ಬೆಂಬಲಿಗರು

ಭಾನುವಾರ, ಜುಲೈ 14, 2013

ನಮ್ಮನ್ನು ನಾವೇ ಕೊಲ್ಲುವ ಪರಿ


ಮನುಷ್ಯನಿಗೆ ಸ್ವಯಂ ವಿನಾಶಕಾರಿ ಪ್ರವೃತ್ತಿ ಒಂದಿದೆ ಅನ್ನಿಸುತ್ತದೆ. 

                                                                      ನಮ್ಮ ಆಹಾರವನ್ನೇ ತೆಗೆದು ಕೊಳ್ಳೋಣ .ಆಹಾರ ಧಾನ್ಯ ಗಳಲ್ಲಿ

ಗುಗ್ಗುರು ಆಗ ಬಾರದೆಂದು ಅಲ್ಯೂಮಿನಿಯಂ ಫೋಸ್ಪೈದ್ ಬೇರೆಸುತ್ತೇವೆ.ರಾಸಾಯನಿಕ ವಿಷ ಬೆರೆಸಿದ ತರಕಾರಿಗಳು ನಮಗೆ ಮೆಚ್ಚು.ಉದಾಹರಣೆಗೆ ವಿಶದಲ್ಲಿ ಅದ್ದಿದ  ಕಾಲಿಫ್ಲವರ್ ನಲ್ಲಿ  ಹುಳ ಇಲ್ಲ ಎಂದು ಸಂಭ್ರಮದಿಂದ ಕೊಂಡು ಅದಕ್ಕೆ ರುಚಿ ಬರಲು ಇನ್ನಸ್ಟು ರಾಸಾಯನಿಕ ಬೆರಸಿ ಮಂಚೂರಿ ಮಾಡಿ ತಿನ್ನುತ್ತೇವೆ. ಹಣ್ಣುಗಳು ವರ್ಣಮಯವಾಗಲು ಕ್ಯಾಲ್ಸಿಯಂ ಕಾರ್ಬೈಡು ಹಾಕುತ್ತೇವೆ.ಉಪ್ಪು ಎಣ್ಣೆ ಕೂಡಿದ ಕುರುಕುಲು ತಿಂಡಿ ಮಕ್ಕಳ ಮೊದಲ ಆಹಾರ.(ರಕ್ತದ ಒತ್ತಡ ,ಹೃದಯ ಕಾಯಿಲೆ ,ಮೂತ್ರದ ಕಲ್ಲುಗಳಿಗೆ ಆಹ್ವಾನ.)ಎಳೆಮಗು ವಿಗೆ  ಹೇಳಿ ಮಾಡಿಸಿದ ಮೊಲೆ ಹಾಲಿಗೆ ಬದಲು ಕೃತಕ ಹುಡಿ ಗಳನ್ನು ತಿನ್ನಿಸುತ್ತೇವೆ.

ದೇಹದಲ್ಲಿ ನಿಸರ್ಗ ಕೊಟ್ಟ ರಕ್ಷಣಾ ವ್ಯವಸ್ತೆ ಇದೆ.ಚರ್ಮ ,ಬಾಯಿ ,ಕರುಳುಗಳಲ್ಲಿ  ಉಪಯುಕ್ತ ಬ್ಯಾಕ್ಟೀರಿಯಾ ಗಳಿವೆ. ವರ್ಣ ರಂಜಿತ ಜಾಹಿರಾತುಗಳ ಉಪದೇಶದಂತೆ  ಸುಕ್ಷ್ಮಾಣುಗಳನ್ನು ನಾಶ ಪಡಿಸುವ  ಸಾಬೂನು ಗಳು ,ಲೋಷನ್ ಗಳನನ್ನು ಬಳಸಿ ಇವುಗಳನ್ನು ಕೊಲ್ಲುತ್ತೇವೆ. ಇತ್ತೀಚಿಗೆ ಪಾತ್ರೆ ತೊಳೆಯುವ ಸಾಬೂನು ,ಪುಡಿಗಳಲ್ಲೂ  ಇಂತಹ ರಾಸಾಯನಿಕಗಳನ್ನು
ಸೇರಿಸುತ್ತಾರೆ.ಅವುಗಳಲ್ಲಿನ ಆಹಾರ ಸೇವಿದರೆ  ಕಾಮ್ಮೆನ್ಸಾಲ್ ಎಂಬ ನಿರುಪದ್ರವಿ ಬ್ಯಾಕ್ಟೀರಿಯಾ ಗಳನ್ನು ನಾಶ ಪಡಿಸುತ್ತವೆ. ಹಲ್ಲು ಉಜ್ಜುವ ಪೇಸ್ಟ್ ನಲ್ಲೂ ಇದೇ ಸಮಸ್ಯೆ.ಇದೆಲ್ಲ ಸಾಲದೆಂದು ಸಾಮಾನ್ಯ ವೈರಲ್ ಕಾಯಿಲೆಗಳಿಗೂ ಆಂಟಿಬಯೋಟಿಕ್ ಬಳಸಿ ಈ ಸಮಸ್ಯೆಯನ್ನು ಇನ್ನಸ್ಟು ಉಲ್ಬಣ ಗೊಳಿಸುವಂತೆ ಮಾಡುತ್ತೇವೆ.ಒಳ್ಳೆಯ ಸೂಕ್ಷ್ಮಾಣುಗಳ  ನಾಶ ರೋಗಾಣುಗಳಿಗಳಿಗೆ ದಾರಿ ಮಾಡಿ ಕೊಡುತ್ತದೆ.

ಇನ್ನು ನಮ್ಮ ಜಠರದಲ್ಲಿ ದೇವರು ಆಮ್ಲ ಇಟ್ಟಿದ್ದಾನೆ.ಇದು ಜೀರ್ಣ ಕ್ರಿಯೆಗೆ ಸಹಕಾರಿಯಲ್ಲದೆ ,ರಕ್ತ ಉತ್ಪಾದನೆಗೆ ಬೇಕಾದ
ಬೇಕಾದ ಕಬ್ಬಿಣದ ಜೀರ್ಣಕ್ಕೂ ಆಸಿಡ್ ಅಗತ್ಯ.ರೋಗಾಣುಗಳನ್ನೂ ಕೊಳ್ಳುತ್ತದೆ.ನಾವು ಹೊಟ್ಟೆಯ ಎಲ್ಲಾ  ಸಂಕಟ ಗಳಿಗೂ
ಗ್ಯಾಸ್ಟ್ರಿಕ್ ಎಂದು  ನೈಸರ್ಗಿಕವಾಗಿ ಇರುವ ರಕ್ಷಣೆಯನ್ನು ಕಳೆದು ಕೊಳ್ಳುತ್ತಿದ್ದೇವೆ.

ಇನ್ನು ತಿನ್ನುವುದು ಹೆಚ್ಚಾಗಿದ್ದು ವ್ಯಾಯಾಮ ಇಲ್ಲದಾಗಿದೆ. ನಡೆಯುವುದು ಅಭಿಮಾನಕ್ಕೆ ಕುಂದು ಎಂಬ ಒಣ ಪ್ರತಿಷ್ಟೇ ಆವರಿಸಿದೆ.
ನಡೆದಾಡುವುದು ಒಂದೇ ಬಹಳ ಮಂದಿಗೆ ಇದ್ದ ವ್ಯಾಯಾಮ. ಶಾಲೆಗೆ ಹೋಗುವ ಮಕ್ಕಳನ್ನು ಎಷ್ಟು ಹತ್ತಿರ ಶಾಲೆ ಇದ್ದರೂ ವಾಹನದಲ್ಲೇ ಕಳುಹಿಸಬೇಕು.ವೈದ್ಯರು ವಕೀಲರು ನಡೆಯುವುದು ಕಂಡರೆ ಅದ್ಬುತ ಕಂಡಂತೆ ಮಾಡುತ್ತಾರೆ.

ವಾಹನ ಗಳ ಜಂಗುಳಿಯಿಂದ ವಾಯು ,ಶಬ್ದ ಮಾಲಿನ್ಯ ಹೆಚ್ಚಾಗಿದೆ.ಇದರ ಬಗ್ಗೆ ಗೊಡವೆ ಇದ್ದಂತಿಲ್ಲ .ಎಳೆಯ ಮಕ್ಕಳಲ್ಲೇ
ದಮ್ಮು ,ರಕ್ತದ ಒತ್ತಡ ಸುರುವಾಗಿದೆ.ಯಾವುದಾದರೂ ಸೋಂಕು ರೋಗ ಧಾಳಿಯಿಟ್ಟಾಗ ಶುಚಿತ್ವ ಅಭಿಯಾನದ ಪ್ರಹಸನ ನಡೆಯುತ್ತದೇ.ಮಿಕ್ಕಂತೆ ಕಂಡಲ್ಲಿ ಉಗುಳುತ್ತೇವೆ,ಕಸ ಹಾಕುತ್ತೇವೆ.ಗಟ್ಟಿಯಾಗಿ ದ್ವನಿ ವರ್ಧಕ ,ಹಾರ್ನ್ ,ಟಿ ವಿ . ಬಳಸಿ ಶಬ್ದ ಮಾಲಿನ್ಯಕ್ಕೆ ನಮ್ಮದೂ ಕೊಡುಗೆ ಇರಲಿ ಎಂದು  ಸ್ಪರ್ದಿಸುತ್ತೇವೆ.
ಹೀಗೆ ಇನ್ನೂ ಎಷ್ಟೋ ಇದೆ.ನೀವೇ ಹೇಳಿ ಇದು ಸೆಲ್ಫ್  ಡಿಷ್ಟ್ರಕ್ತಿವ್ (ಸ್ವಯಂ ವಿನಾಶಕಾರಿ )
ಪ್ರವೃತ್ತಿ ಅಲ್ಲದೆ ಇನ್ನೇನು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ