ಬೆಂಬಲಿಗರು

ಗುರುವಾರ, ಆಗಸ್ಟ್ 13, 2020

ಎಲ್ಲಿಯ ಮೇಸ್ಕೋಮ್ ಎಲ್ಲಿಯ ರಂಗ ರಾವು

ಕರೆಂಟ್ ಬಿಲ್ ನಲ್ಲಿ  ಸ್ವಲ್ಪ ಸಮಸ್ಯೆ  ಇದ್ದುದರಿಂದ  ಮೇಸ್ಕೋಮ್ ಕಚೇರಿಗೆ  ಹೋಗಿದ್ದೆ .ನನ್ನ ಸಮಸ್ಯೆ ಅಳಿಸಿ  ನಿವಾರಣೆ ಆಯಿತು .ಮೊದಲು ಕರ್ನಾಟಕದಲ್ಲಿ  ಇಡೀ ರಾಜ್ಯಕ್ಕೆ  ಒಂದು ಎಲೆಕ್ಟ್ರಿಸಿಟಿ ಬೋರ್ಡ್ ಇತ್ತು .ಅದನ್ನು ಹಲವು ನಿಗಮ ಗಳನ್ನು ಆಗಿ ವಿಂಗ ಡಿಸಿರುವರು . ಅವುಗಳು ಸ್ವಾಯತ್ತ ನಿಗಮಗಳಾಗಿ ಕೆಲಸ ಮಾಡುತ್ತಿವೆ .ಮತ್ತು ಕಾರ್ಯ ಕ್ಷಮತೆಯಲ್ಲಿ  ಗಮನಾರ್ಹ ಸುದಾರಣೆ ಆಗಿದೆ .

ನಮ್ಮ ದೇಶದಲ್ಲಿ  ಇಂದನ ರಂಗದಲ್ಲಿ  ಸುಧಾರಣೆ ಆರಂಬಿಸಿದವರು  ವಾಜಪೇಯಿ ಮಂತ್ರಿ ಮಂಡಲದಲ್ಲಿ  ಆ ಖಾತೆ ಯ  ಸಚಿವರಾಗಿದ್ದ  ರಂಗರಾಜನ್ ಕುಮಾರಮಂಗಲಮ್ ಅವರು . ಇವರ ತಂದೆ ಮೋಹನ ಕುಮಾರಮಂಗಲಮ್ .ತಾಯಿ ಕಲ್ಯಾಣಿ ಮುಖರ್ಜಿ .

ಇವರ ತಾಯಿ ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಆಗಿದ್ದ ಅಜಯ ಕುಮಾರ ಮುಖರ್ಜಿ ಅವರ ಮಗಳು .

ತಂದೆ ಮೋಹನ ಕುಮಾರಮಂಗಲಮ್  ಕಮ್ಯೂನಿಸ್ಟ್  ಚಿಂತಕರು .ಇಂದಿರಾ ಗಾಂಧಿ ಸಂಪುಟದಲ್ಲಿ ಸಚಿವರೂ ಆಗಿದ್ದವರು .ವಿಮಾನ ದುರಂತದಲ್ಲಿ ಮೃತರಾದರು .ಇವರ  ತಂದೆ  ಸುಬ್ಬರಾಯಣ್  , ತಮಿಳನಾಡು ಸೇಲಂ ಸಮೀಪದ  ಕುಮಾರಮಂಗಲಮ್ ಎಂಬಲ್ಲಿ  ಭಾರೀ ಜಮೀಂದಾರರು.ಮುಂದೆ ಸ್ವಲ್ಪಕಾಲ ಮದ್ರಾಸ್ ಪ್ರಾಂತ್ಯದ ಮುಖ್ಯ ಮಂತ್ರಿಯೂ ಆಗಿದ್ದವರು.ಮುಂದೆ ಸ್ವತಂತ್ರ ಭಾರತದಲ್ಲಿ  ಮಹಾರಾಷ್ಟ್ರ ದ   ರಾಜ್ಯಪಾಲ ರೂ ಆಗಿದ್ದರು .

ಕುದ್ಮಲ್ ರಂಗ ರಾಯರು  ಮಂಗಳೂರು ನಾಗರಿಕರಿಗೆ  ಎಂದೂ ನೆನಪಿನಲ್ಲಿ  ಇಟ್ಟು ಕೊಳ್ಳ ಬೇಕಾದ ಮಹಾನುಭಾವರು .(1859-1928) .ದಲಿತರು ಮತ್ತು ಮಹಿಳೆಯರ ಏಳಿಗೆಗೆ ಮತ್ತು ಶಿಕ್ಷಣಕ್ಕೆ  ತಮ್ಮ ತನು ಮನ ಧನ ಮುಡಿಪಿಟ್ಟವರು .ಅವರ ಮಗಳು ರಾಧಾದೇವಿ .ಬಾಲ ವಿಧವೆಯಾದ ಅವರನ್ನು ಮದ್ರಾಸ್ ನಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ  ಕಳುಹಿದರು.ಅಲ್ಲಿ  ಶ್ರೀ ಸುಬ್ಬರಾಯನ್ ಪರಿಚಯ ಆಗಿ ಅವರನ್ನು ವಿವಾಹ  ಆದರು.

ಈ ದಂಪತಿಗಳಿಗೆ  ನಾಲ್ವರು ಮಕ್ಕಳು .ಮೊದಲನೆಯವರು  ಭಾರತದ  ಭೂಸೇನೆ ಮುಖ್ಯಸ್ಥ ರಾಗಿದ್ದ  ಪಿ ಪಿ ಕುಮಾರ ಮಂಗಲಮ್ .ಮೂರನೆಯವರು  ಮೇಲೆ ಹೇಳಿದ ಮೋಹನ ಕುಮಾರ ಮಂಗಲಮ್ .ಅವರ ಮಗನೆ  ರಂಗರಾಜನ್  ಕುಮಾರ ಮಂಗಲಮ್ .

ಇವರು  ಇಂದನ ಸಚಿವರಾಗಿ  ಆ ರಂಗದಲ್ಲಿ  ಸುಧಾರಣೆಗಳನ್ನು ತಂದರು .ಅದರ  ಮುಂದುವರಿದ  ಪರಿಣಾಮ ಗಳೇ  ಈ ಎಸ್ಕೋಮ್ ಗಳು.

 KarnatakaHistory: Kudmul Ranga Rao, The Well-wisher of the Dalitsಕುದ್ಮುಲ್ ರಂಗ ರಾವು

 

 

 Rangarajan Kumaramangalam - Profile, Biography and Life History | Veethi

    ರಂಗರಾಜನ್ ಕುಮಾರ ಮಂಗಲಮ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ