ಬೆಂಬಲಿಗರು

ಭಾನುವಾರ, ಏಪ್ರಿಲ್ 4, 2021

ಜನ ಸ್ನೇಹಿ ಪರಿಚಾರಕ ವಾಸುದೇವ ಕಿಣಿ

   ಜನ ಸ್ನೇಹಿ ಪರಿಚಾರಕ ವಾಸುದೇವ ಕಿಣಿ 




ಇವರು  ಸದಾ ನಗು ಮೊಗದ ಶ್ರೀ ವಾಸುದೇವ ಕಿಣಿ . ನಾನು ಸಣ್ಣವನಿದ್ದಾಗ ಶಂಕರ ವಿಠಲ್ ಬಸ್ ನಲ್ಲಿ  ಚೆಕಿಂಗ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು . ಯಾವಾಗಲೂ ಹಸನ್ಮುಖ .ಹಳ್ಳಿಯ ಪ್ರಯಾಣಿಕರಿಗೆ ,ವೃದ್ಧರಿಗೆ ಮತ್ತು ವಿದ್ಯಾರ್ಥಿಗಳಿಗೆ ಸ್ನೇಹ ಹಸ್ತ . 

ಮುಂದೆ ಇವರು  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯಲ್ಲಿ  ಸಾರಿಗೆ ನಿಯಂತ್ರಕ ಆಗಿ ಗಿ ಸೇರಿ ಪುತ್ತೂರು ಉಪ್ಪಿನಂಗಡಿ ಗಳಲ್ಲಿ ಸೇವೆ ಸಲ್ಲಿಸಿದರು.ಸೇವಾ ದಿನಗಳಲ್ಲಿ ಕುರ್ಚಿಯಲ್ಲಿ ಆಸೀನರಾಗಿ  ಇದ್ದದ್ದು ಕಡಿಮೆ .ಅವರ ಕಣ್ಣು   ತಮ್ಮ ಊರ ಬಸ್ ಎಲ್ಲಿ ಎಂದು ಗದ್ದಲದಲ್ಲಿ ಹುಡುಕುವ ಹಳ್ಳಿಯ ಅವಿದ್ಯಾವಂತ ಪ್ರಯಾಣಿಕರ ಕಡೆಗೆ . ಕೂಡಲೇ ಅವರಲ್ಲಿ ಹೋಗಿ ನಿಮಗೆ ಎಲ್ಲಿ ಹೋಗ ಬೇಕು ಎಂದು ವಿಚಾರಿಸಿ ಸಹಾಯ ಮಾಡುವರು .ಕೆಲವೊಮ್ಮೆ ಅವರ ಗಂಟು ಮೂಟೆ ಸಾಗಿಸಲೂ . ಸಿಬ್ಬಂದಿ ಜತೆಯೂ ನಗುಮುಖದ ವ್ಯವಹಾರ .

ಈಗ ಪುತ್ತೂರಿನಲ್ಲಿ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ .ಅವರು ಆಸ್ಪತ್ರೆಗೆ ಬಂದಾಗ ನಾನು ಸಿಬ್ಬಂದಿಗೆ ಅವರು ಸಲ್ಲಿಸಿದ ಪ್ರಾಮಾಣಿಕ ಸೇವೆ ಬಗ್ಗೆ ಹೇಳುವೆನು ;ಮತ್ತು  ಅಂತವರನ್ನು ಸ್ಮರಿಸ ಬೇಕಾದುದು ನಮ್ಮ ಕರ್ತವ್ಯ . 

ಈಗ  ಪುತ್ತೂರು ಬಸ್ ನಿಲ್ದಾಣದಲ್ಲಿ  ಧ್ವನಿ ವರ್ಧಕ ಮೂಲಕ ಪ್ರಯಾಣಿಕರಿಗೆ ಸೂಚನೆ ಕೊಡುವರು ."ಪುತ್ತೂರಿನಿಂದ   ಮಾಣಿ  ಬಿ ಸಿ ರಸ್ತೆ ಮೂಲಕ ಸ್ಟೇಟ್ ಬ್ಯಾಂಕ್ ಗೆ  ಹೋಗುವ ಬಸ್ ಹತ್ತನೇ ಪ್ಲಾಟ್ಫಾರ್ಮ್ ನಲ್ಲಿ ನಿಂತಿದೆ " ಕೆಲವೊಮ್ಮೆ' ಪುತ್ತೂರಿನಿಂದ ಮಂಗಳೂರಿಗೆ ಮಾರ್ಗದ ಮೂಲಕ  ಹೋಗುವ ಬಸ್ ' ಎಂದು ಹೇಳುವರು .

ಹಳ್ಳಿಯವರು  ಕುಡ್ಲಗು  ಪೋಪುನ ಬಸ್ ಓಲುಂಡು  , ಬಿ ಸಿ ರೋಡ್ ಗು ಬಸ್ ಉಂಡಾ ಎಂದು ಕೇಳಿಕೊಂಡು  ಹುಡುಕುವರು . ಈಗಲೂ ಒಳ್ಳೆಯ ಟಿ ಸಿ ಗಳು ಇದ್ದಾರೆ . ಆದರೆ ಒಂದು ಊರ ಜನರಿಗೆ ಅವರಿಗೆ ತಿಳಿಯುವ ಭಾಷೆಯಲ್ಲಿ ತಿಳಿಸುವ ವ್ಯವಸ್ಥೆ ಇನ್ನೂ ಇಲ್ಲವೆಂದೇ ಹೇಳಬೇಕು .

ಜನರಲ್ ಮ್ಯಾನೇಜರ್ ಆಗಲಿ  ಕಚೇರಿ ಗುಡಿಸುವನಾಗಲಿ ತನ್ನ ಕಾರ್ಯವನ್ನು ಆತ್ಮಾರ್ಥತೆಯಿಂದ ಮಾಡಿದರೆ ಸಮಾಜ ಗುರುತಿಸಿ ಗೌರವಿಸ ಬೇಕು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ