ಬೆಂಬಲಿಗರು

ಶನಿವಾರ, ಜುಲೈ 13, 2013

ಮರೆಯಾಗದ ಮಹನೀಯರು -ಎಸ್ ವಿ ಪರಮೇಶ್ವರ ಭಟ್ಟ

SVP

ಮಂಗಳೂರಿನಲ್ಲಿ  ಮೈಸೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಸ್ಥಾಪನೆಯಾದಾಗ ಅದರ ನಿರ್ದೇಶಕರಾಗಿ ಬಂದವರು

 

ಕಾಣದ  ಖ್ಯಾತ ಕವಿ ,ಅಧ್ಯಾಪಕ ಎಸ್ ವಿ ಪರಮೇಶ್ವರ ಭಟ್ಟರು .ಏನೂ ಇಲ್ಲದ  ಕೊಣಾಜೆ ಬೋಳು ಗುಡ್ಡೆಯಲ್ಲಿ ಸಂಸ್ಥೆಯನ್ನು

 

ಭಗೀರಥ ಪ್ರಯತ್ನದಿಂದ ಕಟ್ಟಿ ಬೆಳಸಿ ಇಂದಿನ ಮಂಗಳೂರು ವಿಶ್ವವಿದ್ಯಾಲಯಕ್ಕೆ ಬುನಾದಿ ಹಾಕಿದವರು.ಆಗಿನ್ನೂ ಪೂರ್ಣ ಪ್ರಮಾಣದಲ್ಲಿ

 

ಕಟ್ಟಡಗಳು ನಿರ್ಮಾಣ ವಾಗದಿದ್ದ ಕಾರಣ ಮಂಗಳೂರು ಪೇಟೆಯಲ್ಲಿ ಕೇಂದ್ರದ ಕಚೇರಿ ಇತ್ತು.ತರಗತಿಗಳು ಕೆ ಎಂ ಸಿ ಇತ್ಯಾದಿ ಕಾಲೇಜ್

 

ಗಳಲ್ಲಿ ನಡೆಯುತ್ತಿದ್ದವು.ಭಟ್ಟರು ನಡೆದಾಡಿ ಕೊಂಡೇ ಇಲ್ಲೆಲ್ಲಾ ಸಂಚರಿಸುತ್ತಿದ್ದುದನ್ನು ನಾನು ನೋಡಿದ್ದೇನೆ.ಜೊತೆ ಜೊತೆಗೆ ಕೊಣಾಜೆ

 

ಕ್ಯಾಂಪಸ್ ಅಭಿವೃದ್ಧಿ ಅವಲೋಕನ.ಅವರು ಮಾಡಿದ್ದ ಸೇವೆಯ ಗಹನತೆ ನಾವು ನೆನಪಿಟ್ಟು ಕೊಳ್ಳ ಬೇಕು .

 

ಇದರ  ಜೊತೆಗೆ ಉತ್ತಮ ಭಾಷಣ ಕಾರ ಆಗಿದ್ದ ಅವರಿಗೆ ಜಿಲ್ಲೆಯಾದ್ಯಂತ ಭಾರೀ ಬೇಡಿಕೆ .ಶಾಲಾ ಕಾಲೇಜ್ ಗಳ ವರ್ಧಂತಿ ಉತ್ಸವ

 

ಸಾಹಿತ್ಯ ಕೂಟ ,ಯಕ್ಷಗಾನ  ಎಲ್ಲಾ ಕಡೆ ಅವರೇ ಬೇಕು .ಇಲ್ಲ ಎನ್ನದೆ ಹೋಗುತ್ತಿದ್ದರು.ಸ್ವತಹ ಜೀವನದಲ್ಲಿ ಬಹಳ ನೋವು

 

ಅನುಭವಿಸಿದರೂ ತಮ್ಮ ಹಾಸ್ಯ ಚಟಾಕಿಗಳಿಂದ ಎಲ್ಲರನೂ ನಗಿಸಿದರು.

 

ಅಭಿನವ ಕಾಳಿದಾಸ ಎಂದು ಪ್ರಸಿದ್ದರಾಗಿದ್ದ ಅವರು ಕಾಳಿದಾಸನ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಸ್ವಯಂ ಪ್ರಕಟಿಸಿದರು .

 

ಹಲವು ಕಾವ್ಯ ಸಂಕಲನಗಳನ್ನೂ ಪ್ರಕಟಿಸಿದ್ದಾರೆ ,ಅವರ ಕವನ ತಿಳಿ ಮುಗಿಲ ತೊಟ್ಟಿಲಲಿ ಮಲಗಿರುವ ಚಂದಿರನ ಬಹಳ  ಜನಪ್ರಿಯ .

 

ಕುವೆಂಪು ಸಾಹಿತ್ಯದ ಸಮಗ್ರ ಅವಲೋಕನ ಮಾಡುವ ಬೃಹತ್ ಗ್ರಂಥಗಳನ್ನು ರಚನೆ ಮಾಡಿದ್ದಾರೆ.

 

ರೈತ ಹೋರಾಟ ಗಾರ  ಕಡಿದಾಳ್ ಶಾಮಣ್ಣ ತನಗೆ ಕಾಲೇಜ್ ನಲ್ಲಿ ಸೀಟ್ ಕೊಡಿಸಿದ್ದುದು ಎಸ್ ವಿ ಪಿ ಎಂದು ಸ್ಮರಿಸಿದ್ದ್ದಾರೆ

 

ಅದರಂತೆ     ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಶ್ರೀಮಾನ್ ವಿವೇಕ ರೈ ಯಾವಾಗಲೂ ತಮ್ಮ ಗುರುಗಳನ್ನು

 

ಕೃತಜ್ಞತೆಯಿಂದ ಸ್ಮರಿಸುತ್ತಾರೆ.

 

ಶ್ರೀ ಎಹ್ ಕೆ ರಂಗನಾಥ್  ಮತ್ತು ಅವರ ತಮ್ಮ ಖ್ಯಾತ ಬರಹಗಾರ ವೈದ್ಯ ಡಾ ಎಚ್ ಕೆ ನಜುಂಡ ಸ್ವಾಮಿ ಅವರ ಪತ್ನಿಯ

 

ಸಹೋದರರು .ತಮ್ಮ ಸಾಹಿತ್ಯ ಸೇವೆಗೆ ಭಾವನವರ ಸ್ಪೂರ್ತಿ ನೆನೆಯುತ್ತಾರೆ,

 

ಎಸ್ ವಿ ಪಿ ಮತ್ತು ಏರ್ಯ ಲಕ್ಷ್ಮಿನಾರಾಯಣ ಆಳ್ವ ರ  ಮುಂದಾಳತ್ವದಲ್ಲಿ ಅದ್ದೂರಿಯಾಗಿ ಮತ್ತು ಅಚ್ಚು ಕಟ್ಟಾಗಿ ನಡೆದ ಪಂಜೆ ಮಂಗೇಶ

 

ರಾಯರ ಶತಮಾನೋತ್ಸವ ಕಾರ್ಯಕ್ರಮ  ನ ಭೂತೋ ನ ಭವಿಷ್ಯತಿ ಎಂಬಂತೆ ಮಂಗಳೂರಿನಲ್ಲಿ ನಡೆದುದನ್ನು ಸಾಹಿತ್ಯ ಪ್ರಿಯರು

 

ಇನ್ನೂ ನೆನಪಿಸಿ ಕೊಳ್ಳುತ್ತಾರೆ.

 

ಪ್ರೊ. ಎಸ್ ವಿ ಪರಮೇಶ್ವರ  ಭಟ್ಟರ ಶತಮಾನೋತ್ಸವ ಕಾರ್ಯಕ್ರಮ ವನ್ನು ಅವರ ಶಿಷ್ಯರು  ಮತ್ತು ಸಾಹಿತ್ಯಾಸಕ್ತರು ಮತ್ತು

 

ಅಭಿಮಾನಿಗಳು ಸೇರಿ ಈ ವರ್ಷ ನೆರವೇರಿಸಲು  ಹಮ್ಮಿಕೊದಿದ್ದಾರೆ. ಇದಕ್ಕೆ ಧನ ಸಹಾಯ ಮಾಡಲಿಚ್ಚಿಸುವವರು ರೂ

 

ಒಂದು ಸಾವಿರಕ್ಕ್ಕೆ ಕಮ್ಮಿಯಿಲ್ಲದಂತೆ ಕರ್ನಾಟಕ ಬ್ಯಾಂಕ್ ಖಾತೆ 4762500102483101 ಕ್ಕೆ ವರ್ಗಾಯಿಸಿ

 

ಡಾ ನರಸಿಂಹ ಮೂರ್ತಿ ,ಕಾರ್ಯದರ್ಶಿ ಪ್ರೊಫ್ ಎಸ್ ವಿ ಪರಮೇಶ್ವರ ಭಟ್ಟ ಜನ್ಮ ಶತಮಾನೋತ್ಸವ ಸಮಿತಿ ,ಮಾಣಿಕ್ಯ ,ಗಾಂಧಿನಗರ

 

ಕಾವೂರು ಅಂಚೆ .ಮಂಗಳೂರು ೫೭೫೦೧೫ ಕ್ಕೆ ತಿಳಿಸ ಬಹುದು .ಹೆಚ್ಚಿನ ಮಾಹಿತಿಗೆ ದೂ 9448191249, 9449283283

 

ಸಂಪರ್ಕಿಸ ಬಹುದು.

1 ಕಾಮೆಂಟ್‌: