ಬೆಂಬಲಿಗರು

ಬುಧವಾರ, ಮೇ 11, 2022

ಮೌನ ಸಾಧಕರು ಡಾ ಡಿ ಸದಾಶಿವ ಭಟ್

                       


ಇವರು ಡಾ ಸದಾಶಿವ ಭಟ್.ಪುತ್ತೂರು ತಾಲೂಕು ನಿಡ್ಪ ಳ್ಳಿ ಯವರು . 90 ವರ್ಷದ ತರುಣ .ಪೆರಡಾಲ ಸಂಸ್ಕೃತ ಕಾಲೇಜಿನಲ್ಲಿ ವ್ಯಾಸಂಗ .ಮದರಾಸು ವಿಶ್ವ ವಿದ್ಯಾಲಯದ ವಿದ್ವಾನ್ ಪದವಿ . ೧೯೭೬ರಲ್ಲಿ ಮೈಸೂರು ವಿಶ್ವ ವಿದ್ಯಾಲಯದಿಂದ ಬಿ ಎ ಪದವಿ ,೧೯೭೮ ರಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯ ದಿಂದ ಬಿ ಎಡ್ ,೧೯೭೯ ರಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ ದಿಂದ ಎಂ ಎ ಪದವಿ . ಇದಕ್ಕೆಲ್ಲಾ ಕಿರೀಟ ವಿಟ್ಟಂತೆ ೧೯೮೬ ರಲ್ಲಿ  ಮಂಗಳೂರು ಯೂನಿವರ್ಸಿಟಿ ಯಿಂದ 'ಪಂಜೆಯವರ ಸಾಹಿತ್ಯ ಕೃತಿಗಳು -ಒಂದು ಅಧ್ಯಯನ 'ಎಂಬ ಮಹಾ ಪ್ರಬಂಧಕ್ಕೆ ಪಿ ಎಚ್ ಡಿ ಪದವಿ .. ಇದಲ್ಲದೆ ಹಿಂದಿಯಲ್ಲಿ ರಾಷ್ಟ್ರ ಭಾಷಾ ವಿಶಾರದ . 

೧೯೬೪ ರಲ್ಲಿ ಬೆಟ್ಟಂಪಾಡಿ ನವೋದಯ ಹೈ ಸ್ಕೂಲ್ ನಲ್ಲಿ ಅಧ್ಯಾಪಕರಾಗಿ ಸೇರಿ ೧೯೯೨ರಲ್ಲಿ ನಿವೃತ್ತಿ . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿ ಎಚ್ ಡಿ ಪಡೆದ ಮೊದಲ ಹೈ ಸ್ಕೂಲ್ ಅಧ್ಯಾಪಕ ಎಂಬ ಹೆಗ್ಗಳಿಕೆ .ಅಲ್ಲದೆ ಕರ್ನಾಟಕದ ಎಲ್ಲಾ ವಿಶ್ವ ವಿದ್ಯಾಲಯ ಮತ್ತು ಮದ್ರಾಸ್ ವಿಶ್ವ ವಿದ್ಯಾಲಯ ಗಳಿಂದ ಪರೀಕ್ಷೆ ಉತ್ತೀರ್ಣ ರಾಗಿ ಪದವಿ . 

೧೯೬೦ ರಲ್ಲಿ ಸಮಾನ ಮನಸ್ಕರೊಂದಿಗೆ ಸೇರಿ "ಶ್ರೀ ಸತ್ಯನಾರಾಯಣ ಯಕ್ಷಗಾನ ಕೂಟ "ಸ್ಥಾಪನೆ .ಯಕ್ಷಗಾನ ತರಬೇತಿ ತಾಳ ಮದ್ದಳೆ ಮತ್ತು ಬಯಲಾಟ ಪ್ರದರ್ಶನ .ಇವರು ಪ್ರಸಂಗ ಕರ್ತೃ,ಅರ್ಥದಾರಿ ಮತ್ತು ವೇಷಧಾರಿ ಕೂಡಾ . 

ಇವರ ಗುರು ಕನ್ನಡದೋಜ  ಪೆರಡಾಲ ಕೃಷ್ಣಯ್ಯ ಮತ್ತು ಸಹಪಾಠಿ ಅಡೂರ್ ವೆಂಕಟ್ರಾವ್ ಅವರಿಂದ ಅರ್ಥಗಾರಿಕೆಯ ಸೂಕ್ಷ್ಮಗಳ  ಕಲಿಕೆ ..೧೯೫೭ ರಲ್ಲಿ  ಹುಡುಗಿಯರಿಂದ ಮೊದಲ ಯಕ್ಷಗಾನ ಮಾಡಿಸಿದ ಶ್ರೇಯ ಇವರಿಗೆ . 

ಇದುವರೆಗೆ ೧೭೪ ಯಕ್ಷಗಾನ ಪ್ರಸಂಗಗಳನ್ನು ಪ್ರಕಟಿಸಿರುವ ಇವರು ಸಂಸ್ಕೃತ ,ಹಿಂದಿ ಭಾಷೆಯವೂ ಇದರಲ್ಲಿ ಸೇರಿರುವುದು ಗಮನಾರ್ಹ . ಇವರ ಮಾತೃ ಭಾಷೆ ಕರಾಡ್ ನಲ್ಲಿ ೩ ಮಹಾ ಕಾವ್ಯ ರಚಿಸಿದ್ದಾರೆ . ೫೧೦ ಪುಟಗಳ ಯಕ್ಷಗಾನ ಮಹಾ ಕಾವ್ಯ ವನ್ನು ರಚಿಸಿದ ಹೆಗ್ಗಳಿಕೆ . 

ಪುತ್ತೂರು ತಾಲೂಕು ೧೩ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ,ಹಲವು ಗ್ರಂಥಗಳ ಸಂಪಾದನೆ ಮತ್ತು ಸಹ ಸಂಪಾದನೆ .ಆಕಾಶವಾಣಿಯಲ್ಲಿ ವಾರದ ವ್ಯಕ್ತಿ ,ಸೀತಾನದಿ ಗಣಪಯ್ಯ ಪ್ರಶಸ್ತಿ ,ಪೊಳಲಿ ಶಾಸ್ತ್ರೀ ಪ್ರಶಸ್ತಿ ಯಂತಹ ಹತ್ತು ಹಲವು ಇವರನ್ನು ಅರಸಿ ಬಂದಿವೆ . 

ಸರಳ ಸಜ್ಜನ , ವಿನಯ ಭೂಷಣ ವಿದ್ವತ್ ಇವರ ಛಾಪು . 

ಇವರು ಆರೋಗ್ಯವಾಗಿದ್ದು ಇನ್ನೂ ಸಾಹಿತ್ಯ ಕಲಾ ಸೇವೆ ಮುಂದುವರಿಸಲಿ .

ಇವರ ಕೃತಿಗಳ ಪಟ್ಟಿ 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ