ಬೆಂಬಲಿಗರು

ಬುಧವಾರ, ಏಪ್ರಿಲ್ 27, 2022

ಡಾ ವೈ ಆರ್ ಮೋಹನ್

 

 

                                     


 ಮಲೆನಾಡಿನ ಒಂದು ಕುಗ್ರಾಮದಲ್ಲಿ ಜನಿಸಿ ಎಲ್ಲಾ ಅಡೆ ತೊಡೆಗಳನ್ನು ಎದುರಿಸಿ ತತ್ವ ಶಾಸ್ತ್ರದಲ್ಲಿ ಉನ್ನತ ಅಧ್ಯಯನ ಮಾಡಿ ಅಮೆರಿಕಾ ದೇಶದಲ್ಲಿ ಅಧ್ಯಾಪನ ಮಾಡಿದವರು ಡಾ ವೈ ಆರ್ ಮೋಹನ್ .ಅವರ ಆತ್ಮ ಚರಿತ್ರೆ "ನೆನೆವುದೆನ್ನ ಮನ ಮಲೆನಾಡ ಮೈತ್ರಿಯನು "ಮತ್ತು "ನೆನಪುಗಳು " ಎಂಬ ಎರಡು ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದು ,ಯು ಆರ್ ಅನಂತ ಮೂರ್ತಿ ಮುನ್ನುಡಿ ಬರೆದಿದ್ದಾರೆ .ಇತಿಹಾಸದ ಸಂಧಿ ಕಾಲದಲ್ಲಿ ಕಳೆದ ಅವರ ಬಾಲ್ಯ ಮತ್ತು ಯೌವನ ದಿನಗಳು ರೋಚಕವಾಗಿವೆ .ಅವರ ಮೈಸೂರು ದಿನಗಳು ,ಒಳ್ಳೆಯ ಅಧ್ಯಾಪಕರು ಮುಖ್ಯವಾಗಿ ಅವರ ಮೇಲೆ ಬಹಳ ಪ್ರಭಾವ ಬೀರಿದ ಪ್ರೊಫ್ .ಯಮುನಾಚಾರ್ಯ ಬಗ್ಗೆ ಆಪ್ತವಾದ ವಿವರಗಳು ಇವೆ . 

ಇವರು ಪಾರ್ಕಿನ್ಸನ್ ಕಾಯಿಲೆಗೆ ಗುರಿಯಾಗಿ ಬಹಳ ಕಷ್ಟ ಪಡಬೇಕಾಯಿತು .ಈ ಕಾಯಿಲೆಯ ಬಗ್ಗೆಯೇ ಒಂದು ಕೃತಿ ರಚಿಸಿದ್ದಾರೆ . 

 ತಮ್ಮ ಮಾಧ್ಯಮಿಕ ಶಾಲೆಯ ಪ್ರವಚನ ಬಗ್ಗೆ ಇವರು ವಿವರವಾಗಿ ಒಂದು ಅಧ್ಯಾಯ ಬರೆದಿದ್ದಾರೆ . 

ತಮ್ಮ ಕನ್ನಡ ಅಧ್ಯಾಪಕರು ಕೋಳೂರ ಕೊಡಗೂಸು ಪದ್ಯ ಕಲಿಸಿದ ಮೇಲೆ ಗಂಟೆ ಬಾರಿಸಿದಾಗ ಹುಡುಗರು ಜೈಲಿನಿಂದ ತಪ್ಪಿಸಿ ಕೊಳ್ಳುವವರಂತೆ  ಹೊರಗೆ ಧಾವಿಸಿ ನುಗ್ಗುತ್ತಿದ್ದರು . ಆ ಒಂದು ಪದ್ಯ ಕಲಿಸಲು ಅವರಿಗೆ ಎಷ್ಟೋ ಕಾಲ ಹಿಡಿಯಿತು .ಅದನ್ನು ಮುಗಿಸುವ ಹೊತ್ತಿಗೆ ನಮ್ಮ ಕನ್ನಡ ಆಸಕ್ತಿ ಕಮರಿ ಹೋಗಿತ್ತು .ಕತೆಯಲ್ಲಿ  ಕೊಡಗೂಸು ಮಲತಾಯಿಯ ಶಿಕ್ಷೆಗೆ ಹೆದರಿ ಶಿವನನ್ನು ಪ್ರಾರ್ಥಿಸುತ್ತಾ ಪ್ರಾಣ ಬಿಡುತ್ತಾಳೆ .ಆಗ ಶಿವ ಪ್ರತ್ಯಕ್ಷನಾಗಿ ಎಲ್ಲಾ ಮಂಗಳ ಕರವಾಗಿ ಮುಕ್ತಾಯವಾಗುತ್ತದೆ .ನನ್ನ ಸಹಪಾಠಿ ಶಿವ ಮೂರ್ತಿ ಕೊಡಗೂಸು ಪ್ರಾಣ ಕಳೆದು ಕೊಳ್ಳಲಿಲ್ಲ .ನಮ್ಮ ಮೇಷ್ಟ್ರು ಕೊಡಗೂಸನ್ನು ಕೊಂದು ಹಾಕಿದರು ಎಂದ .ನನಗನಿಸಿದ್ದು ಈ ಮೇಷ್ಟ್ರು ಕೊಡಗೂಸಿನ ಜತೆ ಕನ್ನಡವನ್ನೂ ಕೊಂದು ಹಾಕಿದರು ಎಂದು . 

ಕನ್ನಡ ಮೇಷ್ಟ್ರ ಕತೆ ಈ ರೀತಿ ಆದರೆ ಇಂಗ್ಲಿಷ್ ಮೇಷ್ಟರದು ಇನ್ನೊಂದು ವೈಪರೀತ್ಯದ ಪರಮಾವಧಿ ಆಗಿತ್ತು .

ಅವರ ಪಾಠ ಕ್ರಮದ ಉದಾಹರಣೆ ಹೀಗಿತ್ತು

 I say silence ,silence. you see this is class room ;not fish market,i say,do you understand?

'You see ,English is very important.In today's society .you see .If you don't know English ,your bean doesn't get baked(ನಿಮ್ಮ ಬೇಳೆ ಬೇಯದು) ,you understand?  .

You see ,English is very very difficult !You see ,don't think learning English is as easy as peeling plantain and putting in mouth I say'(ಬಾಳೆಹಣ್ಣು ಸುಲಿದು ತಿಂದಂತೆ ಅಲ್ಲ )

ಇನ್ನೂ ಕೆಲವು ಸಾಲುಗಳು 

I say you are a village simpleton!You see you listen to Ramayana all night and in the morning ask what is Rama's relation to Sita!

I see that's why you look like one who took castor oil (ಹರಳೆಣ್ಣೆ ಕುಡಿದವನ ಮುಖ ).

Teacher:I say ,I simply asked whether you saw anything .You see ,if someone shouts pumpkin-thief ,you touch and feel your shoulders!(ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿದನಂತೆ )

Now say what is the plural form of sheep?Student:Sheeps saar !

Teacher :That includes you also !Useless fellow.I feel like warming your palm.(ಕೈ ಬಿಸಿ ಮಾಡಬೇಕು )

ಮಕ್ಕಳಲ್ಲಿ ಕುತೂಹಲ ಹುಟ್ಟಿಸಿ ಚೆನ್ನಾಗಿ ಪಾಠ ಮಾಡುತ್ತಿದ್ದವರು ಭೂಗೋಳ ಅಧ್ಯಾಪಕರು ಮಾತ್ರ ಎಂದು ನೆನಪಿಸಿ ಕೊಳ್ಳುತ್ತಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ