ಬೆಂಬಲಿಗರು

ಗುರುವಾರ, ಸೆಪ್ಟೆಂಬರ್ 19, 2019

ಲೈಬ್ರರಿಯನ್ನೂ ಹೋಟೆಲ್ ಮಾಣಿಯೂ

ಚಿಕ್ಕಂದಿನಲ್ಲಿ  ನನಗೆ ಎರಡು  ಉದ್ಯೋಗಿಗಳ ಬಗ್ಗೆ ಅಸೂಯೆ .ಒಂದು ಹೋಟೆಲ್ ಮಾಣಿ

.ಹೋಟೆಲ್ನಲ್ಲಿ  ಗಮಗಮಿಸುವ ನೀರುಳ್ಳಿ ಬಜೆ ಗೋಳಿಬಜೆ ನಮಗೆ ಗಗನ ಕುಸುಮ .ಏಕೆಂದರೆ

ಕೈಯಲ್ಲಿ ಕಾಸಿಲ್ಲ ,ಇದ್ದರೂ ನಮ್ಮ ಅರ್ಥಿಕ ಸ್ಥಿತಿಗೆ ಒಂದು ಫುಲ್ ಪ್ಲೇಟ್ ಸಿಗಲಾರದು ,ಅರ್ಧ

ಪ್ಲೇಟ್ ಅಂತ  ಕೊಡುವುದಿಲ್ಲ. ಹೋಟೆಲ್ ಮಾಣಿ ಗಾದರೋ  ಉಳಿದ ನೀರುಳ್ಳಿ ಮತ್ತು ಗೋಳಿಬಜೆ

ತಿನ್ನುವ ಭಾಗ್ಯಇದೆಯಲ್ಲ .ದೊಡ್ಡವನಾದಾಗ ಹೋಟೆಲ್ ಕೆಲಸಕ್ಕೆ ಸೇರಬೇಕು .


      ಇನ್ನೊಂದು  ನಮ್ಮ ಪಂಚಾಯತ್ ಲೈಬ್ರರಿ ನೋಡಿಕೊಳ್ಳುತ್ತಿದ್ದ ಸೆಕ್ರೆಟರಿ .ಆಗಿನ್ನೂ

ಲೈಬ್ರರಿಯನ್  ಹುದ್ದೆ ಇರಲಿಲ್ಲ .ವಾಚನಾಲಯದಲ್ಲಿ ಒಳ್ಳೆಯ ಕತೆ ಕಾದಂಬರಿ ಪುಸ್ತಕಗಳು

ಇದ್ದವು .ಕಾರಂತ,ಕುವೆಂಪು ,ರಾವ್ ಬಹಾದ್ದೂರ್ ,ಕಟ್ಟಿಮನಿ  ಅವರ ಕೃತಿಗಳಲ್ಲದೆ  ನರಸಿಂಹಯ್ಯ

ಅವರ  ರೋಚಕ ಪತ್ತೇದಾರಿ ಕಾದಂಬರಿಗಳನ್ನು  ಮೊದಲು ಓದಿದ್ದೇ ಅಲ್ಲಿ .ಆದರೆ ಒಮ್ಮೆಗೆ  ಎರಡೇ

ಪುಸ್ತಕ ಕೊಡುತ್ತಿದ್ದರು .ಅದು ಎರಡು ಮೂರು ದಿನದಲ್ಲಿ ಮುಗಿದು ಮುಂದಿನ ಪುಸ್ತಕಕ್ಕೆ ಒಂದು

ವಾರ  ಕಾಯಬೇಕಿತ್ತು .ಏಕೆಂದರೆ hಹಲವು ಜವಾಬ್ದಾರಿ ಹೊತ್ತ  ಸೆಕ್ರೆಟರಿ ಪುಸ್ತಕ ವಿತರಣೆಗೆ ಒಂದು

ದಿನ ನಿಗದಿ ಮಾಡಿದ್ದರು . ಹಲವು ಬಾರಿ ಆ ದಿನವೂ ಅವರು ರಜೆ ಮೇಲೆ ಇದ್ದರೆ ನಮ್ಮ ನಿರಾಸೆ

ಹೇಳತೀರದು .ಆದುದರಿಂದ  ಇಂತಹ ಲೈಬ್ರರಿ ಯ ಮೇಲ್ವಿಚಾರಕ ಕೆಲಸಕ್ಕೆ ಸೇರಬೇಕು ,ಅಂದರೆ

ಎಷ್ಟು ಪುಸ್ತಕ ಬೇಕಾದರೂ ಆದ ಬಹುದು ಎಂಬ ಯೋಚನೆ ಆಗಾಗ ಬರುತ್ತಿತ್ತು.

                      ಈಗ ನಮ್ಮಅರ್ಥಿಕ  ಸ್ಥಿತಿ ಸುದಾರಿಸಿದೆ. ನೀರುಳ್ಳಿ ಬಜೆ ಗೋಳಿಬಜೆ ಆಸೆ ಕಮ್ಮಿ ಯಾಗಿದೆ .

ಪುಸ್ತಕ ಓದುವ ಅಸೆ ಹಾಗೇ ಇದೆ.  ಬೇಕಾದ ಹೊಸ ಕೃತಿಗಳು ಆನ್ಲೈನ್ನಲ್ಲಿ ಸಿಗುತ್ತವೆ . ಹಳೆಯ ಕೆಲವು

ಹೊತ್ತಿಗೆಗಳು  ಅಂಗಡಿಯಲ್ಲ್ಲಿ ಯಲ್ಲಿ  ಸಿಗುತ್ತಿಲ್ಲ ,ಲೈಬ್ರರಿಗಳಲ್ಲೂ .






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ