ಬೆಂಬಲಿಗರು

ಶುಕ್ರವಾರ, ಮೇ 3, 2013

ಬಾಯಾರಿಕೆ

220px-William-Adolphe_Bouguereau_(1825-1905)_-_Thirst_(1886)
thirst
ಈಗ ಬೇಸಿಗೆ. ಎಲ್ಲೆಡೆ ತೀರದ ದಾಹ.ನಮ್ಮ ಶರೀರದಲ್ಲಿ ಉಷ್ಣತೆ ,ರಕ್ತದ ಸಾಂದ್ರತೆಗಳು  ಒಂದು ಪರಿದಿಯೊಳಗೆ ಇರಬೇಕು.  ಅದು

ಹೆಚ್ಚು ಕಮ್ಮಿಯಾದ ಒಡನೆ ದೇಹದಲ್ಲಿ ಇರುವ  ಬ್ಯುಲ್ಟ್ ಇನ್ ಸ್ತೆಬಿಲೈಸರ್ ಕೆಲಸ ಮಾಡುತ್ತವೆ.ಶರೀರದ ಉಷ್ತ್ನತೆ ಹೆಚ್ಚಾದೊಡನೆ

ಚರ್ಮದಲ್ಲಿರುವ ಬೆವರಿನ ಗ್ರಂಥಿಗಳು ಬೆವರನ್ನು ಉತ್ಪಾದಿಸಿ ಹೊರ ಹಾಕುತ್ತವೆ .ಈ ಕ್ರಿಯೆಯಲ್ಲಿ ಚರ್ಮ ತಂಪಾಗಿ  ಉಷ್ಣತೆ
ಕಂಮಿಯಾಗುವಂತೆ ಮಾಡುತ್ತದೆ.

ಆದರೆ ಈ ಕ್ರಿಯೆಯಿಂದ ಶರೀರದ ನೀರಿನ ಅಂಶ ಕಮ್ಮಿಯಾಗಿ ರಕ್ತ ದ ಸಾಂದ್ರತೆ ಹೆಚ್ಚಾಗುವುದು.ಒಡನೆ ಮೆದುಳಿನಲ್ಲಿ ಇರುವ

ಬಾಯಾರಿಕೆ ಕೇಂದ್ರ ಇದನ್ನು ಗುರುತಿಸಿ ನಿರಡಿಕೆ ಉಂಟು ಮಾಡುವುದು.ಅಲ್ಲದೆ ಮೂತ್ರ ಪಿಂಡಗಳು ತಮ್ಮದೇ ವಿಧಾನಗಳಿಂದ

ಮೂತ್ರದ ನೀರಿನ ಅಂಶವನ್ನು ಪುನಃ ಹೀರಿ ರಕ್ತಕ್ಕೆ ಸೇರಿಸಿ ತಮ್ಮ ಪಾಲಿನ ಸೇವೆ ಸಲ್ಲಿಸುತ್ತವೆ.


                ಬೇಸಿಗೆಯಲ್ಲಿ ಮದುವೆ ಸಮಾರಂಭಗಳು ಹೆಚ್ಚು.ಸೆಖೆಯಿಂದ ಬೆವರಿ ರಕ್ತದ ಸಾಂದ್ರತೆ ಹೆಚ್ಚಾಗಿರುತ್ತದೆ.ಇದರ

ಮೇಲೆ ಸಕ್ಕರೆ  ಭರಿತ ಸಿಹಿ ತಿಂಡಿ ,ಪಾಯಸ ,ಉಪ್ಪು  ಅದಿಕ ವಾಗಿರುವ ಹಪ್ಪಳ ,ವ್ಯಂಜನಗಳು ರಕ್ತಕ್ಕೆ ಉಪ್ಪು ಮತ್ತು ಶುಗರ್

ಸೇರಿಸಿ  ಸಾಂದ್ರತೆ ಹೆಚ್ಚಿಸುತ್ತವೆ.ಒಡನೆ ಮೆದುಳಿನ  ನೀರಡಿಕೆ ಕೇಂದ್ರವು (Thirst Center) ಅತೀವ ಬಾಯಾರಿಕೆ ಉಂಟು

ಮಾಡಿ ನೀರು ಸೇವಿಸಲು ಪ್ರಚೋದಿಸುತ್ತವೆ .ಬಹಳ ಮಂದಿ ಔತಣ ಊಟದ ಬೆಳ್ತಿಗೆ ಅನ್ನವನ್ನು ಈ ದಾಹಕ್ಕೆ ಕಾರಣವೆ೦ದು

ವಿನಾಕಾರಣ ದೂಶಿಸುತ್ತಾರೆ.ಅಲ್ಲದೆ ನಿರಡಿಕೆ ನೀಗಲು ನೀರೇ ಉತ್ತಮ.ಸಾಂದ್ರತೆ ಜಾಸ್ತಿ ಇರುವ ಕಬ್ಬಿಣ ಹಾಲು ,ಜ್ಯೂಸ್

ಇತ್ಯಾದಿಗಳು  ರುಚಿಯಾಗಿದ್ದರೂ  ಬಾಯಾರಿಕೆ ಯ ಮೂಲ ಉದ್ದೇಶ ಇಡೇರಿಸುವುದಿಲ್ಲ .(ಎಂದರೆ ರಕ್ತ ದ ಹೆಚ್ಚಿದ ಸಾಂದ್ರತೆಯನ್ನ್ನು

ಪುನ  ಸಂಮಾನ್ಯ ಸ್ತಿತಿಗೆ ತರುವುದು). ಸಿದ್ಧ ತಂಪು ಪಾನೀಯಗಳನ್ನು  (ಪೆಪ್ಸಿ ,ಕೋಲಾ ಇತ್ಯಾದಿ) ದೂರ ವಿರಿಸುವುದೇ ಒಳ್ಳೆಯದು .

ಎಳನೀರು ಅಂಗಡಿಯಿಂದ ಕೊಂಡು  ಕುಡಿಯುವಸ್ಟು  ಒಳ್ಳೆಯ ಅಂಶಗಳೇನೂ ಅದರಲ್ಲಿ ಇಲ್ಲ .ಮನೆಯದೆ ಆದರೆ  ಕುಡಿಯ ಬಹುದು.

ಸಾದಾರಣ ಶುಧ್ಧ ನೀರು ಅತ್ಯುತ್ತಮ .ಮಿನರಲ್ ವಾಟರ್ ಗಳ ಅವಶ್ಯವಿಲ್ಲ.

(ಚಿತ್ರಗಳ ಮೂಲಗಳಿಗೆ ಅಭಾರಿ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ