ಬೆಂಬಲಿಗರು

ಮಂಗಳವಾರ, ನವೆಂಬರ್ 26, 2019

ಗಟ್ಟಿ ಸಾಹಿತ್ಯದ ಕೆ ಟಿ ಗಟ್ಟಿ ಭೇಟಿ

ನಮ್ಮ ದೇಶದಿಂದ ಸಾವಿರಾರು ಮಂದಿ ಉದ್ಯೋಗಾರ್ಥಿ ಗಳಾಗಿ ವಿದೇಶಗಳಿಗೆ 

ತೆರಳುತ್ತಾರೆ .ಅದರಲ್ಲೂ ಮಧ್ಯ ಪ್ರಾಚ್ಯ ಮತ್ತು ಆಫ್ರಿಕಾ ಖಂಡದ ದೇಶಗಳಿಗೆ 

ತಜ್ನರು ಕುಶಲ ಕರ್ಮಿಗಳು ಮತ್ತು ಸಾಮಾನ್ಯ ಕೆಲಸ ಗಾರರು ಹೋಗುವುದು ಹೆಚ್ಚು .
ಮೊದಲು ಹೋಗುವಾಗ  ಒಂದಿಷ್ಟು ಹಣ ಮಾಡಿ ಹಿಂತಿರುಗುವ  ಗುರಿ ಇರುತ್ತದೆ .

ದಿನ ಕಳೆದಂತೆ  ಬೇಕುಗಳು ಮತ್ತು ಗುರಿಗಳ ಮಟ್ಟ ಏರುತ್ತದೆ .ಊರಿಗೆ ರಜೆಯಲ್ಲಿ 

ತೆರಳುವಾಗ ಅಲ್ಲಿಯ  ತಮ್ಮ ಕಲಿಕೆಗೆ ಅನುಗುಣವಾದ ಕೆಲಸ ,ಗೌರವ ಯುತ 

ವಾದ ಸಂಬಳ  ಮರೀಚಿಕೆ ಎನಿಸುತ್ತದೆ .ಕುಟುಂಬದವರೂ  ವಿದೇಶದ ಸಂಪಾದನೆ 

ಯ ಮಟ್ಟಕ್ಕೆ ತಮ್ಮ ಜೀವನ ಶೈಲಿ ಏರಿಸಿರುತ್ತಾರೆ .ಇದರಿಂದ ಮರಳಿ ನಾಡಿಗೆ  

ಬರುವ ಗಡುವು ಮುಂದಕ್ಕೆ ಹೋಗುತ್ತದೆ.

ವಿದೇಶದಲ್ಲಿ  ನಮ್ಮ ನಾಡಿಗೆ ಹೋಲಿಸಿದರೆ ಅಧಿಕ ಸಂಬಳ ಬರುವುದು .ಕೆಲವು 

ಕಡೆ  ಕೆಲಸದ ವಾತಾವರಣ ಹಿತವಾಗಿರುವುದು .ಆದರೆ  ಆ ನಾಡಿನವರಿಗೆ ವಲಸೆ 

ಉದ್ಯೋಗಿಗಳ  ಬಗ್ಗೆ   ಪ್ರೀತಿ ,ಅಸೂಯೆ  ಮತ್ತು ದ್ವೇಷ  ಏಕ ಕಾಲಕ್ಕೆ ಬೇರೆ ಬೇರೆ 

ಪ್ರಮಾಣಗಳಲ್ಲಿ ಇರುವುದು .ಅದಕ್ಕೆ  ಆನುಗುಣವಾಗಿ ಆಗಾಗ್ಗೆ  ಊರಿಗೆ ಮರಳುವ 

ಆಲೋಚನೆ ಬರುವುದು .

ಇದು ಒಂದು ಸಂಕೀರ್ಣ ವಿಚಾರ .ಇದನ್ನು ಆದರಿಸಿ  ಕನ್ನಡದಲ್ಲಿ ಬಹಳ  ಕೃತಿಗಳು 

ಬಂದಿಲ್ಲ .ನನ್ನ ಮೇಲೆ ಪ್ರಭಾವ ಬೀರಿದ ಎರಡು ಕಾದಂಬರಿಗಳು , ಒಂದು 

ಕೆ ಟಿ ಗಟ್ಟಿ ಯವರ  ಅರಗಿನ ಮನೆ , ಎರಡು  ಮಲಯಾಳಿ ಲೇಖಕ  ಬೆನ್ಯಾಮೀನ್ 

ಅವರ  ಆಡು ಜೀವಿತಮ್ ಇದರ ಕನ್ನಡ ಅನುವಾದ ಡಾ ಅಶೋಕ್ ಕುಮಾರ್ 

.ಇದರಲ್ಲಿ  ಎರಡನೆಯದು ಗಲ್ಫ್  ರಾಷ್ಟ್ರದಲ್ಲಿ ನಡೆದ ಕತೆಯಾದರೆ ,ಕೆ ಟಿ 

ಗಟ್ಟಿಯವರ ಕಾದಂಬರಿ ಯ  ಆಫ್ರಿಕಾ ಖಂಡದ ಇತಿಯೋಪಿಯ ದೇಶಕ್ಕೆ ಶಿಕ್ಷಕ 

ನಾಗಿ ತೆರಳಿದ  ಕನ್ನಡಿಗನ ಕಥೆ .ಸ್ವತಃ  ಗಟ್ಟಿಯವರೇ  ಅಲ್ಲಿ ಅಧ್ಯಾಪಕನಾಗಿ 

ಇದ್ದ ಕಾರಣ ಇದರಲ್ಲಿ  ಭಾಗಶಃ ಆತ್ಮ ಚರಿತ್ರೆಯ ಛಾಯೆ ಇದೆ.

         ಬಹು ಮುಖ ಸಂಸ್ಕೃತಿ ಮತ್ತು ಬಹು ಭಾಷೆಗಳ  ಇತಿಯೋಪಿಯ  ಇತಿಹಾಸ 

ಇರುವ  ದೇಶ .ವರ್ಣ ರಂಜಿತ  ಚಕ್ರವರ್ತಿ ಹ್ಯಾಲಿ ಸಲಾಸೆ ಪದಚ್ಯುತಿ ಗೊಂಡು

ಕಮ್ಯೂನಿಸ್ಟ್ ಆಢಳಿತ ಇದ್ದ ಕಾಲದ ಚಿತ್ರಣ ಅರಗಿನ ಮನೆಯಲ್ಲಿ ಇದೆ.ಈ ಪುಸ್ತಕ 

ನನ್ನಲ್ಲಿ ಆಫ್ರಿಕಾ ದ ಮೇಲಿನ  ಕುತೂಹಲ ಬೆಳೆಸಿತು .ಉಗಾಂಡ ,ಕೀನ್ಯ ,ದಕ್ಷಿಣ 

ಆಫ್ರಿಕಾ  ,ಜಿಂಬಾಬ್ವೆ ಗಳ  ಸಂಸ್ಕೃತಿ  ಜೀವನ ಮತ್ತು ಸಾಹಿತ್ಯ  ಓದುವ ಪ್ರೇರಕ 

ಆಯಿತು .ಅದರಲ್ಲೂ ಭಾರತ ಮೂಲದ   ಎಂ ಜಿ ವಾಸಂಜಿ,ಅಹ್ಮದ್ ಕತ್ರಡ ಮತ್ತು 

ಮಯೂರ್ ಮಧ್ವಾನಿ ಅವರ  ಕೃತಿಗಳು  ತಮ್ಮ ತಮ್ಮ ನಾಡಿನ ಬದುಕು ಮತ್ತು 

ಇತಿಹಾಸದ  ಮೇಲೆ ಒಳನೋಟ  ಒದಗಿಸಿದವು .

             ಕೆ ಟಿ ಗಟ್ಟಿ ಯವರು  ಹಲವು ಒಳ್ಳೆಯ ಕಾದಂಬರಿಗಳ ಜತೆಗೆ  ಶಿಕ್ಷಣಕ್ಕೆ 

ಸಂಬಂದಿಸಿದ ಮೌಲಿಕ ಕೃತಿಗಳನ್ನೂ ಕೊಟ್ಟಿರುವರು .ಈ ಹಿರಿಯರು ದಕ್ಷಿಣ 

ಕನ್ನಡ ಜಿಲ್ಲೆಯ ಉಜಿರೆಯಲ್ಲಿ  ಎಲ್ಲಾ ಗೌಜಿ ಗೊಂದಲ ಪ್ರಚಾರ ಗಳಿಂದ  ದೂರ 

ಇದ್ದು   ಸಾಹಿತ್ಯ ಶಿಕ್ಷಣ ಸೇವೆ ಮಾಡುತ್ತ  ಬಂದಿದ್ದಾರೆ .ಕಾರಂತರು  ಪುತ್ತೂರು 

ಮತ್ತು ತೇಜ್ಜಸ್ವಿ  ಮೂಡಿಗೆರೆ ಯ  ಮೂಲೆಯಲ್ಲಿ ನೆಲಸಿ ಮೌಲಿಕ  ಕೃತಿಗಳನ್ನು

 ನೀಡಿದಂತೆ .

  ಕೆ ಟಿ ಗಟ್ಟಿ ಯವರನ್ನು ಕಂಡು ಮಾತನಾಡಿಸಲು  ಹೋದ ವಾರ ಅವರ 

ಮಂಗಳೂರು ನಿವಾಸಕ್ಕೆ ಮಿತ್ರ ವರದರಾಜ ಚಂದ್ರಗಿರಿ ಜತೆ ಹೋದಾಗ ,

ಬರಹ ಗಾರನನ್ನು  ಅವನ ಬರವಣಿಗೆಯ  ಏರು ಕಾಲದಲ್ಲಿ ,ಚಿತ್ರ ನಟಿ ಯನ್ನು 

ಅವಳ ಯೌವನ ಕಾಲದಲ್ಲಿ ನೋಡ ಬೇಕು .ಎಲ್ಲಾ ಬಿಟ್ಟು  ನನ್ನನ್ನು ನೋಡಲು 

ಬಂದಿದ್ದೀರಲ್ಲ ಎಂದು ನಗೆಯಾಡಿದರು .



              










                  


ಬುಧವಾರ, ನವೆಂಬರ್ 20, 2019

ಕೆಮ್ಮು

ಕೆಮ್ಮು ಶರೀರದ ರಕ್ಷಣಾತ್ಮಕ ಸಂಕೀರ್ಣ ಕ್ರಿಯೆ .ಶ್ವಾಸ ವಾಯು ಸಾಗುವ 

ದಾರಿಯಲ್ಲಿ ಅನಾಪೇಕ್ಷಣೀಯ ವಸ್ತುಗಳನ್ನು (ರೋಗಾಣುಗಳನ್ನು ಸೇರಿ )ಹೊರ 

ಹಾಕುವುದೇ ಇದರ ಉದ್ದೇಶ .
                              Image result for respiratory system diagramಉದಾಹರಣೆಗೆ  ಬೇಡದ ವಸ್ತು ಗಂಟಲ ಒಳ ಚರ್ಮದ ಸಂಪರ್ಕಕ್ಕೆ  ಬಂದೊಡನೇ  ಅದರ ಮೈಯಲ್ಲಿ ಇರುವ ಸಿಲಿಯಾ ಎಂಬ ಪೊರಕೆ ಅದನ್ನು ಸಾರಿಸಿ ಹೊರ ಹಾಕಲು 

ಯತ್ನಿಸುವುದು .ಒಡನೆಯೇ  ಮೆದುಳಿಗೆ ಸಂದೇಶ ರವಾನೆ ಆಗುವುದು .

ಮೆದುಳಿನಿಂದ  ವಪೆ ಮತ್ತು  ಎದೆಯ  ನಿಶ್ವಾಸ  ಮಾಂಸಖಂಡ ಗಳು ಸಂಕುಚ 

ಗೊಳ್ಳುವಂತೆ  ಆದೇಶ ಬರುವುದು .ಇದರಿಂದ  ಶ್ವಾಸ ಕೋಶ ಗಳು ಹಿಗ್ಗಿ ಗಾಳಿ 

ಎಳೆದು ಕೊಳ್ಳುವವು .ತತ್ಸಮಯ  ಧ್ವನಿ ಪೆಟ್ಟಿಗೆ ಯ  ಕವಾಟ ಮುಚ್ಚುವುದು .ಶ್ವಾಸ 

ಕೋಶ ಮತ್ತು ನಾಳಗಳಲ್ಲಿ ಗಾಳಿ ತುಂಬಿದೆ .ಹೊರ ಹೋಗುವ ದಾರಿ ಮುಚ್ಚಿದೆ .ಆಗ 

ಮೆದುಳಿನ ಆದೇಶದಂತೆ  ಉದರದ ಮಾಂಸಖಂಡ ಮತ್ತು  ಎದೆಯ ನಿಶ್ವಾಸದ 

ಸ್ನಾಯುಗಳು ಬಲವಾಗಿ ಸಂಕುಚಿತ ಗೊಂಡು ಮುಚ್ಚಿದ ಧ್ವನಿ ಪೆಟ್ಟಿಗೆ ಕವಾಟ ವನ್ನು 

ತೆರೆದು ವೇಗ ಮತ್ತು ಬಲದಿಂದ ನಿಶ್ವಾಸ ವಾಯು ಬೇಡದ ವಸ್ತುವನ್ನು ಹೊರ 

ಹಾಕಲು ನಮ್ಮ ಅರಿವಿಲ್ಲದಂತೆ ಸಹಾಯ ಮಾಡುವವು .ಇದೇ ಕೆಮ್ಮು .

              ಗಂಟಲು ಶ್ವಾಸ  ನಾಳ ಮತ್ತು ಶ್ವಾಸ ಕೋಶಗಳ ಸೋಂಕು ,

ಗಾಳಿಯಲ್ಲಿನ  ಕಲ್ಮಶ ,ಶ್ವಾಸ ದಾರಿಯಲ್ಲಿ ಗಡ್ಡೆಗಳು ,ಎಲರ್ಜಿ ಉಂಟು ಮಾಡುವ 

ವಸ್ತುಗಳು ಕೆಮ್ಮಿಗೆ ಸಾಮಾನ್ಯ ಕಾರಣ .

                    ಸಣ್ಣ ಮಕ್ಕಳಲ್ಲಿ ವೈರಸ್ ಸೋಂಕು ಕೆಮ್ಮಿಗೆ ಸಾಮಾನ್ಯ ಕಾರಣ .

ಇಂತಹ ಕೆಮ್ಮಿಗೆ ಆಂಟಿ ಬಯೊಟಿಕ್ ಬೇಡ .ನಾಲ್ಕು ವರ್ಷದಿಂದ ಕೆಳಗಿನ 

ಮಕ್ಕಳಿಗೆ  ಕೆಮ್ಮು ಅದುಮಿಸುವಂತಹ  ಶಿರಪ್ ಕೊಡದಿರುವುದೇ ಲೇಸು .ಇಂತಹ 

ಔಷಧಿಗಳು ಮೆದುಳಿನ ಕೆಮ್ಮು  ಜನಕ ಕೋಶಗಳನ್ನು ನಿಷ್ಕ್ರಿಯ ಮಾಡುತ್ತವೆ 

.ಇವುಗಳ ಉಪಯೋಗಕ್ಕಿಂತ ಅಡ್ಡ ಪರಿಣಾಮಗಳೆ ಅಧಿಕ ಎಂದು ತಜ್ನನರು 

ಹೇಳುವರು .

        ಇನ್ನೂ  ಎಲರ್ಜಿ ಆಸ್ತಮಾ ದಂತ ಕಾಯಿಲೆಗಳಲ್ಲಿ  ಶ್ವಾಸ ನಳಿಕೆ ಗಳು 

ಸಂಕುಚಿತಗೊಂಡು  ನಿಶ್ವಾಸ ಕಷ್ಟ ವಾಗುವುದು .ಅಲ್ಲದೆ  ಶ್ವಾಸ ಮಾರ್ಗ ದಿಂದ 

ಸುಯಿನ್ ಸುಯಿನ್ ಎಂಬ ಸದ್ದು ಮತ್ತು ಕೆಮ್ಮು ಬರುವುದು .ಇದಕ್ಕೆ  ಶ್ವಾಸ ನಳಿಕೆ 

ಗಳನ್ನು ಹಿಗ್ಗಿಸುವ ಮತ್ತು ಎಲರ್ಜಿ ನಿವಾರಕ  ಔಷಧಿ ಗಳನ್ನು  ಸೇದುವ ರೂಪದಲ್ಲಿ 

ಅಥವಾ ಮಾತ್ರೆ ,ಶಿರಪ್ ರೂಪದಲ್ಲಿ ಕೊಡುವರು .ಅದನ್ನು ಮಕ್ಕಳೂ ಸೇವಿಸ 

ವೈದ್ಯರ  ಸಲಹೆ ಮೇರೆಗೆ ಸೇವಿಸ ಬಹುದು .

            ಶ್ವಾಸ ಕೋಶದ ಸೋಂಕಿಗೆ  ನ್ಯೂಮೋನಿಯ ಎನ್ನುವರು .ಶ್ವಾಸ ನಾಳದ 

ಇನ್ಫೆಕ್ಷನ್  ಗೆ  ಬ್ರೊಂಕೈಟೀಸ್ ಎಂದೂ  ಕರೆಯುವರು .ಇವುಗಳಿಂದಲೂ ಕೆಮ್ಮು 

ಬರುವುದು .ಎರಡು ವಾರಗಳಿಗಿಂತ  ಮೀರಿದ ಕೆಮ್ಮು ಇದ್ದರೆ ಕಫ ಪರೀಕ್ಷೆ ಮಾಡಿ  

ಕ್ಷಯ  ರೋಗ  ಇದೆಯೋ ಎಂದು ಪತ್ತೆ ಹಚ್ಚ ಬೇಕು .

            ಬೀಡಿ ಸಿಗರೇಟ್ ಸೇವನೆ ಯಿಂದ  ಕೆಮ್ಮು ಬರುವುದು .ಯಾಕೆಂದರೆ 

ಹೊಗೆ ,ತಂಬಾಕು ಎರಡೂ  ಶರೀರಕ್ಕೆ ಹಾನಿಕರ.

ಕೆಲವು ಔಷಧಿ ಗಳು  ( ಉದಾ ಬಿ ಪಿ ಗೆ ಉಪಯೋಗಿಸುವ ಎನಾಲಾಪ್ರಿಲ್  )

,ಕೆಲವರಲ್ಲಿ  ಅಸಾಧ್ಯ ಕೆಮ್ಮು ಉಂಟು ಮಾಡಬಹುದು .

                     ಕೆಮ್ಮುವವರು ಬಾಯಿ ಮೂಗಿಗೆ ಬಟ್ಟೆ ಇಟ್ಟರೆ  ಉಳಿತು .ಇದರಿಂದ 

ಕಫದ ಕಣಗಳ ಮೂಲಕ ರೋಗಾಣುಗಳು ಹರಡುವುದು  ಕಡಿಮೆ ಆಗುವುದು .







ಸೋಮವಾರ, ನವೆಂಬರ್ 18, 2019

ಎಕ್ಸ್ಛೇಂಜ್ ರೇಟ್ ಮನೋಭಾವ

ನಮ್ಮ ದೇಶದಲ್ಲಿ ಎಷ್ಟು ದುಡಿದರೂ ಸಾಲದು , ಇನ್ಕಮ್ ಟಾಕ್ಸ್ ಬೇರೆ ಕಟ್ಟಬೇಕು 

ಎಂದು ಲಕ್ಷಾಂತರ ಮಂದಿ  ಉದ್ಯೋಗ ಅರಸಿ  ಮಧ್ಯ ಪ್ರಾಚ್ಯದ ದೇಶಗಳಿಗೆ  

ಕನಸುಗಳನ್ನು ಹೊತ್ತು ಹೋಗುವರು .ಅಲ್ಲಿಯ ಕೆಲಸದ ವೀಸಾ ಕ್ಕಾಗಿ  ಸಾಲ 

ಸೋಲ ಮಾಡುವವರು ಹಲವರು. ಸಾವಿರ ದಿರ್ಹಮ್ ಸಂಬಳ ಎಂದರೆ  ಅಬ್ಬಬ್ಬಾ 

ನಮ್ಮ ಇಪ್ಪತ್ತು ಸಾವಿರ ರೂಪಾಯಿ .ಟಾಕ್ಸ್ ಏನೂ ಇಲ್ಲ .ಐನೂರು ಸಾವಿರ 

ರೂಪಾಯಿ ಯಲ್ಲಿ  ಊಟ ಉಪಚಾರ ಕಳೆದರೆ ಉಳಿದ ಹಣ ಮನೆಗೆ ಕಳುಹಿಸ 

ಬಹುದು ಎಂದೆಲ್ಲಾ ಆಲೋಚನೆ .

                  ಹೊಟೇಲ್ ನಲ್ಲಿ  ಚಹಾ ಸೇವಿಸುವಾ ಎಂದು ಹೋದರೆ  ಅದಕ್ಕೆ 

ಎರಡು ದಿರ್ಹಮ್ .ಕೂಡಲೇ ಲೆಕ್ಕ ಮಾಡುವೆವು ,ಅಂದರೆ  ಇಂಡಿಯಾದ  

ನಲುವತ್ತು ರೂಪಾಯಿ ,ಮನಸ್ಸು ಅಳುವುದು .ಚಹದ ರುಚಿ ಕೆಡುವುದು .

ತಿಂಗಳು ತಿಂಗಳು ಹೇರ್ ಕಟ್ ಗೆ ಹೋದರೆ ನಾಪಿತ  ಹದಿನೈದು ದಿರ್ಹಮ್ 

ಎಂದು ಬರೆದಿರುವನು .ಅಬ್ಬಬ್ಬಾ  ಮುನ್ನೂರು ರೂಪಾಯಿ , ಕೂದಲೇ ಕಿತ್ತು 

ಬರುವುದು .ತಿಂಗಳ ಕೊನೆಗೆ ನಮ್ಮ ಲೆಕ್ಕಾಚಾರ ತಪ್ಪುವುದು.

           ಕೆಲ ವರ್ಷಗಳ ಹಿಂದೆ ಊರಿಗೆ ಪತ್ರವನ್ನು  ಸ್ಟಾಂಪ್ ವೆಚ್ಚ ಉಳಿಸಲೆಂದು 

ರಜೆಯಲ್ಲಿ ಊರಿಗೆ ತೆರಳುವ ಮಿತ್ರರಲ್ಲಿ ಇಂಡಿಯಾದಿಂದ ಬರುವಾಗ ತಂದ 

ಸ್ಟಾಂಪ್ ಹಚ್ಚಿ  ಕೊಡುವುದು .ಅವರು ಊರಿಗೆ ತಲುಪಿದೊಡನೆ ಅದನ್ನು ಪೋಸ್ಟ್

 ಮಾಡುವ ಪದ್ದತಿ ಇತ್ತು .ಒಬ್ಬೊಬ್ಬ  ದೇಶಾಗಾಮನಿ ಯೂ ಒಬ್ಬ ಮಿನಿ ಪೋಸ್ಟ್ 

ಮ್ಯಾನ್.ಈಗ ಮೊಬೈಲ್ ವ್ಹಾಟ್ಟ್ಶಪ್ಪ್ ಬಂದ ಮೇಲೆ ಅದು ಕಡಿಮೆ ಆಗಿದೆ .

 

ಶನಿವಾರ, ನವೆಂಬರ್ 16, 2019

ಅಮೆರಿಕ ದೇಶದ ಟ್ಯಾಕ್ಸಿ ಚಾಲಕರು

ಕೆಲವು ವರ್ಷಗಳ ಹಿಂದೆ ಅಮೆರಿಕ ಪ್ರವಾಸ ಮಾಡುತ್ತಿದ್ದ ಸಂದರ್ಭ ಅಲ್ಲಿಯ 

ನಿವಾಸಿಗಳು ಬಂದ ಪ್ರವಾಸಿ ಗಳೊಡನೆ  ಬೆರೆಯಲು ಮತ್ತು ಮಾತನಾಡಲು 

ನಿರಾಸಕ್ತಿ ಎದ್ದು ಕಂಡಿತು .ಅಕ್ಕ ಪಕ್ಕದ ಮನೆಯವರು ಪರಸ್ಪರ ಮಾತುಕತೆ ಕಡಿಮೆ .
ಆದರೆ  ನಾವು ಕಂಡ ಹೆಚ್ಚಿನ ಟ್ಯಾಕ್ಸಿ ಚಾಲಕರು ವಾಚಾಳಿಗಳು. ದೊಡ್ಡ ಹುದ್ದೆಗಳಲ್ಲಿ 

ಇದ್ದು ನಿವೃತ್ತ ರಾದವರೂ  ಈ ಉದ್ಯೋಗ ದಲ್ಲಿ ಇದ್ದಾರೆ .ಕಾಯಕದಲ್ಲಿ ಪ್ರತಿಸ್ಟ್ಟೆ 

ಯ ವಿಚಾರ ಇಲ್ಲ .ಮೆಕ್ಸಿಕೊ ,ಭಾರತ ,ಬಾಂಗ್ಲಾದೇಶ ,ಅಮೆರಿಕ ಮತ್ತು 

ಇತಿಯೋಪಿಯ ಮೂಲದ ಚಾಲಕರೊಡನೆ ಮಾತನಾಡುವ ಅವಕಾಶ ಸಿಕ್ಕಿತು .

                           ವಾಷಿಂಗ್ಟನ್  ನಗರದಲ್ಲಿ  ಓರ್ವ ಅಮೆರಿಕನ್ ಡ್ರೈವರ್ .ಆತನ 

ಟ್ಯಾಕ್ಸಿ  ಬೆಂಜ್ ಕಾರ್ .ಜಿ ಪಿ ಎಸ್ ಬಂದ ಮೇಲೆ ಹೋಗುವ ಜಾಗದ ಜಾಡು 

ಹಿಡಿಯುವುದು ಎಷ್ಟು ಸುಲಭ ಆಗಿದೆ ಎಂದು ವಿವರಿಸಿದ .ತಾನು ಭಾರತಕ್ಕೆ ಅದೂ 

ಮೈಸೂರಿಗೆ ಬಂದಿದ್ದೆ ಎಂದೂ ಮೈಸೂರು ಊಟಿ ರಸ್ತೆ ತುಂಬಾ ಹೊಂಡಗಳು 

ಇದ್ದು ಗುಡು ಗುಡು ಎಂದು ವಾಹನ ಅಲುಗಾಡುತ್ತಿತ್ತು ಎಂದು ನೆನಪಿಸಿದ .

                             ನ್ಯೂಯೋರ್ಕ್ ನಗರದಲ್ಲಿ  ಬಂಧುಗಳ ಮನೆಯಿಂದ 

ವಿಮಾನ ನಿಲ್ದಾಣಕ್ಕೆ ಬರುವಾಗ ಟಾಕ್ಸಿಯಲ್ಲಿ ಇತಿಯೋಪಿಯ ಮೂಲದ ಚಾಲಕ .

ತಮ್ಮ ದೇಶದಲ್ಲಿ ಕ್ರಾಂತಿ ಸಮಯ ಪಕ್ಕದ ಸುಡಾನ್ ದೇಶಕ್ಕೆ ಪರಾರಿಯಾಗಿ 

ಮುಂದೆ ಹೇಗೋ ರಾಜಕೀಯ ನಿರಾಶ್ರಿತ ಎಂದು ಅಮೆರಿಕಾ ದೇಶಕ್ಕೆ ಬಂದು ಸಣ್ಣ 

ಪುಟ್ಟ ಉದ್ಯೋಗ ಮಾಡಿ ಮುಂದೆ ವಿಶ್ವ ಸಂಸ್ಥೆ ಯಲ್ಲಿ ಉದ್ಯೋಗಿಯಾಗಿ ನಿವೃತ್ತ 

ನಾದ ಮೇಲೆ ಟ್ಯಾಕ್ಸಿ ಓಡಿಸುವ ಪ್ರವೃತ್ತಿ .ತನ್ನ ಮೂಲ ದೇಶದ ಬಗ್ಗೆ ಹೆಮ್ಮೆ .ತಮ್ಮ 

ದೇಶದಲ್ಲಿ ಭಾರತೀಯರು ಅಧ್ಯಾಪನ ಮತ್ತು ನರ್ಸಿಂಗ್ ವೃತ್ತಿಯಲ್ಲಿ ಗಣನೀಯ 

ಸೇವೆ ಸಲ್ಲಿಸಿದ್ದಾರೆ ಎಂದು ಕೃತಜ್ನತೆಯಿಂದ  ಹೇಳಿ ಕೊಂಡ.


 

ಬುಧವಾರ, ನವೆಂಬರ್ 6, 2019

ಒಳಗೊಂದು ಹೊರಗೊಂದು

ರೋಗಿ ಪತ್ನಿ ಸಮೇತ ಬರುತ್ತಾನೆ .ಕಾಯಿಲೆಯ ಮಾಹಿತಿ ಕೇಳುತ್ತೀರಿ .ಮದ್ಯಪಾನ 

ದಿಂದ ಉಂಟಾದ ಕಾಯಿಲೆ ಹಾಗೆ ಕಾಣಿಸುತ್ತದೆ .ರೋಗಿಯ ಬಳಿ ಕೇಳಿದರೆ 

 ಇಲ್ಲಾ ಎನ್ನುವನು .ಪತ್ನಿಯೂ ಗೋಣು ಆಡಿಸುವಳು .ಮತ್ತೆ ಗಂಡ ನ ಕಣ್ಣು ತಪ್ಪಿಸಿ 

ಬಂದು ಇಲ್ಲಾ ಡಾಕ್ತ್ರೆ ಅವ್ರು ಸಿಕ್ಕಾ ಬಟ್ಟೆ ಕುಡಿಯುತ್ತಾರೆ ,ಅವರ ಎದುರು ಹೇಳಿದರೆ 

ಬೈಯ್ಯುತ್ತಾರೆ ಎನ್ನುವರು .

                ಇನ್ನು ಕೆಲವರು ತಮ್ಮ ಹಿರಿಯರನ್ನು ಕರೆ ತರುವ ಮೊದಲೇ 

ಒಂಟಿಯಾಗಿ ಬಂದು "ನೋಡಿ ಡಾಕ್ತ್ರೆ ನಮ್ಮ ತಂದೆಯನ್ನು ಮತ್ತೆ ಕರೆ ತರುತ್ತೇನೆ 

ಅವರಿಗೆ ಏನೂ ಕಾಯಿಲೆ ಇಲ್ಲ ,ಆದರೆ ಇಲ್ಲಿ ನೋವು ಅಲ್ಲಿ ನೋವು ,ನಿದ್ದೆ ಇಲ್ಲಾ 

ಎಂದು ಗೊಣಗುವರು .ನೀವು ಸುಮ್ಮನೆ ನೋಡಿದ ಹಾಗೆ ಮಾಡಿ ಒಂದು ಟಾನಿಕ್ 

ಬರೆದು ನಿಮಗೆ ಏನೂ ಇಲ್ಲ ಎಂದು ಹೇಳಿ ,ಜಾಸ್ತಿ ಟೆಸ್ಟ್ ಎಲ್ಲ ಮಾಡಿಸುವುದು 

ಬೇಡ ಎಂದು ಪೂರ್ವ ಸೂಚನೆ ಕೊಟ್ಟು ನಾವು ರೋಗಿಯ ಬಗ್ಗೆ ಪೂರ್ವಾಗ್ರಹ

ಪೀಡಿತರಾಗುವಂತೆ ಮಾಡುವರು .ತೋರಿಸಿದ ಹಾಗೆ ಮಾಡ ಬೇಕು ,ಸರಿಯಾಗಿ 

ತೋರಿಸಲೂ ಮನಸ್ಸಿಲ್ಲ .

         ಇನ್ನು ಕೆಲವರು ಹಿರಿಯರು ಜಾಸ್ತಿ ಮಾತನಾಡುವರು .ಯಾವಾಗಲೂ 

ಕಿರಿ ಕಿರಿ ಎಂದು ಹೇಳುವರು .ಇದು ಸಾಪೇಕ್ಷ ಅಥವಾ relative . ಹಿರಿಯರ ಸಹಜ 

ಮಾತು ಅಥವಾ ಬೇಡಿಕೆ ಈಗ ಕಿರಿಯರಿಗೆ ಹೆಚ್ಚ್ಕು ಎನಿಸುವುದು .ನಾವು 

ವೈದ್ಯರು ಇದನ್ನು ಅಳೆದು ತೂಗಿ ನೋಡ ಬೇಕಾಗುವುದು .

ಅನೈಚ್ಛಿಕ ನಿಯಂತ್ರಿತ ಕ್ರಿಯೆ

ಕಾರ್ಕಳದಲ್ಲಿ ಎಂ ರಾಮಚಂದ್ರ ಎಂಬ ನಿವೃತ್ತ ಪ್ರಾಧ್ಯಾಪಕ ಲೇಖಕ ಮತ್ತು ಕನ್ನಡ 

ಪರಿಚಾರಕಾರಿದ್ದಾರೆ .ಮೂರು ಉಪಾಧಿಗಳಲಲ್ಲಿ ಕೊನೆಯದು ಅವರಿಗೆ ಹೆಚ್ಚು 

ಸಲ್ಲುತ್ತದೆ. ಸಾಹಿತಿಗಳ ವ್ಯಕ್ತಿ ಚಿತ್ರಗಳ ಪುಸ್ತಕ  ಚಿತ್ರ ಚರಿತ್ರ ಅವರ ಒಂದು  

ಉತ್ತಮ ಕೃತಿ.ಅದರಲ್ಲಿ  ಕನ್ನಡದ ದಂತ ಕತೆ ಕೋಟ ಶಿವರಾಮ ಕಾರಂತರ  ಬಗ್ಗೆ 

ಒಂದು ಲೇಖನ ಇದೆ .ಅದರಲ್ಲಿ ಒಂದು ಘಟನೆ ಇದೆ.

     "ಒಮ್ಮೆ ಮಧ್ಯಾಹ್ನದ ಹೊತ್ತಿಗೆ  ಪುತ್ತೂರಿಗೆ ಬರುವುದಾಗಿ ತಿಳಿಸಿದ್ದೆ .ಮಧ್ಯಾಹ್ನದ 

ಹೊತ್ತಿಗೆ ಹೋದರೆ ಊಟ ಮಾಡಿಯೇ ಹಿಂದಿರುಗುವುದು ಕ್ರಮ .ಹಾಗೆ ನಾನು ಆ 

ಸಲ ಹೋದಾಗ ಸ್ವಲ್ಪ ತಡವಾಯಿತು .ಬಾಲವನದಲ್ಲಿ ,ಅವರ ಮನೆಯ ಸುತ್ತ 

ಕಾಗೆಗಳ ಗದ್ದಲವೇ ಗದ್ದಲ .'ಇದೇಕೆ ಹೀಗೆ 'ಎಂದು ಕೇಳಿದೆ;ಅದಕ್ಕೆ ಕಾರಂತರ 

ಉತ್ತರ ಕೇಳಿ ನಾನು ಒಂದು ಕ್ಷಣ ಮೂಕನಾದೆ; "ನೀವು ಮಧ್ಯಾಹ್ನದ ಹೊತ್ತಿಗೆ 

ಬರುವುದಾಗಿ ತಿಳಿಸಿದ್ದಿರಿ.ಒಟ್ಟಿಗೆ ಊಟ ಮಾಡೋಣ ಎಂದು ಕಾದೆ.ನಾನು 

ಸಾಮಾನ್ಯವಾಗಿ ಮಧ್ಯಾಹ್ನ ಹನ್ನೊಂದು ಮುಕ್ಕಾಲರ ಹೊತ್ತಿಗೆ ಊಟ ಮಾಡಿ ,

ಒಂದು ಹಿಡಿ ಅನ್ನ ಕಾಗೆಗಳಿಗೆ ಹಾಕುತ್ತೇನೆ ಇಂದು  ತಡವಾಯಿತು .ಅವುಗಳು 

ಹೊತ್ತಿಗೆ ಸರಿಯಾಗಿ ಬಂದಿವೆ .ತಡವಾದ್ದಕ್ಕೆ ಗದ್ದಲ."ಎಂದರು .ಇದು ಖಾರ ಎನ್ನಿಸಿ 

ಕೊಂಡಿರುವ ಕಾರಂತರ ಹೃದಯವಂತಿಗೆಗೆ ,ಪ್ರಾಣಿ ಪಕ್ಷಿಗಳ ಮೇಲಿನ ಪ್ರೀತಿಗೆ 

ಒಂದು ಮಾರ್ಮಿಕ ನಿದರ್ಶನ.
                    
                         ಮೊನ್ನೆ  ಹೆಗ್ಗೊಡು ಸಂಸ್ಕೃತಿ ಶಿಬಿರಕ್ಕೆ ಹೋದವನು  ಸಾಗರ 

ದಲ್ಲಿ ಮುಂಜಾನೆ ಚಹಾ ಸೇವನೆಗೆ ಹೋಟೆಲ್ಲಿಗೆ ಹೋಗಿದ್ದೆ .ಹೊಟೇಲ್ ಮಾಣಿ 

ಹಿಂದಿನ ದಿನದ ಉಳಿಕೆಯದ  ವಡೆ ಬನ್ಸ್ ಇತ್ಯಾದಿಗಳನ್ನು ಪುಡಿ ಮಾಡುತ್ತಿದ್ದ 

.ಅದನ್ನೇ ರೀಸೈಕಲ್ ಮಾಡಿ ಇಂದಿನ ತಿಂಡಿಗೆ ಸೇರಿಸುವರೋ ಎಂದು ಕೊಂಡೆ .

ಆದರೆ ಹಾಗೆ ಆಗಲಿಲ್ಲ .ಆತ ಪುಡಿ ಮಾಡಿದ ತಿಂಡಿಯನ್ನು ರಸ್ತೆಯಾಚೆ ಉದ್ಯಾನದ 

ಬಳಿ ಕಲರವ ಮಾಡುತ್ತಿದ್ದ ಹಕ್ಕಿಗಳಿಗೆ  ಹಂಚಿ ಸ್ವಲ್ಪ ಹೊತ್ತು ನಾಯಿ ಬಾರದಂತೆ 

ಅಲ್ಲೇ ಕಾವಲು ಮಾಡಿದ.ಹಕ್ಕಿಗಳ ಮತ್ತು ಹೊಟೇಲ್ ಮಾಣಿಯ ನಿತ್ಯ ಕಜ್ಜ .

                                  ಪ್ರಾಣಿ ಪಕ್ಷಿಗಳ ಶರೀರದಲ್ಲಿ ಒಂದು ಜೈವಿಕ ಗಡಿಯಾರ 

ಇದೆ. ಜೀವ ಶಾಸ್ತ್ರ ದಲ್ಲಿ  ಪೌಲೋವನ ನಾಯಿ ಪ್ರಯೋಗ ಎಂದು ಇದೆ .ದಿನಾಲೂ 

 ಒಂದೇ ಹೊತ್ತಿಗೆ  ಆತ ಒಂದು ಗಂಟೆ ಬಾರಿಸಿ ನಾಯಿಗೆ ಆಹಾರ ಹಾಕುವನು .

ಒಂದು ದಿನ  ಗಂಟೆ ಬಾರಿದರೂ ಆಹಾರ ಹಾಕಲಿಲ್ಲ .ಆದರೂ ನಾಯಿಯ 

ಬಾಯಿಯಿಂದ ಜೊಲ್ಲು ಯೆಥೇಚ್ಚ ಸುರಿಯಿತು .ಇದನ್ನೇ ಅನ್ನೈಚ್ಛಿಕ  ನಿಯಂತ್ರಿತ 

ಕ್ರಿಯೆ ಎನ್ನುವರು .(Conditioned Reflex).

      ನಿಮ್ಮ ಶರೀರದಲ್ಲಿ ಕೆಲವು ಜೈವಿಕ ಕ್ರಿಯೆಗಳು ಇದೇ ತರಹ ಇವೆಯೇ?