ಬೆಂಬಲಿಗರು

ಭಾನುವಾರ, ಮೇ 29, 2022

ಪುಂಡಿಕಾಯಿ ನಾರಾಯಣ ಭಟ್


 

                              No photo description available.                                                                                                         ನಮ್ಮಲ್ಲಿ ಕೆಲವು ಸಾಹಿತ್ಯ ಕಲಾ ಪ್ರೇಮಿ ಕುಟುಂಬಗಳು ಇವೆ . ಉದಾಹರಣೆಗೆ  ವಿಟ್ಲ ಸೀಮೆಯಲ್ಲಿ  ಮುಳಿಯ ಎಂಬ ಊರು ಇದೆ . ಅನ್ಯಥಾ ಸಾಧಿಸದಿದ್ದರೆ(Unless otherwise proved ) ಇಲ್ಲಿ ಎಲ್ಲರೂ ಸಾಹಿತ್ಯ ಕಲಾ ಪ್ರಿಯರು ಮತ್ತು ಪೋಷಕರು . ಮುಳಿಯ ತಿಮ್ಮಪ್ಪಯ್ಯ ,ಮುಳಿಯ ಮಹಾಬಲ ಭಟ್(ಮುಳಿಯ ತಿಮ್ಮಪ್ಪಯ್ಯನವರ ಪುತ್ರ ವಕೀಲ ,ಬರಹಗಾರ ಯಕ್ಷಗಾನ ಅರ್ಥಧಾರಿ ) ,ಗಂಗಾ  ಪಾದೇಕಲ್(ತವರು ಮನೆ ಮುಳಿಯ ) ಇವರೆಲ್ಲಾ ಪ್ರಸಿದ್ಧ ಬರಹಗಾರರು . ಮುಳಿಯದ ಯಾವುದೇ ಮನೆಗೆ ಹೋದರೂ ಅಲ್ಲಿ ಓದುಗರು ಕಲಾ ರಸಿಕರು  ಸಿಗುವರು .

ಅದೇ ರೀತಿ ವಿಟ್ಲ ಸೀಮೆಯ  ಪುಂಡಿಕಾಯಿ ಕೋಡ ಪದವು ಬೈಲಿನವರು ಹೆಚ್ಚಿನವರು ರಸಿಕರು .ಕಲೆ ಸಾಹಿತ್ಯ ಆಸ್ವಾದಕರು ಮತ್ತು ಪೋಷಕರು . 

ಇದರಲ್ಲಿ ಓರ್ವರು ಪುಂಡಿಕಾಯಿ ನಾರಾಯಣ ಭಟ್ ಅವರು .ಇವರು ಹಿರಿಯ ವಕೀಲರು . ಸಾಹಿತ್ಯ ,ಯಕ್ಷಗಾನ ಮತ್ತು ಒಳ್ಳೆಯ  ಸಿನೆಮಾ ಗಳನ್ನು ಅರಸಿ ಆಸ್ವಾದಿಸುವರು . ಅವರ ಸಹೋದರಿ  ಮತ್ತು ನನ್ನ ಹಿರಿಯ  ಅಕ್ಕನನ್ನು ಒಂದೇ ಮ ನೆಗೆ ಮದುವೆ ಮಾಡಿ ಕೊಟ್ಟಿದ್ದು ನಾವು ಬಂಧುಗಳು ಕೂಡಾ .ಆದರೆ ನಾನು ಅವರಿಗಿಂತ ವಯಸಿನಲ್ಲಿ ಬಹಳ ಕಿರಿಯ ನಾದುದರಿಂದ  ಅಲ್ಲಿ ಅವರೊಡನೆ ಮಾತನಾಡುವ ಅವಕಾಶ ಸಿಕ್ಕಿದ್ದು ಕಡಿಮೆ . 

ನನ್ನ ಇತ್ತೀಚೆಗಿನ ಬರವಣಿಗೆಗೆ ಅವರೂ ಅವರ ಶ್ರೀಮತಿ  ಸವಿತಾ ಅಕ್ಕ ನವರೂ ತುಂಬು ಹೃದಯದಿಂದ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ . ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮ ಕ್ಕೆ  ಭಾರೀ ಮಳೆ ಇದ್ದರೂ ಬಂದು ಹರಸಿದ್ದಾರೆ . 

ಇವರ ಸಹೋದರ ಪ್ರಸಿದ್ಧ ಇತಿಹಾಸ ತಜ್ಞ ಲೇಖಕ  ಪುಂಡಿಕಾಯಿ  ಗಣಪಯ್ಯ ಭಟ್ .ಮಗ ಡಾ ರಾಮರಾಜ್  ಶಸ್ತ್ರ ಚಿಕಿತ್ಸಾ ತಜ್ಞ ;ಜತೆಗೆ  ಹಿರಿಯರ ಹವ್ಯಾಸ ಮೈಗೂಡಿಸಿ ಕೊಂಡವರು . ಇಷ್ಟೆಲ್ಲಾ ಬರೆಯಲು  ಕಾರಣ ಮೊನ್ನೆ ಈ ಹಿರಿಯ ವಕೀಲರು ತಮ್ಮೆಲ್ಲಾ ಕಾರ್ಯ ಬಾಹುಳ್ಯದ ನಡುವೆಯೂ ಬರೆದ ಒಂದು ಪತ್ರ . 

ಪುಂಡಿಕಾಯಿ ನಾರಾಯಣ ಭಟ್ 

ಹಿರಿಯ ವಕೀಲರು  ಬಿ ಸಿ ರೋಡ್ 

ರಿಗೆ ,

   ಡಾ ಎ ಪಿ ಭಟ್ 

                ನಿಮ್ಮ' ವೈದ್ಯನ ವಗೈರೆಗಳು "ಪುಸ್ತಕದಲ್ಲಿ ಪೂರ್ವ ಸೂರಿಗಳೂ ಮಹಾನ್ ವಕೀಲರೂ ಆದ ಸದಾಶಿವ ರಾವ್ ,ಕೆ ಆರ್ ಕಾರಂತ್ ಇತ್ಯಾದಿ ವಕೀಲರ ಹೆಸರು ಓದುವಾಗ ರೋಮಾಂಚನ ವಾಯಿತು . ಅವು  ವಕಾಲತ್ತಿನ ವೈಭವದ ದಿನಗಳು .ಈಗ  ಕಾಣೆಯಾಗಿದೆ ಎನ್ನಲು ಬೇಸರವಾಗುತ್ತಿದೆ .ಹಾಗೇ  ಡಾ ವೆಂಕಟ್ ರಾವ್ ,ಡಾ ಚಾರಿ ,ಡಾ ಸಿ ಆರ್ ಬಲ್ಲಾಳ್ ದಂತಕತೆಗಳು ಆದವರು . 

 ಪುಸ್ತಕದಲ್ಲಿ ಕೈಪೇತು (Caveat )ಎಂದಿದೆ .ಅದು Caveat  ಅಲ್ಲ .ಕೈಪೇತು ಎಂದರೆ Plaint (ವಾದ ಪತ್ರ ).ದಾವಾ ಸಲ್ಲಿಸುವ ಮೊದಲಿಗೆ ತನ್ನ ಸಮಸ್ಯೆಗಳನ್ನು ಕೋರ್ಟಿಗೆ ಸಲ್ಲಿಸುವ ಪ್ರಮಾಣ ಪತ್ರ .Caveat  ಪದ ಹೆಚ್ಚು ಚಾಲ್ತಿಗೆ ಬಂದದ್ದು 1976ರ C.P.Cತಿದ್ದುಪಡಿಯ ನಂತರ . 

ನಿಮ್ಮ ಗಮನಕ್ಕೆ ಈ ಪತ್ರ 

ಬಿ ಸಿ ರೋಡ್                                         ಇಂತೀ ನಮಸ್ಕಾರ 

                                                        ( ಸಹಿ ) ಪುಂಡಿಕಾಯಿ ನಾರಾಯಣ ಭಟ್

25 .5.2022                                                                             

    ಹಿರಿಯರ ಆಶಯ setting things right.ಅವರಿಗೆ ನಾನು ಋಣಿ .

ಕೈಫಿಯತ್ತು  ಪಾರ್ಸಿ ಭಾಷೆಯ ಮೂಲದಿಂದ ಬಂದದ್ದು . ಈ ಮಾತಿಗೆ ಸಮಾಚಾರ ಎಂಬುದು ಸಾಮಾನ್ಯವಾದ ಅರ್ಥ. ಇಂದೂ ನ್ಯಾಯಸ್ಥಾನಗಳಲ್ಲಿ ಸಾಕ್ಷಿ ನುಡಿಯುವವರ ಕಡೆಯಿಂದ ಪ್ರಮಾಣ ಮಾಡಿಸಿ ಪಡೆಯುವ ಹೇಳಿಕೆಗಳನ್ನು ಕೈಫೀತು ಅನ್ನುತ್ತಾರೆ. ಈ ಮಾತು ಬಿಜಾಪುರ ದ ಅದಿಲ್ ಶಾಹಿ ಗಳ ಕಾಲದಲ್ಲಿ ಕನ್ನಡ ಭಾಷೆಗೆ ಬಂದು ಸೇರಿ  ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ ಕನ್ನಡ ನಾಡಿನಲ್ಲೆಲ್ಲ ವಿಶೇಷವಾಗಿ ಪ್ರಚುರಗೊಂಡಿತು. ಅಂದಿಗಾಗಲೇ ಈ ಮಾತಿನ ಅರ್ಥ ವಿಶಾಲಗೊಂಡು ಚಾರಿತ್ರಿಕ ನಿರೂಪಣೆಯೆಂಬ ಬಣ್ಣವೂ ಬಂದಿತು.ಇದನ್ನೇ ನನ್ನ ಅಜ್ಜ ಆಗಾಗ ಕೈಪೇತು (ಪ್ರಮಾಣ ಪತ್ರ )ಎನ್ನುತ್ತಿದ್ದಿರ ಬೇಕು .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ