ಬೆಂಬಲಿಗರು

ಶನಿವಾರ, ಮೇ 21, 2022

ಆದರ್ಶ ಸಂಶೋಧಕ ಡಾ ಶ್ರೀನಿವಾಸ ಹಾವನೂರ್

                                                          Kamat's Potpourri: Amma's Column - Honoring Havnur Mama (b. 1928)

"ಗ್ರಂಥ ಪಾಲಕರ ಕರ್ತವ್ಯ  ಪುಸ್ತಕಗಳನ್ನು ಜೋಪಾನ ಮಾಡುವುದು ಮಾತ್ರವಲ್ಲ  ,ಓದುಗರಿಗೆ ಬೇಕಾದ ಮಾಹಿತಿ ಒದಗಿಸುವುದೂ ಕೂಡಾ  ಮಾಡಬೇಕು . ಪುಸ್ತಕಗಳು  ನಮ್ಮೊಡನೆ ಸಂವಹನ ನಡೆಸುತ್ತವೆ ,ಓದುಗರೊಂದಿಗೆ ಮಾತನಾಡುತ್ತವೆ ..ಯಾವುದೇ ಕೃತಿ ನಿ ರುಪಯುಕ್ತ ಎಂದು ಅಸಡ್ಡೆ ಮಾಡ ಬಾರದು ,ಪ್ರತಿಯೊಂದಕ್ಕೂ ಅದರದೇ ಆದ ಮಹತ್ವ ಇರುತ್ತದೆ ..ದಾಖಲೀಕರಣ ,ಸಂಶೋಧನೆ ,ಪ್ರಕಟಣೆ ಮತ್ತು  ಮಾರ್ಗ ದರ್ಶನ ಇವು ಗ್ರಂಥ ಪಾಲಕನಲ್ಲಿ ಇರಬೇಕು "

ಇವು  ದಿ ಡಾ ಶ್ರೀನಿವಾಸ ಹಾವನೂರು ಅವರ  ನುಡಿ ಮುತ್ತುಗಳು ..ಇವರು ೧೯೬೯ ರಿಂದ ೧೯೮೯ ರ ವರೆಗೆ ಮುಂಬೈ ಯ ಪ್ತತಿಷ್ಠಿತ  ಟಾಟಾ ಮೂಲಭೂತ ಅಧ್ಯಯನ ಸಂಸ್ಥೆಯಲ್ಲಿ ಗ್ರಂಥ ಪಾಲಕರಾಗಿ ಇದ್ದವರು . ಖ್ಯಾತ ವಿದ್ವಾಂಸ ಮತ್ತು ತನ್ನನ್ನು ಮಾನಸ ಶಿಷ್ಯ ಎಂದು ಸ್ವೀಕರಿಸಿದ ರಂ  ಶ್ರೀ ಮುಗಳಿ ಅವರ ಮಾರ್ಗ ದರ್ಶನ ದಲ್ಲಿ ಇವರು ರಚಿಸಿದ ಸಂಶೋಧನಾ  ಪ್ರಬಂಧ "ಹೊಸಗನ್ನಡ  ಅರುಣೋದಯ :ಒಳ್ಳೆಯ ಆಕರ  ಎಂದು ಹೆಸರು ಪಡೆದಿದ್ದು  ಪುಸ್ತಕ ರೂಪದಲ್ಲಿ ಹಲವು ಆವೃತ್ತಿಗಳನ್ನು ಕಂಡಿದೆ . ಈ  ಪ್ರಬಂಧ ದ  ಅಖಲನ ನಡೆಸಿದ ಪರೀಕ್ಷಕರಾದ ಡಾ ಹಾ ಮಾ ನಾಯಕ್ ಮತ್ತು ಪ್ರೊ. ಮರಿಯಪ್ಪ ಭಟ್ ಅವರು ಮೌಖಿಕ  (ವೈವಾ) ಪರೀಕ್ಷೆಯ ಅವಶ್ವಕತೆ ಇಲ್ಲದೆಯೇ ಪಿ ಎಚ್ ಡಿ ಕೊಡ ಬಹುದು ಎಂದು ಶಿಫಾರಸು ಮಾಡಿದರಂತೆ.ಪರಿಶೀಲನೆಗೆ ಕಳುಹಿಸಿದ  ಪ್ರಬಂಧದ ಹಸ್ತ ಪ್ರತಿ ಹಾ ಮಾ ನಾಯಕ್ ವಾಪಸು ಕಳುಹಿಸದೆ ತಮ್ಮಲ್ಲೇ ಆಕರ ವಾಗಿ ಇಟ್ಟು ಕೊಂಡಿದ್ದರಂತೆ ;ಮುಂದೆ ಮೈಸೂರು ವಿಶ್ವ ವಿದ್ಯಾಲಯದ ವತಿಯಿಂದ ಅದು ಪ್ರಕಟವಾಗುವಂತೆ ನೋಡಿಕೊಂಡರಂತೆ . ಮುಂದೆ ಮಂಗಳೂರು ವಿಶ್ವ ವಿಶ್ವ ವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ರಾಗಿ ಬರುವಂತೆ ಡಾ ಹಾ ಮಾ ನಾಯಕ್ ಕೇಳಿ ಕೊಂಡಾಗ  ತಮಗೆ  ಅಧ್ಯಾಪನ ಅನುಭವ ಇಲ್ಲಾ ಎಂದು ಮೀನ ಮೇಷ ನೋಡಿದಾಗ ,ವಿಶ್ವ ವಿದ್ಯಾಲಯ ಪ್ರಾಧ್ಯಾಪಕರಿಗೆ ಸಂಶೋಧನಾ ಅನುಭವ ಮುಖ್ಯ ಎಂದು ಒಪ್ಪಿಸಿ ಕರೆ ತಂದರಂತೆ . ಅದೇ ರೀತಿ ಮುಂದೆ ಮುಂಬೈ ವಿಶ್ವ ವಿದ್ಯಾಲಯದ ಕನ್ನಡ ವಿಭಾಗಕ್ಕೆ . ೧೯೮೯ ರಲ್ಲಿ ಅಲ್ಲಿಂದ ನಿವೃತ್ತರಾದ ಮೇಲೂ ಮಂಗಳೂರಿನ ಥಿಯೋಲೋಜಿಕಲ್ ಕಾಲೇಜು ನಲ್ಲಿ ಸಂಶೋಧನಾ ಕಾರ್ಯ ಮುಂದುವರಿಕೆ . ಇವರ ಕ್ರಿಯಾಶೀಲತೆ ಕಂಡು   'ಕಾರ್ಯಾನಂದ ಸ್ವಾಮಿ "ಎಂದು ಇವರನ್ನು ತಮಾಷೆ ಮಾಡುತ್ತಿದ್ದರಂತೆ . 

 

ನಿರ್ವಹಿಸಿದ ಹುದ್ದೆಗಳು

  • ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಣೆ.
  • 1984 ರಲ್ಲಿ ಮಂಗಳ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಮುಖ್ಯಸ್ಥರಾಗಿದ್ದರು.
  • 1986ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದರು.
  • ಮಂಗಳೂರಿನ ಕರ್ನಾಟಕ ಥಿಯೊಲಾಜಿಕಲ್ ಕಾಲೇಜಿನಲ್ಲಿ ಬಾಸೆಲ್ ಮಿಷನ್ ಸಂಶೋಧನೆ.
  • ಗ್ರಂಥಪಾಲಕ, ಪ್ರಾಧ್ಯಾಪಕ, ಸಂಶೋಧಕರಾಗಿ ಮುಂಬಯಿ, ಮಂಗಳೂರು, ಪುಣೆ, ಬೆಂಗಳೂರುಗಳಲ್ಲಿ ದೀರ್ಘ ಕಾಲದ ವಾಸ್ತವ್ಯ

 ರ್ನಾಟಕದ ಇತಿಹಾಸ ಸಾಹಿತ್ಯಗಳ ಸಂಶೋಧನೆಗಾಗಿ ಕಂಪ್ಯೂಟರ್‌ ನ್ನು ಬಳಸಿದವರಲ್ಲಿ ಹಾವನೂರರು ಮೊದಲಿಗರು, 

ಹಾವನೂರರು ೬೦ ಕ್ಕೂ ಹೆಚ್ಚು ಮೌಲಿಕ ಕೃತಿಗಳ ಲೇಖಕರು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ 

  • ಕನ್ನಡದಲ್ಲಿ ಕ್ರೈಸ್ತ ಸಾಹಿತ್ಯ
  •  ಮುಂಬೈ ಕರ್ನಾಟಕ
  • ಗಳಗನಾಥ ಮಾಸ್ತರರು
  • ಒಂದಿಷ್ಟು ಲಘು, ಒಂದಿಷ್ಟು ಗಂಭೀರ
  • ಪಾವೆಂ ಆಚಾರ್ಯರ ಸಮಗ್ರ ಕೃತಿಗಳ ಸಂಪಾದನೆ
  • ಹಟ್ಟಿಯಂಗಡಿ ನಾರಾಯಣರಾಯರ ಸಾಹಿತ್ಯವಾಚಿಕೆ
  • ಎಪಿಗ್ರಾಫಿಕಲ್ ಸ್ಟಡೀಸ್
  • ಮ.ಪ್ರ.ಪೂಜಾರರ ಹಳಗನ್ನಡ ಕವಿ ಕಾವ್ಯ ಮಹೋನ್ನತಿ,
  • ಕಾದಂ ಕಥನಗಳು (ಭೈರಪ್ಪನವರ ಕಾದಂಬರಿಗಳಿಂದ) ಹೊಸ ರೀತಿಯ ಬರವಣಿಗೆ
  • ಫರ್ಡಿನಂಡ್ ಕಿಟೆಲ್ (40 ವರ್ಷಗಳಿಂದ, ರೆ.ಫಾ.ಕಿಟೆಲರ ಜೀವನ, ಸಾಧನೆಯ ಬಗ್ಗೆ ಬರೆಯುತ್ತಲೇ ಬಂದವರು ಅವರು. ಕಿಟೆಲ್ ಕುರಿತ ಕೃತಿ, ಜರ್ಮನ್ ಭಾಷೆಯಲ್ಲಿಯೂ ಪ್ರಕಟವಾಗಿದೆ)

ಬಾಲಂಗೋಚಿ ;ನನಗೆ ಬಾಲ್ಯದಲ್ಲಿ ಬಸ್ ಕಂಡಕ್ಟರ್ ಆಗುವ ಅಸೆ ಇತ್ತು .ಆಮೇಲೆ ಲೈಬ್ರರಿಯನ್ ಆಗುವ ಕನಸು .ಪುಸ್ತಕಗಳ ನಡುವೆ ಇದ್ದು ಎಷ್ಟು ಬೇಕಾದರೂ ಓದ ಬಹುದು .ಈಗಲೂ ಆ ಅಸೆ ಇದೆ . ಪುತ್ತೂರು ಸಾರ್ವಜನಿಕ ಗ್ರಂಥಾಲಯದಲ್ಲಿ ಇದ್ದ ಶ್ರೀ ಲಾರೆನ್ಸ್ (?),ಮಂಗಳೂರು ವಿಶ್ವ ವಿದ್ಯಾಲಯದ ಶ್ರೀ ಭಂಡಿ  ಮತ್ತು ಕೆ ಎಸ ಹೆಗ್ಡೆ ಮೆಡಿಕಲ್ ಕಾಲೇಜು ಲೈಬ್ರರಿಯನ್ ಶ್ರೀಮತಿ ಸುಪ್ರಿತಾ ನಾನು ಕಂಡ ಒಳ್ಳೆಯ ಗ್ರಂಥ ಪಾಲಕರು . ಓದುಗರು ಬಂದರೆ ಅವರಿಗೆ ಕಿರಿ ಕಿರಿ ಆಗದು .ಸಹಾಯ ಮಾಡುವ ಉತ್ಸಾಹ . ಇನ್ನು ಹಲವು ಕಡೆ ನಾವು ಏನಾದರೂ ಕೇಳಿದರೆ ಅಲ್ಲಿ ಎಲ್ಲಿಯಾದರೂ ಇರ ಬಹುದು ನೋಡಿ ಎಂದು ಅನ್ಯ ಮನಸ್ಕರಾಗಿ ಹೇಳುತ್ತಿದ್ದವರೇ ಅಧಿಕ . ಒಂದು ಜಿಲ್ಲಾ ಸಾರ್ವಜನಿಕ ಗ್ರಂಥಾಲಯದಲ್ಲಿ ಪುಸ್ತಕಗಳಿಗೆ ಅಂಟಿದ್ದ ಧೂಳು ಹೊಡೆಯುವ ಕಾರ್ಯಕ್ ನಾನು ಕೆಲ ಗೆಳೆಯರೊಡನೆ ಬರಲೇ ಎಂದು ಸದುದ್ದೇಶದಿಂದ ಅರಿಕೆ ಮಾಡಲು "ಬೇಡ ಅದಕೆಲ್ಲಾ ನಮ್ಮಲ್ಲಿ ಜನ ಇದ್ದಾರೆ "ಎಂದು ತಾವೂ ಮಾಡದೇ ಇದ್ದವರು ಕಂಡಿದ್ದೇನೆ 

 

 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ