ಬೆಂಬಲಿಗರು

ಶುಕ್ರವಾರ, ಏಪ್ರಿಲ್ 16, 2021

ಬೇಂಕುಗಳ ಕಲಸುಮೇಲೋಗರ

 ಬ್ಯಾಂಕುಗಳ ಕಲಸು ಮೇಲೋಗರ 


ಬ್ಯಾಂಕುಗಳ  ವಿಲೀನ ಪರ್ವ ನಡೆಯುತ್ತಿದೆ .ವ್ಯವಹಾರ ದೃಷ್ಟಿಯಿಂದ ಇದು ಸರಿ ಇರಬಹುದು .ಆದರೆ ಎಲ್ಲ ಸಂಸ್ಥೆ ಗಳಿಗೂ ಒಂದು ಆತ್ಮ ಇರುತ್ತದೆ . ಒಬ್ಬನು ಸಿಂಡಿಕೇಟ್ ಬ್ಯಾಂಕ್ ಗೆ  ಕೆಲಸಕ್ಕೆ ಸೇರಿ ಬೆಳೆದು ,ಅದರ ಜತೆ ತಾದಾತ್ಮ್ಯ ಹೊಂದಿದ ಮೇಲೆ ಒಂದು ದಿನ ಬೆಳಿಗ್ಗೆ  ನಿನ್ನ ಅನ್ನದಾತ ಕೆನರಾ ಬೇಂಕ್ ಎಂದರೆ ,ತನಗೆ ಸಂಬಳ ಸಾರಿಗೆ ಮೊದಲಿನಂತೆ ಬಂದರೂ ಅವನ  ಮನಸು ಹೊಂದಿಕೊಳ್ಳಲು ಸಮಯ ಬೇಕು  . ಹಳೇ  ಕೆನರಾ ಬ್ಯಾಂಕ್ ನವರಿಗೆ  ಸಿಂಡಿಕೇಟ್ ನಿಂದ ಬಂದವರು  ಹೊರಗಿನವರು .ಸಿಂಡಿಕೇಟ್ ನವರಿಗೆ  ಇದು ತಮ್ಮ ತವರು ಮನೆ ಅಲ್ಲ ಎಂಬ ಭಾವನೆ . ಮೊದಲೇ  ಬ್ಯಾಂಕುಗಳಲ್ಲಿ ಗ್ರಾಹಕರೊಡನೆ ಇದ್ದ  ವೈಯುಕ್ತಿಕ ಸಂಬಂಧಗಳು  ನಶಿಸುತ್ತಿವೆ . ಅದರ ಮೇಲೆ  ಕ್ಲರ್ಕ್ ಮತ್ತು ಮ್ಯಾನೇಜರ್ ಹುದ್ದೆಗೆ  ಬೇರೆ ರಾಜ್ಯಗಳಿಂದ ಸ್ಥಳೀಯ ಭಾಷೆ ಅರಿಯದ ಸಿಬ್ಬಂದಿ ಹೆಚ್ಚು .(ಇದು ಮೊದಲೂ ಇತ್ತು .ಆದರೆ ಅನುಪಾತ ಈಗ ಬದಲಾಗಿದೆ )

                ದಕ್ಷಿಣ ಕನ್ನಡ ದವರಿಗೆ ಒಂದು ಗುಣ ಇದೆ .ತಾವು ಹೋದಲ್ಲಿ ಭಾಷೆ ಬೇಗ ಕಲಿಯುವರು .ಹಿಂದಿ ಹೇಗೂ ಬರುವದು .ಅದರಿಂದ ನಮ್ಮ ಜಿಲ್ಲೆಯಲ್ಲಿ ಹುಟ್ಟಿಕೊಂಡ ಖಾಸಗಿ ಬ್ಯಾಂಕ್ ಗಳು  ಬೇಗ ಜನಪ್ರಿಯ ಆದವು . 

ಇನ್ನು  ಕೇಂದ್ರ ಸರಕಾರದ ಹಿಂದಿ ಜನಪ್ರಿಯ ಗೊಳಿಸುವ ಪರಿ ಪ್ರಶ್ನಾರ್ಹ . ಕೇಂದ್ರ ಸರಕಾರದ ಎಲ್ಲಾ ಇಲಾಖೆಗಳಲ್ಲಿ ಹಿಂದಿ ಅನುಷ್ಠಾನ ಇಲಾಖೆ ಮತ್ತು ಹೇರಳ ಸಿಬ್ಬಂದಿ ಇರುವರು .ಕಾಲ ಕಾಲಕ್ಕೆ ಒಂದು ಮೀಟಿಂಗ್ ಮಾಡುವುದು ,ತಿಂಡಿ ಕಾಫಿ ಕುಡಿಯುವದು ಮತ್ತು ಒಂದು ರಿಪೋರ್ಟ್ ಬರೆಯುವುದು ಇವರ ಕೆಲಸ .ಆಫೀಸ್ ಬ್ಯಾಂಕ್ ಗಳಲ್ಲಿ ಇಂದಿನ ಹಿಂದಿ ಶಬ್ದ ಎಂದು ಬರೆಯುವುದು . ನೀವು ಒಳ ಹೊಕ್ಕ ಕೂಡಲೇ  ಇಂದಿನ ಶಬ್ದ  बिल्ली means   ಬೆಕ್ಕು  ಎಂದು ಬರೆದಿರುವುದನ್ನು ಓದಿ ಯಾರು ಹಿಂದಿ ಕಲಿಯುವರು ?ಇದರಿಂದ ಹಿಂದಿ ಪ್ರಚಾರ ಮತ್ತು ಉದ್ದಾರ ಆಗದು ,ಜನರಿಗೂ ಉಪಯೋಗ ಶೂನ್ಯ . ಇದರ ಬದಲಿಗೆ ಉತ್ಪಾದಕ ಮತ್ತು ಜನೋಪಯೋಗಿ ನೌಕರಿ ಸೃಷ್ಟಿ ಮಾಡಬಹುದು .                                            ಹಳ್ಳಿಯಿಂದ  ಬಂದ  ತುಳು ,ಕನ್ನಡ ಮಾತ್ರ ಬರುವ ಗ್ರಾಹಕರು ಹೇಗೆ ವ್ಯವಹಾರ ಮಾಡ ಬೇಕು ?ಅವರಿಗೆ ಚಲನ್  ಭರ್ತಿ  ಮಾಡಲು ಹೇಳಿ ಕೊಡುವದು ಯಾರು ?

ನಿಜಕ್ಕೂ ಸರಕಾರಕ್ಕೆ ಜನರ ಕಾಳಜಿ ಇದ್ದರೆ  ಅವರು ಎಲ್ಲಾ ಕೇಂದ್ರ ಸರಕಾರದ ಕಚೇರಿ ಮತ್ತು ಬ್ಯಾಂಕುಗಳಲ್ಲಿ ಸ್ಥಳೀಯ ವ್ಯಾವಹಾರಿಕ ಭಾಷೆಯನ್ನು ಹೊರಗಿನಿಂದ ಬಂದ  ಸಿಬ್ಬಂದಿಗೆ ಕಲಿಸುವ ಅಧಿಕಾರಿ ನೇಮಿಸ ಬೇಕು .ಅಂತೆಯೇ ಕಚೇರಿಗಳಲ್ಲಿ 

ಇಂದಿನ  ಶಬ್ದ  " ಬೇಲೆ  " meaning '' work" ಅಥವಾ " ಒಣಸ್ meaning ಊಟ ಎಂದು ಬರೆಯುವಂತಾಗ ಬೇಕು .

ಮೊನ್ನೆ  ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ಮ್ಯಾನೇಜರ್ ಆಗಿ ನಿವೃತ್ತರಾದ ಹಿರಿಯರು ಒಬ್ಬರು  ಈಗ ಬ್ಯಾಂಕ್ ಗೆ ಹೋದರೆ ನಮ್ಮನ್ನು ಬದಿಗೆ ನಿಲ್ಲಿ ಎಂದು ಗದರಿಸುವ ಸ್ಥಿತಿಗೆ ಬಂದಿದೆ ಎಂದು ಬೇಸರ ಹಂಚಿಕೊಂಡರು .

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ