ಬೆಂಬಲಿಗರು

ಸೋಮವಾರ, ಜುಲೈ 1, 2013

ವೈದ್ಯರ ದಿನಾಚರಣೆ

ಇಂದು ವೈದ್ಯರ ದಿನ. ಖ್ಯಾತ ವೈದ್ಯ ರಾಜಕಾರಿಣಿ ,ಸ್ವಾತಂತ್ರ್ಯ ಹೋರಾಟಗಾರ  ಡಾ ಬಿ ಸಿ ರಾಯ್ ಅವರ ಜನ್ಮ ದಿನ


,ಹಾಗೂ  ಗತಿಸಿದ ದಿನವೂ.

                                   
ಬಿ.ಸಿ.ರಾಯ್.

ಈ ದಿನ ವೈದ್ಯ ಗಣದ ಸೇವೆಯನ್ನು ಸಮಾಜ ಸ್ಮರಿಸುತ್ತದೆ.

ದೇವರು ನಿಜವಾದ ವೈದ್ಯ.ಭಾವ ರೋಗ ನಿವಾರಕ ಎಂದು ಅವನನ್ನು ಕರೆಯುತ್ತಾರೆ.ಒಂದು ಶ್ಲೋಕ ಇದೆ.

'ಜರ್ಜರಿ  ಭೂತೆ  ಶರೀರೆ ವ್ಯಾದಿಗ್ರಸ್ತೆ ಕಳೆವರೆ  ,ವೈದ್ಯೋ ನಾರಾಯಣಾ ಹರಿ ಔಷಧಂ  ಜಾಹ್ನವೀ ತೋಯಂ '

ದೇಹವು ಕಾಯಿಲೆಯಿಂದ ಬಳಲಿದಾಗ  ನಿಜವಾದ ಡಾಕ್ಟರು  ಹರಿ ಮತ್ತು ಔಷಧ ಗಂಗಾ ಜಲ .ಈ ಶ್ಲೋಕವನ್ನು 

ಕೆಲವರು ವೈದ್ಯರೇ ದೇವರು ಎಂದು ಅರ್ಥೈಸುತ್ತಾರೆ ,ಅದು ಸರಿಯಲ್ಲ ಎಂದು ನನ್ನ ಭಾವನೆ.

ಖ್ಯಾತ ಚಿಂತಕ ವೋಲ್ತೈರ್  ಹೇಳುತ್ತಾನೆ -"  Doctors are men who prescribe medicines of which they know

 little, to cure diseases of which they know less, in human beings of whom they know nothing.  

ವೈದ್ಯರು ಗಳೆಂದರೆ  ಸ್ವಲ್ಪ ತಿಳಿದಿರುವ ಕಾಯಿಲೆಗೆ ಅಲ್ಪ ಸ್ವಲ್ಪ ತಿಳಿದಿರುವ ಔಷಧಿಯನ್ನು ಏನೂ ತಿಳಿದಿರದ ರೋಗಿಯ ಮೇಲೆ 

ಪ್ರಯೋಗಿಸುವವನು."

ಚಿಕತ್ಸೆ ಮಾಡುವವನು ವೈದ್ಯ ವಾಸಿ ಮಾಡುವವನು ದೇವರು. 

ಡಾಕ್ಟರ ಸೇತುರಾಮನ್ ಎಂಬವರು ಮದ್ರಾಸ್ ಮೆಡಿಕಲ್ ಕಾಲೇಜ್ ನಲ್ಲಿ ರಕ್ತ ಶಾಸ್ತ್ರ ಆರಂಬಿಸಿದವರು.ಮಹಾನ್ ಮೇಧಾವಿ .ಅಷ್ಟೇ ಸರಳ ಜೀವಿ 

ಅವರ ಬಳಿ ಒಂದು ಹಳೆಯ ಸ್ಕೂಟರ್. ಜೋಲು ಪ್ಯಾಂಟ್ ಮತ್ತು ಅಂಗಿ.ನಾನು  ಪೆರ೦ಬುರ್ ರೈಲ್ವೆ ಆಸ್ಪತ್ರೆಯಲ್ಲಿ ಇದ್ದಾಗ  ಪಿ.ಜಿ.ಗಳಿಗೆ ಕ್ಲಾಸ್ 

ತೆಗೆದು ಕೊಳ್ಳಲು ಬರುತ್ತಿದ್ದರು.ಡೌನ್ ಟು ಅರ್ಥ್ ಮ್ಯಾನ್.ಅವರು ವೈದ್ಯ ಶಾಸ್ತ್ರದ ವಿಶ್ವ ಕೋಶ ಆಗಿದ್ದರು.ತಮ್ಮ ಗುರು ಪ್ರೊಫ್ ಕೆ ವಿ 

ತಿರುವೆ೦ಗಡ೦ (ಇವರ ಬಗ್ಗೆ ನನ್ನ ಬ್ಲಾಗ್ ನಲ್ಲಿ ಬರೆದಿರುವೆ ) ಬಗ್ಗೆ ಬಾರಿ ಗೌರವ .ಯವಾಗಲೂ ವಾದ್ಯಾರು ಸೋಲ್ಲುವಾರು ವಾದ್ಯಾರ್ 

 ಸೋಲ್ಲುವಾರ್  ಎಂದು ತಮ್ಮ ಗುರುಗಳನ್ನು ನೆನೆಪಿಸಿ ಕೊಳ್ಳುವರು.

ಅದೇ ರೀತಿ ಡಾಕ್ಟರ್ ಗಿರಿ ಗೌಡ ಎಂಬ ಸರ್ಜರಿ ಪ್ರೊಫೆಸ್ಸರ್  ಕೆ ಎಂ ಸಿ ಹುಬ್ಬಳ್ಳಿಯಲ್ಲಿ ಇದ್ದರು .ಬಾರೀ ಜನಪ್ರಿಯ ಅಧ್ಯಾಪಕ.ಅವರು 

ತರಗತಿ  ಆರಂಭದಲ್ಲಿ ತಮ್ಮ ಗುರುಗಳಾದ ಪ್ರೊಫ್. ಆರ್ ಎಚ್ ಏನ್ ಶೆನೋಯ್ ,ಪ್ರೊಫ್ ಕೆ ಜಿ ನಾಯಕ್ ಅವರಿಗೆ ಮನಸಾರೆ ವಂದಿಸಿ 

ತೊಡಗುತ್ತಿದ್ದರು .

ಮೇಲೆ ಹೆಸರಿಸಿದ ವೈದ್ಯರು ತಮ್ಮ ವೃತ್ತಿಯಿಂದ  ಹಚ್ಚು ಹಣ ಮಾಡಿದವರಲ್ಲ .ಈಗಿನ ಮಾಪನದಲ್ಲಿ ಅವರು ಯಶಸ್ವೀ ವೈದ್ಯರಲ್ಲದಿರ ಬಹುದು.

ಆದರೆ ಈ ಪವಿತ್ರ ವೃತ್ತಿಗೆ ಗೌರವ ಉಳಿದಿದ್ದರೆ ಅಂತರಿಂದ . ಅಂತಹವರು ಬಹಳ ಮಂದಿ ಇದ್ದಾರೆ.ರಾಜ್ಯೋತ್ಸವ ಪ್ರಸಸ್ತಿ. ಗೌರವ ಡಾಕ್ಟರೇಟ್ 

ಪದ್ಮಶ್ರೀ ಭೂಷಣ ಇವರ ಬಳಿ ಬಂದಿರದು .


ಎಂದರೋ ಮಹಾನು ಭಾವುಲು ಅಂದರಿಕಿ ವಂದನಮುಲು 





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ