ ಹಾನಿ ಹೆಚ್ಚು .ಅದೇ ರೀತಿ ಪರಿಣಾಮ ಇದೆ ಎಂದು ಅಡ್ಡ ಪರಿಣಾಮ 

ವನ್ನು ನಿರ್ಲಕ್ಷಿಸಿಸಿ ಔಷಧಿ ತೆಗೆದು ಕೊಳ್ಳುವುದೂ ತಪ್ಪು .

                         ತೂಕ ಹೆಚ್ಚುವುದು ,ಎಲುಬುಗಳು ಕ್ಷೀಣ ವಾಗುವುದು ,ಸಕ್ಕರೆ 

ಹತೋಟಿ ತಪ್ಪುವುದು ಇತ್ಯಾದಿ ಸ್ಟೀರಾಯ್ಡ್ ದೀರ್ಘ ಕಾಲ ಸೇವಿಸಿದರೆ 

ಉಂಟಾಗುವ ಅಡ್ಡ ಪರಿಣಾಮಗಳು .ಆದರೆ  ಇನ್ಹೇಲರ್ ,ಮುಲಾಮುಗಳಲ್ಲಿ ಇರುವ 

ಸ್ಟೀರಾಯ್ಡ್  ರಕ್ತ ಸೇರುವುದು ಅತೀ ಕಡಿಮೆ ಆದುದರಿಂದ ಕೆಟ್ಟ ಪರಿಣಾಮ ಕಡಿಮೆ .

    (ಚಿತ್ರಗಳ ಮೂಲಗಳಿಗೆ ಆಭಾರಿಯಾಗಿದ್ದೇನೆ)

ಸೋಮವಾರ, ಡಿಸೆಂಬರ್ 7, 2015

ಸಾಮಾನ್ಯ ಶೀತ ಮತ್ತು ಕೆಲ ನಂಬಿಕೆಗಳು ಮತ್ತು ವಾಸ್ತವ

             ಸಾಮಾನ್ಯ ಶೀತ ಮತ್ತು ಕೆಲ ನಂಬಿಕೆಗಳು ಮತ್ತು ವಾಸ್ತವ
ಸಾಮಾನ್ಯ  ಶೀತ ಜ್ವರ (ಕಾಮನ್ ಕೋಲ್ಡ್ ) ದಿಂದ ಬಳಲುತ್ತಿದ್ದ  ಓರ್ವ ಮಹಿಳೆ 

ಡಾಕ್ಟ್ರೆ ನಾನು ಹಣ್ಣಿನ ರಸ ಬಿಸಿ ಮಾಡಿ ಕುಡಿಯ ಬಹುದೋ ಎಂದು ಕೇಳಿದರು .

ನಾನೆಂದೆ "ತಣ್ಣನೆ ರಸವನ್ನೇ ಕುಡಿಯಿರಿ ಬಿಸಿ ಮಾಡಿದರೆ ಜೀವಸತ್ವಗಳು ನಷ್ಟ 

ಪಡುವವು .'ಅದರಂತೆ ಬಹಳ ಮಂದಿ ಎಳನೀರನ್ನು ಬಿಸಿ ಮಾಡಿ ಕುಡಿಯುವರು .

ಏಳನೀರಿನಲ್ಲಿ  ವಾಡಿಕೆಯ ನಂಬಿಕೆಯಂತೆ ಔಷಧಿಯ ಗುಣಗಳೋ ,ಲವಣಾಂಶ 

ವೋ ಇವೆಯೆಂದು ದೃಡ ಪಟ್ಟಿಲ್ಲ .ಕುಡಿಯುವುದಿದ್ದರೆ ತಣ್ಣಗೆಯೇ ಕುಡಿಯಿರಿ .


            ಸಾಮಾನ್ಯ ಶೀತ  ಹೆಚ್ಚಾಗಿ   ರೈನೊ ವೈರಸ್ (ನಾಸಿಕ ವೈರಸ್),ಕೋರೋನಾ ವೈರಸ್ ಮತ್ತು ಆರ್ ಎಸ್ ವೈರಸ್ ಎಂಬ ರೋಗಾಣುವಿನಿಂದಬರುವುದು .ಸಣ್ಣನೆಯ ಜ್ವರ ತಲೆ ನೋವು .ಮೂಗಿನಿಂದ 

ನೆಗಡಿ ಸುರಿಯುವುದು .ಗಂಟಲು ಕಿರಿ ಕಿರಿ ,ಕೆಮ್ಮು ಇರ ಬಹುದು .ಮಲಗಿದಾಗ 

ಮೂಗಿನ ಸ್ರಾವ ಹಿಮ್ಮುಖ ಗಂಟಲಿಗೆ ಹರಿದು (ಹೆಚ್ಚಾಗಿ  ಎಳೆ ಮಕ್ಕಳಲ್ಲಿ )ಕೆಮ್ಮು 

ಗೊರ ಗೊರ ಉಂಟಾಗುವುದು .

                                     

     
ಸಾಮಾನ್ಯ ಶೀತ ಕ್ಕೆ ಆಂಟಿ ಬಯೋಟಿಕ್ ಪ್ರಯೋಜನ ಇಲ್ಲ .

ಆದರೂ ಬಹಳ ಮಂದಿ ಮಕ್ಕಳಿಗೆ ಆಂಟಿಬಯೋಟಿಕ್ ಔಷಧಿಗಳನ್ನುಕೊಡುವಂತೆ ಹೆತ್ತವರು ಒತ್ತಾಯಿಸುವರು .ಕೆಲವೊಮ್ಮೆ ತಾವೇ ಕೊಡುವರು .ಇದರಿಂದ ಹಾನಿಯೇ ಹೆಚ್ಚು .

ಎಳೆ ಮಕ್ಕಳ ಮೂಗು  ನೆಗಡಿಯಿಂದ ಮುಚ್ಚ್ಚಿ ಹೋಗುವುದರಿಂದ ಅವುಗಳನ್ನು 

ಸ್ವಚ್ಚ ಪಡಿಸುವುದು ಉತ್ತಮ . ಚಿಕ್ಕ ಸಿರಿಂಜ್ ಮೂಲಕ ಮೂಗನ್ನು ಸಕ್ಶನ್ 

ಮಾಡುತ್ತಾರೆ .ಅಲ್ಲದೆ ಮೂಗಿಗೆ ಸಾಮಾನ್ಯ  ಉಪ್ಪಿನ ದ್ರಾವಣ ದ (saline)

  ಹನಿಗಳು ಇಲ್ಲವೇ ಸ್ಪ್ರೇ  ಬಿಟ್ಟರೆ ನೆಗಡಿ ನೀರಾಗಿ ಬರುವುದು . 

 ಜ್ವರಕ್ಕೆ  ಸಾಮಾನ್ಯ ಪ್ಯಾರಸಿಟಮಾಲ್  ,ಸ್ವಲ್ಪ ದೊಡ್ಡ ಮಕ್ಕಳಿಗೆ ಇಬುಫ್ರೋಫೆನ್ ನಂತಹ ಸಿರಪ್ ಅಥವಾ ಮಾತ್ರೆ ಸಾಕು .

ಗಂಟಲು ಕಿರಿ ಕಿರಿ ಮತ್ತು ನೋವಿಗೆ ಗೆ  ಐಸ್ ತುಂಡುಗಳನ್ನು ಚೀಪಲು ಕೊಡ ಬಹುದು .(ಇದು ಕೂಡ ಸಾಮಾನ್ಯ ನಂಬಿಕೆಗೆ  ವಿರುದ್ದ ಅಲ್ಲವೇ ?)ನಾಲ್ಕು ವರ್ಷಕ್ಕಿಂತ ಕೆಳಗಿನ ಎಳೆ ಹಸುಳೆಗಳಿಗೆ  ವೈದ್ಯರ ಸಲಹೆ ಇಲ್ಲದೆ ಕೆಮ್ಮಿನ ಸಿರಪ್ ಕೊಡದಿರುವುದೇ ಒಳ್ಳೆಯದು .ಒಂದು ವರ್ಷದ ಮೇಲಿನ ಮಕ್ಕಳಿಗೆ ಕೆಮ್ಮಿಗೆ ಜೇನು ತುಪ್ಪ ಕೊಡ ಬಹುದು .ನಾನು ಹೇಳಿದ ವಿಚಾರ ಸರಿಯೇ ಎಂದು ಪರಿಶೀಲಿಸಲು ಅಮೆರಿಕಾ ದೇಶದ ಪ್ರತಿಷ್ಠಿತ ರೋಗ ಹತೋಟಿ ಕೇಂದ್ರದ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಓದಿರಿ   https://www.cdc.gov/antibiotic-use/community/for-patients/common-illnesses/colds.html                             



        ಇನ್ನು ನಾವು ಆರಂಬಿಸಿದ ಹಣ್ಣಿನ ರಸಕ್ಕೆ ಬರೋಣ .ಹಣ್ಣನ್ನು ಇಡೀ 

ತಿನ್ನುವುದು ಎಷ್ಟೋ ಒಳ್ಳೆಯದು .ಯಾಕೆಂದರೆ ಅದರಲ್ಲಿ ಹಣ್ಣಿನ ಸಕ್ಕರೆಯೊಂದಿಗೆ 

ನಾರೂ ಹೊಟ್ಟೆಗೆ ಸೇರುವುದು .ನಾರಿನ ಅಂಶ ಆರೋಗ್ಯಕ್ಕೆ ಸಹಾಯಕಾರಿ .

ತಿನ್ನಲು ಅಶಕ್ತರು  ಮಾತ್ರ  ರಸ ಮಾಡಿ ಕುಡಿಯ ಬಹುದು .  
 ಶುದ್ದ ವಾದ ಐಸ್ ತಿಂದರೆ ಶೀತ ಬಾರದು ,ಶೀತದಿಂದ ಗಂಟಲು ಕಿರಿ ಆದರೆ ಐಸ್ ಚೀಪಬಹುದು ,ಇಲ್ಲಾ ಉಪ್ಪು ಬಿಸಿ ನೀರಲ್ಲಿ ಬಾಯಿ ಮುಕ್ಕುಳಿಸ ಬಹುದು

       ಬಾಲಂಗೋಚಿ:   ಶೀತಕ್ಕೆ ಇಂಗ್ಲಿಷ್ ನಲ್ಲಿ  ರನ್ನಿ (ರನ್ನಿಂಗ್ ಅಲ್ಲ ) ನೋಸ್

ಎನ್ನುವರು .ರನ್ನಿ ನೋಸ್ ಅಂಡ್ ಸ್ಮೆಲ್ಲಿ ಫೀಟ್ (ಓದುವ ಮೂಗು ಮತ್ತು ವಾಸನೆ 

ಯ ಕಾಲುಗಳು ) ಎಂಬ ತಮಾಷೆಯ ಪಡೆ ನುಡಿ ಇದೆ .

ಭಾನುವಾರ, ಡಿಸೆಂಬರ್ 6, 2015

ಬದಲಾಗುತ್ತಿರುವ ಹಿರಿಯ ರೋಗಿಗಳ ಆರೈಕೆ

                       


ಟಿವಿ ಧಾರವಾಹಿ ,ಮೊಬೈಲ್ ,ಮಕ್ಕಳ ಎಂಟ್ರನ್ಸ್ ಪರೀಕ್ಷೆ ಇತ್ಯಾದಿಗಳ 

ಭರಾಟೆಯಲ್ಲಿ ಮನೆಯಲ್ಲಿ ಹಿರಿಯರ ಬೇಕು ಬೇಡ ಕೇಳುವರಿಲ್ಲದಾಗಿದೆ.ಮಕ್ಕಳಿಗೆ 

ಸಣ್ಣ ಶೀತ ಜ್ವರವಾದರೂ ತಂದೆ ತಾಯಿಗಳು ಆಸ್ಪತ್ರೆಗೆ ಓಡಿ ಬರುವರು 

.ಮದುವೆಯಾದ  ಹೆಣ್ಣು ಮಕ್ಕಳು ಗರ್ಭಿಣಿ ಯಾದಾಗ  ಮಾಸ ಮಾಸ ತಪಾಸಣೆಗೆ 

ಪ್ರಸವ ಕ್ಕೆ  ಬರುವಾಗ ಹಲವು ನೆಂಟರು ಕಾಣ ಬರುವರು .ಜೊತೆಗೆ ಹಣ್ಣು ಹಂಪಲು ಇರುವುದು  .

ಅನುಕೂಲವಂತರ ಮನೆಯ ಹಿರಿಯರು ಆಸ್ಪತ್ರೆಯಲ್ಲಿ ದಾಖಲು ಆದರೆ ನೋಡ 

ಬರುವವರು ಕಡಿಮೆ .ಸಾಂಪತ್ತಿಕವಾಗಿ ಅನುಕೂಲ ಇಲ್ಲದವರೇ ವಾಸಿ .ಹಿರಿಯರ 

ಮೇಲೆ  ಅಲ್ಪ ಸ್ವಲ್ಪ ಗೌರವ ಪ್ರೀತಿ ಉಳಿದಿದೆ.ತುಂಬಾ ಅನುಕೂಲ ಇರುವವರು 

ಕೆಲಸದ ಆಳನ್ನು ಹಿರಿಯರ ದೇಖ ರೇಖೆಗೆ ಬಿಟ್ಟು ಹೋಗುವರು .ಹಿಂದೆಲ್ಲಾ 

ತುರ್ತು ವಿಭಾಗದಲ್ಲಿ ದಾಖಲಾದ ರೋಗಿಯ ಬಂಧುಗಳು ಆತಂಕದ ಮುಖ ಹೊತ್ತು 

ಹೊರಗಡೆ ಕಾಯುತ್ತಿರುವ ದೃಶ್ಯ ಸಾಮಾನ್ಯ ವಾಗಿದ್ದು , ರೌಂಡ್ಸ್  ಮುಗಿಸಿ ಬಂದ 

ವೈದ್ಯರಿಗೆ ಮುತ್ತಿಗೆ ಹಾಕುತ್ತಿದ್ದರು .ಈಗ ಮೊಬೈಲ್ ನಂಬರ್ ಕೊಟ್ಟು ಹೋದ 


ರೋಗಿಯ ಸಂಬಂಧಿಗಳನ್ನು  ವೈದ್ಯರು ಹುಡುಕಿ ಕೊಂಡು ಹೋಗ ಬೇಕಾದ ಪರಿಸ್ಥಿತಿ

ಬಂದಿದೆ.


ಮನೆಯಲ್ಲಿ ನಿಶ್ಚಯವಾದ ಮಕ್ಕಳ ಮದುವೆ ಸಮಯದಲ್ಲಿ ಅಜ್ಜನೋ ಅಜ್ಜಿಯೋ 

ಕಾಯಿಲೆ ಬಿದ್ದರೆ ಮಾತ್ರ ರಾಜೋಪಚಾರ ಸಿಗುತ್ತದೆ .ಆಸ್ಪತ್ರೆಯಲ್ಲಿ ಅವರಿಗೆ 

ಹಾಲು ಹಣ್ಣು ಹಂಪಲು ಯಥೇಚ್ಛ ಸರಬರಾಜು ಆಗುವುದು .ದಿನಾಲೂ ವೈದ್ಯರನ್ನು 

ಬಂದು ವಿಚಾರಣೆ ಮಾಡುವರು .ಮದುವೆ ಮುಗಿಯಿತೋ ಡಿಸ್ಚಾರ್ಜ್ ಮಾಡಿ 

ಮೂಲೆಗೆ ಎಸೆಯುವರು .

ಹಾಗೆಂದು ಮನೆಯ ಕಿರಿಯರು ಕೆಟ್ಟವರಲ್ಲ .ದೈವ ಭಕ್ತರು .ವಾರ ವಾರ ದೇವಸ್ಥಾನ 

ಕ್ಕೆ ಹೋಗುವರು ,ಪೂಜೆ ಪಾರಾಯಣ ಮಾಡುವರು .ದಾನ ಧರ್ಮ ಮಾಡುವರು .

 ಹೆತ್ತ ತಾಯಿ ತಂದೆಯ ಚಿತ್ತವ ನೋಯಿಸಿ ಹತ್ತು ದಾನವ ಮಾಡಿ ಫಲವೇನು 

ಎಂದು ಅಂದು ದಾಸರು ಹಾಡಿದ್ದು ಇದಕ್ಕೇ ಇರಬೇಕು .

ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ನಮಗೆ  ಸಮಾಜದ ಧರ್ಮ ಪ್ರಜ್ಞೆಯ ನೈಜ 

ದರ್ಶನ ಆಗುವುದು .
                            


ರೋಗ ಬಂದು ಆಸ್ಪತ್ರೆಯಲ್ಲಿ ಇರುವಾಗ ಬಂಧು ಮಿತ್ರರು ಬಂದು ಶುಭ ಹಾರಿಸಿದರೆ 

ತಾವಿನ್ನೂ ಸಮಾಜಕ್ಕೆ ಬೇಕಾಗಿದ್ದೇವೆ ಎಂಬ ಭಾವವೇ ರೋಗ ಗುಣ ಮುಖವಾಗಲು

ಕಾರಣ ವಾಗ ಬಲ್ಲ್ಲುದು .ಇಲ್ಲದಿದ್ದರೆ ಯಾರಿಗೆ ಯಾರುಂಟು ಎರವಿನ ಸಂಸಾರ 

ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ಎಂಬ ವಾಕ್ಯ ನಮ್ಮನ್ನೇ ಉದ್ದೇಶಿಸಿ 

ಬರೆದಂತೆ ತೋರುವುದು .

  ಹಿರಿಯರ ಗೊಣಗಾಟ ತಾಳ ಲಾರದೆ  ವೈದ್ಯರ ಮುಂದೆ ತಂದು ಕುಕ್ಕಿ ನಿಮಗೆ 

ಏನು ವಕ್ಕರಿಸಿದೆಯೋ ಎಲ್ಲಾ  ಇಲ್ಲೇ ಕಕ್ಕಿ ,ಮತ್ತೆ ಮನೆಯಲ್ಲಿ ವಟ ವಟಾ ಎಂದು 

ನಮ್ಮ ತಲೆ ತಿನ್ನ ಬೇಡಿ ಎಂದು  ಕೋಪದಿಂದ ಗರ್ಜಿಸುವ ಮಕ್ಕಳನ್ನು ಹೆಚ್ಚಾಗಿ 

ಕಾಣುತ್ತಿದ್ದೇವೆ .ಪಾಪ ಆ ಹಿರಿಯರಿಗೆ ಹೇಳಲಾರೆ ನಾನು ತಾಳ ಲಾರೆ ಎಂಬ ಸ್ಥಿತಿ .


          ನಮ್ಮ ಅರ್ಥಿಕ ಅಭಿವೃದ್ದಿ ,ಜಾಗತೀಕರಣ ದ ಕೆಲವು ಪರಿಣಾಮ ಗಳು ಇವು .

ಇಲ್ಲಿ ಕಿರಿಯ ತಲೆಮಾರಿನವರನ್ನು ಕೆಟ್ಟದಾಗಿ ತೋರಿಸುವುದು ಸಾಧುವಲ್ಲ .

ಕಾಲದೊಡನೆ ಆಗುವ ಬದಲಾವಣೆ .ಎಲ್ಲಾ ಕೆಲಸಗಳಿಗೂ ಯಂತ್ರ .ವಾಹನ 

ಅವಲಂಬನೆ ಆದ ಮೇಲೆ  ಶರೀರ ಶ್ರಮ ಮತ್ತು  ನೋವು ಹಂಚಿಕೊಳ್ಳುವ 

ಮನಸ್ಸು ಬೇಡುವ ಹಿರಿಯರ ಆರೈಕೆ ತ್ರಾಸ ದಾಯಕವಾಗಿ ತೋರುವುದು .


ಶುಕ್ರವಾರ, ಡಿಸೆಂಬರ್ 4, 2015

ಅಪಸ್ಮಾರ ಅಥವಾ ಮೆದುಳಿನ ಜೀವ ಕೋಶಗಳ ಹರಾಕಿರಿ

ಮೆದುಳು ನಮ್ಮ ಶರೀರದ ಹೈ ಕಮಾಂಡ್ .ದೇಹದ ಎಲ್ಲಾ ಅಣು ಅಣುಗಳ

ಕಾರ್ಯವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಿಯಂತ್ರಿಸುವುದು .

ಮೆದುಳಿನ  ಜೀವಕೋಶಗಳ ಕಾರ್ಯ ಕೂಟದಲ್ಲಿ  ಚಲನ ಮೂಲ ಮತ್ತು ಗ್ರಹಣ

ಮೂಲ ಎಂಬ ಮುಖ್ಯ ಪಂಗಡಗಳಿವೆ .ಉದಾಹರಣೆಗೆ  ನಮ್ಮ ಕೈಯಲ್ಲಿ ಒಂದು

ಸೊಳ್ಳೆ ಕುಳಿತಾಗ ಸ್ಪರ್ಶ ಗ್ರಹಣ ನರಗಳು ಅದರ ಬಗ್ಗೆ ಸಂದೇಶವನ್ನು ಮೆದುಳಿನ

ಗ್ರಹಣ ಮೂಲ ಕೋಶಗಳಿಗೆ ರವಾನಿಸುವುವು .ಮೆದುಳಿನ ಚಲನ ಕೋಶಗಳು ಈ

ವಿಷಯ ತಿಳಿದು ಮರು ಸಂದೇಶವನ್ನು ಇನ್ನೊಂದು ಕೈಗೆ ಕಳುಸಿಸಿ ಸೊಳ್ಳೆಗೆ 

ಬಡಿದು  ಕೊಲ್ಲುವಂತೆ ಅದೇಶಿವುವು.ಇವಲ್ಲ ವ್ಯವಸ್ಥಿತವಾಗಿ ಶಿಸ್ತಿನಿಂದ  ನಡೆಯ

ಬೇಕು .ಶಿಸ್ತು ,ಲಯ  ತಾಳ ತಪ್ಪಿದರೆ ಬರುವುದು ಅಪಸ್ಮಾರ .


                        
    

 ಮೆದುಳಿನ  (ಗ್ರಹಣ ಅಥವಾ ಚಲನ ) ಕೋಶಗಳ ಅನಿಯಂತ್ರಿತ ಅಕಾಲಿಕ

ಲಯ ತಪ್ಪಿದ ಕಾರ್ಯ ಫಲ ವೇ ಅಪಸ್ಮಾರ .
           ಸಾಮಾನ್ಯವಾಗಿ ನಾವು ಕಾಣುವುದು  ಚಲನ ಮೂಲ ಅಪಸ್ಮಾರ .ಇದು   

ಹೆಚ್ಚಾಗಿ  ಬರುವುದು ಮೇಲ್ನೋಟಕ್ಕೆ ಯಾವುದೇ ಕಾರಣ ಇಲ್ಲದೆ .ಮೆದುಳಿನ

ಜೀವಕೋಶಗಳು ಯದ್ವಾತದ್ವಾ ಸಂದೇಶ ಗಳನ್ನು ಉಂಟುಮಾಡಿ ರವಾನಿಸಿದಾಗ

ಮೊದಲು ಪ್ರಜ್ಞೆ ತಪ್ಪಿ ಮಾಂಸಖಂಡಗಳು ಸೆಟೆದು ನಿಲ್ಲುತ್ತವೆ .ರೋಗಿ ನೆಲಕ್ಕೆ

ಉರುಳುವನು ..ಬಳಿಕ ಎಲ್ಲಾ ಮಾಂಸಖಂಡಗಳು ಸಂಕುಚನ ಮತ್ತು ವಿಕಸನ

ಗೊಳ್ಳುತ್ತವೆ .ಇದನ್ನೇ ಫಿಟ್ಸ್ ಎಂದು ಕರೆಯುವುದು .ರೋಗಿಯು ನಾಲಿಗೆ ಕಚ್ಚ


ಬಹುದು ಮತ್ತು  ಮೂತ್ರ ವಿಸರ್ಜನೆ ಮಾಡಿಕೊಳ್ಳ ಬಹುದು .ಇದಾದ ಕೆಲ

ಹೊತ್ತು  ಪ್ರಜ್ಞೆ ಇರದು .ಕ್ರಮೇಣ ಎಚ್ಚರ ಬರುವುದು .

       ಈ  ತರಹದ ರೋಗಿಗಳು ಕಂಡು ಬಂದರೆ  ಅವರನ್ನು ಒಂದು ಪಾರ್ಶ್ವಕ್ಕೆ

ತಿರುಗಿಸಿ ಮಲಗಿಸಿದರೆ  ಅಪ್ರಜ್ಞಾವಸ್ಥೆಯಲ್ಲಿ  ಬಾಯಿಂದ ನೀರು ಶ್ವಾಸನಾಳ

ಸೇರಿ ಉಸಿರುಗಟ್ಟದಂತೆ  ಮಾಡ ಬಹುದು .ಕೈಯಲ್ಲಿ ಕಬ್ಬಿಣದ ತುಂಡು ಇಡಲು

ಯತ್ನಿಸ ಬಾರದು .ಇದರಿಂದ ರೋಗಿಯು ತನಗೇ ಗಾಯ ಮಾಡಿ ಕೊಳ್ಳುವ


ಸಂಭವ ಇದೆ .ಕಬ್ಬಿಣದ ತುಂಡಿಗೂ ಅಪಸ್ಮಾರಕ್ಕೂ ಯಾವುದೇ ಸಂಭಂದ

ಇಲ್ಲ .
                                     

ಕೆಲವೊಮ್ಮೆ ಅಪಸ್ಮಾರ ಒಂದು ಕೈ ಅಥವಾ ಕಾಲಿಗೆ ಸೀಮಿತ ವಾಗಿರ ಬಹುದು .

ಇದನ್ನು ಸೀಮಿತ ಅಪಸ್ಮಾರ (Focal Epilepsy) ಎಂದು ಕರೆಯುವರು .ಇದರಲ್ಲಿ


ರೋಗಿಯು ಎಚ್ಚರವಾಗಿ ಇರುವನು .

ಮೆದುಳಿನ ಗಡ್ಡೆಗಳು ,ಸೋಂಕುಗಳು,ರಕ್ತದಲ್ಲಿ ಉಪ್ಪಿನ ಮತ್ತು ಸಕ್ಕರೆ ಅಂಶ ದ

ಏರು ಪೇರು ,ಅತೀವ ಮದ್ಯಪಾನ ,ಮದ್ಯ ವ್ಯಸನಿಗಳು ಹಠಾತ್ ಮದ್ಯ ಸೇವನೆ

ನಿಲ್ಲಿಸುವುದು  ಅಪಸ್ಮಾರಕ್ಕೆ ಕಾರಣವಾಗ ಬಹುದು . ಮೆದುಳಿನ 

ರಕ್ತಸ್ರಾವ ,ಅವಘಡ ಗಳಿಂದ ಮೆದುಳಿಗೆ ಆದ ಗಾಯ ಗಳೂ ಸಾಮಾನ್ಯ

ಕಾರಣಗಳು . ಮಕ್ಕಳಲ್ಲಿತೀವ್ರ  ಜ್ವರ ಅಪಸ್ಮಾರ ಉಂಟು ಮಾಡುವುದು .ಇವುಗಳ

ಮೂಲ ಕಾರಣಗಳಿಗೆ ಚಿಕಿತ್ಸೆ ಮಾಡ ಬೇಕು .

ಕೆಲವೊಮ್ಮೆ ಅಪಸ್ಮಾರವೋ ಅಥವಾ ಅಲ್ಲವೋ ಎಂದು ಸಂಶಯ ಇದ್ದಾಗ

ಮೆದುಳಿನ ಸಂದೇಶ ಮಾಪನ (ಎಲೆಕ್ಟ್ರೋಎನ್ಸೆಫಾಲೋಗ್ರಾಮ್ -ಇ ಇ ಜಿ )


ಮಾಡುವರು .

ತಲೆಯ ಸ್ಕ್ಯಾನ್ ಮಾಡ ಬೇಕಾಗಿಯೂ ಬರ ಬಹುದು .



ಬುಧವಾರ, ನವೆಂಬರ್ 4, 2015

ಗೂಗಲ್ನಲ್ಲಿ ರೋಗ ಹುಡುಕಿದರೆ?

ಆನಂದ  ಸಾಫ್ಟ್ವೇರ್ ಇಂಜಿನಿಯರ್ .ಮದುವೆ ಆಗಿಲ್ಲಬ್ಯಾಚುಲರ್.ಬೆಂಗಳೂರಿನಲ್ಲಿ  

ಮನೆ ಮಾಡಿದ್ದಾನೆ .ಸ್ವಯಂ ಪಾಕ .ಉಪ್ಪಿಟ್ಟು ಮಾಡಿದ್ದೂ  ಗೂಗಲ್ ನಲ್ಲಿ  ರೆಸಿಪ್ 

ನೋಡಿ .ಎಲ್ಲಿಯಾದರೂ ಹೊಸ ಜಾಗಕ್ಕೆ ಹೋಗುವಾಗ ಗೂಗಲ್ ನ ಜಿ ಪಿ ಎಸ 

ಉಪಯೋಗಿಸುವನು .ಮನೆಗೆ ಬೇಕಾದ ವಸ್ತುಗಳು ಈಗ ಆನ್ಲೈನ್ನಲ್ಲಿ ಸಿಗುತ್ತವೆ .

ಜೀವನ ಬೆರಳ ತುದಿಯಲ್ಲಿ ಬಂದು ನಿಂತಂತೆ .


  ಇದಕ್ಕಿಂದಂತೆ ಒಂದು ದಿನ ಅವನಿಗೆ ಸ್ವಲ್ಪ ತಲೆನೋವು ವಾಂತಿ ಆಯಿತು .

ಡಾಕ್ಟರ್ ಬಳಿ ಹೋದರೆ ಕಾಯಬೇಕು .ಅವರು ಅದೂ ಇದೂ ಅಂತ ಟೆಸ್ಟ್ ಗಳನ್ನು 

ಬರೆಯುವರು .ಗೂಗಲ್ ವೈದ್ಯ ನನ್ನೇ ಹಿಡಿದರೆ ಬಲು ಸುಲಭ ಎಂದು ಕೊಂಡು.

ತಲೆಸುತ್ತು ವಾಂತಿ ಎಂದು ಗೂಗಲ್ ಹುಡುಕು ನಲ್ಲಿ  ಟೈಪಿಸಿದ .ಕೂಡಲೇ ನೂರು 

ನೂರೈವತ್ತು  ಕಾರಣಗಳ ಮಾಲೆ ಹೊರ ಬಂತು .ಮೆದುಳಿನ ಗಡ್ಡೆ ,ಮೆದುಳಿನ 

ಸೋಂಕು ,ಮೆದುಳಿನ ರಕ್ತ ಸ್ರಾವ ಭಯಾನಕ ರೋಗಗಳು ,ಇವಕ್ಕೆ ಎಂ ಅರ್ ಐ

ಸ್ಕ್ಯಾನ್ ,ಬೆನ್ನಿನ ನೀರು ತೆಗೆದು ಪರೀಕ್ಷೆ ಇತ್ಯಾದಿ . ಅಯ್ಯೋ ತನಗೆ ಈ 

ರೋಗಗಳು ಬಂದಿರ ಬಹುದೇ ,ಇನ್ನೂ ಒಂದು ಫ್ಲಾಟ್ ಕೊಂಡಿಲ್ಲ ,ಮದುವೆ ಆಗಿಲ್ಲ .

                    ಹೆದರಿಕೆಯಿಂದ ಕೆಳಗೆ ಕಣ್ಣು ಹಾಯಿಸಿದರೆ ಉದರ ಕಾಯಿಲೆಗಳ 

ಪಟ್ಟಿ. ಹೊಟ್ಟೆ ಅಲ್ಸರ್ ,ಹೊಟ್ಟೆ ಕ್ಯಾನ್ಸರ್ ,ಅಪೆಂಡಿಸೈಟಿಸ್ ,ಲಿವರ್ ಕ್ಯಾನ್ಸರ್ .

ಎಲ್ಲವೂ ಭೂತ ಪಿಶಾಚಿಗಳಂತೆ  ತನ್ನ ಮೇಲೆ ಆಕ್ರಮಣ ಮಾಡಿದಂತೆ ತೋರಿತು .


           ಕೆಳಗೆ ಗರ್ಭಿಣಿ ಯಾಗುವುದು ಒಂದು ಕಾರಣ ಎಂದು ಕಂಡಿತು ,ಛೆ ಛೆ 

ತನಗಿನ್ನೂ ಮದುವೇನೇ ಆಗಿಲ್ಲ ,ಆದರೂ ಗರ್ಭಿಣಿ ಆಗುವುದು ಹೆಂಡತಿ ತಾನೇ 

ಎಂದು ಸಮಾಧಾನ ಮಾಡಿ ಕೊಂಡ.

     ಮುಂದೆ ನೋಡಿದರೆ ಕಿಡ್ನಿ ವೈಫಲ್ಯ ,ಲಿವರ್ ನ ಸೋಲು ಇತ್ಯಾದಿ 

ಕಾಯಿಲೆಗಳು .ತನಗೆ ಈ ರೋಗಗಳು ಇರ ಬಹುದೇ ?

ಇಷ್ಟೆಲ್ಲಾ ಆಗುವಾಗ ಊರಿನಿಂದ ಅಮ್ಮನ ಫೋನ್ ಬಂತು .ಹೆತ್ತ ತಾಯಿ ಅಲ್ಲವೇ ?

ಮಗನಿಗೆ ಸ್ವಲ್ಪ ಶೀತ ಆದರೂ ತಾಯಿ ಗೆ  ಎಲ್ಲಿದ್ದರೂ ತಿಳಿಯುವುದು .ಏನು ಮಗಾ 

ಹೇಗೆ ಇರುವಿ ?ಎಂದಳು .ತನಗೆ ವಾಂತಿ ಅದ ವಿಷಯ ತಿಳಿಸಿದ .ಅಮ್ಮ 

ಅಯ್ಯೋ ಮಗನೆ ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡದೆ ಪಿತ್ತ ಆಗಿದೆ .ಎಣ್ಣೆ ಸ್ನಾನ 

ಮಾಡಿ ,ನಿಂಬೆ ಶುಂಠಿ ಬೆರೆಸಿದ ಪಾನಕ ಕುಡಿ ಎಂದು ಟೆಲಿ ಮೆಡಿಸಿನ್ ನಲ್ಲಿ 

ಹೇಳಿದಳು .ಸದ್ಯ ಬದುಕಿದೆ ಎಂದ ಆನಂದ ಕಂಪ್ಯೂಟರ್ ಶಟ್ ಡೌನ್ ಮಾಡಿ 

ಅಮ್ಮನ ಮದ್ದು ಮಾಡಿದ .


ಭಾನುವಾರ, ಅಕ್ಟೋಬರ್ 25, 2015

ಕಣ್ಣಿದ್ದೂ ಕಾಣದ ಸ್ಥಿತಿ ಮೆದುಳಿನ ಅಂಧತ್ವ

ಕಣ್ಣಿದ್ದೂ ಕಾಣರು ,ಒಳಗಿನ ಕಣ್ಣನು ತೆರೆದು ನೋಡು ಇತ್ಯಾದಿ ನಾವು ಆಗಾಗ್ಗೆ 

ಕೇಳುತ್ತಿರುತ್ತೇವೆ.ಇದರ ವಾಸ್ತವ ಅಂಶ ಏನು ?ನಮ್ಮ ಕಣ್ಣುಗಳೇ ದೃಷ್ಟಿ ನೀಡಲು 

ಸಾಕೇ?

ನಮ್ಮ ಕಣ್ಣಿನ ಅಕ್ಷಿಪಟಲದ ಮೇಲೆ ಬಿದ್ದ ಬಿಂಬವು ಸಂದೇಶ ರೂಪದಲ್ಲಿ  ನರಗಳ 

ಮೂಲಕ ಮೆದುಳಿಗೆ ಸಾಗುವುದು .ಮೆದುಳಿನ ಹಿಂಬಾಗದಲ್ಲಿ  ದೃಷ್ಟಿ ವೀಕ್ಷಕ ಕೇಂದ್ರ 

ಇದೆ .ಇಲ್ಲಿ ಕಣ್ಣಿನಿಂದ ಬಂದ ಸಂದೇಶವನ್ನು ವಿಶ್ಲೇಷಿಸಿ ಕಂಡ ಬಿಂಬದ ದ ರೂಪ 

ಗ್ರಹಣ ಆಗುವುದು .

                                     

ಕಣ್ಣು ಸರಿ ಇದ್ದರೂ ಮೆದುಳಿನ ಈ ಭಾಗ ಸರಿ ಇಲ್ಲದಿದ್ದಲ್ಲಿ  ಮನುಷ್ಯ 

ಅಂಧನಾಗುವನು.ಇದನ್ನು ಮೆದುಳಿನ ಅಂಧತ್ವ ಎನ್ನುವರು (Cortical Blindness)

ಕೆಲವು ಪರೀಕ್ಷಣ ಗಳಿಂದ ಈ ಕುರುಡನ್ನು ಕಂಡು ಹಿಡಿಯ ಬಹುದು .ಉದಾ 

ಕಣ್ಣಿನ ಮೇಲೆ ಬೆಳಕು ಹಾಯಿಸಿದಾಗ ಕಣ್ಣ ಪಾಪೆ ಕುಗ್ಗುವುದು .ಕಣ್ಣಿನ ಮಸೂರ 

,ಅಕ್ಷಿಪಟ ಅಥವಾ ನರದ ತೊಂದರೆ ಇದ್ದರೆ ಈ ಪ್ರತಿಕ್ರಿಯೆ ಕಾಣಿಸದು .ಆದರೆ

ಮೆದುಳಿನ ಅಂಧತ್ವದಲ್ಲಿ  ಇದು ಅಭಾದಿತ ವಾಗಿರುವುದು .ಆದರೂ ಏನೂ 

ಕಾಣಿಸದು .ಇದನ್ನು ಮೆದುಳಿನ ತೊಂದರೆ ಎನ್ನಿರಿ ,ಒಳಗಿನ ಕಣ್ಣಿನ ತೊಂದರೆ 

ಎನ್ನಿರಿ .

ಮೆದುಳಿನ ರಕ್ತ ನಾಳದ ಹೆಪ್ಪುಗಟ್ಟುವಿಕೆ ಅಥವಾ ರಕ್ತ ಸ್ರಾವ ದಿಂದ 

ಉಂಟಾಗುವ  ಮೆದುಳಿನ ಆಘಾತ (ಸ್ಟ್ರೋಕ್) ಇದಕ್ಕೆ ಮುಖ್ಯ ಕಾರಣ .

ತಲೆಯ  ಸಿ ಟಿ ಅಥವಾ  ಎಂ ಆರ್ ಐ ಸ್ಕ್ಯಾನ್ ಮೂಲಕ ಇದನ್ನು  

ದೃಡೀಕರಿಸುವರು.




ಸಿ ಟಿ ಸ್ಕ್ಯಾನ್ ನಲ್ಲಿ  ದೃಷ್ಟಿ ಮೆದುಳಿನ ರಕ್ತ ಹೆಪ್ಪು ಕಟ್ಟುವಿಕೆ


MRI ಸ್ಕ್ಯಾನ್ ನಲ್ಲಿ  ದೃಷ್ಟಿ ಮೆದುಳಿನ ಆಘಾತ ಚಿತ್ರಣ .
(ಚಿತ್ರಗಳ ಮೂಲಗಳಿಗೆ ಅಭಾರಿ )

ಭಾನುವಾರ, ಅಕ್ಟೋಬರ್ 11, 2015

ತಂದೆಯ ನೆನಪು



ಅರಿವು ಬಂದಾಗ ದಿಂದ  ನನ್ನ ತಂದೆಯವರನ್ನು ನಾನು ನೆನಪಿಸಿ ಕೊಳ್ಳುವುದು 

ಓರ್ವ ಸ್ಥಿತ ಪ್ರಜ್ನ ಕರ್ಮಯೋಗಿಯಾಗಿ .ಬೆಳಗ್ಗೆ ಎದ್ದು ನಿತ್ಯಕರ್ಮಗಳನ್ನು ಪೂರೈಸಿ 

ಪಶುಗಳ ಆರೈಕೆಯಲ್ಲಿ ತೊಡಗಿಸಿ ಕೊಳ್ಳುವರು .ಅಡಿಗೆ ಮನೆಯಿಂದ ಪಶು ಆಹಾರ 

(ಮಡ್ಡಿ ಎನ್ನುತ್ತೇವೆ ) ದ ಪಾತ್ರೆಯನ್ನು ಒಂದು ಹೆಗಲಿಗೆ ಏರಿಸಿ ದನಗಳ ಕೊಟ್ಟಿಗೆಗೆ 

ಹೋಗಿ ಅವುಗಳ ಆರೈಕೆ ಮಾಡುವರು .ಅವರಿಗೆ ಅತೀ ಪ್ರಿಯವಾಗಿದ್ದ ಕೆಲಸ ಅದು .

ಆಗೆಲ್ಲ ಐದಾರು ದನಗಳೂ ,ಎರಡು ಎಮ್ಮೆ ಮತ್ತು ಎರಡು ಜತೆ ಹೋರಿಗಳೂ 

ಇರುತ್ತಿದ್ದವು  .ನನ್ನ ಬಾಲ್ಯದಲ್ಲಿ ಓಟದ ಕೋಣಗಳೂ ಇರುತ್ತಿದ್ದವು .ಹಲವು ಬಾರಿ 

ಬೆಳಗಿನ ತಿಂಡಿಗೆ ಕರೆಯುವಾಗ ಅವರ ಕೆಲಸ ಅಪೂರ್ಣವಾಗಿರುತ್ತಿದ್ದುದರಿಂದ 

ಅಸಹನೆಯ ಛಾಯೆ ಇರುತ್ತಿತ್ತು .

ಇದರ ನಡುವೆ ನಾವು ನಮ್ಮ ರಜೆ ಅರ್ಜಿ ,ಪ್ರೋಗ್ರೆಸ್ ರಿಪೋರ್ಟ್ ಗೆ ಸಹಿ 

ಮಾಡಿಸಲು ಹೋದರೆ ಕಣ್ಣು ಮುಚ್ಚ್ಚಿ ಸಹಿ ಮಾಡುವರು .ಒಂದೇ ಒಂದು ಸಾರಿ 

ಅಂಕ ಕಡಿಮೆ ಏಕೆ ಬಂತು .ಏಕೆ ಫೈಲ್ ಆದೆ ಅಂದವರಲ್ಲ .

 ತಿಂಡಿ ಕಾಫಿಯ ನಂತರ ಹಸು ಕರುಗಳನ್ನು ಮೇಯ ಬಿಟ್ಟು ತೋಟಕ್ಕೆ 

ಹೋಗುವರು .ಕಾರ್ಮಿಕರೊಡನೆ ತಾವೂ ದುಡಿಯುವರು ,ಅವರ ಉಡುಗೆ ಒಂದು 

ತುಂಡು ವಸ್ತ್ರ ಸೊಂಟಕ್ಕೆ  ಮತ್ತು ತಲೆಗೆ ಒಂದು ಬೈರಾಸಿನ ಮುಂಡಾಸು .


      ಮಧ್ಯಾಹ್ನ  ಮನೆಗೆ ಮರಳಿ ಸ್ನಾನ ,ಪೂಜೆ ,ಊಟ ಮತ್ತು ಸಣ್ಣ ನಿದ್ದೆ .ಮತ್ತೆ 

ಎದ್ದು  ತೋಟದತ್ತ .ಸಂಜೆ ಮರಳಿದಾಗ ಹಸು ಕರುಗಳು  ಗುಡ್ಡದಿಂದ ಮರಳಿ 

ಗೇಟ್ ನ ಹೊರಗೆ ಕಾಯುತ್ತಲಿರುವವು .ಅವುಗಳನ್ನು ಒಳ ಮಾಡಿ ಅವುಗಳ 

ಆರೈಕೆ .ಇಷ್ಟರಲ್ಲಿ ಮುಸ್ಸಂಜೆ .ಕೆಲಸದವರ ಲೆಕ್ಕ ಬರೆಯುವರು ,ಅವರ ಒಂದು 

ಟ್ರಂಕ್ ನಲ್ಲಿ ಲೆಕ್ಕ ಪುಸ್ತಕ ,ಪೆನ್ಸಿಲ್ ಇತ್ಯಾದಿ ಇರುತ್ತಿದ್ದುವು ,ಒಂದು ಕಾಲು 

ಪದ್ಮಾಸನ ,ಇನ್ನೊಂದು ಮೇಲಕ್ಕೆ ಮಡಿಸಿ ಅವರು ಕುಳಿತು ಲೆಕ್ಕ ಬರೆಯುತ್ತಿದ್ದುದು 

ಈಗಲೂ ಕಣ್ಣಿಗೆ ಕಟ್ಟಿದಂತಿದೆ .

ತಂದೆಯವರು ಮಕ್ಕಳಿಗೆ ಏಟು ಕೊಡರು ,ಬೆದರಿಸರು ,ತಾಯಿ ಶಿಕ್ಷಿಸುವಾಗ ನಾವು 

ರಕ್ಷಣೆಗೆ ಅವರತ್ತ ಧಾವಿಸುತ್ತಿದ್ದೆವು .ಅವರಿಗೆ ಕಿರಿ ಕಿರಿ ಎನಿಸುತ್ತಿತ್ತು ,

ರಾತ್ರಿ ತೋಟಕ್ಕೆ ಒಂದು ಸುತ್ತು ಬಂದು ಊಟ .ಆಮೇಲೆ ರೇಡಿಯೋದಲ್ಲಿ 

ಯಕ್ಷಗಾನ ತಾಳ ಮದ್ದಲೆ ಇದ್ದ ದಿನ ಆಸಕ್ತಿಯಿಂದ ಕೇಳುವರು ,ಮೊಮ್ಮಕ್ಕಳು 

ಇದ್ದಾಗ ಅವರಿಗೆ ಕತೆ ಹೇಳುವರು .

  ಸುತ್ತ ಮುತ್ತಲಿನ ಜಾತ್ರೆ ,ಭೂತ ಕೋಲ ಗಳಿಗೆ ಹೋಗುವಾಗ ಅವರೊಡನೆ 

ನಾವೂ ಹೋಗುತ್ತಿದ್ದೆವು .ಮಾಂಕಾಳಿ ಭೂತ ಮಕ್ಕಳೆಲ್ಲರೂ ಕ್ಷೆಮವೇ ಎಂದು 

ಕೇಳುವುದು .ಕೋಲದ ಸಮಯದಲ್ಲಿ ವಿದ್ಯಾಭ್ಯಾಸಕ್ಕಾಗಿ  ಊರಿಂದ ಹೊರಗೆ 

ಇರುತ್ತಿದ್ದ ಅಣ್ಣಂದಿರ ತಪ್ಪಿಗೆ ಕಾಣಿಕೆ ಹಾಕುತ್ತಿದ್ದರು .

ನಾನು ಮೊದಲ ಯಕ್ಷಗಾನ ಶ್ವೇತಕುಮಾರ ಚರಿತ್ರೆ ವಿಟ್ಲ ಜಾತ್ರೆಯಲ್ಲಿ 

ತಂದೆಯವರ ಜೊತೆಗೇ ನೋಡಿದ್ದು .ಆಗೆಲ್ಲಾ ವಿಟ್ಲ ಪುತ್ತೂರು ಜಾತ್ರೆಗೆ ಹೋದರೆ 

ಬೆಡಿಯ ನಂತರ ಯಕ್ಷಗಾನ ಬಯಲಾಟಕ್ಕೆ ಹೋಗಿ ರಾತ್ರೆ ಕಳೆದು ಬೆಳಗಿನ 

ಬಸ್ಸಿನಲ್ಲಿ ಮರಳುತ್ತಿದ್ದೆವು .

ಪುತ್ತೂರು ಜಾತ್ರೆಗೆ ಆರೇಳು ಮೇಳಗಳು ಏಕ ಕಾಲಕ್ಕೆ ಬಂದುದು ಇದೆ .ಈಗ 

ಒಂದು ಮೇಳವೂ ಬರುತ್ತಿಲ್ಲ .


   ತಂದೆಯವರು ಸುಮ್ಮನೆ ಪೇಟೆ ತಿರುಗುವರಲ್ಲ .ನಾವು ರಜೆಯಲ್ಲಿ ಅಜ್ಜನ 

ಮನೆಗೋ ಅಕ್ಕನ ಮನೆಗೋ ಹೋಗುವಾಗ ನಮಗೆ ದಾರಿ ಖರ್ಚಿಗೆ ಹಣ 

ಕೊಡುವರು ,ಯಾವಾಗಲೂ ಚಿಲ್ಲರೆ ತೆಗೆದುಕೊಂಡು ಹೋಗಲು ಹೇಳುವರು .ಚಿಲ್ಲರೆ 

ಹಣಕ್ಕೆ ಹೊಡಿ ಚುಂಗುಡಿ ಎನ್ನುತ್ತಿದ್ದರು ,ಪುತ್ತೂರು ಪೇಟೆಯಲ್ಲಿ ಬಸ್ ಸ್ಟಾಂಡ್ 

ಎದುರು ಜನತಾ ಫುಟ್ ವೇರ್ ಎಂಬ ಅಂಗಡಿ .ಅದರ ಧಣಿ ಒಬ್ಬ ಸಾಹೇಬರು .

ನಮಗೆ ಚಪ್ಪಲಿ ಬೇಕಾದಾಗ ಅವರ ಅಂಗಡಿಗೆ ಹೋಗಿ ಬೇಕಾದ್ದು ಕೊಂಡು ,ದುಡ್ಡು

ತಂದೆ ಕೊಡುತ್ತಾರೆ ಎಂದು ಬರುತ್ತಿದ್ದೆವು .ನಿಮ್ಮ ತಂದೆಯ ಹೆಸರು ವಿಳಾಸ ಏನು 

ಎಂದು ಅವರು ಕೇಳಿದ್ದಿಲ್ಲ .ತಂದೆಯವರು ಆ ಕಡೆ ಹೋದಾಗ ಸಾಲ ತಿರಿಸುವರು .

ನಂಬಿಕೆಯಲ್ಲಿ ನಡೆಯುತ್ತಿದ್ದ ವ್ಯವಹಾರಗಳು.

 ಮಕ್ಕಳು ಕಲಿತು ಡಾಕ್ಟರ ,ಇಂಜಿನಿಯರ್ ಆಗ ಬೇಕೆಂದು ಅವರು ಬಯಸಿದವರಲ್ಲ .

ವಕೀಲರು ಮತ್ತು ಅಧ್ಯಾಪಕರು ಎಂದರೆ ಅವರಿಗೆ ಗೌರವ ಇತ್ತು ,ಅವರ ಅಧ್ಯಾಪಕ 

ರಾಗಿದ್ದ ಕಾರಂತ ಮೇಸ್ಟ್ರು ಎಂಬವರು ಆಗಾಗ್ಗೆ ನಮ್ಮ ಮನೆಗೆ ರಾತ್ರಿ ಬಂದು 

ಒಂದು ದಿನ ಇದ್ದು ಹೋಗುತ್ತ್ತಿದ್ದರು ,ಆಗೆಲ್ಲ ದೂರದ ನೆಂಟರೂ ,ಅಷ್ಟೊಂದು 

ಅನುಕೂಲ ಇಲ್ಲದವರೂ ಬೇರೆಯವರ ಮನೆಗಳಿಗೆ ಹೋಗಿ ಆತಿಥ್ಯ 

ಸ್ವೀಕರಿಸುತ್ತಿದ್ದುದು ಸಾಮನ್ಯ.ಎಷ್ಟು ಬಡ ತನ ಇದ್ದರೂ ಅತಿಥಿಗಳು ಬಂದಾಗ 

ಯಾರೂ ಗೊಣಗುತ್ತಿದ್ದಿಲ್ಲ ,

ತಂದೆಯವರು ಅಡಿಕೆ ಮಾರಾಟ ಮಾಡಿದ ಹಣ ತರಲು ಮಂಗಳೂರಿಗೆ 

ಹೋಗುವ ಸಂಧರ್ಭ ಬೆಳಿಗಿನ ಮೊದಲನೇ ಬಸ್ ಹಿಡಿದು ಹೋಗುವರು .

ಮಂಗಳೂರು ಬಸ್ ಸ್ಟಾಂಡ್ ಹೋಟೆಲ್ ನಲ್ಲಿ  ಬನ್ಸ್ ಮತ್ತು ಚಹಾ ಸೇವಿಸುವರು .

ಹೋಟೆಲ್ ನಲ್ಲಿ ಅವರು ಯಾವಾಗಲೂ ಎರಡು ಚಹಾ ತರಿಸುವರು ,ಹಳ್ಳಿಯ 

ಲೆಕ್ಕದಲ್ಲಿ ಹೋಟೆಲ್ ನ ಒಂದು ಲೋಟ ಚಹಾ ಗಂಟಲು ಇಳಿಯುವಷ್ಟರಲ್ಲಿ ಮುಗಿದು 

ಹೋಗುತ್ತದೆ . ಆಮೇಲೆ ನಡೆದುಕೊಂಡು ಬಂದರು ಪ್ರದೇಶದಲ್ಲಿ ಅಡಿಕೆ ಮಂಡಿಗೆ 

ಹೋಗಿ ವ್ಯವಹಾರ ಮುಗಿಸಿ ಮರಳಿ ಬಸ್ ಸ್ಟಾಂಡ್ ಸಮೀಪದ ಗಣೇಶ ಭವನದಲ್ಲಿ 

ಊಟ ಮಾಡಿ ಸ್ವಲ್ಪ ನಿದ್ದೆ ಮಾಡಿ ವಿರಮಿಸಿ ಮನೆಗೆ ಮರಳುವರು .ಮಂಗಳೂರಿಗೆ 

ಹೋಗುವ ಅಪ್ಪ ಚಿಕ್ಕಪ್ಪ ನವರಿಗೆ  ಮನೆಯವರೆಲ್ಲ ತಮ್ಮ ತಮ್ಮ ಭಾವಕ್ಕೆ  

ಸರಿಯಾದ ಸಾಮಗ್ರಿಗಳ ಪಟ್ಟಿ ಕೊಡುತ್ತಿದ್ದೆವು .ಅದಕ್ಕೆ ಮತ್ತು ಅವರು ಮಕ್ಕಳಿಗೆ 

ತರುತ್ತಿದ್ದ ಪೆಪ್ಪರ್ ಮಿಂಟ್ ಮತ್ತು ಚಾಕಲೇಟ್ ಗಳಿಗಾಗಿ ನಾವು ಕಾಯುತ್ತಿದ್ದೆವು ,


   ನಮ್ಮ ಮನೆಯಿಂದ ಬಸ್ ಮಾರ್ಗಕ್ಕೆ ಒಂದೂವರೆ ಮೈಲು ,ಗುಡ್ಡ ಹತ್ತಿ ಇಳಿಯ

ಬೇಕು .ಬೈರಿಕಟ್ಟೆ ಎಂಬಲ್ಲಿ ಬಸ್ ಹಿಡಿಯುತ್ತಿದ್ದೆವು ,ಬಹಳಷ್ಟು ಸಾರಿ ನಾವು ಗುಡ್ಡೆ 

ಶಿಖರದಲ್ಲಿ ಇರುವಾಗ ಉದ್ದೇಶಿತ ಬಸ್ ಹೋಗುವುದು ಕಾಣಿಸುವುದು .ಮತ್ತೆ 

ಬಸ್ಸಿಗೆ ಗಂಟೆ ಗಟ್ಟಲೆ ಕಾಯ ಬೇಕು .ಅಲ್ಲಿ ಶಂಕರ ನಾರಾಯಣ ರಾಯರೆಮ್ಬುವರ

ಹೋಟೆಲ್ ಇತ್ತು .ತಂದೆಯವರ ಆಪ್ತರು .ಅಲ್ಲಿಯ ಕಾರದ ಕಡ್ಡಿ ,ಅವಲಕ್ಕಿ ಚಹಾ 

ತಂದೆಯವರಿಗೆ ಬಹಳ ಪ್ರೀತಿ .ನಾವು ಅವರೊಂದಿಗೆ ಇದ್ದರೆ ನಮಗೂ ತಿನಿಸುವರು .

     ತಮ್ಮ ಅರೋಗ್ಯ ಕೈಕೊಡುವ ವರೆಗೂ  ಕೃಷಿ ಯನ್ನು ಅಚ್ಚು ಕಟ್ಟಾಗಿ 

ನಡೆಸಿದರು .ನಾವೆಲ್ಲಾ ಕಲಿತು ಬೇರೆ ಬೇರೆ ಉದ್ಯೋಗ ಹಿಡಿದು ಹೋದ ಮೇಲೆ 

ಭೂಮಿ ಮಾರಿದೆವು .ತಂದೆಯವರಿಗೆ ನೀರು ಬಿಟ್ಟ ಮೀನಿನಂತೆ ಆಯಿತು .ಅಲ್ಪ 

ಸಮಯದಲ್ಲಿಯೆ ಮೆದುಳಿನ ರಕ್ತ ಸ್ರಾವದಿಂದ ಇಹಲೋಕ ತ್ಯಜಿಸಿದರು .

 ತಂದೆಯವರ ಜ್ಞಾಪಕ ಬರುವಾಗ  ಕರ್ಮಯೋಗಿಯ ಚಿತ್ರಣ ಕಣ್ಣ ಮುಂದೆ 

ಬರುತ್ತದೆ .

ಸಂತೋಷದಿಂದ ಅತಿಯಾಗಿ ಹಿಗ್ಗಿದುದನ್ನೂ ,ದುಃಖ ದಿಂದ ಕುಗ್ಗಿ ದ್ದನ್ನೂ 

ತಂದೆಯವರಲ್ಲಿ ನಾವು ಕಂಡದ್ದಿಲ್ಲ .ಪಶುಪಾಲನೆ ಮತ್ತು ಕೃಷಿ ,ಸಣ್ಣ ಸಣ್ಣ 

ಸಂತೋಷಗಳಲ್ಲಿ ಸಂತೃಪ್ತಿ ಪಟ್ಟವರು.





ಮಂಗಳವಾರ, ಸೆಪ್ಟೆಂಬರ್ 29, 2015

ಆಧುನಿಕ ರೋಬಿನ್ ಹುಡ್ ಕತೆ

ಇತ್ತೀಚಿಗೆ ಮುಂಬೈಗೆ ಒಂದು ಕಾರ್ಯಕ್ರಮ ನಿಮಿತ್ತ ಹೋದವನು ಮರಳುವಾಗ 

 ರಾತ್ರಿ  ಹತ್ತೂವರೆ ರೈಲು ಮೂರು ಗಂಟೆ ವಿಳಂಬ ವಿದ್ದುದರಿಂದ  ಅಸಹನೆಯಿಂದ 

ಕಾಯುತ್ತಿದ್ದೆ .ಸ್ಟೇಷನ್ ಪರಿಸರದಲ್ಲಿ  ಪ್ರಯಾಣಿಕರು ,ನಿರ್ಗತಿಕರು ,ಭಿಕ್ಷುಕರು 

 ಇತ್ಯಾದಿ   ಎಲ್ಲೆಂದರಲ್ಲಿ ಜಾಗ ಮಾಡಿಕೊಂಡು ಮಲಗಿದ್ದರು . ಸುಮಾರು ಒಂದು 

ಗಂಟೆ ಸಮಯ ಒಂದು ವ್ಯಾನ್ ಬಂದು ಸ್ಟೇಷನ್ ಪೂರ್ವ ಭಾಗದಲ್ಲಿ ನಿಂತಿತು ,

ಕೂಡಲೇ ಮಲಗಿದ್ದವರು ಹಲವರು ಎದ್ದು ಕ್ಯೂ ನಿಂತರು .ಕೆಲವರ ಕೈಯ್ಯಲ್ಲಿ ತಟ್ಟೆ .

ಗಲಾಟೆ ಇಲ್ಲ ,ಗೊಂದಲ ಇಲ್ಲ.ಮುಂಬೈ ಇಲ್ಲದಿದ್ದರೂ ಕ್ಯೂ ಗೆ ಹೆಸರಾದ ನಗರ .

 ( ಇಲ್ಲಿಯ ಜನಸಂಖ್ಯೆ ಯೂ ಇದಕ್ಕೆ ಕಾರಣ ಇರಬಹುದು .ಗೊಂದಲದ 

ನಡುವೆಯೂ ಒಂದು ಶಿಸ್ತು ಇಲ್ಲಿಯ ಜೀವನವನ್ನು ಸಹನೀಯವಾಗಿ ಮಾಡಿದೆ .)

   ವ್ಯಾನ್ ನಿಂದ ಇಳಿದ ಯುವಕರು ಎಲ್ಲರಿಗೂ ಆಹಾರ ವಿತರಣೆ ಮಾಡಿ 

ಯಾವುದೇ ಗೌಜಿ ಗದ್ದಲ ಇಲ್ಲದೆ ಮರಳಿದರು .ಉಂಡವರು ಸಂತೃಪ್ತಿಯಿಂದ ನಿದ್ದೆಗೆ 

ಜಾರಿದರು .ಅಷ್ಟರಲ್ಲಿ ನನ್ನ ಟ್ರೈನೂ ಆಗಮಿಸಿತು .ಗಣೇಶ ಹಬ್ಬವಾದ್ದರಿಂದ ರಶ್ 

ಇತ್ತು .ಕಾದಿರಿಸದ ಬೋಗಿ ಗೆ  ಹತ್ತಲು ಜನ ತಾವೇ ಕ್ಯೂ ಹಚ್ಚಿದರು .ಅಲ್ಲೂ ಒಂದು 

ಶಿಸ್ತು .

ಟ್ರೈನ್ ಏರಿದವನಿಗೆ  ಅಲ್ಲಿ ಅನ್ನ ದಾನವ ಮಾಡುತ್ತಿದ್ದವರ ದೃಶ್ಯ 

.ದಾನವರಾಗುತ್ತಿರುವ ಮನುಜರ ನಡುವೆ ಅನ್ನ ದಾನವ ಮಾಡುವ ಮನುಜರಾರು ?

ವಿಚಾರಿಸಿದಾಗ ತಿಳಿಯಿತು .ಇವರೇ ಅಧುನಿಕ ರಾಬಿನ್ ಹುಡ್ ಗಳು .ಆದರೆ  

ಇವರು ಇರುವವರನ್ನು ಲೂಟಿ ಮಾಡಿ ಇಲ್ಲದವರಿಗೆ ಕೊಡುವವರಲ್ಲ .ಇದ್ದವರಿಂದ 

ಮಿಕ್ಕದ್ದನ್ನು ಇಲ್ಲದವರಿಗೆ ಹಂಚುವವರು .ದೆಹಲಿ ನಗರದಲ್ಲಿ ಕೆಲವು ಸಹೃದಯೀ

ಯುವಕರು ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಹೋಟೆಲ್ ಕಲ್ಯಾಣ ಮಂಟಪಗಳಲ್ಲಿ 

ಮಿಕ್ಕ ಆಹಾರ ಸಂಗ್ರಹಿಸಿ  ನಿಗದಿತ ಜಾಗಗಳಲ್ಲಿ ಅದನ್ನು ಹಂಚುವರು .ಇದರ 

ಮುಂಬೈ ಶಾಖೆಯ ಕಾರ್ಯವನ್ನೇ ನಾನು ಕಂಡದ್ದು .ಆಹಾರ ಅಲ್ಲದೆ ಚಳಿಗಾಲದಲ್ಲಿ 

ಕಂಬಳಿ ಹಂಚುವ ಕೆಲಸವನ್ನೂ ಮಾಡುವರಂತೆ .

ಈ ಸಂಸ್ಥೆಯು ಪಾಕಿಸ್ತಾನದಲ್ಲಿಯೂ ಇದ್ದು ಮೈತ್ರಿ ಮಾಡಿ ಕೊಂಡಿವೆ .








  ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ತನ್ನಂತೆ ಪರರ ಬಗೆದೊಡೆ 

ಕೈಲಾಸ ಬಿನ್ನಾಣವಕ್ಕು ಸರ್ವಜ್ಞ 

ಅವರ ಜಾಲತಾಣ ದಿಂದ ಆರಿಸಿದ ನುಡಿಮುತ್ತುಗಳು
.೧  ಉಪವಾಸದಿಂದ ಸಾಯುವವರ ಸಂಖ್ಯೆ ಕ್ಷಯ ,ಏಡ್ಸ್  ಮತ್ತು ಮಲೇರಿಯಾ 

ಕಾಯಿಲೆಗಳಿಂದ ಒಟ್ಟಾಗಿ ಸಾಯುವವರಿಗಿಂತ ಹೆಚ್ಚು .

೨.ಜಗತ್ತಿನಲ್ಲಿ ತಯಾರಿಸಿದ ಆಹಾರದಲ್ಲ್ಲಿ ಮೂರನೇ ಒಂದು  ಸೇವಿಸಲ್ಪಡುವುದೇ 

ಇಲ್ಲ .

೩.೮೨% ಉಪವಾಸ ವಿರುವವರು ಆಹಾರ ಮಿಗತೆ ಇರುವ ನಾಡಿನಲ್ಲಿಯೇ 

ಇರುವರು 

೪ ಜಗತ್ತಿನಲ್ಲಿ ಹತ್ತು ಸೆಕುಂಡುಗಳಿಗೆ ಒಂದು ಮಗು ಉಪವಾಸದಿಂದ ಸಾಯುತ್ತಿದೆ .

ಇವರ ಬಗ್ಗೆ ಹೆಚ್ಚು ಮಾಹಿತಿಗೆ robinhoodarmy.com ಗೆ ಲಾಗ್ ಮಾಡಿರಿ 
         

 ಇಂತಹ ರಾಬಿನ್ ಹುಡ್ ಗಳ ಸಂತತಿ ಸಾವಿರವಾಗಲಿ .

(ಚಿತ್ರಗಳ ಮೂಲಗಳಿಗೆ ಆಭಾರಿಯಾಗಿದ್ದೇನೆ)

ಸೋಮವಾರ, ಸೆಪ್ಟೆಂಬರ್ 21, 2015

ಅಮೇರಿಕಾ ಯಾತ್ರೆ ೮

ಸಿಯಾಟಲ್ ಸಂದರ್ಶನ ಮುಗಿಸಿ ಚಿಕಾಗೊದತ್ತ  ದಾರಿ ಬೆಳೆಸಿದೆವು .ವಿಮಾನ 

ನಿಲ್ದಾಣ ದಲ್ಲಿ ಸೆಕ್ಯೂರಿಟಿ ಯವರು  ಶ್ರೀಮತಿಯವರ ಉಡುಗೆಯಲ್ಲಿದ್ದ ಅಲಂಕಾರಿಕ 

ಜರಿಗಳು ಸ್ಕ್ಯಾನ್ ನಲ್ಲಿ  ಕಂಡುದರಿಂದ ವಿವರವಾದ ಪರಿಶೀಲನೆಗೆ ಒಳ ಪಡಿಸಿ 

ಯಾವುದೇ ಸ್ಪೋಟಕ ಇಲ್ಲ ಎಂದು ಖಾತರಿಸಿ ಒಳ ಗಡೆ ಬಿಟ್ಟರು .ನನಗೇನೋ 

ಸಂದೇಹ ,ಆಗಾಗ್ಗೆ ನನ್ನ ಮೇಲೆ ಅವರ ಸಿಟ್ಟು ಸ್ಪೋಟವಾಗುವುದು ಇದೆ .

    ಚಿಕಾಗೊ ನಿಲ್ದಾಣದಲ್ಲಿ ಇಳಿಯುವಾಗ ಸಂಜೆ ಆರು ಗಂಟೆ .ಇಲ್ಲಿನ ಬಹುತೇಕ 

ನಗರಗಳಲ್ಲಿ ಒಂದಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳಿವೆ .ನಮ್ಮನ್ನು 

ಕರೆದೊಯ್ಯಲು ಬಂಧು ಮುರಲೀಧರ ಕಜೆ ಕಾರ್ ಸಮೇತ  ಬಂದಿದ್ದರು .ಅವರ 

ಕಾರಿನ ನಂಬರ್ ಪ್ಲೇಟ್ನಲ್ಲೂ KAJE ಇದೆ .

  ನಗರಗಳ ಮುಖ್ಯ ಭಾಗಕ್ಕೆ ಡೌನ್ ಟೌನ್ ಎನ್ನುತ್ತಾರೆ .ಮುರಳಿಯವರ ಆಫೀಸ್ 

ಇಲ್ಲಿದೆ .ಮನೆ ಹೊರ ವಲಯದಲ್ಲಿ ಇದೆ .ಅವರು ಬ್ಯಾಂಕ್ ನಲ್ಲಿ ತಾಂತ್ರಿಕ ಅಧಿಕಾರಿ .

ಮುರಳಿ ಯವರು ತಮ್ಮ ಪದವಿ ಅಧ್ಯಯನ ಹೊರತು ಪಡಿಸಿ ಎಲ್ಲಾ ವಿದ್ಯಾಭ್ಯಾಸ

ಸತ್ಯ ಸಾಯಿ ಸಂಸ್ಥೆಗಳಲ್ಲಿ ಮಾಡಿದವರು ,ಅದರ ಛಾಪು ಅವರಲ್ಲಿ ಇದೆ .ವಿನಯ .

ಸಂಸ್ಕೃತಿ ಪ್ರೇಮ ಮತ್ತು ಅತಿಥ್ಯದಲಿ ಆನಂದ ಕಾಣುವ ಗುಣ  ಎದ್ದು ಕಾಣುವುದು .

ಚಿಕಾಗೊ ನಗರದ ಕನ್ನಡ ಕೂಟ ,ಸತ್ಯ ಸಾಯಿ ವೃಂದ ಗಳಲ್ಲಿ ಅವರು ಕ್ರಿಯಾಶೀಲ

ರಾಗಿ ಮುಂಚೂಣಿಯಲ್ಲಿದ್ದಾರೆ .

ಅವರ ಪತ್ನಿ ಸಹನಾ .ಹೆಸರಿಗೆ ತಕ್ಕಂತೆ ಸಹನಾ ಶೀಲೆ .ದಂತ ವೈದ್ಯೆಯಾದ 

ಇವರು ಕುಟುಂಬಕ್ಕೆ ಸಮುಯ ಮೀಸಲಿಡುವುದಕ್ಕಾಗಿ ಎಳೆಯ ಮಕ್ಕಳ ಶಾಲೆಯಲ್ಲಿ 

ಅಧ್ಯಾಪನ ಮಾಡುತ್ತಿದ್ದಾರೆ ,ಮಕ್ಕಳಾದ ಸಖ್ಯಂ ಮತ್ತು ಸೋಹಂ ಅವರಲ್ಲಿ 

ನಮ್ಮ ಸಂಸ್ಕೃತಿಯ ಪ್ರಭಾವ ಉಳಿಯುವಂತೆ ಪ್ರಯತ್ನ ಮಾಡುತ್ತಿದ್ದಾರೆ .

   ಅವರ ಮನೆಯ ನೆಲ ಮಾಳಿಗೆಯಲ್ಲಿ ಧ್ವನಿ ವರ್ಧಕ ಮತ್ತು ಸಂಗೀತ ಸಾಧನ 

ಗಳು ಇದ್ದು ಭಜನೆ ಇತ್ಯಾದಿ ನಡೆಯುತ್ತಿರುತ್ತವೆ .




                   ಮುರಳಿ  ಕುಟುಂಬದೊಡನೆ ನಾವು 

   ರಾತ್ರಿ ಕಳೆದು ಮರುದಿನ  ಚಿಕಾಗೋ ನಗರ ವೀಕ್ಷಣೆಗೆ ಹೊರಟೆವು ,ಕಾರು 
ಅವರದು .ಚಾಲಕ ನಮ್ಮ ಮಗ .ಮೊದಲು ಇಲ್ಲಿಯ ಪ್ರಸಿದ್ಧ  ಮತ್ಸ್ಯಾಗಾರ 

ಶೆಡ್ ಅಕ್ವೇರಿಯಂ ಗೆ ಹೋದೆವು .ರಜಾದಿನ ಆದ್ದರಿಂದ ಜನ ಸಂದಣಿ ಇತ್ತು .

,ಮೊದಲೇ ಟಿಕೆಟ್ ಕೊಂಡಿದ್ದರಿಂದ ಒಳ ಹೋದೆವು .ಮೊದಲು ಇಲ್ಲಿ ಜಲಚರಗಳ 

ಬಗ್ಗೆ 4 D ಚಿತ್ರ ಪ್ರದರ್ಶನ ನೋಡಿದೆವು .ಒಳ್ಳೆಯ ಅನುಭವ .

 ಆ ಮೇಲೆ  ಅಕ್ವಾಟಿಕ್ ಶೋ ಇದೆ ,ಇಲ್ಲಿ ತರಬೇತಿ ಹೊಂದಿದ ಬಿಳಿ ತಿಮಿಂಗಿಲ ಗಳ 

ಆಟ ಪ್ರದರ್ಶಿಸುತ್ತಾರೆ.

  




ಪೆಂಗ್ವಿನ್ ಮತ್ತು ನಾಯಿ ಮರಿಗಳ  ಆಟ ಕೂಡ ತೋರಿಸುವರು .

ಬೇರೆ ಬೇರೆ ಜಲಚರಗಳ (ಕಪ್ಪ್ಪೆ  ಮೀನು )ಪ್ರದರ್ಶನ ಕಾಣಲು ಚೆನ್ನ .

  ಮಿಷಿಗನ್ ಸರೋವರ ಚಿಕಾಗೋದ ದೊಡ್ಡ ಆಕರ್ಷಣೆ ಮತ್ತು ನಗರದ ಜಲ

ಪೂರೈಕೆಯ ತಾಣ .




ಚಿಕಾಗೊ ನಗರದ ಮೂಲಕ ಹರಿಯುವ ಚಿಕಾಗೊ ನದಿ ಗೂ ಈ ಸರೋವರಕ್ಕೂ 

ಸಂಪರ್ಕ ಇದ್ದರೂ ನದಿ ನೀರು ಇದಕ್ಕೆ ಸೇರದಂತೆ  ತಾಂತ್ರಿಕ ವ್ಯವಸ್ಥೆ ಮಾಡಿದ್ದಾರೆ.

     ಮದ್ಯಾಹ್ನ ಮನೆಯಿಂದ ತಂದಿದ್ದ  ಚಿತ್ರಾನ್ನ ,ಪುಳಿಯೋಗರೆ ತಿಂದು 

ನಗರದ  ಪ್ರಸಿದ್ಧ  ಅರ್ಕಿಟೆಕ್ಚರಲ್  ದೋಣಿ ಯಾತ್ರೆಗೆ ಹೋದೆವು .ಚಿಕಾಗೋ 

ಮುಖ್ಯ ನಗರದ ಗಗನ ಚುಂಬಿ ಗಳಲೆಲ್ಲ  ಚಿಕಾಗೊ ನದಿ ದಂಡೆಯಲ್ಲಿ ಇವೆ.

ಇವುಗಳಲ್ಲಿ ಒಂದೊಂದಕ್ಕೂ ತನ್ನದೇ ಅದ ಇತಿಹಾಸ ಇದೆ .ಯಾಂತ್ರಿಕ 

ದೋಣಿಯಲ್ಲಿ ವೀಕ್ಷಕ ವಿವರಣೆ ನೀಡುತ್ತಾ ಕರೆದು ಒಯ್ಯುತ್ತಾರೆ .

               



ಕೆಳಗೆ  ಕಾಣುವ ಟ್ರಂಪ್ ಟವರ್ ನೋಡಿರಿ ,ಇದು  ಅಮೇರಿಕಾ ಅಧ್ಯಕ್ಷ 

ಸ್ಥಾನಕ್ಕೆ  ಪೈಪೋಟಿ ನಡೆಸುತ್ತಿರುವ  ಡೊನಾಲ್ಡ್ ಟ್ರಂಪ್  ಮಾಲಕತ್ವದ ಗಗನ 

ಚುಂಬಿ .

  
ಇಲ್ಲಿ ನದಿ ಸುತ್ತ  ಕಟ್ಟಡಗಳನ್ನು ಕಟ್ಟುವಾಗ  ಪಾದಚಾರಿಗಳಿಗೆ ಮತ್ತು  ಸೈಕಲ್ 

ಸವಾರರಿಗೆ ಎಂದು  ಜಾಗ ಬಿಡಬೇಕೆಂಬ ಕಾನೂನು ತಂದಿರುವರು .

ನದಿ ತೀರದಲ್ಲಿ ಹಾದು ಹೋಗುವ  ಮೆಟ್ರೋ ರೈಲು ಹಳಿಗಳು ಮತ್ತು ಸ್ಟೇಷನ್ 

ಗಳು  ಈ ಕಟ್ಟಡಗಳ ಕೆಳಗೆ ಇವೆ.

ಚಿಕಾಗೋದ ಅತಿ ಎತ್ತರದ ಕಟ್ಟಡ ಸಿಯರ್ರ್ಸ್ ಅಥವಾ ವಿಲ್ಲಿಸ್  ಟವರ್ 

ಈ ನದೀ ಗುಂಟವೇ ಇದೆ .ಇದರ ನಿರ್ಮಾಣದಲ್ಲಿ ಬಾಂಗ್ಲಾದೇಶ 

ಸಂಜಾತ ಇಂಜಿನಿಯರ್  ಫಜಲೂರ್ ರಹಮಾನ್ ಖಾನ್ ಅವರ ಮುಖ್ಯ ಭೂಮಿಖೆ

ಇತ್ತು .


ವಿಲ್ಲಿಸ್ ಟವರ್ .

ನದೀ ಯಾತ್ರೆ ಮುಗಿಸಿ ನಾವು ಗ್ರಾಂಟ್ ಪಾರ್ಕ್ ನತ್ತ ತೆರಳಿದೆವು .

ಶಾಲೆಗಳಿಗೆ ರಜಾದಿನಗಳು ಮತ್ತು ಶನಿವಾರ ಆದುದರಿಂದ ನಗರದಲ್ಲಿ 

ಜನಸಂದಣಿ ಇತ್ತು .

ಇಲ್ಲಿ ಬಕಿಂಗ್ ಹ್ಯಾಮ್ ಕಾರಂಜಿ ಇದೆ .
   
ಅದರ ಸನಿಹದಲ್ಲಿಯೇ ಕ್ಲೌಡ್ ಗೇಟ್ ಇದೆ .ಇದರ ರಚನೆಯಲ್ಲಿ  ಭಾರತ ಸಂಜಾತ 

ಆಶಿಶ್ ಕಪೂರ್ ಅವರ ಪಾತ್ರ ಮುಖ್ಯ ಎಂಬುದು ವಿಶೇಷ ,ಇಲ್ಲಿ  ಉಕ್ಕಿನ 

ಹಾಳೆಗಳಿಂದ ನಿರ್ಮಿಸಿದ ಚಿಕಾಗೊ ಬೀನ್ ಇದೆ .ಇದರಲ್ಲಿ ಯಾತ್ರಿಕರ ಪ್ರತಿಬಿಂಬ 

ನೋಡಲು ಚಂದ .




ನನ್ನ ಮಗನಿಗೆ ಅಲ್ಪ ಸಮಯದಲ್ಲಿ ಹೆಚ್ಚು ಹೆಚ್ಚು ಸ್ಥಳಗಳ ಪರಿಚಯ ಮಾಡಿಸುವ 

ಆಶೆ ಮತ್ತು ಹುಮ್ಮನಸು ,ಆದರೆ ನಮ್ಮ ಗಾಡಿ ಅದಕ್ಕೆ ಸರಿಯಾಗಿ ಒಡ ಬೇಕಲ್ಲ .


ಪಾರ್ಕಿಂಗ್ ಸಮಸ್ಯೆಯಿಂದಾಗಿ ನಾವು ಒಂದು ಕಡೆ ಇಟ್ಟು ಮತ್ತೆ ಎಲ್ಲಾ ಕಡೆ 

ಪಾದಯಾತ್ರೆ  ತಾನೇ .

  ಸಂಜೆಯಾಗುತ್ತಿದ್ದಂತೆ ವಿಲ್ಲ್ಸ್ ಟವರ್ ಏರಲು ಹೋದೆವು ,೧೦೮ ಮಹಡಿಗಳ 

ಇದು ಅಮೆರಿಕಾದ ಎರಡನೇ ದೊಡ್ಡ ಕಟ್ಟಡ .ಟಿಕೆಟ್ ಪಡೆದು ಮೇಲೆ ಹತ್ತ ಬಹುದು .

ಮೇಲಿನ ಅಂತಸ್ತಿನಲ್ಲಿ  ಇಡೀ ಚಿಕಾಗೊ ನಗರದ ವಿಹಂಗಮ ನೋಟ ನೋಡ 

ಸಿಗುತ್ತದೆ .ಅಲ್ಲದೆ ಗಾಜಿನ ಒಂದು ವಿಸ್ತರಿತ  ಚೇಂಬರ್ ನಲ್ಲಿ ನಿಂತು ಪ್ರಪಾತ 

ವಿಕ್ಷಣೆಗೂ ಅವಕಾಶ ಇದೆ ,ರೋಮಾಂಚಕಾರಿ ಅನುಭವ ,











ಮರಳುವಾಗ ಭಾರತ ಮತ್ತು ಪಾಕಿಸ್ತಾನ ದವರ  ಅಂಗಡಿಗಳು ಹೆಚ್ಚಾಗಿರುವ 

ದೆವೊನ್ ಅವೆನ್ಯೂ ಮೂಲಕ ಹೋದೆವು .ಮುಖ್ಯ ನಗರದಲ್ಲಿ ಕಾಣದ 

ಸೈನ್ ಬೋರ್ಡ್ ಗಳು ,ಫ್ಲೆಕ್ಸ್ ಗಳು ಇಲ್ಲಿ ಕಂಡು ಬಂದುವು ,ಮುಂದೆ ಇಲ್ಲಿಯ 

ಬಹಾಯಿ ಮಂದಿರಕ್ಕೆ ತೆರಳಿ ಅಲ್ಲಿಯ ಚಟುವಟಿಕೆ ವೀಕ್ಷಿಸಿ ದೆವು.
ಬಹಾಯಿ ಮಂದಿರ 

ಮನೆಯಲ್ಲಿ ಸಹನಕ್ಕ ತಯಾರಿಸಿದ ಭೂರಿ ಭೋಜನ ಸೇವಿಸಿ  ಪವಡಿಸಿದೆವು