ಬೆಂಬಲಿಗರು

ಬುಧವಾರ, ನವೆಂಬರ್ 24, 2021

ಉದರ ನಿಮಿತ್ತಂ

                            ನನ್ನ ವೈದ್ಯನ ವಗೈರೆ ಗಳು ಪುಸ್ತಕದಲ್ಲಿ ಉದರ ಶೂಲಾ ಬಹು ವಿಧ ರೋಗಂ ಎಂಬ ಶೀರ್ಷಿಕೆಯ ಒಂದು ಲೇಖನ ಇದ್ದು ಶಂಕರಾಚಾರ್ಯರ ಭಜ ಗೋವಿಂದಂ ನ ಒಂದು ಸಾಲು ಉದರ ನಿಮಿತ್ತಂ ಬಹುಕೃತ ವೇಷಮ್ ಎಂದು ಇದ್ದು ಅದರಿಂದ ಪ್ರೇರಿತ ವಾದುದು 

ಜಟಿಲೋ ಮುಂಡಿಹಿ ಲುಂಚಿತ ಕೇಶಃ  

ಕಾಷಾಯಾಂಬರ ಬಹುಕೃತ ವೇಷಹ 

ಪಶ್ಯನ್ನಪಿ ಚ ನ ಪಶ್ಯತಿ ಮೂಢಹ 

ಉದರ ನಿಮಿತ್ತಂ ಬಹುಕೃತ ವೇಷಮ್ . 

(ಕೆಲರು ಬಿಡುವರು ಜುಟ್ಟು ,ಇನ್ನು ಕೆಲರು ಬೋಳಿಪರು ಮಂಡೆ

ಕಾವಿಯ ಉಡುಗೆ ಬಹು ಬಹು ವೇಷ 

ಜಗವ ನೋಡಿಯೂ ಜಗವ ಅರಿಯರು 

ಹೊಟ್ಟೆಯ ಪಾಡಿಗೆ ಬಹು ವಿಧ ವೇಷ .)

 ಹೆಚ್ಚು ಕಡಿಮೆ ಇದೇ ಭಾವಾರ್ಥ ಬರುವ ಜನಪ್ರಿಯ ಪುರಂಧರ ದಾಸರ ದೇವರ ನಾಮ ಉದರ ವೈರಾಗ್ಯ ವಿದು ;

 ಉದರ ವೈರಾಗ್ಯವಿದು ನಮ್ಮ
ಪದುಮನಾಭನಲಿ ಲೇಶ ಭಕುತಿಯಿಲ್ಲ

ಉದಯಕಾಲದಲೆದ್ದು ಗಡಗಡ ನಡುಗುತ
ನದಿಯಲಿ ಮಿಂದೆನೆಂದು ಹಿಗ್ಗುತಲಿ
ಮದ ಮತ್ಸರ ಕ್ರೋಧ ಒಳಗೆ ತುಂಬಿಟಗೊಂಡು
ಬದಿಯಲ್ಲಿದ್ದವರಿಗಾಶ್ಚರ್ಯ ತೋರುವುದು

ಕಂಚುಗಾರನ ಬಿಡಾರದಂದದಿ
ಕಂಚು ಹಿತ್ತಾಳೆ ಪ್ರತಿಮೆಗಳ ನೆರಹಿ
ಮಿಂಚಬೇಕೆಂದು ಬಲು ಜ್ಯೋತಿಗಳನು ಹಚ್ಚಿ
ವಂಚನೆಯಿಂದಲಿ ಪೂಜೆ ಮಾಡುವುದು

ಕರದಲಿ ಜಪಮಣಿ ಬಾಯಲಿ ಮಂತ್ರವು
ಅರಿವೆಯ ಮುಸುಕನು ಮೋರೆಗೆ ಹಾಕಿ
ಪರಸತಿಯರ ಗುಣ ಮನದಲಿ ಸ್ಮರಿಸುತ
ಪರಮ ವೈರಾಗ್ಯಶಾಲಿ ಎಂದೆನಿಸುವುದು

ಬೂಟಕತನದಲಿ ಬಹಳ ಭಕುತಿ ಮಾಡಿ
ದಿಟನೀತ ಸರಿಯಾರಿಲ್ಲೆನಿಸಿ
ನಾಟಕ ಸ್ತ್ರೀಯಂತೆ ಬಯಲ ಡಂಭವ ತೋರಿ
ಊಟದ ಮಾರ್ಗದ ಜ್ಞಾನವಿದಲ್ಲದೆ

ನಾನು ಎಂಬುದ ಬಿಟ್ಟು ಜ್ಞಾನಿಗಳಡನಾಡಿ
ಏನಾದರು ಹರಿ ಪ್ರೇರಣೆಯೆಂದು
ಧ್ಯಾನಿಸಿ ಮೌನದಿ ಪುರಂದರವಿಠಲನ
ಕಾಣದೆ ಮಾಡಿದ ಕಾರ್ಯಗಳೆಲ್ಲವು.

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ