ಬೆಂಬಲಿಗರು

ಮಂಗಳವಾರ, ಸೆಪ್ಟೆಂಬರ್ 7, 2021

ಮದುರೈ ಸೋಮಸುಂದರಂ

                       ಮದುರೈ ಸೋಮಸುಂದರಂ

                        
                              Madurai Somasundaram | Shankar Krish's Blog

                        (9.2.1919 ---9.12.1989)

ಬೆಂಗಳೂರು ಕೋಟೆ ಹೈ ಸ್ಕೂಲ್ ರಾಮ ನವಮಿ ಸಂಗೀತೋತ್ಸವ ದಲ್ಲಿ  ,ತಿಂಗಳು ಪೂರ್ಣ ನಡೆಯುವ ಇತರ ಕಚೇರಿಗಳಿಗೆ ಒಂದು ಸೀಸನ್ ಟಿಕೆಟ್ ಕೊನೆಯ ಐದು ಕಚೇರಿಗಳಿಗೆ ಬೇರೆ ಟಿಕೆಟ್ ಇತ್ತು ,ಕೊನೆಯ ಈ ಕಛೇರಿಗಳು ಭಾರೀ ಜನಸಂದಣಿ ಸೇರುವಂತಹವು .ಅದರಲ್ಲಿ ಎಂ ಎಸ್ ಸುಬ್ಬಲಕ್ಷ್ಮಿ ,ಕೆ ಜೆ ಜೇಸುದಾಸ್ ಮುಂತಾದವರೊಂದಿಗೆ ಮದುರೈ  ಸೋಮಸುಂದರಂ ಅವರ ಕಚೇರಿ ಇರುವುದು .ನಾನು ಅವರನ್ನು ನೋಡುವಾಗ ಅವರಿಗೆ ವಯಸ್ಸಾಗಿತ್ತು.ಅವರ ಸ್ವರಕ್ಕೆ ,ಹಾಡುವ ಉತ್ಸಾಹಕ್ಕೆ ,ಭಕ್ತಿ ಭಾವಕ್ಕೆ  ಮುಪ್ಪು ತಗಲಿರಲಿಲ್ಲ .

ಸೋಮಸುಂದರಂ ಅವರ ಹುಟ್ಟು ಹೆಸರು ಪರಮ ಶಿವನ್. ಮದುರೈ ಸೋಮಸುಂದರೇಶ್ವರ ದೇವರ ಆಶೀರ್ವಾದದಿಂದ ಮದುರೈ ಸೋಮಸುಂದರಂ ಆದರು.

ಮುರುಗ (ಸುಬ್ರಹ್ಮಣ್ಯ )ಮತ್ತು ಮದುರೈ ಮೀನಾಕ್ಷಿ  ಕೃತಿಗಳನ್ನು ಹಾಡುವಾಗ ಭಕ್ತಿ ಪರವಶರಾಗುವರು. ಕಣ್ಣಲ್ಲಿ ನೀರು ಜಿನುಗುವುದು . ಅವರ ಒ ರಾಮ ನಿನ್ನಾಮಮ್,ರಾಮ ನಾಮಮು ಜನ್ಮ ರಕ್ಷಕ ಮಂತ್ರಮ್  ಬೆಂಗಳೂರು ಆಕಾಶವಾಣಿ ಸಂಗೀತ ಸುಧಾ ಕಾರ್ಯ ಕ್ರಮದಲ್ಲಿ ಆಗಾಗ ಬಂದು ಜನಪ್ರಿಯ ಆಗಿತ್ತು . 

https://www.youtube.com/watch?v=pyUacBPgWrc

https://www.youtube.com/watch?v=im1Ooa-AgJA

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ