ಬೆಂಬಲಿಗರು

ಮಂಗಳವಾರ, ಮೇ 21, 2013

ವೇದ ಮೂರ್ತಿ ದಿ . ಅಮೈ ನಾರಾಯಣ ಭಟ್ರು (ಹವ್ಯಕ ಭಾಷೆ )

                                                    
 
ಪುರೋಹಿತರು   ಎಂದರೆ  ಮುಂದೆ  ನಮ್ಮ ಪರವಾಗಿ ನಿಂದು ನಡೆಸಿ ಕೊಡುವವರು ಹೇಳಿ ಅರ್ಥ .ನಮ್ಮ   ಪುರೋಹಿತರು
 
 
ಅಮೈ ಮನೆತನದವರು . ಅದರಲ್ಲೂ  ನನಗೆ  ತಟ್ಟನೆ ನೆನಪಿಗೆ ಬರುವುದು   ನಗು ಮುಖದ  ದಿ.ನಾರಾಯಣ ಭಟ್ರು. ಈ
 
ಪುರೋಹಿತರು ,ವೈದಿಕರು ದೇವ ಸೇವೆ ಮಾಡಿ ಕೊಂಡು ಇರುವ ಕಾರಣ ಅವರಿಗೆ ಶಾಂತ ಮನಸ್ಥಿತಿ ಇರ ಬೇಕು . ಶೀಘ್ರ ಕೋಪಿ
 
ಗಳಾದರೆ  ಅವು ಇನ್ನು ದೇವೆರಿಗೆ ಹತ್ತಿರ ಆಗಿಲ್ಲ ಎಂದು ಅರ್ಥ . ಕೆಲವು ದೇವಲಯಗಳಲ್ಲಿ   ದೂರ್ವಾಸ
 
ರ ಹಾಗೆ ಕೋಪಿಷ್ಟ   ಪೂಜಾರಿಗಳು ಇರುವರು . ದೂರದಿಂದ ಬಂದ  ಭಕ್ತ ಜನನ್ನು ಕಂಡರೆ  ಕೋಪದಲ್ಲಿ ಹರಿ ಹಾಯುವರು .
 
 
ದೇವರ  ಸೇವಿಸುವಗೆ  ಕ್ರೋಧ ತರವೇ ? ಅದಕ್ಕೇ ಅಂತಹ   ದೇವಸ್ಥಾನಕ್ಕೆ  ಪುರೋಹಿತರು ಬಂದ ಕೂಡಲೇ ದೇವರು
 
ಹೊರ ತೆರಳಿ ಅವರು   ಮನೆಗೆ ಹೋದ ಮೇಲೆ ಬರುವರಂತೆ .
 
ನಾರಾಯಣ ಭಟ್ರು ಯಾವಾಗಲೂ ಹಸನ್ಮುಖಿ.  ಬರುವಾಗಲೇ ನಗುವಿನ ತಂಗಾಳಿ ತರುವರು ಅವರ  ಕಂಡು ನಾಯಿ
 
ಬೊಗಳಿದರೆ  ' ಯಾನತ್ತ ನಾಯಿ ಈ ದಾಯೆ ಕೊರೆಪ್ಪುನೆ' ಎಂದು  ಜೋಕ್  ಮಾಡುವರು .  ಆ  ಮೇಲೆ  ಮದುವೆ ಸಾಮಾನು  ಪಟ್ಟಿಯಲ್ಲಿ ಮದುಮಗಳು   ಮದುಮಗನ ಹೆಸರು ಬರೆಯಲು ಬಿಟ್ಟು ಹೋಗಿದೆ ,ಅವರು ಇದ್ದಾರಲ್ಲ  ಎಂದು ನಗುವರು .
 
ಅವರಿಗೆ ನಶ್ಯ ಸೇದುವ ಆಭ್ಯಾಸ ಇತ್ತು.' ಇಂದು ವಿಟ್ಲ ಪೇಟೆಯ ಹೊಡಿ ತೆಗೆದೆ 'ಎಂದು ಹೇಳಿ ಪನ್ ಮಾಡುವರು . ಸರ್ವಿಸ್
 
ಕಾರಿನಲ್ಲಿ   ಉಪ್ಪಿನ ಕಾಯಿ ಹಾಕಿದ ಹಾಂಗೆ ಜನ ಹಾಕುವರು . ಸ್ವಲ್ಪ ಹೊತ್ತು ಕಳೆದಾಗ ಮರಗಟ್ಟಿ ನಮ್ಮ ಕಾಲು  ಯಾವದು ಇನ್ನೊಬ್ಬರದ್ದು ಯಾವದು ಎಂದು ತಿಳಿಯುವುದಿಲ್ಲ . ಒಮ್ಮೆ   ಕಾಲು  ತುರಿಸುತ್ತದೆ ಎಂದು ತುರಿಸಿದ್ದು ಪಕ್ಕದವರ   ಕಾಲು ಆಗಿತ್ತು ಮಹಾರಾಯರೇ  ಎಂದು ನಗೆಯಾಡುವರು .'  
ಇನ್ನು ಅವರ  ಕೆಲವು  ಮಾತುಗಳು ಹವ್ಯಕ ಭಾಷೆಯಲ್ಲಿಯೇ ಬರೆಯುವೆನು
 
'ಕುಡಿವಲೆ ಕಾಪಿಯೋ  ಚಾವೋ ಹೇಳಿ ಕೇಳಿದರೆ ಮಕ್ಕೊಗೆ  ಹೆದರಿಕೆ ಆವುತ್ತು (ಚಾವಿನ ಭಯ)
 
 ಎನಗೆ ಈಗ ಮರವದು ಜಾಸ್ತಿ , ಆನು ಕೂದ  ಮಣೆಯೇ ಮರದ್ದು .(ಪನ್)
 
ಈ ಮದುವೆಲಿ ಅಗ್ನಿ ಶಾಕ್ಷಿಗೆ ಬೇರೆ ಕಿಚ್ಚ್ಚು ಬೇಡ  ಇಷ್ಟು ಒಳ್ಳೆ ಪೊದು ಸಿಕ್ಕಿತ್ತನ್ನೆ ಹೇಳಿ ಕೆಲವರ  ಹೊಟ್ಟೆ ಕಿಚ್ಚು ಇಕ್ಕು ಅದು ಸಾಕು .
 
ಎನ್ನ ಜಡೆಯ ಹಿಂದಂದ (ಅವಕ್ಕೆ ಉದ್ದ ಜಡೆ ಇತ್ತು ) ಕೆಲವು ಹೆಮ್ಮಕ್ಕ ಏನಕ್ಕ ಹೆಂಗಿದ್ದಿ  ಹೇಳಿ ,ಮೋರೆ ನೋಡಿದ
 
 
ಮೇಲೆ ಪೆಚ್ಚಾದ್ದರ  ಸ್ವಾರಸ್ಯವಾಗಿ ಹೇಳುಗು.
 
ಸುಶ್ರಾವ್ಯ ವಾಗಿ  ಮಂತ್ರ  ಹೇಳುವರು.
 
ಅವರು   ಇಂದು ಇಲ್ಲದ್ದರೂ ಅವರ  ಹಸನ್ಮುಖ  ಕಣ್ಣೆದುರು ಇದೆ.
 
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ