ಬೆಂಬಲಿಗರು

ಮಂಗಳವಾರ, ಏಪ್ರಿಲ್ 30, 2013

ಇನ್ಸ್ಪೆಕ್ಷನ್ ಎಂಬ ಪ್ರಹಸನವು

  ನಮ್ಮ  ದೇಶದಲ್ಲಿ  ಕೆಲಸ ಮಾಡುವವರಿಗಿಂತ  ಮೇಲ್ವಿಚಾರಕರು ಅಧಿಕ ,ನಮ್ಮ ದೇಶದಲ್ಲಿ ಇರುವಷ್ಟು ಸೂಪರ್ ವೈಸರ್ಗಳು
ಬೇರೆಲ್ಲೂ  ಕಾಣ ಸಿಗಲಾರರು.ಅದರಂತೆ ಇನ್ಸ್ಪೆಕ್ಟರುಗಳು.ಈ ಇನ್ಸ್ಪೆಕ್ಷನ್   ಮಕ್ಕಳಿದ್ದಾಗ ಶಾಲೆಗಳಲ್ಲಿ ನೋಡುತ್ತೇವೆ. ಶಾಲೆಗೆ
ಇನ್ಸ್ಪೆಕ್ಟರ್ ಬರುವ ದಿನ ವಿಶೇಷ ಒಪ್ಪ ಓರಣ , ಕುರ್ಚಿ ಬಿಟ್ಟು ಏಳದ ಅಧ್ಯಾಪಕರೂ ಅಂದು ಅತ್ತಿತ್ತ ಓಡಾಡುತ್ತ ,ಬೋರ್ಡ್ ನಲ್ಲಿ  ಚಿತ್ರ ಬರೆಯುತ್ತ ಪಾಠ ಮಾಡುತ್ತಾರೆ. ತರಗತಿಯಲ್ಲಿ ಜಾಣರಾದ ಮಕ್ಕಳನ್ನು ಮುಂದಿನ ಬೆಂಚಿನಲ್ಲಿ ಕುಳ್ಳಿರಿಸಿ  ಇನ್ಸ್ಪೆಕ್ಟರ್ ಅವರ ಪ್ರಶ್ನೆಗಳು ಅವರಿಗೆ ಬೀಳುವಂತೆ ಯತ್ನಿಸುತ್ತಾರೆ. ಇನ್ಸ್ಪೆಕ್ಟರ್  ಕೇಳಿದರೆ  ಹೀಗೆ  ಹೇಳ ಬೇಕು ಎಂದು ರಿಹರ್ಸಲ್ ನಡೆಯುವುದೂ ಉಂಟು. ಇದು  ನಾಟಕೀಯ ವಾಗಿ  ಕಂಡರೂ  ವಿದ್ಯಾರ್ಥಿಗಳು ಅಧ್ಯಾಪಕರಿಗೆ ತೊಂದರೆ ಆಗದಿರಲಿ ಎಂದು ಪ್ರಾರ್ಥಿಸುತ್ತಾರೆ.
ನಾನು ರೈಲ್ವೆಯ ವೈದ್ಯಕೀಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ರೈಲ್ವೆಯಲ್ಲಿ ಇರುವಷ್ಟು ಇನ್ಸ್ಪೆಕ್ಟರುಗಳು ಬೇರೆಲ್ಲೂ
ಇರರು.ರೈಲ್ವೆಯಲ್ಲಿ  ಜನರಲ್ ಮೇನೇಜರ್  ಇನ್ಸ್ಪೆಕ್ಸನ್ ಎಂದರೆ ಭಾರಿ  ದೊಡ್ಡದು ,ತಿಂಗಳು ಮೊದಲೇ ತಯಾರಿ ನಡೆಯುತ್ತದೆ.ಸುಣ್ಣ ಬಣ್ಣ ,ಕಸಗುಡಿಸುವಿಕೆ ಇತ್ಯಾದಿ ಜೋರಾಗಿ ನಡೆಯುತ್ತವೆ. ಜನರಲ್ ಮೇನೇಜರ್ ಎಂದರೆ  ಮೈಸೂರ್ ಮಹಾರಾಜರ ಮರ್ಜಿಗೆ ಸಮ. ಅವರ ಪ್ರಯಾಣಕ್ಕೆ  ಒಂದು ವಿಶೇಷ ಬೋಗಿ  ಇರುತ್ತದೆ,ಇದರಲ್ಲಿ  ಡ್ರಾಯಿಂಗ್  ರೂಮ್ ,ಅಡಿಗೆ ಕೋಣೆ  ಮತ್ತು ಬೆಡ್ ರೂಮ್ ಟಾಯ್ಲೆಟ್ ಇವೆ.ಇನ್ಸ್ಪೆಕ್ಷನ್ಗೆ  ಅವರ ಪಟಾಲಂ  ನಲ್ಲಿ  ೫೦ರಿಂದ ನೂರು ಜನ ಇರುತ್ತಾರೆ. ಪ್ರತ್ಯೇಕ ಟ್ರೈನ್ ; ಇನ್ಸ್ಪೆಕ್ಷನ್ ಸ್ಪೆಷಲ್ ಎಂದು ಹೆಸರು .ಆ ದಿನ ಎಲ್ಲ  ಸ್ಟೇಶನ್ ನ ಎಲ್ಲಾ ನಳ್ಳಿಗಳಲ್ಲಿ  ನೀರು ಬರುತ್ತದೆ.ಯಾವತ್ತೂ ಬೀಗ ಹಾಕಿರುತ್ತಿದ್ದ  ಸಾರ್ವಜನಿಕ  ಶೌಚಾಲಯಗಳು ಗಮ ಗಮಿಸುತ್ತ ತೆರೆದಿರುತ್ತವೆ. ಆ ಸೆಕ್ಷನ್ ನ ರೈಲುಗಳು ಸಮಯಕ್ಕೆ ಸರಿಯಾಗಿ ಬರುತ್ತವೆ , ಸಾಹೇಬರು ವೀಕ್ಷಣೆ ಗೆ  ಹೊರಟಾಗ ತಮ್ಮ ತಮ್ಮ ತಯಾರಿಗೆ ಅನುಗುಣವಾಗಿ  ಬೇರೆ ವಿಭಾಗ ದ  ಅಧಿಕಾರಿಗಳು ಅವರ ದೃಷ್ಟಿ ತಮ್ಮತ್ತ  ಹಾಯಲಿ ಅಥವಾ ಹಾಯದಿರಲಿ ಎಂದು  ದೇವರಲ್ಲಿ ಪ್ರಾರ್ಥಿಸುತ್ತಾರೆ.ಸಾಹೇಬರು ಎಲ್ಲೋ ಒಂದು ಕಡೆ ನಿಂತು ತಮಗೆ ಇಷ್ಟ ತೋರಿದವರಿಗೆ  ಸ್ಥಳದಲ್ಲಿ ಬಹುಮಾನ ಘೋಷಿಸುತ್ತಾರೆ. ಜನರಲ್ ಮೇನೇಜರ್ ಒಂದಿಗೆ ಅವರ ಪಿ ಎ, ಡಿ ಅರ ಎಂ ,,ಸಿ ಓ ಎಸ್, ಸಿ ಸಿ ಎಸ್,.ಸಿ.ಇ., ಸಿ ಅರ ಪಿ ಎಸ್  ಕಮಾಂಡೆಂಟ್.ಸಿ ಓ ಎಸ್,.ಸಿ ಇ ಇ , ಸಿ ಎಸ್ ಟಿ ಇ , ಸಿ ಎಂಓ ಇತ್ಯಾದಿ  ಹಿರಿಯ ಅಧಿಕಾರಿಗಳು ಮತ್ತವರ   ಕೆಳ ಅದಿಕಾರಿಗಳ  ಹಿಂಡು ಇರುತ್ತದೆ. ದೊಡ್ಡ  ಸಾಹೇಬರು  ದಾರಿಯಲ್ಲಿ ಏನಾದರೂ ಕೊರತೆ ಯಿದೆಯೇ ಎಂದು ಕೇಳಿದಾಗ  ಎಲ್ಲರೂ  ಇಲ್ಲ  ಎಲ್ಲವೂ ಖಾವಂದರ  ದಯೆಯಿಂದ ಸುಸೂತ್ರವಾಗಿದೆ ಎಂದು ಒಕ್ಕೊರಲಿನಿಂದ ನುಡಿಯುತ್ತಾರೆ.ಯಾರಾದರೂ ಅಧಿಕ  ಪ್ರಸಂಗಿ ಸತ್ಯ ನುಡಿದರೆ ನೀರಿಲ್ಲದ ಜಾಗಕ್ಕೆ ಎತ್ತ೦ಗಡಿಯಾದೀತು.ಇದೆ ತರಹ  ಇನ್ಸ್ಪೆಕ್ಷನ್  ಮಂತ್ರಿ ಗಳೂ ನಮ್ಮ ನಾಡಿನಲ್ಲಿ ನಡೆಸುತ್ತಾರೆ.ಅವರ ಎದುರು ಯಾರೂ  ನಿಜವನ್ನು ಬಹಿರಂಗವಾಗಿ  ನಿವೇದಿಸುವ ವಾತಾವರಣವೇ ಇರುವುದಿಲ್ಲ.ಭಟ್ಟಂಗಿಗಳು ಅವರನ್ನು ಸುತ್ತುವರಿದಿರುತ್ತಾರೆ.ನೈಜ ಚಿತ್ರಣ ಅವರಿಗೆ ಗೊತ್ತಿರುತ್ತದೆ. ಆದರೆ ಅವರಿಗೆ  ಯಥಾರ್ಥದಲ್ಲಿ  ಅದನ್ನು ನೋಡುವುದು ಬೇಕಾಗಿರುವುದಿಲ್ಲ.
ಬಹಳಷ್ಟು  ಅಧಿಕಾರಿಗಳು  ಮದುವೆ ಮುಂಜಿ ದೇವಸ್ಥಾನ ಸಂದರ್ಶನಗಳನ್ನು  ಇನ್ಸ್ಪೆಕ್ಷನ್ ಟೂರ್ ಆಗಿ ಮಾರ್ಪಡಿಸಿ

ಸ್ವಕಾರ್ಯಕ್ಕೆ ಭತ್ತೆ ಪಡೆಯುತ್ತಾರೆ.ಇಂತಹ ದೈವ ದರ್ಶನ ದೇವರಿಗೆ ಹಿತವೇ?

ಮೆಡಿಕಲ್ ಕಾಲೇಜುಗಳಲ್ಲಿ  ಮೆಡಿಕಲ್ ಕೌನ್ಸಿಲ್ ನವರ  ಇನ್ಸ್ಪೆಕ್ಸನ್ ಪ್ರಹಸನ ಇರುತ್ತದೆ.ಆ ದಿನ  ಕೂಲೆಜಿನಲ್ಲಿ(ಒಂದು ದಿನದ
ಮಟ್ಟಿಗೆ ) ಹೊಸ ಪ್ರೊಫೆಸ್ಸರ್ ಗಳು ,,ಉಪಾನ್ಯಾಸಕರು  ,ಹೆಚ್ಚೇಕೆ  ವಾರ್ಡ್ ಗಳಲ್ಲಿ  ಬಾಡಿಗೆ ರೋಗಿಗಳೂ ತುಂಬಿ
ಕೊಳ್ಳುತ್ತಾರೆ.ಮಾರನೆ ದಿನ ಅಲ್ಲಿ ಹೋದರೆ ಎಲ್ಲಾ ಖಾಲಿ .ಇದು ಇನ್ಸ್ಪೆಕ್ಷನ್ ಮಾಡುವವರಿಗೂ  ಮಾಡಿಸಿ ಕೊಳ್ಳುವವರಿಗೂ ಗೊತ್ತಿರುತ್ತದೆ.ಆದರೂ ಇನ್ಸ್ಪೆಕ್ಷನ್ ಎಂಬ ಪ್ರಹಸನ ನಡೆಯಲೇ ಬೇಕಲ್ಲ.

ಈ  ಇನ್ಸ್ಪೆಕ್ತರುಗಳೂ ಹಾಗೆ. ಕಾನೂನು ಸರಿಯಾಗಿ ಪಾಲಿಸುವವರನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಕೋಪ.ಏಕೆಂದರೆ  ತಾವು
ಕಾಣಿಕೆ ಕೇಳಲು  ಒಳ್ಳೆಯ ಕಾರಣಕ್ಕೆ ತಡಕಾದಬೇಕಲ್ಲವೇ? ಕಾನೂನು ಕಟ್ಟಳೆ ಮೀರಿ ಹಲ್ಲು ಗಿಂಜುತ್ತ ಬರುವವರು ಅವರಿಗೆ
ಆಪ್ಯಾಯಮಾನ   ಕಾರಣ  ಗೊತ್ತಲ್ಲ ?





                                                              
                                  
                            

ಭೂತದ ಬಾಯಲ್ಲಿ ಭಗವದ್ಗೀತೆ


   ಭೂತದ ಬಾಯಲ್ಲಿ ಭಗವದ್ ಗೀತೆ


ನಾವು ಕೆಟ್ಟವರೆಂದು ಪರಿಗಣಿಸುವ ವ್ಯಕ್ತಿಯ ಬಾಯಲ್ಲಿ ನಮಗೆ ಒಳ್ಳೆಯದನ್ನು ಉಪದೇಶಿಸಿದಾಗ  (ಕೆಟ್ಟ ಅರ್ಥದಲ್ಲಿ )ನುಡಿಗಟ್ಟು .ಇದು ಆಂಗ್ಲ ಭಾಷೆಯ ಡೆವಿಲ್ ಕೋಟಿಂಗ್  ಸ್ಕಿಪ್ಚರ್ ಎಂಬ ಮೂಲದ ತಥಾಕಥಿತ ಕನ್ನಡ ಅನುವಾದ.ಸೈತಾನನು ಧರ್ಮ ಗ್ರಂಥಗಳನ್ನು ಉಲ್ಲೇಖಿಸಿ (ತಪ್ಪು ಅರ್ಥದಲ್ಲಿ)ಯೇಸುವನ್ನು ತನ್ನ ಹಾದಿಗೆ ತರುವ  ಯತ್ನ ಮಾಡುವ ಕತೆ ಬೈಬಲ್ ನಲ್ಲಿ ಇದೆ.ಅದರಂತೆ  ಶೇಕ್ಸಪಿಯರ್ ನ ನಾಟಕ ಮರ್ಚೆಂಟ್ ಆಫ್ ವೆನಿಸ್ ನಲ್ಲಿ  ಈ ಸಾಲುಗಳಿವೆ

Mark you Bessanio,
The devil can cite scriptures for his purpose
An evil soul producing holy witness,
Is like villain with smiling cheek,
A goodly apple rotten at heart :
O.what a Godly outside falsehood hath.
ಆದರೆ ಕನ್ನಡದಲ್ಲಿ   ಈ ಗಾದೆಯನ್ನು  ದೆವ್ವದ ಬಾಯಲ್ಲಿ ಭಗವದ್ಗೀತೆ ಎನ್ನುವುದು ಸರಿಯಾದೀತು.ದಕ್ಷಿಣ ಕನ್ನಡದ ಭೂತಗಳು ದೇವರಂತೆ ಪೂಜಿಸಲ್ಪಡುವವು. ಭೂತ ಕೋಲದಲ್ಲಿ ಭೂತವು ಒಳ್ಳೆಯ ವಿಚಾರಗಳನ್ನು ಗಳನ್ನು ಸಂದರ್ಭರ್ಕ್ಕನುಸಾರ ಉಲ್ಲೇಕಿಸುವ ಕ್ರಮ ಇದೆ.ಭೂತ ಕಟ್ಟುವವರು ತಲೆ ತಲಾ೦ತರಗಳಿಂದ  ಕೇಳಿ ಕಲಿತ  ಜ್ಞಾನ ಭೂತ ಮುಖಾಂತರ ಪ್ರಕಟ ವಾಗುತ್ತದೆ.ಇಲ್ಲಿ ಭೂತಗಳು ರಕ್ಷಕರು.ನಮ್ಮ ಹಳ್ಳಿಯಲ್ಲಿ  ಇರುವ ಮಹಾ೦ಕಾಳಿ ಭೂತವು ಅತಲ ವಿತಳ ಪಾತಾಳ ಎಲ್ಲಿದ್ದರೂ ತನ್ನನ್ನು ನಂಬುವವರ ಕಾಯುವೆ ಎಂದು ಭರವಸೆ  ನೀಡುತ್ತಿತ್ತು.

ಭ್ರಷ್ಟಾಚಾರದ  ಬಗ್ಗೆ  ತಮ್ಮ ಎದುರು ಪಕ್ಷದವರು ಮಾತನಾಡುವುದು  ದೆವ್ವದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದು ರಾಜಕಾರಿಣಿಗಳು ಹೇಳುತ್ತಾರೆ .ಇಲ್ಲಿ ದೆವ್ವಗಳು ಯಾರೋ ,ಭಗವದ್ಗೀತೆ ಯಾವುದೊ  ಯಾರಿಗೆ ಗೊತ್ತು?


ಸೋಮವಾರ, ಏಪ್ರಿಲ್ 29, 2013

ಬಂತು ಮತ್ತೊಂದು ಚುನಾವಣೆ

ಮತ್ತೊಂದು  ಚುನಾವಣೆ ಬರುತ್ತಿದೆ.ಮತದಾರ  ದೊಡ್ಡ  ಸಂದಿಗ್ದದಲ್ಲಿ ಇದ್ದಾನೆ. ಪಕ್ಷ ನೋಡಿ ಮತ ಚಲಾಯಿಸುವಾ

ಎಂದರೆ  ಹಗರಣಗಳಲ್ಲಿ ಸಿಲುಕಿರುವ ಕೇಂದ್ರ ಸರಕಾರದ ಮುಖ್ಯ ಪಾಲುದಾರ ಕಾಂಗ್ರೆಸ್. ಇಲ್ಲಿ  ಸಿಕ್ಕಿದ ಅವಕಾಶ ವನ್ನು

ದುರುಪಯೋಗ ಪಡಿಸಿ ಕರ್ನಾಟಕದ ಇತಿಹಾಸ ದಲ್ಲಿಯೇ ಕಂಡು ಕೇಳರಿಯದಂತಹ  ಬ್ರಷ್ಟಾಚಾರದಲ್ಲಿ ಮುಳುಗಿ

ತೇಲುತ್ತಲಿರುವ ಬಿ ಜೆ ಪಿ .ಕುಟುಂಬದ ಆಸ್ತಿ ಯಾಗಿರುವ ಜೆ ಡಿ ಎಸ. ಒಳ್ಳೆಯ ಮಂದಿ  ಬೆರಳೆಣಿಕೆಯಲ್ಲಿದ್ದ್ದು ಎಲ್ಲಾ

ಪಕ್ಷಗಳಲ್ಲಿ ಹಂಚಿ ಹೋಗಿದ್ದಾರೆ.

ಶಾಸನ ಸಭೆಯ ಸದಸ್ಯರಿಗೆ ಲಾ ಮೇಕರ್ಸ್ ಅಥವಾ  ಕಾನೂನು ಮಾಡುವವರು ಎಂದು ಕರೆಯುತ್ತಾರೆ.ಇವರಿಗೆ

ಪ್ರಜೆಗಳ ಬಗ್ಗೆ ಕಾಳಜಿಯೂ ,ಕಾನೂನು ,ಸಂವಿಧಾನ ದ ಬಗ್ಗೆ ತಿಳಿವೂ ಬೇಕು.ವಿಪರ್ಯಾಸವೆಂದರೆ  ನಮ್ಮಲ್ಲಿ

ಶಾಸನ ಮಾಡುವವರೇ ಅದನ್ನು ಮುರಿಯುವುದರಲ್ಲಿ ಮೊದಲಿಗರಾಗಿರುತ್ತಾರೆ.

  ಚುನಾವಣೆಗಳು ಯುಧ್ಧ ದಂತೆ ನಡೆಯುತ್ತಿವೆ . Everything is fair in love and war  ಎಂಬಂತೆ  ಲಂಗು

ಲಗಾಮಿಲ್ಲದೆ ಪ್ರಚಾರ ನಡೆಯುತ್ತದೆ. ಮಧು ದಂಡಾವತೆ ,ವೀರೇಂದ್ರ ಪಾಟೀಲ್, ಜಗನ್ನಾಥ ರಾವ್ ಜೋಷಿ

ಯಂತಹ ಸಜ್ಜನ ಪ್ರಚಾರಕರು ಯಾವ ಪಕ್ಷದಲ್ಲೂ ಸಿಗುವುದಿಲ್ಲ.

ಮೊರಾರ್ಜಿ ದೇಸಾಯಿ ಅವರ ಚುನಾವಣಾ ಸಭೆಯಲ್ಲಿ ಅವರ ಎದುರಾಳಿಯ ವಿರುದ್ಧ ಘೋಷಣೆ ಕೂಗಲು ಅವರು

ಸಂಮತಿಸುತ್ತಿರಲಿಲ್ಲ.

ಶನಿವಾರ, ಏಪ್ರಿಲ್ 27, 2013

ಮಕ್ಕಳ ಕೆಮ್ಮು

                             

 

 

 

 

 

ಕೆಮ್ಮು  ರೋಗ ಲಕ್ಷಣವೇ ಹೊರತು ರೋಗವಲ್ಲ. ಶ್ವಾಸ ನಾಳದಲ್ಲಿ ಅನಪೇಕ್ಷಿತ  ವಸ್ತು ಕಂಡುಬಂದರೆ ಹೊರ ಹಾಕಲು ಇರುವ

ನೈಸರ್ಗಿಕ ಮಾರ್ಗ. ಬೇಡದ ವಸ್ತು ಧೂಳು , ರೋಗಾಣು  ಅಥವಾ ಮಗು ಆಟಕ್ಕೆ ಸೇವಿಸಿದ ಕಲ್ಲು ಮಣ್ಣು ಇರಬಹುದು .

ಬಹುತೇಕ ಮಕ್ಕಳಲ್ಲಿ ಕಂಡು ಬರುವುದು ಶೀತ ಕೆಮ್ಮು .ಇದು ವೈರಸ್ ಗಳಿಂದ ಬರುವಂತಹುದು. ತಾನಾಗಿಯೇ ಕಡಿಮೆಯಾಗಬೇಕು.

ಅಂಟಿ ಬಯೋಟಿಕ್ ಆವಷ್ಯವಿಲ್ಲ . ಅಮೆರಿಕನ್ ಅಕಾಡೆಮಿ ಆಫ್  ಪೀಡಿಯಾಟ್ರಿಕ್ಸ್  ನ  ಬುದ್ದಿವಂತ ಆಯ್ಕೆ ಸಲಹೆ ಪ್ರಕಾರ  ನಾಲ್ಕು

ವರ್ಷದ ಕೆಳಗಿನ ಮಕ್ಕಳಿಗೆ ಸಾಮಾನ್ಯ  ಕಫ್ ಸಿರಪ್ ಗಳನ್ನೂ ಕೊಡದೆ ಇರುವುದು ಒಳ್ಳೆಯದು.ಈ ಔಷಧಿ ಗಳಿಂದ  ಹಾನಿಯೇ

ಹೆಚ್ಚು.ಶ್ವಾಸ ಕೋಶ ಮತ್ತು ನಾಳ ದಲ್ಲಿ ಕಫ ಇರುವಾಗ ಕೆಮ್ಮನ್ನು ಅದುಮುಮುವಂತಹ ವಸ್ತುಗಳಿ ರುವ ಮದ್ದುಗಳು ಕಾಯಿಲೆಯನ್ನು

ಉಲ್ಬಣಿಸುವಂತೆ ಮಾಡಬಹುದು.ಮಕ್ಕಳ ಪೋಷಕರು ದಾಕ್ಟರಲ್ಲಿ ದಿಡೀರ್ ಕೆಮ್ಮು ನಿವಾರಣೆಗೆ ಇಂತಹ ಔಷಧಿಗಳಿಗೆ  ದುಂಬಾಲು

ಬೀಳಬಾರದು.

ಇದಕ್ಕೆ ಅಪವಾದ ಮಕ್ಕಳ ಅಸ್ತಮ ಕಾಯಿಲೆ ಮಾತ್ರ .ಈ ಸಂದರ್ಭದಲ್ಲಿ ಉಬ್ಬಸದ ಔಷಧಿ ಇರುವ ಸಿರಪ್ ವೈದ್ಯರ ಸಲಹೆ

ಮೇರೆಗೆ ಕೊಡ ಬಹುದು .

ಮಂಗಳವಾರ, ಏಪ್ರಿಲ್ 23, 2013

ಲಾಲ್ಗುಡಿ ಜಯರಾಮನ್

     
                                           Lalgudi1
                       Lalgudi2lalgudi3
ವಯೊಲಿನ್ ಮಾಂತ್ರಿಕ ಲಾಲ್ಗುಡಿ ಜಯರಾಮನ್ ಇನ್ನಿಲ್ಲ.ಕೆಲವು ತಿಂಗಳ ಮೊದಲು ಇನ್ನೋರ್ವ ವಯೊಲಿನ್ ದಿಗ್ಗಜ ಎಂ ಎಸ

ಗೋಪಾಲಕೃಷ್ಣನ್  ನಮ್ಮನ್ನು ಅಗಲಿದ ಆಘಾತ ಆರುವ ಮುನ್ನವೇ ಲಾಲ್ಗುಡಿ ಅವರೂ ಅವರನ್ನು ಅನುಸರಿಸಿ ಹೋದರು.

ಲಾಲ್ಗುಡಿ ಯವರ ವಾದನ ದಲ್ಲಿ ಅಬ್ಬರ ವಿರಲಿಲ್ಲ ಮಂದ ಮಾರುತನಂತೆ ,ಹಿತವಾದ ವಾದನ.ಅವರು ಪಕ್ಕ ವಾದ್ಯ

ನುಡಿಸುವಾಗ
ಮುಖ್ಯ ಕಲಾಕಾರನ   ಸಹಜ ವಿಧೇಯತೆಯಿಂದ  ಅನುಸರಣೆ  ಮಾಡುತ್ತಿದ್ದರು.ಮದುರೈ ಮಣಿ ಐಯ್ಯರ್ ,ಜಿ ಏನ್

ಬಾಲಸುಬ್ರಹ್ಮಣ್ಯಂ

ಮದುರೈ ಸೋಮು ,ಎಂ ದಿ ರಾಮನಾಥನ್ ,ಏನ್ ರಮಣಿ ಯಂತಾ ಘಟಾನುಘತಿಗಳಿಗೆ ಸಾಥ್ ನೀಡಿದವರು .

ತ್ಯಾಗರಾಜರ ಶಬ್ದಗಳಲ್ಲಿ ಇವರ ಸಂಗೀತ ಎಂತ ಮುದ್ದೋ ಎಂತ ಸೊಗಸೋ .ಇವರಿಗೆ ಸೋಲೋಗಳಲ್ಲಿ ಸಾಥ್ ನೀಡುತ್ತಿದ್ದ

ಮೃದಂಗ ವಿದ್ವಾನ್ ವೆಲ್ಲೋರ್ ರಾಮ ಬದ್ರನ್  ಅವರು ಕೆಲ ತಿಂಗಳ ಮೊದಲು ನಮ್ಮನ್ನು ಅಗಲಿದರು.

ವಯೊಲಿನ್ ವಾದನದನ್ನಿ ಸ್ವಯಂ ಪರಂಪರೆ ಲಾಲ್ಗುಡಿ ಬಾನಿ ನಿರ್ಮಿಸಿದ ಇವರು ಒಳ್ಳೆಯ ಕೃತಿ ರಚನಾಕಾರರೂ


ಹೌದು .ಇವರು


ರಚಿಸಿದ ವರ್ಣ ,ತಿಲ್ಲಾನಗಳು ಜನಪ್ರಿಯ ವಾಗಿವೆ.

ಇಂಥವರನ್ನು ಕೊಟ್ಟ ಆ ಮಹಾದೇವರಿಗೆ ವಂದನೆಗಳು.


http://www.youtube.com/watch?v=zBbGHS0SnRE

http://www.youtube.com/watch?v=pLvSMOHcIts

ಅಪ್ಲೋಡರ್ ಗಳಿಗೆ ವಂದಿಸುತ

ಶನಿವಾರ, ಏಪ್ರಿಲ್ 20, 2013

ಜಾಂಡಿಸ್

ಕೆಂಪು ರಕ್ತ  ಕಣಗಗಳ ಉತ್ತರ ಕಾಂಡ ಮತ್ತು ಜಾಂಡಿಸ್
 
ಜಾಂಡಿಸ್ ,ಮಂಜ(ಲು) ಪಿತ್ತ. ಹಳದಿ ಕಾಯಿಲೆ  ಜ್ವರ , ಕೆಮ್ಮು ಇತ್ಯಾದಿಗಳಂತೆ ಒಂದು ರೋಗ ಲಕ್ಷಣ ವೆ ಹೊರತು 
 

ರೋಗವಲ್ಲ.
                          
  
ಕೆಂಪು ರಕ್ತ ಕಣಗಳ ಆಯುಸ್ಸು ಸರಾಸರಿ ೧೨೦ ದಿನಗಳು .ಅವು  ವಯಸ್ಸಾಗಿ ಇಲ್ಲವೇ ರೋಗ ಕಾರಣ ಮೊದಲೇ 

ನಶಿಸಲ್ ಪಟ್ಟಾಗ ಬೈಲಿರುಬಿನ್ ಎಂಬ ವಸ್ತು ಉಂಟಾಗುವುದು.ನೀರಿನಲ್ಲಿ ಕರಗದ ಈ ವಸ್ತುವನ್ನು  ಲಿವರ್ ನಲ್ಲಿ 

ಕಿಣ್ವಗಳು  ನೀರಿನಲ್ಲಿ ಕರಗುವ ವಸ್ತುವಾಗಿ ಮಾರ್ಪಡಿಸುತ್ತವೆ.ಲಿವರ್ ನಿಂದ ಪಿತ್ತ ನಾಳಗಳ  ಮೂಲಕ  ಕರುಳು ಸೇರಿ 

ವಿಸರ್ಜಿಸಲ್ಪಡುತ್ತವೆ .ಸ್ವಲ್ಪ ಅಂಶ ಕರುಳಿನಿಂದ ಹೀರಲ್ಪಟ್ಟು ಮೂತ್ರದಲ್ಲಿ ವಿಸರ್ಜನೆಯಾಗುತ್ತದೆ. ಇದರಿಂದಲೇ ಮಲ 

ಮೂತ್ರ ಹಳದಿ ಬಣ್ಣ ಪಡೆದಿರುವುದು.ಕೆಂಪು ರಕ್ತ ಕಣಗಳು ರೋಗದಿಂದ ಆಯುಸ್ಸು ಮುಗಿಯುವ ಮೊದಲೇ ಹೆಚ್ಚು ಹೆಚ್ಚು  ನಾಶ ಗೊಂಡರೆ ರಕ್ತದಲ್ಲಿ  ಬಿಲಿರುಬಿನ್ ಹೆಚ್ಕು ಆಗಿ ಕಾಮಾಲೆ ಬರ ಬಹುದು .ಮಲೇರಿಯಾ ಕಾಯಿಲೆ ಕೆಂಪು ರಕ್ತ  ಕಣಗಳಿಗೆ ಬರುವ ಕಾರಣ ಮಲೇರಿಯಾ ದಲ್ಲಿ  ಜಾಂಡಿಸ್ ಬರಲು ಒಂದೂ ಕಾರಣ .




ಲಿವೆರಿನ ಸೋಂಕು ಆದಲ್ಲಿ ಬೈಲಿರುಬಿನ್  ಪಿತ್ತ ನಾಳ ಹೋಗಬೇಕಿದ್ದುದು ರಕ್ತಕ್ಕೆ ಸೇರಿ ಅದರಿಂದ ರಕ್ತ ಚರ್ಮಕ್ಕೆ 

ಹಳದಿ ಬಣ್ಣ ಬರುವುದು .ಕೆಲವೊಮ್ಮೆ ಪಿತ್ತ ನಾಳದಲ್ಲಿ ಕಲ್ಲು ,ಕ್ಯಾನ್ಸರ್  ಗಡ್ಡೆ  ಬೈಲಿರುಬಿನ್  ಯುಕ್ತ  ಪಿತ್ತ ರಸಕ್ಕೆ ತಡೆಯೊಡ್ಡಿ 

ಜಾಂಡಿಸ್ ಉಂಟಾಗಬಹುದು.

ಸಾಮಾನ್ಯವಾಗಿ ಲಿವರ್ ನ ಸೋಂಕಿನಿಂದ ಜಾಂಡಿಸ್ ಬರುವುದು,. ಮಲೇರಿಯ ,ಇಲಿ ಜ್ವರ , ಹೆಪಟೈಟಿಸ್ ವೈರಸ್ 

ಸೋಂಕಿನಿಂದ  ಲಿವರ್ ಕಾಯಿಲೆ ಬರಬಹುದು. ವೈರಸ್ಗಳಲ್ಲಿ  ಎ,ಬಿ, ಸಿ, ಇ ಮುಖ್ಯವಾದವು.ಇ ಮತ್ತು ಎ ನೀರಿನ ಮೂಲಕ 

ಹರಡುವಂತಹವು.ಬಿ ಮತ್ತು ಸಿ ರಕ್ತ ,ಲೈಂಗಿಕ ಸಂಬಂಧ ಇತ್ಯಾದಿ ಗಳಿಂದ ಹರಡುವಂತಹವು.ಹೆಪಟೈಟಿಸ್ ಬಿ ಮತ್ತು ಸಿ 

ದೂರಗಾಮಿ ದುಷ್ಪರಿಣಾಮ ಉಂಟು ಮಾಡುವಂತಹವು.ಎ ಮತ್ತು ಬಿ  ವೈರಸ್ಸಿಗೆ ಲಸಿಕೆಗಳಿವೆ.ಬಿ ಮತ್ತು ಸಿ ಗೆ ಔಷಧಿಯೂ ಇದೆ .ಹೆಚ್ಚಿನ ವೈರಸ್ ಕಾಯಿಲೆಗಳಂತೆ ವೈರಲ್ ಹೆಪಟೈಟೀಸ್ ತನ್ನಿಂದ   ತಾನೇ ಶಮನ  ಗೊಳ್ಳುವುದು .ಅದರಿಂದ ನೀವು ಈ ಕಾಲದಲ್ಲಿ (ಲಿವರ್ ಬಾಧಕ ವಸ್ತುಗಳನ್ನು ಬಿಟ್ಟು )ಯಾವ ಸೊಪ್ಪು ಕೊಟ್ಟರೂ ಅದಕ್ಕೆ ಕ್ರೆಡಿಟ್ ಸಿಗುವುದು .ನೆಲ ನೆಲ್ಲಿಯನ್ನು ಕೂಡಾ ಹಲವು ಟ್ರಾಯಲ್ ಗಳಲ್ಲಿ  ಪರೀಕ್ಷೆ ಮಾಡಿ ಅದರ ಉಪಯುಕ್ತತೆ ದೃಡ ಪಟ್ಟಿಲ್ಲ .

ಮಲೇರಿಯ ,ಇಲಿ ಜ್ವರ ಕ್ಕೆ ಚಿಕಿತ್ಸೆ ಇದೆ.ವೈರಸ್ ಕಾಯಿಲೆಗಳನ್ನು ತಡೆಗಟ್ಟ ಬಹುದು.ಇಲ್ಲಿಜಾಂಡಿಸ್ ಎಂದು ಹಳ್ಳಿ ಮದ್ದು ಮಾಡಿ ಕೊಂಡು ಕೂತರೆ ಪ್ರಾಣ ಹೋದೀತು .

ಈ ತರಹದ ಸೊಂಕುಗಳಲ್ಲಿ ಮೊದಲು ಹಸಿವೆ ಕಮ್ಮಿ ಇರುತ್ತದೆ. ಕೊಬ್ಬು ಪದಾರ್ಥ ಜೀರ್ಣಕ್ಕೆ ಪಿತ್ತ ರಸ ಅವಶ್ಯ ವಿರುವುದರಿಂದ 

ಅಜೀರ್ಣ ವಾದೀತು .ಹೊರತಾಗಿ   ಯಾವುದೇ ಪಥ್ಯದ ಅವಶ್ಯಕತೆ ಯಿಲ್ಲ .ರೋಗ ಗುಣವಾಗಲು ಪೌಷ್ಟಿಕ ಅಂಶಗಳು 

ಅವಶ್ಯವಿದ್ದು ಪಥ್ಯದಿಂದ  ಹಾನಿಯಾಗುವುದೇ ಹೆಚ್ಚು.

ಲಿವರ್  ಗ್ಲುಕೋಸ್ ಉಂಟು ಮಾಡುವ ಫ್ಯಾಕ್ಟರಿ ,ಅದರ ಕಾಯಿಲೆಯಲ್ಲಿ  ಸಿಹಿ ಜಾಸ್ತಿ ಸೇವಿಸಲು ಹೇಳುವ ಕಾರಣ ಇದು.

ಕಬ್ಬಿನ ಹಾಲೇ ಆಗಬೇಕೆಂದು ಇಲ್ಲ. ಅನೈರ್ಮಲ್ಯ ಇರುವ ಅಂಗಡಿ ಕಬ್ಬಿನ  ಹಾಲು ಕುಡಿಯದಿರುವುದೇ ಲೇಸು.

 ಎಳೆ ಶಿಶು ಗಳಲ್ಲಿ ಬರುವ  ಜಾಂಡಿಸ್  ಸತ್ತ  ಕೆಂಪುರಕ್ತ ಕಣ ಗಳ ವಿಲೇವಾರಿ ಮಾಡುವ ಕಿಣ್ವಗಳು ಸಶಕ್ತ ವಾಗಿಲ್ಲದಿದ್ದುದರಿಂದ 

ಬರುವುದು ,ಕೆಲ ದಿನಗಳಲ್ಲಿ ಸರಿ ಹೋಗುವುದು.
 
                  




                                    .

ಗುರುವಾರ, ಏಪ್ರಿಲ್ 18, 2013

ಎಸ್ ಜಾನಕಿ

                                      
            
ಇತ್ತೀಚೆಗೆ ಸರಕಾರದವರು ಕೊಡಮಾಡಿದ ಪದ್ಮ ಭೂಷಣ ಪ್ರಸಸ್ತಿ ತಿರಸ್ಕರಿಸಿ ಸುದ್ದಿ ಮಾಡಿದ ಖ್ಯಾತ ಗಾಯಕಿ ಎಸ್ ಜಾನಕಿ. ಭಾರತದ
ಹಲವು  ಭಾಷೆಗಳಲ್ಲಿ ೨೨೦೦೦ ಕ್ಕೂ ಅಧಿಕ ಹಾಡುಗಳನ್ನು ಧ್ವನಿ ಮುದ್ರಿಸಿದ ಸಾಧನೆ .ಇವರು ಮೂಲತಹ ತೆಲುಗರು.ವಿಶೇಷವೆಂದರೆ 
ದಕ್ಷಿಣ ಭಾರತದ ಬಹುತೇಕ ಹಿನ್ನಲೆ ಗಾಯಕರು ತೆಲುಗರು. ಉದಾ ಪಿ ಬಿ ಶ್ರೀನಿವಾಸ್ ,ಪಿ ಸುಶೀಲ ,ಮಾನೋ. ಎಸ ಪಿ
ಬಾಲಸುಬ್ರಹ್ಮಣ್ಯಂ,ಘಂಟಸಾಲ .ತ್ಯಾಗರಾಜ ರೆ ತೆಲುಗರಲ್ಲವೇ? ಇವರೆಲ್ಲರ ಕನ್ನಡ ಹಾಡುಗಳನ್ನು ಕೇಳಿದಾಗ  ಕನ್ನಡಿಗರಲ್ಲವೆಂದು
ಯಾರೂ ಹೇಳರು.
ಪ್ರಶಸ್ತಿ ತಿರಸ್ಕರಿದ್ದುದು ಅಹಕಾರದಿಂದ ಅಲ್ಲ .ಬೇಸರದಿಂದ .ದಕ್ಷಿಣ ಭಾರತದ ಕಲಾವಿದರಿಗೆ ದೇಶಿಯ ಮಟ್ಟದಲ್ಲಿ ಅವಗಣನೆ ಸಾಮಾನ್ಯ.

ಅದಕ್ಕೆ ಪ್ರತಿಭಟನೆ. ಪ್ರಸಿದ್ಧ ಗಾಯಕ ಜೇಸುದಾಸ್ ಅವರ ಮಕ್ಕಳು ತಮ್ಮ ತಂದೆ ಹಾಡಿದ ಗೀತೆಗಳನ್ನು ಗಾನ ಮೇಳಗಳಲ್ಲಿ
ಹಾಡುವುದಕ್ಕೆ ಮುನ್ನ ಅನುಮತಿ ಪಡೆಯ ಬೇಕೆಂಬ ವರಾತೆ ತೆಗೆದಿದ್ದರು.. ಜಾನಕಿಯಮ್ಮ ತಮ್ಮ ಹಾಡುಗಳನ್ನು ಯಾರು ಎಲ್ಲಿ
ಬೇಕಾದರೂ ಹಾಡಬಹುದು .ಅದರಿಂದ ನನ್ನ ಹಾಡುಗಳ ಜನಪ್ರಿಯತೆ ಹೆಚ್ಚುವುದಲ್ಲವೇ ಎಂದರು.
ಎಸ್ ಜಾನಕಿ ಯವರ ವೆಬ್ ಸೈಟ್ ಇದೆ . www.sjanaki.net
                                      ಇದರಲ್ಲಿ ತಮ್ಮ ಆಯ್ದ ಹಾಡುಗಳನ್ನು ಹಾಕಿದ್ದಾರೆ.ರಸಿಕರು ಕೇಳಬಹುದು.ಇವರ ವಾಯ್ಸ್ 
ಮಾಡ್ಯೂಲೆಶನ್ ಅದ್ಭುತ .ಮಕ್ಕಳಂತೆ ಅಜ್ಜಿಯಂತೆ ಹಾಡಬಲ್ಲರು.ವಿನಯ ಶೀಲೆ
ಹೇಮಾವತಿ ಕನ್ನಡ ಚಿತ್ರದಲ್ಲಿ ಖ್ಯಾತ ವಯೊಲಿನ್ ಪಟು ಎಂ ಎಸ್ ಗೋಪಾಲಕೃಷ್ಣನ್ ರ ಪಕ್ಕ ವಾದ್ಯದಲ್ಲಿ ಹಾಡಿದ ಶಿವ ಶಿವ ಎನ್ನದ
ನಾಲಿಗೆ ಹಾಡು ಕೇಳಿ.
www.youtube.com/watch?v=rGLLevDBwDU
www.4shared.com/mp3/A922kgBB/Siva_Siva_ennada.htm
ಇನ್ನೊಂದು ಜನಪ್ರಿಯ ಗೀತೆ ಭಾರತ ಭೂಶಿರ -ಉಪಾಸನೆ ಚಿತ್ರದ್ದು

www.youtube.com/watch?v=57Ibj4fD4uQ

ಇದಲ್ಲದೆ ಜನಪ್ರಿಯ ತಮಿಳ್ ಗೀತೆ ಸಿಂಗಾರ ವೇಲನೆ ಬಾ ಹಾಡಿಗೆ ಖ್ಯಾತ  ನಾದಸ್ವರ ವಿದ್ವಾನ್ ಕಾರೈಕುರುಚ್ಚಿ

ಅರುಣಾಚಲಂ  ಪಕ್ಕ ವಾದ್ಯ

ಒದಗಿಸಿದ್ದರೆ ,ಕನ್ನಡದ ಸನಾದಿ ಅಪ್ಪಣ್ಣ ಹಾಡಿಗೆ ಶೆಹನಾಯಿ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ನುಡಿದ್ದಾರೆ.

www.youtube.com/watch?v=oDRgGpEwSYw

www.youtube.com/watch?v=mPEXKFcbLsM

ಅಪ್ ಲೋಡರ್ ಗಳಿಗೆ ವಂದಿಸುತ ಹಾಡುಗಳನ್ನು ಆನಂದಿಸಿರಿ.

ಎಸ್ ಜಾನಕಿಯವರು ಕೆಲವು ಶಾಸ್ತ್ರಿಯ ಸಂಗೀತದ ದ್ವನಿ ಸುರುಳಿ ಗಳನ್ನೂ ಹೊರತಂದಿದ್ದಾರೆ. ಇವರ ವೆಬ್ ಸೈಟ್ ನಲ್ಲಿ ವಿವರ ಗಳಿವೆ.

Low B P

 

Many patients tell me that they  have low B P disease.But as a matter of fact there is no such

disease. Normal B P for human beings is 120/80 and if more than 140/90 it is high BP or

hypertension.But many people have there B P 100/70 ,or 90/70 .It is normal for them and do not

cause any symptom.As long as you are able to walk and have normal urine output nothing to worry.

If BP suddenly falls due to hemorrhage ,heart attack or loose motion etc  it requires attention.

In elderly people and diabetics have at times a problem called postural hypotension i.e. BP which

is normal in supine (lying down) falls down significantly when the person sits up  or stands. This is

due to weakness of nerves called autonomic neuropathy.

Again in rare disease of adrenal gland called Addison's disease also one may have low BP.

ಶನಿವಾರ, ಏಪ್ರಿಲ್ 13, 2013

ತಲೆ ನೋವು

ತಲೆನೋವು ಸಹಿಸದವರಿಲ್ಲ. ತಲೆಯಿದೆ ಎಂದು ಗೊತ್ತಾಗುವುದೇ ನೋವು ಬಂದಾಗ.

ತಲೆನೋವಿನಲ್ಲಿ ಸ್ಥೂಲವಾಗಿ ಎರಡು ತರಹ.ಪ್ರಾಥಮಿಕ ತಲೆ ಸಂಬಂದಿ ನೋವು  ಒಂದಾದರೆ ಇತರೇ ಕಾರಣ ಗಳಿಂದ

ಉ೦ಟಾಗುವ ನೋವು.

ಮೊದಲನೇ ವರ್ಗದಲ್ಲಿ  ಮಾನಸಿಕ ಉದ್ವೇಗದಿಂದಾಗುವ ತಲೆನೋವು(Tension type headache) ಮತ್ತು ಮೈಗ್ರೈನ್  ತಲೆನೋವು ಮುಖ್ಯವಾದುವು.

ಇದರಲ್ಲಿ ಶೇಕಡಾ ೬೯ಕ್ಕಿನ್ತಲು ಹೆಚ್ಚು ಉದ್ವೇಗದಿಂದಾಗುವ ತಲೆನೋವಾದರೆ  ಶೇ ೧೬ ರಷ್ಟು ಮೈಗ್ರೈನ್ ನಿಂದ

ಉಂಟಾಗುವುದು. ಮೈಗ್ರೈನ್ ನಲ್ಲಿ ಅರೆ ತಲೆ ನೋವು ,ಜುಮ್ ಜುಮ್ ತಲೆ ನೋವು ,ವಾಂತಿ ,ವಾಕರಿಕೆ  ,ಸದ್ದು

ಮತ್ತು ಬೆಳಕು ಅಸಹ್ಯವಾಗುವು  ಇರಬಹುದು . ಮೈಗ್ರೇನ್  ನೋವು  ಅಚಾನಕ್ಕಾಗಿ ಬರುವುದು.ಉದ್ವೇಗದ ನೋವು

ಇಬ್ಬದಿ ಯಲ್ಲೂ ಇದ್ದು ತಲೆಯ ಸುತ್ತ ಬ್ಯಾಂಡ್ ಕಟ್ಟಿದ ಸಂವೇದನೆ ಇರುತ್ತದೆ.ನಿಧಾನ ವಾಗಿ ಏರಿ  ಬರುವ ನೋವು .

ಇತ್ತೀಚಿಗೆ ಜೀವನ ಉದ್ವೇಗಮಯ ವಾಗಿರುವುದು ಕಾರಣ .ಸಣ್ಣ ಮಕ್ಕಳಿಗೆ  ಅಡ್ಮಿಶನ್, ಹೋಂ ವರ್ಕ್ ,ಎಂಟ್ರನ್ಸ್,

ರಾಂಕ್ ಗಳಿಸುವುದು,ಪಟ್ಯೇತರ ಚಟುವಟಿಕೆ ಎಲ್ಲವೂ ಉದ್ವೇಗ ಕಾರಕ ಗಳು.ಮುಂದೆ ದೊಡ್ಡವರಾದಾಗ  ಕೆಲಸದ

ಚಿಂತೆ ,ಟಾರ್ಗೆಟ್ ತಲುಪುವ ಉದ್ವೇಗ ,ಸುಖದ ಮರೀಚಿಕೆ ಹಿಂಬಾಲಿಸಿ ಓಟ ,ಸಾಂತ್ವನಕ್ಕೆ ಅವಕಾಶವಿಲ್ಲದ

ಒಂಟಿ ಕುಟುಂಬ ಗಳೂ ಇದಕ್ಕೆ ಕಾರಣ.

ಇತರೇ ಕಾಯಿಲೆಗಳಿಂದ ಉಂಟಾಗುವ (ಸೆಕೆಂಡರಿ) ತಲೆನೋವಿನಲ್ಲಿ  ಸೋಂಕು ರೋಗಗಳು  ಮು೦ಚೂಣಿಯಲ್ಲಿದ್ದರೆ

ಮೆದುಳಿನ  ರಕ್ತ ಸ್ರಾವ , ಮೆದುಳು ಗಡ್ದೆಗಳು ಕೆಲವು ತಲೆನೋವುಗಳಿಗೆ ಕಾರಣ . ಸೊಂಕುಗಳಲಿ

ಸಾಮಾನ್ಯ ವೈರಲ್ ಜ್ವರಗಳು ,ಡೆಂಗು, ,ಸೈನಸ್ ಮತ್ತು ಹಲ್ಲಿನ ಸೋಂಕು ,ಮಲೇರಿಯ , ಟೈಪೋಇಡ್,ಮೆದುಳಿನ

ಪೊರೆಯ ಸೋಂಕು  ಕಾರಣವಾಗಬಹುದು .ಮೆದುಳು ಪೋರೆಯೊಳಗಿನ ರಕ್ತಸ್ರಾವ (ಸಬ್ ಅರಕ್ನೊಯಿದ್ ಹೆಮ್ಮೊರೆಜ್)

ಒಮ್ಮೆಲೇ ಇದುವರೆಗೆ ಸಹಿಸಿರದಂತ ತಲೆನೋವು ಉಂಟುಮಾಡುತ್ತದೆ.

ಸಾಮಾನ್ಯ ತಿಳುವಳಿಕೆಯಂತೆ ಅಧಿಕ ರಕ್ತದ ಒತ್ತಡ  ತಲೆನೋವಿಗೆ ಕಾರಣವಲ್ಲ .ತಲೆವೋವು ಇರುವಾಗ ಬಿ ಪಿ ನೋಡಿದರೆ

ಜಾಸ್ತಿ  ಇರಬಹುದು .ಇಲ್ಲಿ ತಲೆನೋವಿಗೆ  ಚಿಕಿತ್ಸೆ ಮಾಡಬೇಕೆ ಹೊರತು ಬಿ ಪಿ ಗೆ ಅಲ್ಲ .

ಅಂತೆಯೇ ದೃಷ್ಟಿ ದೋಷವೂ ತಲೆ ನೋವು ಉಂಟು ಮಾಡುವುದು ಕಡಿಮೆ . ಕನ್ನಡಕ ಹಾಕಿದರೆ ತಲೆ ನೋವು ಹೋಗದು

ಕಣ್ಣಿನ ಕಾಯಿಲೆಗಳಲ್ಲಿ ಗ್ಲೋಕೋಮ ತಲೆನೋವು ಉಂಟುಮಾಡಬಹುದು .

ಬಾಲಂಗೋಚಿ ; ದೂರ ದರ್ಶನದಲ್ಲಿ ಮಧ್ಯಾಹ್ನ ಪ್ರಶಸ್ತಿ ವಿಜೇತ  ಚಲನಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದರು .ಬೇರೆ ಗತಿಯಿಲ್ಲ

ದಿದ್ದುದರಿಂದ  ನೋಡಿ ತಲೆ ನೋವು ಬರುತಿದ್ದುದು ಸಾಮಾನ್ಯ .ವಿಶೇಷವೆಂದರೆ  ಈ ಚಿತ್ರಗಳ ಪ್ರಾಯೋಜಕರು 

ಅಮೃತಾಂಜನ್!

ಅಮೃತಾಂಜನ್ ನಂತಹ  ಔಷಧಿಗಳಿಗೆ  ಕೌಂಟರ್ ಇರಿಟೆ೦ಟ ಎನ್ನುತ್ತಾರೆ .ಇವುಗಳನ್ನು ಹಚ್ಚಿದಾಗ ಆಗುವ  ಉರಿ ನೋವನ್ನು

ಕಮ್ಮಿಯಾದಂತೆ  ಭಾಸ ಉಂಟು ಮಾಡುತ್ತವೆ.ಜೀವನದಲ್ಲಿ  ದೊಡ್ಡ ಸಂಕಟ ಬಂದಾಗ ಸಣ್ಣದು ಮರೆಯುವಂತೆ.

ಶುಕ್ರವಾರ, ಏಪ್ರಿಲ್ 12, 2013

ವಿಷು ಹಬ್ಬ

ದಕ್ಷಿಣ ಕನ್ನಡ ಮತ್ತು ಕೇರಳದಲ್ಲಿ ಉತ್ಸಾಹದಿಂದ ಆಚರಿಸಲ್ಪಡುವ ಹಬ್ಬ.ಮೇಷ ತಿಂಗಳ ತಿಂಗಳ  ಒಂದನೇ ದಿನ ಸೌರಮಾನ

ವರ್ಷ ದ ಆರಂಭ.ಹಣ್ಣು ಹಂಪಲು ಹೂ ಯಥೇಚ್ಛ ಇರುವ ಕಾಲ.ಮಕ್ಕಳಿಗೂ ರಜಾ ದಿನಗಳು.ಅಂದರೆ ಕೇಳಬೇಕೇ?

ಈ ದಿನ ಬೆಳಗೆ ಹೂ ಹಣ್ಣು ತರಕಾರಿಗಳನ್ನು ದೇವರ ಮುಂದೆ ಇರಿಸಿ ನಮಸ್ಕಾರ ಮಾಡಬೇಕು.ಇದನ್ನು ಕಣಿ ಇಡುವುದು

ಎನ್ನುತ್ತಾರೆ.ಬೆಳಗ್ಗೆ ಎದ್ದೊಡನೆ ಕಣ್ಣು ಮುಚ್ಚಿ ಕೊಂಡೆ ದೇವರ ಕೋಣೆಗೆ ಹೋಗಿ ಕಣ್ತೆರೆದು  ಕಣಿಯಿಂದ ಅಲಂಕೃತ ದೇವರನ್ನು

ನೋಡಬೇಕೆಂಬ ನಂಬಿಕೆ.

                                                    


                                             
 
ಆಮೇಲೆ ಹಿರಿಯರೆಲ್ಲರಿಗೆ ನಮಸ್ಕಾರ ಮಾಡಿ ಆಶೀರ್ವಾದ  ಪಡೆಯ ಬೇಕು .ಹಿಂದಿನ ದಿನಗಳಲ್ಲಿ
 
ಒಕ್ಕಲಿನವರು,ಕೆಲಸಕ್ಕೆ ಬರುವ ಕಾರ್ಮಿಕರು  ಕಣಿ ಕಾಣಿಕೆ ಕೊಟ್ಟು ಧಣಿಗಳಿಗೆ  ನಮಸ್ಕರಿಸುತ್ತಿದ್ದರು.
 
ಮಧ್ಯಾಹ್ನ ಭೂರಿ ಭೋಜನ.ಎಳೆಯ ಗೇರು ಬೀಜದ  ಪಾಯಸ ವಿಶೇಷ.ಮಕ್ಕಳಿಗೆ
 
ಕಣಿಗೆ ಹಣ್ಣು ,ತರಕಾರಿ ಹೂ ಸಂಗ್ರಹಿಸಿ ಇಡುವುದರಲ್ಲಿ ಅಘೋಷಿತ  ಸ್ಪರ್ದೆ.
 
ಕೇರಳದಲ್ಲಿ  ಕಣಿಗೆ  ಹಳದಿ ಬಣ್ಣದ ಕೊನ್ನೇ ಹೂ ಬಹಳ ವಿಶೇಷ .ವಿಶುವಿಗಾಗುವಾಗ  ಅದು
 
ಸಮೃದ್ದ.ಯಾ ರಾಜ್ಯದಲ್ಲಿ  ಇದೊಂದು ಸಾರ್ವತ್ರಿಕ ಹಬ್ಬ. ಮಧ್ಯಾಹ್ನ  ಸಸ್ಯಾಹಾರಿ  ಭೋಜನ.
 
ಹಪ್ಪಳ,ಅವಿಯಲ್, ಇನ್ಜಿಪುಳಿ,ಮಾವಿನಕಾಯಿಯ ಪುಳಿಸೇರಿ,ಪಾಯಸ ಇತ್ಯಾದಿ ಮನೆ ಮಂದಿಯೆಲ್ಲಾ ಸೇರಿ
 
ಊಟ.ಇತ್ತೀಚಿನ ದಿನಗಳಲ್ಲಿ ಹೊಟೇಲಿಗೆ ಹೋಗಿ ಆತವಾ ತರಿಸಿ ತಿನ್ನುವ ಅಭ್ಯಾಸ ಸುರು
 
ಆಗಿದೆ. ಹೋಟೆಲ್ ಗಳು ವಿಷು ಸಧ್ಯಾ ಎಂಬ ಊಟದ ಪ್ಯಾಕೇಜ್ ಒದಗಿಸುತ್ತವೆ.ವಿಷುವಿಗೆ ಟಿ ವಿ ಯಲ್ಲಿ
 
ವಿಶೇಷ ಕರ್ಯಕ್ರಮಗಲಿರುತ್ತವೆ.ಅಡುಗೆ ಮಾಡಿಕೊಂಡು ಕೂತರೆ ಅವನ್ನು ನೋಡುವುದು ಹೇಗೆ?
 
ಕೊನ್ನ ಹೂ
 
(ಚಿತ್ರಗಳಿಗೆ ಅವುಗಳ ಕರ್ತೃಗಳಿಗೆ ಅಭಾರಿ)
 
ಇದೇ ದಿನದಂದು ತಮಿಳ್ನಾಡಿನಲ್ಲಿ ಹೊಸ ವರ್ಷ ಆಚರಿಸಲಾಗುತ್ತದೆ.(ಪುದಿಯ -ಹೊಸ  ಆ೦ಡು- ವರ್ಷ--ಪುತ್ತಾಂಡು)
 
ಉತ್ತರ ಭಾರತದಲ್ಲಿ ಬೈಶಾಕಿ  ಹಬ್ಬವೆಂದು ಆಚರಿಸಲ್ಪಡುತ್ತದೆ.

ಗುರುವಾರ, ಏಪ್ರಿಲ್ 11, 2013

ಯುಗಾದಿ

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ಹೊಂಗೆ ಹೂವ ತೊಂಗಳಲಿ,
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ.
ಬೇವಿನ ಕಹಿ ಬಾಳಿನಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.

ವರುಷಕೊಂದು ಹೊಸತು ಜನ್ಮ,
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ.
ಒಂದೇ ಒಂದು ಜನ್ಮದಲಿ
ಒಂದೇ ಬಾಲ್ಯ, ಒಂದೇ ಹರೆಯ
ನಮಗದಷ್ಟೇ ಏತಕೋ.

ನಿದ್ದೆಗೊಮ್ಮೆ ನಿತ್ಯ ಮರಣ,
ಎದ್ದ ಸಲ ನವೀನ ಜನನ,
ನಮಗೆ ಏಕೆ ಬಾರದು?
ಎಲೆ ಸನತ್ಕುಮಾರ ದೇವ,
ಎಲೆ ಸಾಹಸಿ ಚಿರಂಜೀವ,
ನಿನಗೆ ಲೀಲೆ ಸೇರದೂ.

ಯುಗ ಯುಗಗಳು ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
                                                         ಅಂಬಿಕಾತನಯದತ್ತ
ಈ ಹಾಡನ್ನು ಕುಲವಧು ಚಿತ್ರದಲ್ಲಿ ನೋಡಿರಿ (ಅಪ್ ಲೋಡರ್ ಗೆ ವಂದಿಸುತ)

www.youtube.com/watch?v=T3O211xkJ8o


ಯುಗಾದಿ ಭವಿಷ್ಯ
 ಈ ವರ್ಷ ಆದಿಯಲ್ಲಿ ನೀರಿನ ಕೊರತೆಯಿಂದ ಮಳೆ ಬೆಳೆಗಳಿಗೆ ಹಾನಿ. ಧಾನ್ಯ ,ತರಕಾರಿಗಳ ಬೆಲೆ ಗಗನಕ್ಕೆ .

ಅರ್ಥಿಕ ಪರಿಸ್ಥಿತಿ ಏರು ಪೇರು.

ಜೂನ್ ಜುಲೈ ಮಳೆ ಹೊಂದಿ  ಕೊಂಡು ಮನೆಯ ಮತ್ತು ಮನಶಾಂತಿ ನಿರ್ಧಾರ.

ಸಧ್ಯಕ್ಕೆ ರಾಜಕಾರಣ ಸಂಬಂದಿ ಉದ್ಯೋಗ ಉತ್ತಮ. ಸಾಫ್ಟ್ವೇರ್   ಉದ್ಯೋಗ ಅವಕಾಶ ಸ್ವಲ್ಪ ಕಮ್ಮಿ. ಅದರ ಪರಿಣಾಮ

ಇತರ ಕ್ಷೇತ್ರಗಳಲ್ಲೂ ಕಾಣಿಸದಿರದು. ವಿವಾಹಾನ್ವೇಷಿ ಹುಡುಗಿಯರು ಇತರೇ ಉದ್ಯೋಗಿಗಳನ್ನೂ ಪರಿಗಣಿಸುವುದು

ಉತ್ತಮ.

ವರ್ಷದ ಕೊನೆಯಲ್ಲಿ ಶಾಂತಿ ಸಿಗಬಹುದು.ಸುಬ್ರಹ್ಮಣ್ಯ ಸೇವೆ ಎಲ್ಲರಿಗೂ ಒಳ್ಳೆಯದು.

ಮಂಗಳವಾರ, ಏಪ್ರಿಲ್ 9, 2013

USE AND ABUSE OF ANTIBIOTICS


                              








Antibiotics  by definition are the substances produced by the microbes which have microbicidal

activity. But in practice  synthetic substances which are used as anti microbes are also called

antibiotics.Science has helped us to develop wonderful drugs to combat dreadful infections

be it bacterial,fungal or viral. The debate is are they abused?

Common ailments like rhinosinusitis  which in more than 90%of cases caused by virus and

self limiting do not warrant treatment with antibacterial drugs.Similarly diarrhea in children

most of caused by rota virus requires only re hydration  with oral re hydration solution .But

doctors blindly prescribe antibiotics ;sometimes patients insist upon them to get quick relief.


   Indiscriminate use of antibiotics has lead to development of monster organisms which are

resistant to most of antibiotics.In addition companies advertise the soaps,detergents and even tooth

pastes with antibacterial substances to kill  invisible bacteria .In practise they kill

commensals or the native harmless and useful microbes ;thus inviting pathogenic strains to cause


disease.
                                           
                                                     

                         


                                                     

ಘನವೆತ್ತ ರಾಜ್ಯಪಾಲರು -೩

                                                    
 
                                                                        ಶ್ರೀ ಧರ್ಮ ವೀರ

ಧರ್ಮ ವೀರರು ಹಳೆಯ  ಆಯ್ ಸಿ. ಎಸ್ ಗೆ ಸೇರಿದವರು.ತನ್ನ ಪ್ರಾಮಾಣಿಕ ತೆ ಮತ್ತು ಕಾರ್ಯ ಕ್ಷಮತೆಯಿಂದ  ಕೇಂದ್ರದಲ್ಲಿ

ಕ್ಯಾಬಿನೆಟ್ ಸೆಕ್ರೆಟರಿ ಹುದ್ದೆಯ ವರೆಗೆ ಏರಿದವರು.ಇದೂ ನೆಹರು ಕಾಲದಲ್ಲಿ. ಆ ಮೇಲೆ ಜೆಕೊಸ್ಲಾವೆಕಿಯಾದಲ್ಲಿ ನಮ್ಮ

ರಾಯಭಾರಿಯಾಗಿ ಸೇವೆ.ಮತ್ತೆ ಹರ್ಯಾಣ,ಪಶ್ಚಿಮ ಬಂಗಾಳಗಳ ರಾಜ್ಯಪಾಲ. ಅಲ್ಲಿಂದ ಆಗಿನ ಮೈಸೂರು ರಾಜ್ಯದ

ರಾಜ್ಯ ಪಾಲರಾಗಿ ಬೆಂಗಳೂರಿಗೆ.ಇವರು ಬಂದಾಗ ಲವ ಕುಶ ರೆಂದು ಪ್ರಸಿದ್ದಿ ಪಡೆದಿದಿದ್ದ  ವೀರೇಂದ್ರ ಪಾಟೀಲ್ ಮತ್ತು

ಅವರ ಅರ್ಥ ಮಂತ್ರಿ ರಾಮಕೃಷ್ಣ ಹೆಗಡೆಯವರ  ಆಡಳಿತದ  ಸುವರ್ಣ ಕಾಲ.ಲೋಕ ಸಭಾ ಚುನಾವಣೆಯಲ್ಲಿ ಪಕ್ಷ ಬಹುಮತ

ಕಳೆದು ಕೊಂಡಾಗ  ಮಂತ್ರಿಮಂಡಲ ರಾಜೀನಾಮೆ. ರಾಷ್ಟ್ರಪತಿ ಆಡಳಿತ .ಧರ್ಮವಿರ ರ  ಅನುಭವ ಮತ್ತು ಕ್ಷಮತೆ ಯ

ಫಲ ಕನ್ನಡಿಗರಿಗೆ ಸಿಕ್ಕಿತು.ಭಯ ಅಥವಾ ಪಕ್ಷಪಾತ ,ರಾಗ ಅಥವಾ ದ್ವೇಷವಿಲ್ಲದ ಆಡಳಿತ.

ಪೋಲಿಸ್ ವ್ಯವಸ್ತೆಯ  ಸುಧಾರಣೆ ಬಗ್ಗೆ ಇವರ ನೇತೃತ್ವದಲ್ಲಿಯ ಆಯೋಗ ನೀಡಿದ ವರದಿ ಬಹು ಪ್ರಸಿದ್ದ.ಆದರೆ ಸ್ವಾರ್ಥ ದಿಂದ

ಅದರ  ಶಿಫಾರಸುಗಳ ಪಾಲನೆ  ಮಾಡಲು ರಾಜಕಾರಿಣಿಗಳಿಗೆ ಅಸಡ್ಡೆ.

ಮುಂದೆ ಇವರಿಗೆ ಪದ್ಮವಿಭೂಷಣ ಗೌರವ. ಇವರ ಜೀವನ ಚರಿತ್ರೆ 'ಮೆಮರೀಸ್ ಆಫ್ ಎ ಸಿವಿಲ್ ಸರ್ವೆಂಟ್' ಎಲ್ಲರು  ಓದ

ಬೇಕಾದ ಹೊತ್ತಿಗೆ.

                                            
                                                                ಶ್ರೀ ಟಿ ಏನ್ ಚತುರ್ವೇದಿ

ಶ್ರೀ ಚತುರ್ವೆದಿಯವರೂ ಐ ಎ ಎಸ ಗೆ ಸೇರಿದವರು.ಕೇಂದ್ರದಲ್ಲಿ ಗೃಹ ಕಾರ್ಯದರ್ಶಿ ರಾಗಿದ್ದಾಗ ಪಂಜಾಬ್ ,ಕಾಶ್ಮೀರ ಸಮಸ್ಯೆ

ಗಳ ಪರಿಹಾರಕ್ಕೆ ಯತ್ನಿಸಿದವರು.ಮುಂದೆ ಭಾರತದ  ಮಹಾ ಲೆಕ್ಕ ಪರಿಶೋದಕ ರಾಗಿ ನೇಮಕ .ಬೊಫೋರ್ಸ್

ಕರ್ಮಕಾಂಡವನ್ನು ವಿಮರ್ಶಿಸಿದವರು.ಮುಂದೆ ರಾಜ್ಯ ಸಭಾ ಸದಸ್ಯ.ಕರ್ನಾಟಕ ದ ರಾಜ್ಯಪಾಲರಾಗಿ ನಿಯುಕ್ತಿ.

ಈ ಅವಧಿಯಲ್ಲಿ ವಿಶ್ವ ವಿದ್ಯಾಲಯಗಳ  ಆಡಳಿತ  ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ.ಅವರ  ನಿರ್ಣಯಗಳು

 ವಿವಾದ  ಮುಕ್ತ.ರಾಜ್ಯದಲ್ಲಿ  ಕಾಂಗ್ರೆಸ್ ಜೆ ಡಿ ಎಸ. ಸರಕಾರಕ್ಕೆ ಜೆ ಡಿ ಎಸ. ಬೆಂಬಲ ಹಿಂತೆಗೆದು ಕೊಂಡಾಗ  ಮುಖ್ಯ ಮಂತ್ರಿ

ಧರ್ಮ ಸಿಂಗರಿಗೆ  ಬಹು ಮತ ಸಾಬೀತಿಗೆ  ಸಾಕಷ್ಟು ಸಮಯ ಕೊಟ್ಟುದು ಅವರ ನಿಸ್ಪಕ್ಷಪಾತ ನಡೆಗೆ ಸಾಕ್ಷಿ. ಅವರನ್ನು

ಏನ್ ಡಿ ಎ ಸರಕಾರ ನೇಮಿಸಿದ್ದರೂ ಅವರು  ಅದರ ಏಜೆಂಟ್ ರಂತೆ ಎಂದೂ ನಡೆಯಲಿಲ್ಲ .

ಶ್ರೀಯುತರಿಗೆ  ಪದ್ಮ ಭೂಷಣ ನೀಡಿ ಗೌರವಿಸಲಾಗಿದೆ.

ಬಾಲಂಗೋಚಿ:   ರೋಟರಿ ಲಯನ್ಸ್ ನವರೂ ಗವರ್ನರ್ ಗೆ ಸಮನಾಗಿ ರಾಜ್ಯಪಾಲ ಎಂದು ಬಳಸುತ್ತಾರೆ.ಇದು  ಅಸ್ಟು

ಸಮಂಜಸವೆನಿಸುವುದಿಲ್ಲ. ಆಡಳಿತಾಧಿಕಾರಿ ಎಂದು ಕರೆಯುವುದು ಹೆಚ್ಚು ಸೂಕ್ತ.

ಘನವೆತ್ತ ರಾಜ್ಯಪಾಲರು-೨ ಡಾ ಪಿ.ಸಿ ಅಲೆಕ್ಷಾ೦ಡರ್

                                 


ಪಿ ಸಿ ಅಲೆಕ್ಷಾನ್ದರ್
 
 
 
ಪಿ ಸಿ ಅಲೆಕ್ಷಾನ್ದರ್  ದೇಶ ಕಂಡ ಅತ್ಯುತ್ತಮ ರಾಜ್ಯಪಾಲರಲ್ಲಿ ಒಬ್ಬರು. ಬ್ರಿಟನ್ ನಲ್ಲಿ ನಮ್ಮ ರಾಯಭಾರಿಯಾಗಿದ್ದ್ದ
 
ಅವರನ್ನು  ತಮಿಳ್ನಾಡಿನ ರಾಜ್ಯಪಾಲರಾಗಿ ಹೋಗುವಂತೆ ಆಗಿನ ಪ್ರಧಾನಿ  ರಾಜೀವ ಗಾಂಧಿಯವರು ಕೇಳಿದಾಗ 
 
 
ಇವರು ಹಾಕಿದ ಷರತ್ತು ಕೊಂಗ್ರೆಸ್ಸ್ ಪಕ್ಷದವರು ಆಡಳಿತ ದಲ್ಲಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಬೇಕು..
 
ಆಗ ತಮಿನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆಯಿತ್ತು.ರಾಜೀವ ಗಾಂಧಿಯವರು ಅಸ್ತು ಎಂದ ಮೇಲೆಯೇ ಆ ಹುದ್ದ್ದೆಯನ್ನು ಒಪ್ಪಿದರು.
 
ವಿಶ್ವೇಶ್ವರಯ್ಯನರು ದಿವಾನ ರಾಗುವ ಮೊದಲು ತಮ್ಮ ತಾಯಿಯರನ್ನು ತಮ್ಮ ಬಂಧು ಬಳಗದವರಿಗೆ ಅನುಕೂಲ
 
ಮಾಡುವಂತೆ  ಕೇಳಿಕೊಳ್ಳಬಾರದೆಂಬ ಷರತ್ತು ಇಟ್ಟಿದ್ದರಂತೆ.ರಾಜ್ಯಪಾಲರಾಗಿ ಒಂದು ವರ್ಷ ರಾಷ್ಟ್ರಪತಿ ಆಳ್ವಿಕೆಯನ್ನು
 
 ಎಲ್ಲರೂ ಬೇಶ್ ಎನ್ನುವಂತೆ ನಡೆಸಿದರು.ಅಲೆಕ್ಷಾನ್ದರ್ ಅಂತವರು ರಾಜ್ಯಪಾಲರಾಗಿದ್ದರೆ ಚುನಾಯಿತ ಪ್ರತಿನಿಧಿಗಳ
 
ಸರಕಾರಕ್ಕಿಂತಲೂ ಉತ್ತಮ ಎಂದು ಎಲ್ಲರೂ ಹೇಳುವಂತೆ ಆಯಿತು.
 
ಒಂದು ದಿನ ಇವರ ಮಗಳು ಟ್ರಾಫಿಕ್ ಸಿಗ್ನಲ್ ಅಲಕ್ಷಿಸಿದ್ದುದಕ್ಕೆ ಕಾನ್ಸ್ಟೇಬಲ್ ನಿಲ್ಲಿಸಿ ಫೈನ್ ಹಾಕಿದರು.ಆ ಮೇಲೆ ಗವರ್ನರ್
 
ಅವರ ಮಗಳೆಂದು ತಿಳಿದು ಒಡನೆ ರಾಜಭವನಕ್ಕೆ ತೆರಳಿ ಕ್ಷಮೆ ಕೇಳಿದಾಗ 'ನೀನು ಮಾಡಿದ ತಪ್ಪು ಎಂದರೆ ಕರ್ತವ್ಯ ಪಾಲಿಸಿದ
 
 ಬಗ್ಗೆ ಕ್ಷಮೆ ಕೇಳಿದ್ದು.'ಕಾನೂನು ಎಲ್ಲರಿಗು ಒಂದೇ.ಒಳ್ಳೆಯ ಕೆಲಸ ಮಾಡಿದೆಯೆಂದು ಬೆನ್ನು ತಟ್ಟಿ ಕಳಿಸಿದರು.ಇವರ ನೇಮಕ
 
ವಾದಾಗ ಕಾಂಗ್ರೆಸ್ ಪಕ್ಷದ ಏಜೆಂಟ್ ಎಂದು ವಿರೋದಿಸಿದ್ದ ಕರುಣಾನಿಧಿಯವರೂ ಇವರನ್ನು ಬಿಳ್ಕೊಡುವಾಗ 'ಒಬ್ಬ
 
ಅಲೆಕ್ಷಾನ್ದರ್ ಹಿಂದೆ ನಮ್ಮ ದೇಶವನ್ನು ಗೆದ್ದರೆ,ಈ ಅಲೆಕ್ಷಾನ್ದರ್ ತಮಿಳರ ಹೃದಯವನ್ನೇ ಗೆದ್ದ 'ಎನ್ನುವಂತೆ ಆಯಿತು.

ಮುಂದೆ ಇವರು ಮಹಾರಾಷ್ಟ್ರದ ರಾಜ್ಯಪಾಲರಾದಾಗಲೂ ಬಿ ಜೆ ಪಿ ಶಿವಸೇನೆಯವರು ಮೊದಲು ಸಂಶಯದಿಂದ
 
ನೋಡಿದರೂ 
ಇವರ ನಿಷ್ಪಕ್ಷಪಾತ ನಡವಳಿಕೆ ಕಂಡು ಎರಡನೇ ಅವಧಿಗೆ ಮುಂದುವರಿಸುವಂತೆ ಮಾಡಿದರು.ಮೊದಲು ಇವರನ್ನು
 
 ನೇಮಿಸಿದುದು ಕಾಂಗ್ರೆಸ್ ಸರಕಾರ ,ಪ್ರಧಾನಿ ನರಸಿಂಹ ರಾಯರು.ಆಗ ಮಹಾರಾಸ್ತ್ರದಲ್ಲೂ ಅವರ ಪಕ್ಷದ ಆಢಳಿತ ವಿತ್ತು.
 
 
ಎರಡನೇ ಅವಧಿಗೆ ಆಗುವಾಗ ಕೇಂದ್ರದಲ್ಲಿ ವಾಜಪೇಯಿ ಪ್ರಧಾನಿ.ರಾಜ್ಯದಲ್ಲಿ ಶಿವಸೇನ ಬಿ ಜೆ ಪಿ ಆಡಳಿತವಿತ್ತು.ಹಿಂದೂ
 
ವಾದಿಗಳಾದ ಶಿವಸೆನೆಯವರೇ ಇವರ ಎರಡನೇ ಅವಧಿಗೆ ಒತ್ತಾಯಿಸಿದರೆಂದರೆ ಇವರ ಹಿರಿಮೆ ಅರ್ಥ ವಾಗುವುದು.
 
 
ಏನ್ ಡಿ ಎ ಇವರನ್ನು ರಾಷ್ಟ್ರಪತಿ ಮಾಡಬೇಕೆನ್ದಿತ್ತು.ಆದರೆ ಕಾಂಗ್ರೆಸ್ ನ ಅಸಹಕಾರದಿಂದ ಅದು ಸಾಧ್ಯವಾಗಲಿಲ್ಲ.
 
ಏನ್.ಸಿ.ಪಿ. ಬೆಂಬಲಿತ ಹುರಿಯಾಳಾಗಿ ಮಹಾರಾಷ್ಟ್ರ ವಿಧಾನ ಸಭೆಯಿಂದ ರಾಜ್ಯಸಭೆಗೆ ಸ್ಪರ್ದಿಸಿದ ಇವರನ್ನು ೩/೪
 
 
ಬಹುಮತದಿಂದ ಆರಿಸಿ ಮಾರಾಟಿಗಳು ಕೃತಜ್ಞತೆ ಮೆರೆದರು.
 
ಶ್ರೀ ಅಲೆಕ್ಷಾನ್ದರ್ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ  ಕಾಲದಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಮುಖ್ಯ
 
ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದವರು.ಉದಾರ ಚರಿತರು.
 
ಇವರ ಜೀವನ ಚರಿತ್ರೆ' ಥ್ರೂ ದ ಕಾರಿದೊರ್ಸ್ ಆಫ್ ಪವರ್ ' ಭಾರತೀಯರೆಲ್ಲಾ ಓದ ಬೇಕಾದ ಪುಸ್ತಕ.

ಶುಕ್ರವಾರ, ಏಪ್ರಿಲ್ 5, 2013

ಘನವೆತ್ತ ರಾಜ್ಯಪಾಲರು ೧


ರಾಜ್ಯಪಾಲರ ಹುದ್ದೆಯ ವಿಶೇಷವೆಂದರೆ ನೀವು ೨೪ ಗಂಟೆ  ಸುಖವಾಗಿ ನಿದ್ದೆ ಮಾಡ ಬಹುದು ಅಥವಾ ಕೆಲಸ ಮಾಡ

ಬಹುದು ,ಯಾರೂ ಅಡ್ಡಿ ಬರರು ;ಇದು ಮಾಜಿ ರಾಜ್ಯಪಾಲ ಮತ್ತು ಮುತ್ಸದ್ಧಿ ಸಿ.ಸುಬ್ರಹ್ಮಣ್ಯಂ ಅವರ ನುಡಿಗಳು.ರಾಷ್ಟ್ರಪತಿ

ಆಳ್ವಿಕೆ ಇಲ್ಲದಿದ್ದರೆ ಅವರೊಂದು

ಉತ್ಸವ ಮೂರ್ತಿ.ವಯಸ್ಸು ಆಗಿ ನಿವೃತ್ತರಾದ ರಾಜಕಾರಿಣಿಗಳಿಗೆ ಪುನರ್ವಸತಿ ತಾಣ.ಆದರೂ ಕೆಲವರು ಈ ಹುದ್ದೆಗೆ ತಮ್ಮ

ಅವಿವೇಚನೆಯಿಂದ ಕೆಟ್ಟ ಹೆಸರು ತಂದಿದ್ದಾರೆ.ಉದಾ ಶ್ರೀ ಜಿ ದಿ ತಪಾಸೆ,.ಶ್ರೀ ರಾಮ ಲಾಲ್,ಶ್ರೀ ಬೂಟಾ ಸಿಂಗ್, ರೋಮೇಶ್


ಭಂಡಾರಿ  ಹಂಸ ರಾಜ ಭಾರದ್ವಾಜ್ ಹೆಸರಿಸ ಬಹುದಾದ ಕೆಲವರು.
ತಮ್ಮ ಸಂವಿಧಾನ ಭದ್ಧತೆ ನಿಸ್ಪಕ್ಷಪಾತ ಮತ್ತ್ತು ಮಾನವೀಯ ಗುಣಗಳಿಂದ ಈ ಹುದ್ದೆಯ ಘನತೆ ಹೆಚ್ಚಿಸಿ ಎಲ್ಲರಿಂದಲೂ ಸೈ


ಎನಿಸಿ ಕೊಂದವರೂ ಹಲವರಿದ್ದಾರೆ.ಶ್ರೀ ಸಿ.ಸುಬ್ರಹ್ಮಣ್ಯಂ ,ಪಿ ಸಿ.ಅಲೆಕ್ಷಾನ್ದರ್, ಧರ್ಮ ವೀರ ,ಬಿ ಕೆ ನೆಹರು  ಟಿ ಏನ್

ಚತುವೇದಿ ಈ ವರ್ಗಕ್ಕೆ ಸೇರಿದವರು.
                                            C s

ಇವರಲ್ಲಿ ಸಿ ಸುಬ್ರಮಣ್ಯಮ್  ಅವ ರು  ಒಬ್ಬ ಭಾರತ ರತ್ನ. ಸ್ವಾತಂತ್ರ ಹೋರಾಟಗಾರ,ಹಳೆ ಮದ್ರಾಸ್ ರಾಜ್ಯದಲ್ಲಿ

ಮಂತ್ರಿ,ಕೇಂದ್ರದಲ್ಲಿ  ಕೃಷಿ,ಅರ್ಥ,ಮತ್ತು ರಕ್ಷಣೆ ಯಂತ ಭಾರೀ ಖಾತೆಗಳನ್ನು ಯಶಶ್ವಿಯಾಗಿ ನಿರ್ವಹಿಸಿದ ಮುತ್ಸದ್ದಿ. ಇವರನ್ನು

 ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಯುತ್ತಾರೆ.ಕೃಷಿ ವಿಜ್ಞಾನಿ ಎಂ ಎಸ ಸ್ವಾಮಿನಾಥನ್ ಅವರ ಬೆಂಬಲ

ದೊಂದಿಗೆ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಸಾಧಿಸಿ

ದೇಶವು ಆಹಾರ ಸ್ವಾವಲಂಬನೆ ಸಾದಿಸುವಂತೆ ಮಾಡಿದವರು.ಅಲ್ಲದೆ ಶ್ರೀ ವರ್ಗಿಸ್ ಕುರಿಯನ್ ಅವರಿಗೆ ಪ್ರೋತ್ಸಾಹ ವಿತ್ತು

ಆಪರೇಷನ್ ಫ್ಲಡ್ ಮೂಲಕ ಕ್ಷೀರ ಕ್ರಾಂತಿಗೆ ಬೆನ್ನೆಲುಬಾವದವರು.ಸ್ವಯಂ ಸಂವಿಧಾನ ರಚನಾ ಸಭೆಯ ಅಂಗವಾಗಿದ್ದ

ಹಿರಿಯರು.

ವಿಪಿ ಸಿಂಗ್ ಪ್ರಧಾನಿಯಾಗಿದ್ದಾಗ ಮದ್ರಾಸಿನಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದ ಇವರನ್ನು ವಿನಂತಿಸಿ ಮಹಾರಾಷ್ಟ್ರ ರಾಜ್ಯದ

ರಾಜ್ಯ ಪಾಲರನ್ನಾಗಿ ಮಾಡಿದರು.ದಂತ ಗೋಪುರದಲ್ಲಿ ಸುಮ್ಮನೆ ಕುಳಿತು ಕೊಳ್ಳುವ ಪ್ರವೃತ್ತಿ ಇವರದಲ್ಲ.ರಾಜ ಭವನ ದ

ದುಂದು ವೆಚ್ಚಗಳಿಗೆ ಕಡಿವಾಣ ಹಾಕಿದರು.ರಾಜ ಭವನವನ್ನು ಜನರಿಗೆ ತೆರೆದಿಟ್ಟರು.ಅಲ್ಲಿ ಸಮಾಜ ಸೇವಾ ಸಂಸ್ತೆಗಳು

ಸಭೆಗಳನ್ನು ನಡೆಸಲು ಅನುವು ಮಾಡಿ ಕೊಟ್ಟರು.ವಿಶ್ವ ವಿದ್ಯಾಲಯಗಳ ಕುಲಾಧಿಪತಿಯಾಗಿ  ಅವುಗಳ ಆಗು ಹೋಗುಗಳಲ್ಲಿ

 ವಿಶೇಷ ಆಸಕ್ತಿ ವಹಿಸಿದರು.ರಾಜ್ಯಪಾಲರನ್ನು ಹಿಸ್

ಎಕ್ಷೆಲ್ಲನ್ಸಿ ಎಂದು ಸಂಬ್ಹೊದಿಸುವುದನ್ನು ನಿಲ್ಲಿಸ ಪ್ರಯತ್ನಿಸಿದರು.ತಾವು ಸಂಚರಿಸುವ ದಾರಿಯಲ್ಲಿ ಟ್ರಾಫಿಕ್ ನಿಲುಗಡೆ ಮಾಡಿ

ಜನ ಸಾಮಾನ್ಯರಿಗೆ ತೊಂದರೆ ಮಾಡದಂತೆ ಆದೇಶ ನೀಡಿದರು.ಒಟ್ಟಿನಲ್ಲಿ ಇವರು ಜನರ ರಾಜ್ಯಪಾಲ ಎಂದು ಹೆಸರು

ಗಳಿಸಿದರು.ಮುಂಬೈ ನಗರದ ತ್ಯಾಜ್ಯ ವಿಲೇವಾರಿ ಯಲ್ಲಿ ಆವಿಷ್ಕಾರ ತರಲು ಪ್ರಯತ್ನ ನಡೆಸಿದರು .

ಗೋವಾ ದಲ್ಲಿ ವಿಜ್ಞಾನ ಕಾಂಗ್ರೆಸ್ ನಡೆಯಿತು .ಪ್ರಧಾನಿ ನರಸಿಂಹ ರಾಯರು ಮುಖ್ಯ ಅತಿಥಿ.ರಾಜ್ಯಪಾಲ ರಾದುದರಿಂದ

ಇವರೂ ಉಪಸ್ತಿತ .ಕಾರ್ಯಕ್ರಮ ನಂತರ ವಿಶ್ರಮಿಸಲು ರಾಜಭವನಕ್ಕೆ ತೆರಳಲು ಅನುವಾದ ಇವರನ್ನು ವಿಜ್ಞಾನಿಗಳು ಚಹಾ

ಕೂಟ ಕ್ಕೆ ಬರಲು ಒತ್ತಾಯಿಸಿದರು.ಆ ಕೂಟ ದಲ್ಲಿ ಅನೌಪಚಾರಿಕವಾಗಿ ಮಾತ ನಾದುತ್ತ  ಸುಬ್ರಹ್ಮಣ್ಯಂ ಪ್ರಧಾನಿಯವರ

ಸಮಯ ಮೌಲ್ಯ ಯುತವಾದುದು.ಅವರು ಸಣ್ಣ ಪುಟ್ಟ ಉಧ್ಘಾಟನೆ ,ಚಿಲ್ಲರೆ ಕಾರ್ಯಗಳಿಗೆ ಸಮಯ ವ್ಯಯಿಸದೇ ರಾಷ್ಟ್ರ ದ

ಪ್ರಮುಖ ಸಮಸ್ಯೆಗಳ

ತ್ತ ಗಮನ ಹರಿಸ ಬೇಕೆಂದು ಹೇಳಿದರು.ಇದು ಒಂದು ಆಫ್ ದಿ ರೆಕಾರ್ಡ್ ಹೇಳಿಕೆ .ಇದನ್ನು ಅಲ್ಲಿದ್ದ ಒಬ್ಬ ಪತ್ರಕರ್ತ ರಾಜ್ಯ

ಪಾಲರಿಂದ

ಪ್ರಧಾನಿಗಳ ಕಾರ್ಯ ವೈಖರಿಯ ಟೀಕೆ.ಎಂದು ದೊಡ್ಡದಾಗಿ ಪ್ರಕಟಿಸಿದರು.ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗ.

ಇದರಿಂದ ಮನನೊಂದು ಸುಬ್ರಹ್ಮಣ್ಯಂ ರಾಜೀನಾಮೆ ನೀಡಿದರು.ಪ್ರಧಾನಿಯಾಗಲಿ ರಾಷ್ಟ್ರಪತಿಗಳಾಗಲೀ ಅವರನ್ನು

ಹಿಂತೆಗೆಯುವಂತೆ ಕೇಳಲಿಲ್ಲ.

ಖ್ಯಾತ ನ್ಯಾಯವಾದಿ ಸಂವಿದಾನ ತಜ್ಞ ನಾನಿ ಪಾಲ್ಕಿವಾಲ ಹೀಗೆ ಪ್ರತಿಕ್ರಿಯೆ ನೀಡಿದರು,' ಶ್ರೀ ಸುಬ್ರಹ್ಮಣ್ಯಂ ಅವರ

ರಾಜೀನಾಮೆ ಅನಾವಶ್ಯಕ ವಾಗಿದ್ದರೆ ಅದನ್ನು ಒಪ್ಪಿ ಕೊಂಡ ಸರಕಾರ ದ ಕ್ರಮ ಬಂಡ  ತನದ ಪರಮಾವಧಿ.ಮಹಾರಾಷ್ಟ್ರದ

ಜನತೆ ಸುಬ್ರಹ್ಮಣ್ಯಂ ಅವರ ನಾಯಕತ್ವ ,ದೂರ ದೃಷ್ಟಿ ,ಮಾರ್ಗದರ್ಶನ ಮತ್ತು ಜನಸಾಮಾನ್ಯರ ಏಳಿಗೆಗೆ ಇದ್ದ ಬದ್ಧತೆ ಯನ್ನು


 ಮರೆಯಲಾರರು.'ಇವರ ಜೀವನ ಚರಿತ್ರೆ  'ಹ್ಯಾಂಡ್ ಆಫ್ ಡೆಸ್ಟಿನಿ '  ಮೂರು  ಸಂಪುಟಗಲ್ಲಿ ಭಾರತೀಯ ವಿದ್ಯಾಭವನ

 ಪ್ರಕಟಿಸಿದೆ.ಓದ ಬೇಕಾದ ಪುಸ್ತಕ.

ಬುಧವಾರ, ಏಪ್ರಿಲ್ 3, 2013

ಮೂತ್ರದ ಕಲ್ಲುಗಳು


ಇತ್ತೀಚಿಗೆ ಮೂತ್ರಾಂಗ ಕಲ್ಲುಗಳಿಂದ ಬಳಲುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.ಈ ರೋಗವು ಅಸಹನೀಯ ನೋವು ಉಂಟು
ಮಾಡುವುದಲ್ಲದೆ ಮೂತ್ರ ಪಿಂಡದ ವಿನಾಶಕ್ಕೂ ಕಾರಣವಾಗ ಬಹುದು.
                                 stone
                               stone2
                              stone3
ಬಹಳ ಮಂದಿಗೆ ಶರೀರದಲ್ಲಿ ಕಿಡ್ನಿ ಅಥವಾ ಮೂತ್ರ ಪಿಂಡ ಇರುವ ಜಾಗದ ಬಗ್ಗೆ ತಪ್ಪು ಕಲ್ಪನೆಗಳಿವೆ.ಕೆಲವರು  ವೃಷಣಗಳನ್ನೇ ಕಿಡ್ನಿ

ಎಂದು ತಿಳಿದುಕೊಂಡಿದ್ದಾರೆ.ಮೇಲಿನ ಒಂದು ಮತ್ತು ಎರಡನೇ ಚಿತ್ರದಿಂದ ಮೂತ್ರಪಿಂಡ (ಕಿಡ್ನಿ) ಶರೀರದಲ್ಲಿ ಇರುವ ಜಾಗ

ಯಾವುದೆಂದು  ತಿಳಿಯ ಬಹುದು .

ರೋಗ ಲಕ್ಷಣಗಳು.
ಮೂತ್ರಾಂಗ ಕಲ್ಲುಗಳು  ತೀವ್ರತರ ನೋವು ಉಂಟುಮಾಡುತ್ತವೆ. ಈ ನೋವು ಬೆನ್ನಿನ ಪಾರ್ಶ್ವದ ಮೇಲ್ಬಾಗದಿಂದ ,ಹೊಟ್ಟೆಯ 
ಬದಿ,ಮತ್ತು ಕೆಳಗೆ ವ್ರುಶಣದ ವರೆಗೆ ಬರಬಹುದು.
                          images
ಕಲ್ಲಿಗೆ ಕಾರಣಗಳು.
೧ ಸಾಕಷ್ಟು ನೀರು ಸೇವಿಸದಿರುವುದು

೨.ಉಪ್ಪಿನ ಅಂಶ ಅಧಿಕ ಸೇವನೆ

೩.ಆಗಾಗ್ಗೆ ವಾಹನ ಯಾತ್ರೆ  ಮಾಡುವುದು.ಪ್ರಯಾಣ ನಂತರ ಮೂತ್ರ ಹಳದಿಯಾಗುವುದಿಲ್ಲವೇ. ನಮ್ಮ ಶರೀರದಿಂದ  ನೀರು

ಆವಿಯಾಗಿ ಮೂತ್ರ ಹೆಚ್ಚು  ಸಾಂದ್ರಿತ ವಾಗುವುದು.

೪. ಫ್ಯಾನ್ ಹಾಕಿ ಮಲಗುವುದು ,ಸೊಳ್ಳೆ ಮತ್ತು  ಸೆಖೆ ತಡೆಯಲು ಫ್ಯಾನ್ ಹಾಕಿ ಮಲಗುವುದರಿಂದಲೂ ಶರೀರದ  ನೀರಿನ ಅಂಶ

ಆವಿಯಾಗುವುದು .

೫.ಅದಿಕ  ಸಸಾರ ಜನಕ (ಪ್ರೋಟೀನ್) ಸೇವನೆ.ಮುಖ್ಯವಾಗಿ ಮಾಂಸಾಹಾರ.

ಪರೀಕ್ಷೆ

ಹೊಟ್ಟೆಯ  ಅಲ್ಟ್ರಾಸೌಂಡ್ ಸ್ಕಾನ್ ಮಾಡಿಸಿ ಕಲ್ಲು ಪತ್ತೆ ಹಚ್ಚ ಬಹುದು.

ಚಿಕಿತ್ಸೆ.
ನೋವಿಗೆ ನೋವಿನ ಮಾತ್ರೆ ಮತ್ತು ಇಂಜೆಕ್ಷನ್  ಕೊಡುತ್ತಾರೆ
ನೀರು ಜಾಸ್ತಿ ಕುಡಿಯುವುದು.ದಿನಕ್ಕೆ ಕನಿಸ್ಟ ೨ ಲೀಟರ್ ನೀರು ಕುಡಿಯಬೇಕು.
೭ಮಿ.ಮಿ ಗಿಂತ ಸಣ್ಣ ಕಲ್ಲು ಔಷಧಿ ಯಿಂದ ಹೋಗ ಬಹುದು .ದೊಡ್ಡ ಕಲ್ಲುಗಳನ್ನು ಲಿತೋತ್ರಿಪ್ಸಿ ,ಎಂದರೆ ಆಪರೇಷನ್ ಇಲ್ಲದೆ 
ಹುಡಿಮಾಡಿ ತೆಗೆಯುವುದು,ಆಪರೇಷನ್ ,ಮೂತ್ರನಾಳದ ಮೂಲಕ ಟ್ಯೂಬ್ ಹಾಕಿ ತೆಗೆಯುವುದು ಇತ್ಯಾದಿ ವಿಧಾನಗಳಿವೆ .

ನೋವಿನಿಂದ  ಬಹಳ ವಾನ್ತಿಯಾದರೆ ಮಾತ್ರ ಡ್ರಿಪ್ ಹಾಕುತ್ತಾರೆ.ಉಳಿದಂತೆ ಡ್ರಿಪ್ ಹಾಕಿ ಕಲ್ಲು ತೆಗೆಯುವುದು ವಿವಾದಾಸ್ಪದ.

ಬಾಲಂಗೋಚಿ.:  ಹಿಂದೆ ರೇಶನ್ ಅಕ್ಕಿಯಲ್ಲಿ  ತೆಗೆದಸ್ಟು ಮುಗಿಯದ ಕಲ್ಲುಗಳಿರುತ್ತಿದ್ದವು.ಅದನ್ನು ತಿಂದರೂ ಯಾರಿಗೂ ಕಲ್ಲಿನ

ಉಪದ್ರ ಇರಲಿಲ್ಲ .ಈಗ  ಡಿಸ್ಟೋನ್  ಅಕ್ಕಿ .ಆದರೂ ಕಲ್ಲು .ನಾವು ಶಿಲಾ (ಕಲ್ಲು) ಯುಗಕ್ಕೆ ಹೋಗುತ್ತಿದ್ದೆವೆಯೇ?


(ಅಕ್ಕಿಯ ಕಲ್ಲಿಗೂ ಮೂತ್ರದ ಕಲ್ಲಿಗೂ ಸಂಬಂಧ ಇಲ್ಲ.)

ಪಂಜೆ ಮಂಗೇಶರಾಯರು

೨೦ ನೆ ಶತಮಾನದಲ್ಲಿ ಎಲ್ಲ ಅಡೆತಡೆಗಳ ನಡುವೆಯೂ ಸಮೃದ್ದ ಹಾಗೂ ವೈವಿಧ್ಯ ಮಯ ಸಾಹಿತ್ಯ ಸೃಷ್ಟಿ ಮಾಡಿದವರು
ಪಂಜೆಯವರು.ಬಾಲಸಾಹಿತ್ಯ ಸಣ್ಣ ಕತೆ ಕವಿತೆ ಲಲಿತ ಪ್ರಬಂಧ ಸಂಶೋಧನಾ ಸಾಹಿತ್ಯ ಎಲ್ಲ ವಿಭಾಗಗಳಲ್ಲಿ ಕೈಯಾಡಿಸಿದವರು.ಕನ್ನಡದಲ್ಲಿ ಸಣ್ಣ ಕಥೆಗಳ ಜನಕ ಎಂಬ ಕೀರ್ತಿಯೂ ಅವರಿಗಿದೆ.ಈ ವಿಚಾರದಲ್ಲಿ ತಮಗೂ ಪಂಜೆಯವರಿಗೂ ಆದ ಸಂಭಾಷಣೆಯನ್ನು ಮಾಸ್ತಿಯವರು ಒಂದು ಕಡೆ ಹೇಳಿದ್ದಾರೆ.ಕವಿಶಿಷ್ಯ ಎಂಬ ಕಾವ್ಯನಾಮ ಇಟ್ಟುಕೊಂಡುದು ಅವರಲ್ಲಿದ್ದ ವಿನಯದ ದ್ಯೋತಕ.
 
ರಾಷ್ಟ್ರಕವಿ ಕುವೆಂಪು ಪಂಜೆಯವರ ಬಗ್ಗೆ ಬರೆದ  ಕವನ  ಹೀಗಿದೆ
 
ಹಾಲು ಸಕ್ಕರೆ ಸೇರಿ ನೀವಾದಿರಾಚಾರ್ಯ
ನಡೆಯ ಮಡಿಯಲಿ ನುಡಿಯ ಸವಿಯಲ್ಲಿ ,ನಿಮ್ಮ ಬಗೆ
ಹಸುಳೆ ನಗೆ;ನಿಮ್ಮ ಕೆಳೆಯೊಲುಮೆ ಹಗೆತನಕೆ ಹಗೆ
ಕಪ್ಪುರಕೆ ಕಿಡಿ ಮತ್ತೆ ಸತ್ಯಕ್ಕೆ ಸೌಂದರ್ಯ
ಸಂಗಮಿಸಿದಂತೆ ರಂಜಿಸಿದೆ ಜೀವನ ಸೂರ್ಯ
ನಿಮ್ಮದೆಮ್ಮೆಯ ನುಡಿಯ ಗುಡಿಗೆ ಮಂಗಳ ಕಾಂತಿ
ಮತ್ತೆ ರಸಕಾರ್ಯಗಳಿಗುಪಮೆ ;ವೀಣಾತೂರ್ಯ!
ಕಚ್ಚಿದರೆ ಕಬ್ಬಾಗಿ ,ಹಿಂಡಿದರೆ ಜೇನಾಗಿ
ನಿಮ್ಮುತ್ತಮಿಕೆಯ ಮೆರೆದಿರಯ್ಯ;ಚಪ್ಪಾಳೆ
ಮುಗುದಾರವನಿಕ್ಕಿ ನಡೆಯಿಸಿದರದು  ಬಾಳೆ
ಹಿರಿಯ ಸಿರಿಚೇತನಕೆ ಕೀರ್ತಿಲೋಭಕೆ ಬಾಗಿ
ಬಾಲ್ಬಂಡಿ ನೊಗಕೆ ಹೆಗಲಿತ್ತವರು ನೀವಲ್ಲ
ತೇರ್ಮಿಣಿಯ ಸೆಳೆದಿರಲ್ಲದೆ ಮತ್ತೆ ಮಣಿದಿಲ್ಲ.
 
೧೯೭೪ರಲ್ಲಿ ಪಂಜೆ ಶತಮಾನೋತ್ಸವ ಮಂಗಳೂರಿನಲ್ಲಿ ವಿಜೃಂಭಣೆ ಯಿಂದ ನಡೆಯಿತು.ಏರ್ಯ ಲಕ್ಷ್ಮಿನಾರಾಯಣ ಆಳ್ವ ,ಎಸ ವಿ ಪರಮೇಶ್ವರ ಭಟ್ಟ,ಕೀಕಾನ ರಾಮಚಂದ್ರ ರ ಹಿರಿತನದಲ್ಲಿ ಕನ್ನಡ ಸಾಹಿತ್ಯ ದಿಗ್ಗಜಗಳಾದ ಮಾಸ್ತಿ.ವಿ.ಸೀ.ರಾಜರತ್ನಂ ,ನಾಗೇ ಗೌಡ ಮುಂತಾದವರು ಉತ್ಸಾಹ ದಿಂದ ಪಾಲ್ಗೊಂಡಿದ್ದರು.ಪಂಜೆಯವರ ಸಮಗ್ರ ಬರಹ ಗಳ ಮೂರು ಸಂಪುಟಗಳಗಳನ್ನ್ನೂ ತೆಂಕಣಗಾಳಿ ಎಂಬ ಸ್ಮರಣ ಸಂಚಿಕೆ ಹೊರ ತಂದಿದ್ದರು.ಪಂಜೆ ಸಾಹಿತ್ಯದ ಬಗ್ಗೆ ವಿಚಾರ ಸಂಕಿರಣಗಳು ಇದ್ದವು. ನಾಗರ ಹಾವೇ ಪದ್ಯವನ್ನು ಆಗ ಆಳುತ್ತಿದ್ದ ಬ್ರಿಟಿಷರನ್ನು ಉದ್ದೇಶಿಸಿ ಬರೆದಿರಬಹುದೆಂದು ಒಬ್ಬರು (ಸ್ವಲ್ಪ ಉತ್ಪೇಕ್ಷೆ ಎನಿಸುತ್ತದೆ.) ಅಭಿಪ್ರಾಯ ಮಂಡಿಸಿದ್ದರು. ಅವರ ಮಗ  ರಾಮ ರಾಯರು ಈ
ಹಾಡನ್ನು ಅಭಿನಯ ಪೂರ್ವಕ ಪ್ರಸ್ತುತ ಪಡಿಸಿದ್ದು ಮನ ಮುಟ್ಟುವಂತಿತ್ತು.
 
ಅವರ ಅಡಿನಾ ಮರಿ ಕವನ
 
ಆಡಿನಾ ಮರೀ ,ಆಡ ಬಾರಲೆ!
ಒಡ ಬೇಡಲೆ ನೋಡಿ ನನ್ನನು!
ಅರಳಿ ಎಲೆಯನೂ ,ಹಲಸಿನೆಲೆಯನೂ,
ಹುರುಳಿ ಕಡಲೆಯಾ,ಕಲಸಿ ಕೊಡುವೆನು .
ಮಾತನಾಡದೇ ,ನನ್ನ ನೋಡದೆ ,
ಏತಕ್ಹೋಗುವೆ ಆಡಿನಾ ಮರಿ.

ಪಾಣಿಪತದ ಮೂರನೆಯಾ ಯುಧ್ಧ ಎಂಬ ಯಕ್ಷಗಾನ ಪ್ರಸಂಗದ ಕೊನೆಯ ನಾಲ್ಕು ಪ್ಯಾರಾಗಳು ಹೀಗಿವೆ
ನೆತ್ತರ ಮೂಲಕ ಧರ್ಮವನು-ಹಾ
ಬಿತ್ತರಿಸುವ ದುಷ್ಕರ್ಮವನು
ಎತ್ತಲು ಮುಂದಕೆ ಸಲ್ಲದು ಎಂಬೀ
ಉತ್ತಮ ಬೋಧವ ತಂದವಗೆ-

ಬಲವಂತರು ತಮ್ಮಯ ಬಲದೆ ದು
ರ್ಬಲರನು ಕಾಳಗದಲಿ ಕೊಲದೆ,
ಒಲಿದವರಾತ್ಮೊನ್ನತಿಯನು ಗಳಿ
ಸಲು ಬೇಕೆನ್ನುತ ಸಾರುವಗೆ-
ಹಿಂದು,ಮುಸಲ್ಮಾನ ,ಸುನ್ನಿ,ಶೇಕ್,ಜೈನ,
ಬಂದ ಫಾರಸಿ ,ಕ್ರಿಶ್ಚನ,ಸೀಖ್,
ಇಂದಾ ಭಾರತ ವರ್ಷದ ನಡೆಯಲಿ
ಒಂದಾಗಿರಿಸುವ ಮಹಿಮನಿಗೆ
ಸನ್ನುತ ಜನತೆ ಪ್ರಮುಖವೆಂದು-ರಾ
ಷ್ಟೋನ್ನತಿಯೇ ಇಹಸುಖವೆಂದು ,
ಇನ್ನೀ ಮಂತ್ರವನೆಲ್ಲರು ಪಠಿಸಲಿ
ಎನ್ನುತ ಉಪದೇಶಿಸಿದವಗೆ-
ಅವರ ತೆಂಕಣ ಗಾಳಿ ,ಹುತ್ತರಿ ಹಾಡು ಬಹಳ ಜನಪ್ರಿಯ .ಹುತ್ತರಿ ಹಾಡಂತೂ ಕೊಡಗರ ನಾಡ ಗೀತೆಯೆಂದೆ ಹೇಳಬಹುದು. 
ಪಂಜೆಯವರ ಹಾಸ್ಯ ಪ್ರಜ್ಞೆ 

ಅವರ ಹಾಸ್ಯ ಪ್ರಜ್ಞೆ ಪ್ರಸಿದ್ಧವಾದುದುದು.ಅವರ ಪ್ರಬಂಧ ಮತ್ತು ಕಥೆಗಳಲ್ಲಿ ತಿಳಿ ಹಾಸ್ಯದ ಮೆರುಗು ಕಾಣ ಬಹುದು.ಡಿ ವಿ ಜಿ ಯವರು ಈ ಮಗ್ಗುಲನ್ನು ಚೆನ್ನಾಗಿ ಚಿತ್ರಿಸಿದ್ದಾರೆ."ಒಮ್ಮೆ ಕೆಲಸದ ಮೇಲೆ ಮೈಸೂರಿಗೆ ಹೋಗಿದ್ದ  ಪಂಜೆಯವರನ್ನು ಪರಿಚಯದವರು ಒಬ್ಬರು  ಏನು ಬರೋಣವಾಯಿತು ಎಂದು ಕೇಳಿದ್ದಕ್ಕೆ ಪಂಜೆಯವರು ಒಂದು ಚೇಂಜಿಗೆ ಎನ್ನುತಾರೆ .ಅದಕ್ಕೆ ಅವರು ಶ್ರೀಮತಿಯವರನ್ನು ಕರಕೊಂಡು ಬರಲಿಲ್ಲವೇ ಎಂದು ವಿಚಾರಿಸುತ್ತಾರೆ.  ಇಲ್ಲ ನಾನು ಹೇಳಲಿಲ್ಲವೇ ಬಂದದ್ದು ಚೇ೦ಜಿಗಾಗಿ  ಎನ್ನುತ್ತಾರೆ ಪಂಜೆ.
ಇನ್ನೊಮ್ಮೆ ಬಾಲ ಸಾಹಿತ್ಯ ವಟಾರದಲ್ಲಿ ಉಲ್ಲಾಳ ಮಂಗೇಶ ರಾಯರು,ಉಗ್ರಾಣ ಮಂಗೇಶ ರಾಯರು ಮತ್ತು ತನ್ನನ್ನು ತೋರಿಸುತ್ತಾ ನೋಡಿ ಎಷ್ಟು ಮಂಗಗಳು ,ಇದರಿಂದಲೇ ಮಂಗಳೂರು ಎಂಬ ಹೆಸರು ಎಂದು ನಗೆಯಾಡುತ್ತಾರೆ.
ಇನ್ನೊಮ್ಮೆ ವಿದ್ವಾನ್ ಮುಳಿಯ ತಿಮ್ಮಪ್ಪಯ್ಯನವರನ್ನು ಪರಿಚಯಿಸುತ್ತಾ ಇವರೇ ಮುಳಿಯ ತಿಮ್ಮಪ್ಪಯ್ಯ ಮುಳಿಯದ ತಿಮ್ಮಪ್ಪಯ ಎಂದರು."