ಬೆಂಬಲಿಗರು

ಬುಧವಾರ, ಜೂನ್ 12, 2013

ಯಾಕೆ ನಿರ್ದಯನಾದೆಯೋ ಶ್ರೀಹರಿ ?

                                                               ಕಣ್ಮರೆಯಾದ ನಕ್ಷತ್ರ


                                           

ಕೆಲವು ದಿನಗಳಿಂದ ಬ್ಲಾಗ್ ಬರೆಯುವ ಉತ್ಸಾಹವಿಲ್ಲ. ಮನಸ್ಸಿನಲ್ಲಿ  ಸುಪ್ತವಾದ ಬೇಸರ.ಕಾರಣ 

ಮೇಲಿನ ಚಿತ್ರದಲ್ಲಿ  ಭಾವ ಪರವಶವಾಗಿ ಹಾಡುತ್ತಿರುವ ಹುಡುಗಿ ಯನ್ನು  ಮರಣ ಶಯ್ಯೆಯಲ್ಲಿರುವ 


ರೋಗಿಯಾಗಿ   ಉಪಚರಿಸುವ   ಪ್ರಮೇಯ ನನ್ನಂತ ಹತ ಭಾಗ್ಯನಿಗೆ ಬಂದುದು. ಅದನ್ನು ನಾನು ದೌರ್ಭಾಗ್ಯ 

ಎನ್ನುವುದಿಲ್ಲ.  ಈ  ತಾಯಿಯ ಸೇವೆ ಮಾಡುವ ಪುಣ್ಯ ಎಂದು ಕೊಳ್ಳುತ್ತೇನೆ.


ಹಲವು ವರ್ಷಗಳಿಂದ  ಇವಳ ಬೆಳವಣಿಗೆ ಗಮನಿಸುತ್ತಾ ಬಂದಿದ್ದೇನೆ ,ಸಂಗಿತದಲ್ಲಿ ಸಾಧನೆ ಮಾಡುವ ಹಠ ಮತ್ತು 

ಹೆತ್ತವರ ಒತ್ತಾಸೆಯಿಂದ ಚೆನ್ನೈ ಮಹಾನಗರಕ್ಕೆ ಚಿಕ್ಕಂದಿನಲ್ಲಿಯೇ ತೆರಳಿ   ಗುರು ಮುಖೇನ ಅದ್ಯಯನ ಮಾಡಿ 

ಪರಿಶ್ರಮ ,ಶ್ರದ್ದೆ  ಮತ್ತು ಸಮರ್ಪಣಾ ಭಾವದಿಂದ  ರಸಿಕರ ಮನ ಗೆದ್ದ ಸಾಧಕಿ .

ತಿಂಗಳ ಹಿಂದೆ  ತಿರುಪತಿ ದೇವಸ್ತಾನ ದ  ಟಿ ವಿ ಯಲ್ಲಿ ಇವಳ ಹಾಡು ಗಾರಿಕೆ ನೋಡಿದ್ದೆ. ಘೋರ 

ಕಾಯಿಲೆ ಗೆ  ಕೀಮೋ ತೆರಪಿ ಮಾಡಿ ಬಳಲಿದ್ದ  ಶರೀರ .ಆದರೆ  ಭಕ್ತಿ ಭಾವ ತುಂಬಿದ್ದ  ಶಾರೀರ ಇನ್ನೂ ಸೋತಿರಲಿಲ್ಲ.

ಕರ್ನಾಟಕ ಸಂಗಿತದ  ರಾಜಧಾನಿ  ಚೆನ್ನೈ ನಲ್ಲಿ  ಈಕೆಗೆ  ನಕ್ಷತ್ರ ಪಟ್ಟ ಸಿಕ್ಕಿತ್ತು.ಇವಳ ನಿಧನ 

ವಾರ್ತೆಯನ್ನು  ದಿ ಹಿಂದು ವಿನಂತಹ  ಪತ್ರಿಕೆಗಳು ಪ್ರಮುಖ ವಾರ್ತೆಯನ್ನಾಗಿ ಪ್ರಕಟಿಸಿದವು .ಸಂಗೀತ ಪ್ರೇಮಿಗಳು 

ಕಣ್ಣೀರು ಮಿಡಿದರು.ಇನ್ನೂ ಮೂವತ್ತರ ಹರಯ ,ಸಾಧಿಸಿದ್ದು ಬಹಳ ,ಇನ್ನೂ ಸೇವೆ ಸಲ್ಲಿಸ ಬಹುದಿತ್ತು.

ಇವರ  ಸಂಗೀತ ಸಾಧನೆಗೆ ಒತ್ತಾಸೆ  ತಾಯಿ ತಂದೆ ,ಅತ್ತೆ ,ಮಾವ ಮತ್ತು  ಗಂಡ ಗುರುಪ್ರಸಾದ್ .ಎಲ್ಲರು 

ವಿನಯ  ಶೀಲರೆ. ಇವರ ದುಖದಲ್ಲಿ ನಾವೂ ಭಾಗಿ  .

ನನಗೆ ಕಂಡಂತೆ  ರಂಜನಿಯ ಸ್ವರದಲ್ಲಿ  ಆರ್ಧ್ರತೆ ಮತ್ತು ಭಕ್ತಿಭಾವ ಇತ್ತು . ದಾಸರ ಪದಗಳು ಮತ್ತು ವಚನ ಗಳನ್ನ

ಮನ ಮುಟ್ಟುವಂತೆ ಹಾಡುತಿದ್ದರು .ಅವರ ತಮಿಳು ಮತ್ತು ತೆಲುಗು ಉಚ್ಚಾರವೂ ಶುದ್ಧವಾಗಿರುತಿತ್ತು.ಇವು 

ಆಕೆಯ ಅಧ್ಯಯನ ಶೀಲತೆಗೆ ಸ್ಹಾಕ್ಷಿ.






2 ಕಾಮೆಂಟ್‌ಗಳು:

  1. This is really a shocking news! A big loss to their family and music lovers. May god be there with them during this painful moment and give strength to withstand this heavy loss.

    -Veena

    ಪ್ರತ್ಯುತ್ತರಅಳಿಸಿ
  2. ನಮ್ಮ ಮನೆಗೂ ಒಮ್ಮೆ ಬಂದಿದ್ದರು; ನನ್ನ ಭಾವನ ಕಡೆ ಸಂಬಂಧ; ಕಡೆ ಗಳಿಗೆಗಳು ಶಾಂತವಾಗಿತ್ತು ಎಂದು ನೆನೆಸುತ್ತೇನೆ

    ಪ್ರತ್ಯುತ್ತರಅಳಿಸಿ