ಬೆಂಬಲಿಗರು

ಬುಧವಾರ, ಏಪ್ರಿಲ್ 7, 2021

shramajeevi sathyanna

   ಶ್ರಮ ಜೀವಿ ಸತ್ಯಣ್ಣ 


 


 ೧೯೮೬ ರಿಂದ ೧೯೮೯ ವರೆಗೆ ಮೂರು  ವರ್ಷ ರೈಲ್ವೆ  ವೈದ್ಯಾಧಿಕಾರಿ ಆಗಿ ಪುತ್ತೂರಿನಲ್ಲಿ (ರೈಲ್ವೆ ಭಾಷೆಯಲ್ಲಿ ಕಬಕ ಪುತ್ತೂರು )ಇದ್ದೆನು . ಹಾರಾಡಿ ರೈಲ್ವೆ ಕಾಲೋನಿ ಯಲ್ಲಿ ಮನೆ .ನಮ್ಮ ಮನೆಗೆ ಹೊಳ್ಳರ ಅಂಗಡಿಯಿಂದ ದಿನ ಪತ್ರಿಕೆ ಬರುತ್ತಿತ್ತು .ಹಾಕುತ್ತಿದ್ದವರು ಸತ್ಯನಾರಾಯಣ ಭಟ್ ಅಥವಾ  ಸತ್ಯಣ್ಣ . 

  ಮುಂದೆ ನಾನು ದೇಶ ವಿದೇಶ ಸುತ್ತಿ (ಕೊಂಕಣ ಸುತ್ತಿ ಮೈಲಾರಕ್ಕೆ ಬಂದ  ಹಾಗೆ )

ಪುತ್ತೂರಿಗೆ ೨೦೧೦ ರಲ್ಲಿ ಬಂದು ನೆಲೆಸಿದೆನು . ಒಂದು ದಿನ ಅದೇ ಸೈಕಲ್  ಸತ್ಯಣ್ಣ ಹಾಲಿನ ಕ್ಯಾನ್  ತುಂಬಿಕೊಂಡು ರಸ್ತೆಯಲ್ಲಿ ಹೋಗುವುದು ಕಂಡೆ .ಅವರು  ಡಾ ಎಂ ಎಸ್  ಭಟ್ ಅವರ ಹಾಲಿನ ಡೈರಿಯಿಂದ ಹಾಲು ಸರಬರಾಜು ಮಾಡುವ ವೃತ್ತಿಗೆ ಸೇರಿದ್ದರು .ಬಿಸಿಲು ಮಳೆಯೆನ್ನದೆ  ದಿನದಲ್ಲಿ ಎರಡು ಹೊತ್ತು ಹಾಲು ತುಂಬಿದ ಸೈಕಲ್ ತುಳಿದು (ಮತ್ತು ದೂಡಿ )ಪ್ರಾಮಾಣಿಕ ಜೀವನ ಸಾಗಿಸುವ ಶ್ರಮ ಜೀವನ .. ದಾರಿಯಲ್ಲಿ ಕಂಡಾಗ ಒಂದು ಮುಗುಳ್ನಗು .. 

ಅವರನ್ನು ಕಂಡು ಒಂದು ಭಾವ ಚಿತ್ರ ತೆಗೆದುಕೊಳ್ಳಲು ಇಂದು ಡೈರಿಗೆ ಹೋಗಿ ಬಂದು ಬರೆಯುತ್ತಿದ್ದೇನೆ . ಕಾಯಕವೇ ಕೈಲಾಸ ಎಂದು ಬದುಕುವ ಇಂಥವರನ್ನು ಕಂಡರೆ ನನಗೆ ಪ್ರೀತಿ ಮತ್ತು ಗೌರವ .

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ