ಬೆಂಬಲಿಗರು

ಬುಧವಾರ, ಮೇ 25, 2022

ಪಂಜೆ ಓದು

 ಪಂಜೆಯವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೈಯಾಡಿಸಿದವರು . ಸ್ವಯಂ ಅಧ್ಯಾಪಕ ,ಇನ್ಸ್ಪೆಕ್ಟರ್ ಆಗಿದ್ದ ಅವರ ಸಬ್ ಅಸಿಸ್ಟಂಟನ ಸುಳ್ಳು ಡೈರಿಯಿಂದ  ತೆಳು ಹಾಸ್ಯ ಲೇಪಿತ ,ಆದರೆ ಆಗಿನ ಅಧ್ಯಾಪಕರ ಬಡತನ ಮತ್ತು ಪ್ರಾಮಾಣಿಕತೆಗೆ ಹಿಡಿದ ಕೈ ಗನ್ನಡಿ.  ಶ್ರೀ ನಿವಾಸ ಮೂರ್ತಿಯವರ "ರಂಗಣ್ಣನವರ ಕನಸಿನ ದಿನಗಳು " ಕೂಡಾ ಇದೇ ಆಶಯ ಮತ್ತು ವೈಖರಿಯ ಕೃತಿ . (ಇದನ್ನು ಈಗ  ಹಾಸ್ಯ ಕೃತಿ ಎಂಬ ಶೀರ್ಷಿಕೆಯಲ್ಲಿ  ಪ್ರಕಟಿಸುತ್ತಿರುವುದು ಸ್ವಲ್ಪ ಬೇಸರದ ಸಂಗತಿ) . ಪಂಜೆ ಅವರು ಅವರು ಸತ್ಯ ದೀಪಿಕಾ ಎಂಬ ಪತ್ರಿಕೆಯಲ್ಲಿ ಹರಟೆಮಲ್ಲ ,ವಿಕಟ ಮಲ್ಲ ಇತ್ಯಾದಿ ಗುಪ್ತನಾಮದಿಂದ ಅಂಕಣ ಬರೆಯುತ್ತಿದ್ದರು . 

  ಹರಟೆ ಮಲ್ಲನ ಉವಾಚ 

ಮಾಸ್ತರನು  ಪಾಸು ಮಾಡಬೇಕು ;ಕಾನ್ಸ್ಟೇಬಲನು ತಪಾಸು ಮಾಡ ಬೇಕು .ಪೋಲೀಸಿನವನಿಗೆ ಕೈತುಂಬಾ ಗಂಟಾದರೂ ಉಂಟು .ಉಪಾಧ್ಯಾಯನಿಗೆ ಬೆರಳು ಗಂಟುಗಳಲ್ಲದೆ ಮತ್ತೇನೂ ಇಲ್ಲ . 

ವಿಕಟ ಮಲ್ಲನ ಉವಾಚ 

ಕಳೆದ ವರ್ಷ ಮಾತೃ ಕ್ಲೇಶ (ಮೆಟ್ರಿಕ್ಯುಲೇಷನ್)ಯಜ್ಞದಲ್ಲಿ ಅನೇಕಾನೇಕ ಹುಡುಗರನ್ನು ಆಹುತಿಯಾಗಿ ಕೊಟ್ಟರಂತೆ .ಇಂಥವರ ಪಿತೃಗಳಿಗೆಲ್ಲಾ  ಮನೋಕ್ಲೇಶ .ದೊಡ್ಡ ಉಪಾಧ್ಯಾಯರಿಗೆ ಪಶ್ಚಾತ್ತಾಪ .ಸಣ್ಣ ಉಪಾಧ್ಯಾಯರಿಗೆ ಸಂತಾಪ .ಹುಡುಗರ ಪ್ರಲಾಪ . 

 

ಶ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ