ಬೆಂಬಲಿಗರು

ಶನಿವಾರ, ಏಪ್ರಿಲ್ 4, 2015

ಬ್ರಾಹ್ಮಣ ನೆಂದರೆ ಯಾರು ?

          ಬ್ರಾಹ್ಮಣ ನೆಂದರೆ ಯಾರು ?
 
ಮಹಾಭಾರತದ ವನ ಪರ್ವದಲ್ಲಿ ಬರುವ ಕತೆ.ಭೀಮನನ್ನು  ಕಾಡಿನಲ್ಲಿ ಶಾಪದಿಂದ 

ಹೆಬ್ಬಾವು  ರೂಪದಲ್ಲಿ ಇರುವ ನಹುಷ ಆಕ್ರಮಿಸಿ ಹಿಡಿದು  ಸುತ್ತಿ ಕೊಳ್ಳುವನು,ಬಲ 

ಭೀಮನಿಗೂ ಅವನಿಂದ ಬಿಡಿಸಿ ಕೊಳ್ಳಲು ಆಗುವುದಿಲ್ಲ .ಆಗ ತಮ್ಮನನ್ನು ಹುಡುಕಿ 

ಕೊಂದು ಬಂದ ಧರ್ಮರಾಯ ನಿಗೆ ತನ್ನ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ 

ಕೊಟ್ಟರೆ ತಮ್ಮನನ್ನು ಬಿಡುವುದಾಗಿ ನಹುಷ ಹೇಳುವನು .

ನಹುಷ : ಯಾರನ್ನು ಬ್ರಾಹ್ಮಣ ಎಂದು ಕರೆಯುತ್ತೇವೆ ?

ಧರ್ಮರಾಯ :ಸತ್ಯವಂತ ,ದಯವಂತ ,ದಾನಶೀಲ ,ಕ್ಷಮೆ  ಮತ್ತು  ಸ್ವಯಂ  ಮನ 

ಹತೋಟಿ ಇರುವವನು ಬ್ರಾಹ್ಮಣ .

ನಹುಷ :ಆದರೆ ಇದು  ಚಾತುರ್ವರ್ಣ ಪದ್ಧತಿ ಗೆ ವಿರುದ್ದವಾಯಿತು .ಈ ಗುಣಗಳು 

 ಶೂದ್ರನಲ್ಲಿಯೂ ಇರ ಬಹುದು ಸದ್ಗುಣಗಳು ಯಾವದೇ  ಜಾತಿಯ ಸೊತ್ತಲ್ಲ .

ಧರ್ಮರಾಯ :ನಿಜ .ಬ್ರಾಹ್ಮಣನಾಗಿ ಹುಟ್ಟಿದರೂ ಸದಾಚಾರ ,ಸದ್ಗುಣ ಇಲ್ಲದಿದ್ದರೆ 

ಅವನು ಶೂದ್ರನೆ .ಅದೇ ಮೇಲೆ ಹೇಳಿದ ಒಳ್ಳೆಯ ಗುಣಗಳನ್ನು ರೂಡಿಸಿ ಕೊಂಡ

ಯಾರೇ ಬ್ರಾಹ್ಮಣ ಎನಿಸಿಕೊಳ್ಳುವನು .




ಭಗವದ್ಗೀತೆ  ಯ ೧೮ ನೆ ಅಧ್ಯಾಯ ದ ೪೨ ನೆ ಶ್ಲೋಕದಲ್ಲಿ   ಇದನ್ನೇ ಹೇಳಲಾಗಿದೆ .
ಶಾಂತ ಪ್ರಕೃತಿ  ಸ್ವಯಂ ಶಾಸನ ,ಸರಳ ಜೀವನ ,ಶುದ್ದಾಂತಃ ಕರಣ .ಕ್ಷಮೆ 
ಪ್ರಾಮಾಣಿಕತೆ ,ಜ್ಞಾನದಾಹ ಮತ್ತು  ಧಾರ್ಮಿಕತೆ ಇದ್ದವನು ಬ್ರಾಹ್ಮಣ .

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ