ಬೆಂಬಲಿಗರು

ಗುರುವಾರ, ಏಪ್ರಿಲ್ 14, 2022

ಅಕ್ಕಯ್ಯ ಅತ್ತಿಗೆ


 ಮೊನ್ನೆ ಆರಕ್ಕೆ ನಮ್ಮ ಪ್ರೀತಿಯ ಅಕ್ಕಯ್ಯ ಅತ್ತಿಗೆ ವಯೋ ಸಹಜ ಸಮಸ್ಯೆಗಳಿಂದ ತೀರಿ ಕೊಂಡರು. ಅವರ ಹೆಸರು ಲಕ್ಷ್ಮಿ ಅಮ್ಮ .ನಾವೆಲ್ಲಾ ಕರೆಯುತ್ತಿದ್ದುದು ಅಕ್ಕಯ್ಯ ಎಂದು . ನಮ್ಮ ಶಿರಂಕಲ್ಲು  ಸೋದರ ಅತ್ತೆಯ ಮಗಳು . ಅವರ ತಂದೆ ಮೂಲತಃ ನೀರ್ಕಜೆ ಯವರು . ಅಕ್ಕಯ್ಯ ಅತ್ತಿಗೆ ಎಳವೆಯಲ್ಲಿಯೇ ಪುಂಡಿಕಾಯಿ ಕೃಷ್ಣ ಭಟ್ ಅವರನ್ನು ಮದುವೆ ಆಗಿ  ಬಂದವರು . ಒಂದು ಹೆಣ್ಣು ಮಗು ದುರ್ಗಾ ಪರಮೇಶ್ವರಿ ,ಮೂರು ಗಂಡು ಮಕ್ಕಳು ,ಈಶ್ವರ ಭಟ್ ,ವೆಂಕಟ್ರಮಣ ,ರಾಮ ಮೋಹನ -(ಕ್ರಮವಾಗಿ ಒಪ್ಪಕ್ಕ ,ಬಂಗಾರು ,ಒಪ್ಪಣ್ಣ ಮತ್ತ್ತು ಒಪ್ಪಿ )

ಅಕ್ಕಯ್ಯ ಅತ್ತಿಗೆಯ ಗಂಡ  ಬೇಗನೇ ತೀರಿ ಕೊಂಡು ಮನೆಯ ಉಸ್ತುವಾರಿ ,ಮಕ್ಕಳನ್ನು ಒಂದು ಹಂತಕ್ಕೆ ತರುವ ಜವಾಬ್ದಾರಿ ಯಶಸ್ವಿಯಾಗಿ ಹೊತ್ತವರು .ಮೃದು ಭಾಷಿಯಾಯದ ಅವರಿಗೆ ಬಂಧು ಬಳಗ ದವರಲ್ಲಿ ಅತೀವ ಪ್ರೀತಿ .ನಾವು ಅವರ ಸೋದರ ಮಾವಂದಿರ ಮಕ್ಕಳು ಎಂದು ಹೆಮ್ಮೆ ,ಅಜ್ಜನ ಮನೆಯ ಮೇಲೆ ಕುಂದದ ಪ್ರೀತಿ . 

ಅವರ ತಮ್ಮ ಈಗ ಅಧ್ಯಾಪನ ಮತ್ತು ಯಕ್ಷ ಲೋಕದಲ್ಲಿ ಹೆಸರು ಮಾಡಿರುವ ಪಶುಪತಿ ಶಾಸ್ತ್ರೀ .ಇವರ ಏಳಿಗೆಯಲ್ಲಿ ಈ ಅಕ್ಕನ ಪಾತ್ರ ಬಹಳ ಮುಖ್ಯ . 

ಮಕ್ಕಳು ಯಕ್ಷಗಾನ ಕಲಾ ಪೋಷಕರಾಗಿದ್ದು ,ಕೋಡಪದವಿನ  ಯಕ್ಷೋತ್ಸವ ದ  ರೂವಾರಿಗಳು .ವೆಂಕಟ್ರಮಣ ಭಟ್ ಹನುಮ ಲೈವ್ ಕ್ಯಾಸ್ಸೆಟ್ಸ್ ಎಂಬ ಹೆಸರಿನಲ್ಲಿ ಹಲವು ತಾಳಮದ್ದಳೆ ,ಮತ್ತು ಯಕ್ಷಗಾನ  ಮತ್ತು ಭಕ್ತಿ ಗೀತೆಗಳ ಸಿ ಡಿ ಗಳನ್ನು ಹೊರ ತಂದಿದ್ದು ಜನಪ್ರಿಯವಾಗಿದ್ದವು . ಕಲಾವಿದರಿಗೂ ಆರ್ಥಿಕ ವಾಗಿ ಒಂದು ಸಹಾಯ ಆಗುತ್ತಿತ್ತು . ಸೂರಿ ಕುಮೇರು ಗೋವಿಂದ ಭಟ್ಟರ ೭೦ ತಿರುಗಾಟಗಳು ಪುಸ್ತಕದಲ್ಲಿ ಇವರ ಉಲ್ಲೇಖ ಇದೆ . 

ನಾನು ವೈದ್ಯ ಬಂಧುವಾದ್ದರಿಂದ ನನ್ನ ಮೇಲೆ ವಿಶೇಷ ಅಕ್ಕರೆ ,ಅವರಿಗೆ ಮತ್ತು ಅವರ ಮನೆಯವರಿಗೆ ಕಿಂಚಿತ್ ಸೇವೆ ಸಲ್ಲಿಸಲು ಸಿಕ್ಕಿದ್ದು ನನ್ನ ಭಾಗ್ಯ . 

ಅವರ ನೆನಪಿಗೆ ನೂರು ಪ್ರಣಾಮಗಳು

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ