ಬೆಂಬಲಿಗರು

ಭಾನುವಾರ, ನವೆಂಬರ್ 21, 2021

ಗೆಳೆಯನ ನಲ್ ಮಾತು

                          

ಇವರು ಡಾ ಸಿ ಬಿ ಮೋಹನ್ . ಮೆಡಿಕಲ್ ಕಾಲೇಜು ನಲ್ಲಿ ನನ್ನ ಸಹಪಾಠಿ ಮತ್ತು ಪ್ರಿಯ ಮಿತ್ರ .ಇವರು ಕೊಡಗು ಮೂಲದ ಹವ್ಯಕ ಬ್ರಾಹ್ಮಣರು ;ಇವರ ಹಿರಿಯರು ಬೆಂಗಳೂರು ಸಮೀಪ ಆನೇಕಲ್ ನಲ್ಲಿ ಬಂದು  ನೆಲಸಿದ್ದು ,ನಮ್ಮ ಬೋಳಂತಕೋಡಿ ಈಶ್ವರ ಭಟ್ ಅವರ ಸಮೀಪ ಬಂಧು .  ಆನೇಕಲ್ ನಲ್ಲಿ  ಜನಸ್ನೇಹಿ ಆಸ್ಪತ್ರೆಯಾದ ವಿಜಯಾ ನರ್ಸಿಂಗ್ ಹೋಂ ಮೋಹನ್ ದಂಪತಿಗಳು ನಡೆಸುತ್ತಿದ್ದು ಬಹಳ ಜನಪ್ರಿಯರಾಗಿದ್ದಾರೆ .ಕಾಲೇಜ್ ನಲ್ಲಿ ಇರುವಾಗ ಇವರು ಕ್ರಿಕೆಟ್ ಆಟಗಾರ , ಸ್ಟ್ರೈಕ್ ಬೌಲರ್ .ನಾನು ಪುಸ್ತಕ ಹುಳುವಾದರೆ ಇವರು ನನಗಿಂತ ದೊಡ್ಡ ಓದುಬಾಕ . ನನ್ನ ಕೃತಿ ವೈದ್ಯನ ವಗೈರೆಗಳು ಓದಿ ತನ್ನ ಅಭಿಪ್ರಾಯ ಬರೆದು ತಿಳಿಸಿದ್ದಾರೆ . ಅದನ್ನು ಹಾಗೆಯೇ ಕೊಟ್ಟಿದ್ದೇನೆ .ಅಂದ ಹಾಗೆ ಇವರು ಪುಸ್ತಕವನ್ನು ಹಣ ಕೊಟ್ಟು ಕೊಂಡು ಓದಿದ್ದಾರೆ

 ಪದ್ಮನಾಭ ಭಟ್ ಸರ್
ವಂದನೆಗಳು. ಇನ್ನು ಐವತ್ತು ಪುಟಗಳು ಓದಲು ಬಾಕಿಯಿದೆ.
ಇತ್ತೀಜೆಗಷ್ಟೆ ಹನುಮಂತ ರಾಯರ " ವಕೀಲರ ವಗೈರೆಗಳು  ಓದಿ ಮುಗಿಸಿದ್ದೆ. ಅಂತೆಯೇ ರಾ. ಶಿ. ಯವರ ಮನೋನಂದನ ಓದಿದೆ. ಅದೇ ಮಾದರಿಯಲ್ಲಿ ತಮ್ಮ ಪುಸ್ತಕ ಹೊರಬಂದಿದೆ. ಪ್ರತಿ ವಗೈರೆಗಳಿಗೂ ಒಂದು ಚಿತ್ತಾಕರ್ಷಕ ಹೆಸರು ಕೊಟ್ಟಿದ್ದೀರಿ. " ಚಿಕಿತ್ಸೆ ರೋಗಿಗೋ ರಿಪೋರ್ಟಿಗೋ"
ವೈದ್ಯರ ತುರಾತುರಿಯ ನಿರ್ಣಯಗಳು ರೋಗಿಗೆ ಹೇಗೆ ಮಾರಕವಾಗಬಲ್ಲವು ಎನ್ನುವುದನ್ನು ಎತ್ತಿ ತೋರಿದ್ದೀರಿ. ಮದ್ದಿನ ಕುಪ್ಪಿಯನ್ನು ಜ್ಞಾಪಿಸಿ ಕುಪ್ಪಿ ತರದೇ ಹೋದರೆ ಔಷಧಿ ಕೊಡದೇ ವಾಪಾಸು ಕಳುಹಿಸುತ್ತಿದ್ದ ದೊಡ್ಡಪ್ಪ ಡಾ. ಚಂದ್ರಶೇಖರ್ ರವರ ನೆನಪು ತಂದಿದ್ದೀರಿ. ಬದಲಿ ಮುಖ್ಯ ಅತಿಥಿಯಾಗಿ ರಂಜಿಸಿದ್ದೀರಿ.
" ಚಿರ ಋಣಿ ಭಾವ" ಎಂದು ಬರೆದು ವಾರಾನ್ನದ ಊಟ ಮಾಡುತ್ತಿದ್ದ ಕನ್ನಡದ ಮೇರು ನಟ ಉದಯಕುಮಾರರಿಗಾಗಿ ಕಾಯುತ್ತಿದ್ದ ನನ್ನ ಅಮ್ಮನನ್ನು ನೆನಪಿಗೆ ತಂದಿದ್ದೀರಿ. 

 ಮುನ್ನುಡಿ ಬರೆದ ಡಾ. ಸಿ. ಆರ್. ಬಲ್ಲಾಳರ ಮಾತಿನಂತೆ ಬಹುತೇಕ ಲೇಖನಗಳು ಆರೋಗ್ಯ ಮತ್ತು ವೈದ್ಯಕೀಯ ವಿಚಾರಗಳ ಬಗ್ಗೆ ಇದ್ದು ನನ್ನಂತ ಸರ್ವರೋಗ ಚಿಕಿತ್ಸಕ ಸಾಮಾನ್ಯ ವೈದ್ಯನಿಗೆ ಸಹಾಯ ಹಸ್ತ ನೀಡಿದ್ದೀರಿ.

ಉಧ್ದಾಲಕನ ಉಲ್ಲೇಖಿಸಿ
ನಾನು ಈ ಹಿಂದೆ ಬರೆದ ಪದ್ಯ
" ಭಟ್ಟರೆ ಪ್ಲೇಟಿಲೆಟ್ಟುಗಳಿಗೇಕೆ ನನ್ನ ಮೇಲೆ ಕೋಪ
ಛಂಗೆಂದು ಮೇಲೆ ಹಾರಿ
ಧೊಪ್ಪೆಂದು ಕೆಳಗೆ ಬೀಳೆ
ನನ್ನೆದೆಯ ಬಡಿತೊದಳು
ಏರು ಪೇರು"

 ಮಾದ್ರಿ ಮತ್ತು ಪಾಂಡು ಪುರಾಣ ತೆಗೆದು ಪಥ್ಯ ಹೇಳಿದ್ದೀರಿ. ರಾ. ಶಿ. ಯವರನ್ನು
ಏನೇನು ತಿನ್ನಬಹುದು ಡಾಕ್ಟ್ರೆ ಎಂದು ರೋಗಿ ಕೇಳಿದರೆ" ನನ್ನ ತಲೆಯೊಂದು ಬಿಟ್ಟು ಏನು ಬೇಕಾದರೂ ತಿನ್ನಯ್ಯ" ಎಂದು
ರೇಗಿದ ನೆನಪು

 ಪುಸ್ತಕ ತುಂಬಾ ಚೆನ್ನಾಗಿದೆ
ಬರವಣಿಗೆ ಸಹ ಒಳಗಿನ ಲೇಖಕನನ್ನು  ಹೊರ ಹಾಕಿದೆ.
ಸ್ವಲ್ಪ ಪಂಚತಂತ್ರ ದ ಪ್ರಯೋಗ ಮಾಡಿ ಪ್ರಸಂಗಗಳ ಮೂಲಕ ಸಾಮಾನ್ಯರನ್ನು ಹೆಚ್ಚು ತಲುಪಬಹುದಿತ್ತೇನೋ ಅನಿಸುತ್ತೆ. ಮುಕ್ತಾಯ ಪರಿಪೂರ್ಣವಾಗಿಲ್ಲ. ಹಾಗಾಗಿ ಇದರ ಮುಂದುವರಿದ ಭಾಗ ಹೊರ ಬರಲಿ.
ನಮ್ಮ ಹೆಮ್ಮೆಯ ಪ್ರೀತಿಯ
ಗುರುವಾಗಿರುವ ಸ್ನೇಹಿತರು ನೀವು. ನಿಮಗೆ ಯಶಸ್ಸು ಸಿಗಲಿ. 

 ಮಡಿಕೇರಿಯ ದಿನಗಳನ್ನು ಬರೆದಿದ್ದೀರಿ. ನನ್ನ ಪೂರ್ವಜರ ತವರು ಮನೆ. ಓಂಕಾರೇಶ್ವರನ ಸನ್ನಿಧಿಯ ಎದುರೇ ನಮ್ಮ ಮನೆ. ತಾವು ಉಲ್ಲೇಖಿಸಿರುವ ಗುಂಡುಗುಟ್ಟಿ ಮಂಜುನಾಥ, ಮತ್ತು ಮಕ್ಕಿರಾಮಯ್ಯ ಸನಿಹದ ಬಂಧುಗಳು. ಕೊಡಗಿನ ಗೌರಮ್ಮ ತಾಯಿಯ ಸಂಬಂಧಿ.

ಕೆಎಂಸಿಯ ದಿನಗಳಲ್ಲಿ ನನ್ನ ಹೆಸರು ಬಂದಿರುವುದು ಈ ಅಪ್ರಯೋಜಕ ಸಹ ತಮ್ಮ ನೆನಪಲ್ಲಿರುವದೇ ಖುಷಿ

ಹಿರಿಯರನ್ನು ನೆನೆದಿದ್ದೀರಿ
ಅಜ್ಜಿಯ ಸಹನಶೀಲತೆ, ಅಜ್ಜನ ಪ್ರೀತಿ, ಜನತಾ ಚಪ್ಪಲಿ ಅಂಗಡಿಯಲ್ಲಿ ತಂದೆಯವರು ಬರುತ್ತಾರೆ ಎಂದು ಹೇಳಿ ಸೌಮ್ಯ ಮೂರುತಿ ಖಾದರ್ ಸಾಹೇಬರನ್ನು ಪರಿಚಯಿಸಿದ್ದೀರಿ. ಡಾ ಪಾವಟೆ, ಎಚ್. ಆರ್ ಖನ್ನಾ ಇವರ ಬಗ್ಗೆ ಬರೆದು ನಮ್ಮ ಜ್ಞಾನ ಹೆಚ್ಚಿಸಿದ್ದೀರಿ. 


 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ