ಬೆಂಬಲಿಗರು

ಗುರುವಾರ, ಏಪ್ರಿಲ್ 18, 2013

ಎಸ್ ಜಾನಕಿ

                                      
            
ಇತ್ತೀಚೆಗೆ ಸರಕಾರದವರು ಕೊಡಮಾಡಿದ ಪದ್ಮ ಭೂಷಣ ಪ್ರಸಸ್ತಿ ತಿರಸ್ಕರಿಸಿ ಸುದ್ದಿ ಮಾಡಿದ ಖ್ಯಾತ ಗಾಯಕಿ ಎಸ್ ಜಾನಕಿ. ಭಾರತದ
ಹಲವು  ಭಾಷೆಗಳಲ್ಲಿ ೨೨೦೦೦ ಕ್ಕೂ ಅಧಿಕ ಹಾಡುಗಳನ್ನು ಧ್ವನಿ ಮುದ್ರಿಸಿದ ಸಾಧನೆ .ಇವರು ಮೂಲತಹ ತೆಲುಗರು.ವಿಶೇಷವೆಂದರೆ 
ದಕ್ಷಿಣ ಭಾರತದ ಬಹುತೇಕ ಹಿನ್ನಲೆ ಗಾಯಕರು ತೆಲುಗರು. ಉದಾ ಪಿ ಬಿ ಶ್ರೀನಿವಾಸ್ ,ಪಿ ಸುಶೀಲ ,ಮಾನೋ. ಎಸ ಪಿ
ಬಾಲಸುಬ್ರಹ್ಮಣ್ಯಂ,ಘಂಟಸಾಲ .ತ್ಯಾಗರಾಜ ರೆ ತೆಲುಗರಲ್ಲವೇ? ಇವರೆಲ್ಲರ ಕನ್ನಡ ಹಾಡುಗಳನ್ನು ಕೇಳಿದಾಗ  ಕನ್ನಡಿಗರಲ್ಲವೆಂದು
ಯಾರೂ ಹೇಳರು.
ಪ್ರಶಸ್ತಿ ತಿರಸ್ಕರಿದ್ದುದು ಅಹಕಾರದಿಂದ ಅಲ್ಲ .ಬೇಸರದಿಂದ .ದಕ್ಷಿಣ ಭಾರತದ ಕಲಾವಿದರಿಗೆ ದೇಶಿಯ ಮಟ್ಟದಲ್ಲಿ ಅವಗಣನೆ ಸಾಮಾನ್ಯ.

ಅದಕ್ಕೆ ಪ್ರತಿಭಟನೆ. ಪ್ರಸಿದ್ಧ ಗಾಯಕ ಜೇಸುದಾಸ್ ಅವರ ಮಕ್ಕಳು ತಮ್ಮ ತಂದೆ ಹಾಡಿದ ಗೀತೆಗಳನ್ನು ಗಾನ ಮೇಳಗಳಲ್ಲಿ
ಹಾಡುವುದಕ್ಕೆ ಮುನ್ನ ಅನುಮತಿ ಪಡೆಯ ಬೇಕೆಂಬ ವರಾತೆ ತೆಗೆದಿದ್ದರು.. ಜಾನಕಿಯಮ್ಮ ತಮ್ಮ ಹಾಡುಗಳನ್ನು ಯಾರು ಎಲ್ಲಿ
ಬೇಕಾದರೂ ಹಾಡಬಹುದು .ಅದರಿಂದ ನನ್ನ ಹಾಡುಗಳ ಜನಪ್ರಿಯತೆ ಹೆಚ್ಚುವುದಲ್ಲವೇ ಎಂದರು.
ಎಸ್ ಜಾನಕಿ ಯವರ ವೆಬ್ ಸೈಟ್ ಇದೆ . www.sjanaki.net
                                      ಇದರಲ್ಲಿ ತಮ್ಮ ಆಯ್ದ ಹಾಡುಗಳನ್ನು ಹಾಕಿದ್ದಾರೆ.ರಸಿಕರು ಕೇಳಬಹುದು.ಇವರ ವಾಯ್ಸ್ 
ಮಾಡ್ಯೂಲೆಶನ್ ಅದ್ಭುತ .ಮಕ್ಕಳಂತೆ ಅಜ್ಜಿಯಂತೆ ಹಾಡಬಲ್ಲರು.ವಿನಯ ಶೀಲೆ
ಹೇಮಾವತಿ ಕನ್ನಡ ಚಿತ್ರದಲ್ಲಿ ಖ್ಯಾತ ವಯೊಲಿನ್ ಪಟು ಎಂ ಎಸ್ ಗೋಪಾಲಕೃಷ್ಣನ್ ರ ಪಕ್ಕ ವಾದ್ಯದಲ್ಲಿ ಹಾಡಿದ ಶಿವ ಶಿವ ಎನ್ನದ
ನಾಲಿಗೆ ಹಾಡು ಕೇಳಿ.
www.youtube.com/watch?v=rGLLevDBwDU
www.4shared.com/mp3/A922kgBB/Siva_Siva_ennada.htm
ಇನ್ನೊಂದು ಜನಪ್ರಿಯ ಗೀತೆ ಭಾರತ ಭೂಶಿರ -ಉಪಾಸನೆ ಚಿತ್ರದ್ದು

www.youtube.com/watch?v=57Ibj4fD4uQ

ಇದಲ್ಲದೆ ಜನಪ್ರಿಯ ತಮಿಳ್ ಗೀತೆ ಸಿಂಗಾರ ವೇಲನೆ ಬಾ ಹಾಡಿಗೆ ಖ್ಯಾತ  ನಾದಸ್ವರ ವಿದ್ವಾನ್ ಕಾರೈಕುರುಚ್ಚಿ

ಅರುಣಾಚಲಂ  ಪಕ್ಕ ವಾದ್ಯ

ಒದಗಿಸಿದ್ದರೆ ,ಕನ್ನಡದ ಸನಾದಿ ಅಪ್ಪಣ್ಣ ಹಾಡಿಗೆ ಶೆಹನಾಯಿ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ನುಡಿದ್ದಾರೆ.

www.youtube.com/watch?v=oDRgGpEwSYw

www.youtube.com/watch?v=mPEXKFcbLsM

ಅಪ್ ಲೋಡರ್ ಗಳಿಗೆ ವಂದಿಸುತ ಹಾಡುಗಳನ್ನು ಆನಂದಿಸಿರಿ.

ಎಸ್ ಜಾನಕಿಯವರು ಕೆಲವು ಶಾಸ್ತ್ರಿಯ ಸಂಗೀತದ ದ್ವನಿ ಸುರುಳಿ ಗಳನ್ನೂ ಹೊರತಂದಿದ್ದಾರೆ. ಇವರ ವೆಬ್ ಸೈಟ್ ನಲ್ಲಿ ವಿವರ ಗಳಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ