ಬೆಂಬಲಿಗರು

ಬುಧವಾರ, ಜುಲೈ 10, 2013

ಪ್ರೊಫೆಸ್ಸರ್ ಡಾ ಕೌಲ್ ಗುಡ್

ನಾನು ಎಂ ಬಿ ಬಿ ಎಸ  ಓದಿದ್ದು ಕೆ ಎಂ ಸಿ ಹುಬ್ಬಳ್ಳಿ ಎಂದರೆ ಈಗಿನ ಕಿಮ್ಸ್ ನಲ್ಲಿ . ೧೯೭೬ -೮೧. ಅದು ಈ ಸಂಸ್ಥೆಯ ಸುವರ್ಣ

ಯುಗ ಅಂತ್ಯವಾಗುತ್ತಿದ್ದ ದಿನಗಳು.ಉತ್ತರ ಕರ್ನಾಟಕದ ಹೆಮ್ಮೆಯ ಮೆಡಿಕಲ್  ಕಾಲೇಜ್.ಅದರ ಕಟ್ಟಡಗಳು ಖ್ಯಾತ

ಸಿವಿಲ್ ಇಂಜಿನಿಯರ್ ಪ್ರೊಫ್  ಅಡ್ಕೆಯವರ ಮಾರ್ಗದರ್ಶನದಲ್ಲಿ ನಿರ್ಮಿತವಾಗಿದ್ದು ಇಡೀ ಕ್ಯಾಂಪಸ್ ನೂರಾರು ಎಕರೆ

ಪ್ರದೇಶದಲ್ಲಿ ಹರಡಿದೆ.ಹುಬ್ಬಳ್ಳಿ ಯಾ ವಿದ್ಯಾ ನಗರದ ಈ ಜಾಗ ಹೂ ತೋಟಗಳಿಂದ ತುಂಬಿ ನೋಡಲು ನಯನ ಮನೋಹರ.

ದಾರಿಯುದ್ದಕ್ಕೂ ಮೇ ಫ್ಲವರ್ ಮತ್ತು ಗುಲ್ ಮೊಹರ್ ಗಿಡಗಳು ಸರತಿಯಲ್ಲಿ ವರುಷವಿಡೀ ಹೂಗಳಿಂದ ಕಂಗೊಳಿಸುತ್ತಿದ್ದವು.

                                             ಕಾಲೇಜ್ ಕಟ್ಟಡದ ವಿಹಂಗಮ ನೋಟ                                                                                            

ಕ್ಯಾಂಪಸ್ ರಸ್ತೆಗಳು


ಕಾಲೇಜ್ ನ  ಹೆಬ್ಬಾಗಿಲು ಪ್ರವೇಶಿಸುವಾಗ ರೋಮಾಂಚನ ಆಗುತ್ತಿತ್ತು

ನಾನು ಅಲ್ಲಿ ಕಲಿಯುತ್ತಿದ್ದ ವೇಳೆ ಕೌಲ್ಗುಡ್ ಸಹೋದರರೆಂದು ಪ್ರಖ್ಯಾತರಾದ  ಡಾ ಎಸ ಆರ್ ಕೌಲ್ ಗುಡ್ ಮತ್ತು 

ಎಸ ಏನ್ ಕೌಲ್ ಗುಡ್ ನಮ್ಮ ಪ್ರಾಧ್ಯಾಪಕರಾಗಿದ್ದ್ದರು. ಮೊದಲನೆಯವರು ಸರ್ಜರಿ ವಿಭಾಗದಲ್ಲಿ ಇದ್ದರೆ 

ಇನ್ನೊಬ್ಬರು  ಗೈನಕೊಲೋಜಿ ಪ್ರೊಫೆಸ್ಸರ್.ಸರ್ಜರಿಯವರು ಸ್ತಿತ ಪ್ರಜ್ನ ,ಮಿತ ಭಾಷಿ .ಗ್ಯ್ನೆನಕೊಲೋಜಿ ಯವರು 

ಭಾವ ಜೀವಿ ,ಮಾತುಗಾರ .ಇಬ್ಬರೂ ಅತ್ಯುತ್ತಮ ಅಧ್ಯಾಪಕರೂ ,ಶಸ್ತ್ರ ಚಿಕಿತ್ಸಾ ನಿಪುಣರೂ ಆಗಿದ್ದರು.ನನ್ನ 

ಭಾಗ್ಯವೆಂದರೆ ಇವರಿಬ್ಬರ ಯೂನಿಟ್ ನಲ್ಲಿ ಮೊದಲು ವಿದ್ಯಾರ್ಥಿಯಾಗಿ ,ನಂತರ  ಹೌಸ್ ಸರ್ಜನ್ ಆಗಿ 

ಕೆಲಸ ಮಾಡುವ ಸುಯೋಗ ಲಭಿಸಿದ್ದುದು.ಇವರಲ್ಲಿ  ಡಾ ಎಸ ಆರ್ ಕೌಲ್ ಗುಡ್  ಈಗಲೂ ಧಾರವಾಡದಲ್ಲಿ 

ಸೇವೆ ಸಲ್ಲಿಸುತ್ತಿದ್ದಾರೆ.ಸರಳ ಜೀವಿಗಳು ,ಶುದ್ದ ಹಸ್ತರೂ ಆಗಿದ್ದ  ಇವರಲ್ಲಿ ಇದ್ದ ವಾಹನ ಸ್ಕೂಟರ್.

ಗ್ಯ್ನೆಕೊಲೋಜಿ  ಕೌಲ್ ಗುಡ್ ಅವರ  ಓ ಪಿ ಡಿ ಬೆಳಿಗ್ಗೆ ಎಂಟರಿಂದ ಆರಂಭವಾಗಿ   ಸಾಯಕಾಲ  ಮೂರಾದರೂ 

ಮುಗಿಯುತ್ತಿರಲಿಲ್ಲ.ಎಲ್ಲಾ ರೋಗಿಗಳಿಗೂ ಅವರೇ ಆಗ ಬೇಕು .ಎಷ್ಟು ಹೊತ್ತು ಕಾಯಲೂ ತಯಾರಿದ್ದರು.ಓ ಪಿ ಡಿ ಮುಗಿಸಿ 

ಮನೆಗೆ ತೆರಳಿ ಊಟದ ಶಾಸ್ತ್ರ ಮುಗಿಸಿ  ರೌಂಡ್ಸ್ ಗೆ ಬರುತ್ತಿದ್ದರು .ಅಶ್ಟರಲ್ಲಿ  ಪಿ.ಜಿ . ಮತ್ತು  ಇಂಟರ್ನ್ಗಳು 

ಅಡ್ಮಿಟ್ ಆದ ಕೇಸುಗಳ  ವಿವರ ರಡಿ ಮಾಡಿ ಇದ ಬೇಕು.ಸಣ್ಣ ಲೋಪಗಲಿದ್ದರೂ  ಚಾವಣಿ ಹಾರುವಂತೆ 

ಆವೇಶದಿಂದ ಬೈಯುವರು.ಅದೇ  ವಿದ್ಯಾರ್ಥಿಗಳು ಕಲಿಯುವಾಗ ಅಕಾಸ್ಮಾತ್ ದೊಡ್ಡ ತಪ್ಪುಗಳಾದರೆ ತಾಳ್ಮೆಯಿಂದ 

ಹೇಳಿಕೊಟ್ಟು ತಿದ್ದುತ್ತಿದ್ದರು.ಅವರ ರೋಗಿಗಳು ಸ್ತ್ರೀಯರು ಮಾತ್ರ .ಎಲ್ಲಿಯಾದರೂ ಗಂಡಂದಿರು ಹೆಂಡತಿಗೆ 

ರಕ್ತ ಕೊಡಲು ನಿರಾಕರಿಸಿದರೆ ಸಿಟ್ಟಿಗೆದ್ದು ಹೊಡೆದದ್ದೂ ಉಂಟು.ಇಲ್ಲವಾದರೆ ನಾನೇ ರಕ್ತ ಕೊಡುತ್ತೇನೆ ಎಂದು ಕೊಟ್ಟದ್ದು 

ನೂರಾರು ಭಾರಿ.ಇವರು ಎಷ್ಟು ಶುದ್ದ ಹಸ್ತರೆಂದರೆ  ಕುಟುಂಬ ಯೋಜನಾ ಶಸ್ತ್ರ ಚಿಕಿತ್ಸೆ ಮಾಡಿದ್ದಕ್ಕೆ ಸರಕಾರ 

ಕೊಡ ಮಾಡುತ್ತಿದ್ದ ಹಣವನ್ನು ತೆಗೆದು  ಕೊಳ್ಳದೇ ಬಡ ರೋಗಿಗಳ  ನಿಧಿಗೆ ಸಮರ್ಪಿಸುತ್ತಿದ್ದರು. ಖ್ಯಾತ ಲೇಖಕಿ 

ಸುಧಾ ಮೂರ್ತಿಯವರ ಅಕ್ಕ ಸುನಂದಾ ಕುಲಕರ್ಣಿ ಇವರ ವಿಭಾಗ ದಲ್ಲಿ ಲೆಕ್ಚರರ್ ಆಗಿ ಕೆಲಸ  ಮಾಡುತ್ತಿದ್ದರು.

ಇವರು ಪಾಠ ಮಾಡುವಾಗ  I may not be that good but I am Koulgud ಎಂದು ತಮಾಷೆಗೆ ಹೇಳುತ್ತಿದ್ದರು.ಇವರು 

ಮೈಸೂರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತದಿಂದ ನಿಧನ ಹೊಂದಿದರು.ಹಗಲು ರಾತ್ರಿಯೆನ್ನದೆ 

ವಿಶ್ರಾನ್ತಿಯಿಲ್ಲದೆ  ಬಡ ರೋಗಿ ಮತ್ತು (ಬಡ) ವಿದ್ಯಾರ್ಥಿಗಳ ಸೇವೆಯಲ್ಲಿ ಜೀವ ತೇದ ಅವರ ನೆನಪಿಗೆ 

ವಂದನೆಗಳು.

ಇಬ್ಬರು ಕೌಲ ಗುಡ್ ಇದ್ದುದರಿಂದ ಕನ್ಫ್ಯೂಷನ್ ಇರುತ್ತಿತ್ತು.ಅದಕ್ಕಾಗಿ ಅವರನ್ನು ಪಿ.ಆರ್  ಮತ್ತು ಪಿ ವಿ ಕೌಲ್ ಗುಡ್ ಎಂದೂ 

ವಿದ್ಯಾರ್ಥಿಗಳು ಗುರುತಿಸುತ್ತಿದ್ದರು.

ಬಾಲಂಗೋಚಿ:  ಕ್ಯಾಲಿಕಟ್ ಮೆಡಿಕಲ್ ಕಾಲೇಜ್ ನಲ್ಲಿ ಇಬ್ಬರು  ಡಾಕ್ಟರ  ಭಟ್ ಇದ್ದರು.ಒಬ್ಬರು  ಯುರೋಲೋಜಿ 

ವಿಭಾಗದಲ್ಲಿ ಇದ್ದಾರೆ ಇನ್ನೊಬ್ಬರು ಕಣ್ಣಿನ ತಜ್ಞರು. ಆದ್ದರಿಂದ  ನೀವು ಡಾ ಭಟ್ ರನ್ನು ವಿಚಾರಿಸಿದರೆ  "ನಿನ್ಗಳುಕ್ಕು 

ಮೂತ್ರ ಭಟ್ ವೇನೋ ಅಲ್ಲ ನೇತ್ರ ಭಟ್ ವೇನೋ (ನಿಮಗೆ ಮೂತ್ರ ಭಟ್ ಬೇಕೋ ಅಲ್ಲ ನೇತ್ರ ಭಟ್ ಬೇಕೋ?)

ಎಂದು ಅಲ್ಲಿಯ ಸಿಬ್ಬಂದಿ ಕೇಳುತ್ತಿದ್ದರು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ