ಬೆಂಬಲಿಗರು

ಶುಕ್ರವಾರ, ಸೆಪ್ಟೆಂಬರ್ 27, 2019

ಮಂಜು ಮತ್ತು ಟೊಪ್ಪಿ

ಚಳಿಗಾಲ ಆರಂಭವಾಗಿದೆ . ಮುಂಜಾನೆ ಮಂಜು ದಟ್ಟೈಸಿ  ಇರುತ್ತದೆ . ಹವೆಯ

ಉಷ್ಣತೆ  ಕಡಿಮೆಯಾದಾಗ  ವಾತಾವರಣದ ನೀರಾವಿ  ಸಾಂದ್ರಿಕೃತ ಗೊಂಡು ಉಂಟಾಗುವುದೇ

ಮಂಜು .ಮೇಲಿನಿಂದ ಭಾರಗೊಂಡು ಕೆಳಗೆ ಬರುವ ಮಂಜು ಹನಿಗಳು ತಮ್ಮೊಡನೆ  ವಾತಾವರಣದ

ಧೂಳು ಮತ್ತು ಇತರ ತೇಲಾಡುವಕಲ್ಮಶ ಗಳನ್ನೂ  ಸೇರಿಸಿ ಕೊಂಡಿರುತ್ತವೆ .ಜನಮೇಜಯನ

ಸರ್ಪಯಜ್ಞ ದಲ್ಲಿ  ತಕ್ಷಕನೊಡನೆ ಇಂದ್ರ ಕೆಳಗೆ ಬಂದಂತೆ .

   ಈ ಮಂಜಿನ ಹನಿಗಳಲ್ಲಿ  ಇರುವ ಕಲ್ಮಶಗಳು  ಕೆಮ್ಮು ದಮ್ಮು ಉಂಟು ಮಾಡಬಹುದು .ಇದರಿಂದ

ಪಾರಾಗಲು ಜನರು ತಲೆಗೆ ಹ್ಯಾಟ್ ಅಥವಾ ಟೊಪ್ಪಿಗೆ  ಧರಿಸಿ ನಡೆಯುವರು .ಆದರೆ ಉಸಿರಿನ

ಮೂಲಕ  ಒಳ ಸೇರುವ  ರೋಗ ಕಾರಕ ಗಳನ್ನ  ಇದರಿಂದ ತಡೆಗಟ್ಟಲು ಆಗದು . ಮುಖಕ್ಕೆ  ಮಾಸ್ಕ

ಧರಿಸಿ  ಹೊರ ಹೋಗುವುದು  ಉತ್ತಮ .

    ಉಸಿರ ಮೂಲಕ   ಶರೀರದ ಒಳ ಹೋಗು ವುದ  ತಲೆಯ ಮೇಲಿನ ಟೊಪ್ಪಿಗೆ ತಡೆಯದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ