ಬೆಂಬಲಿಗರು

ಸೋಮವಾರ, ನವೆಂಬರ್ 15, 2021

ಮನಸು ತುಂಬಿದಾಗ ಮಾತು ಹೊರಡುವುದಾದರೂ ಹೇಗೆ ?

 ಮನಸು ತುಂಬಿದಾಗ ಮಾತು ಹೊರಡುವುದಾದರೂ ಹೇಗೆ ?

                




ನಿನ್ನೆ ನನ್ನ ಪುಸ್ತಕ ಬಿಡುಗಡೆ ಸಮಾರಂಭ . ಭಾನುವಾರ ಬೆಳಿಗ್ಗೆ ಇಟ್ಟರೆ ಜನ ಬಾರರು ಎಂದು ಮಿತ್ರ ಪ್ರಕಾಷ್ ಎಚ್ಚರಿಸಿದರೂ ,ಸಾಯಂಕಾಲ ಕಾಡು ವಿನಲ್ಲಿ ರಘು ಅಣ್ಣನ ಕಾರ್ಯಕ್ರಮಕ್ಕೆ ತೊಂದರೆ ಆಗ ಬಾರದು ಎಂದು ರಿಸ್ಕ್ ತೆಗೆದು ಕೊಂಡೇ ಇಟ್ಟದ್ದು .ಅಕಾಲ ಮಳೆಯ ನಡುವೆಯೂ ಆಸಕ್ತರು ಹಿತೈಷಿಯಗಳು ಒಳ್ಳೆಯ ಸಂಖ್ಯೆಯಲ್ಲಿ ಬಂದಿದ್ದರು.ವಿದುಷಿ  ಸುಚಿತ್ರಾ ಹೊಳ್ಳ ಅವರ ತಂಡ ವಚನಗಳು ಮತ್ತು ದೇವರ ನಾಮಗಳನ್ನು ಬಹಳ ಚೆನ್ನಾಗಿ ಹಾಡಿದರು .

ಸಹೋದರಿ ಡಾ ಸುಲೇಖಾ ಚಂದ್ರಗಿರಿ ಕಾರ್ಯಕ್ರಮ ಚೆನ್ನಾಗಿ ನಡೆಸಿ ಕೊಟ್ಟರು .ವರದರಾಜ ಚಂದ್ರಗಿರಿ ಅವರ ಪುಸ್ತಕ ಪರಿಚಯ ಭಾಷಣ ,ಒಳಿತನ್ನು ಹೆಕ್ಕಿ ಹೊಳಪಿಟ್ಟು ಸಿಂಗರಿಪ ಪೋಲೆ ಇದ್ದು ,ನನಗೇ ನನ್ನ ಬರವಣಿಗೆಯಲ್ಲಿ ಕಾಣದ ಗುಣ ಸಹೃದತೆಯ ದ್ಯೋತಕ . ಎಲ್ಲರೂ ಅವರ ಮಾತನ್ನು ಮೆಚ್ಚಿ ಒಪ್ಪಿಕೊಂಡರು . 

ಹಿರಿಯರಾದ ಶ್ರೀ ಲಕ್ಷ್ಮೀಶ ತೊಲ್ಪಾಡಿ ನನ್ನನ್ನು ಒಂದು ಲೇಖಕ ಎಂದು ಘೋಷಿಸಿ ಆಶೀರ್ವಾದ ಮಾಡಿದರು .ಗೆಳಯರಾದ ಹಿರಿಯ ಲೇಖಕ ಪ್ರಾಧ್ಯಾಪಕ ಕೃಷಿಕ ನರೇಂದ್ರ ರೈ ,ವಕೀಲ ಲೇಖಕ ಭಾಸ್ಕರ ಕೊಡಿಂಬಾಳ ನನ್ನ ಫೇಸ್ ಬುಕ್ ಬರಹ ಗಳ ಬಗ್ಗೆ ಒಳ್ನುಡಿಗಳನ್ನು ಆಡಿ ಹರಸಿದರು . ಅಧ್ಯಕ್ಷ ಡಾ ಸೂರ್ಯ ನಾರಾಯಣ ರೂ .

ಕಾರ್ಯಕ್ರಮಕ್ಕೆ ಹಿರಿಯರಾದ ಸುಬ್ರಹ್ಮಣ್ಯ ಕೊಳತ್ತಾಯ ,ಪುರಂಧರ ಭಟ್,ಡಾ ಯೇತಡ್ಕ   ಸುಬ್ರಾಯ ಭಟ್ ಮತ್ತು ಸುಧಾಮ ಕೆದಿಲಾಯ  ತಮ್ಮ ವೃದ್ದಾಪ್ಯ ದ ಸಮಸ್ಯೆಗಳು ಇದ್ದರೂ ಬಂದು ಹರಸಿದ್ದು ನನ್ನ ಮನ ತುಂಬಿ ಬಂದಿದೆ . ಬಂದವರೆಲ್ಲಾ ಕೊನೆ ತನಕ ಕುಳಿತು  ತಾವೂ ಸಂತೋಷ ಪಟ್ಟುದಲ್ಲದೆ  ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿದರು .

ಮಿತ್ರ ಪ್ರಕಾಶರ ಅಭಿಪ್ರಾಯದಂತೆ ಒಂದು ಪುಸ್ತಕ ಬಿಡುಗಡೆ ದಿನ ರೆಕಾರ್ಡ್ ಎನ್ನ ಬಹುದದಂತಹ ಮಾರಾಟ ಆಗಿದೆ ,

ಹಿತೈಷಿಯಗಳು ಕೆಲವರು ಹೇಳಿದರು ನನ್ನ ಪ್ರಸ್ತಾವಿಕ ಭಾಷಣ ಯಾವತ್ತಿನ ಮಟ್ಟಕ್ಕೆ ಬರಲಿಲ್ಲ ಎಂದು . ಒಂಬತ್ತು ತಿಂಗಳು ಹೊತ್ತು ಸುಖ ಪ್ರಸವ ಆಗಿ (ಪುಸ್ತಕ ಪ್ರಕಟನೆಗೆ ಹೋಗಿ ನವ ಮಾಸಗಳು ಸಂದವು .ಕೋವಿಡ್ ಕಾರಣ ತಡವಾಯಿತು )ನಾಮಕರಣಕ್ಕೆ ಇಷ್ಟು ಸನ್ಮನಸುಗಳನ್ನು ಕಂಡಾಗ ಮನವು ತುಂಬಿ ಬಂದಿತ್ತು ,ಮಾತು ಹೊರಡುವುದಾದರೂ ಹೇಗೆ ?

ಎಲ್ಲರಿಗೂ ವಂದನೆಗಳು . ಪುಸ್ತಕ ಬೇಕಾದವರು ಶ್ರೀ ಪ್ರಕಾಶ  ಅವರನ್ನು ವ್ಹಾಟ್ಸ್ ಅಪ್ 9480451560  ನಲ್ಲಿ ಸಂಪರ್ಕಿಸಿ . ಮೊದಲು ಪುಸ್ತಕ ಬೇಕು ಎಂದು ಹೇಳಿದವರೂ ಕೂಡಾ .ಪುಸ್ತಕವನ್ನು ಮಂಗಳೂರಿನ ಜ್ಯೋತಿ ಬಳಿ ಇರುವ ನವಕರ್ನಾಟಕ ಪುಸ್ತಕ ಅಂಗಡಿಯಲ್ಲಿಯೂ ಲಭ್ಯ ಮಾಡುವೆನು .ಅಲ್ಲಿ ಶ್ರೀ ಶಾಂತಾರಾಂ ಅವರನ್ನು ಸಂಪರ್ಕಿಸ ಬಹುದು .ಏನಾದರೂ ಸಮಸ್ಯೆ ಇದ್ದರೆ  ನನಗೆ ಫೇಸ್ ಬುಕ್ ಮೆಸೇಜ್ ಹಾಕಿರಿ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ