ಬೆಂಬಲಿಗರು

ಗುರುವಾರ, ಏಪ್ರಿಲ್ 8, 2021

ಹಿರಿಯರ ಆಶೀರ್ವಾದ

                     ಹಿರಿಯರ ಆಶೀರ್ವಾದ 

ಇಂದು ನನಗೊಂದು  ಅಚ್ಚರಿ ಕಾದಿತ್ತು .ಅಂಚೆಯಲ್ಲಿ ಒಂದು ಓಲೆ .ಈಗ ಕಾಗದ ಬರೆಯುವವರೇ ಕಡಿಮೆ . ಆದರೆ 'ಯಿಂದ' ಕಲಂ ನಲ್ಲಿ ವಕೀಲರ ಹೆಸರು ಇತ್ತು .ನನಗೆ ಸ್ವಲ್ಪ ಗಾಬರಿ ಆಯಿತು .ನನ್ನ ಪತ್ನಿ ನನ್ನನ್ನು ಮೊದಲೇ ಎಚ್ಚರಿಸಿದ್ದರು ."ನಿಮಗೆ ಯಾಕೆ ಇದೆಲ್ಲಾ ಬರೆಯುವ ಉಸಾಬರಿ ,ಈಗ ಎಲ್ಲರೂ ತುಂಬಾ ಸೆನ್ಸಿಟಿವ್ "  ಯಾರಾದರೂ ವಕೀಲರ ನೋಟಿಸ್ ಕಳುಹಿಸಿದ್ದಾರೋ ?

ಧೈರ್ಯದಲ್ಲಿ ತೆರೆದು ಓದಿದರೆ ಅದು ಜಿಲ್ಲೆಯ ಹಿರಿಯ ವಕೀಲ ಪುಂಡಿಕಾಯ್ ನಾರಾಯಣ ಭಟ್ ಅವರ ಆಶೀರ್ವಾದ ಪೂರ್ವಕ ಪತ್ರ .  ಅವರು ಸಾಹಿತ್ಯ ಸಂಗೀತ ಮತ್ತು ಕಲೆಗಳಲ್ಲಿ ಅಭಿರುಚಿ ಇರುವವರು ಎಂದು ನಾನು ಬಲ್ಲೆ .ಅವರ ಮಗ ಪ್ರಸಿದ್ದ ವೈದ್ಯ ರಾಮರಾಜ್ ಕೂಡಾ . ತಮ್ಮ ಪುಂಡಿಕಾಯ್ ಗಣಪಯ್ಯ ಸಾಹಿತ್ಯ ಮತ್ತು ಇತಿಹಾಸ  ಕ್ಷೇತ್ರದಲ್ಲಿ ಹೆಸರು ಮಾಡಿದವರು .ನನ್ನ ಫೇಸ್ ಬುಕ್ ಬರಹಗಳನ್ನು  ಮೆಚ್ಚಿ ಒಳ್ಳೆಯ ಅಭಿಪ್ರಾಯ ಬರೆದಿದ್ದಾರೆ . ಅವರಿಗೆ ನಾನು ಗೌರವ ಪೂರ್ವಕವಾಗಿ ವಂದಿಸುತ್ತೇನೆ .




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ