ಬೆಂಬಲಿಗರು

ಮಂಗಳವಾರ, ಏಪ್ರಿಲ್ 19, 2022

ಪುಂಡಿಕಾಯಿ ಒಪ್ಪಣ್ಣ ಮಹಾತ್ಮೆ

                                  


 ನಾನು ಮೊನ್ನೆ ನನ್ನ ಅಕ್ಕಯ್ಯ ಅತ್ತಿಗೆ ಬಗ್ಗೆ ಬರೆದಿದ್ದೆ .ಅವರ ಎರಡನೇ ಮಗ  ಪಿ ಕೆ ವೆಂಕಟ ರಮಣ ಭಟ್ .ನಾವು ಎಲ್ಲಾ ಪ್ರೀತಿಯಿಂದ ಒಪ್ಪಣ್ಣ  ಎಂದು ಕರೆಯುವುದು . 

ಇವರ ಒಂದು ವಿಶೇಷ ಇದೆ .ತನಗೆ ಏನಾದರೂ ಅನಾರೋಗ್ಯ ಆದರೆ ಅನಾದರ  ಮಾಡುಯವರು .ಆದರೆ ತಮ್ಮ ಮನೆಯ ಕಾರ್ಮಿಕರಿಗೆ  ,ನೆರೆಕರೆಯವರಿಗೆ ಮತ್ತು ಬಂಧು ಮಿತ್ರರಿಗೆ ಕಾಯಿಲೆ ಬಂದರೆ  ಕೂಡಲೇ ನನಗೆ ಫೋನ್ ಮಾಡಿ ತಿಳಿಸಿ ಸಾಧ್ಯವಾದರೆ ತಾವೇ ಆಸ್ಪತ್ರೆಗೆ ಕರೆದು ತರುವರು . ಇವರ ಸಹಾಯಹಸ್ತಕ್ಕೆ  ಜಾತಿ ಮತ ಭೇದ ಇಲ್ಲ .

ಇವರು ಒಬ್ಬ ಪ್ರಗತಿಪರ ಕೃಷಿಕರು ,ಕೃಷಿ ಉತ್ಪನ್ನ  ವ್ಯಾಪಾರಿ ,ಎಲ್ಲಕ್ಕೂ ಮಿಗಿಲಾಗಿ  ಜನಪ್ರಿಯವಾದದ್ದು  ಇವರ ಕಲಾ ಪೋಷಕ ರಾಗಿ . ಸ್ವಯಂ ಹವ್ಯಾಸಿ ಯಕ್ಷಗಾನ  ಕಲಾವಿದರಾದ ಇವರು  ಕೋಡಪದವು ಯಕ್ಷೋತ್ಸವ ದ ರೂವಾರಿ . ಹನುಮ ಲೈವ್ ಕಾಸೆಟ್ ಎಂಬ ಹೆಸರಿನಲ್ಲಿ   ಶೇಣಿ ,ಸಾಮಗ ರಂತಹ ಘಟಾನುಘಟಿ ಗಳೂ ಸೇರಿ ಹಲವು ತೆಂಕು ಮತ್ತು ಬಡಗು ತಿಟ್ಟು ಕಲಾವಿದರ ತಾಳ ಮದ್ದಳೆ ಮತ್ತು ಯಕ್ಷಗಾನಗಳ ಸಿ ಡಿ ಗಳನ್ನು ಹೊರತಂದು   ,ರಸಿಕರಿಗೆ ಕೊಡಮಾಡಿದ್ದು ,ಕಲಾವಿದರಿಗೆ  ಆರ್ಥಿಕ ಮೂಲ ಅದುವಲ್ಲದೆ ಒಂದು ವಿದ್ಯುನ್ಮಾನ ಆಕರ ಆಗಿವೆ .ಈಗ ಜನಪ್ರಿಯ ಆಗಿರುವ  ಯಕ್ಷ ಗಾನ ನಾಟ್ಯ ವೈಭವ ಪ್ರಾಕಾರವನ್ನು  ಆರಂಭಿಸಿದ ಶ್ರೇಯ ಇವರಿಗೆ ಕೂಡಾ  ಸೇರ ಬೇಕು ಎಂದು ಅಭಿಮಾನಿಗಳು ಹೇಳುತ್ತಾರೆ . 

ಭಕ್ತಿ ಗೀತೆ,ನಾಟಕಗಳ ಧ್ವನಿ ಮುದ್ರಿಕೆ ಗಳೂ ಇವರ ತಯಾರಿಯಲ್ಲಿ ಹೊರ ಬಂದಿವೆ . ಇವರ ಕಲಾ ಪ್ರೇಮ ಹಿರಿಯರಿಂದ (ತಾಯಿ ತಂದೆಯವರ  ಮೂಲದಿಂದ )ಬಳುವಳಿಯಾಗಿ ಬಂದುದು .ಹಲವು ಯಕ್ಷ ವೇದಿಕೆಗಳಲ್ಲಿ ಇವರಿಗೆ ಪ್ರೀತಿಯಿಂದ ಸನ್ಮಾನ ಮಾಡಿದ್ದಾರೆ . 

ಅಮ್ಮನ ಅಗಲುವಿಕೆಯಿಂದ ಮತ್ತು  ಕಾರ್ಯ ಬಾಹುಳ್ಯ ಯದಿಂದ ಕೊಂಚ ಕುಗ್ಗಿದ್ದಾರೆ . ಇವರು ಆರೋಗ್ಯದಿಂದ ಇದ್ದು ,ಹಿಂದಿನಂತೆ ತಮ್ಮ ಕಲಾ  ಮತ್ತು ಸಮಾಜ ಸೇವೆ ಮುಂದು ವರಿಸಲಿ . 

ಬಾಲಂಗೋಚಿ : ಒಪ್ಪಣ್ಣನ   ಸಹೋದರರೂ  ಹವ್ಯಾಸಿ ಯಕ್ಷಗಾನ ಕಲಾವಿದರು . ಇತ್ತೀಚಿಗೆ ಬಿಡುಗಡೆ ಆದ ಸೂರಿ ಕುಮೇರು ಗೋವಿಂದ ಭಟ್ ಅವರ ಎಪ್ಪತ್ತು ತಿರುಗಾಟಗಳು ಪುಸ್ತಕದಲ್ಲಿ ತಾವು ಕಾಸೆಟ್ ಮಾರಾಟ ಮಾಡಿ ಕಿಂಚಿತ್ ಸಂಪಾದನೆ ಮಾಡಿದ ಬಗ್ಗೆ  ಮತ್ತು ಕೋಡಪದವು ಯಕ್ಷೋತ್ಸವ ಬಗ್ಗೆ ಉಲ್ಲೇಖಿಸಿದ್ದಾರೆ.




 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ