ಬೆಂಬಲಿಗರು

ಗುರುವಾರ, ಏಪ್ರಿಲ್ 14, 2022

ರೈತ ಬಂಧು ಪೂವಣಿ ನಾಯ್ಕ್ ಅಂಡ್ ಸನ್ಸ್

 

                                              



ಪುತ್ತೂರು ಸುಳ್ಯ ಬಂಟ್ವಾಳ ,ಕಾಸರಗೋಡು ತಾಲೂಕಿನ ರೈತರಿಗೆ ಅಪತ್ಬಾಂಧವ  ಆಗಿದ್ದವರು ಪೂವಣಿ ನಾಯ್ಕ್ .

ಪುತ್ತೂರು ಪರ್ಲಡ್ಕ ನಿವಾಸಿಯಾದ ಇವರು ಸ್ವಯಂ  ಕೃಷಿ ಯಂತ್ರಗಳ ದುರಸ್ತಿ ಕಲಿತು ತನ್ಮೂಲಕ ಅದರ ಪ್ರಯೋಜನ ಸಮಾಜಕ್ಕೆ ತಲುಪಿಸಿದವರು . ಹಿಂದೆ ಎಲ್ಲಿ ಪಂಪ್ ಕೆಟ್ಟರೂ ಪೂವಣಿಯವರ ಅಂಗಡಿ . ಇವರು ನೀಲಿ ಬಟ್ಟೆ ; ಬಟ್ಟೆ ಮೈಗೆ ಎಲ್ಲಾ ಆಯಿಲ್ ಗ್ರೀಸ್ ಲೇಪನ .ಬಿಡುವಿರದ ಕೆಲಸ .ಎಲ್ಲರಿಗೂ ಕೂಡಲೇ ಆಗಬೇಕು .ದೂರ ದೂರದ ಹಳ್ಳಿಯಿಂದ ಬರುವ ಗಿರಾಕಿಗಳು . ಕೆಲವೊಮ್ಮೆ ಮಧ್ಯ ರಾತ್ರಿಯ  ವರೆಗೂ ಕೆಲಸ . 

ಪೂವಣಿಯವರ ಸಹೋದರ ನಾರಾಯಣ ನಾಯ್ಕ್ ಕೂಡಾ ಸಾಥ್ .ಈಗ ಎರಡನೇ ತಲೆಮಾರಿನ ವೇಣುಗೋಪಾಲ್ ಇದ್ದಾರೆ. ಕಾರ್ಯ ವ್ಯಾಪ್ತಿ ಹಿಗ್ಗಿದಂತೆ  ವಿವಿಧ ಕೃಷಿ ಯಂತ್ರಗಳೂ ಬರಲು ಆರಂಭಿಸಿದವು . ಆದ್ದರಿಂದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಕಾರ್ಯಾಗಾರ ಆರಂಭಿಸಿದ್ದಾರೆ .

ಹಿಂದೆ ಡಾ ಸುಂದರ ರಾಯರು ಮುಟ್ಟಿದರೆ ಸಾಕು ಯಾವ ಕಾಯಿಲೆ ಇದ್ದರೂ ಪರಿಹಾರ ಆಗುವುದು ಎಂಬ ಭರವಸೆ ಇತ್ತು . ಅದೇ ತರಹ ಪೂವಣಿ ಯವರ ಬಳಿ ಹೋದರೆ ಯಾವುದೇ ಪಂಪ್ ಶೀಘ್ರ ಜೀವಕ್ಕೆ ಬರುವುದು ಎಂದು ರೈತರಲ್ಲಿ ನಂಬಿಕೆ .

ಇವರು ಯಾವಾಗಲೂ ಬೇಡಿಕೆಯಲ್ಲಿ ಇದ್ದವರು ಆದರೂ ದಿಢೀರ್ ಅದರ ಆರ್ಥಿಕ ರೂಪ ಗಳಿಸಿದಂತೆ ಇಲ್ಲ . ಸಮಾಜಕ್ಕೆ  ಆವಶ್ಯಕ ಸೇವೆಯನ್ನು ಸಲ್ಲಿಸಿದ ಮತ್ತು ಸಲ್ಲಿಸುತ್ತಿರುವ ಇವರ ಕುಟುಂಬವನ್ನು ನೆನೆಸಿಕೊಳ್ಳುವುದು ನಮ್ಮ ಕರ್ತವ್ಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ