ಬೆಂಬಲಿಗರು

ಶನಿವಾರ, ಏಪ್ರಿಲ್ 10, 2021

ನಾನು ಮೆಚ್ಚಿದ ಬಾಲಕೃಷ್ಣರು

 ನಾನು ಮೆಚ್ಚಿದ ಬಾಲಕೃಷ್ಣರು 

 

 

ಇವರು ಪುತ್ತೂರಿನಲ್ಲಿ ಆಟೋ ರಿಕ್ಷಾ ಓಡಿಸುವ ಶ್ರೀ ಬಾಲಕೃಷ್ಣ ಅವರು .ನೆಹರೂ ನಗರ ದ ಸ್ಟಾಂಡ್ ಅವರ ಸಾಗಾಟದ ಉಗಮ ಸ್ಥಾನ . ಇವರು ಇಷ್ಟೇ ಆಗಿದ್ದಲ್ಲಿ ನನ್ನ ಗಮನ ಕ್ಕೆ  ಬರುತ್ತಿರಲಿಲ್ಲವೋ ಏನೋ ?

ನಗರ ಬಸ್ ಸ್ಟಾಪ್ ನಿಂದ  ವಿವೇಕಾನಂದ ಕಾಲೇಜ್ ಗೆ ಹೋಗುವ ಮಾರ್ಗದಲ್ಲಿ ಒಂದು ಅಗಲ ಕಿರಿದಾದ ರೈಲ್ವೇ ಮೇಲ್ಸೇತುವೆ ಇದೆ .ಇದು ತಗ್ಗಿನಲ್ಲಿ ಇದ್ದು ಮಳೆ ಬಂದೊಡನೆ ನೀರು ತುಂಬುವುದು .ರಸ್ತೆಯ ಬದಿಯಲ್ಲಿ ನಡೆಯುವ ವಿದ್ಯಾರ್ಥಿಗಳು ಮತ್ತು ನಾಗರೀಕರಿಗೆ  ಕೊಳಕು ನೀರು ಪ್ರೋಕ್ಷಣೆ ಆಗುವುದು . ನೇರು ಕೆಳಗೆ ಹೋಗಲು ಸೇತುವೆಯಲ್ಲಿ ಒಂದು ಸಣ್ಣ ರಂದ್ರ ಮಾಡಿರುವರು .ಆದರೆ ಕಸ ತುಂಬಿ ಆಗಾಗ ಅದು ಬ್ಲಾಕ್ ಆಗುವುದು . ನಮ್ಮ ಬಾಲಕೃಷ್ಣರು ಆಗಾಗ ಅಲ್ಲಿಗೆ ತೆರಳಿ ಕೈಹಾಕಿ ಅದನ್ನು ಸ್ವಚ್ಛ ಮಾಡಿ ನೀರು ಹರಿದು ಹೋಗುವಂತೆ ಮಾಡುವರು .ಇದು ಯಾರ ಹೊಗಳಿಕೆಗೆ ಅವರು ಮಾಡುವುದಲ್ಲ ,ಆತ್ಮ ಸಾಕ್ಷಿಗನುಗುಣವಾಗಿ  ಮಾಡುವರು .

ಇದರೊಡನೆ ಮುಂಜಾನೆ  ರಿಕ್ಷಾ ಸ್ಟಾಂಡ್ ಸುತ್ತ ಮುತ್ತ ಇರುವ ಕಸ ಕಡ್ಡಿ ತಾನೇ ಗುಡಿಸಿ ಬೆಂಕಿ ಹಾಕಿ ಕಾಯುವರು .ಬೆಳಗಾದಾಗ  ಬೀದಿ ದೀಪ ಆರಿಸುವರು .ನಗರ ಸಭೆಯ  ನೀರು ಸರಬರಾಜು ಕೆಲಸದಲ್ಲಿ ಬೋರ್ ವೆಲ್ ಒನ್ ಆಫ್ ಮಾಡುವುದು ,ನೀರಿನ ವಾಲ್ವ್ ನಿರ್ವಹಣೆ ಕೂಡಾ ಮಾಡುವರು .

ಇಂತಹವರೆ ನಿಜವಾದ ನಾಡೋಜರು 




 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ