ಬೆಂಬಲಿಗರು

ಭಾನುವಾರ, ಅಕ್ಟೋಬರ್ 25, 2015

ಕಣ್ಣಿದ್ದೂ ಕಾಣದ ಸ್ಥಿತಿ ಮೆದುಳಿನ ಅಂಧತ್ವ

ಕಣ್ಣಿದ್ದೂ ಕಾಣರು ,ಒಳಗಿನ ಕಣ್ಣನು ತೆರೆದು ನೋಡು ಇತ್ಯಾದಿ ನಾವು ಆಗಾಗ್ಗೆ 

ಕೇಳುತ್ತಿರುತ್ತೇವೆ.ಇದರ ವಾಸ್ತವ ಅಂಶ ಏನು ?ನಮ್ಮ ಕಣ್ಣುಗಳೇ ದೃಷ್ಟಿ ನೀಡಲು 

ಸಾಕೇ?

ನಮ್ಮ ಕಣ್ಣಿನ ಅಕ್ಷಿಪಟಲದ ಮೇಲೆ ಬಿದ್ದ ಬಿಂಬವು ಸಂದೇಶ ರೂಪದಲ್ಲಿ  ನರಗಳ 

ಮೂಲಕ ಮೆದುಳಿಗೆ ಸಾಗುವುದು .ಮೆದುಳಿನ ಹಿಂಬಾಗದಲ್ಲಿ  ದೃಷ್ಟಿ ವೀಕ್ಷಕ ಕೇಂದ್ರ 

ಇದೆ .ಇಲ್ಲಿ ಕಣ್ಣಿನಿಂದ ಬಂದ ಸಂದೇಶವನ್ನು ವಿಶ್ಲೇಷಿಸಿ ಕಂಡ ಬಿಂಬದ ದ ರೂಪ 

ಗ್ರಹಣ ಆಗುವುದು .

                                     

ಕಣ್ಣು ಸರಿ ಇದ್ದರೂ ಮೆದುಳಿನ ಈ ಭಾಗ ಸರಿ ಇಲ್ಲದಿದ್ದಲ್ಲಿ  ಮನುಷ್ಯ 

ಅಂಧನಾಗುವನು.ಇದನ್ನು ಮೆದುಳಿನ ಅಂಧತ್ವ ಎನ್ನುವರು (Cortical Blindness)

ಕೆಲವು ಪರೀಕ್ಷಣ ಗಳಿಂದ ಈ ಕುರುಡನ್ನು ಕಂಡು ಹಿಡಿಯ ಬಹುದು .ಉದಾ 

ಕಣ್ಣಿನ ಮೇಲೆ ಬೆಳಕು ಹಾಯಿಸಿದಾಗ ಕಣ್ಣ ಪಾಪೆ ಕುಗ್ಗುವುದು .ಕಣ್ಣಿನ ಮಸೂರ 

,ಅಕ್ಷಿಪಟ ಅಥವಾ ನರದ ತೊಂದರೆ ಇದ್ದರೆ ಈ ಪ್ರತಿಕ್ರಿಯೆ ಕಾಣಿಸದು .ಆದರೆ

ಮೆದುಳಿನ ಅಂಧತ್ವದಲ್ಲಿ  ಇದು ಅಭಾದಿತ ವಾಗಿರುವುದು .ಆದರೂ ಏನೂ 

ಕಾಣಿಸದು .ಇದನ್ನು ಮೆದುಳಿನ ತೊಂದರೆ ಎನ್ನಿರಿ ,ಒಳಗಿನ ಕಣ್ಣಿನ ತೊಂದರೆ 

ಎನ್ನಿರಿ .

ಮೆದುಳಿನ ರಕ್ತ ನಾಳದ ಹೆಪ್ಪುಗಟ್ಟುವಿಕೆ ಅಥವಾ ರಕ್ತ ಸ್ರಾವ ದಿಂದ 

ಉಂಟಾಗುವ  ಮೆದುಳಿನ ಆಘಾತ (ಸ್ಟ್ರೋಕ್) ಇದಕ್ಕೆ ಮುಖ್ಯ ಕಾರಣ .

ತಲೆಯ  ಸಿ ಟಿ ಅಥವಾ  ಎಂ ಆರ್ ಐ ಸ್ಕ್ಯಾನ್ ಮೂಲಕ ಇದನ್ನು  

ದೃಡೀಕರಿಸುವರು.




ಸಿ ಟಿ ಸ್ಕ್ಯಾನ್ ನಲ್ಲಿ  ದೃಷ್ಟಿ ಮೆದುಳಿನ ರಕ್ತ ಹೆಪ್ಪು ಕಟ್ಟುವಿಕೆ


MRI ಸ್ಕ್ಯಾನ್ ನಲ್ಲಿ  ದೃಷ್ಟಿ ಮೆದುಳಿನ ಆಘಾತ ಚಿತ್ರಣ .
(ಚಿತ್ರಗಳ ಮೂಲಗಳಿಗೆ ಅಭಾರಿ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ