ಬೆಂಬಲಿಗರು

ಬುಧವಾರ, ಜನವರಿ 17, 2024

Human beings need not apply

 ಹೋದ ವಾರ ಕಲ್ಲಿಕೋಟೆ ಯಲ್ಲಿ ನಡೆದ ಕೇರಳ ಲಿಟೆರರಿ ಫೆಷ್ಟಿವಲ್ ನಲ್ಲಿ ನಡೆದ ಗೋಷ್ಟಿಗಳನ್ನು  ಯು ಟ್ಯೂಬ್ ನಲ್ಲಿ ನೋಡುತ್ತಿದ್ದೆ .ಒಂದು ಗೋಷ್ಟಿಯ ಶೀರ್ಷಿಕೆ ನನ್ನ ಗಮನ ಸೆಳೆಯಿತು .ಹ್ಯೂಮನ್ ಬೀಯಿಂಗ್ಸ ನೀಡ್ ನೋಟ್  ಎಪ್ಲಯ್(Human beings need not apply )ಎಂದಾಗಿತ್ತು ಅದು . ಮನುಷ್ಯರು ಅರ್ಜಿ ಹಾಕುವುದು ಬೇಡ ಎಂಬ ಅರ್ಥ . 

ಕೆಲಸಕ್ಕೆ ಅರ್ಜಿ ಕರೆಯುವಾಗ ಇಂತಹ ಷರತ್ತುಗಳು ಇರುವುದು ಸಹಜ  ಮೂವತ್ತು ವಯಸ್ಸಿನ ಮೇಲಿನವರು ಬೇಡ ,ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಿ ಇತ್ಯಾದಿ . ಆದರೆ ಇಲ್ಲಿ ಮನುಷ್ಯರೇ ಬೇಡ ಎಂದರೆ , ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಾಕು ಎಂಬ ಅರ್ಥ . ಒಂದು ರೀತಿಯಲ್ಲಿ ಈಗಿನ ಕಂಪ್ಯೂಟರ್ ಗಳೂ ಭಾಗಶಃ ಕೃತಕ ಬುದ್ದಿಜೀವಿ ಗಳೇ .ಆದರೆ ಅವಕ್ಕೆ ದಾರಿ ತೋರಲು ಮನುಷ್ಯ ಮೆದುಳಿನ ಅವಶ್ಯಕತೆ ಇತ್ತು . 

ಕಂಪ್ಯೂಟರ್ ಆಧರಿತ  ಸಾಫ್ಟ್ ವೆರ್  ಹಲವು ಉದ್ಯೋಗಗಳನ್ನು ಸೃಷ್ಟಿಸಿತು . ಜತೆಗೆ ಹಲವು ಉದ್ಯೋಗಗಳು ಅಪ್ರಸ್ತುತ ವಾದುವು . ನಮ್ಮ ದೇಶದಲ್ಲಿ ಇದು ಒಂದು ಕಡೆ  ಆರ್ಥಿಕ  ಸಮಾನತೆ (equalizer )ತರುವ ಮಾರ್ಗವಾದರೆ ಇನ್ನೊಂದೆಡೆ ಸಾಂಪ್ರದಾಯಿಕ ಉದ್ಯೋಗ ಗಳನ್ನು ಅವಲಂಬಿಸಿದವರು ಮತ್ತು ಇವರ ನಡುವೆ ದೊಡ್ಡ ಕಂದರ ನಿರ್ಮಾಣ ವಾಯಿತು . ಮಾರುಕಟ್ಟೆಯಲ್ಲಿ ಹಣ ಚಲಾವಣೆ ದಿಢೀರ್ ಹೆಚ್ಚು ಆಯಿತು . ನಗರಗಳಲ್ಲಿ ಮಾಲ್ ಸಂಸ್ಕೃತಿ ಬೆಳೆಯಿತು, ನಿವೇಶನ ಬೆಲೆ ಗಗನಕ್ಕೆ ಏರಿತು  .;ಕೌಟುಂಬಿಕ ಸಾಮಾಜಿಕ ಬಂಧಗಳು ಶಿಥಿಲ ವಾದುವು . 

ಇದೇ ವೈಜ್ಞಾನಿಕ ಬೆಳವಣಿಗೆ ಇಂದು ಕೃತಕ ಬುದ್ದಿ ಮತ್ತೆಯ ರೂಪದಲ್ಲಿ ಬಂದಿದೆ .ಹಲವರ ಉದ್ಯೋಗ ಕಸಿಯುವ ,ಹೊಸ ಮಾನವ ಉದ್ಯೋಗ ಸೃಷ್ಟಿ ಕುಂಠಿತ ಗೊಳಿಸುವ ಇದು ಒಂದು ಭಸ್ಮಾಸುರ ನಾಗಿ ಕಾಡುವುದೇ ?ನಮ್ಮ ಯುವ ಪೀಳಿಗೆಯ ಮೇಲೆ ಏನು ಪರಿಣಾಮ ಬೀರೀತು ?ದಾವೋಸ್ ನಲ್ಲಿ ನಡೆಯುವ ವಿಶ್ವ ವಾಣಿಜ್ಯ  ಕೂಟದಲ್ಲಿ ಕೂಡಾ ಈ ವರ್ಷ ಈ ವಿಷಯದ ಮೇಲೆ ಗಂಭೀರ ಚರ್ಚೆ ನಡೆಯಲಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ