ಬೆಂಬಲಿಗರು

ಮಂಗಳವಾರ, ಮೇ 10, 2022

ಅಗಲಿದ ಮಿತ್ರ ಅಮೈ ವಸಂತ ಆಚಾರ್ಯ


 ಪುತ್ತುರಿನಲ್ಲಿ ನನಗೆ ಎಲ್ಲಾ ಸ್ತರದವರು ಮತ್ತು ವಿವಧ ಉದ್ಯೋಗದಲ್ಲಿ ಇರುವ ಮಿತ್ರರು ಇದ್ದಾರೆ . ನಾನು ಅವರೊಡನೆ ಮಾತು ಕತೆಯಿಂದ ಸಂತೋಷ ಪಡುತ್ತೇನೆ .ಅಂತವರಲ್ಲಿ ಒಬ್ಬರು ಮೂರು ತಿಂಗಳುಗಳ ಹಿಂದೆ ನಮ್ಮನ್ನು ಅಗಲಿದ ಶ್ರೀ ವಸಂತ ಆಚಾರ್ಯ .

ಇವರು ನಲುವತ್ತು ವರ್ಷ ಗಳಿಂದ ಅರುಣಾ ಥಿಯೇಟರ್ ಬಳಿ ವಾಚ್ ದುರಸ್ತಿ ಅಂಗಡಿ ನಡೆಸುತ್ತಿದ್ದರು .ಪುತ್ತೂರು ಹಾರಾಡಿ ಯಲ್ಲಿ ಮನೆ.ಮುಂಜಾನೆ  ವಾಕಿಂಗ್  ಹಾರಾಡಿ ಯಿಂದ ಕರ್ಮಳ  ವಿವೇಕಾನಂದ ಕಾಲೇಜ್ ಮೂಲಕ ನಗರಕ್ಕೆ ಬಂದು ಮುಖ್ಯ ರಸ್ತೆ ಯಲ್ಲಿ  ಬೊಳುವಾರು ಮೂಲಕ ವಾಪಾಸು .ನನಗೆ  ಎದುರು ಸಿಕ್ಕು ಒಂದು ನಮಸ್ಕಾರ ಉಭಯ ಕುಶಲೋಪರಿ . ನಾನು ಅವರ ಅಂಗಡಿಗೆ ವಾಚ್ ರಿಪೇರ್ ಇದ್ದರೆ ಅಥವಾ ಎದುರು ರಸ್ತೆಯಲ್ಲಿ ಹೋಗುತ್ತಿದ್ದರೆ ನಗು ಮುಖದ ಅವರ ಮಾತುಗಳು . 

ಇದ್ದಕ್ಕಿಂದ್ದಂತೆ ಹೋಗಿ ಬಿಟ್ಟರು .ನನಗೆ ತಿಳಿದಾಗ ತಿಂಗಳು ಕಳಿದಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ