ಬೆಂಬಲಿಗರು

ಬುಧವಾರ, ಏಪ್ರಿಲ್ 13, 2022

ನರದ ಬಗ್ಗೆ ನರರಲ್ಲಿ ಒಂದು ಗೊಂದಲ

 

ಈ ನರ ಜನ್ಮವೇ ಒಂದು ಗೊಂದಲದ ಗೂಡು .ಇದನ್ನು ಇನ್ನಷ್ಟು ಗೋಜಲು ಮಾಡಲು ನರರಲ್ಲಿ ಹಲವು ನರಗಳು.ಇವುಗಳ ಮತ್ತು ಇವುಗಳ ರೋಗಗಳ ಬಗ್ಗೆ ಸ್ಪಷ್ಟತೆ ಇರಬೇಕು .ಇಲ್ಲವಾದರೆ ಪೇಚಿಗೆ ಒಳಗಾಗುವುದು ಅಲ್ಲದೇ ಸುಮ್ಮನೇ ಹಣ ಮತ್ತು ಸಮಯ ಕಳೆದು ಕೊಳ್ಳ ಬೇಕಾಗುವುದು .

ನಮ್ಮಲ್ಲಿ  ನರಾಂಗ ವ್ಯೂಹ ಇದ್ದು ,ಮೆದುಳಿನಲ್ಲಿ ಮುಖ್ಯ  ಕಚೇರಿ ,ಅದರ ಸಂದೇಶ ವಾಹಕ  ಮತ್ತು  ಸಂಗ್ರಾಹಕ  ನರಗಳು  ನಖ ಶಿಖಾಂತ ಇವೆ .ಇನ್ನೂ ಕೆಲವು ನರಗಳು ಮೆದುಳಿನಿಂದ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವವು ಇವೆ . ಮೆದುಳಿನ ಕಾಯಿಲೆಗಳಾದ ಮೆದುಳಿನ ಆಘಾತ (ಸ್ಟ್ರೋಕ್ ,ಪಕ್ಷವಾತ ಉಂಟು ಮಾಡುವಂತಹವು ),ಮೆದುಳಿನ ಗಡ್ಡೆ ,ಅಪಸ್ಮಾರ ಇತ್ಯಾದಿ ಗಳಿಂದ ಹಿಡಿದು ,ನರಕೋಟಲೆ (ಸರ್ಪ ಸುತ್ತು ), ಇತ್ಯಾದಿ ಗಳು  ನರ ರೋಗ ಶಾಸ್ತ್ರದಲ್ಲಿ ಒಳಗೊಂಡಿವೆ . ಇವುಗಳ  ತಜ್ನರಿಗೆ ನ್ಯೂರೋಲೋಜಿಸ್ಟ್ ಎಂದು ಕರೆಯುವರು .

ವಾಡಿಕೆಯಲ್ಲಿ ರಕ್ತ ನಾಳಕ್ಕೂ ನರ ಎಂದು ಕರೆಯುವರು. ಕಾಲಿನಲ್ಲಿ ಅಭಿದಮನಿ ರಕ್ತ ನಾಳಗಳು  ಉಬ್ಬಿದ ರೋಗಕ್ಕೆ  ವೇರಿಕೊಸ್ ವೆಯಿನ್ ಎನ್ನುವರು .ಇವುಗಳ ಚಿಕಿತ್ಸೆ ಮಾಡುವುದು  ಶಸ್ತ್ರ ಚಿಕಿತ್ಸಾ ತಜ್ನರು ಅಥವಾ ಸರ್ಜನ್ . ಅದೇ ರೀತಿ ಇತರ ರಕ್ತ ನಾಳಗಳ ಚಿಕಿತ್ಸೆ  ಕೂಡಾ. ಈ ತರಹ  ರೋಗ ಇರುವವರು  ಆಸ್ಪತ್ರೆಗೆ ಫೋನ್  ಮಾಡಿ ನರ ರೋಗ ತಜ್ನರ  ಅಪಾಯಿಂಟ್ ಮೆಂಟ್ ಬುಕ್ ಮಾಡುವರು .ದೊಡ್ಡ ಆಸ್ಪತ್ರೆಗಳಲ್ಲಿ  ಮೊದಲೇ ಸಲಹಾ ಫೀಸ್ ಪಾವತಿ  ಮಾಡಿ ಕಾಯ ಬೇಕು .ಕಡೆಗೆ ತಮ್ಮ  ಸರದಿ ಬಂದಾಗ  ವೈದ್ಯರು  ನರ ರೋಗ ಏನೂ ಇಲ್ಲ ,ಸರ್ಜನ್ ಗೆ ತೋರಿಸಿ ಎಂದು ಚೀಟಿ ಕೊಡುವರು .ಅಲ್ಲಿ ಪುನಃ ಕಾದು ಹಣ ಕಟ್ಟಿ  ತೋರಿಸಬೇಕು . ಇದೇ ತರಹ  ಗಂಟು ನೋವು , ಉಳುಕು ಇತ್ಯಾದಿಗಳಿಗೂ ನರ ಡಾಕ್ಟ್ರು ಇದ್ದರಾ ಎಂದು ಕೇಳಿ ಕೊಂಡು ಬರುತ್ತಾರೆ .ವಾಸ್ತವದಲ್ಲಿ  ಒರ್ಥೋ ಪೇಡಿಶಿಯನ್ ಅಥವಾ ಮೂಳೆ ತಜ್ಜ್ನರನ್ನು ನೋಡ ಬೇಕು .

ಈ ಎಲ್ಲಾ ಗೊಂದಲ  ತಡೆಗಟ್ಟಲು ಒಳ್ಳೆಯ  ವಿಶ್ವಾಷಾರ್ಹ ಕುಟುಂಬ ವೈದ್ಯರ ಲ್ಲಿ ತೋರಿಸಿ ಅವರು ಸಲಹೆ ಮಾಡಿದ ತಜ್ನರಲ್ಲಿ ಹೋಗುವುದು ಉತ್ತಮ .ತುರ್ತು ಸಂದರ್ಭಗಳಲ್ಲಿ  ಆಸ್ಪತ್ರೆಯ ತುರ್ತು ವಿಭಾಗಕ್ಕೆ ಹೋದರೆ ಅವರೇ  ಯೋಗ್ಯ ವೈದ್ಯರನ್ನು ಕರೆಸುವರು .

ಇನ್ನು ಕೊಳ್ಪು (ಹೃದಯಾಘಾತ ,ಉಳುಕು ,ಮೂತ್ರ ಕಲ್ಲು ಎಲ್ಲವಕ್ಕೂ ಅನ್ವಯ ),ವಾತ  ಎಂಬ ಅಸ್ಪಷ್ಟ ರೋಗ ಲಕ್ಷಣ ಇರುವವರು ಕೂಡಾ ಫ್ಯಾಮಿಲಿ ದಾಕ್ಟ್ರ ಸಲಹೆ ಮೇರೆಗೆ ಮುಂದುವರಿಯುವುದು ಒಳ್ಳೆಯದು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ