ಬೆಂಬಲಿಗರು

ಸೋಮವಾರ, ಜನವರಿ 22, 2024

 


ಖ್ಯಾತ ಮಲಯಾಳಿ  ಲೇಖಕ ದಿ ಎಸ್ ಕೆ ಪೊಟ್ಟೆಕ್ಕಾಟ್ ಅವರ ಬಗ್ಗೆ ಹಿಂದೆ ಬರೆದಿದ್ದೆ . ಅವರ ಮ್ಯಾಗ್ನಮ್ ಓಪಸ್ ಎನ್ನ ಬಹುದಾದ ಒರು ದೇಶತ್ತಿನಂದೆ ಕಥಾ ಮಿತ್ರರಾದ ಡಾ ಅಶೋಕ್ ಕುಮಾರ್ ಮತ್ತು ದಿ ಕೆ ಕೆ ನಾಯರ್ ಒಂದು ಊರಿನ ಕತೆ ಎಂದು ಅನುವಾದಿಸಿದ್ದರು . ಇಂಗ್ಲಿಷ್ ನಲ್ಲಿ ಟೇಲ್ಸ್ ಒಫ್ ಅತಿರಾನಿಪಾದಮ್ ಎಂಬ ಶೀರ್ಷಿಕೆಯಲ್ಲಿ  ಚೆನ್ನಾಗಿ ಬಂದಿದೆ .ದುರದೃಷ್ಟ ವಶಾತ್ ಇವುಗಳ ಪ್ರತಿಗಳು ಈಗ ಲಭ್ಯವಿಲ್ಲ . ಅವರ ಪ್ರಸಿದ್ಧ ಪ್ರವಾಸ ಕಥನಗಳು ಅನುವಾದ ಗೊಳ್ಳ  ಬೇಕಾಗಿದೆ . 

ಹೀಗೆ ಜಾಲಾಡುತ್ತಿರುವಾಗ ಕಲ್ಲಿಕೋಟೆ ಲಿಪಿ ಪ್ರಕಾಶನದವರು ಡಾ ಪಿ ಪರಮೇಶ್ವರನ್ ಅವರು ಅನುವಾದಿಸಿದ ಸಣ್ಣ ಕತೆಗಳ ಸಂಕಲನ ನೈಟ್ ಕ್ವೀನ್ (ರಾತ್ರಿ ರಾಣಿ )ಅಂಡ್ ಅದರ್ ಸ್ಟೋರೀಸ್ ಎಂಬ ಕೃತಿ ಲಭ್ಯವಿದೆ ಎಂದು ತಿಳಿದು ತರಿಸಿ ಓದಿ ಸಂತೋಷ ಪಟ್ಟಿದ್ದೇನೆ ..ಇಲ್ಲಿಯ ಕತೆಗಳು ಕೇರಳ ,ಕಾಶ್ಮೀರ ,ಸ್ವಿಜರ್ ಲ್ಯಾಂಡ್ ,ಉಗಾಂಡಾ ,ರೊಡೇಷಿಯಾ ಮತ್ತು ಝೆಕೋ ಸ್ಲಾವಾಕಿಯ ಇತ್ಯಾದಿ ದೇಶಗಳ ಹಿನ್ನಲೆಯಲ್ಲಿ ಇವೆ . ಅವರ ಪ್ರವಾಸ ಅನುಭವ ಎದ್ದು ಕಾಣುತ್ತದೆ .ಒಂದು ರೀತಿಯಲ್ಲಿ ಮಾಸ್ತಿ ಯವರ ನಿರೂಪಣೆ ಹೋಲುತ್ತವೆ . ಒಂದೇ ವ್ಯತ್ಯಾಸ ಮಾಸ್ತಿಯವರು ಶೃಂಗಾರ ವರ್ಣನೆಯಲ್ಲಿ ಸ್ವಲ್ಪ ಮಡಿ ತೋರಿದರೆ ಇವರ ಬರವಣಿಗೆಯಲ್ಲಿ ಅಲ್ಲೂ ಸಹಜತೆ ಎದ್ದು ಕಾಣುತ್ತದೆ . ಒಟ್ಟಿನಲ್ಲಿ ಬಹಳ ದಿನಗಳ ನಂತರ ಒಂದು ಒಳ್ಳೆಯ ಕಥಾ ಸಂಕಲನ ಓದಿ ಸಂತೋಷ ಪಟ್ಟೆ 

ಬುಧವಾರ, ಜನವರಿ 17, 2024

                     



 ಕೇರಳ ಲಿಟರೇಚರ್ ಫೆಸ್ಟಿವಲ್ ನ  ನಾನು ಮೆಚ್ಚಿದ ಇನ್ನೊಂದು ಗೋಷ್ಠಿ ಶ್ರೀ ಸಂತೋಷ್ ಜಾರ್ಜ್ ಕುಳಂಗರ ಅವರದ್ದು . ಈ ವ್ಯಕ್ತಿ ಒಂದು ವಿಸ್ಮಯ . ಚರಿತ್ರೆ ಮತ್ತು ಪ್ರವಾಸ ಸಂಬಂದಿಸಿದ ಮಲಯಾಳಂ  ಟಿ ವಿ ಚಾನೆಲ್ ' ಸಫಾರಿ 'ಯನ್ನು ದಶಕಗಳಿಂದ ,ಯಾವುದೇ ಬಾಹ್ಯ ಜಾಹಿರಾತು ಇಲ್ಲದೆ ನಡೆಸಿ ಕೊಂಡು ಬರುತ್ತಿದ್ದಾರೆ .ತಾನು ಸ್ವಯಂ ೧೩೦ ಕ್ಕೂ ಅಧಿಕ ದೇಶಗಳ ಪ್ರವಾಸ ಕೈಗೊಂಡು ಅದನ್ನು ದಾಖಲಿಸಿ ಸಂಚಾರಂ ಎಂಬ ಶೀರ್ಷಿಕೆಯಲ್ಲಿ ಪ್ರಸಾರ ಮಾಡಿದ್ದಾರೆ . ಅವುಗಳ ಡಿವಿಡಿ , ಯು ಎಸ್ ಬಿ ಗಳನ್ನು  ತಯಾರಿಸಿ ಆಸಕ್ತರಿಗೆ  ಲಭ್ಯ ಮಾಡಿದ್ದಾರೆ . ನಾನು ಹಲವು ಎಪಿಸೋಡ್ ಗಳನ್ನು ನೋಡಿ ಆನಂದ ಪಟ್ಟಿದ್ದೇನೆ . ಅವರೊಡನೆ ನಾವೂ ದೇಶ ಸಂಚಾರ ಮಾಡಿದ ಅನುಭವ ಆಗುತ್ತದೆ . 

ತಮಗೆ ಸ್ಪೂರ್ತಿ  ಪ್ರವಾಸ ಸಾಹಿತ್ಯ ,ಕಾದಂಬರಿ ,ಸಣ್ಣಕತೆ ಇತ್ಯಾದಿಗಳಿಂದ ಪ್ರಸಿದ್ಧ ರಾಗಿ ,ಸಂಸದರೂ ಆಗಿದ್ದ ಜ್ಞಾನ ಪೀಠ ,ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಪ್ರಸಿದ್ಧ ಸಾಹಿತಿ ಕಲ್ಲಿಕೋಟೆ ಯವರೇ ಆದ ಶ್ರೀ ಎಸ್ ಕೆ ಪೊಟ್ಟೆಕ್ಕಾಟ್ ಎಂದರು . ಪೊಟ್ಟೆಕ್ಕಾಟ್ ಅವರ ಪ್ರವಾಸ ಸಾಹಿತ್ಯ ಬಹುಶಃ ಬೇರೆ ಭಾಷೆಗಳಿಗೆ ಅನುವಾದ ಆಗಿರದಿದ್ದರೂ ಅನುವಾದ ಆಗಿರುವ ಸಣ್ಣ ಕತೆ ಕಾದಂಬರಿಗಳಲ್ಲಿ ಅವರಲ್ಲಿರುವ ಪ್ರವಾಸಿ ಅಲ್ಲಲ್ಲಿ ಪ್ರಕಟವಾಗುವುದನ್ನು ಕಂಡಿದ್ದೇನೆ 

ಗೋಷ್ಠಿಯಲ್ಲಿ ಒಂದು ವಿಷಯ ಉಲ್ಲೇಖಿಸಿದರು ..ನಮ್ಮಲ್ಲಿ ಶೈಕ್ಷಣಿಕ ಪ್ರವಾಸ ಎಂದರೆ ಗಟ್ಟಿಯಾಗಿ ಡಿಶುಮ್ ಡಿಶುಮ್ ಸಂಗೀತ ಹಾಕಿಕೊಂಡು ಬಸ್ಸಿನಲ್ಲಿ ಹೋಗಿ  ಅಲ್ಲಿ ಇಲ್ಲಿ ಅಡ್ಡಾಡಿ ಬರುವದು .ಆದರೆ ಪಾಶ್ಚಾತ್ಯ ದೇಶಗಳಲ್ಲಿ ಮಕ್ಕಳು ತಿಂಗಳು ಗಟ್ಟಲೆ ಹೊರ ನಾಡುಗಳಿಗೆ ತಾವೇ ಹೋಗಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುವುದರ ಜತೆ   ಅಲ್ಲಿಯ ಜೀವನ ಕ್ರಮ ,ಸಂಸ್ಕೃತಿ ಮತ್ತು ಚರಿತ್ರೆ ಯ ಅಧ್ಯಯನ ಮಾಡಿ ವರದಿ ಸಲ್ಲಿಸುವುದು ಪಠ್ಯ ಕ್ರಮದ ಒಂದು ಭಾಗ . (ಇಂಗ್ಲೆಂಡ್ ನಲ್ಲಿ ಕಲಿಯುವ ನನ್ನ ಅಣ್ಣನ ಮೊಮ್ಮಗಳು ಶ್ರೀ ಲಂಕಾ  ದೇಶದಲ್ಲಿ ಪ್ರವಾಸಿ ವಾಸ್ತವ್ಯ ಮಾಡಿದ್ದಳು ). ಇದರಿಂದ ವಿದ್ಯಾರ್ಥಿಗಳ ದೃಷ್ಟಿ ಕೋನ ವಿಶಾಲವಾಗುವುದು .

ನಮ್ಮ ದೇಶದಲ್ಲಿ ವಿದ್ಯಾಭ್ಯಾಸ  ದ  ಜತೆಗೆ ನಾಗರೀಕ ಪ್ರಜ್ಞೆ ಯ ಮೈಗೂಡಿಸುವಿಕೆ ಇಲ್ಲದಿರುವುದು ವಿಷಾದನೀಯ ಎಂದರು . 

Human beings need not apply

 ಹೋದ ವಾರ ಕಲ್ಲಿಕೋಟೆ ಯಲ್ಲಿ ನಡೆದ ಕೇರಳ ಲಿಟೆರರಿ ಫೆಷ್ಟಿವಲ್ ನಲ್ಲಿ ನಡೆದ ಗೋಷ್ಟಿಗಳನ್ನು  ಯು ಟ್ಯೂಬ್ ನಲ್ಲಿ ನೋಡುತ್ತಿದ್ದೆ .ಒಂದು ಗೋಷ್ಟಿಯ ಶೀರ್ಷಿಕೆ ನನ್ನ ಗಮನ ಸೆಳೆಯಿತು .ಹ್ಯೂಮನ್ ಬೀಯಿಂಗ್ಸ ನೀಡ್ ನೋಟ್  ಎಪ್ಲಯ್(Human beings need not apply )ಎಂದಾಗಿತ್ತು ಅದು . ಮನುಷ್ಯರು ಅರ್ಜಿ ಹಾಕುವುದು ಬೇಡ ಎಂಬ ಅರ್ಥ . 

ಕೆಲಸಕ್ಕೆ ಅರ್ಜಿ ಕರೆಯುವಾಗ ಇಂತಹ ಷರತ್ತುಗಳು ಇರುವುದು ಸಹಜ  ಮೂವತ್ತು ವಯಸ್ಸಿನ ಮೇಲಿನವರು ಬೇಡ ,ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಿ ಇತ್ಯಾದಿ . ಆದರೆ ಇಲ್ಲಿ ಮನುಷ್ಯರೇ ಬೇಡ ಎಂದರೆ , ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಾಕು ಎಂಬ ಅರ್ಥ . ಒಂದು ರೀತಿಯಲ್ಲಿ ಈಗಿನ ಕಂಪ್ಯೂಟರ್ ಗಳೂ ಭಾಗಶಃ ಕೃತಕ ಬುದ್ದಿಜೀವಿ ಗಳೇ .ಆದರೆ ಅವಕ್ಕೆ ದಾರಿ ತೋರಲು ಮನುಷ್ಯ ಮೆದುಳಿನ ಅವಶ್ಯಕತೆ ಇತ್ತು . 

ಕಂಪ್ಯೂಟರ್ ಆಧರಿತ  ಸಾಫ್ಟ್ ವೆರ್  ಹಲವು ಉದ್ಯೋಗಗಳನ್ನು ಸೃಷ್ಟಿಸಿತು . ಜತೆಗೆ ಹಲವು ಉದ್ಯೋಗಗಳು ಅಪ್ರಸ್ತುತ ವಾದುವು . ನಮ್ಮ ದೇಶದಲ್ಲಿ ಇದು ಒಂದು ಕಡೆ  ಆರ್ಥಿಕ  ಸಮಾನತೆ (equalizer )ತರುವ ಮಾರ್ಗವಾದರೆ ಇನ್ನೊಂದೆಡೆ ಸಾಂಪ್ರದಾಯಿಕ ಉದ್ಯೋಗ ಗಳನ್ನು ಅವಲಂಬಿಸಿದವರು ಮತ್ತು ಇವರ ನಡುವೆ ದೊಡ್ಡ ಕಂದರ ನಿರ್ಮಾಣ ವಾಯಿತು . ಮಾರುಕಟ್ಟೆಯಲ್ಲಿ ಹಣ ಚಲಾವಣೆ ದಿಢೀರ್ ಹೆಚ್ಚು ಆಯಿತು . ನಗರಗಳಲ್ಲಿ ಮಾಲ್ ಸಂಸ್ಕೃತಿ ಬೆಳೆಯಿತು, ನಿವೇಶನ ಬೆಲೆ ಗಗನಕ್ಕೆ ಏರಿತು  .;ಕೌಟುಂಬಿಕ ಸಾಮಾಜಿಕ ಬಂಧಗಳು ಶಿಥಿಲ ವಾದುವು . 

ಇದೇ ವೈಜ್ಞಾನಿಕ ಬೆಳವಣಿಗೆ ಇಂದು ಕೃತಕ ಬುದ್ದಿ ಮತ್ತೆಯ ರೂಪದಲ್ಲಿ ಬಂದಿದೆ .ಹಲವರ ಉದ್ಯೋಗ ಕಸಿಯುವ ,ಹೊಸ ಮಾನವ ಉದ್ಯೋಗ ಸೃಷ್ಟಿ ಕುಂಠಿತ ಗೊಳಿಸುವ ಇದು ಒಂದು ಭಸ್ಮಾಸುರ ನಾಗಿ ಕಾಡುವುದೇ ?ನಮ್ಮ ಯುವ ಪೀಳಿಗೆಯ ಮೇಲೆ ಏನು ಪರಿಣಾಮ ಬೀರೀತು ?ದಾವೋಸ್ ನಲ್ಲಿ ನಡೆಯುವ ವಿಶ್ವ ವಾಣಿಜ್ಯ  ಕೂಟದಲ್ಲಿ ಕೂಡಾ ಈ ವರ್ಷ ಈ ವಿಷಯದ ಮೇಲೆ ಗಂಭೀರ ಚರ್ಚೆ ನಡೆಯಲಿದೆ

ಬುಧವಾರ, ಜನವರಿ 3, 2024

 ಬಹಳ ರೋಚಕವಾದ ಇನ್ನೊಂದು ಆತ್ಮ ಕತೆ ಓದಿ ಮುಗಿಸಿದ್ದೇನೆ .ಡಾ ಲಿಂಡಿ ರಾಜನ್ ಕಾರ್ಟ್ನರ್ ಅವರ ತ್ರೀ ಕಂಟ್ರೀಸ್ ತ್ರೀ ಲೈವ್ಸ್ (ಮೂರು ದೇಶ ಮೂರು ಜೇವಿತ ).ತಾತ ತೂತು ಕುಡಿ ಮೂಲದವರು .ಸ್ವಾತಂತ್ರ್ಯ ಪೂರ್ವದ ಬರ್ಮಾ ದೇಶದಲ್ಲಿ ವೈದ್ಯ ವೃತ್ತಿ .ಲೇಖಕಿಯ ಜನನ ಅಲ್ಲಿಯೇ .ಮೊದಲ ಶಾಲೆ ಕೂಡಾ . ಎರಡನೇ ಮಹಾಯುದ್ದದ ಸಮಯ . ಧಾಳಿಯಿಂದ ತಪ್ಪಿಸಿ ಕೊಳ್ಳಲು ಆಗಾಗ ಊರು ಬದಲಾವಣೆ . ಕೊನೆಗೆ ಬೇಸತ್ತು ಮದ್ರಾಸ್ ನಗರಕ್ಕೆ ಆಗಮಿಸಿ ಅಲ್ಲಿಯೇ ವಾಸ . ಅವರ ಅಜ್ಜನ ಹೆಸರಿನಲ್ಲಿ ಒಂದು ರಸ್ತೆ ಕೂಡಾ ಚೆನ್ನೈ ಟಿ ನಗರ ದಲ್ಲಿ ಇರಬೇಕು . ಬ್ರಾಹ್ಮಣರೇ ಅಧಿಕ ಸಂಖ್ಯೆಯಲ್ಲಿ ಇದ್ದ ಪ್ರದೇಶ . ಪ್ರಾಥಮಿಕ ಶಿಕ್ಷಣ ತರುವಾಯ ಬೆಂಗಳೂರಿನ ಬಿಷಪ್ ಕಾಟನ್ ಹೈ ಸ್ಕೂಲ್ . ಅಂದಿನ ಬೆಂಗಳೂರಿನ ಚಿತ್ರಣ ಇದೆ . ಆಗೆಲ್ಲಾ ಮಿಷನ್ ಶಾಲೆಗಳಲ್ಲಿ ವಿದೇಶಿ ಅಧ್ಯಾಪಕರು ಅಧಿಕ .

ಕಾಲೇಜು ವಿದ್ಯಾಭ್ಯಾಸಕ್ಕೆ ಲಕ್ನೋ ನಗರದ ಒಂದು ಮಿಷನ್ ಕಾಲೇಜು . ಈ ಸಂಸ್ಥೆಗಳು ಎಲ್ಲಾ ಅಮ್ಮನ ಆಯ್ಕೆ .ಮಗಳಿಗೆ ಅತ್ಯತ್ತಮ ಶಿಕ್ಷಣ ದೊರೆಯಲಿ ಎಂಬ ಹಾರೈಕೆಯಲ್ಲಿ .ಆ ಕಾಲದ ಗ್ರಾಂಡ್ ಟ್ರಂಕ್ ಎಕ್ಸ್ಪ್ರೆಸ್ ಪ್ರಯಾಣದ ವಿವರ ಚೆನ್ನಾಗಿದೆ . ಆ ಕಾಲೇಜು ಎಲ್ಲಾ ವಿಧದಲ್ಲಿ ಚೆನ್ನಾಗಿತ್ತು .ಆದರೆ ಒಂದು ಎಡವಟ್ಟು .ಹಿಂದಿ ಕಡ್ಡಾಯ . ಮೊದಲನೇ ಸಲ ಹಿಂದಿಯಲ್ಲಿ ಅನುತ್ತೀರ್ಣ ಆದ ಕಾರಣ ಪ್ರಸಿದ್ಧ ವೆಲ್ಲೂರ್ ಸಿ ಎಂ ಸಿ ಮೆಡಿಕಲ್ ಕಾಲೇಜು ಅಡ್ಮಿಶನ್ ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ .ಛಲ ಬಿಡದೆ ಪುನಃ ಕುಳಿತು ಉತ್ತೀರ್ಣ . ವೆಲ್ಲೂರ್ ಕಾಲೇಜಿಗೆ ಸೇರ್ಪಡೆ .


ವೆಲ್ಲೂರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಜೀವನ .,ಅಲ್ಲಿಯ ಶಿಸ್ತು , ಕಾಯಕ ಸಂಸ್ಕೃತಿ ಮತ್ತು ಅಧ್ಯಾಪಕ ವೃಂದದ ಸೇವಾ ಬದ್ಧತೆ ಯ ವಿವರ ಇದೆ . ಅಲ್ಲಿಯೇ ಸೀನಿಯರ್ ಆಗಿದ್ದ ಮೈಕೆಲ್ ಎಂಬ ಆಂಗ್ಲೋ ಇಂಡಿಯನ್ ಜತೆ ಮದುವೆ .ಮತ್ತು ಇಂಗ್ಲೆಂಡ್ ಗೆ ಪ್ರಯಾಣ .ಅಲ್ಲಿ ಜೀವನ ಹೂವಿನ ಹಾಸಿಗೆ ಆಗಿರಲಿಲ್ಲ .ವರ್ಣ ಭೇಧ ನೀತಿಯಿಂದ ಬೇಸರ . ಮೈಕೆಲ್ ಎಫ್ ಆರ್ ಸಿ ಎಸ್ ಪದವಿ ಗಳಿಸಿದ ಒಡನೆ ಖಾಯಂ ನೆಲಸುವ ಉದ್ದೇಶದಿಂದ ಭಾರತಕ್ಕೆ ಆಗಮಿಸಿ ಕರ್ನಾಟಕ ಕೋಲಾರದಲ್ಲಿ ಮಿಷನ್ ಆಸ್ಪತ್ರೆಯಲ್ಲಿ ಕೆಲಸ . ಆದರೆ ತನ್ನ ಜ್ಞಾನದ ಸದುಪಯೋಗ ಮಾಡುವ ವಾತಾವರಣ ಇಲ್ಲದೇ ಬೇಸತ್ತು ಇಂಗ್ಲೆಂಡ್ ಮರುಪಯಣ . ಅಲ್ಲಿ ಹಲವು ಆಸ್ಪತ್ರೆಗಳಲ್ಲಿ ಕೆಲಸ . ನಡುವೆ ಪುತ್ರಿ ಕಿರಣಳ ಜನನ . ಇನ್ನೇನು ಮೈಕೆಲ್ ಗೆ ತಜ್ಞ ವೈದ್ಯ ಉಪಾಧಿ ಸಿಕ್ಕು ,ಮನೆ ಮಾಡಿ ಸೆಟ್ಲ್ ಆದಿವಿ ಎಂದು ಕೊಳ್ಳುವಾಗ ಹೃದಯಾಘಾತದಿಂದ ಆತ ಅಸ್ವಸ್ಥ . ಮುಂದೆ ಪೂರ್ಣ ಚೇತರಿಸಿ ಕೊಳ್ಳಲೇ ಇಲ್ಲ . ತಾನು ಮನಸಿಲ್ಲದ ಮನಸಿನಲ್ಲಿ ಗಂಡನ ಪ್ರೋತ್ಸಾಹದಿಂದ ರಕ್ತ ಶಾಸ್ತ್ರ (ಹಿಮಟೋಲೊಜಿ )ಯಲ್ಲಿ ರಾಯಲ್ ಕಾಲೇಜು ಫೆಲೋಶಿಪ್ ಗಳಿಸಿ ಜೇವನ ಮುಂದುವರಿಕೆ ..ಮುಂದೆ ಅಲ್ಲಿ ಪರಿಚಯ ಆದ ಇತಿಹಾಸಜ್ಞ ಅಲನ್ ಪೈಪರ್ ಜತೆ ಪುನರ್ವಿವಾಹ .

ಲಿಂಡಿ ಅವರ ಸಹೋದರಿ ವೆಲ್ಲೂರು ಮತ್ತು ಅಮೇರಿಕಾ ದಲ್ಲಿ ನರ್ಸಿಂಗ್ ಕಲಿತು ,ಹೃದ್ರೋಗ ತಜ್ಞರನ್ನು ಮದುವೆಯಾಗಿ ಅಲ್ಲಿಯೇ ಸೇವೆ .

ಅಲನ್ ಪೈಪರ್ ಜತೆ ಚೈನಾ ಯಾತ್ರೆಯಲ್ಲಿ ,ತಾನು ಅಲ್ಲಿಯ ನೈರ್ಮಲ್ಯ ,ಶಿಸ್ತು ನೋಡಿ ನಮ್ಮ ಭಾರತದಲ್ಲಿ ಇವುಗಳು ಯಾಕೆ ಇಲ್ಲಾ ಎಂದು ಕೇಳಿದಾಗ ಅಲನ್ ಅಂದರಂತೆ 'ಅಲ್ಲಿ ಒಂದು ಆತ್ಮ ಇದೆ(ಇಲ್ಲಿ ಇಲ್ಲದ ) "