ಬೆಂಬಲಿಗರು

ಮಂಗಳವಾರ, ಮೇ 24, 2022

"ಧೀ" ಗುಜ್ಜೆ

                                             ದೀವಿ ಹಲಸನ್ನು ಬೆಳೆಯುವುದು ಹೇಗೆ?  

ಇಂದು ಮುಂಜಾನೆ ಮಿತ್ರ ಮಣಿಲಾ ಸುಬ್ಬಣ್ಣ ಶಾಸ್ತ್ರಿಗಳು ಪ್ರೀತಿಯಿಂದ  ದೀಗುಜ್ಜೆ ಮತ್ತು  ಕಬ್ಬು ತಂದು ಕೊಟ್ಟಿದ್ದರು . ಮೊದಲನೆಯದು ಪದಾರ್ಥ ಮಾಡಲು ,ಇನ್ನೊಂದು ನಮ್ಮ ಹಿತ್ತಿಲಲ್ಲಿ ನೆಡಲು.ಅವರು ಆಗಾಗ  ಅವರಲ್ಲಿ ಬೆಳೆದುದನ್ನು  ಹಂಚಿ ಕೊಂಡು ನನ್ನನ್ನು ಚಿರ ಋಣಿ ಯಾಗಿ ಮಾಡಿದ್ದಾರೆ.

ದೀಗುಜ್ಜೆ ಕೊಟ್ಟಾಗ  ನಾನು ಬೇಡ ಎನ್ನುವುದಿಲ್ಲ . ಅದು ಧೀ ಶಕ್ತಿ ಹೆಚ್ಚಿಸುವ ಕಾರಣ ಅದಕ್ಕೆ ಆ ಹೆಸರು ಬಂದಿರಬೇಕು . ಈಗ ನೀವು ಎಲ್ಲಿ ಮದುವೆ  ಇತ್ಯಾದಿ ಸಮಾರಂಭ ಗಳಿಗೆ ಹೋದರೂ ಅದರದ್ದೇ ಸಂಭಾರು . ಮನೆಗಳಲ್ಲಿ ಸಂಜೆ ಮಳೆ ಬರುವಾಗ  ತಿನ್ನಲು ಅದರ ಪೋಡಿ ಮತ್ತು  ಚಿಪ್ಸ್ . ಎಳೆ ದೀಗುಜ್ಜೆ  ಪಲ್ಯ ಕೂಡ ತಿನ್ನಲು ರುಚಿ . 

ದೀಗುಜ್ಜೆ ಸಾಂಭಾರು ಮಿಕ್ಕರೆ ಮರುದಿನ  ಮುಂಜಾನೆ  ಆರಿಸಿ ತಿನ್ನಲು  ಬಹಳ ರುಚಿ . 

ಮಾರುತಿ ಪಿತನಿಗೂ ದೀಗುಜ್ಜೆ ಗೂ ನಂಟು ಇರುವುದರಿಂದ ಕೆಲವರು ಇದರ ಬಳಿ ಹೋಗರು.ಕಾರಣ  ಇದರಲ್ಲಿ ಬಟಾಟೆಯಂತೆ  ಶರ್ಕರ ಪಿಸ್ಟ ಜಾಸ್ತಿ ಇದ್ದು ನಮ್ಮ ಕರುಳ  ಬಾಕ್ಟೀರಿಯಾ ಗಳು ಅದನ್ನು ಒಡೆದು  ಅನಿಲ ಉತ್ಪತ್ತಿ ಮಾಡುವವು. ನಾವು ಇಂಗು ,ಓಮ ಇತ್ಯಾದಿ ಸೇರಿಸಿದರೆ  ಪಚನ ಸ್ರಾವಗಳು ಅಧಿಕ ಉತ್ಪತ್ತಿ ಆಗಿ  ಬಾಕ್ಟೀರಿಯಾ ತಲುಪುವ ಮೊದಲೇ ಅವು ಜೀರ್ಣ ಆಗಿರುವವು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ