ಬೆಂಬಲಿಗರು

ಸೋಮವಾರ, ಮಾರ್ಚ್ 6, 2017

ಗುಡ್ಡದ ತುದಿಯಿಂದ

ಬೈರಿಕಟ್ಟೆ ಯಿಂದ  ದಕ್ಷಿಣಾಭಿಮುಖವಾಗಿ  ಮಣ್ಣಿನ ರಸ್ತೆ  ಬಲಕ್ಕೆ ತಿರುಗಿ ಪುನಃ ಗುಡ್ಡ 

ಆರೋಹಣ .ರಸ್ತೆ ಬದಿಯಲ್ಲಿ  ಸಣ್ಣ ಕಾಡು .ಒಂದು ಒಳ್ಳೆಯ ಕಾಟು ಮಾವಿನ ಹಣ್ಣಿನ 

ಮರ ಇದೆ .ಬೇಸಿಗೆಯಲ್ಲಿ  ಮರದ ಕೆಳಗೆ  ಬಿದ್ದ ಹಣ್ಣುಗಳನ್ನು ಹೆಕ್ಕಿ ತಿನ್ನುತ್ತಿದ್ದೆವು .

ಮಾರ್ಗದಲ್ಲಿ ನಡೆಯುವಾಗ  ಮಾವಿನ ಹಣ್ಣಿನ ಕಂಪು ನಮ್ಮನ್ನು  ಮರದ ಬುಡಕ್ಕೆ 

ಆಹ್ವಾನಿಸುವುದು .ಅದರಂತೆ  ಗೇರು ಹಣ್ಣುಗಳು.

ಮುಂದೆ  ಗುಡ್ಡದ ಶಿಖರ .ಮತ್ತೆ  ಇಳಿಜಾರು .ಮೇಲಿನಿಂದ   ಕೆಳಗಿನ  ಬಯಲಿನ  

ವಿಹಂಗಮ ನೋಟ .ಅಡಿಕೆ ಮರಗಳ  ತೋಟದ ಮರೆಯಲ್ಲಿ ಮನೆಗಳು .ಬಚ್ಚಲು 

ಮನೆಯಿಂದ ಅಥವಾ ಅಡಿಗೆ ಮನೆಯಿಂದ  ಏಳುತ್ತಿರುವ  ಹೊಗೆ ಮನುಜ ವಾಸದ 

ಸೂಚನೆ .ಹಗಲು ಹೊತ್ತಿನಲ್ಲಿ  ಕಲ್ಲಿಗೆ ಹೊಡೆದು ಬಟ್ಟೆ ತೊಳೆಯುವ  ,ತೋಟದ 

ಕೆರೆಯಿಂದ  ಡಿಸೇಲ್ ಪಂಪ್ ಶಬ್ದ  ಕೇಳಿಸ ಬಹುದು .ಬೇಸಾಯದ ಸಮಯದಲ್ಲಿ 

ದೂರದ ಹೊಲದಿಂದ  ಉಳುವ ರೈತನ  ರಾಗ ಬದ್ದ ಉದ್ಗಾರಗಳು ಕೇಳುವುವು .


                   ಸಂಜೆ ಹೊತ್ತು ಆದರೆ  ಮನೆಗೆ ಹಿಂತಿರುಗುವ   ದನ ಕರುಗಳ ಬ್ಯಾಂ 

ಗೂಡಿಗೆ ಮರಳುವ  ಹಕ್ಕಿಗಳ ಕಲರವ ಇವು ಸಾಮಾನ್ಯ .ರಾತ್ರಿ ಕಾಲಿಟ್ಟೊಡನೆ 

ಮನೆಗಳಿಂದ  ಮನುಷ್ಯರ  ಕೂಗು ,ನಾಯಿ ಗಳ ಬೊಗಳುವಿಕೆ  ಮತ್ತು  ನರಿಗಳ 

ಊಳಿದುವ  ಸಂಗೀತ  ಕೇಳಿಸುವುದು .ನರಿಗಳು  ಕೂಗಿಗೆ  ನಾಯಿಗಳು  ಉತ್ತರ 

ಕೊಡುವಂತೆ  ಬೊಗಳುವುವು .

                  ನಾವು  ಗುಡ್ಡದ ತುದಿಯಿಂದ  ಮಾತನಾಡುತ್ತಾ ಇಳಿಯುತ್ತಿದ್ದರೆ 

 ನಮ್ಮ  ಮನೆಯ  ನಾಯಿಗೆ  ಗುರುತು ಸಿಕ್ಕಿ ಓಡೋಡಿ ಬರುವುದು .ಮನೆಯ 

 ನಾಯಿಗಳು  ನಾವು ನೆಂಟರ ಮನೆಗೆ ಹೊರಟಾಗಲೂ  ನಮ್ಮೊಡನೆ ಬಂದು  ಬಸ್ 

ನಿಲ್ದಾಣದಿಂದ   ವಾಸನೆ ಗುರುತಿನಲ್ಲಿ  ಮನೆಗೆ ವಾಪಾಸ್ ಆಗುತ್ತಿದ್ದವು 

ಭಾನುವಾರ, ಮಾರ್ಚ್ 5, 2017

ಬೈರಿಕಟ್ಟೆ

ವಿಟ್ಲ ಮಂಜೇಶ್ವರ ರಸ್ತೆಯಲ್ಲಿ  ೫ ಕಿ ಮೀ ಹೋದರೆ ಕಲಂಜಿಮಲೆ ಸೆರಗಿನಲ್ಲಿ ಸಣ್ಣ 

ಪೇಟೆ ಬೈರಿಕಟ್ಟೆ .ಸ್ಥಳ ನಾಮ ಏಕೆ ಬಂತೋ ಗೊತ್ತಿಲ್ಲ .ಉತ್ತರಕ್ಕೆ  ತಲೆಯೆತ್ತಿ ನಿಂತ 

ಕಳಂಜಿಮಲೆ .ದಕ್ಷಿಣ ಕ್ಕೆ  ನಾಲ್ಕೈದು ಅಂಗಡಿಗಳು .ರಾಜಮಾರ್ಗಕ್ಕೆ ಸೇರುವ ರಸ್ತೆ 

ಒಂದೇ .ಅದು ಅರ್ಧ ಕಿ ಮೀ ದಕ್ಷಿಣಕ್ಕೆ  ಕವಲೊಡೆದು ಒಂದು ಅಂಗ್ರಿ ಬಯಲಿಗೂ 

ಇನ್ನೊಂದು  ಮಡೆಯಾಲ  ಕೇಕನಾಜೆ ಗೂ  ಹೋಗುವುದು .ಈ ಊರಿನವರು ಬಸ್ 

ಹಿಡಿಯಲು  ಬೈರಿಕಟ್ಟೆಗೆ ಬರಬೇಕು .
      
  ಕಳಂಜಿಮಲೆ  ರಕ್ಷಿತಾರಣ್ಯ .ಇಲ್ಲಿ  ಹುಲಿ ಚಿರತೆಗಳೂ ಇದ್ದವು ಎಂದು 

ಪ್ರತೀತಿ.ವರುಷಕ್ಕೊಮ್ಮೆ ಊರಿನಲ್ಲಿ  ಯಾರದಾದರೂ ಹಟ್ಟಿಗೆ ಬಂದು ದನವನ್ನೋ 

ಕರುವನ್ನೋ  ಬಲಿತೆಗೆದು ಕೊಳ್ಳುತ್ತಿದ್ದವು .ಹುಲಿ  ಪಶುವನ್ನು ಒಮ್ಮೆ ಕೊಂದು  ಬಿಟ್ಟು 

ಹೋಗಿ ಪುನಃ ತಿನ್ನಲು ಬರುವುದು ಎಂಬ ನಂಬಿಕೆಯಿಂದ  ಕೊಲ್ಲಲ್ಪಟ್ಟ  ಪಶುವಿನ 

ದೇಹಕ್ಕೆ  ವಿಷ ಹಾಕಿ ಜನ ಕಾಯುತ್ತಿದ್ದರು .ಆದರೆ ಇವರ ಉಪಾಯಕ್ಕೆ ಹುಲಿ 

 ಬಲಿಯಾದ  ಸಾಕ್ಷಿಯಿಲ್ಲ .

  ಕಳಂಜಿಮಲೆಯಿಂದ ಸೊಪ್ಪು  ಸೌದೆ ತರಲು  ರೈತಾಪಿ ಜನರು ಹೋಗುತಿದ್ದರು .

ಒಮ್ಮೊಮ್ಮೆ   ಫಾರೆಸ್ಟ್  ಗಾರ್ಡ್ ಗಳು  ಇವರು  ಮರ ಕಡಿಯುವರೆಂದು  

ಆರೋಪಿಸಿ ಇವರ ಅಯುಧವಾದ ಕುಡುಗೋಲನ್ನು (ಕತ್ತಿ) ವಶಪಡಿಸಿ  

ಓಡಿಸುತ್ತಿದ್ದರು . ಮೊದಲು  ದಟ್ಟ ಮರಗಳಿಂದ ತುಂಬಿದ್ದ  ಮಲೆಯನ್ನು  ಸವರಿ 

ವಾಣಿಜ್ಯ ಉದ್ದೇಶಕ್ಕಾಗಿ   ಅಕೇಶಿಯ  ನೆಟ್ಟಿರುವರು . ಈ  ಪರ್ವತ ಶ್ರೇಣಿಯಿಂದ 

ಹತ್ತಾರು  ನೀರ ತೊರೆಗಳು  ಹರಿದು  ಕೆಳಗಿನ ಬಯಲಿಗೆ  ನೀರುಣಿಸುವುವು .ಪುಣ್ಯ ,

ಸದ್ಯ ರಕ್ಷಿತಾರಣ್ಯದಲ್ಲಿ  ಹುಟ್ಟುವ ಕಾರಣ  ಆ ನೀರಿಗೆ ತೆರಿಗೆ  ಕೊಡಬೇಕೆಂದು 

ಸರಕಾರ ಹೇಳಿಲ್ಲ .

        ಬೈರಿಕಟ್ಟೆಯಲ್ಲಿ ಒಂದು ಹೋಟೆಲ್ .ಮರದ ಕಟ್ಟಿಗೆಯೇ ಉರುವಲು .ಇಂತಹ 

ಸಣ್ಣ  ಹೋಟೆಲ್ ಗಳಲ್ಲಿ  ಅಡುಗೆಯವನು ,ಕ್ಯಾಷಿಯರ್ ಮತ್ತು  ತಟ್ಟೆ ಎತ್ತುವವರು 

ಎಲ್ಲಾ ಒಬ್ಬರೇ .ಅವರೇ ಲೋಟ ತೊಳೆಯುವವರು .ಚಾ ದೊಡ್ಡ  ಗ್ಲಾಸ್ 

ಲೋಟದಲ್ಲ್ಲಿ.ಒಂದು  ಗ್ಲಾಸ್ ಚಾ  ಎನ್ನುತ್ತಿದ್ದರು .ಒಂದು ಕಪ್ ಚಾ ಇಲ್ಲಿ ಬಳಕೆಯಲ್ಲಿ 

ಇಲ್ಲ .ಇಲ್ಲಿ ಬಂದು ಚಾ ಕುಡಿಯಲು  ಕುಳಿತರೆ  ಊರ ಸಮಾಚಾರ  ಸಿಗುವುದು .

ರೇಶನ್ ಅಂಗಡಿಗೆ  ಅಕ್ಕಿ ಸಕ್ಕರೆ ಬಂದ ಸುದ್ದಿ ,  ರಾಂಪಣ್ಣ ನ ಬಸ್ಸು ಬಾಕ್ರಬೈಲು 

ಚಡವಿನಲ್ಲಿ  ಮಗುಚಿದ್ದು . ಪಟೇಲರ ಮನೆಗೆ ಹುಡುಗಿ ನೋಡಲು ಬಂದದ್ದು ಎಲ್ಲಾ 

ಇಲ್ಲಿ  ಸಿಗುವುದು .

ಇದು ಬಿಟ್ಟರೆ  ಒಂದು ಸಣ್ಣ ಬಟ್ಟೆ  ಅಂಗಡಿ .ಆಗೆಲ್ಲ  ಕ್ಯಾಶ್ ಕೊಟ್ಟು  ಬಟ್ಟೆ 

ಕೊಳ್ಳುತ್ತಿದ್ದುದು  ಕಡಿಮೆ  .ಎಲ್ಲಾ  ಉದ್ರಿ ಅಥವಾ ಸಾಲದ ಲೆಕ್ಕ .ದೀಪಾವಳಿ  

ಅಂಗಡಿ  ಪೂಜೆಗೆ  ಸಾಲ ಚುಕ್ತಾ ಮಾಡಿ ಹೊಸ ಲೆಕ್ಕ ಆರಂಬಿಸುವರು .

ಒಂದು  ಜೀನಸು ಅಂಗಡಿ ,ಅದಕ್ಕೆ ತಾಗಿ ರೇಶನ್ ಶಾಪ್ .ಕೆಂಪು ಬೋರ್ಡಿನ  

ಸರಕಾರಿ  ಸಾರಾಯಿ ಅಂಗಡಿ .ಬಸ್ ಸ್ಟಾಪ್ ಇದ್ದರೂ  ತಂಗುದಾಣ ಇರಲಿಲ್ಲ .

    ಈ  ರಸ್ತೆಯಲ್ಲಿ  ಇದ್ದುದು ಕೆಲವೇ ಬಸ್ ಗಳು .ಬಸ್ಗಳು  ಅವುಗಳ  ಡ್ರೈವರ್ 

ಹೆಸರಿನಿಂದ ಗುರುತಿಸಲ್ಪದುತ್ತಿದ್ದವು .ಉದಾ   ಪೀರ್ ಸಾಹೇಬರ ಬಸ್ ,ರಾಂಪಣ್ಣನ

ಬಸ್ , ಗೋಪಾಲನ ಬಸ್ , ಮಹಾಬಲ ರೈ ಬಸ್ ಇತ್ಯಾದಿ .ಬಸ್ ಬೈರಿಕಟ್ಟೆಗೆ 

ಬರುವಾಗ ಯಾವಾಗಲೂ   ಪ್ರಯಾಣಿಕರಿಂದ ತುಂಬಿರುತ್ತಿದ್ದವು . ಹಳ್ಳಿಯಿಂದ 

ಗಡಿಬಿಡಿಯಿಂದ  ಹೊರಟು ಬೆವರು ಸುರಿಸಿಕೊಂಡು  ಏದುಸಿರು ಬಿಡುತ್ತಾ   

ಮಾರ್ಗದ ಬಳಿಗೆ  ಇನ್ನೇನು ಎತ್ತಿದೆವು ಎನ್ನುವಷ್ಟರಲ್ಲಿ   ದೂಳು ಹಾರಿಸುತ್ತಾ 

ನಮ್ಮನು  ಹಂಗಿಸಿ ಎಂಬಂತೆ ಓಡಿ ಹೋಗುತ್ತಿದ್ದುದು  ಸಾಮಾನ್ಯ .

                    ಈ  ಬಸ್ಸಿನ ಚಾಲಕರು  ಫಲಾಪೇಕ್ಷೆ ಇಲ್ಲದೆ ಊರ ಜನರಿಗೆ 

 ಕುರಿಯರ್ ಸೇವೆ ಸಲ್ಲಿಸುತ್ತಿದ್ದರು . ಪೇಟೆಯಿಂದ  ಔಷಧಿ , ವಾರ್ತಾ ಪತ್ರ ಇತ್ಯಾದಿ 

 ತಂದು ಕೊಡುತ್ತಿದ್ದರು .

ಗುರುವಾರ, ಮಾರ್ಚ್ 2, 2017

ಟಾನಿಕ್ ,ಗ್ಲುಕೋಸ್ ಮತ್ತು ನಿತ್ರಾಣ

ಬಹಳಷ್ಟು ಜನರ ನಂಬಿಕೆ  ನಿಶ್ಶಕ್ತಿ ಗೆ  ಟಾನಿಕ್ ಅಥವಾ ಗ್ಲುಕೋಸ್ ತೆಗೆದು 

ಕೊಳ್ಳಲೇ ಬೇಕು .ವೈದ್ಯರ ಬಳಿಗೆ ಬಂದು ಒಂದು ಗ್ಲುಕೋಸ್ ಹಾಕಿ ಡಾಕ್ಟ್ರೆ ,ಒಂದು 

ಟಾನಿಕ್ ಬರೆದು ಕೊಡಿ ತುಂಬಾ ನಿತ್ರಾಣ ಎನ್ನುವವರು ಬಹಳ .

   ಇದು ಸರಿಯಲ್ಲ .ಉದಾಹರಣೆಗೆ  ಒಬ್ಬನಿಗೆ ಸಕ್ಕರೆ ಕಾಯಿಲೆ ಇದೆ .ಪಥ್ಯ 

ಮತ್ತು  ಔಷದೊಪಚಾರ ಸರಿ ಮಾಡುವುದಿಲ್ಲ .ಸಕ್ಕರೆ ಹತೋಟಿ ತಪ್ಪಿದರೆ  ನಿಶ್ಶಕ್ತಿ 

ಇರುವುದು .ಇದಕ್ಕೆ ಟಾನಿಕ್ ಕುಡಿಯುವುದು ಪರಿಹಾರ ಅಲ್ಲ .

ಇನ್ನೊಬ್ಬ ರೋಗಿಗೆ  ಅಸ್ತಮಾ ಕಾಯಿಲೆ .ಉಸಿರಾಟ ಸರಿ ಇಲ್ಲ .ಇದರಿಂದ  

ಅಂಗಾಂಗಳಿಗೆ ಪ್ರಾಣವಾಯು ಸರಬರಾಜು ವ್ಯತ್ಯಯ ಆಗುವುದು .ಅದರಿಂದ 

ನಿಶ್ಶಕ್ತಿ .ಇದಕ್ಕೆ ಟಾನಿಕ್ ಅಥವಾ ಗ್ಲುಕೋಸ್ ಪರಿಹಾರ ಅಲ್ಲ.

     ಅದರಂತೆ  ಹೃದಯ ,ಲಿವರ್ ಅಥವಾ ಮೂತ್ರಪಿಂಡ ರೋಗಗಳಿಂದ 

ಆಯಾಸ ಇರುವುದು .ಇವುಗಳಲ್ಲಿ ಮೂಲ ಕಾಯಿಲೆಗೆ  ಚಿಕಿತ್ಸೆ ಮಾಡಬೇಕೇ 

ಹೊರತು ಟಾನಿಕ್ ಪರಿಹಾರ ಅಲ್ಲ .

        ರೋಗಿ ಗೆ  ಕುಡಿದು ತಿನ್ನಲು ತೊಂದರೆ ಇಲ್ಲದಿದ್ದರೆ  ಗ್ಲುಕೋಸ್ ಡ್ರಿಪ್ 

ಕೊಡುವುದರಿಂದ ಹೆಚ್ಚು ಪ್ರಯೋಜನ ಇಲ್ಲ .ಅಲ್ಲದೆ ಮೂತ್ರಪಿಂಡ ವೈಫಲ್ಯ 

ಮತ್ತು ಹೃದಯ ಕಾಯಿಲೆ ಇರುವವರಿಗೆ  ಡ್ರಿಪ್ ಮೂಲಕ ಗ್ಲುಕೋಸ್ ಕೊಟ್ಟರೆ 

ಎದೆಯಲ್ಲಿ ನೀರು ನಿಂತು  ದಮ್ಮು ಕಟ್ಟುವ ಸಾಧ್ಯತೆ ಇದೆ .

                       ಸಮ ತೂಕದ ಆಹಾರ ವೇ ಟಾನಿಕ್ . ನಿರ್ದಿಷ್ಟ ವಿಟಮಿನ್ 

ಅಥವಾ ಆಹಾರದ ಅಂಶದ ಕೊರತೆ ಇದ್ದರೆ ವೈದ್ಯರೇ  ಅದನ್ನು ಬರೆದು 

ಕೊಡುವರು.ಸುಮ್ಮ ಸುಮ್ಮನೇ ಟಾನಿಕ್ ಕೇಳುವುದು ,ಗ್ಲುಕೋಸ್ ಹಾಕಿಸುವುದು 

ಸರಿಯಲ್ಲ ಮತ್ತು ಅನಾವಶ್ಯಕ  ಖರ್ಚಿಗೆ ದಾರಿ .

   ಡ್ರಿಪ್ ನಲ್ಲಿ ಹಾಕಿ ಕೊಡುವ  ಗ್ಲುಕೋಸ್ ನಲ್ಲಿ  ನೀರು ,ಉಪ್ಪು ಮತ್ತು( ಅಥವಾ )

ಗ್ಲುಕೋಸ್ ಇರುವುದು .ಇದನ್ನು ನಾವು ಬಾಯಲ್ಲಿ ಸೇವಿಸಿದರೂ ಶರೀರಕ್ಕೆ 

ಸೇರುವುದು .ಕುಡಿಯಲೇ ಆಗದ ಪರಿಸ್ಥಿತಿ ಇದ್ದರೆ ,ಅತಿಯಾದ ವಾಂತಿ ಇದ್ದರೆ 

ಮಾತ್ರ ನರಗಳ ಮೂಲಕ ಗ್ಲುಕೋಸ್ ಹಾಕುವರು .ಬಹಳ ಕಾಲ ಅಬೋಧಾವಸ್ಥೆ

ಇದ್ದರೆ  ನಾಸಿಕೋದರ ನಾಳದಿಂದ ಆಹಾರ ಕೊಡುವುದು ಕ್ಷೇಮ