ಬೆಂಬಲಿಗರು

ಭಾನುವಾರ, ಏಪ್ರಿಲ್ 11, 2021

ಕಂತು ಪಿತ

                      ಕಂತು ಪಿತ 

ಏತರ  ಭಯ ನಿನಗೆ ಕಂತು ಪಿತನ ದಯೆ ಇರಲು 

ಈ ತರಹದ  ದೇವರ ನಾಮ ಕೇಳಿದಾಗ ಎಲ್ಲಾ ಕುತೂಹಲ . ಯಾರು ಈ ಕಂತು ?ವೆಂಕಟಸುಬ್ಬಯ್ಯ ನವರ ನಿಘಂಟಿನಲ್ಲಿ  ಮನ್ಮಥ ನಿಗೆ  ಕಂತು ಎಂದು ಕರೆವರು ಎಂದು ಬರೆದಿರುವರಂತೆ .ಆದರೆ ಈ ಹೆಸರಿನ ಮೂಲ ಏನು ಎಂಬುದು ಸಂಶೋಧನೆಗೆ ಯೋಗ್ಯ ಎಂದು ಹೇಳುವರು . 

ನಮಗೆ  ಸಾಮನ್ಯವಾಗಿ ಕಂತು ಎಂದರೆ ಹಣ ಇಲ್ಲ ,ಕೊಳ್ಳುವ ಅಸೆ ಇದೆ ಎಂಬ  ಪರಿಸ್ಥಿತಿಯಲ್ಲಿ  ಹಂತ ಹಂತವಾಗಿ ಪಾವತಿ ಮಾಡಿ ಕೊಳ್ಳುವ ವ್ಯವಸ್ಥೆ . ಉದಾಹಣೆಗೆ ನಾನು ನನ್ನ ಮೊದಲ ಟಿ ವಿ  ಕೊಂಡದ್ದು ಕಂತಿನಲ್ಲಿ .ಅಂಗಡಿಯವರಿಗೆ ಬಾಕಿ ಹಣವನ್ನು  ಪೋಸ್ಟ್ ಡೇಟೆಡ್ ಚೆಕ್ ಕೊಟ್ಟು ಸಾಮಗ್ರಿ ಮನೆಗೆ ತರುವುದು .ಒಂದು ರೀತಿಯ ಸಾಲವೇ ಅನ್ನಿ . ಕೊಳ್ಳಲು ನಿಜವಾಗಿ ಅರ್ಹತೆ ಇಲ್ಲ ,ಕಂತು ದೇವನ ಕೃಪೆಯಿಂದ ಅದು ಬರುವದು . 

ಅದರಂತೆ  ನಿಜವಾದ ಕಂತು (ಮನ್ಮಥ ) ಒಬ್ಬ ಯುವಕ (ಮತ್ತು ಯುವತಿ ವೈಸ್ ವರ್ಸಾ )ನಿಗೆ  ಯುವತಿಯ ಮೇಲೆ  ಆಸೆ ಹುಟ್ಟಿಸುವನಲ್ಲದೆ ಆಕೆಯ ಸ್ನೇಹ ಸಂಪಾದಿಸಸಲು ಇವನಲ್ಲಿ ಇಲ್ಲದ ಆಕರ್ಷಣೆಯನ್ನು ತುಂಬಿಕೊಳ್ಳಲು ಕಂತಿನಲ್ಲಿ ಕೆಲವು ಚಮತ್ಕಾರಗಳನ್ನು (ಉದಾ ವಾಟ್ಸ್ ಅಪ್ ಆಕರ್ಷಕ  ಸಂದೇಶ ಕಳುಹಿಸುವ )  )ತುಂಬುವನು . 

 ಇ. ಸಾ .ಬೇ .    QED

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ