ಬೆಂಬಲಿಗರು

ಗುರುವಾರ, ಸೆಪ್ಟೆಂಬರ್ 19, 2019

ಆಹಾರ ಬಗ್ಗೆ ಕೆಲವು ನಂಬಿಕೆಗಳು ಸತ್ಯಾಸತ್ಯತೆ

ಮೊನ್ನೆ ಓರ್ವ ತಾಯಿ ಬಂದಿದ್ದರು .ತನಗೆ ಸಣ್ಣ ಮಗು ಇದೆ ,ಮೊಲೆ ಹಾಲು  ಸಾಕಾಗುವುದಿಲ್ಲ ,

ಅದಕ್ಕೆ ಹೆಚ್ಚು ಹಾಲು ಸೇವಿಸಿ  ಕಫ  ಆಗಿದೆ , ಔಷದಿ ಕೊಡಿ ಎಂದರು.

ನಾನೆಂದೆ " ನೋಡಿ ಅಮ್ಮ ಹಾಲು ಆಗಲು ಹೆಚ್ಚು ಸಸಾರಜನಕ (ಪ್ರೋಟೀನ್) ಇರುವ ದ್ವಿದಳ ಧಾನ್ಯ

ಸೇವಿಸಿ .ರಾಸುಗಳಿಗೆ ನಾವು ಪ್ರೋಟೀನ್ ಯುಕ್ತ ಹಿಂಡಿ ಹಾಕುವೆವು .ಮತ್ತೆ ಹಾಲು ಕುಡಿದು ಕಫ

ಆದದ್ದೂ ಇರಲಿಕ್ಕಿಲ್ಲ .ಗಾಳಿಯಲ್ಲಿ ಬಂದ ಸೋಂಕಿನಿಂದ ಕಫ ಆಗಿರ ಬೇಕು ."

ಬಹಳ ಮಂದಿ ಕಫ ಬಿಳಿ ಇದೆ .ಅದ್ದರಿಂದ  ಹಾಲು ಕುಡಿದರೆ ಜಾಸ್ತಿ ಆಗುವುದು ಎಂದು ಭಾವಿಸುತ್ತಾರೆ .
           
           ಹಲವರು  ಡಾಕ್ಟರ್ ನಿನ್ನೆ  ಮದುವೆಯಲ್ಲಿ  ಕೋಲ್ಡ್ ಕುಡಿದು ಶೀತ ಆಗಿದೆ ,ಕೆಮ್ಮು ಆಗಿದೆ

ಎನ್ನುವರು .ಸಮಾರಂಭಕ್ಕೆ ಬಂದ ವರಲ್ಲಿ  ಶೀತ ಆದವರು ಇರುವರು .ಅವರ ಉಸಿರಲ್ಲಿ  ವೈರಸ್

ಇರಬಹುದು ,ಅದರಿಂದ  ನಮಗೆ ಹರಡುವ ಸಾಧ್ಯತೆ ಜಾಸ್ತಿ. ತಿನ್ನುವ ಅಥವಾ ಕುಡಿಯುವ 

ಆಹಾರದಿಂದ  ಹೊಟ್ಟೆ ನೋವು ಭೇದಿ ಬರಬಹುದು .ಅಮೇರಿಕಾ ದ  ಸೋಂಕು ನಿವಾರಕ ಕೇಂದ್ರ

(CDC) ಸಲಹೆ ಪ್ರಕಾರ  ಗಂಟಲು ನೋವು ಕಿರಿ ಕಿರಿ ಗೆ  ಐಸ್ ತುಂಡು ಚೀಪ ಬಹುದು .

                       ಇನ್ನು ಕೆಲವರು  ಕಾಯಿಲೆ ಬಂದಾಗ  ಎಳನೀರು ಬಿಸಿ ಮಾಡಿ ಕುಡಿಯುವರು .ಇದು

ಅನವಶ್ಯಕ .ಅಲ್ಲದೆ ಅದರಲ್ಲ್ಲಿ ಏನಾದರೂ ಪೌಷ್ಟಿಕ ಅಂಶ ಇದ್ದರೆ ನಾಶವಾಗುವುದು . ಏಳ

ನೀರಿನಲ್ಲಿ  ನಾವು ತಿಳಿದು ಕೊಂಡಂತೆ ಭಾರೀ ಪೌಷ್ಟಿಕ ದಾಯಕ ಅಂಶಗಳು ಇಲ್ಲ .ಅದು ಶುದ್ಧ

ದ್ರವಾಹಾರ .ಅದೇ ರೀತಿ ಶೀತ ಆಗಿದೆ ಎಂದು ಮಜ್ಜಿಗೆ ಬಿಸಿ ಮಾಡಿ ಉಪಯೋಗಿಸುವರು  ಇದ್ದಾರೆ

.ಇದೂ ಸರಿಯಲ್ಲ .

                       ಬಹಳ ಮಂದಿ  ನಾನು  ಅನ್ನಾನೆ ಊಟ ಮಾಡುವುದು , ರಾಗಿ ಮುದ್ದೇನೆ ತಿನ್ನುವುದು

ಅದರಿಂದ ಆರೋಗ್ಯವಾಗಿದ್ದೇನೆ ಎನ್ನುವರು .ಆಹಾರ ಯಾವಾಗಲು ಸಮ ತೂಕ ಆಗಿರಬೇಕು .

ಅದರಲ್ಲಿ ಏಕದಳ ,ಮತ್ತು ದ್ವಿದಳ ಧಾನ್ಯಗಳು , ಹಣ್ಣು ,ತರಕಾರಿ ಅವಶ್ಯ .ಬರೀ ಅಕ್ಕಿ ಅಥವಾ ರಾಗಿ ,

ಗೋಧಿ  ತಿನ್ದಿಗಳಿ೦ತ  ಇಡ್ಲಿ ಉದ್ದಿನ ದೋಸೆ ಹೆಚ್ಚು ಪೌಷ್ಟಿಕ . ಕಷ್ಟ ಪಟ್ಟು ಬ್ರೆಡ್ ತಿನ್ನುವುದಕ್ಕಿಂತ

ರೋಗಿಗಳು ಮತ್ತು ಇತರರು ಇಡ್ಲಿ ತಿನ್ನುವುದು ಉತ್ತಮ .

                                     ಇನ್ನು  ಬಾಣಂತಿ ಯರು ಸಮತೂಕದ ಆಹಾರ ತಿನ್ನುವುದು ಹೆಚ್ಚು ಅವಶ್ಯಕ

ಅವರಿಗೆ ಕೇವಲ ಹಾಲು ತುಪ್ಪ ತಿನಿಸುವರು .ಇದರಿಂದ ತೂಕ ಹೆಚ್ಚುವುದು .ದ್ವಿದಳ ಧಾನ್ಯ

ಮೀನು ,ಮಾಂಸ ಹಣ್ಣುತರಕಾರಿ ಉತ್ತಮ .

                      ಹಣ್ಣು ತಿಂದರೆ ಕಫ ಆಗದು .ಕಫ ಇದ್ದದ್ದು ಹೆಚ್ಚು ಆಗುವುದಿಲ್ಲ .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ