ಬೆಂಬಲಿಗರು

ಸೋಮವಾರ, ಜುಲೈ 29, 2013

ಕಾರ್ಡಿಯೋ ಮಯೋಪತಿ

ಕಾರ್ಡಿಯೋ ಎಂದರೆ ಹೃದಯ ,ಮಯೋಪತಿ ಎಂದರೆ ಮಾಂಸ ಖಂಡಗಳ ಕಾಯಿಲೆ.


ಕೆಲವೊಮ್ಮೆ ಆರೋಗ್ಯವಂತ ಕ್ರೀಡಾಳುಗಳು ಮೈದಾನದಲ್ಲಿ  ಹಟಾತ್ ಹೃದಯ ಸ್ತಂಭನ ಆಗಿ ಸಾಯುವುದನ್ನ್ನು ಕೇಳಿದ್ದೇವೆ.


ಇದಕ್ಕೆ ಒಂದು ಪ್ರಮುಖ ಕಾರಣ ಈ ಕಾಯಿಲೆ.ಕೆಲವರಿಗೆ  ಹುಟ್ಟಿದಾರಭ್ಯ  ಹೃದಯದ ಮಾಂಸ ಖಂಡ ಗಳು  ವಾಡಿಕೆಗಿಂತ


ಹೆಚ್ಚು ದಪ್ಪವಾಗಿರುತ್ತವೆ .ಇದನ್ನು  ಹೈಪರ್ ಟ್ರೋಪಿಕ್   ಕಾರ್ಡಿಯೋ ಮಯೋಪಥಿ ಎಂದು ಕರೆಯುತ್ತಾರೆ.ಇಂಥವರಲ್ಲಿ


ಕೆಲವೊಮ್ಮ್ಮೆ ಹೃದಯ ಸಾಮಾನ್ಯವಾದ ಸಂಕುಚನ ವಿಕಸನಕ್ಕೆ ಬದಲಾಗಿ ಯದ್ವಾ ತದ್ವಾ ಕಂಪಿಸುತ್ತದೆ .(ventricular


fibrillation)ಇದರಿಂದ   ರಕ್ತದ ಒತ್ತಡ ಕುಸಿದು ಮೆದುಳಿಗೆ ರಕ್ತ ಸರಬರಾಜು ನಿಂತು ವ್ಯಕ್ತಿ ಸಾವನಪ್ಪುತ್ತಾನೆ.


              ಇದು  ಹೃದಯದ ರಕ್ತನಾಳಗಳು ಬ್ಲಾಕ್ ಆಗಿ ಸಂಭವಿಸುವ  ಸಾಮಾನ್ಯ ಹೃದಯಾಘಾತ ವಲ್ಲ.ಇಲ್ಲಿ ಮಾಂಸ


ಖಂಡಗಳ  ಹುಟ್ಟು ವೈಕಲ್ಯದಿಂದಾಗಿ  ಹೃದಯದ  ಎಲೆಕ್ಟ್ರಿಕ್ ವ್ಯವಸ್ತೆ  ಏರುಪೇರಾಗಿ ಸಂಭವಿಸುವ೦ತಹುದು.


ಇಂತಹ ರೋಗವನ್ನು ಆರಂಭದಲ್ಲಿ  ಕಂಡು ಹಿಡಿದರೆ  ಈ ತರಹದ  ತೊಂದರೆ (ventricular fibrillation) ಬರದಂತೆ

ತಡೆಗಟ್ಟುವ  ಮಾತ್ರೆಗಳನ್ನು ವೈದ್ಯರು ಕೊಡುತ್ತಾರೆ

ಹೃದಯದ ಸ್ಕ್ಯಾನ್  ಎಕೋ ಕಾರ್ಡಿಯೋ ಗ್ರಫಿ  ಮೂಲಕ ಈ ರೋಗವನ್ನು ಪತ್ತೆ ಹಚ್ಚ ಬಹುದು.




                                                        ನಾರ್ಮಲ್ ಹೃದಯ          ಮಾಂಸ ಖಂಡಗಳು ದಪ್ಪನೆ ಇರುವ ಹೃದಯ
.



                   

                                                

ಶನಿವಾರ, ಜುಲೈ 27, 2013

ಬಳಪ ಒರೆಸುವ ಬಟ್ಟೆ


            slate

ಹಲಗೆಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ

ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ|
ಬಳಸಿಬರೆಯಲು ಕಂಠಪತ್ರದ

ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ||

ಮುಂಜಾನೆ ವಾಕಿಂಗ್ ಹೋಗುವಾಗ ಸ್ಲೇಟು ನ ಒಂದು ತುಂಡು ಸಿಕ್ಕಿತು.ಒಡನೆ ನೆನಪಿಗೆ ಬಂದುದು ಕುಮಾರ ವ್ಯಾಸನ ಪದ್ಯ .ಹಲಗೆ

ಬಳಪವ ಹಿಡಿಯದೊಂದಗ್ಗಳಿಕೆ .ಸ್ಲೇಟು ಕಡ್ಡಿ ,ಪುಸ್ತಕ ಇಲ್ಲದೆ  ಮಹಾ ಕಾವ್ಯ ರಚಿಸಿದ  ಆತನನ್ನು ಮೆಚ್ಚಿದೆ.ಅವನ ಹೆಮ್ಮೆ  ಸಕಾರಣ

ವಾದುದು. ನಾವು ಚಿಕ್ಕಂದಿನಲ್ಲಿ ಒಯ್ಯುತ್ತಿದ್ದ ಸ್ಲೇಟು ನೆನಪಿಗೆ ಬಂತು. ಮೊದಲ ಎರಡು ತರಗತಿಗಳಲ್ಲಿ ಅದುವೇ ನಮ್ಮ ಬರಹದ

ಅಂಗಣ.ವರ್ಷದ ಕೊನೆಯಲ್ಲಿ ಬಳಪದ ಚೌಕಟ್ಟು ಹೋಗಿ ರೊಟ್ಟಿಯಾಕಾರ ತಳೆಯುತ್ತಿತ್ತು.

ಸ್ಲೇಟು ಇದ್ದಾರೆ ಆಯಿತೆ? ಅದನ್ನು ಒರಸಲು ಬಟ್ಟೆ ನೀರು ಬೇಕು. ಶ್ರೀನಿವಾಸ ಮೂರ್ತಿಯವರ ರಂಗಣ್ಣನ ಕನಸಿನ ದಿನಗಳ ಬೋರ್ಡ್

ಒರಸುವ ಬಟ್ಟೆ ನೆನಪಿಗೆ ಬಂತು. ನಾವು ಹಳೆ ಬಟ್ಟೆಯ ತುಂಡನ್ನು ಬಳಪ ಒರಸಲು ಒಯ್ಯುತ್ತಿದ್ದೆವು.ಹಲವೊಮ್ಮೆ ಅಂಗಿ ಚಡ್ಡಿಗೆ

ಒರಸುತ್ತಿದ್ದೆವು .ಹುಡುಗಿಯರು ಲಂಗದ ಬಟ್ಟೆಗೆ .

                                           child slate

ಬಟ್ಟೆ ಒದ್ದೆ ಮಾಡಲು ನೀರು ಬೇಕಲ್ಲ. ತಮ್ಮ ತಮ್ಮ ಲಾಲಾರಸವೆ ದ್ರವ.ಮಳೆಗಾಲದಲ್ಲಿ ಚಾವಣಿಯಿಂದ ಬೀಳುತ್ತಿದ್ದ ನೀರು.ಶಾಲೆಗೆ

ಹೋಗುವ ದಾರಿಯಲ್ಲಿ ನೀರು ಕಡ್ಡಿ ಎಂಬ ಸಣ್ಣ ಸಣ್ಣ ಸಸಿಗಳು ಸಿಗುತ್ತಿದ್ದವು. ಇವುಗಳ ಕಾಂಡದಿಂದ ಶುಧ್ಧವಾದ ನೀರು ಒಸರುತ್ತಿತ್ತು.

ಇವುಗಳನ್ನು ಕಟ್ಟು ಮಾಡಿ  ಒಯ್ಯುತ್ತಿದ್ದೆವು. ಉಕ್ತ ಲೇಖನ ,ಕಾಪಿ   ತಪ್ಪು ಬರೆದಾಗ ಅಧ್ಯಾಪಕರ  ಬೆತ್ತದಿಂದ  ಎರಡು ಬಿದ್ದಾಗ

ಬಂದ   ಕಣ್ಣೀರೇ   ಬಳಪವನ್ನು ಒದ್ದೆ ಮಾಡಿ ಕೊಡುತ್ತಿತ್ತು.

ಬಳಪ ದ ಕಡ್ಡಿ  ,ಅಂದರ ತುಂಡುಗಳು ,ಕೆಲವೊಮ್ಮೆ ಕೊಳ್ಳುತ್ತಿದ್ದ ಬಣ್ಣದ ಕಡ್ಡಿಗಳೂ ನೆನಪಾದವು .ಬಳಪ ಚೀಲ ಗಳನ್ನ ಹೆಗಲಿಗೆ

ಹಾಕಿ  ಅಕ್ಕನ ಕೈ ಹಿಡಿದು ನಡೆಯುತ್ತಿದ್ದ  ದಿನಗಳು.

ಈಗ  ಕಾಲ  ಒಂದು  ಪೂರ್ಣ ಸುತ್ತು ಹಾಕಿದೆ.ಈಗಿನ ಮಕ್ಕಳಿಗೂ ಹಲಗೆ ಬಳಪವ ಹಿಡಿಯದೆ ಕಲಿಯುವ ಅಗ್ಗಳಿಕೆ.ಕಂಪ್ಯೂಟರ್

ಟಚ್ ಸ್ಕ್ರೀನ್ ನಲ್ಲಿಯೇ  ಬರೆಯುವ ದಿನಗಳಲ್ಲವೇ ?
                            child compuert
ಮೇಲಿನ ಚಿತ್ರಗಳ  ಮೂಲಗಳಿಗೆ ಆಭಾರಿ

ಗುರುವಾರ, ಜುಲೈ 25, 2013

ಎರಡು ಒಳ್ಳೆಯ ಕಾದಂಬರಿಗಳು


ಹಿಂದೆ ಓದಿದ ಎರಡು ಕಾದಂಬರಿಗಳು
              
            
.                                                                                   ಮೊದಲನೆಯದು  ಖ್ಯಾತ ಮಲಯಾಳಿ ಬರಹಗಾರ ಡಾ

ಪುನಥಿಲ್ ಕುಂಞಬ್ದುಲ್ಲಾ ಅವರ ಕಾದಂಬರಿ ಸ್ಮಾರಕ ಶಿಲೈ ಗಳ್ ಯಇಂಗ್ಲಿಷ್ ಅನುವಾದ ಮೆಮೋರಿಯಲ್ ಸ್ಟೋನ್ ಸ್

.ಮಲಬಾರಿನ

ದೊಡ್ಡ ಮುಸ್ಲಿಂ ಮತೆತನದ ಕತೆ.ಅರಕ್ಕಲ್ ತರವಾಡಿನ ಪುಕ್ಕೊಯ ತಂಗಳ್.ಇದರ ಕಥಾನಾಯಕ.ಘನತೆ ,ಪುರೋಗಾಮಿ

ನಡೆ ,ತ್ಯಾಗಶೀಲತೆ ,ವಿದ್ಯಾ ಪಕ್ಷಪಾತ ಮತ್ತು ದಾನ ಶೀಲತೆ ಒಂದು ಕಡೆಯಾದರೆ ತೀರದ ಲೈಂಗಿಕತೆ ಇನ್ನೊಂದು

ಕಡೆ.ಕೊನೆಗೆ

ಈ ದೌರ್ಬಲ್ಯವೇ ಮನೆತನದ ಅವನತಿಗೆ ಕಾರಣವಾಗುವ ದುರಂತ.ಇವುಗಳ ನಡುವೆ ಆ ಊರಿನ ಅನೇಕ ವಿದ್ಯಮಾನಗಳು

ವರ್ಣಮಯವಾಗಿ  ಮೂಡಿ ಬಂದಿವೆ.ಅನಾಥ ಮಗು ಕು೦ಞಾಲಿ ,ಮಗಳು ಪೂಕು೦ಞಿ,ಪತ್ನಿ ಅತ್ತಾಬಿ ಇತ್ಯಾದಿ ಮುಖ್ಯ

ಪಾತ್ರಗಳೊಡನೆ

ಶಾಲೆ ಅಧ್ಯಾಪಕರು ,ಮುಸ್ಲಿಯಾರ್ ಇತ್ಯಾದಿ ಗಳು ಲವಲವಿಕೆಯಿಂದ ಕೂಡಿದ್ದರೂ ಬರಹಗಾರ ಯಾವುದೇ

ಭಾವನಾತ್ಮಕತೆಯಿಂದ


ತನ್ನನ್ನು ದೂರ ಇಟ್ಟಿದ್ದಾನೆ.ಪುಸ್ತಕ ಕೆಳಗಿಟ್ಟಾಗ ಮುಗಿಯಿತೇ ಎಂದನಿಸುತ್ತದೆ.ಇವರ ಇನ್ನೊಂದು ಪ್ರಸಿದ್ಧ ಕೃತಿ ಮರುನ್ನು


ಕನ್ನಡದಲ್ಲಿ ಔಷಧಿ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ.


                                   
                                   

                                                       
ಇನ್ನೊಂದು  ತಮಿಳು ಬರಹಾಗಾರ ತ್ಹೊಪ್ಪಿಲ್ ಮೊಹಮ್ಮದ್ ಮೀರಾನ್ ಅವರ ಕಾದಂಬರಿ   ಚೈವು ನಾರ್ಕಾಲಿ ಯ ಇಂಗ್ಲಿಷ್


ಅನುವಾದ

ದಿ ರೆಕ್ಲೈನಿಂಗ್ ಚೇರ್.ಕಾದಂಬರಿ ಮಳೆಯ ವರ್ಣನೆಯೊಂದಿಗೆ ಆರಂಭವಾಗುತ್ತದೆ.ಇಡೀ ಕಾದಂಬರಿ ಮತ್ತು  ಅದರ ಅನುವಾದ

ಹಿತವಾದ


ತಂಗಾಳಿಯಂತೆ ಇದೆ.ಕತೆ ಕನ್ಯಾಕುಮಾರಿ ನಾಗರಕೊಯಿಲ್ ಸರಹದ್ದಿನ ತಿರುವಾ೦ಕೂರ ಗೆ ಸೇರಿದ ಪ್ರದೇಶ.ಮಲಯಾಳ

,ತಮಿಳು


ಗಳ ಮಿಶ್ರಣ.ಕಥಾನಾಯಕ ಮುಸ್ತಾಫಾ ಕಣ್ಣು ದೊಡ್ಡ ತರವಾಡಿನ ಕೊನೆಯ ದುರಂತ ನಾಯಕ.ಆಲಸಿ,ಕಾಮುಕ.ಅವನ ಪತ್ನಿ



ಮರಿಯಂ ಅವನ ಹಿಂಸೆ ಮತ್ತು  ಅವಗಣನೆಗೆ ಗುರಿಯಾಗ್ತ್ತಾಳೆ.ಅವಳ ಒಂದು ಮಾತು ಹೀಗಿದೆ ‘ನಾವು ಹೆಂಗಸರು


ಎಂದಾದರೂ


ಬದುಕಿದ್ದೆವೆಯೇ ?ನಾವು ಇಂಚು ಇಂಚಾಗಿ ಸಾಯುವುದು ಮಾತ್ರ.ದೇವರು ನಮ್ಮನ್ನು ಗಂಡಸರ ಕೈಯ್ಯಲ್ಲಿ ಸಾಯಲೆಂದೇ


ಹುಟ್ಟಿಸಿದ್ದಾನೆ.':


ಈ ಕಾದಂಬರಿಯಲ್ಲಿ ಮುಸ್ತಫಾನ ಭವ್ಯ ಮನೆ ಸೌದಾ ಮಂಜಿಲ್ ನ ಒಂದೊಂದು ವಸ್ತುವೂ ಒಂದು ರೋಚಕ ಕತೆ ಹೇಳುತ್ತದೆ.


ಬೆಳ್ಳಿಯ ಖಡ್ಗ ,ಶ್ರೀಗಂಧದ ಕಪಾಟು, ಕುಳಿತುಕೊಳ್ಳುವ ಕುರ್ಚಿ ಮತ್ತು ಸೌದಾ ಮಂಜಿಲ್ ,ಅದರ  ಕೊಳ ಎಲ್ಲವಕ್ಕೂ


ಇತಹಾಸ ರೂಪದಲ್ಲಿ ಕತೆ ಹಣೆದಿದ್ದಾರೆ ಮೀರಾನ್.


                                           

ಎರಡು ಕಾದಂಬರಿಗಳ  ಕತೆ ನಡೆದ  ಊರು ಬೇರೆ ಬೇರೆಯಾದರೂ ಎರಡರಲ್ಲೂ ಬಹಳ ಸಾಮ್ಯತೆ ಇದೆ.ಎರಡೂ ದೊಡ್ಡ


ಮನೆತನದ ಅವನತಿಯ ಕತೆಗಳು.ಜಿನ್(ದೆವ್ವ),ಮಂತ್ರವಾದಿಗಳು,ಅಡಿಗೆ ಮನೆ ವರ್ಣನೆ ಇತ್ಯಾದಿ ಎರಡರಲ್ಲೂ ಸಾಕಷ್ಟಿವೆ.


ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಈ  ಅನುವಾದಗಳ ಪ್ರಕಾಶಕರು ಕೇಂದ್ರ ಸಾಹಿತ್ಯ ಅಕಾಡೆಮಿ.

ಬುಧವಾರ, ಜುಲೈ 24, 2013

ರೋಗಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಗಮನಿಸ ಬೇಕಾದ ಕೆಲವು ಅಂಶಗಳು

ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ರೋಗಿಯನ್ನು  ಆಸ್ಪತ್ರೆಗೆ  ಸಾಗಿಸುವಾಗ ಕೆಲವು ಅಂಶಗಳನ್ನು ಗಮನಿಸ ಬೇಕು.


ರೋಗಿಯು ಪ್ರಜ್ಞಾ ಶೂನ್ಯ ಅಥವಾ ಅರೆ ಪ್ರಜ್ಞೆಯಲ್ಲಿ ಇದ್ದರೆ ಮಲಗಿಸಿಯೇ ಸಾಗಿಸಿ.ಕುಳ್ಳಿರಿಸ ಬೇಡಿ.ಇದರಿಂದ ಮೆದುಳಿಗೆ

ರಕ್ತ ಸಂಚಾರ ಉತ್ತಮವಾಗಿರುವುದಲ್ಲದೆ ಬಾಯಿಯಿಂದ ದ್ರವ  ಶ್ವಾಸ ಕೋಶಕ್ಕೆ ಹೋಗುವುದು ತಪ್ಪುತ್ತದೆ.ನಿಂತಿರುವಾಗ

ತಲೆ ತಿರುಗಿ ಬಿದ್ದವರನ್ನು ಕುಳ್ಳಿರಿಸಲು ಯತ್ನಿಸ ಬಾರದು. ಇದರಿಂದ ಮೆದುಳಿನ ರಕ್ತದ ಓಟ ಕಡಿಮೆಯಾಗಿ ಇನ್ನಸ್ಟು

ತೊಂದರೆಯಾಗುವುದು. ಅಲ್ಲದೆ ವಾಂತಿ ಭೇದಿ ಯಿಂದಲೋ ಇನ್ನ್ನಿತರ ಕಾರಣ ಗಳಿಂದ  ರಕ್ತದ ಒತ್ತಡ ಕಡಿಮೆಯಾಗಿ

ಇರುವಾಗ ತಲೆ  ಕೆಳಗೆ ಇದ್ದರೆ ಗುರುತ್ವಾಕರ್ಷಣೆಯಿಂದ ರಕ್ತ ಮೆದುಳಿಗೆ ಹೋಗುವುದು.

ಪ್ರಜ್ಞಾ ಶೂನ್ಯ ನಾದ ವ್ಯಕ್ತಿಗೆ ಬಾಯಲ್ಲಿ ಏನನ್ನೂ ಕೊಡಲು ಹೋಗ ಬಾರದು.ಕೊಟ್ಟರೆ ಅದು ಶ್ವಾಸ ಕೋಶಕ್ಕೆ ಹೋಗಿ

ಶ್ವಾಸೋಸ್ವಾಸಕ್ಕೆ ತಡೆ ಉಂಟುಮಾಡುವುದಲ್ಲದೆ .ನ್ಯುಮೋನಿಯ ಕಾಯಿಲೆ ಬರುವುದು.

ರೋಗಿಗೆ ಅಪಸ್ಮಾರ ಬರುತ್ತಿದಿದ್ದರೆ ಒಂದು ಪಾರ್ಶ್ವಕ್ಕೆ ತಿರುಗಿಸಿ  ಮಲಗಿಸಿರಿ.ಕಬ್ಬಿಣದ ವಸ್ತುಗಳನ್ನ್ನು ಕೈಯಲ್ಲಿ ಇಡಲು

ಪ್ರಯತ್ನಿಸ ಬಾರದು.ಇದು ದೊಡ್ಡ ಅವೈಜಾನಿಕ  ನಂಬಿಕೆ  .ಫಿಟ್ಸ್ ಮಾರುವಾಗ ಕಬ್ಬಿಣದ ತುಂಡು ತಾಗಿ ಗಾಯ ಯಾಗುವ ಸಂಭವ

ಇದೆ. ಪ್ರಜ್ಞೆಯಿಲ್ಲದ ವ್ಯಕ್ತಿ ವಾಂತಿ ಮಾಡಿದರೂ ಒಂದು ಪಾರ್ಶ್ವಕ್ಕೆ ತಿರುಗಿಸಿ ಮಲಗಿಸ ಬೇಕು.ಇದರಿಂದ ವಾಂತಿ ಶ್ವಾಸ

ನಾಳಕ್ಕೆ  ಹೋಗುವುದು ತಪ್ಪುತ್ತದೆ. ಸ್ಟ್ರೋಕ್ ಆದ ರೋಗಿಯು ನೀರು ಕುಡಿಸುವಾಗ ಕೆಮ್ಮುತ್ತಿದ್ದರೆ ಬಾಯಲ್ಲಿ ಏನನ್ನ್ನೂ ಕೊಡ

ಬಾರದು .


ದಮ್ಮು ಇರುವ ಹೃದಯ ರೋಗಿಗಳು ಮತ್ತ್ತು ಅಸ್ಥಮಾ ರೋಗಿಗಳನ್ನು ಕುಳ್ಳಿರಿಸಿ ಆಸ್ಪತ್ರೆಗೆ ಒಯ್ಯ ಬೇಕು.ಮಲಗಿಸಿದರೆ

ದಮ್ಮು ಜಾಸ್ತಿ ಆಗುವುದು.

ಸುಟ್ಟಗಾಯ ಆದ  ಜಾಗಕ್ಕೆ ತಣ್ಣೀರು ಹಾಕುತ್ತಿರ ಬೇಕು.ಇದರಿಂದ ಗಾಯದ ತೀವ್ರತೆ ಕಡಿಮೆ ಆಗುವುದು.

ಮೂಳೆ ಮುರಿತ ಇದ್ದರೆ  ಆ ಭಾಗವನ್ನು ಚಲನೆ ಕಮ್ಮಿಯಿರುವಂತೆ ನೋಡಿ ಕೊಳ್ಳ ಬೇಕು.ಇದಕ್ಕೆ ಸಾಧ್ಯವಿದ್ದರೆ ಸ್ಲಿಂಗ್ ಅಥವಾ

ಸ್ಪ್ಲಿಂಟ್ ಉಪಯೋಗಿಸ ಬಹುದು.ಬೆನ್ನು ಮೂಳೆಗೆ ಏಟು ಆದವರನ್ನು ಅದಸ್ಟು ಕಡಿಮೆ ಚಲನೆಗೊಳಪದಿಸ ಬೇಕು.ಇದರಿಂದ

ಬೆನ್ನು ಹುರಿಗೆ ಅಪಾಯ ಕಡಿಮೆ ಆಗುವುದು.

ಸಾಗಿಸುವ ವಾಹನದಲ್ಲಿ ಗಾಳಿ ಚೆನ್ನಾಗಿ ಓಡುತ್ತಿರ ಬೇಕು.

ವಾಂತಿ ಭೇದಿಯಿಂದ ಬಳಲುತ್ತಿರುವ ರೋಗಿಗಳಿಗೆ ಎಚ್ಚರ ಇದ್ದರೆ ನೀರು ಕುಡಿಸುತ್ತಿರ ಬಹುದು 

ಮಂಗಳವಾರ, ಜುಲೈ 23, 2013

ವೈದ್ಯರಿಂದ ರಚಿತವಾದ ಎರಡು ಒಳ್ಳೆಯ ಕಾದಂಬರಿಗಳು

ಕೆಲವು ತಿಗಳುಗಳ ಹಿಂದೆ ಎರಡು ಒಳ್ಳೆಯ ಪುಸ್ತಕಗಳನ್ನು ಓದಿದ್ದೆ.ಇಂಗ್ಲಿಷ್ ಭಾಷೆಯ ಕಾದಂಬರಿಗಳು.ಬರೆದವರು ವೈದ್ಯರು.

ಒಂದು ಕಾವೇರಿ ನಂಬೀಶನ್ ಅವರು ಬರೆದ ಕಾದಂಬರಿ ದಿ  ಹಿಲ್ಸ್ ಆಫ್ ಅಂಗ್ಹೇರಿ.ನಲ್ಲಿ ಎಂಬ ಬಯಲು ಸೀಮೆಯ ಹುಡುಗಿ ,ಶಾಲಾ ಮಾಸ್ತರರ ಮಗಳು ವೈದ್ಯೆಯಾಗಿ ತನ್ನ ಹಳ್ಳಿಯಲ್ಲಿ ಸೇವೆ ಸಲ್ಲಿಸುವ ಕನಸುಗಳೊಡನೆ ಮದ್ರಾಸ್ ಮೆಡಿಕಲ್ ಕಾಲೇಜ್ ನಲ್ಲಿ ಕಲಿತು ಮುಂದೆ ಇಂಗ್ಲೆಂಡ್ ನಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿ ತನ್ನ ಹಳ್ಳಿಯಲ್ಲಿ ಕೆಲಸ ಮಾಡುವ ಅವಕಾಶ ಸಿಗದಿದ್ದರೂ ಉತ್ತರ ಭಾರತದ ಒಂದು ಮೂಲೆಯಲ್ಲಿ ಸೇವಾ ಸಂಘಟನೆಯ ಆಸ್ಪತ್ರೆಯಲ್ಲಿ ,ಆ ಮೇಲೆ ಬೇರೆ ಬೇರೆ ಊರುಗಳಲ್ಲಿ ವೈದಯಕೀಯ ನೀತಿಗಳಿಗೆ ಭದ್ಧವಾಗಿ ಕೆಲಸ ಮಾಡುವ ಕತೆ.ವೈದ್ಯಕೀಯ ಪ್ರಪಂಚದ ಕೌತಕಗಳು,ಸಮಸ್ಯೆಗಳು,ಮೋಸ ವಂಚನೆಗಳು ಅನುಭವ ಉಳ್ಳ ವೈದ್ಯೆಯ ಲೇಖನಿಯಲ್ಲಿ ಸೊಗಸಾಗಿ ಮೂಡಿ ಬಂದಿದೆ. ಸ್ವಲ್ಪ ಮಟ್ಟಿಗೆ ಆತ್ಮ ಕಥಾತ್ಮಕ.
                                    hills of angheri
                               
                             kavri
                                 ಕಾವೇರಿ ನಂಬೀಶನ್
ಕಾವೇರಿ ನಂಬೀಶನ್ ಕರ್ನಾಟಕದವರು.ಕೊಡಗಿನ ಮಾಜಿ ಮುಖ್ಯ ಮಂತ್ರಿ ,ಕೇಂದ್ರದ ರೈಲ್ವೆ ಸಚಿವ ,ರಾಜ್ಯಪಾಲರಾಗಿದ್ದ ಶ್ರೀ ಸಿ ಎಂ ಪೂಣಚ್ಚ ಅವರ ಮಗಳು ,ಶಸ್ತ್ರ ವೈದ್ಯ ತಜ್ಞೆ .
ಕಾದಂಬರಿಯ ನಾಯಕಿ ವೈದ್ಯ ವಿದ್ಯಾರ್ಥಿನಿಯಾಗಿದ್ದಾಗ ಅವಳ ಗುರುಗಳು ಹೇಳುವ ಕಿವಿ ಮಾತು ಹೀಗಿದೆ.'’ ಸಾಯುತ್ತಿರುವ ರೋಗಿಯ ಬಳಿ ಸೇವೆ ಸಲ್ಲಿಸುವುದು ಒಂದು ಸೌಭಾಗ್ಯ.ನಾವು ವಿ. ಐ ಪಿ ಗಳನ್ನು  ,ರಾಜವಂಶಜರನ್ನು ಸೇವಿಸಲು ಕಾಯುತ್ತಿರುತ್ತೇವೆ ,ಆದರೆ ಸಾವಿನ ದವಡೆಯಲ್ಲಿ ಇರುವ ರೋಗಿಯೇ ನಮಗೆ ರಾಜ.’
ಇನ್ನೊಂದು ಪಾರಾ ಹೀಗಿದೆ.
‘ಅವಳು   (ಡಾ ನಲ್ಲಿ ) ಬೋರಯ್ಯ್ಯನ ಸ್ತಬ್ಧವಾದ ಹೃದಯವನ್ನು ಖಚಿತ ಪಡಿಸಿ ಸ್ತೇಥೋಸ್ಕೋಪ್ ಕಿವಿಯಿಂದ ತೆಗೆದು ಬಂಧುಗಳಲ್ಲಿ ಹೇಳ ತೊಡಗಿದಳು .ಅದು ವರೆಗೆ ಅವಳ ಪ್ರತಿಯೊಂದು ಶಬ್ದಕ್ಕೂ ಜೋತು ಬೀಳುತ್ತಿದ್ದವರು ಈಗ ಅವಳನ್ನು ತಿರಸ್ಕಾರದಲ್ಲಿ ನೋಡಲಾರಂಬಿಸಿದರು .ಈ ತನಕ ಬಹಳ ಮುಖ್ಯವೆನಿಸಿದ್ದ ಅವಳ ಕೈಗಳು ಮರದ ಕೊರಡುಗಳಂತೆ ಇಕ್ಕಡೆ ಜೋತು ಬಿದ್ದಿದ್ದವು.ಔಷಧಿ ಟ್ರಾಲಿ, ಐ ವಿ ಲೈನ್ ,ಟ್ಯೂಬುಗಳು  ಕ್ಯಾತಿಟರ್ಗಳು ,ಇಂಜೆಕ್ಷನ್ಗಳು ,ಬಿ ಪಿ ಕಫ್ ಗಳು ಎಲ್ಲಾ ನಿರುಪರುಕ್ತ ವಾಗಿ ತೋರಿದವು.ಡಾಕ್ಟರ್ ಎದುರಿಸ ಬೇಕಾದ ಕಷ್ಟಗಳಲ್ಲಿ ಇದು ಅತೀ ಕಠಿಣವಾದುದು’

ಇನ್ನೊಂದು ಉತ್ತಮ ಕಾದಂಬರಿ  ಡಾ ಅಬ್ರಹಾಂ ವೆರ್ಗ್ಹಿಸ್ ಅವರ  ಕಟಿಂಗ್ ಫಾರ್ ಸ್ಟೋನ್ .ಇದು ವೈದ್ಯ ಜಗತ್ತಿನ ಸವಾಲು ,ಸೋಲು ಗೆಲುವು , ಮನುಷ್ಯ ಪ್ರೀತಿ ಪ್ರೇಮಗಳ  ಸುಂದರ ಚಿತ್ರಣ.ಆಫ್ರಿಕಾ ಖಂಡದ ಇತಿಯೋಪಿಯಾ ನಾಡಿನ ರಾಜಧಾನಿ ಅಡಿಸ್ ಅಬಾಬದ ಕಾಲ್ಪನಿಕ ಆಸ್ಪತ್ರೆ ‘ಮಿಸ್ಸಿಂಗ್” ಕಾದಂಬರಿಯ ಕಾರ್ಯ ಕೇಂದ್ರ. ಮಾರಿಯೋನ್ ಮತ್ತು ಶಿವ ಸ್ಟೋನ್ ಭಾರತೀಯ ನನ್ ಸಿಸ್ಟರ್ ಮತ್ತು ಬ್ರಿಟಿಶ್ ಸರ್ಜನ್ ಅವರ  ಗುಪ್ತ ಪ್ರಣಯದಲ್ಲಿ ಜನಿಸಿದ ಅವಳಿ ಜವಳಿಗಳು .ಇವರ ತಾಯಿ ಹೆರಿಗೆ ಸಮಯದಲ್ಲಿ ಸಾವನ್ನಪ್ಪಿದರೆ ತಂದೆ ಹೇಳದೇ ಊರು ಬಿಟ್ಟು ಹೋಗಿರುತ್ತಾರೆ.ಭಾರತೀಯ ಮೂಲದ ವೈದ್ಯೆ ಹೇಮಾ ಇವರಿಗೆ ತಾಯಾಗುತ್ತಾಳೆ .ಅವಳಿ ಜವಳಿ ಗಳಾದರೂ ಇಬ್ಬರ ನಡೆ ನುಡಿ ಅಭಿರುಚಿಗಳಲ್ಲಿ ಅಜ ಗಜಾಂತರ.ಮುಂದೆ ಅಮೇರಿಕಾ ಕ್ಕೂ ಹರಡುವ ಕತೆಯಲ್ಲಿ ಇತಿಯೋಪಿಯಾ ದ ಅನಿಶ್ಚಿತ ರಾಜಕೀಯ ಮತ್ತು ಜನಜೀವನದ ಚಿತ್ರಣ ಕೊಟ್ಟಿದ್ದಾರೆ.ಕೊನೆ ವರೆಗೂ ಕೌತುಕ ಕಾಯ್ದು ಕೊಳ್ಳುವ ಕೃತಿ.

                                                        cutting for stone

ಡಾ ಅಬ್ರಹಾಂ ವೆರ್ಗ್ಹಿಸ್ ಭಾರತೀಯ ಮೂಲದ ವೈದ್ಯ ,ಈಗ ಅಮೆರಿಕಾದಲ್ಲಿ ಪಿಸಿಶಿಯನ್ ಮತ್ತು ಬರಹಗಾರರಾಗಿ ಬಹಳ ಹೆಸರು
ಗಳಿಸಿದ್ದಾರೆ. ಅನಿವಾಸಿ  ಭಾರತೀಯ ಶಿಕ್ಷಕ ತಂದೆ ತಾಯಿಗಳ ಪುತ್ರನಾದ ಇವರ ಜನನ ಇಥಿಯೋಪಿಯಾ ದಲ್ಲಿ ಆಯಿತು.ಮುಂದೆ ಅಮೇರಿಕಾ ನಾಡಿಗೆ ವಲಸೆ ಹೋದ ಇವರು ಎಂ ಬಿ ಬಿ ಎಸ್ ಮಾಡಿದ್ದು ಮದ್ರಾಸ್ ಮೆಡಿಕಲ್ ಕಾಲೇಜ್ ನಲ್ಲಿ .ಪ್ರಸಿದ್ದ ವೈದ್ಯ ಮತ್ತು ಲೇಖಕ .

ಶಿಕ್ಷಕ ಡಾ ಕೆ ವಿ ತಿರುವೆಂಗಡಂ ಇವರ  ಆದರ್ಶ .ರೋಗಿಗಳ ರೋಗ ವಿವರ ತೆಗೆದು ಕೊಳ್ಳುವುದು ಮತ್ತು ಪರೀಕ್ಷೆಗೆ ಹೆಚ್ಚು ಒತ್ತು

ನೀಡುವ ಪರಂಪರೆ. ಕ್ಷ ರೇ .ರಕ್ತ ಪರೀಕ್ಷೆ , ಸ್ಕ್ಯಾನ್ ಗಳು ಆ ಮೇಲೆ ಆವಶ್ಯವಿದ್ದರೆ ಮಾತ್ರ .
                         
                         
                             abraham verghese
                             ಡಾ ಅಬ್ರಹಾಂ ವರ್ಗ್ಹಿಸ್
ಇವರ ಇನ್ನೆರಡು ಕೃತಿಗಳಾದ ದಿ ಟೆನಿಸ್ ಪಾರ್ಟ್ನರ್ ಮತ್ತು ಮೈ ಓನ್ ಕಂಟ್ರಿ ಗಳೂ ಓದುಗರ ಮನ ಗೆದ್ದಿವೆ.

ಶುಕ್ರವಾರ, ಜುಲೈ 19, 2013

ಪ್ರಾಸ್ಟೇಟ್ ಗ್ರಂಥಿಯ ಸಾಮಾನ್ಯ ಊತ(Benign hyperplasia of Protate)

                                                    prostarte
ಗಂಡಸರಲ್ಲಿ ಪ್ರಾಸ್ಟೇಟ್ ಎಂಬ ಗ್ರಂಥಿಯಿದೆ.ಮುತ್ರಾಶಯದ ಹಿಂದೆ ಮತ್ತು ಗುದ ನಾಳದ ಮುಂದೆ ಇರುವ ಈ ಗ್ರಂಥಿಯು ಮೂತ್ರ

ನಾಳವನ್ನು ಸುತ್ತುವರಿಯುತ್ತದೆ.ಕ್ಷಾರಯುಕ್ತವಾದ ಇದರ ಸ್ರಾವ  ವೀರ್ಯಾಣುಗಳ ರಕ್ಷಣೆ ಮಾಡುತ್ತದೆ.ಮಧ್ಯ ವಯಸ್ಸು ಕಳೆದಂತೆ ಈ

ಗ್ರಂಥಿಯು ಉಬ್ಬಿಕೊಳ್ಳುತ್ತದೆ.ಇದನ್ನೇ ಪ್ರಾಸ್ಟೇಟ್ ನ ಸಾಮಾನ್ಯ ಊತ ಎಂದು ಕರೆಯುತ್ತಾರೆ.

ಪ್ರಾಸ್ಟೇಟ್ ಊತದ ಲಕ್ಷಣಗಳು .
೧.ಆಗಾಗ್ಗೆ ಮೂತ್ರ ವಿಸರ್ಜನೆ ಆಗುವುದು.ಮೂತ್ರ  ಹಿಡಿದಿಟ್ಟುಕೊಳ್ಳಲು ಆಗದಿರುವುದು.
೨ ಮೂತ್ರ ಕಟ್ಟಿ ಕಟ್ಟಿ ಹೋಗುವುದು.

೩ ಮೂತ್ರ ವಿಸರ್ಜನೆಯ ನಂತರವೂ ಮೂತ್ರಾಶಯದಲ್ಲಿ  ತುಂಬಾ ಮೂತ್ರ ಉಳಿಯುವುದು.

೪ ಆಗಾಗ್ಗೆ  ಮೂತ್ರದ ಸೋಂಕು ಆಗಿ ಉರಿ ಮೂತ್ರ ,ಅದರಿಂದ ಜ್ವರ ಬರುವುದು.

೫.  ಕೆಲವು ಬಾರಿ ಏಕಾ ಏಕಿ ಮೂತ್ರ ಬಂದ್ ಆಗಿ ಕೆಳ ಹೊಟ್ಟೆ ನೋವಿನಿಂದ ಊದುವುದು

  ಮಧ್ಯ ವಯಸ್ಸಿನ ಗಂಡಸು ಮೇಲಿನ  ಲಕ್ಷಣಗಳೊಡನೆ ಬಂದರೆ ವೈದ್ಯರು ಪ್ರಾಸ್ಟೇಟ್ ನ ಊತ ವನ್ನು ಶಂಕಿಸುವರು.

ಗುದ ನಾಳದಲ್ಲಿ ಬೆರಳಿಟ್ಟು ಪರೀಕ್ಷಿಸಿದಾಗ   ಪ್ರಾಸ್ಟೇಟ್  ಉಬ್ಬಿದುದನ್ನು ಕಂಡು ಹಿಡಿಯ ಬಲ್ಲುದಲ್ಲದೆ ,ಅನುಭವದಿಂದ  ಪ್ರಾಸ್ಟೇಟ್ ನ

ಗಂಭೀರ ಕಾಯಿಲೆ ಕ್ಯಾನ್ಸರ್ ನ್ನೂ ಶಂಕಿಸ ಬಹುದು.

ಅಲ್ಟ್ರಾ ಸೌಂಡ್ ಸ್ಕ್ಯಾನ್ ಮೂಲಕ ಪ್ರಾಸ್ಟೇಟ್ ನ ಗಾತ್ರ ಹೆಚ್ಚು ಕಡಿಮೆ ನಿಖರವಾಗಿ ಗೊತ್ತು ಮಾಡ ಬಹುದು.ಮೂತ್ರ ವಿಸರ್ಜನೆಯ

ನಂತರ  ಮುತ್ರಾಶಯದಲ್ಲಿ  ಉಳಿಯುವ ಮೂತ್ರದ ಪ್ರಮಾಣವನ್ನೂ ಸ್ಕ್ಯಾನ್ ಮೂಲಕ ನಿರ್ದರಿಸುತ್ತಾರೆ. ಈ ಅಳತೆ ೫೦ ಎಂ.ಎಲ್

ಗಿಂತ  ಜಾಸ್ತಿ ಇದ್ದರೆ ಮೂತ್ರ ವಿಸರ್ಜನೆಗೆ ಪ್ರಾಸ್ಟೇಟ್ ಊತದಿಂದ  ತಡೆಯಾಗುತ್ತಿದೆ ಎಂದು ಅರ್ಥ .

ಚಿಕಿತ್ಸೆ

ಮೂತ್ರ ವಿಸರ್ಜನೆ ಸಂಪೂರ್ಣ ಬ್ಲಾಕ್ ಆದರೆ ತತ್ಕಾಲಕ್ಕೆ ಕೃತಕ ನಾಳ (ಕ್ಯಾತಿಟರ್ ) ಹಾಕುವರು.

                 ಪ್ರಾಸ್ಟೇಟ್ ಊತವನ್ನು ಕಮ್ಮಿ ಮಾಡುವ ಮಾತ್ರೆಗಳು ಲಭ್ಯವಿವೆ.ಇವುಗಳಲ್ಲಿ ಆಲ್ಫಾ ಎಡ್ರಿನರ್ಜಿಕ್ ಬ್ಲೋಕೆರ್ಸ್ ಉದಾ

ಪ್ರಜೊಸಿನ್ ,ತಮ್ಸುಲೋಸಿನ್ ಇತ್ಯಾದಿ .ಪ್ರಾಸ್ಟೇಟ್ ಗ್ರಂಥಿಯ  ಊತಕ್ಕೆ ಗಂಡು ಹಾರ್ಮೋನ್ ಗಳೂ ಕಾರಣ ವಾದುದರಿಂದ

ಈ ಹಾರ್ಮೋನ್ ಗಳನ್ನು ಕಮ್ಮಿ ಮಾಡುವ ಔಷಧಿಗಳೂ ಬಳಕೆಯಲ್ಲಿ ಇವೆ.

ಔಷಧಿಯಿಂದ  ಕಾಯಿಲೆ ಹತೋಟಿಗೆ ಬರದಿದ್ದರೆ  ಶಸ್ತ್ರಚಿಕಿತ್ಸೆ ಮಾಡುತ್ತಾರೆ .ಇದರಲ್ಲಿ ಮೂತ್ರ ನಾಳದ ಮೂಲಕ ಉಪಕರಣ ಹಾಯಿಸಿ

ಮೂತ್ರ ನಾಳಕ್ಕೆ  ಉಬ್ಬಿರುವ ಪ್ರಾಸ್ಟೇಟ್ ನ ಅಂಶವನ್ನು ಕತ್ತರಿಸುವ  ಟ್ರಾನ್ಸ್  ಯುರೆತ್ರಿಕ್ ಪ್ರಾಸ್ಟೇಟಿಕ್  ರಿಸೆಕ್ಕ್ಶನ್ (ಟಿ.ಯು.ಆರ್.ಪಿ)

ಜನಪ್ರಿಯ. ಇತ್ತೀಚಿಗೆ ಪ್ರಾಸ್ಟೇಟ್ ಕತ್ತರಿಸಲು ಲೇಸರ್ ನ್ನೂ ಬಳಸುತ್ತಾರೆ. ಇಡೀ ಪ್ರಾಸ್ಟೇಟ್ ನ್ನು ತೆಗೆಯುವ ಶಸ್ತ್ರ ಚಿಕಿತ್ಸೆಯೂ ಇದೆ.

ಸೋಮವಾರ, ಜುಲೈ 15, 2013

ಅಸ್ತಮಾ ಕಾಯಿಲೆ


ಅಸ್ಥಮಾ ಕಾಯಿಲೆ ಅನುವಂಷಿಕ ಹಾಗೂ ಅಲರ್ಜಿ ಯಿಂದ ಬರುತ್ತದೆ.ಅಲರ್ಜಿ ಉಂಟು ಮಾಡುವ ವಸ್ತುಗಳಿಗೆ ಅಲ್ಲರ್ಜನ್

ಎಂದು ಕರೆಯುತ್ತಾರೆ.ಇಂತಹ ವಸ್ತುಗಳ ಸಂಖ್ಯೆ ಈಗ ಹೆಚ್ಚುತ್ತಿದೆ.ವಾಯು ಕಲ್ಮಶಗಳು ,ಹೂವಿನ ಪರಾಗ ಇತ್ಯಾದಿ ವಸ್ತುಗಳು ಅಲರ್ಜಿ ಕಾರಕಗಳು


ಅಸ್ಥಮಾ ಕಾಯಿಲೆಯಲ್ಲಿ ಶ್ವಾಸ ನಾಳಗಳ ಒಳಪದರ ಉಬ್ಬಿಕೊಂಡು  ನಾಳದ ರಂದ್ರ ಸಂಕುಚಿತ ಗೊಳ್ಳುತ್ತದೆ .ಆದುದರಿಂದ

ಶ್ವಾಸ ಕೋಶದಿಂದ ಉಸಿರು ಹೊರ ಹೋಗುವಾಗ ತಡೆ ಉಂಟಾಗಿ ದಮ್ಮು ಕಟ್ಟಿದ ಅನುಭವ  ಮತ್ತು ಸುಯಿ ಸುಯಿ ಎಂಬ

ಶಬ್ದ ಉಂಟಾಗುತ್ತದೆ.ಸಣ್ಣ ನಳಿಗೆ ಯೋಳಗಿಂದ  ಜೋರಾಗಿ ಗಾಳಿ ಊದಿ ಶಬ್ದ ಬರಿಸುವ ಆಟ ಮಕ್ಕಳು ಆಡುತ್ತಾರಲ್ಲವೇ

ಅಂತೆಯೇ.
                                                                 
                                   ನಾರ್ಮಲ್              ಆಸ್ತಮಾ ರೋಗಿ  ಶ್ವಾಸ ನಾಳ      
                                                              




 ಇತ್ತೀಚಿಗೆ ಅಸ್ಥಮಾ ರೋಗ ಹೆಚ್ಚಾಗುತ್ತಿದೆ. ವಾತಾವರಣ ,ಆಹಾರ  ಪ್ರದೂಷಣ ಇದಕ್ಕೆ ಕಾರಣ ಇರಬಹುದು.ಮಕ್ಕಳು  ನಮ್ಮ

ಹಾಸಿಗೆಯಲ್ಲಿ ಧೂಳು ಕ್ರಿಮಿ (dust mite) ಎಂಬ ಅಲರ್ಜಿ ಕಾರಕ  ಕುಳಿತು ಕೊಳ್ಳುತ್ತದೆ.ಹಿಂದೆ ಮಲಗಿದ ಚಾಪೆ  ಮಡಿಚಿ ಇಡುತ್ತಿದ್ದರು .ಈಗ

ಕಡಿಮೆ.ಆದ್ದುದರಿಂದ ಈ ಕ್ರಿಮಿಗಳು ಹಾಸಿಗೆಯಲ್ಲಿ ಹೆಚ್ಚು ಹೆಚ್ಹು ತಳವೂರಿ ನಾವು ಮಲಗುವಾಗ ತಮ್ಮ ಪ್ರತಿಭೆ ತೋರಿಸುತ್ತವೆ.

ಇದಲ್ಲದೆ ಸೊಳ್ಳೆ ಓಡಿಸಲೆಂದು ಫ್ಯಾನ್ ಹಾಕಿ ಮಲಗುತ್ತ್ತೇವೆ. ಇದರಿಂದ ಗಾಳಿ ಯಲ್ಲಿ  ಈ ಕ್ರಿಮಿಗಳು ಸೇರಿಕೊಳ್ಳುವವು  ಅಲ್ಲದೆ ಫ್ಯಾನ್ ಗಾಳಿಯಿಂದ ಶ್ವಾಸ ನಾಳದ ನೈಸರ್ಗಿಕ

ಆರ್ದ್ರತೆಯನ್ನು ಕಡಿಮೆ ಆಗುವುದು .ಇದೂ ಶ್ವಾಸ ನಾಳದ ಉತ್ಪ್ರೇಕ್ಷಿತ ಪ್ರತಿಕ್ರಿಯೆ ಗೆ (Hyper responsiveness) ಕಾರಣ ಇರ

ಬಹುದು.


ಅಸ್ತಮಾ ರೋಗಿಗೆ ಉಸಿರಾಟ ಕಷ್ಟವಾಗುವುದು .ಅಲ್ಲದೆ  ಶಬ್ದದಿಂದ ಕೂಡಿರುವುದು.


ಚಿಕತ್ಸೆ

ಇತ್ತೀಚೆಗೆ ಅಸ್ಥಮಾ ಕಾಯಿಲೆಗೆ  ಒಳ್ಳೆಯ ಔಷಧಿಗಳು ಬಂದಿವೆ.ಶ್ವಾಸನಾಳಗಳನ್ನು ವಿಕಸಿಸಿಸುವಂತಹ ಔಷಧಿಗಳಿಗೆ

ಇಂಗ್ಲಿಷ್ ನಲ್ಲಿ ಬ್ರೊಂಕೋ ಡಯ ಲೇಟರ್   ಎನ್ನುತ್ತಾರೆ .ಉದಾ ; ಸಾಲ್ಬು ಟಮೋಲ್, ಟರ್ಬುಟಲಿನ್ .ಇವು ಗುಳಿಗೆ ,ಸೇದುವ

ಮಾತ್ರೆ ,ಮತ್ತು ಸೇದುವ ಗಾಳಿ (ಇನ್ಹೆಲ ರ್ ) ರೂಪದಲ್ಲಿ ಬರುತ್ತವೆ.ಇದರಲ್ಲಿ  ಸೇದುವ ಮಾರ್ಗ ಉತ್ತಮ. ಏಕೆಂದರೆ

ಈ ವಿಧಾನದಲ್ಲಿ ಔಷಧ ನೇರ ಶ್ವಾಸಕೋಶಕ್ಕೆ ಹೋಗಿ ಸಂಕುಚನ ಗೊಂಡ ನಾಳವನ್ನು ಕೂಡಲೇ ವಿಕಸನ ಗೊಳಿಸುವುದು.

ಮಾತ್ರೆಗಲಾದರೋ  ಹೊಟ್ಟೆಯಿಂದ ರಕ್ತಕ್ಕೆ ಸೇರಿ ನಿದಾನವಾಗಿ  ಶ್ವಾಸನಾಳಕ್ಕೆ ತಲುಪುವವು.ಅಲ್ಲದೆ ಈ ವಿಧಾನದಲ್ಲಿಔಷಧ  ಶರೀರದ ಎಲ್ಲಾ ಅಂಗಗಳಿಗೆ ಅನಾವಶ್ಯಕ ಹೋಗುವುದು.ಸೇದುವ ಮಾತ್ರೆ ಮತ್ತು ಇನ್ಹಲರ್ ನಲ್ಲಿ ಔಷಧಿ  ಮೈಕ್ರೋ

ಗ್ರಾಂ ಅಂದರೆ ಮಿಲಿಗ್ರಾಂ ನ ಸಾವಿರದ ಒಂದು ಭಾಗದಷ್ಟು ಇದ್ದರೆ ತಿನ್ನುವ ಮಾತ್ರೆಗಳಲ್ಲಿ ಮಿಲಿಗ್ರಾಂ ನಲ್ಲಿ ಇರುತ್ತವೆ,ಆದರಿಂದ
ತಿನ್ನುವ ಮಾತ್ರೆಗಳೇ ಹೆಚ್ಚು ಸ್ಟ್ರಾಂಗ್.ಅಡ್ಡ ಪರಿಣಾಮಗಳು ಸೇದುವ ರೂಪದಲ್ಲಿ ಕಡಿಮೆ.

ರೋಗಿಗೆ ತೀವ್ರ ಅಸ್ತಮಾ ಇದ್ದಾರೆ ನೆಬುಲೈಸರ್ ಎಂಬ ಯಂತ್ರದ ಮುಖಾಂತರ  ಔಷಧಿ ದ್ರಾವಣದ ಆವಿ ಕೊಡುವ ಪದ್ಧತಿಇದೆ.

ಶ್ವಾಸನಾಳದ ವಿಕಸಕ ಔಷಧಿಗಳೊಂದಿಗೆ ಅಲರ್ಜಿ ಚಟ ತೆಗೆಯಲು ಸ್ಟೀರಾಯ್ಡ್ ಗಳನ್ನೂ ಕೊಡುತ್ತಾರೆ.ಇವೂ ಮೇಲೆ ಹೇಳಿದ

ವಿವಿಧ  ರೂಪಗಲ್ಲಿ ಸಿಗುತ್ತವೆ.ಕೆಲವರು  ಸ್ಟೀರಾಯ್ಡ್ ಎಂದರೆ ಬೆಚ್ಚಿ  ಬೀ ಳುತ್ತಾರೆ. ಆದರೆ ಯಾವುದೇ ಔಷಧಿ ಹಿತ ಮಿತದಲ್ಲಿ

ಇದ್ದರೆ ತೊಂದರೆ ಇಲ್ಲ. ಆಸ್ತಮಾದ  ತೊಂದರೆಗಿಂತ ಚಿಕ್ಕ ಪುಟ್ಟ ಅಡ್ಡ ಪರಿಣಾಮ ಲೇಸು.

                                         
                                                          Inhaler(ಇನ್ಹೆಲರ್ )
                                                     
                                                        ಸೇದುವ ಮಾತ್ರೆ ಮತ್ತು ಉಪಕರಣ

                                                ನೆಬುಲೈಸರ್


ಔಷಧಿಗೆ ಹೆದರಿ ಅಸ್ತಮಾ ಕಾಯಿಲೆಗೆ ಸರಿ ಚಿಕಿತ್ಸೆ ಮಾಡದಿದ್ದರೆ  ಶರೀರದ ಅಂಗಾಂಗ ಗಳಿಗೆ  ಆಮ್ಲ ಜನಕ ಸರಿಯಾಗಿಸಿಗದೆ ಮೆದುಳು ಮತ್ತು ಶರೀರದ ಬೆಳವಣಿಗೆ ಕುಂಠಿತ ವಾಗುವುದು.
ಚಳಿ ಗಾಲದಲ್ಲಿ  ಆಸ್ತಮಾ ಭಾದೆ ಜಾಸ್ತಿ ಆಗುವುದು .ತಂಪು ಹವೆಯಲ್ಲಿ ವಾತಾವರಣದ  ನೀರಾವಿ ಸಾಂದ್ರಗೊಂಡು ಕೆಳಗೆ ಬರುವುದು .ತನ್ನೊಡನೆ ಅದು ಧೂಳು ,ಕಲ್ಮಶಗಳನ್ನೂ ಕೆಳಗೆ ಒಯ್ಯುವುದು .(ಇಂದ್ರನನ್ನು ಎಳೆದು ಕೊಂಡು ಬಂದ ತಕ್ಷಕ ನಂತೆ )ಇದುವೇ ನಾವು ಕರೆಯುವ ಮಂಜು .ಉಸಿರಿನ ಮೂಲಕ ಒಳಹೋಗಿ ಕಿತಾಪತಿ ಮಾಡುವುದು .ಇದನ್ನು ತಡೆಗಟ್ಟಲು ಮಾಸ್ಕ್ ಸ್ವಲ್ಪ ಉಪಯೋಗ ಆಗಬಹುದು ;ಟೋಪಿಯಲ್ಲ .ಚಳಿಗಾಲದಲ್ಲಿ ಶುಷ್ಕತೆಯಿಂದ ಶ್ವಾಶ ನಾಳದ ನೈಸರ್ಗಿಕ ,ಮತ್ತು ರಕ್ಷಣಾ ಆರ್ದ್ರತೆ ಕಮ್ಮಿ ಇರುವುದರಿಂದ  ವೈರಿಗಳಿಗೆ ನೇರ ಪ್ರವೇಶ ಸಿಗುವುದು 


ಬಾಲಂಗೋಚಿ .  

ಅಸ್ತಮಾ  ಎಲ್ಲಾ  ಶ್ವಾಸ ಕೋಶ ಸಂಬಂದಿ ಅಲ್ಲ .ಕೆಲವು ಹೃದಯ ಕಾಯಿಲೆಯಲ್ಲೂ ಅಸ್ತಮಾ ಬರುವುದು.

ಇನ್ಹಲರ್ ತಿನ್ನುವ ಮಾತ್ರೆಗಿಂತ ಸ್ಟ್ರಾಂಗ್ ಅಲ್ಲ.ಒಮ್ಮೆ  ಇನ್ಹೇಲರ್ ಉಪಯೋಗಿಸಿದರೆ ಯಾವಾಗಲೂ ಬೇಕಾಗುತ್ತದೆಯೇಮ್ಬುದು ತಪ್ಪು ಕಲ್ಪನೆ.

ಮೇಲಿನ ಚಿತ್ರಗಳ ಮೂಲಕ್ಕೆ ಅಭಾರಿ.ರೋಟ ಹೇಲರ್ ಚಿತ್ರ ಉದಾಹರಣೆಗೆ ಮಾತ್ರ ,ಪ್ರಚಾರಕ್ಕೆ ಅಲ್ಲ .ಅದರಲ್ಲಿ

ಹೆಸರಿಸಿದ ಕಂಪೆನಿ ಔಷಧಿಯ ಪ್ರಚಾರ ವಲ್ಲ

ಭಾನುವಾರ, ಜುಲೈ 14, 2013

ನಮ್ಮನ್ನು ನಾವೇ ಕೊಲ್ಲುವ ಪರಿ


ಮನುಷ್ಯನಿಗೆ ಸ್ವಯಂ ವಿನಾಶಕಾರಿ ಪ್ರವೃತ್ತಿ ಒಂದಿದೆ ಅನ್ನಿಸುತ್ತದೆ. 

                                                                      ನಮ್ಮ ಆಹಾರವನ್ನೇ ತೆಗೆದು ಕೊಳ್ಳೋಣ .ಆಹಾರ ಧಾನ್ಯ ಗಳಲ್ಲಿ

ಗುಗ್ಗುರು ಆಗ ಬಾರದೆಂದು ಅಲ್ಯೂಮಿನಿಯಂ ಫೋಸ್ಪೈದ್ ಬೇರೆಸುತ್ತೇವೆ.ರಾಸಾಯನಿಕ ವಿಷ ಬೆರೆಸಿದ ತರಕಾರಿಗಳು ನಮಗೆ ಮೆಚ್ಚು.ಉದಾಹರಣೆಗೆ ವಿಶದಲ್ಲಿ ಅದ್ದಿದ  ಕಾಲಿಫ್ಲವರ್ ನಲ್ಲಿ  ಹುಳ ಇಲ್ಲ ಎಂದು ಸಂಭ್ರಮದಿಂದ ಕೊಂಡು ಅದಕ್ಕೆ ರುಚಿ ಬರಲು ಇನ್ನಸ್ಟು ರಾಸಾಯನಿಕ ಬೆರಸಿ ಮಂಚೂರಿ ಮಾಡಿ ತಿನ್ನುತ್ತೇವೆ. ಹಣ್ಣುಗಳು ವರ್ಣಮಯವಾಗಲು ಕ್ಯಾಲ್ಸಿಯಂ ಕಾರ್ಬೈಡು ಹಾಕುತ್ತೇವೆ.ಉಪ್ಪು ಎಣ್ಣೆ ಕೂಡಿದ ಕುರುಕುಲು ತಿಂಡಿ ಮಕ್ಕಳ ಮೊದಲ ಆಹಾರ.(ರಕ್ತದ ಒತ್ತಡ ,ಹೃದಯ ಕಾಯಿಲೆ ,ಮೂತ್ರದ ಕಲ್ಲುಗಳಿಗೆ ಆಹ್ವಾನ.)ಎಳೆಮಗು ವಿಗೆ  ಹೇಳಿ ಮಾಡಿಸಿದ ಮೊಲೆ ಹಾಲಿಗೆ ಬದಲು ಕೃತಕ ಹುಡಿ ಗಳನ್ನು ತಿನ್ನಿಸುತ್ತೇವೆ.

ದೇಹದಲ್ಲಿ ನಿಸರ್ಗ ಕೊಟ್ಟ ರಕ್ಷಣಾ ವ್ಯವಸ್ತೆ ಇದೆ.ಚರ್ಮ ,ಬಾಯಿ ,ಕರುಳುಗಳಲ್ಲಿ  ಉಪಯುಕ್ತ ಬ್ಯಾಕ್ಟೀರಿಯಾ ಗಳಿವೆ. ವರ್ಣ ರಂಜಿತ ಜಾಹಿರಾತುಗಳ ಉಪದೇಶದಂತೆ  ಸುಕ್ಷ್ಮಾಣುಗಳನ್ನು ನಾಶ ಪಡಿಸುವ  ಸಾಬೂನು ಗಳು ,ಲೋಷನ್ ಗಳನನ್ನು ಬಳಸಿ ಇವುಗಳನ್ನು ಕೊಲ್ಲುತ್ತೇವೆ. ಇತ್ತೀಚಿಗೆ ಪಾತ್ರೆ ತೊಳೆಯುವ ಸಾಬೂನು ,ಪುಡಿಗಳಲ್ಲೂ  ಇಂತಹ ರಾಸಾಯನಿಕಗಳನ್ನು
ಸೇರಿಸುತ್ತಾರೆ.ಅವುಗಳಲ್ಲಿನ ಆಹಾರ ಸೇವಿದರೆ  ಕಾಮ್ಮೆನ್ಸಾಲ್ ಎಂಬ ನಿರುಪದ್ರವಿ ಬ್ಯಾಕ್ಟೀರಿಯಾ ಗಳನ್ನು ನಾಶ ಪಡಿಸುತ್ತವೆ. ಹಲ್ಲು ಉಜ್ಜುವ ಪೇಸ್ಟ್ ನಲ್ಲೂ ಇದೇ ಸಮಸ್ಯೆ.ಇದೆಲ್ಲ ಸಾಲದೆಂದು ಸಾಮಾನ್ಯ ವೈರಲ್ ಕಾಯಿಲೆಗಳಿಗೂ ಆಂಟಿಬಯೋಟಿಕ್ ಬಳಸಿ ಈ ಸಮಸ್ಯೆಯನ್ನು ಇನ್ನಸ್ಟು ಉಲ್ಬಣ ಗೊಳಿಸುವಂತೆ ಮಾಡುತ್ತೇವೆ.ಒಳ್ಳೆಯ ಸೂಕ್ಷ್ಮಾಣುಗಳ  ನಾಶ ರೋಗಾಣುಗಳಿಗಳಿಗೆ ದಾರಿ ಮಾಡಿ ಕೊಡುತ್ತದೆ.

ಇನ್ನು ನಮ್ಮ ಜಠರದಲ್ಲಿ ದೇವರು ಆಮ್ಲ ಇಟ್ಟಿದ್ದಾನೆ.ಇದು ಜೀರ್ಣ ಕ್ರಿಯೆಗೆ ಸಹಕಾರಿಯಲ್ಲದೆ ,ರಕ್ತ ಉತ್ಪಾದನೆಗೆ ಬೇಕಾದ
ಬೇಕಾದ ಕಬ್ಬಿಣದ ಜೀರ್ಣಕ್ಕೂ ಆಸಿಡ್ ಅಗತ್ಯ.ರೋಗಾಣುಗಳನ್ನೂ ಕೊಳ್ಳುತ್ತದೆ.ನಾವು ಹೊಟ್ಟೆಯ ಎಲ್ಲಾ  ಸಂಕಟ ಗಳಿಗೂ
ಗ್ಯಾಸ್ಟ್ರಿಕ್ ಎಂದು  ನೈಸರ್ಗಿಕವಾಗಿ ಇರುವ ರಕ್ಷಣೆಯನ್ನು ಕಳೆದು ಕೊಳ್ಳುತ್ತಿದ್ದೇವೆ.

ಇನ್ನು ತಿನ್ನುವುದು ಹೆಚ್ಚಾಗಿದ್ದು ವ್ಯಾಯಾಮ ಇಲ್ಲದಾಗಿದೆ. ನಡೆಯುವುದು ಅಭಿಮಾನಕ್ಕೆ ಕುಂದು ಎಂಬ ಒಣ ಪ್ರತಿಷ್ಟೇ ಆವರಿಸಿದೆ.
ನಡೆದಾಡುವುದು ಒಂದೇ ಬಹಳ ಮಂದಿಗೆ ಇದ್ದ ವ್ಯಾಯಾಮ. ಶಾಲೆಗೆ ಹೋಗುವ ಮಕ್ಕಳನ್ನು ಎಷ್ಟು ಹತ್ತಿರ ಶಾಲೆ ಇದ್ದರೂ ವಾಹನದಲ್ಲೇ ಕಳುಹಿಸಬೇಕು.ವೈದ್ಯರು ವಕೀಲರು ನಡೆಯುವುದು ಕಂಡರೆ ಅದ್ಬುತ ಕಂಡಂತೆ ಮಾಡುತ್ತಾರೆ.

ವಾಹನ ಗಳ ಜಂಗುಳಿಯಿಂದ ವಾಯು ,ಶಬ್ದ ಮಾಲಿನ್ಯ ಹೆಚ್ಚಾಗಿದೆ.ಇದರ ಬಗ್ಗೆ ಗೊಡವೆ ಇದ್ದಂತಿಲ್ಲ .ಎಳೆಯ ಮಕ್ಕಳಲ್ಲೇ
ದಮ್ಮು ,ರಕ್ತದ ಒತ್ತಡ ಸುರುವಾಗಿದೆ.ಯಾವುದಾದರೂ ಸೋಂಕು ರೋಗ ಧಾಳಿಯಿಟ್ಟಾಗ ಶುಚಿತ್ವ ಅಭಿಯಾನದ ಪ್ರಹಸನ ನಡೆಯುತ್ತದೇ.ಮಿಕ್ಕಂತೆ ಕಂಡಲ್ಲಿ ಉಗುಳುತ್ತೇವೆ,ಕಸ ಹಾಕುತ್ತೇವೆ.ಗಟ್ಟಿಯಾಗಿ ದ್ವನಿ ವರ್ಧಕ ,ಹಾರ್ನ್ ,ಟಿ ವಿ . ಬಳಸಿ ಶಬ್ದ ಮಾಲಿನ್ಯಕ್ಕೆ ನಮ್ಮದೂ ಕೊಡುಗೆ ಇರಲಿ ಎಂದು  ಸ್ಪರ್ದಿಸುತ್ತೇವೆ.
ಹೀಗೆ ಇನ್ನೂ ಎಷ್ಟೋ ಇದೆ.ನೀವೇ ಹೇಳಿ ಇದು ಸೆಲ್ಫ್  ಡಿಷ್ಟ್ರಕ್ತಿವ್ (ಸ್ವಯಂ ವಿನಾಶಕಾರಿ )
ಪ್ರವೃತ್ತಿ ಅಲ್ಲದೆ ಇನ್ನೇನು?

ಶನಿವಾರ, ಜುಲೈ 13, 2013

ಮರೆಯಾಗದ ಮಹನೀಯರು -ಎಸ್ ವಿ ಪರಮೇಶ್ವರ ಭಟ್ಟ

SVP

ಮಂಗಳೂರಿನಲ್ಲಿ  ಮೈಸೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಸ್ಥಾಪನೆಯಾದಾಗ ಅದರ ನಿರ್ದೇಶಕರಾಗಿ ಬಂದವರು

 

ಕಾಣದ  ಖ್ಯಾತ ಕವಿ ,ಅಧ್ಯಾಪಕ ಎಸ್ ವಿ ಪರಮೇಶ್ವರ ಭಟ್ಟರು .ಏನೂ ಇಲ್ಲದ  ಕೊಣಾಜೆ ಬೋಳು ಗುಡ್ಡೆಯಲ್ಲಿ ಸಂಸ್ಥೆಯನ್ನು

 

ಭಗೀರಥ ಪ್ರಯತ್ನದಿಂದ ಕಟ್ಟಿ ಬೆಳಸಿ ಇಂದಿನ ಮಂಗಳೂರು ವಿಶ್ವವಿದ್ಯಾಲಯಕ್ಕೆ ಬುನಾದಿ ಹಾಕಿದವರು.ಆಗಿನ್ನೂ ಪೂರ್ಣ ಪ್ರಮಾಣದಲ್ಲಿ

 

ಕಟ್ಟಡಗಳು ನಿರ್ಮಾಣ ವಾಗದಿದ್ದ ಕಾರಣ ಮಂಗಳೂರು ಪೇಟೆಯಲ್ಲಿ ಕೇಂದ್ರದ ಕಚೇರಿ ಇತ್ತು.ತರಗತಿಗಳು ಕೆ ಎಂ ಸಿ ಇತ್ಯಾದಿ ಕಾಲೇಜ್

 

ಗಳಲ್ಲಿ ನಡೆಯುತ್ತಿದ್ದವು.ಭಟ್ಟರು ನಡೆದಾಡಿ ಕೊಂಡೇ ಇಲ್ಲೆಲ್ಲಾ ಸಂಚರಿಸುತ್ತಿದ್ದುದನ್ನು ನಾನು ನೋಡಿದ್ದೇನೆ.ಜೊತೆ ಜೊತೆಗೆ ಕೊಣಾಜೆ

 

ಕ್ಯಾಂಪಸ್ ಅಭಿವೃದ್ಧಿ ಅವಲೋಕನ.ಅವರು ಮಾಡಿದ್ದ ಸೇವೆಯ ಗಹನತೆ ನಾವು ನೆನಪಿಟ್ಟು ಕೊಳ್ಳ ಬೇಕು .

 

ಇದರ  ಜೊತೆಗೆ ಉತ್ತಮ ಭಾಷಣ ಕಾರ ಆಗಿದ್ದ ಅವರಿಗೆ ಜಿಲ್ಲೆಯಾದ್ಯಂತ ಭಾರೀ ಬೇಡಿಕೆ .ಶಾಲಾ ಕಾಲೇಜ್ ಗಳ ವರ್ಧಂತಿ ಉತ್ಸವ

 

ಸಾಹಿತ್ಯ ಕೂಟ ,ಯಕ್ಷಗಾನ  ಎಲ್ಲಾ ಕಡೆ ಅವರೇ ಬೇಕು .ಇಲ್ಲ ಎನ್ನದೆ ಹೋಗುತ್ತಿದ್ದರು.ಸ್ವತಹ ಜೀವನದಲ್ಲಿ ಬಹಳ ನೋವು

 

ಅನುಭವಿಸಿದರೂ ತಮ್ಮ ಹಾಸ್ಯ ಚಟಾಕಿಗಳಿಂದ ಎಲ್ಲರನೂ ನಗಿಸಿದರು.

 

ಅಭಿನವ ಕಾಳಿದಾಸ ಎಂದು ಪ್ರಸಿದ್ದರಾಗಿದ್ದ ಅವರು ಕಾಳಿದಾಸನ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಸ್ವಯಂ ಪ್ರಕಟಿಸಿದರು .

 

ಹಲವು ಕಾವ್ಯ ಸಂಕಲನಗಳನ್ನೂ ಪ್ರಕಟಿಸಿದ್ದಾರೆ ,ಅವರ ಕವನ ತಿಳಿ ಮುಗಿಲ ತೊಟ್ಟಿಲಲಿ ಮಲಗಿರುವ ಚಂದಿರನ ಬಹಳ  ಜನಪ್ರಿಯ .

 

ಕುವೆಂಪು ಸಾಹಿತ್ಯದ ಸಮಗ್ರ ಅವಲೋಕನ ಮಾಡುವ ಬೃಹತ್ ಗ್ರಂಥಗಳನ್ನು ರಚನೆ ಮಾಡಿದ್ದಾರೆ.

 

ರೈತ ಹೋರಾಟ ಗಾರ  ಕಡಿದಾಳ್ ಶಾಮಣ್ಣ ತನಗೆ ಕಾಲೇಜ್ ನಲ್ಲಿ ಸೀಟ್ ಕೊಡಿಸಿದ್ದುದು ಎಸ್ ವಿ ಪಿ ಎಂದು ಸ್ಮರಿಸಿದ್ದ್ದಾರೆ

 

ಅದರಂತೆ     ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಶ್ರೀಮಾನ್ ವಿವೇಕ ರೈ ಯಾವಾಗಲೂ ತಮ್ಮ ಗುರುಗಳನ್ನು

 

ಕೃತಜ್ಞತೆಯಿಂದ ಸ್ಮರಿಸುತ್ತಾರೆ.

 

ಶ್ರೀ ಎಹ್ ಕೆ ರಂಗನಾಥ್  ಮತ್ತು ಅವರ ತಮ್ಮ ಖ್ಯಾತ ಬರಹಗಾರ ವೈದ್ಯ ಡಾ ಎಚ್ ಕೆ ನಜುಂಡ ಸ್ವಾಮಿ ಅವರ ಪತ್ನಿಯ

 

ಸಹೋದರರು .ತಮ್ಮ ಸಾಹಿತ್ಯ ಸೇವೆಗೆ ಭಾವನವರ ಸ್ಪೂರ್ತಿ ನೆನೆಯುತ್ತಾರೆ,

 

ಎಸ್ ವಿ ಪಿ ಮತ್ತು ಏರ್ಯ ಲಕ್ಷ್ಮಿನಾರಾಯಣ ಆಳ್ವ ರ  ಮುಂದಾಳತ್ವದಲ್ಲಿ ಅದ್ದೂರಿಯಾಗಿ ಮತ್ತು ಅಚ್ಚು ಕಟ್ಟಾಗಿ ನಡೆದ ಪಂಜೆ ಮಂಗೇಶ

 

ರಾಯರ ಶತಮಾನೋತ್ಸವ ಕಾರ್ಯಕ್ರಮ  ನ ಭೂತೋ ನ ಭವಿಷ್ಯತಿ ಎಂಬಂತೆ ಮಂಗಳೂರಿನಲ್ಲಿ ನಡೆದುದನ್ನು ಸಾಹಿತ್ಯ ಪ್ರಿಯರು

 

ಇನ್ನೂ ನೆನಪಿಸಿ ಕೊಳ್ಳುತ್ತಾರೆ.

 

ಪ್ರೊ. ಎಸ್ ವಿ ಪರಮೇಶ್ವರ  ಭಟ್ಟರ ಶತಮಾನೋತ್ಸವ ಕಾರ್ಯಕ್ರಮ ವನ್ನು ಅವರ ಶಿಷ್ಯರು  ಮತ್ತು ಸಾಹಿತ್ಯಾಸಕ್ತರು ಮತ್ತು

 

ಅಭಿಮಾನಿಗಳು ಸೇರಿ ಈ ವರ್ಷ ನೆರವೇರಿಸಲು  ಹಮ್ಮಿಕೊದಿದ್ದಾರೆ. ಇದಕ್ಕೆ ಧನ ಸಹಾಯ ಮಾಡಲಿಚ್ಚಿಸುವವರು ರೂ

 

ಒಂದು ಸಾವಿರಕ್ಕ್ಕೆ ಕಮ್ಮಿಯಿಲ್ಲದಂತೆ ಕರ್ನಾಟಕ ಬ್ಯಾಂಕ್ ಖಾತೆ 4762500102483101 ಕ್ಕೆ ವರ್ಗಾಯಿಸಿ

 

ಡಾ ನರಸಿಂಹ ಮೂರ್ತಿ ,ಕಾರ್ಯದರ್ಶಿ ಪ್ರೊಫ್ ಎಸ್ ವಿ ಪರಮೇಶ್ವರ ಭಟ್ಟ ಜನ್ಮ ಶತಮಾನೋತ್ಸವ ಸಮಿತಿ ,ಮಾಣಿಕ್ಯ ,ಗಾಂಧಿನಗರ

 

ಕಾವೂರು ಅಂಚೆ .ಮಂಗಳೂರು ೫೭೫೦೧೫ ಕ್ಕೆ ತಿಳಿಸ ಬಹುದು .ಹೆಚ್ಚಿನ ಮಾಹಿತಿಗೆ ದೂ 9448191249, 9449283283

 

ಸಂಪರ್ಕಿಸ ಬಹುದು.

ಪಲ್ಮನರಿ ಎಂಬೋಲಿಸಂ ಎಂಬ ಮಾರಣಾಂತಿಕ ಕಾಯಿಲೆ.

ದೇಹದಲ್ಲಿ ರಕ್ತ ಚಲನೆಯಲ್ಲಿ ಇರ ಬೇಕು .ಶುದ್ಧ ರಕ್ತ  ಹೃದಯದಿಂದ ಅಪಧಮನಿಗಳ ಮೂಲಕ ದೇಹದಾದ್ಯಂತ ಚಲಿಸಿ ಆಹಾರ

ಮತ್ತು ಆಮ್ಲಜನಕ ಸರಬರಾಜು ಮಾಡಿದರೆ ,ಅಭಿಧಮನಿಗಳ ಮೂಲಕ ಅಶುದ್ದ ರಕ್ತ ಹೃದಯಕ್ಕೆ ಬಂದು ಅಲ್ಲಿಂದ

ಶುದ್ದೀಕರಣಕ್ಕಾಗಿ ಶ್ವಾಸಕೋಶಕ್ಕೆ ರವಾನೆ ಆಗುವುದು.ಇದು ನಿರಂತರ ಕ್ರಿಯೆ.ಅದೇ ರೀತಿ ರಕ್ತನಾಳಗಳಿಗೆ ಗಾಯವಾದರೆ


ಕೂಡಲೇ ರಕ್ತ ಹೆಪ್ಪು ಗಟ್ಟಿ ರಕ್ತ ಸೋರುವಿಕೆ ನಿಲ್ಲ ಬೇಕು .ಈ ಹೆಪ್ಪು ಗಟ್ಟಲು ಬೇಕಾದ ಕಚ್ಚಾ ವಸ್ತುಗಳು ರಕ್ತದಲ್ಲಿಯೇ


ಅಡಕವಾಗಿವೆ.ಚಲನೆ ಮತ್ತು ಹೆಪ್ಪುಗಟ್ಟುವ ಕ್ರಿಯೆಯ ಸಮತೋಲನ ಆರೋಗ್ಯಕ್ಕೆ ಅತೀ ಆವಶ್ಯ.


ಕೆಲವು ಸಂದರ್ಭಗಳಲ್ಲಿ ಕಾಲಿನ ಮೀನ ಖಂಡದ   ಅಭಿಧಮನಿಗಳಲ್ಲಿ ರಕ್ತ  ಹೆಪ್ಪುಗಟ್ಟುವುದು.ಉದಾ;ರೋಗದಿಂದ ಕಾಲಿನ


ಚಲನೆಯಿಲ್ಲದೆ ಮಲಗಿರುವವರು ( ಮೂಳೆ ಮುರಿತ,ದೊಡ್ಡ ಶಸ್ತ್ರ ಚಿಕಿತ್ಸೆಗೆ ಒಳಗಾದವರು ,),ಹೆಪ್ಪು ಗಟ್ಟುವಿಕೆಯ ಅಂಶ


ಹೆಚ್ಹು ಇರುವ ಗರ್ಬಿಣಿ ಸ್ತ್ರೀಯರು,ಗರ್ಭ ನಿರೋಧಕ ಗುಳಿಗೆ ಸೇವಿಸುವವರು,ಕೆಲವು ಕ್ಯಾನ್ಸರ್ ಕಾಯಿಲೆಯಿಂದ ಬಳಲುವವರು

.

ಇಂತಹವರಲ್ಲಿ ಹೆಪ್ಪುಗಟ್ಟಿದ ರಕ್ತ ದ  ಗಟ್ಟಿ ಅಬಿಧಮನಿಗಳ ಮೂಲಕ ಹೃದಯವನ್ನು ಹಾಯ್ದು ಶ್ವಾಶ ಕೋಶದ  ಅಪಧಮನಿ


ಪ್ರವೇಶಿಸಿ ಶ್ವಾಸ ಕೋಶಕ್ಕೆ ರಕ್ತ ಸಂಚಾರ ವ್ಯತ್ಯಯ ಮಾಡುವುದು.ಇದನ್ನೇ ಪಲ್ಮನರಿ ಎಂಬೋಲಿಸಂ ಎಂದು ವೈದ್ಯಕೀಯ


ಭಾಷೆಯಲ್ಲಿ ಕರೆಯುತ್ತಾರೆ.ಇಲ್ಲಿ ರಕ್ತದ ಗಟ್ಟಿ ಸಾಕಷ್ಟು ದೊಡ್ಡದಿದ್ದರೆ ಶ್ವಾಸ ಕೋಶದ ರಕ್ತ ಸರಬರಾಜು ಸಂಪೂರ್ಣ ನಿಂತು


ಸೆಕೆಂಡುಗಳಲ್ಲಿ ರೋಗಿ ಸಾವನ್ನಪ್ಪುವನು.

ರೋಗ ಲಕ್ಷಣಗಳು 



 ಕಾಲಿನ ರಕ್ತ ನಾಳಗಳಲ್ಲಿ ರಕ್ತ ಹೆಪ್ಪು ಗಟ್ಟಿದರೆ ಕಾಲು ಊದಿ ಕೊಂಡು ನೋವು ಇರಬಹುದು.ಅಥವಾ  ಯಾವುದೇ ಲಕ್ಷಣ


  ಇಲ್ಲದೇ  ಇರಬಹುದು. ಸಂಶಯ ಬಂದಾಗ ಡಾಪ್ಲರ್ ಪರೀಕ್ಷೆಯೆಂಬ



ಸ್ಕ್ಯಾನ್ ಮಾಡಿ ಪತ್ತೆ ಹಚ್ಚ ಬಹುದು.


ಶ್ವಾಸ ಕೋಶದ ರಕ್ತ ನಾಳ ಬ್ಲಾಕ್ ಆದರೆ  ಏಕಾ ಏಕಿ ದಮ್ಮು ಕಟ್ಟುವುದು.ಆಮ್ಲ ಜನಕ ಕಮ್ಮಿಯಾಗಿ ಶರೀರ ನೀಲ ವರ್ಣಕ್ಕೆ



ತಿರುಗಿ ರೋಗಿ ಸಾವನ್ನೂ ಅಪ್ಪ ಬಹುದು .ಆದುದರಿಂದ ಮೇಲೆ ಹೇಳಿದ ವ್ಯಕ್ತಿಗಳಲ್ಲಿ ಯಾವುದೇ ಕಾರಣವಿಲ್ಲದೆ,(ಅಂದರೆ

ಮೊದಲೇ ಅಸ್ಥಮಾ ,ಹೃದಯ ಕಾಯಿಲೆ ಇಲ್ಲದಿದ್ದರೆ ) ದಮ್ಮು ಕಟ್ಟಲು ಶುರುವಾದರೆ ಪಲ್ಮನರಿ ಎಂಬೋಲಿಸಂ ಇರಬಹುದೆಂದು


ಸಂಶಯಿಸ ಬೇಕು. ರೋಗ ಪರೀಕ್ಷಣೆಗೆ  ಸಮಯ ಕೊಟ್ಟರೆ ರಕ್ತ ಪರೀಕ್ಷೆ ,ಸಿ ಟಿ ಸ್ಕ್ಯಾನ್ ,ಎಂ ಅರ ಐ ಸ್ಕ್ಯಾನ್ ಮೂಲಕ


ರೋಗ  ಖಚಿತ ಪಡಿಸಿ ಕೊಳ್ಳ ಬಹುದು .


ಚಿಕಿತ್ಸೆ.

ರೋಗವು ಚಿಕಿತ್ಸೆಗೆ ಸಮಯ ಕೊಟ್ಟರೆ ಕೂಡಲೇ ತುರ್ತು ಚಿಕಿತ್ಸಾ ಕೊಡದಿಯಲ್ಲಿ ಅಮ್ಲನಕ ಕೊಟ್ಟು, ಹೆಪ್ಪು ಕರಗಿಸುವ ಔಷಧಿ

ಆರಂಬಿಸುವರು.

ದೀರ್ಘ ಕಾಲ ಚಲನೆಯಿಲ್ಲದೆ ಇರುವ ರೋಗಿಗಳಿಗೆ ಹೆಪಾರಿನ್ ಎಂಬ ಹೆಪ್ಪು ಪ್ರತಿ ಬಂಧಕ ಔಷಧಿ ಕೊಡುವರು.ಇದರಿಂದ

ಕಾಲಿನಲ್ಲಿ ರಕ್ತ  ಹೆಪ್ಪುಗಟ್ಟುವುದನ್ನು ತಡೆಗಟ್ಟಿ ಪಲ್ಮನರಿ ಎಂಬೋಲಿಸಂ ಬರದಂತೆ ನೋಡಿಕೊಳ್ಳ ಬಹುದು.

ಗಮನಿಸಿ

                ಕೆಲವೊಮ್ಮೆ ಗರ್ಬಿಣಿ ಸ್ತ್ರೀ ಗಳಲ್ಲಿ(ಮತ್ತು ಹೆಪ್ಪುಗಟ್ಟುವ ಆತಂಕವಿರುವ ಇತರರಲ್ಲಿ) ಈ ರೋಗ ಪ್ರಕಟವಾಗಿ 

ನೋಡುವುದರೊಳಗೆ ಸಾವನ್ನಪ್ಪ ಬಹುದು .ಆಗ  ಅದಕ್ಕಿಂತ ಸ್ವಲ್ಪ ಮೊದಲು ಕೊಟ್ಟ ಇಂಜೆಕ್ಷನ್ ,ಅಥವಾ ಇನ್ನಾವುದೋ 

ಮಾಮೂಲಿ ಔಷಧಗಳೋ ಇದಕ್ಕೆ ಕಾರಣ ಎಂದು ರೋಗಿಗಳ ಬಂಧುಗಳು ತಿಳಿಯುವುದುಂಟು.



ಶುಕ್ರವಾರ, ಜುಲೈ 12, 2013

ನನ್ನ ಅಜ್ಜ ಮತ್ತು ಪುತ್ತೂರು ಪೇಟೆ


ಹಿಂದೆ ಹಳ್ಳಿಯಲ್ಲಿ ಆಢ್ಯ ವ್ಯಕ್ತಿಗಳು ನಗರಕ್ಕೆ ಆಗಾಗ ಭೇಟಿ ಕೊಡಲು ಒಂದೋ ಎರಡನೇ ಸಂಭಂಧ ,ಇಲ್ಲವಾದರೆ ಕೋರ್ಟ್ ಕೇಸ್

ಇಟ್ಟುಕೊಳ್ಳುತ್ತಿದ್ದರು.ಕೆಲವರಿಗೆ ಎರಡೂ ಇತ್ತು.ಆಗಿನ ಸನ್ನಿವೇಶದಲ್ಲಿ ಎರಡೂ ಅಸ್ಟು ವಿಚಿತ್ರವೆನಿಸುತತ್ರಲಿಲ್ಲ.

ನನ್ನ ಅಜ್ಜನೂ ಎರಡನೇ ವ್ಯಸನ ಇದ್ದವರು.ಕೋರ್ಟ್ ಕೇಸ್ ಗೆ ಇಲ್ಲದ ನೀರಿನ ಮೂಲವೋ ,ಬೇಡದ ನಿರುಪದ್ರವಿ ಮರದ ಮೇಲಿನ ಹಕ್ಕು

ಸಾಧನೆಯೋ ಸಾಕಾಗುತ್ತಿತ್ತು.ನಮ್ಮ ಗದ್ದೆಗೆ ತಾಗಿ ಒಂದು ನೀರಿನ ಮೂಲ ಇತ್ತು.ಅದು ನಮ್ಮದೆಂದು ಅಜ್ಜನೂ ,ಅವರದೆಂದು ಪಕ್ಕದ

ಮನೆಯವರದೂ ವಾದ .ಸರಿ ,ಪುತ್ತೂರು ಕೋರ್ಟ್ ಹತ್ತಿತು ವಿವಾದ.ಕೇಸ್ ನ ಹಿಯರಿಂಗ್ ಗೆ ಅಜ್ಜ ಹೋಗಿ ಬಂದು ರಾತ್ರಿ ಸ್ನಾನದ


ಮನೆಯಲ್ಲಿ ಅಲ್ಲಿಯ ಕತೆಗಳನ್ನು ರೋಚಕವಾಗಿ ಹೇಳುವರು.ನಾವು ಬಿಸಿ ನೀರ ಒಲೆಯ ಬಳಿ ಮೈ ಕಾಯಿಸುತ್ತಾ ಕಣ್ಣು ಬಾಯಿ ಬಿಟ್ಟು


ಕೇಳುತ್ತಿದ್ದೆವು.ಸದಾಶಿವ ರಾಯರು ಹಾಕಿದ ಪೈಂಟಿಗೆ(point) ಜಡ್ಜರು ತೆರೆದ ಬಾಯಿ ಮುಚ್ಚಲೇ ಇಲ್ಲ ಎನ್ನುವರು.ಅವರ ಲೀಗಲ್


ವೊಕ್ಯಾಬುಲರಿ ಯಲ್ಲಿ  ಹೆರಿಂಗ್ ,ಕೈಪೇತು(ಕೇವಿಯಟ್),ಕ್ರಾಸ್ (ಕ್ರಾಸ್ ಎಕ್ಷ್ಜಾಮಿನೇಶನ್),ಡಿಕ್ರೀ,ಇಂಜಕ್ಶನ್ ಇಂತಾದ ಶಬ್ದಗಳು


ಮೇಲಿಂದ ಮೇಲೆ ಬರುತ್ತಿದ್ದವು.ವಕೀಲರ ಮನೆಗೆ ಹೋಗುವಾಗ ಫೀಸಿನ ಜತೆ ಬಾಳೆಗೊನೆ ,ಮನೆಯಲ್ಲಿ ಬೆಳೆದ ತರಕಾರಿ

ಕೊಂದೊಯ್ಯುವುದೂ ಇತ್ತು.ವಕೀಲ ಕಕ್ಷಿ ಸಂಬಂಧದಲ್ಲಿ ಒಂದು ಆತ್ಮೀಯತೆ ಇತ್ತು.


ವಕೀಲ ಸದಾಶಿವ ರಾಯರ ಮನೆ ದಾರಿಯಲ್ಲಿ ಕುಂಬ್ಳೆಕಾರ್ಸ್ ಎಂಬ ಬಟ್ಟೆ ಅಂಗಡಿ ಇತ್ತು. ಅದರ ಎದುರಿಂದ ಹಾಯುವಾಗ


ಅಂಗಡಿ ಧಣಿಗಳು  ‘ಭಟ್ರೇ ಒಳ್ಳೆಯ ಕೋಮಣ ಬಟ್ಟೆ ಬಂದಿದೆ ಕೊಂಡು ಹೋಗುವಿರೋ ಎಂದು ಈಗಿನ ಮೊಬೈಲ್ ಅಂಗಡಿಯವರು


ಹೊಸ ಮಾಡೆಲ್ ಬಂದಿದೆ ಎಂದು ಗಿರಾಕಿಗಳನ್ನು ಸೆಳೆಯುವಂತೆ ಕೇಳುತ್ತಿದ್ದರು. ಕೌಪೀನ ಹಳ್ಳಿಯ ಅಧಿಕೃತ ಉಡುಪು ಆಗಿದ್ದ ಕಾಲ.


ಕೆಲವೊಮ್ಮೆ ಅಜ್ಜನ ಜೊತೆ ನಾವೂ ಪುತ್ತೂರಿಗೆ ಬರುವುದಿತ್ತು.ಬಸ್ ಸ್ಟಾಂಡ್ ನ ಎದುರು ಜನತಾ ಫುಟ್ ವೇರ್ ಅಂದಡಿಯಿತ್ತು .ಈಗಲೂ


ಇದೆ .ಅಲ್ಲಿ ಅಬ್ದುಲ್ ಖಾದರ್ ಎಂಬ ಸಜ್ಜನ ಇದ್ದರು.ಮಕ್ಕಳನ್ನು ಸುಮ್ಮನೆ ನಡೆಸುವುದು ಬೇಡ ಎಂದು ನಮ್ಮನ್ನು ಈ ಅಂಗಡಿಯಲ್ಲಿ

ಕುಳ್ಳಿರಿಸಿ ಈಗ ಬರುತ್ತೇನೆ ಎಂದು ಹೋದವರು ಗಂಟೆ ಯಾದರೂ ಬರುತ್ತಿರಲಿಲ್ಲ .ನಮಗೋ ಪೇಟೆಯವರನ್ನು ಕಂಡರೆ ಭಯ.

ಆಗ ಇಂತಹ ಅಂಗಡಿಗಳು ಹಳ್ಳಿಯವರ ಕ್ಲಾಕ್ ರೂಂ ಗಳೂ ಆಗಿರುತ್ತಿದ್ದವು.ಅಂಗಡಿಯವರು ಅಲ್ಲಿ ಇಟ್ಟ ಸಾಮಗ್ರಿಗಳನ್ನು ಯಾವುದೇ


ಫೀ ಇಲ್ಲದೆ ಜೋಪಾನ ವಾಗಿ ಇಡುತ್ತಿದ್ದರು.ಈ ಜನಾಬ್ ಅಬ್ದುಲ್ ಖಾದರ್ ಬಗ್ಗೆ ಒಂದು ಮಾತು ಹೇಳಬೇಕು .ನಾವು ರಜೆಯಲ್ಲಿ


ನೆಂಟರ ಮನೆಗೆ ಹೋಗುವ ದಾರಿಯಲ್ಲಿ ಚಪ್ಪಲಿ ಬೇಕೆನಿಸಿದರೆ ಸೀದಾ ಅವರ ಅಂಗಡಿಗೆ ಹೋಗಿ ಇಂತಹ ಚಪ್ಪಲಿ ಬೇಕೆಂದು ಆಯ್ದು


ಕಾಲಿಗೆ ಹಾಕಿ ಕೊಂಡು ಹೋಗುವುದೇ.ಹಣ ತಂದೆ ಕೊಡುತ್ತಾರೆ ಎಂದು ಹೇಳುತ್ತಿದ್ದೆವು .ನಿಮ್ಮ ತಂದೆ ಯಾರು ,ಯಾವಾಗ ಕೊಡುತ್ತಾರೆ

ಎಂದು ಅವರು ಕೇಳಿದವರಲ್ಲ.ಅದೇ ರೀತಿ ಬಸ್ ಸ್ಟಾಂಡ್ ನಲ್ಲಿ ಕಿತ್ತಳೆ ಮಾರುವ ಮಹನೀಯರಿದ್ದರು.ಹಳ್ಳಿಯವರಿಗೆ ಅವರವರಿಗೆ ಬೇಕಾದ


ಬಸ್ ತೋರಿಸುವರು.ಅವರ ಸಮಾಜ ಸೇವೆ ಸ್ಮರಿಸುವಂತಹುದು.


ನನ್ನ ಅಜ್ಜ ಇಳಿ ವಯಸ್ಸಿನಲ್ಲೂ ಕೈಯಲ್ಲಿ ಬೆತ್ತ ಹಿಡಿದು ಪುತ್ತೂರು ಪೇಟೆಯಿಡೀ ನಡೆದೇ ಹೋಗುತ್ತಿದ್ದರು.ಬಹಳ ದಿನ ಕೋರ್ಟ್

ಕೇಸ್ ಇಲ್ಲದಿದ್ದರೆ ಇಲ್ಲದ ಕಾಯಿಲೆಯನ್ನು ಊಹಿಸಿ ಕೊಂಡು ಕೋರ್ಟ್ ರಸ್ತೆಯ ಪ್ರಸಿದ್ದ್ದ ವೈದ್ಯ ಸುಂದರ ರಾಯರ ಬಳಿಗೆ ಸವಾರಿ ಇಡುತ್ತಿದ್ದರು.

 . ಡಾಕ್ಟರ್ ಅಲ್ಲಿ ಮುಟ್ಟಿ ನೋಡಿದರು ,ಇಲ್ಲಿ ಕುಟ್ಟಿ ನೋಡಿದರು ಎಂದು ವರ್ಣಮಯವಾಗಿ ವಿವರಿಸುತ್ತಿದ್ದರು.ಸುಂದರ ರಾಯರು


 ಕೊಟ್ಟ ಟಾನಿಕ್ ಶ್ರದ್ದೆಯಿಂದ ಕುಡಿಯುತ್ತಿದ್ದರು.

ಮೊಮ್ಮಕ್ಕಳನ್ನು ಹೋಟೆಲ್ ಗೆ ಕರೆದೊಯ್ದು  ಇವರಿಗೆ ಬೇಕಾದ್ದೆಲ್ಲ ಕೊಡಿ ಎಂದು ಅದೇಶಿಸುತ್ತಿದರು.

ಬಾಲಂಗೋಚಿ.:

ವಕೀಲ ಸದಾಶಿವ ರಾಯರು ಇಳಿ ವಯಸ್ಸಿನಲ್ಲಿ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದರು.ಅವರು ನಡೆದೇ

ಹೋಗುತ್ತಿದ್ದರು .ಅವರ  ನಂತರದ ತಲೆಮಾರಿನ ಬೋಳಂತ ಕೋಡಿ  ಈಶ್ವರ ಭಟ್ಟರೂ ಕನ್ನಡ ಸಂಘದ ಕಾರ್ಯ ಕೋರ್ಟ್ ಆಫೀಸ್

ಪತ್ರಿಕೋದ್ಯಮ ಕೆಲಸ ಎಂದು ನಡೆದು ಕೊಂಡೆ ಓಡಾಡಿದವರು .ಶಿವರಾಮ ಕಾರಂತರು  ಪರ್ಲಡ್ಕ ಮನೆಯಿಂದ ಪೇಟೆಗೆ ನಡೆದು


ಬಂದು ಹೋಗುತ್ತಿದ್ದರು.ಈಗ ನಮಗೆ ನಡೆಯುವುದಕ್ಕೆ ಅಭಿಮಾನ ಬಿಡುವುದಿಲ್ಲ.ಒಂದು ವೇಳೆ ಬಿಟ್ಟರೆ ರಸ್ತೆಯಲ್ಲಿ ಪಾದಚಾರಿಗಳಿಗೆ


ನಡೆಯಲು ಫುಟ್ ಪಾತ್ ಇಲ್ಲ ನಾನು ಈಗ ಎಲ್ಲಿಯಾದರೂ ಪೇಟೆಯಲ್ಲಿ ನಡೆಯುವುದು ಕಂಡ ಪರಿಚಿತರು  ಡಾಕ್ಟರ್ ಕಾರ್


ತರಲಿಲ್ಲವೆ ಎಂದು ಕೇಳುತ್ತಾರೆ ,ಕೆಲವರು ಏನು ನಡೆಯುವುದು ,ಪ್ರಾಕ್ಟೀಸ್ ಸರಿಯಾಗಿ ನಡೆಯುತ್ತ ಇಲ್ಲವೇ ಎಂದು ಪ್ರಶಿಸುತ್ತಾರೆ.

ವಿಷಯ ಎಲ್ಲಿಂದ ಎಲ್ಲಿಗೆ ಹೋಯಿತು.ನಮ್ಮ ಮತ್ತು ಅಜ್ಜನ ಸಂಭಾಷಣೆಯಂತೆ.
ಬಾಲಂಗೋಚಿ 
ಇದನ್ನು ಪೋಸ್ಟ್ ಮಾಡಿದ ಮೇಲೆ ಈಗಿನ ತಲೆಮಾರಿನ ಕೆಲವರು ಕೋಮಣ ಎಂದರೆ ಏನೂ ಎಂದು ನನ್ನಲ್ಲಿ ವಿಚಾರಿಸಿದರು .ಇದು ಆಗ ನಾವು ಮಾನ ಮುಚ್ಚಲು  ಬಳಸುತ್ತಿದ್ದ  ಬಟ್ಟೆ  ಮಕ್ಕಳು ಹಳೇ ಬಿಳಿ ಪಂಚೆಯನ್ನು ಆಯತ ಆಕಾರದಲ್ಲಿ ಕಟ್ ಮಾಡಿ ಉಡಿದಾರಕ್ಕೆ ಸಿಕ್ಕಿಸಿ ಕೊಳ್ಳುತ್ತಿದ್ದೆವು .ಹಿರಿಯರು  ಈ ಆಕಾರದ ಕೋರಾ ಬಟ್ಟೆಯ ಸಿದ್ದ ವಸ್ತ್ರ .ಮತ್ತು ಹೆಚ್ಚು ಜನಪ್ರಿಯ ಚೌಕಕಾರದ ಕೆಂಪು ಬಿಳಿ ಬಣ್ಣದ  ಕೌಪೀನ (ಸಂಸ್ಕೃತ) ಉಡುತ್ತಿದ್ದರು .
              ಕೆಳಗೆ ತೋರಿಸಿದ  ಡಿಸೈನ್ ಆಕಾರ ಚೌಕ
ಈ ಚೌಕ  ಬಟ್ಟೆ ಬಹುಪಯೋಗಿ .ಉಟ್ಟರೆ ಕೌಪೀನ ವಾದೆ ,ಕರದಲ್ಲಿ ಕರವಸ್ತ್ರ ವಾದೆ ,ತಲೆಗಿಟ್ಟರೆ ಟೋಪಿಯದೆ ,ಅಡಿಗೆ ಮನೆಯಲ್ಲಿ ಚಹಾ ,ಕಾಯಿ ಹಾಲು ಸೋಸು ವ  ಅರಿಪ್ಪೆಯಾದೆ .ನೀ ನಾರಿ ಗಾದೆಯೋ ಎಲೆ ಮನವಾ -ಇದನ್ನು ನೀನು ಅರಿಗಾದೆಯೋ ,ನೀ  ನಾರಿ(ಹೆಣ್ಣು )ಗಾದೆಯೋ ಎಂದು ಅವರವರ ಭಾವಕ್ಕೆ ಸರಿಯಾಗಿ ವಿಮರ್ಶೆ ಮಾಡುವರು.  ಕೌಪೀನ ಮತ್ತು ಮೇಲೆ ಒಂದು ತುಂಡು ಬಟ್ಟೆ ಕೃಷಿಕರಿಗೆ   ಬಹಳ ಅನುಕೂಲ .ಅದೇ  ನಮ್ಮ ಕಾಲದ ವಿ ಐ ಪಿ ,ಜೋಕಿ .ಅದನ್ನು ಉಟ್ಟು ಕೊಂಡು ನಾವು ಕ್ರಿಕೆಟ್ ,ಕಬಡ್ಡಿ ಆಡಿದ್ದೇವೆ .
ನಮ್ಮ ಅಜ್ಜಿ ಮಾಂಬಳ ಎರೆದು ಒಣಗಿಸಿ ಆಯತ  ಕೋಮಣ ರೂಪದಲ್ಲಿ ತುಂಡು ಮಾಡಿ ಶೇಖರಿಸುತ್ತಿದ್ದರು ನಾವು ಅವರನ್ನು ನನಗೊಂದು ಕೋಮಣ ನನಗೊಂದು ಎಂದು ಪೀಡಿಸುತ್ತಿದ್ದೆವು ..ನೀವು ನಮ್ಮನ್ನು ತಮಾಷೆ ಮಾಡಬೇಡಿ .ಈ ತುಂಡು ಬಟ್ಟೆ ಆಗ ನಮ್ಮ ಮಾನ ಸರಿಯಾಗಿ  ಮುಚ್ಚುತ್ತಿತ್ತು .ಈಗಿನ ಫ್ಯಾಷನ್ ಬಟ್ಟೆಗಳು ಮುಚ್ಚುವುದಕ್ಕಿಂತ ಹೆಚ್ಚು ಪ್ರದರ್ಶಿಸುತ್ತವೆ ಎಂದು ಅಜ್ಜರ ಸಂಘದ ಆರೋಪ .
ಲಂಗೋಟಿ ಬಲು ಒಳ್ಳೆದಣ್ಣ ಒಬ್ಬರ
ಹಂಗಿಲ್ಲದೆ ಮಡಿಗೆ ಒದುಗುವುದಣ್ಣ

ಬಡವರಿಗಾಧಾರವಣ್ಣ ಈ ಲಂಗೋಟಿ
ಬೈರಾಗಿಗಳ ಭಾಗ್ಯವಣ್ಣ
ಕಡು ಕಳ್ಳರಿಗೆ ಗಂಡ, ಮಡಿ ಧೋತ್ರಗಳ ಮಿಂಡ
ನಡುಗುವ ಸಮಯಕ್ಕೆ ಮಡಿಗೆ ಒದಗುವಂಥ

ಜಿತ ಮನ ಸನ್ಯಾಸಿಗಳಿಗಿದೆ ಕೌಪೀನ
ವ್ರತವುಳ್ಳ ಬ್ರಹ್ಮಚಾರಿಗೆ ಮುಖ್ಯವು
ಅತಿಶಯವಿದು ಆಂಜನೇಯ ನಾರದರಿಗೆ
ಗತಿಯಿಲ್ಲದವರಿಗೆ ಮಿತವಾಗಿ ಇರುವಂಥ

ದುಡ್ಡು ಮುಟ್ಟದಂತೆ ದೊರಕುವ ವಸ್ತುವು
ದೊಡ್ಡ ಅರಣ್ಯದಿ ಭಯವಿಲ್ಲವು
ಹೆಡ್ಡರೆಂಬುವರೇನೊ ಲಂಗೋಟಿ ಜನರನ್ನು
ದೊಡ್ಡವರೆಂದು ವಂದಿಸುವರು ಯತಿಗಳ

ಮೋಕ್ಷಮಾರ್ಗಕೆ ಕಲ್ಪವೃಕ್ಷವೀ ಲಂಗೋಟಿ
ಭಿಕ್ಷಗಾರರಿಗೆಲ್ಲ ಅನುಕೂಲವು
ತತ್ ಕ್ಷಣದೊಳಗೆ ಕಾರ್ಯಗಳ ತೂಗಿಸಿ ಮಾನ
ರಕ್ಷಣೆಗೆ ಬಹು ರಮ್ಯವಾಗಿರುವಂಥ

ಮಡಿವಾಳರಿಗೆ ಶತ್ರು ಮಠದಯ್ಯಗಳ ಮಿತ್ರ
ಪೊಡವಿಯೊಳ್ ಯಾಚಕರಿಗೆ ನೆರವು
ದೃಢಭಕ್ತ ಬಲಿಚಕ್ರವರ್ತಿಗೋಸ್ಕರ ನಮ್ಮ
ಒಡೆಯ ಶ್ರೀ ಪುರಂದರವಿಠಲ ಧರಿಸಿದಂಥ

 

ಡೆಂಗು (ಡೆಂಗೆ) ಜ್ವರ


ಇತ್ತೀಚಿಗೆ  ಸುದ್ದಿಯಲ್ಲಿ ಇರುವ ವ್ಯಾಧಿ. ಇದು ವೈರಸ್ ನಿಂದ ಬರುವ ಕಾಯಿಲೆ .ರೋಗ ಪೀಡಿತ

ವ್ಯಕ್ತಿಯ ರಕ್ತ ಹೀರಿದ  ಈಡಿಸ್ ಜಾತಿಗೆ ಸೇರಿದ ಹೆಣ್ಣು ಸೊಳ್ಳೆ ಕಚ್ಚಿದರೆ ಬರುವ ಕಾಯಿಲೆ.


ಸೊಳ್ಳೆ ಕಡಿದು ನಾಲ್ಕರಿಂದ ಏಳು ದಿನಗಳಲ್ಲಿ ರೋಗ ಲಕ್ಷಣಗಳು ಕಂಡು ಬರುತ್ತವೆ.
ರೋಗ ಲಕ್ಷಣಗಳು

ಜ್ವರ ,ತಲೆ ನೋವು ,ಮೈಕೈ ನೋವು ,ಸಂಧಿ ನೋವು ,ಹೊಟ್ಟೆ ನೋವು ,ವಾಂತಿ ಮುಖ್ಯ

ಲಕ್ಷಣಗಳು.ಎಲುಬೇ ಒಡೆದು ಹೋಗುವಷ್ಟು ನೋವು ಇರುತ್ತಾದ್ದರಿಂದ ಬ್ರೇಕ್ ಬೋನ್ ಫೀವರ್

ಎಂದೂ ಈ ರೋಗವನ್ನು ಕರೆಯುವುದುಂಟು.ಕೆಲವರಿಗೆ ಮೈಮೇಲೆ ಕೆಂಪು ಬೀಳ ಬಹುದು.ಅದು

ತುರಿಕೆ ಉಂಟು ಮಾಡಲೂ ಬಹುದು.ತೀವ್ರ ತರ ರೋಗ ದಲ್ಲಿ ರಕ್ತ ಸ್ರಾವ ,ರಕ್ತದ ಒತ್ತಡ ಕುಸಿತ

ಉಂಟಾಗ ಬಹುದು.
                                         
                                                           ಡೆಂಗು ವಿನಲ್ಲಿ ಬಿದ್ದ ಕೆಂಪು

ಪರೀಕ್ಷಣಗಳು

ರಕ್ತದಲ್ಲಿ ಬಿಳಿ ಕಣಗಳು ,ಪ್ಲೇಟಿಲೆಟ್ ಕಣಗಳು ಕಮ್ಮಿಯಾಗಿರುತ್ತವೆ. ಡೆಂಗು ರೋಗದ ಕಾರ್ಡ್

ಟೆಸ್ಟ್ ಸಾಮಾನ್ಯವಾಗಿ ಎಲ್ಲೆಡೆ ಲಭ್ಯವಿರುತ್ತದೆ. ಇದು ರೋಗ ಲಕ್ಷಣ ಗಳನ್ನು ಗಮನಕ್ಕೆ

ತೆಗೆದುಕೊಂಡು ನಿರ್ದರಿಸಿದರೆ ವಿಶ್ವಾಸಾರ್ಹ .ಇದರಲ್ಲಿ NS1 ಆಂಟಿಜನ್ ರೋಗ ಲಕ್ಷಣಗಳು

ಕಂಡೊಡನೆ  ಪೋಸಿಟಿವ್ ಆಗಿರುವುದು.    IgM ಆಂಟಿಬಾಡಿ ನಂತರ ಬರುವುದು.ಕೊನೆಗೆ

ದಿನಗಳ ನಂತರ IgM  ಆಂಟಿಬಾಡಿ ಕಂಡು ಬಂದು ರೋಗ ಗುಣವಾದ ಮೇಲೂ ವರ್ಷಗಳ

ತನಕ ರಕ್ತದಲ್ಲಿ ಇರುವುದು.ಆದುದರಿಂದ IgG ಮಾತ್ರ ಪೊಸಿಟಿವ್ ಇದ್ದರೆ ಅದನ್ನು ಈಗಿನ

ಕಾಯಿಲೆಯ ಅಧಾರ ಆಗಿ ಪರಿಗಣಿಸುವುದು ಕಷ್ಟ.ಇದೇ ಅಂಶಗಳನ್ನು ಎಲಿಸಾ ಎಂಬ

ಪರೀಕ್ಷೆಯಲ್ಲಿ ಮಾಡುತ್ತಾರೆ ,ಇದು ಹೆಚ್ಚು ವಿಶ್ವಾಸಾರ್ಹ .ಈ ಪರೀಕ್ಷನವನ್ನೇ ಸರಕಾರವೂ

ಅಂಕಿ ಅಂಶಗಳಿಗೆ ಪರಿಗಣಿಸುತ್ತದೆ.

ರೋಗದ ಉಪಚಾರ
ಇದು ವೈರಸ್ ನಿಂದ ಉಂಟಾಗುವ ಕಾಯಿಲೆ .ಹೆಚ್ಚಿನವರಲ್ಲಿ ತನ್ನಿಂದ ತಾನೇ ಗುಣವಾಗುವುದು.

ಜ್ವರ ಮೈಕೈ ನೋವಿಗೆ ಪ್ಯಾರಸಿಟಮಾಲ್ ಮಾತ್ರೆ ಕೊಡುತ್ತಾರೆ. ದೈಕ್ಲೊಫೆನಕ್,ಇಬುಫ್ರೋಫೇನ್

ನಂತಹ  ಔಷಧಿಗಳು ಪ್ಲಾಟಿಲೆಟ್ ಕಣಗಳ ಮೇಲೆ ವ್ಯತಿರಿಕ್ತ  ಪರಿಣಾಮ ಬೀರುವುದರಿಂದ

ಅವುಗಳನ್ನು ದೂರವಿಡಬೇಕು.ಅತಿ ವಾಂತಿ ಇದ್ದರೆ ಡ್ರಿಪ್ ಮೂಲಕ ಆಹಾರ ಕೊಡುವರು.

ಆಂಟಿಬಯೋಟಿಕ್ ಗಳು ಪರಿಣಾಮ ಕಾರಿ ಅಲ್ಲ.ಚರ್ಮದಲ್ಲಿ ತೀವ್ರ ತುರಿಕೆ ಇದ್ದರೆ ಶಮನಕ್ಕೆ

ಮಾತ್ರೆ ಕೊಡುವರು.ರಕ್ತ ಸ್ರಾವ ಇದ್ದರೆ ಮತ್ತು ಪ್ಲಾಟಿ ಲೆಟ್ ಬಹಳ ಕಡಿಮೆ ಆದರೆ –(ಎಂದರೆ

ಘನ ಮಿಲಿ ಲೀ ಯಲ್ಲಿ ೧೦೦೦೦ ಕ್ಕಿಂತ ಕಡಿಮೆ- ) ಪ್ಲಾಟಿ ಲೆಟ್ ಕೊಡಬೇಕಾಗ ಬಹುದು.

ವಿಶ್ವ ಆರೋಗ್ಯ ಸಂಘ ದ ಮಾರ್ಗ ಸೂಚಿಯಂತೆ ರಕ್ತ ಸ್ರಾವ ಮುಂತಡೆಯಲು ಪ್ಲಾಟಿ ಲೆಟ್

ಕೊಡುವ ಅವಶ್ಯವಿಲ್ಲ .

ಪ್ಲಾಟಿಲೆಟ್ ಗಳ ಬಗ್ಗೆ ನನ್ನ ಬ್ಲಾಗ್ “ಪ್ಲಾಟಿಲೆಟ್  ಗಳೆಂಬ ರಕ್ತ ಸ್ಥಂಭಕ “ ಓದಿರಿ.

ಕೆಲವೊಮ್ಮೆ ಡೆಂಗು ಜ್ವರದಲ್ಲಿ ರಕ್ತ ನಾಳ ಗಳಿಂದ ನೀರು ಸೋರಿ ಹೊಟ್ಟೆ ,ಎದೆಗಳಲ್ಲಿ

ತು೦ಬುವುದಲ್ಲದೆ ರಕ್ತ ದೊತ್ತದ ಕುಸಿದು ರೋಗಿ ಅಪಾಯ ಕ್ಕೊಳಗಾಗುವನು .ಇಂತಹವರನ್ನು

ತೀವ್ರ ನಿಗಾ ದ ಲ್ಲಿ ಇಟ್ಟು ಉಪಚರಿಸುವರು.ಆದರೆ ಇಂತಹ ಸಂಭವ ಬಹು ಕಡಿಮೆ.

ಡೆಂಗು ಜ್ವರ  ಒಬ್ಬರಿಂದ ಒಬ್ಬರಿಗೆ ನೇರವಾಗಿ ಹರಡುವುದಿಲ್ಲ .ಒಮ್ಮೆ ಡೆಂಗು ಬಂದರೆ ಆ

ಜಾತಿಯ ಡೆಂಗು ಪುನಃ ಬರುವುದು ಕಮ್ಮಿ.ಆದರೆ ವೈರಾಣುಗಳು ಆಗಾಗ್ಗೆ ವೇಷ

ಬದಲಿಸುತ್ತಿರುವುದರಿಂದ  ಇನ್ನೊಮ್ಮೆ ಬರದು ಎನ್ನಲಾಗದು.ಪಥ್ಯ ದ ಅಗತ್ಯ ಇಲ್ಲ.

ರೋಗ ಬರದಂತೆ ಚುಚ್ಚು ಮದ್ದು ಇಲ್ಲ. ಸೊಳ್ಳೆ ಕಚ್ಚದಂತೆ ನೋಡಿ ಕೊಳ್ಳಬೇಕು.

ಈಡಿಸ್ ಸೊಳ್ಳೆಯ ಬಗ್ಗೆ ನನ್ನ ಬ್ಲಾಗ್ ಓದಿರಿ.

ಗುರುವಾರ, ಜುಲೈ 11, 2013

ಈಡಿಸ್ ಈಜಿಪ್ಟಿಯಿ ಸೊಳ್ಳೆ

                                                         
ಈಡಿಸ್ ಸೊಳ್ಳೆ


ಈ ಸೊಳ್ಳೆ  ದೇವರಿಂದ ಸೃಷ್ಟಿಸಲ್ಪಟ್ಟು ಸ್ವಚ್ಚಂದವಾಗಿ ಬದುಕಿಕೊಂಡು ಇತ್ತು. ಯಾರಿಗೂ ಅದರ ಇರುವಿನ ಅರಿವು ಇರಲಿಲ್ಲ.

ಹೂವಿನ ಮಕರಂದ ಅವುಗಳ ಆಹಾರ. ಆದರೆ ಹೆಣ್ಣು  ಸೊಳ್ಳೆಗೆ ಮೊಟ್ಟೆಗಳನ್ನು ಪೋಷಿಸಲು  ಸಸ್ತನಿಗಳ 

ರಕ್ತ ಬೇಕು. ಅದಕ್ಕೆ ಸಿಕ್ಕುವುದು ಬಡಪಾಯಿ ಮನಷ್ಯರು. ಸೊಳ್ಳೆಗಳಲ್ಲಿ ಇದು ಮೇಲ್ಜಾತಿಯದು ಎನ್ನ ಬಹುದು.ಏಕೆಂದರೆ 

ಅದಕ್ಕೆ ಕೊಳಕು ನೀರು ಆಗದು .ಶುದ್ದ ನೀರೆ ಬೇಕು.ಕ್ಲೋರಿನೇಟೆದ್  ನೀರೂ ಆಗಬಹುದು.ಡಬ್ಬ ,ಹೂ ಚಟ್ಟಿ ,ಮರದ ಪೊಟರೆ

ಟಾಯ್ಲೆಟ್ ಗುಂಡಿ ಯಂತಹ ಕಡೆ ನಿಂತ ಶುದ್ದ  ನೀರಿನಲ್ಲಿ ಮೊಟ್ಟೆ ಇಡುವುದು.

ಮೊಟ್ಟೆ ,ಲಾರ್ವಾ ಹಂತ ದಾಟಿ ಸೊಳ್ಳೆ ರೂಪ ಧರಿಸುವುದು.ಹೆಣ್ಣು ಸೊಳ್ಳೆ ಮಾತ್ರ ನಮಗೆ ಕಚ್ಚುವುದು. ಅದೂ 

ತನ್ನ ಮೊಟ್ಟೆಗಳ ಆರೈಕೆಗಾಗಿ. ಈಡಿಸ್ ಸೊಳ್ಳೆ  ಸಂಗೀತ ಪ್ರೇಮಿ ಅಲ್ಲ. ಆದುದರಿಂದ ಅನಾಫಿಲಿಸ್ ಸೊಳ್ಳೆಯಂತೆ 

ನಮ್ಮ ಕಿವಿಯ  ಹತ್ತಿರ  ಆಲಾಪನೆ ಮಾಡುವುದಿಲ್ಲ.ಹಲವರು ಸೊಳ್ಳೆ ಕಡಿತವನ್ನಾದರೂ ಸಹಿಸಿಯಾರು ,ಆದರೆ 

ಅದರ ಸಂಗೀತವನ್ನಲ್ಲ.ನಸುಕು ಮತ್ತು ಸಂಧ್ಯೆ  ಇದು ರಕ್ತಕ್ಕಾಗಿ ಧಾಳಿ ಇಡುವುದು.ಮುಗಿಲು ಮತ್ತು ರಾತ್ರಿ ಮಂದ 

ಬೆಳಕು ಇದ್ದರೆ  ವೇಳೆ ತಪ್ಪಿ  ಕಡಿಯ ಬಹುದು. ಜಯಧ್ರಥನ ನೆನಪಾಗುತ್ತಿದೆಯೇ?

ಆದರೆ ಎಲ್ಲರೂ ತನ್ನ ಇರುವಿಕೆಯನ್ನು ಕಡೆಗಣಿಸಿದುದರಿಂದ  ಈಗ  ಈ ಸೊಳ್ಳೆ ತನ್ನ ಕಡಿತದೊಂದಿಗೆ 

ಡೆ೦ಗು ವೈರಸ್ ನ್ನು ಉಚಿತ ಕೊಡುಗೆ ಯಾಗಿ ಕೊಡುತ್ತಿದೆ. ಇದು(ದರ) ಕಡಿತದ ವ್ಯಾಪಾರ .ಡೆಂಗು ರೋಗಾಣುಗಳನ್ನು 

ಈಡಿಸ್ ಸೊಳ್ಳೆಗಳು ಉತ್ಪತ್ತಿ ಮಾಡಲಿಲ್ಲ . ಮಾನವನ ರಕ್ತದಿಂದಲೇ ಅದಕ್ಕೆ ಬಂದ ಬಳುವಳಿ.ಅದು 

ನಿಸರ್ಗದ ಆಣತಿಯಂತೆ ಮನುಷ್ಯನನ್ನು ಕಚ್ಚಿದಾಗ ವೈರಸ್ ಹರಡುವುದು.

ಈಡಿಸ್ ಸೊಳ್ಳೆ ತುಂಬಾ ಎತ್ತರ ,ದೂರ ಹಾರದು . ಮನುಷ್ಯನ ಕಾಲಿಗೆ ,ಕುರ್ಚಿಗಳ ರಂಧ್ರದ ಮೂಲಕ 

ತೊಡೆ  ಬಾಗಕ್ಕೆ ಕಚ್ಚುವುದು ಹೆಚ್ಚು.

ಡೆ೦ಗು ,ಚಿಕೂನ್ಗುನ್ಯಾ ಕಾಯಿಲೆ ಪ್ರಸಾರದಿಂದ ಪ್ರಸಿದ್ದಿಗೆ ಬಂದ ಈ ಸೊಳ್ಳೆಗೆ ಮನೆ ಸುತ್ತ ನೀರು ನಿಲ್ಲದಂತೆ ಮಾಡಿದರೆ 

ಒಂದು ವೇಳೆ ನೀರು ನಿಲ್ಲಲೇ ಬೇಕಾದರೆ ಗಪ್ಪಿ ಮೀನುಗಳನ್ನು  ಸಾಕಿದರೆ ಹತೋಟಿಯಲ್ಲಿ ಇದ ಬಹುದು.

ಎಲ್ಲೆಡೆ ನೀರು ನಿಲ್ಲುವ ಕರಾವಳಿ ಜಿಲ್ಲೆಯಲ್ಲಿ ಇದು ಎಷ್ಟು ಸಾಧ್ಯ?
(ಆಫ್ರಿಕಾದಲ್ಲಿ ಹಳದಿ ಜ್ವ್ರರ ಹರಡುವುದೂ ಇದೇ ಸೊಳ್ಳೆ)

ಬುಧವಾರ, ಜುಲೈ 10, 2013

ಪ್ರೊಫೆಸ್ಸರ್ ಡಾ ಕೌಲ್ ಗುಡ್

ನಾನು ಎಂ ಬಿ ಬಿ ಎಸ  ಓದಿದ್ದು ಕೆ ಎಂ ಸಿ ಹುಬ್ಬಳ್ಳಿ ಎಂದರೆ ಈಗಿನ ಕಿಮ್ಸ್ ನಲ್ಲಿ . ೧೯೭೬ -೮೧. ಅದು ಈ ಸಂಸ್ಥೆಯ ಸುವರ್ಣ

ಯುಗ ಅಂತ್ಯವಾಗುತ್ತಿದ್ದ ದಿನಗಳು.ಉತ್ತರ ಕರ್ನಾಟಕದ ಹೆಮ್ಮೆಯ ಮೆಡಿಕಲ್  ಕಾಲೇಜ್.ಅದರ ಕಟ್ಟಡಗಳು ಖ್ಯಾತ

ಸಿವಿಲ್ ಇಂಜಿನಿಯರ್ ಪ್ರೊಫ್  ಅಡ್ಕೆಯವರ ಮಾರ್ಗದರ್ಶನದಲ್ಲಿ ನಿರ್ಮಿತವಾಗಿದ್ದು ಇಡೀ ಕ್ಯಾಂಪಸ್ ನೂರಾರು ಎಕರೆ

ಪ್ರದೇಶದಲ್ಲಿ ಹರಡಿದೆ.ಹುಬ್ಬಳ್ಳಿ ಯಾ ವಿದ್ಯಾ ನಗರದ ಈ ಜಾಗ ಹೂ ತೋಟಗಳಿಂದ ತುಂಬಿ ನೋಡಲು ನಯನ ಮನೋಹರ.

ದಾರಿಯುದ್ದಕ್ಕೂ ಮೇ ಫ್ಲವರ್ ಮತ್ತು ಗುಲ್ ಮೊಹರ್ ಗಿಡಗಳು ಸರತಿಯಲ್ಲಿ ವರುಷವಿಡೀ ಹೂಗಳಿಂದ ಕಂಗೊಳಿಸುತ್ತಿದ್ದವು.

                                             ಕಾಲೇಜ್ ಕಟ್ಟಡದ ವಿಹಂಗಮ ನೋಟ                                                                                            

ಕ್ಯಾಂಪಸ್ ರಸ್ತೆಗಳು


ಕಾಲೇಜ್ ನ  ಹೆಬ್ಬಾಗಿಲು ಪ್ರವೇಶಿಸುವಾಗ ರೋಮಾಂಚನ ಆಗುತ್ತಿತ್ತು

ನಾನು ಅಲ್ಲಿ ಕಲಿಯುತ್ತಿದ್ದ ವೇಳೆ ಕೌಲ್ಗುಡ್ ಸಹೋದರರೆಂದು ಪ್ರಖ್ಯಾತರಾದ  ಡಾ ಎಸ ಆರ್ ಕೌಲ್ ಗುಡ್ ಮತ್ತು 

ಎಸ ಏನ್ ಕೌಲ್ ಗುಡ್ ನಮ್ಮ ಪ್ರಾಧ್ಯಾಪಕರಾಗಿದ್ದ್ದರು. ಮೊದಲನೆಯವರು ಸರ್ಜರಿ ವಿಭಾಗದಲ್ಲಿ ಇದ್ದರೆ 

ಇನ್ನೊಬ್ಬರು  ಗೈನಕೊಲೋಜಿ ಪ್ರೊಫೆಸ್ಸರ್.ಸರ್ಜರಿಯವರು ಸ್ತಿತ ಪ್ರಜ್ನ ,ಮಿತ ಭಾಷಿ .ಗ್ಯ್ನೆನಕೊಲೋಜಿ ಯವರು 

ಭಾವ ಜೀವಿ ,ಮಾತುಗಾರ .ಇಬ್ಬರೂ ಅತ್ಯುತ್ತಮ ಅಧ್ಯಾಪಕರೂ ,ಶಸ್ತ್ರ ಚಿಕಿತ್ಸಾ ನಿಪುಣರೂ ಆಗಿದ್ದರು.ನನ್ನ 

ಭಾಗ್ಯವೆಂದರೆ ಇವರಿಬ್ಬರ ಯೂನಿಟ್ ನಲ್ಲಿ ಮೊದಲು ವಿದ್ಯಾರ್ಥಿಯಾಗಿ ,ನಂತರ  ಹೌಸ್ ಸರ್ಜನ್ ಆಗಿ 

ಕೆಲಸ ಮಾಡುವ ಸುಯೋಗ ಲಭಿಸಿದ್ದುದು.ಇವರಲ್ಲಿ  ಡಾ ಎಸ ಆರ್ ಕೌಲ್ ಗುಡ್  ಈಗಲೂ ಧಾರವಾಡದಲ್ಲಿ 

ಸೇವೆ ಸಲ್ಲಿಸುತ್ತಿದ್ದಾರೆ.ಸರಳ ಜೀವಿಗಳು ,ಶುದ್ದ ಹಸ್ತರೂ ಆಗಿದ್ದ  ಇವರಲ್ಲಿ ಇದ್ದ ವಾಹನ ಸ್ಕೂಟರ್.

ಗ್ಯ್ನೆಕೊಲೋಜಿ  ಕೌಲ್ ಗುಡ್ ಅವರ  ಓ ಪಿ ಡಿ ಬೆಳಿಗ್ಗೆ ಎಂಟರಿಂದ ಆರಂಭವಾಗಿ   ಸಾಯಕಾಲ  ಮೂರಾದರೂ 

ಮುಗಿಯುತ್ತಿರಲಿಲ್ಲ.ಎಲ್ಲಾ ರೋಗಿಗಳಿಗೂ ಅವರೇ ಆಗ ಬೇಕು .ಎಷ್ಟು ಹೊತ್ತು ಕಾಯಲೂ ತಯಾರಿದ್ದರು.ಓ ಪಿ ಡಿ ಮುಗಿಸಿ 

ಮನೆಗೆ ತೆರಳಿ ಊಟದ ಶಾಸ್ತ್ರ ಮುಗಿಸಿ  ರೌಂಡ್ಸ್ ಗೆ ಬರುತ್ತಿದ್ದರು .ಅಶ್ಟರಲ್ಲಿ  ಪಿ.ಜಿ . ಮತ್ತು  ಇಂಟರ್ನ್ಗಳು 

ಅಡ್ಮಿಟ್ ಆದ ಕೇಸುಗಳ  ವಿವರ ರಡಿ ಮಾಡಿ ಇದ ಬೇಕು.ಸಣ್ಣ ಲೋಪಗಲಿದ್ದರೂ  ಚಾವಣಿ ಹಾರುವಂತೆ 

ಆವೇಶದಿಂದ ಬೈಯುವರು.ಅದೇ  ವಿದ್ಯಾರ್ಥಿಗಳು ಕಲಿಯುವಾಗ ಅಕಾಸ್ಮಾತ್ ದೊಡ್ಡ ತಪ್ಪುಗಳಾದರೆ ತಾಳ್ಮೆಯಿಂದ 

ಹೇಳಿಕೊಟ್ಟು ತಿದ್ದುತ್ತಿದ್ದರು.ಅವರ ರೋಗಿಗಳು ಸ್ತ್ರೀಯರು ಮಾತ್ರ .ಎಲ್ಲಿಯಾದರೂ ಗಂಡಂದಿರು ಹೆಂಡತಿಗೆ 

ರಕ್ತ ಕೊಡಲು ನಿರಾಕರಿಸಿದರೆ ಸಿಟ್ಟಿಗೆದ್ದು ಹೊಡೆದದ್ದೂ ಉಂಟು.ಇಲ್ಲವಾದರೆ ನಾನೇ ರಕ್ತ ಕೊಡುತ್ತೇನೆ ಎಂದು ಕೊಟ್ಟದ್ದು 

ನೂರಾರು ಭಾರಿ.ಇವರು ಎಷ್ಟು ಶುದ್ದ ಹಸ್ತರೆಂದರೆ  ಕುಟುಂಬ ಯೋಜನಾ ಶಸ್ತ್ರ ಚಿಕಿತ್ಸೆ ಮಾಡಿದ್ದಕ್ಕೆ ಸರಕಾರ 

ಕೊಡ ಮಾಡುತ್ತಿದ್ದ ಹಣವನ್ನು ತೆಗೆದು  ಕೊಳ್ಳದೇ ಬಡ ರೋಗಿಗಳ  ನಿಧಿಗೆ ಸಮರ್ಪಿಸುತ್ತಿದ್ದರು. ಖ್ಯಾತ ಲೇಖಕಿ 

ಸುಧಾ ಮೂರ್ತಿಯವರ ಅಕ್ಕ ಸುನಂದಾ ಕುಲಕರ್ಣಿ ಇವರ ವಿಭಾಗ ದಲ್ಲಿ ಲೆಕ್ಚರರ್ ಆಗಿ ಕೆಲಸ  ಮಾಡುತ್ತಿದ್ದರು.

ಇವರು ಪಾಠ ಮಾಡುವಾಗ  I may not be that good but I am Koulgud ಎಂದು ತಮಾಷೆಗೆ ಹೇಳುತ್ತಿದ್ದರು.ಇವರು 

ಮೈಸೂರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತದಿಂದ ನಿಧನ ಹೊಂದಿದರು.ಹಗಲು ರಾತ್ರಿಯೆನ್ನದೆ 

ವಿಶ್ರಾನ್ತಿಯಿಲ್ಲದೆ  ಬಡ ರೋಗಿ ಮತ್ತು (ಬಡ) ವಿದ್ಯಾರ್ಥಿಗಳ ಸೇವೆಯಲ್ಲಿ ಜೀವ ತೇದ ಅವರ ನೆನಪಿಗೆ 

ವಂದನೆಗಳು.

ಇಬ್ಬರು ಕೌಲ ಗುಡ್ ಇದ್ದುದರಿಂದ ಕನ್ಫ್ಯೂಷನ್ ಇರುತ್ತಿತ್ತು.ಅದಕ್ಕಾಗಿ ಅವರನ್ನು ಪಿ.ಆರ್  ಮತ್ತು ಪಿ ವಿ ಕೌಲ್ ಗುಡ್ ಎಂದೂ 

ವಿದ್ಯಾರ್ಥಿಗಳು ಗುರುತಿಸುತ್ತಿದ್ದರು.

ಬಾಲಂಗೋಚಿ:  ಕ್ಯಾಲಿಕಟ್ ಮೆಡಿಕಲ್ ಕಾಲೇಜ್ ನಲ್ಲಿ ಇಬ್ಬರು  ಡಾಕ್ಟರ  ಭಟ್ ಇದ್ದರು.ಒಬ್ಬರು  ಯುರೋಲೋಜಿ 

ವಿಭಾಗದಲ್ಲಿ ಇದ್ದಾರೆ ಇನ್ನೊಬ್ಬರು ಕಣ್ಣಿನ ತಜ್ಞರು. ಆದ್ದರಿಂದ  ನೀವು ಡಾ ಭಟ್ ರನ್ನು ವಿಚಾರಿಸಿದರೆ  "ನಿನ್ಗಳುಕ್ಕು 

ಮೂತ್ರ ಭಟ್ ವೇನೋ ಅಲ್ಲ ನೇತ್ರ ಭಟ್ ವೇನೋ (ನಿಮಗೆ ಮೂತ್ರ ಭಟ್ ಬೇಕೋ ಅಲ್ಲ ನೇತ್ರ ಭಟ್ ಬೇಕೋ?)

ಎಂದು ಅಲ್ಲಿಯ ಸಿಬ್ಬಂದಿ ಕೇಳುತ್ತಿದ್ದರು!

ಭಾನುವಾರ, ಜುಲೈ 7, 2013

ಹಲಸಿನ ಮೇಳ

                                                 

ಈದಿನ  ಅಡ್ಯನಡ್ಕದಲ್ಲ್ಲಿ  ಹಲಸಿನ ಮೇಳಕ್ಕೆ  ಹೋಗಿದ್ದೆ. ಬಂಧು  ಮುಳಿಯ ವೆಂಕಟ ಕೃಷ್ಣ ಶರ್ಮ ಮೊದಲೇ 

ಇಂತಹ ಕಾರ್ಯಕ್ರಮದ ಬಗ್ಗೆ ಸೂಚನೆ ನೀಡಿದ್ದರು. ಅವರು ಪ್ರಗತಿಪರ ಕೃಷಿಕ. ವೈಜ್ಞಾನಿಕ ವಾಗಿ  ದೊಡ್ಡ ಮಟ್ಟದಲ್ಲಿ 

ಹಲಸಿನ ಕೃಷಿ ಕೈಕೊಂಡಿದ್ದಾರೆ.ಕಳೆದ ವರ್ಷ ನ್ಯಾಚುರಲ್ ಐಸ್ ಕ್ರೀಂ ನವರಿಗಾಗಿ ೨೭ ಟನ್ ಹಲಸಿನ ಹಣ್ಣು 

ಮಾರಾಟ ಮಾಡಿದ್ದಾರೆ.ಅಡಿಕೆ ಪತ್ರಿಕೆ ,ವಾರನಾಶಿ ಪ್ರತಿಸ್ತಾನ  ಗಳ ಪ್ರಯೋಜಕತೆ ಯಲ್ಲಿ  ಖ್ಯಾತ ಪರಿಸರ ,ಕೃಷಿ ತಜ್ಞ 

ಶ್ರೀ  ಪಢ್ರೆಯ ವರ  ಮುಂದಾಳುತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಜಡಿ ಮಳೆಯನ್ನೂ ಲೆಕ್ಕಿಸದೆ  ಸಾವಿರಾರು ಮಂದಿ 

ಆಸಕ್ತರು ಬಂದಿದ್ದರು.

ಶ್ರೀ   ಪಢ್ರೆ

ಹಲಸು ಒಂದು ಕಲ್ಪ ವೃಕ್ಷ .ಅದರ ಎಲೆಯನ್ನು ದೊ ನ್ನೆ ತಯಾರಿಸಲು, ಕಡುಬು ಸುತ್ತಲು ,ಕಟ್ಟಿಗೆ ಹೋಮಕ್ಕೆ ,ಮರ ಬಾಗಿಲು 

ಪೀತೊಪಕರಣ  ತಯಾರಿಸಲು,  ಎಳೆಯ ಹಲಸಿನ ಕಾಯಿ ಪಲ್ಯಕ್ಕೆ ,ಬಲಿತ ಕಾಯಿ ಪಲ್ಯ,ದೋಸೆ ,ಚಿಪ್ಸ್ ,ಹಪ್ಪಳ ಇತ್ಯಾದಿ 

ಮಾಡಲು ಹಣ್ಣು ತಿನ್ನಲು ,ಪಾಯಸಕ್ಕೆ ,ಸುಟ್ಟವು, ಹಣ್ಣನ್ನು ಕಾಯಿಸಿ  ಪೆರಟಿ ಮಾಡಿ  ಕಾದಿರಿಸಿ ಪಾಯಸ ಮಾಡಿ ಇಲ್ಲವೇ ಹಾಗೆಯೇ 

ತಿನ್ನುತ್ತಾರೆ. ಇನ್ನು ಹಲಸನ್ನು ಉಪ್ಪಿನಲ್ಲಿ ಹಾಕಿ  ಶೇಖರಿಸಿದರೆ  ಅದು ಆಪತ್ಭಾಂಧವ ತರಕಾರಿ , ಅದರಿಂದ ಪಲ್ಯ ,ರೊಟ್ಟಿ

ಉಂಡಲ ಕಾಳು ಎಂಬ ತಿನಿಸು ಮಾಡುತ್ತಾರೆ.ಹಲಸಿನ  ಬೀಜವೂ ಸಸಾರಜನಕ ಯುಕ್ತ  ಪೌಸ್ತಿಕ ವಸ್ತು.ಅದನ್ನೂ 

ಪಲ್ಯ ,ಹೋಳಿಗೆ ಮಾಡಲು ಬಳಸುತ್ತಾರೆ.ಹಿಂದಿನ ಕಾಲದಲ್ಲಿ  ಮನೆ ಹೆಣ್ಣು ಮಕ್ಕಳು ಹಲಸಿನ  ಬೀಜ ಕೊಟ್ಟು 

ಒಲಿ ಚಾಪೆ ,ತಡ್ಪೆ ಇತ್ಯಾದಿಗಳನ್ನು ಬಾರ್ಟರ್ ಪದ್ದತಿಯಲ್ಲಿ ಕೊಳ್ಳುತ್ತಿದ್ದರು.ಹಲಸಿನ ಮಯಣವನ್ನು ಒಂದು ಕೋಲಿನ ತುದಿಗೆ 

ಉಂಡೆಯಾಗಿ ಶೇಖರಿಸಿ ಪಾತ್ರೆಗಳ  ತೂತು ಗಳನ್ನ ಮುಚ್ಚಲು ಬಿಸಿ ಮಾಡಿ ಬಳಸುತ್ತಿದ್ದರು .






ಎಸ್ಟೋ ಹಲಸಿನ ಹಣ್ಣುಗಳು ಕೊಳೆತು ಹೋಗುತ್ತವೆ. ಅವುಗಳ ಮೌಲ್ಯ ವರ್ಧನೆ ,ಶೇಖರಣೆ 

ಇತ್ಯಾದಿಗಳ ಬಗ್ಗೆ  ಉಪಾನ್ಯಾಸ ,ಪ್ರಾತ್ಯಕ್ಷಿಖೆ  ಗಳು ಇದ್ದವು .ಮದ್ಯಾಹ್ನ  ಊಟಕ್ಕೆ  ಹಲಸಿನ ಗಸಿ.

ಮಜ್ಜಿಗೆ ಹುಳಿ, ಹಲಸಿನ ಪಾಯಸ ,ಹಲಸಿನ ಹಣ್ಣು ,ಕೊನೆಗೆ ಎಲ್ಲರಿಗೂ  ನ್ಯಾಚುರಲ್ ಐಸ್ ಕ್ರೀಂ ಅವರ 

ಸ್ವಾದಿಸ್ಥ್ಯ ಮಾಯ ಹಲಸಿನ ಹಣ್ಣಿನ ಐಸ್ಕ್ರೀಂ.

ಹಲಸಿನ  ಹಣ್ಣಿನ  ವೈಜ್ಞಾನಿಕ ಹೆಸರು  ಆರ್ಕರ್ಟೋಕಾರ್ಪಸ್ ಹಿಟಿರೋಫಿಲಾಸ್.

ಅದರ ಲ್ಲಿ  ಇರುವ  ಅಹಾರಾಂಶಗಳು 

     
                                  
ಹಲಸಿನ ಕಾಯಿಯ  ಅಹಾರಾ೦ಶಗಳು 

Nutritional value per 100 g (3.5 oz)
Energy397 kJ (95 kcal)
Carbohydrates23.25 g
Sugars19.08 g
Dietary fiber1.5 g
Fat0.64 g
Protein1.72 g
Vitamin A equiv.5 μg (1%)
beta-carotene61 μg (1%)
lutein and zeaxanthin157 μg
Thiamine (vit. B1)0.105 mg (9%)
Riboflavin (vit. B2)0.055 mg (5%)
Niacin (vit. B3)0.92 mg (6%)
Pantothenic acid (B5)0.235 mg (5%)
Vitamin B60.329 mg (25%)
Folate (vit. B9)24 μg (6%)
Vitamin C13.7 mg (17%)
Vitamin E0.34 mg (2%)
Calcium24 mg (2%)
Iron0.23 mg (2%)
Magnesium29 mg (8%)
Manganese0.043 mg (2%)
Phosphorus21 mg (3%)
Potassium448 mg (10%)
Sodium2 mg (0%)
Zinc0.13 mg (1%



ಶನಿವಾರ, ಜುಲೈ 6, 2013

ಸ್ಟ್ರೋಕ್ ಅಥವಾ ಮೆದುಳಿನ ಆಘಾತ

ನಮ್ಮ ಶರೀರದ ಸಕಲ ಕಾರ್ಯಗಳನ್ನು ನಿಯಂತ್ರಿಸುವುದು ಮೆದುಳು. ದೊಡ್ಡ ಮೆದುಳಿನಲ್ಲಿ ಎಡ ಮತ್ತು ಬಲ ಎಂಬ ಎರಡು

ಭಾಗಗಳಿರುತ್ತವೆ.ಎಡದ ಮೆದುಳು ಶರೀರದ ಬಲದ ಭಾಗವನ್ನೂ ,ಮಾತನ್ನೂ ನಿಯಂತ್ರಿಸುತ್ತದೆ.ಬಲದ ಭ್ಹಾಗ  ಶರೀರದ ಎಡ

ಪಾರ್ಶ್ವವನ್ನು ನಡೆಸುತ್ತದೆ.ಮೆದುಳಿನ ಮುಂಬಾಗದಲ್ಲಿ ಚಲನೆಯ ಕೇಂದ್ರ ಇದ್ದರೆ ಪಾರ್ಶ್ವ ಶ್ರವಣ ,ಭಾವನೆ ಮತ್ತು ,ಸ್ಪರ್ಶದ

ಜ್ಞಾನ ಶೇಖರಿಸಿ ನಿಯಂತ್ರಿಸುತ್ತದೆ..ಹಿಂದಿನ ಭಾಗದಲ್ಲಿ ದೃಷ್ಟಿ ಗ್ರಹಣ ಕೇಂದ್ರ ಇದೆ.



ಮೆದುಳಿನ ಯಾವುದೇ ಭಾಗಕ್ಕೆ ರಕ್ತ ಸಂಚಾರ ಧಿಡಿರನೆ ವ್ಯತ್ಯಯವಾದರೆ ಸ್ಟ್ರೋಕ್ ಅಥವಾ ಮೆದುಳಿನ ಆಘಾತ 

ಸಂಭವಿಸುತ್ತದೆ.  ಅದು ಎಡ ಭಾಗದ ಚಲನ ಕೇಂದ್ರ ಕ್ಕಾದರೆ (ಮೋಟಾರ್ ಏರಿಯ )ಬಲ ಭಾಗದ ಪಾರ್ಶ್ವ ವಾಯು 

ಉಂಟಾಗುವುದು.ಮಾತೂ ನಿಲ್ಲ ಬಹುದು.ಮೆದುಳಿನ ಹಿಂಬಾಗ ದ ರಕ್ತ ಸಂಚಾರ ಚ್ಯುತಿಯಾದರೆ ಕಣ್ಣು ಸರಿಯಿದ್ದರೂ 

ದೃಷ್ಟಿ ಹೋಗುವುದು.ಇದನ್ನು ಕಾರ್ಟಿಕಲ್  ಬ್ಲೈಂಡ್ ನೆಸ್ ಎನ್ನುವರು.

ಸ್ಟೋಕ್ ಗೆ ಕಾರಣಗಳು

ಅತಿ ರಕ್ತದ ಒತ್ತಡ ,ಸಕ್ಕರೆ ಕಾಯಿಲೆ ,ಹೃದಯ ಕಾಯಿಲೆಗಳು ,ಕೆಲವೊಮ್ಮೆ ಜನ್ಮತಾ 

ಮೆದುಳಿನ ರಕ್ತ ನಾಳಗಳ  ರಚನಾ ಕೊರತೆಗಳು ಕಾರಣವಾಗ ಬಹುದು.

ರೋಗ ಲಕ್ಷಣಗಳು. 

 ಧಿಡೀರನೆ ಒಂದು ಪಾರ್ಶ್ವದಲ್ಲಿ ಬಲವಿಲ್ಲದೆ ಆಗುವುದು.ಮಾತು ತೊದಲುವುದು, ಮಾತು 

ಇಲ್ಲದಾಗುವುದು,ತಲೆನೋವು, ಅಪಸ್ಮಾರ ಮತ್ತು ಪ್ರಜ್ಞೆ ತಪ್ಪುವುದು .ರಕ್ತ ಸಂಚಾರ  ತೊಡಕಾದ  ಭಾಗವನ್ನು ಹೊಂದಿ 

ಕೊಂಢು ರೋಗ ಲಕ್ಷಣ ಇರುತ್ತದೆ.

ಪರೀಕ್ಷೆಗಳು   

ವೈದ್ಯರು ರೋಗಿಯ  ಪರೀಕ್ಷೆ ಮಾಡಿ  ಸ್ಟ್ರೋಕ್ ನ   ಸಂಭವನೀಯ ಕಾರಣ ಮತ್ತು ಅದು ಆಕ್ರಮಿಸಿದ ಮೆದುಳಿನ ಭಾಗವನ್ನು 

ನಿರ್ಧರಿಸುತ್ತಾರೆ.ಸಾಮಾನ್ಯ ದೇಹ ಸ್ತಿತಿ  ,ಬಿ.ಪಿ. ರಕ್ತದ  ಸಕ್ಕರೆ ಪ್ರಮಾಣ ಇತ್ಯಾದಿ ಪರೀಕ್ಷಿಸುತ್ತಾರೆ.

ಮೆದುಳಿನ  ಸ್ಕ್ಯಾನ್  (ಸಿ.ಟಿ. ಅಥವಾ ಎಂ ಅರ ಐ ) ಮಾಡಿ ಮೆದುಳಿನಲ್ಲಿ  ಆದುದು ರಕ್ತ  ಹೆಪ್ಪುಗಟ್ಟುವಿಕೆಯೋ 


ಅಲ್ಲಾ  ರಕ್ತ ಸ್ರಾವವೋ ,ಮತ್ತು ಅದು ಆದ ಭಾಗ, ಅದರ ತೀವ್ರತೆ  ನಿಶ್ಚಯಿಸುತ್ತಾರೆ.


ಮೆದುಳಿನ ರಕ್ತ ಸ್ರಾವ  (ಸಿಟಿ ಸ್ಕ್ಯಾನ್ )



ಮೆದುಳಿನ ರಕ್ತ  ಹೆಪ್ಪುಗಟ್ಟುವಿಕೆ.

ರಕ್ತ ದ ಹೆಪ್ಪನ್ನು ತೆಗೆಯುವ ಚಿಕಿತ್ಸೆ ಈಗೆ ಇದೆ .ಆದರೆ ಕೂಡಲೇ ಆಸ್ಪತ್ರೆ ಗೆ ಬರಬೇಕು.ವೈದ್ಯರು ರಕ್ತ ಹೆಪ್ಪು ನಿರೋಧಕ 

ಔಷಧಿಗಳನ್ನು ನೀಡುವರು.ರಕ್ತ ಸ್ರಾವ  ಕ್ಕೆ  ಚಿಕಿತ್ಸೆ ಬೇರೆ.

ಮುಖ್ಯವಾಗಿ ಇಲ್ಲ್ಲಿ ಕಾಯಿಲೆ  ಇರುವುದು ಮೆದುಳಿನಲ್ಲಿ .ಅದಕ್ಕೆ ಪಾರ್ಶ್ವ ವಾಯು ಯಾದ ಅಂಗಕ್ಕೆ ಔಷಧಿ ಹಾಕಿ ಪ್ರಯೋಜನ 

ಇಲ್ಲ. ಮೇನ್  ಫ್ಯೂಸ್ ಹೋದರೆ ಬಲ್ಬ್ ಬದಲಾಯಿಸಿ ಪ್ರಯೋಜನವಿಲ್ಲ.ಆದರೆ ಮೆದುಳು ಅಘಾತದಿಂದ ಹೊರ ಬರುವ ತನಕ 

ಬಲ ಹೀನತೆಯಿರುವ ಅಂಗಾಂಗಗಳಿಗೆ ವ್ಯಾಯಾಮ ಕೊಡಬೇಕು .ಇಲ್ಲದಿದ್ದರೆ  ಅವು  ಕೆಲಸವಿಲ್ಲದೇ ಕ್ಷೀಣಿಸಿ ಮುಂದೆ 

ಮೆದುಳು ಸರಿಯಾದರೂ ತಾವು ಕೆಲಸ ಮಾಡ ಲೊಲ್ಲವು.ಅದನ್ನೇ ಪಿಸಿಯೋತೆರಪಿ ಎನ್ನುವುದು.
ಪಾರ್ಶ್ವ ವಾಯು ಅಥವಾ ಶರೀರದ ಒಂದು ಬದಿ ಬಲ ಕಡಿಮೆ ಒಂದು ರೋಗ ಲಕ್ಷಣ ವೇ ಹೊರತು ರೋಗವಲ್ಲ ,ರೋಗ ಹೆಚ್ಚಾಗಿ ಮೆದುಳಿನ ಆಘಾತ

(ಮೇಲಿನ ಚಿತ್ರಗಳ ಮೂಲಕ್ಕೆ ಆಭಾರಿ)