ಬೆಂಬಲಿಗರು

ಶುಕ್ರವಾರ, ಸೆಪ್ಟೆಂಬರ್ 10, 2021

ಶಿರಂಕಲ್ಲು ಪಶುಪತಿ ಶಾಸ್ತ್ರಿ

                                      ಶಿರಂಕಲ್ಲು ಪಶುಪತಿ ಶಾಸ್ತ್ರಿ 

                                                 





ಶ್ರೀ ಪಶುಪತಿ ಶಾಸ್ತ್ರಿ ನನ್ನ ಸೋದರ ಅತ್ತೆಯ ಮಗ . ಇವರುಮೂಲತಃ ನೀರ್ಕಜೆಯವರು. ಇವರ ತಂದೆಯವರನ್ನು ನಾವು ನೀರ್ಕಜೆ ಮಾವ ಎಂದು ಕರೆಯುತ್ತಿದ್ದೆವು .ನೀರ್ಕಜೆ ತಿರುಮಲೇಶ್ವರ ಭಟ್ (ಎನ್ ಟಿ ಭಟ್ ) ರ ಚಿಕ್ಕಪ್ಪನ  ಮಗ .ಬಾಲ್ಯದಲ್ಲಿಯೇ  ತಾಯಿಯನ್ನು  ಕಳೆದು ಕೊಂಡು ಚಿಕ್ಕಮ್ಮ ಅಕ್ಕಂದಿರ  ಲಾಲನೆಯಲ್ಲಿ ಬೆಳೆದವರು . ತಂದೆಯವರು ಕೂಡಾ ಬೇಗನೆ ತೀರಿ ಕೊಂಡರು.

 ಅಣ್ಣ ವಿಶ್ವನಾಥ ಶಾಸ್ತ್ರಿ  ಎಳವೆಯಲ್ಲಿ  ಯಕ್ಷಗಾನಕ್ಕೆ  ಸೇರುವ  ಹಂಬಲದಿಂದ  ಮನೆ ಬಿಟ್ಟು ಮೇಳ ಸೇರಿದವರು  ಮೈಮೇಲೆ ಗಂಜಿ  ಬಿದ್ದು ಅಸ್ವಸ್ಥರಾಗಿ ಮನೆ  ಸೇರಿದರು . ಆಗಿನ  ಕಾಲದಲ್ಲಿ (ಯಕ್ಷಗಾನ ) ಆಟಕ್ಕೆ ಸೇರುವುದು ಎಂದರೆ ಗೌರವದ ಕೆಲಸ ಆಗಿರಲಿಲ್ಲ .ಆದರೆ ಇವರಿಗೆ ಕಲಾ ವಾಸನೆ ಇತ್ತು .ನಮ್ಮಲ್ಲಿಗೆ ಬಂದಾಗ ಪ್ರಸಂಗಗಳ ಬಗ್ಗೆ ನನ್ನಲ್ಲಿ  ಚರ್ಚಿಸುತ್ತಿದ್ದರು . ಪುಸ್ತಕ ಓದುವ ಹವ್ಯಾಸ ಕೂಡಾ ಇದ್ದಿತು .ಮುಂದೆ  ಮಾವ ನವರು ತೀರಿ ಹೋದ ಮೇಲೆ ಮಕ್ಕಳೆಲ್ಲಾ ತುಂಬಾ ಕಷ್ಟ ಪಟ್ಟರು.ನಂಬಿದವರು ಕೈಕೊಟ್ಟು  ಇದ್ದ ಆಸ್ತಿಯೂ ಹೋಯಿತು .

                ಪಶುಪತಿ ಶಾಸ್ತ್ರಿ ನನಗಿಂತ  ಒಂದು ವರ್ಷ ಜೂನಿಯರ್ .ಕಲಿಯುವಿಕೆಯಲ್ಲಿ  ಜಾಣ .ಹೈ ಸ್ಕೂಲ್  ಕನ್ಯಾನ ದಲ್ಲಿ .ನನ್ನ ಹಳೆಯ ಪಠ್ಯ ಪುಸ್ತಕ ಅವನಿಗೆ . ಮುಂದೆ ಕಲಿಯುವಿಕೆ ಹೇಗೇ?ಅಜ್ಜನ ಮನೆಯಾದ ನಮ್ಮಲ್ಲಿ ಕೂಡಾ ಪಾಲು ಆಗಿ ತುಂಬಾ ಕಷ್ಟದಲ್ಲಿ  ಇದ್ದೆವು . ಪಶುಪತಿಯ ಅಕ್ಕ ಪುಂಡಿಕಾಯಿ ಲಕ್ಷ್ಮಿ ಅಮ್ಮ (ಪ್ರೀತಿಯಿಂದ ಕರೆಯುವುದು ಅಕ್ಕಯ್ಯ ಅತ್ತಿಗೆ )ತಮ್ಮನ ಪದವಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಂಡರೆ .ಬಿ ಎಡ್ ಮಾಡಲು  ಶ್ರೀ ಎನ್ ಟಿ ಭಟ್ ಸಹಾಯ ಮಾಡಿದರು .ಪುಂಡಿಕಾಯಿ ಲಕ್ಷ್ಮಿಅಕ್ಕನ ಮಗ ವೆಂಕಟರಮಣ ಭಟ್ ಹನುಮ ಲೈವ್ ಕಾಸೆಟ್ ಎಂಬ ಹೆಸರಿನಲ್ಲಿ ಹಲವು ಯಕ್ಷಗಾನ ಪ್ರಸಂಗಗಳ ಸಿ ಡಿ , ಡಿ ವಿ ಡಿ  ಹೊರ ತಂದಿದ್ದಾರೆ.

ಪಶುಪತಿ ಮುಂದೆ ಕಲ್ಲ ಮುಂಡ್ ಕೂರ್  ಸರ್ವೋದಯ ಹೈ ಸ್ಕೂಲ್ ನಲ್ಲಿ ಅಧ್ಯಾಪಕನಾಗಿ ಸೇರಿ ಮುಖ್ಯೋಪಾಧ್ಯಾಯನಾಗಿ ನಿವೃತ್ತಿ ಹೊಂದಿದರು .ಕಟೀಲಿಗೆ ಸಮೀಪ ಮನೆ ಮಾಡಿಕೊಂಡು ಇದ್ದಾರೆ. ಇವರಿಗೂ ಪರಂಪರಾಗತ ಯಕ್ಷಗಾನ ಆಸಕ್ತಿ .ಒಳ್ಳೆಯ ಅರ್ಥಧಾರಿಗಳು .ವೇಷವನ್ನೂ ಹಾಕಿದ್ದಾರೆ . ಕಟೀಲಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ  ಸಕ್ರಿಯ .ಜತೆಗೆ ಮಲ್ಲಿಗೆ ಕೃಷಿ ಕೂಡಾ ಇದೆ .

ಇವರ ಮಗಳು ಸಾವಿತ್ರಿ ಶಾಸ್ತ್ರಿ ತಾಳಮದ್ದಳೆ ಅರ್ಥಗಾರ್ತಿ . ಅವಳ ಪತಿ ಅರ್ಜುನ್ ಭಾರದ್ವಾಜ್ ಇತ್ತೀಚೆಗಷ್ಟೇ ಎ ಆರ್ ಕೃಷ್ಣ ಶಾಸ್ತ್ರಿ ಅವರ ವಚನ ಭಾರತವನ್ನು ಇಂಗ್ಲಿಷ್ ಗೆ ಅನುವಾದಿಸಿ ಪ್ರಕಟಿಸಿದ್ದಾರೆ . 

ಬದುಕಿನಲ್ಲಿ ಬಂದ ಬವಣೆಗಳನ್ನು ಮೆಟ್ಟಿ ನಿಂತು ಒಳ್ಳೆಯ ಜೀವನ ಕಟ್ಟಿ ಕೊಂಡ ಇವರ ಬಗ್ಗೆ ನಮಗೆ ಹೆಮ್ಮೆ .

ಇವರ ಅಕ್ಕಂದಿರು  ಮದುವೆಯಾಗಿ ಊರಿನಲ್ಲಿ ನೆಲೆಸಿದ್ದರೆ ತಂಗಿ ಭಾರ್ಗವಿ ಮೊದಲು ಸಕಲೆಶಪುರ ಹಾರ್ಲೆಯಲ್ಲಿ ಇದ್ದು ಈಗ ಕೊಡಗಿನಲ್ಲಿ ನೆಲೆಸಿದ್ದಾರೆ.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ