ಬೆಂಬಲಿಗರು

ಶನಿವಾರ, ಆಗಸ್ಟ್ 29, 2020

ಓದದಿದ್ದರೆ ಕಳೆದು ಹೋಗು ತ್ತಿದ್ದ ಕೃತಿ ರತ್ನ

 വേരുകൾ | Verukal by Malayattoor Ramakrishnanಲೋಕ್ ಡೌನ್  ಅವಧಿಯಲ್ಲಿ  ಓದಿದ  ಬಹಳ ಶ್ರೇಷ್ಠ  ಕಾದಂಬರಿ .ಮಲಯಾಳಂ ಭಾಷೆಯಲ್ಲಿ  ವೇರುಕಳ್ ಅಂದರೆ ಬೇರುಗಳು ಎಂಬ ಹೆಸರಿನಲ್ಲಿ ಪ್ರಕಟವಾದ  ಮಲಯಾತ್ತೂರ್  ರಾಮಕೃಷ್ಣನ್ ಅವರ ಪ್ರಸಿದ್ದ ಕಾದಂಬರಿ .

ಕಥಾನಾಯಕ  ರಾಜಧಾನಿಯಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದು ಅವನ ಹೆಂಡತಿ ಶ್ರೀಮಂತರ ಮನೆಯಿಂದ ಬಂದವಳು .ನಗರದಲ್ಲಿ  ಹೊಸ ಮನೆ ಕಟ್ಟುವ  ಉದ್ದೇಶ .ನಾಯಕ ತನ್ನ ಆದಾಯ ಕ್ಕೆ  ಅನುಗುಣವಾದ ಮತ್ತು ವಾಸಕ್ಕೆ ಅವಶ್ಯವಿರುವಷ್ಟು  ದೊಡ್ಡ ಮನೆ ಸಾಕೆಂಬ ಮನೋ ಭಾವನೆಯವನು ;ಹೆಂಡತಿಗೆ ಮಾತ್ರ  ದೊಡ್ಡ ಬಂಗಲೆಯೇ ಬೇಕೆಂಬ ಹಟ. ಹೆಚ್ಚಿನ ವೆಚ್ಚ ಸರಿದೂಗಿಸಲು  ಊರಿನಲ್ಲಿ ಇರುವ ಪಿತ್ರಾರ್ಜಿತ ಆಸ್ತಿ ಮಾರುವಂತೆ  ಅವಳ ಸೂಚನೆ .

ಅದರಂತೆ  ಒಲ್ಲದ ಮನಸ್ಸಿನಲ್ಲಿ  ಊರಿಗೆ ಹೊರಡುತ್ತಾನೆ .ಅಲ್ಲಿ ಅವನ ಪಾಲಿನ ಆಸ್ತಿಯನ್ನು ಸಹೋದರಿಯರು ನೋಡಿಕೊಳ್ಳುತ್ತಿರುತ್ತಾರೆ .ಊರ ಸರಹದ್ದು ಹೊಕ್ಕ ಒಡನೆ  ಕಾದಂಬರಿ ಆರಂಭ . ಊರಿನ ದೇವಸ್ಥಾನ ,ಕೆರೆ ,ತೋಟ ,ತಿರುವುಗಳು ,

ಬಾಲ್ಯದಲ್ಲಿ  ಒಡನಾಡಿದ ವ್ಯಕ್ತಿಗಳು  ಜ್ನಾಪಕ ಚಿತ್ರ ಶಾಲೆಯನ್ನೇ ತೆರೆದಿಡುತ್ತವೆ .

ತನ್ನ ಮನದ ಆಳದೊಳಗೆ ಮಡಿಚಿ ಇಟ್ಟ ಬಾಲ್ಯ ಯೌವನ ದ  ನೋವು ನಲಿವು ,ಕನಸುಗಳು ,ನಿರಾಶೆ ,ಪ್ರೀತಿ ಪ್ರಣಯ ಒಂದೊಂದೇ ತಿರುವಿನಲ್ಲಿ ತೆರೆದಿಡುತ್ತವೆ .ಮನುಷ್ಯನಿನಿಗೆ  ಭೌತಿಕ ಹೇಗೋ  ಮಾನಸಿಕ ಅಸ್ತಿತ್ವ ಮುಖ್ಯ .ಅದರ ಬೇರುಗಳು ತನ್ನ ಹುಟ್ಟಿದ ಊರಿನಲ್ಲಿಯೇ ಇವೆ .ಇದನ್ನು ಮಾರಿದರೆ  ಮೂಲ ಕತ್ತರಿಸಿದಂತೆ ಎಂದು ಆಸ್ತಿ ಮಾರುವ ಯೋಚನೆ ಬದಲಿಸಿ ಮರಳುವ ಕಥೆ .ಮೂಲ ಮಲಯಾಳಂ 

ಕೃತಿಯನ್ನು  ವಿ ಅಬ್ದುಲ್ಲಾ ಸೊಗಸಾಗಿ ಇಂಗ್ಲಿಷ್ ಗೆ ಅನುವಾದಿಸಿದ್ದಾರೆ .

ಮರಗಳಂತೆ ಮನುಷ್ಯನ  ತನ್ನ ತನವೂ ಬೇರುಗಳನ್ನು ಅವಲಂಬಿಸಿ ಅದರ ಮೂಲಕ ಜೀವಿಸುತ್ತದೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ